ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಇರುಳೆಲ್ಲಾ ಮೋಜು ಮಸ್ತಿಮಾಡಿ ನಶೆಯಲಿ ಹೊರಳಾಡುವರು
ಹಗಲು ಉಪವಾಸ ಸತ್ಯಾಗ್ರಹದಲ್ಲಿ ಪಾಲುಗೊಂಡರು ನೋಡು

Read Post »

ಇತರೆ

ಭಾಷಾ ಕಲಿಕೆ

ಲೇಖನ ಭಾಷಾ ಕಲಿಕೆ ಗಣಪತಿ ಹೆಗಡೆ ಗುಡಿಯಾ ಖಾನಾ ಖಾಯಾ?’, ಸಾಯಂಕಾಲ ನಾಲ್ಕೂವರೆಗೆ ಮೊಮ್ಮಗಳನ್ನು ಟ್ರೋಲಿಯಲ್ಲಿ ಕೂಡ್ರಿಸಿ ಕೊಂಡು ಅಪಾರ್ಟ್ ಮೆಂಟಿನ ಸುತ್ತಲೂ ತಿರುಗಾಡಲು ತೆಗೆದುಕೊಂಡು ಹೋದಾಗ ಗೇಟಿನ ಬಾಗಿಲಿನಲ್ಲಿ ಕಾಯುತ್ತಿರುವ ಕಾವಲುಗಾರ ಮೊದಲು ನನ್ನ ಮೊಮ್ಮಗಳಲ್ಲಿ ಕೇಳುವುದು ಈ ವಾಕ್ಯ.  ಪಾಪ ಅವಳೇನು ಹೇಳಿಯಾಳು. ಹತ್ತು ತಿಂಗಳ ಎಳಗೂಸು ಅವಳು. ‘ತಿಂದಾತಾ’? ಅವನು ಕೇಳಿದ ಪ್ರಶ್ನೆ ಅವಳಿಗೆ ಅರ್ಥವಾಗಲಿ ಅಂತ ನಾನು ಅದನ್ನೇ ಕನ್ನಡದಲ್ಲಿ ಕೇಳುತ್ತಿದ್ದೆ. ಆಗ ‘ಹೂಂ’ ಎನ್ನುತ್ತಿದ್ದಳು. ಕಾವಲುಗಾರನಿಗೂ ತಾನು ಕೇಳಿದ ಪ್ರಶ್ನೆಗೆ ಉತ್ತರ ಸಿಕ್ಕಿದ ಸಮಾಧಾನ. ಈ ಅಪಾರ್ಟ್ಮೆಂಟಿನಲ್ಲಿ ಸುಮಾರು ಇನ್ನೂರು ಮನೆಗಳಿವೆ.   ಅಪಾರ್ಟ್ ಮೆಂಟ್ ಕರ್ನಾಟಕದಲ್ಲಿದ್ದ ಮಾತ್ರಕ್ಕೆ ಅಪಾರ್ಟ್ ಮೆಂಟಿನ ಭಾಷೆ  ಕನ್ನಡವೇ  ಆಗಬೇಕೆಂಬುದು ಯಾವ ನ್ಯಾಯ?  ಕನ್ನಡ, ತಮಿಳು, ತೆಲುಗು, ಕೊಂಕಣಿ, ತುಳು ಹಿಂದಿ ಭಾಷೆಯನ್ನು ಮಾತೃಭಾಷೆಯಾಗುಳ್ಳ ಜನರು ಸೌಹಾರ್ದಯುತರಾಗಿಯೇ ಇದ್ದಾರೆ ಇಲ್ಲಿ. ಅವರವರ ಮನೆಯವರಲ್ಲಿ ಪರಸ್ಪರ ಮಾತನಾಡುವಾಗ ಈ ಭಾಷಾ ವೈವಿಧ್ಯತೆಗಳನ್ನು ಗಮನಿಸಬಹುದು.  ಮೂರು ವರ್ಷಗಳನ್ನು ಕಳೆದ ಕೂಡಲೇ ಮಕ್ಕಳು ಪರಸ್ಪರ ಇಂಗ್ಲೀಷಿನಲ್ಲೇ ಮಾತನಾಡಿಕೊಳ್ಳುತ್ತಾರೆ. ಬಹುಶಃ ಇಲ್ಲಿ ವಾಸಿಸುವವರು ಮಧ್ಯಮ ಅಥವಾ ಮೇಲುಮಧ್ಯಮ ವರ್ಗದವರಾದುದರಿಂದ ಇಂಗ್ಲೀಷ್ ಮಾಧ್ಯಮದ ಹುಡುಗರಾದುದರಿಂದ ಇದು ಸಹಜ. ಆದರೆ ನಾವು ಅಜ್ಜ ಮತ್ತು  ಮೊಮ್ಮಗಳು ಕನ್ನಡದಲ್ಲಿಯೇ ಮಾತನಾಡಿಕೊಳ್ಳುವದರಿಂದ ಬಹುಶಃ  ನಾವು ಶುದ್ಧ ಕನ್ನಡಿಗರೆಂದು ಇಲ್ಲಿ ಓಡಾಡುವ ಮಕ್ಕಳಿಗೆ ಹಾಗೂ ಹಿರಿಯರಿಗೆ ಗುತ್ತಾಗಿದೆ. ಇಲ್ಲಿಯ ಮಕ್ಕಳು, ಮೊಮ್ಮಗಳ ಜೊತೆ ಕನ್ನಡದಲ್ಲಿ ಮಾತನಾಡಿ ಕೆಲವೊಮ್ಮೆ ನನ್ನ ಜೊತೆ ಇಂಗ್ಲೀಷಿಗೆ ವರ್ಗವಾಗಿ ಬಿಡುತ್ತಾರೆ. ಆಮೇಲೆ ನಾನು ಕನ್ನಡದಲ್ಲಿ ಮಾತನಾಡಿದಾಗ ನನ್ನಲ್ಲಿಯೂ ಕನ್ನಡದಲ್ಲಿಯೇ ಮಾತನ್ನು ಮುಂದುವರಿಸುತ್ತಾರೆ. ಕನ್ನಡ ಭಾಷೆ ಗುತ್ತಿಲ್ಲದ ಮಕ್ಕಳ ಜೊತೆ ನಾನು ಇಂಗ್ಲೀಷಿಗೆ ಜಾರುತ್ತೇನೆ. ಕೆಲವು ಯುವಕ/ಯುವತಿಯರಲ್ಲಿ, ಮಕ್ಕಳಲ್ಲಿ ಹಾಗೂ ವಯಸ್ಸಾದವರಲ್ಲಿ  ನಾನು ಮಾತನಾಡುವಾಗ ಹಿಂದಿ ಅಥವಾ ಇಂಗ್ಲೀಷ್ ಬಳಸದೆ ಅವರು ಬೇರೆ ಭಾಷೆಯಲ್ಲಿ ಮಾತನಾಡಲು ತೊಡಗಿದಾಗಲೂ ನಾನು ಉದ್ದೇಶಪೂರ್ವಕವಾಗಿ ಕನ್ನಡದಲ್ಲಿಯೇ ಉತ್ತರಿಸತೊಡಗಿದೆ. ಬಹಳಷ್ಟು ಜನರು ‘ಅರ್ಥವಾಗುವ ಕನ್ನಡದಲ್ಲಿ’ ಮಾತನಾಡತೊಡಗಿದರು. ಅವರು ಮೊಮ್ಮಗಳ ಜೊತೆಯಲ್ಲಿಯೂ ಕನ್ನಡವನ್ನೇ ಬಳಸುತ್ತಿದ್ದರು. ಕೆಲವೇ ಹಿರಿಯ ಜೀವರಿಗೆ ಅವರ ಮಾತೃಭಾಷೆ ಬಿಟ್ಟು ಬೇರೆ ಭಾಷೆ ಬರುವದಿಲ್ಲವೋ ಏನೋ? ಮೊಮ್ಮಗಳ ಜೊತೆ ಕೇವಲ ಹಾಯ್/ ಬಾಯ್ ಅಂತ ಕೈಯಾಡಿಸುತ್ತಿದ್ದರು. ಅಷ್ಟೇ. ಉಳಿದ ಭಾಷಿಗರೂ  ಮೊಮ್ಮಗಳ ಜೊತೆ ಹೈ, ಬಾಯ್, ಬೇಬಿ ಮುಂತಾದ ಒಂದೆರಡು ಅಕ್ಷರಗಳಿಂದಾದ ಶಬ್ದಗಳನ್ನು ಬಳಸಿ ಮಾತನಾಡುತ್ತಾರೆ. ಮೊಮ್ಮಗಳು ಕೈ ಬೀಸಿ ಹಾಯ್ ಅಂತ ಹೇಳಿ ಪ್ರತಿಕ್ರಿಯಿಸತ್ತಾಳೆ ಅಷ್ಟೇ. ವಯಸ್ಸಾದ ಜೋಡಿಯನ್ನು ನೋಡಿದರೆ ಅವರ ಮಾತೃಭಾಷೆ ಯಾವುದು ಅಂತ ಗುತ್ತಾಗಿಬಿಡುತ್ತದೆ. ಮಾತು ಅರ್ಥವಾಗದೇ ಇದ್ದರೂ ಯಾವ ಭಾಷೆ ಎನ್ನುವದನ್ನು ತಿಳಿಯುವದು ಕಷ್ಟವಲ್ಲ. ಅವರಲ್ಲಿ ತೆಲುಗು, ಹಿಂದಿ ಹಾಗೂ ತಮಿಳಿನ ಹಿರಿ ಜೀವಿಗಳಲ್ಲಿ ಬಹಳಷ್ಟು ಜನರಿಗೆ ಅವರ ಮಾತೃ ಭಾಷೆ ಬಿಟ್ಟು ಬೇರೆ ಭಾಷೆಗಳು ಮಾತಾಡಲು ಕಷ್ಟ ಇದೆ ಅನಿಸುತ್ತದೆ. ಕೊಂಕಣಿ ಹಾಗೂ ತುಳು ಮಾತೃಭಾಷೆಯವರು ಕನ್ನಡವನ್ನು ಸಲೀಸಾಗಿ ಮಾತನಾಡುತ್ತಿದ್ದರು. ಕನ್ನಡ ಹೊರತಾಗಿ ಇಂಗ್ಲೀಷ್ ಹಾಗೂ ಹಿಂದಿಯನ್ನು ಬಿಟ್ಟು ಬೇರೆ ಭಾಷೆಯಲ್ಲಿ ಮಾತನಾಡಲು ನನಗೆ ಬರುವದಿಲ್ಲ. ಆ ಬಗ್ಗೆ ಪ್ರಯತ್ನವನ್ನೂ ಮಾಡಲಿಲ್ಲವೆನ್ನಿ. ಆದರೆ ಈ ಲೇಖನದ ಉದ್ದೇಶ ಕಾವಲುಗಾರರ ಜೊತೆ ಮಾತನಾಡುವದು.  ಏಳೆಂಟು ಕಾವಲುಗಾರರಿದ್ದರು ಇಲ್ಲಿ. ಅವರಲ್ಲಿ ಒಬ್ಬನನ್ನು ಬಿಟ್ಟು ಉಳಿದವರು ಆಸ್ಸಾಮ್ ಹಾಗೂ ಓರಿಸ್ಸಾದಿಂದ  ಬಂದವರು. ಆಸ್ಸಾಮಿನಿಂದ ಬಂದವರ  ಮಾತೃಭಾಷೆ ಬಂಗಾಲಿ ಅಂತ ಹೇಳಿದರು. ಓರಿಸ್ಸಾದಿಂದ  ಬಂದವನದು ಓರಿಯಾ . ಒಂದು ಏಜೆನ್ಸಿಯ ಮುಖಾಂತರ ನೇಮಣೂಕಿಯಾಗಿ ಇಲ್ಲಿ ಪ್ರವೇಶ ಪಡೆದವರು. ಅವರಿಗೆ ಬೆಂಗಳೂರಿನಲ್ಲಿ ಕೆಲಸ ಮಾಡಲು  ಹಿಂದಿ ತಿಳಿದಿರಬೇಕಾದುದು ಕಡ್ಡಾಯವಂತೆ. ನೆನಪಿರಲಿ ಹಿಂದಿ. ಕನ್ನಡವಲ್ಲ. ಓಡಿಸ್ಸಾದವನಿಗೆ ಹಿಂದಿ ಕಲಿಯುವುದು  ಕಷ್ಟವಲ್ಲ ಅಂತ ಹೇಳಿದನು. ಆದರೆ ಬಂಗಾಲಿ ಮಾತೃಭಾಷೆಯವರಿಗೆ ಹಿಂದಿ ಕಲಿಯುವುದು ಅಂದರೆ ಕನ್ನಡ ಅಥವಾ ಯಾವುದೇ ಇತರ ಭಾಷೆಗಳನ್ನು ಕಲಿತ ಹಾಗೆಯೇ ಕಷ್ಟಕರ. ಆದರೇನು ಅವಶ್ಯಕತೆ ಬಿದ್ದಾಗ ಭಾಷೆ ಕಲಿಯುವುದು ಕಷ್ಟವೇ? ಹೊಟ್ಟೆ ಭಾಷೆಯನ್ನು ಕಲಿಸುತ್ತದೆ. ಅವರು ಹೇಳುವ ಹಾಗೆ ಬೆಂಗಳೂರಿನಲ್ಲಿ ಹಿಂದಿ ಮಾತ್ರ ಅನಿವಾರ್ಯವಾದ ಭಾಷೆ!. ಮೊಮ್ಮಗಳ ಜೊತೆ ನನ್ನ ‘ವಾಕಿಂಗ್’ ಬೆಳಿಗ್ಗೆ ಹಾಗೂ ಸಂಜೆ ನಡೆದೇ  ಇತ್ತು. ಇಂಗ್ಲೀಷ ಹೇಗೂ ಪಾಲಕರು ಹಾಗೂ ಶಾಲೆಯಲ್ಲಿ ಕಲಿಸೇ ಕಲಿಸುತ್ತಾರೆ ಅಂತ ನಾನು ಕನ್ನಡದಲ್ಲೇ ಅದರಲ್ಲೂ ನಮ್ಮ ಹವ್ಯಕ ಭಾಷೆಯಲ್ಲಿಯೇ ಮೊಮ್ಮಗಳ ಜೊತೆ ಮಾತನಾಡುತ್ತಿದ್ದೆ. ಕಾವಲುಗಾರರು ಮೊಮ್ಮಗಳ ಜೊತೆ ಅಭಿನಯ ಪೂರ್ವಕವಾಗಿಯಯೇ ಮಾತನಾಡುತ್ತಿದ್ದರು.  ಮಾತನಾಡುವಾಗ ಅವರಿಗೂ ಅರ್ಥವಾಗಲಿ ಅಂತ ಅವರು ಹೇಳಿದ ಹಿಂದಿ ಶಬ್ದಕ್ಕೆ ಪರ್ಯಾಯವಾಗಿ ಕನ್ನಡ ಶಬ್ದವನ್ನು ಮೊಮ್ಮಗಳಲ್ಲಿ ಹೇಳುತ್ತಿದ್ದೆ. ಕ್ರಮೇಣ ಮೊಮ್ಮಗಳು ಹೂಂ/ಉಹೂಂ ಎನ್ನಲು ಕಲಿತಳು. ಆ ಕಾವಲುಗಾರರು ನಾನು ಕನ್ನಡದಲ್ಲಿ ಮಾತನಾಡಿದರೆ ಬೇರೆ ಕಡೆ ಲಕ್ಷ್ಯ ತಿರುಗಿಸುತ್ತಿದ್ದರು. ಆದ್ದರಿಂದ ಮೊಮ್ಮಗಳ ಸಲುವಾಗಿ ನಾನು ಅನಿವಾರ್ಯವಾಗಿ ಹಿಂದಿಯನ್ನು ಕನ್ನಡ ಮಾಧ್ಯಮದ ಜೊತೆ ಕಾವಲುಗಾರರ ಜೊತೆ ಪ್ರಯೋಗಿಸುತ್ತಿದ್ದೆ. ನಾನು ಊರಿಗೆ ಮರಳಿದೆ. ಆಮೇಲೆ ಒಂದೆರಡು ತಿಂಗಳು ಕಳೆದು ಪುನಃ ಬೆಂಗಳೂರಿಗೆ ಹೋದೆನು.  ಸ್ವಲ್ಪದಿನ ಅಲ್ಲಿ ಉಳಿಯಬೇಕಾಯಿತು. ಹಾಗೇ ಮೊಮ್ಮಗಳ ಜೊತೆ ವಾಕಿಂಗ್ ಮುಂದುವರಿಯಿತು. “ಗುಡಿಯಾ ಖಾನಾ ಖಾಯಾ?, ಮಮ್ಮಿ ನಹೀಂ ಆಯಾ?, ಕಲ್ ಆಓ, ಬರಸ್ ಆತಾ ಹೈ ಅಬ್ ಚಲೋ, ಬಾಲ್ ಪಕಡೊ, ಜಂಪ್ ಕರೊ, ಮುಂತಾದ ಮಾತುಗಳು ನಡೆದೇ ಇದ್ದವು. ನಾನು ಮೊಮ್ಮಗಳಲ್ಲಿ ಹೇಳಿದ ಶಬ್ದಗಳು ಕಾವಲುಗಾರರಿಗೆ ಅರ್ಥವಾಗಲಿಲ್ಲ. ಅವರಿಗೆ ಅದರ ಅವಶ್ಯಕತೆಯೂ ಬೀಳಲಿಲ್ಲ.  ಆದರೆ ಮೊಮ್ಮಗಳು ಈಗ ಹಿಂದಿಯನ್ನುಸ್ವಲ್ಪ ಸ್ವಲ್ಪ ಅರ್ಥಮಾಡಿಕೊಳ್ಳುತ್ತಿದ್ದಾಳೆ.

ಭಾಷಾ ಕಲಿಕೆ Read Post »

ಇತರೆ

ಹಿರಿಯರು ಹೊರೆಗಳಾಗದಿರಲಿ

ಲೇಖನ ಹಿರಿಯರು ಹೊರೆಗಳಾಗದಿರಲಿ ವಿಶ್ವನಾಥ ಎನ್ ನೇರಳಕಟ್ಟೆ [6:36 am, 26/09/2021] ಸಂಗಾತಿ ಸಾಹಿತ್ಯ ಪತ್ರಿಕೆ: ಸುರಕ್ಷಾ ವೃದ್ಧಾಶ್ರಮ’ ಹೀಗೆಂದು ಕೆಂಪು ಅಕ್ಷರಗಳಲ್ಲಿ ಬರೆದಿದ್ದ ಬೋರ್ಡನ್ನು ನೆತ್ತಿ ಮೇಲೆ ಹೊತ್ತುಕೊಂಡಂತೆ ಕುಳಿತಿದ್ದ ನಾರಾಯಣರಾಯರ ಕಣ್ಣಿನ ತುಂಬ ಅಸಹಾಯಕತೆಯಿತ್ತು. ‘ಎರಡು ದಿನಗಳ ಇಲ್ಲಿಯ ಬದುಕೇ ಸಾಕಾಗಿಹೋದಂತಿದೆ ನಿಮಗೆ’, ಪಕ್ಕದಲ್ಲಿ ಕುಳಿತಿದ್ದ ವೃದ್ಧರು ಪ್ರಶ್ನಿಸಿದರು. ಉತ್ತರಿಸಬೇಕೆಂದು ಇವರಿಗೆ ಅನಿಸಲಿಲ್ಲ. ಮಗ ತನ್ನನ್ನು ಇಲ್ಲಿ ಬಿಟ್ಟುಹೋದ ಸನ್ನಿವೇಶ ಅವರ ಕಣ್ಣೆದುರು ತಾಂಡವವಾಡತೊಡಗಿತ್ತು. “ಅಪ್ಪಾ, ನಿಧಾನಕ್ಕೆ ಬನ್ನಿ. ಅಲ್ಲಿ ಮೆಟ್ಟಿಲು ಇದೆ ನೋಡಿ. ನನ್ನ ಕೈ ಗಟ್ಟಿ ಹಿಡಿದುಕೊಳ್ಳಿ”, ವೃದ್ಧಾಶ್ರಮಕ್ಕೆ ಕರೆತರುವಾಗ ಕಾಳಜಿಯ ಮುಖವಾಡ ಹೊತ್ತು ಮಗನಾಡಿದ ಮಾತು ಅವರ ಕಿವಿ ತಮಟೆಯನ್ನು ಈಗಲೂ ಕತ್ತರಿಸತೊಡಗಿತ್ತು. “ಆರೋಗ್ಯ ಚೆನ್ನಾಗಿ ನೋಡಿಕೊಳ್ಳಿ ಎಂಬ ತೋರಿಕೆಯ ಮಾತು ಬೇರೆ. ಯಾವ ಕರ್ಮಕ್ಕೆ ಆರೋಗ್ಯ?” ನಾರಾಯಣರಾಯರು ಗೊಣಗಿಕೊಂಡದ್ದು ಮಾತ್ರ. ಅದ್ಯಾವುದೋ ಮಾಯೆಯಲ್ಲಿ ಪಕ್ಕದಲ್ಲಿದ್ದ ವೃದ್ಧರಿಗೆ ಸ್ಪಷ್ಟವಾಗಿ ಕೇಳಿಸಿತು. “ನಿಮ್ಮ ಮಗನಾದರೋ ನಿಮ್ಮನ್ನು ಇಲ್ಲಿಗೆ ಕರೆತಂದು ಬಿಟ್ಟು ಹೋಗಿದ್ದಾನೆ. ನನ್ನ ಮಗ ರಾತ್ರೆ ಹೊತ್ತಿಗೆ ಮನೆಯಿಂದ ಹೊರದಬ್ಬಿ ಬಾಗಿಲು ಹಾಕಿಕೊಂಡ. ಅದು ಚಳಿಗಾಲ ಬೇರೆ. ನಾನು ಅನುಭವಿಸಿದ ಸಂಕಟ ದೇವರಿಗೇ ಪ್ರೀತಿ…” ಉಕ್ಕಿಬಂದ ಕಣ್ಣೀರು ಅವರ ಮಾತಿಗೆ ಅರೆಕ್ಷಣದ ಬ್ರೇಕ್ ಹಾಕಿತು. “ಐದು ವರ್ಷ ಆಗಿದೆ ನಾನಿಲ್ಲಿಗೆ ಬಂದು. ಒಂದು ದಿನವೂ ಬಂದದ್ದಿಲ್ಲ, ವಿಚಾರಿಸಿದ್ದಿಲ್ಲ. ನಾಳೆ ನಾನು ಸತ್ತರೂ ಬರಲಿಕ್ಕಿಲ್ಲವೇನೋ…” ದುಃಖದ ಮಹಾಪ್ರವಾಹದಲ್ಲಿ ಅವರಿಗೆ ಮಾತು ಮುಂದುವರಿಸಲಾಗಲಿಲ್ಲ. ನಾರಾಯಣರಾಯರನ್ನೂ ದುಃಖ ಪರವಶಗೊಳಿಸಿತ್ತು. ಮೌನವೇ ನಡೆದುಹೊರಟಂತೆ ತಮ್ಮ ರೂಮನ್ನು ಹೊಕ್ಕರು. ‘ಹೊತ್ತು ಹೋಗುತ್ತಿಲ್ಲ’ ಎಂದು ಅಂದುಕೊಂಡವರು ಬ್ಯಾಗಿನೊಳಗಿದ್ದ ಡೈರಿಯನ್ನು ಎತ್ತಿಕೊಂಡರು. ‘ಒಳ್ಳೆಯದಾಗಲಿ’ ಡೈರಿಯ ಮೊದಲ ಪುಟದಲ್ಲಿ ತಂದೆ ಬರೆದಿದ್ದ ಈ ಪದ ನಾರಾಯಣರಾಯರನ್ನು ಭಾವನಾತ್ಮಕವಾಗಿಸಿತು. “ನನ್ನ ತಂದೆಯನ್ನು ನಾನು ಅಂದು ವೃದ್ಧಾಶ್ರಮಕ್ಕೆ ಕಳಿಸಬಾರದಿತ್ತು. ಚೆನ್ನಾಗಿ ನೋಡಿಕೊಂಡಿದ್ದರೆ ಇಂದು ನನ್ನ ಮಗ ನನ್ನನ್ನು ವೃದ್ಧಾಶ್ರಮದ ಪಾಲಾಗಿಸುತ್ತಿರಲಿಲ್ಲ” ಭೂತಕಾಲದ ಯೋಚನೆ ನಾರಾಯಣರಾಯರ ಸ್ಮøತಿಪಟಲದಲ್ಲಿ ಓಡಾಡತೊಡಗಿತು. ಗೋಡೆಯ ಮೇಲೆ ತೂಗಾಡುತ್ತಿದ್ದ ಕ್ಯಾಲೆಂಡರ್ 2050ನೇ ಇಸವಿಯನ್ನು ಸಾರಿ ಹೇಳುತ್ತಿತ್ತು. *************************************   ‘ವಸುಧೈವ ಕುಟುಂಬಕಂ’ ಎಂದು ಜಗತ್ತಿಗೇ ಸಾರಿದ ರಾಷ್ಟ್ರ ನಮ್ಮದು. ‘ಭೂಮಿಯೇ ಒಂದು ಕುಟುಂಬ; ಭೂಮಿಯಲ್ಲಿರುವ ಎಲ್ಲರೂ ನಮ್ಮವರು’ ಎನ್ನುವ ಈ ತತ್ತ್ವದ ಮೂಲಕವೇ ಭಾರತ ಗುರುತಿಸಿಕೊಂಡಿದೆ, ಬೆಳೆದಿದೆ; ಜ್ಞಾನದ ಹಣತೆಯನ್ನು ಜಗತ್ತಿನುದ್ದಕ್ಕೂ ಬೆಳಗಿದೆ. ಆದರೆ ಆಧುನಿಕತೆಯ ಕಪಿಮುಷ್ಟಿಗೆ ಸಿಲುಕಿಕೊಂಡ ನಾವು ಇಂದು ತೀರಾ ಭಿನ್ನ ನೆಲೆಯಲ್ಲಿ ಸಾಗುತ್ತಿದ್ದೇವೆ. ಕೌಟುಂಬಿಕ ಬಾಂಧವ್ಯಗಳನ್ನೂ ವ್ಯಾವಹಾರಿಕತೆಯ ದೃಷ್ಟಿಕೋನದಿಂದ ಗಮನಿಸಿಕೊಳ್ಳುತ್ತಿದ್ದೇವೆ. ನಮ್ಮ ಕುಟುಂಬದವರನ್ನೂ ನಮ್ಮವರು ಎಂದು ಅಂದುಕೊಳ್ಳದ ಸಂಕುಚಿತ ಮನಃಸ್ಥಿತಿಗೆ ಒಳಗಾಗುತ್ತಿದ್ದೇವೆ. ‘ಸರ್ವೇಜನಃ ಸುಖಿನೋ ಭವಂತು’ ಎಂದು ಬೋಧಿಸಿದ ರಾಷ್ಟ್ರದ ಕಸದ ತೊಟ್ಟಿಯಲ್ಲಿ ವೃದ್ಧೆಯನ್ನು ಕಾಣುವಂತಾಗುತ್ತದೆ. ಅವರ ಮಕ್ಕಳೇ 50 ಲಕ್ಷದ ಕಾರಿನಲ್ಲಿ ಕರೆತಂದು ಎಸೆದುಹೋಗಿರುತ್ತಾರೆ. ಚಳಿಗೆ ಮರಗಟ್ಟಿರುವ ಅವಳ ಸ್ಥಿತಿ ಸಮಾಜದ ಅದೆಷ್ಟೋ ಜನರ ಕಣ್ಣೀರಿಗೆ ಕಾರಣವಾಗುತ್ತದೆ. ಆದರೆ ಅವರ ಮಕ್ಕಳ ಕಣ್ಣು ತೆರೆಯುವುದೇ ಇಲ್ಲ.    ಭಾರತವನ್ನು ಕಂಡು ವಿದೇಶಿಯರು ಅಚ್ಚರಿಪಟ್ಟಿದ್ದರು. ಇಲ್ಲಿನ ಕುಟುಂಬ ವ್ಯವಸ್ಥೆ ಅವರಲ್ಲಿ ದಿಗ್ಭಮೆಯನ್ನು, ಕುತೂಹಲವನ್ನು ಹುಟ್ಟುಹಾಕಿತ್ತು. ಹತ್ತಿಪ್ಪತ್ತು ಜನ ಒಂದೇ ಸೂರಿನಡಿಯಲ್ಲಿ ಬಾಳುವುದು ಅವರ ಪಾಲಿಗೆ ಇನ್ನಿಲ್ಲದ ಅದ್ಭುತವಾಗಿತ್ತು. ಭಾರತದ ಕುಟುಂಬ ವ್ಯವಸ್ಥೆಯೊಳಗಿನ ಬಾಂಧವ್ಯ, ಸಂಬಂಧಗಳ ನಡುವಿನ ಪರಸ್ಪರ ನಂಬಿಕೆಯನ್ನು ಕೂಗಿ ಹೇಳುವ ರೀತಿಯಲ್ಲಿ ಬದುಕಿದ ವಿಧಾನ ಒಂದು ಅನುಕರಣೀಯ ಮಾದರಿಯನ್ನು ಹುಟ್ಟುಹಾಕಿತ್ತು. ಕೌಟುಂಬಿಕ ಮೌಲ್ಯಗಳ ಅದಃಪತನವು ಎಂತಹ ತಲೆಮಾರನ್ನು ರೂಪುಗೊಳಿಸಬಹುದು ಎನ್ನುವುದಕ್ಕೆ ನಿದರ್ಶನವೆಂಬಂತೆ ಒಂದು ಅರ್ಥಪೂರ್ಣ ಕಥೆಯಿದೆ. ಒಬ್ಬ ವ್ಯಕ್ತಿ ತನ್ನ ಹೆಂಡತಿಯ ಮಾತು ಕೇಳಿ ತನ್ನ ವೃದ್ಧ ತಂದೆಯನ್ನು ಮನೆಯಿಂದ ಹೊರಹಾಕುತ್ತಾನೆ. ರಕ್ತವನ್ನೂ ಹೆಪ್ಪುಗಟ್ಟಿಸಬಲ್ಲಂತಹ ಚಳಿಗಾಲದ ರಾತ್ರಿಯದು. “ಮೈ ಮುಚ್ಚಿಕೊಳ್ಳುವುದಕ್ಕೆ ಒಂದು ಕಂಬಳಿಯನ್ನಾದರೂ ಕೊಡು” ಎಂದು ಆ ವೃದ್ಧ ತನ್ನ ಮಗನಲ್ಲಿ ಅಂಗಲಾಚುತ್ತಾನೆ. ಅರೆಬರೆ ಹರಿದ, ಹಳೆಯ ಕಂಬಳಿಯೊಂದನ್ನು ಮನೆಯೊಳಗಿಂದ ತಂದ ಮಗ ಋಣವೇ ಮುಗಿಯಿತೆಂಬಂತೆ ತಂದೆಯ ಮುಖಕ್ಕೆ ಅದನ್ನು ಎಸೆಯುತ್ತಾನೆ. ಈ ಎಲ್ಲಾ ವಿದ್ಯಮಾನವನ್ನೂ ಗಮನಿಸುತ್ತಿದ್ದ ಆ ವೃದ್ಧನ ಮೊಮ್ಮಗ, ಎಂಟು ವರ್ಷದವನು, ತಕ್ಷಣ ತನ್ನ ಅಜ್ಜನ ಬಳಿಗೆ ಓಡುತ್ತಾನೆ. ಅಜ್ಜನ ಮೈಮೇಲೆ ಹರಡಿದ್ದ ಕಂಬಳಿಯನ್ನು ಅರ್ಧ ಭಾಗ ಮಾಡಿ ಒಂದು ಭಾಗವನ್ನು ತೆಗೆದುಕೊಳ್ಳುತ್ತಾನೆ. ಆ ಹಳೇ ಕಂಬಳಿ ಏಕೆ ಎಂದು ತಂದೆ ಕೇಳಿದ್ದಕ್ಕೆ ಆ ಪುಟ್ಟ ಹುಡುಗ ಹೇಳಿದ್ದಿಷ್ಟು- “ಇನ್ನು ಸ್ವಲ್ಪ ವರ್ಷಗಳಾದ ಮೇಲೆ ನೀವು ಮುದುಕರಾಗುತ್ತೀರಿ. ಆಗ ನಾನೂ ನಿಮ್ಮನ್ನು ಇದೇ ರೀತಿ ಮನೆಯಿಂದ ಹೊರಹಾಕುತ್ತೇನೆ. ಆಗ ನೀವು ಕಂಬಳಿ ಬೇಕೆಂದು ಕೇಳಿದರೆ ಕೊಡುವುದಕ್ಕೆ ಬೇಕಲ್ಲಾ.” ಮಕ್ಕಳು ಹೇಳಿಕೊಟ್ಟದ್ದನ್ನು ಅನುಸರಿಸುವುದಕ್ಕಿಂತಲೂ ಕಂಡದ್ದನ್ನು ಕಂಡ ಹಾಗೆಯೇ ಅನುಸರಿಸುತ್ತಾರೆ. ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ತಳ್ಳುವುದನ್ನು ಇಂದಿನ ಮಕ್ಕಳು ಕಾಣುವಂತಾಗಬಾರದು, ಕಲಿಯುವಂತಾಗಬಾರದು. ಪ್ರಪಂಚದ ಹಲವು ದೇಶಗಳು ಆರ್ಥಿಕವಾಗಿ ಮುಂದುವರಿದಿವೆ ನಿಜ. ಆದರೆ ಕೌಟುಂಬಿಕ ಸಂಬಂಧಗಳ ನೆಲೆಯಲ್ಲಿ ಅವುಗಳ ನಡೆ ಪ್ರಶ್ನಾರ್ಹವಾದುದು. ನಮಗೆ ಗೊತ್ತಿದೆ, ಹಲವು ದೇಶಗಳಲ್ಲಿ ಮಕ್ಕಳು ಪ್ರಾಯಪ್ರಬುದ್ಧರಾದ ಮೇಲೆ ತಮ್ಮ ಹೆತ್ತವರಿಂದ ಹಣವನ್ನು ಅಪೇಕ್ಷಿಸುವಂತಿಲ್ಲ. ಒಂದುವೇಳೆ ಹಣವನ್ನು ಪಡೆದುಕೊಂಡರೆ ಅದನ್ನು ಹಿಂದಿರುಗಿಸಬೇಕು. ಮಕ್ಕಳು ಹಣ ಗಳಿಕೆ- ನಿರ್ವಹಣೆಯ ಮಹತ್ವವನ್ನು ಮನಗಾಣುವಂತಾಗಲು ಈ ವ್ಯವಸ್ಥೆಯನ್ನು ಹೆತ್ತವರು ರೂಪಿಸಿಕೊಂಡಿದ್ದಾರೆ ನಿಜ. ಉದ್ದೇಶ ಒಳ್ಳೆಯದೇ. ಆದರೆ ಅದು ಉಂಟುಮಾಡುವ ಪರಿಣಾಮ? ಹೆತ್ತವರಿಂದಲೇ ಸಾಲ ಪಡೆದುಕೊಂಡ ಮಕ್ಕಳು ಹೆತ್ತವರನ್ನು ವ್ಯಾವಹಾರಿಕತೆಯ ಆಯಾಮದಿಂದಲೇ ಗಮನಿಸಿಕೊಳ್ಳತೊಡಗುತ್ತಾರೆ. ಅವರ ಜೊತೆಗಿನ ಭಾವನಾತ್ಮಕತೆಯನ್ನು ಕಳೆದುಕೊಳ್ಳುತ್ತಾರೆ. ಆದರೆ ಭಾರತ ಹಾಗಲ್ಲ. ಬದುಕಿನ ಬಿಂದು ಬಿಂದುಗಳಲ್ಲಿಯೂ ಭಾವನಾತ್ಮಕತೆಯನ್ನು ಬಚ್ಚಿಟ್ಟುಕೊಂಡ ಭವ್ಯತೆ ಭಾರತದ್ದು. ಆದರೆ ಆಧುನಿಕತೆಯೆಂಬ ಮಾಯೆ ಭಾರತದ ಕೌಟುಂಬಿಕ ವ್ಯವಸ್ಥೆಯೊಳಗಿನ ಭಾವನಾತ್ಮಕತೆಯನ್ನು ಮೂಲೆಗುಂಪು ಮಾಡುತ್ತಿದೆ ಎನ್ನುವುದು ಸತ್ಯ. ಆಧುನಿಕತೆಯ ಪರಿಣಾಮವಾಗಿ ವೃದ್ಧರು ವೃದ್ಧಾಶ್ರಮಗಳ ಪಾಲಾಗುತ್ತಿದ್ದಾರೆ. ಜಾಗತೀಕರಣದ ಪರಿಣಾಮವಾಗಿ ಗ್ರಾಮಗಳು ವೃದ್ಧಾಶ್ರಮಗಳಾಗುತ್ತಿವೆ. ಕುಟುಂಬದ ಬೆಂಬಲವನ್ನು ಕಳೆದುಕೊಂಡ ಹಿರಿಯರ ಬದುಕಿನಲ್ಲಿ ಭರವಸೆಯನ್ನು ಹುಟ್ಟಿಸಬೇಕಾದದ್ದು ತುಂಬಾ ಮುಖ್ಯ. ಈ ನಿಟ್ಟಿನಲ್ಲಿ ವೃದ್ಧಾಶ್ರಮಗಳ ಮುಖ್ಯಸ್ಥರು, ಸಿಬ್ಬಂದಿಗಳ ಸೇವೆ ಗಮನಾರ್ಹವಾದದ್ದು. ನೆಲೆ ಕಳೆದುಕೊಂಡವರ ಮನಸ್ಸಿನ ಅಲೆಯನ್ನು ಕಾಪಿಡುವ ಅವರ ಶ್ರಮಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಪ್ರೀತಿ ವಂಚಿತರ ಬದುಕನ್ನು ಪ್ರೀತಿಯ ಹಾದಿಯಲ್ಲಿಯೇ ಮುನ್ನಡೆಸಲು ಶ್ರಮಿಸುವ ಅವರ ಕಾಯಕ ನಿಷ್ಠೆಗೆ ಸಲಾಂ ಹೇಳಬೇಕಾಗಿದೆ.

ಹಿರಿಯರು ಹೊರೆಗಳಾಗದಿರಲಿ Read Post »

ಇತರೆ

ಮಿಸ್ ಯೂ ಡ್ಯಾಡಿ

ನೆನಪು ಮಿಸ್ ಯೂ ಡ್ಯಾಡಿ ಮೌಲ್ಯಗಳ ಸಂಪುಟ ನನ್ನಪ್ಪ ಎಪ್ರಿಲ್ ತಿಂಗಳ ಸಮಯ ಬೆಂಗಳೂರಿನ ಸೆಂಟ್ರಲ್ ಸ್ಕೂಲಲ್ಲಿ ಇಂಗ್ಲಿಷ್ ಮೌಲ್ಯಮಾಪನ ನಡೆದಿತ್ತು.ನನ್ನ ತಂದೆ ಮಲ್ಲಣ್ಣ ಭರಮಪ್ಪ ತಿರ್ಲಾಪುರ ಇಂಗ್ಲಿಷ್ ಪ್ರಾಧ್ಯಾಪಕರು, ಮಾಮಲೆ ದೇಸಾಯಿ ಹೈಸ್ಕೂಲ್ ಶಿಗ್ಗಾವಿ, ಮೌಲ್ಯಮಾಪನಕ್ಕೆ ಅಲ್ಲಿ ಹಾಜರಿದ್ದರು. ಬೆಂಗಳೂರಿಗೆ ಬರುವಾಗ ತುಂಬು ಗರ್ಭಿಣಿಯಾದ ಕಿರಿ ವಯಸ್ಸಿನ ಹೆಂಡತಿಯನ್ನು ಅರೆಮನಸ್ಸಿನಿಂದಲೇ ಬಿಟ್ಟು ಬಂದಿದ್ದರು. ಬೆಂಗಳೂರಿಗೆ ಬಂದು ಒಂದು ವಾರಕ್ಕೆ ಅವರಿಗೆ ಒಂದು ಪತ್ರ ಬರುತ್ತದೆ. ಅದು ಮೊದಲ ಮಗುವಿನ ಜನನದ ಕುರಿತಾದ ಪತ್ರ. ಅಕಸ್ಮಾತಾಗಿ ಆ ಪತ್ರ ಮೊದಲು ಗೆಳೆಯರ ಕೈಸೇರುತ್ತದೆ. ಗೆಳೆಯರು ತಾವೇ ಪತ್ರವನ್ನು ಹರಿದು ಓದಿ ಕಂಗ್ರಾಜುಲೇಷನ್ಸ್ ನಿಮಗೆ ಗಂಡು ಮಗುವಾಗಿದೆ ಪಾರ್ಟಿ ಕೊಡಿ ಎಂದು, ದೊಡ್ಡ ಹೋಟೆಲಿಗೆ ಕರೆದೊಯ್ದು ಹೊಟ್ಟೆ ಬಿರಿಯೆ ಪಾರ್ಟಿ ತಿಂದಮೇಲೆ, ಕ್ಷಮಿಸಿ ತಿರ್ಲಾಪುರ ನಿಮಗೆ ಮಗಳು ಹುಟ್ಟಿದ್ದಾಳೆ ಅಂದರಂತೆ. ಆಗ ನನ್ನ ತಂದೆ ಕೊಂಚವೂ ವಿಚಲಿತವಾಗದ ಅರೆ ನನಗೆ ಇನ್ನೂ ಖುಷಿಯಾಯಿತು ಲಕ್ಷ್ಮಿ ನನ್ನ ಮನೆಗೆ ಬಂದಿದ್ದಾಳೆಅವಳಿಗೆ ನಾನು ವಿಜಯಲಕ್ಷ್ಮಿ ಎಂದು ಹೆಸರಿಡುತ್ತೇನೆ ಅವಳನ್ನು ನಾನು ಇಂಗ್ಲೀಷ್ ಪ್ರೊಫೇಸರ್ ಮಾಡುತ್ತೇನೆ ನೋಡುತ್ತೀರಿ ಅಂದಿದ್ದರಂತೆ. ..ಮುಂದೆ ಅದರಂತೆ ತಮ್ಮ ಮಗಳನ್ನು ಅವರು ಬೆಳಗಾವಿಯಮರಾಠಾ ಮಂಡಳ ಪದವಿ ಮಹಾವಿದ್ಯಾಲಯದ ಇಂಗ್ಲೀಷ್ ಉಪನ್ಯಾಸಕಿ ಯನ್ನಾಗಿ ಮಾಡಿದ್ದು ಈಗ ಇತಿಹಾಸ…. ನಾನು ಪ್ರೀತಿಯಿಂದ ಅಪ್ಪನನ್ನು ಡ್ಯಾಡಿ ಡ್ಯಾದೂಸ್, ಗೋಬಸ್ ಏನೆಲ್ಲಾ ವಿಚಿತ್ರ ಹೆಸರುಗಳಿಂದ ಕರೆಯುತ್ತಿದ್ದೆ. ಅವರು ಮಾತ್ರ ನನ್ನನ್ನು, “ಎಸ್ ಮೈ ಡಿಯರ್ ಡಾಟರ್ ವಿಜಯಲಕ್ಷ್ಮಿ” ಎಂದು ಯಾವಾಗಲೂ ಪ್ರೀತಿಯಿಂದಲೇ ಸಂಬೋಧಿಸುತ್ತಿದ್ದರು. ನನ್ನ ಮಗಳು ತುಂಬಾ ಜಾಣೆ, ಪಾಕಪ್ರವೀಣೆ, ಒಳ್ಳೆಯ ಗಾಯಕಿ ಎಲ್ಲದರಲ್ಲಿಯೂ ಅವಳದು ಎತ್ತಿದ ಕೈ ಅವಳನ್ನು ಮದುವೆಯಾಗುವ ತುಂಬಾ ಪುಣ್ಯವಂತ ಎಂದು ಸದಾ ನನ್ನನ್ನು ಒಳ್ಳೆಯ ಮಾತುಗಳಿಂದ ಹುರಿದುಂಬಿಸುತ್ತಿದ್ದರು. ಅಪ್ಪನೆಂದರೆ ನನ್ನ ಭಾವ, ನನ್ನ ಜೀವ ,ನನ್ನ ಜೀವನ ಕಟ್ಟಿದ ಶಿಲ್ಪಿ, ನನ್ನ ಆತ್ಮೀಯ ಗೆಳೆಯ, ನನ್ನ ತಾಯಿ, ನನ್ನ ಬಂಧು, ನನ್ನ ಸಲಹೆಗಾರ …ಒಂದೇ ಎರಡೇ ಎಲ್ಲಕ್ಕಿಂತ ಹೆಚ್ಚಾಗಿದೊಡ್ಡ ಸಹನಾಮೂರ್ತಿ. ಅವರಲ್ಲಿರುವ ತಾಳ್ಮೆಗೆ ಯಾರು ಸರಿಸಾಟಿ ಅಲ್ಲ ಸಹೃದಯಿ, ಪರೋಪಕಾರಿ, ಕಷ್ಟಸಹಿಷ್ಣು, ಮಕ್ಕಳನ್ನು ಒಂದು ಪೆಟ್ಟು ಹಾಕದೆ ಅತ್ಯಂತ ಪ್ರೀತಿಯಿಂದ ಬೆಳೆಸಿದ ಕರುಣಾಮಯಿ. ತಂದೆಯೆಂದರೆ ನಮಗೆ ಪ್ರೀತಿ, ತಂದೆಯೆಂದರೆ ಸಲುಗೆ ,ಆತ್ಮೀಯತೆ, ಹಠ….. ಶಿಗ್ಗಾವಿ ಮಾಮಲೆ ದೇಸಾಯಿ ಹೈಸ್ಕೂಲಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಅವರು ಯಾವಾಗಲೂ ಮಕ್ಕಳಲ್ಲಿ ಉನ್ನತ ವಿಚಾರಗಳನ್ನು ತುಂಬುತ್ತಿದ್ದರು. ಸದಾ ಮನೆಯಲ್ಲಿ ಒಂದು ಆರೋಗ್ಯಕರ ಶೈಕ್ಷಣಿಕ ಧಾರ್ಮಿಕ ಸಾಂಪ್ರದಾಯಿಕ ಗೌರವಯುತವಾದ ಪರಿಸರವನ್ನು ಕಟ್ಟಿಕೊಟ್ಟಿದ್ದರು.”ಸಣ್ಣ ಗುರಿ ಅಪರಾಧ”, “Low aim is crime” ಹಾಗಾಗಿ ಉನ್ನತ ಗುರಿಯನ್ನು ನೀವು ಇಡಬೇಕು ಎಂದು ನಮಗೆ ಯಾವಾಗಲೂ ತಿಳಿಹೇಳುತ್ತಿದ್ದರು. ಹಾಗಾಗಿ ಇವತ್ತು ಅವರ ಹಿರಿಯ ಮಗಳಾದ ನಾನು ಬೆಳಗಾವಿಯ ಮರಾಠ ಮಂಡಳ ಕಾಲೇಜಿನ ನಲ್ಲಿ ಇಂಗ್ಲಿಷ್ವಿಭಾಗದ ಮುಖ್ಯಸ್ಥೆಯಾಗಿ ಯುಜಿಸಿ ಸಂಬಳವನ್ನು ಪಡೆಯುತ್ತಿದ್ದೇನೆ. ನನ್ನ ಮೊದಲನೆಯ ತಮ್ಮ ರವಿ ಎಂ ತಿರ್ಲಾಪುರ ಈಗ ಸ್ಪೆಷಲ್ ಡಿಸಿ ಆಗಿ ಬೆಂಗಳೂರಿನಲ್ಲಿಉನ್ನತ ಹುದ್ದೆಯಲ್ಲಿ ತಂದೆಯ ಎಲ್ಲ ಆದರ್ಶ ಮತ್ತು ಆಶಯಗಳನ್ನು ಮೈಗೂಡಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಎರಡನೆಯ ತಮ್ಮ ಡಾಕ್ಟರ್ ಮೃತ್ಯುಂಜಯ ತಿರ್ಲಾಪುರ ತಮ್ಮದೇ ನರ್ಸಿಂಗ್ ಹೋಮ್ ನಡೆಸುತ್ತಿದ್ದು ಜೊತೆಜೊತೆಗೆ ಅನೇಕ ಶಿಕ್ಷಣ ಸಂಸ್ಥೆಗಳನ್ನು ಮತ್ತು ವೃದ್ದಾಶ್ರಮ ನಡೆಸುತ್ತ ಪತ್ನಿ ಡಾಕ್ಟರ್ ರಾಣಿ ತಿರ್ಲಾಪುರ ಅವರೊಂದಿಗೆ ಸಮಾಜಮುಖಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. 1990 ರಲ್ಲಿ ಒಂದು ಘಟನೆ ನಡೆಯುತ್ತೆ ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಮೇಜರ್ ತೆಗೆದುಕೊಂಡು ಪ್ರಥಮ ದರ್ಜೆಯಲ್ಲಿ ನಾನು ಬಿಎ ಪಾಸಾಗಿದ್ದೆ. ಮುಂದೇನು? ಎನ್ನುವ ಪ್ರಶ್ನೆಗೆ ನಾನು ಡ್ಯಾಡಿ ನಾನು B.ed ಮಾಡಿ ನಿಮ್ಮಂತೆ ಹೈಸ್ಕೂಲ್ ಶಿಕ್ಷಕಿ ಆಗುತ್ತೇನೆ ಎಂದೆ. ಆದರೆ ನನ್ನ ತಂದೆ ಇಲ್ಲ ನೀನು ನನ್ನಂತೆ ಆಗುವುದು ಬೇಡ ನನಗಿಂತ ಎತ್ತರಕ್ಕೆ ಬೆಳೆಯಬೇಕು ತಂದೆಯನ್ನು ಮೀರಿ ಬೆಳೆದ ಮಗಳಾಗಬೇಕು ಆದ್ದರಿಂದ ನೀನು ಯೂನಿವರ್ಸಿಟಿ ಅಥವಾ ಡಿಗ್ರಿ ಕಾಲೇಜಿನ ಇಂಗ್ಲಿಷ್ ಪ್ರೊಫೆಸರ್ ಆಗಬೇಕೆನ್ನುವುದು ನನ್ನ ಆಸೆ ಎಂದರು. ಅವರ ಮಾತನ್ನು ನಾನು ಕೇಳದೆ ಹಠ ಮಾಡತೊಡಗಿದೆ, ಕೊನೆಗೆ ಅನಿವಾರ್ಯವಾಗಿ ಧಾರವಾಡದಲ್ಲಿಯ ಕೆಎಲ್ಇ ಬಿಎಡ್ ಕಾಲೇಜಿಗೆ ನನ್ನ ಕರೆದುಕೊಂಡು ಹೋದರು ಅಲ್ಲಿ ಏನಾಯಿತೋ ಗೊತ್ತಿಲ್ಲ ಆ ಮಹಾವಿದ್ಯಾಲಯದ ಪ್ರಾಚಾರ್ಯರು ಕೂಡ ನೀನು ಬಿ ಎಡ ಮಾಡುವುದು ಬೇಡ ನಿಮ್ಮ ತಂದೆಯ ಮಾತನ್ನು ಕೇಳು ಇಂಗ್ಲಿಷ್ನಲ್ಲಿ MA ಮಾಡು ಎಂದು ಉಪದೇಶಿಸಿದರು..ಬೇರೆ ದಾರಿ ಕಾಣದೆ ಅವರಿಬ್ಬರ ಮಾತುಗಳಿಗೆ ನಾನು ತಲೆಬಾಗಿ ಮುಂದೆ ಇಂಗ್ಲಿಷ್ನಲ್ಲಿ MA ಮಾಡಿ ಇದೀಗ ಬೆಳಗಾವಿಯ ಪ್ರತಿಷ್ಠಿತ ಡಿಗ್ರಿ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸಕಿ ಅದು ಕೂಡ ಈಗ ಇತಿಹಾಸ…ಪ್ರತಿಯೊಬ್ಬರು ಜೀವನದಲ್ಲಿ ಉನ್ನತ ಧ್ಯೇಯವನ್ನೇ ಇಟ್ಟುಕೊಳ್ಳಬೇಕು ಎನ್ನುವುದು ನನ್ನ ತಂದೆಯ ಅಭಿಲಾಷೆ ಇದೀಗ ಅವರ ಆಶಯದಂತೆಎಲ್ಲ ಮೊಮ್ಮಕ್ಕಳು ಕೂಡ ನಡೆಯುತ್ತಿದ್ದಾರೆ. ನನ್ನ 45ನೆಯ ವಯಸ್ಸಿನ ಆಸುಪಾಸಿನಲ್ಲಿ ಕಾಲೇಜಿನ ಕೆಲಸದ ಒತ್ತಡ ಮನೆ ಕೆಲಸಗಳು ಸಾಮಾಜಿಕ ಕಾರ್ಯಕ್ರಮಗಳು ಬೇರೆ ಊರಿಗೆ ವರ್ಗಾವಣೆ ಮನೆಯಲ್ಲಿ ಮಾವನ ಅನಾರೋಗ್ಯ ಚಿಕ್ಕ ಮಕ್ಕಳ ಶಾಲೆ ಪಾಠ ಪ್ರವಚನ ಪತಿಯ ದೂರದ ನೌಕರಿ ಎಲ್ಲವೂ ಸೇರಿ ಒಂಥರಾ ಮಾನಸಿಕ ಮತ್ತು ದೈಹಿಕ ಅನಾರೋಗ್ಯವನ್ನು ಉಂಟು ಮಾಡಿ ನಾನು ಹಾಸಿಗೆ ಹಿಡಿದು ಮಲಗಿ ಬಿಟ್ಟೆ ವಿಷಯ ತಿಳಿದ ನನ್ನ ತಂದೆ ಕಕ್ಕುಲತೆಯಿಂದ ಧಾವಿಸಿಬಂದರು ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಔಷಧೋಪಚಾರ ಮಾಡಿಸಿ ಕಾಲೇಜಿಗೆ ಒಂದು ತಿಂಗಳು ರಜೆ ಹಾಕಿಸಿ ಚಿಕ್ಕ ಮಗುವನ್ನು ನೋಡಿಕೊಳ್ಳುವ ಹಾಗೆ ಸತತ ಒಂದು ತಿಂಗಳು ಹಣ್ಣು ಹಾಲು ಔಷದೋಪಚಾರ ಸಮಯಕ್ಕೆ ಸರಿಯಾಗಿ ಊಟ ತಿಂಡಿ ವಿಶ್ರಾಂತಿ ಎಲ್ಲವನ್ನೂ ನನಗೆ ಕೊಟ್ಟು ಒಂದೇ ತಿಂಗಳಿನಲ್ಲಿ ನನ್ನ ಹಿಮೋಗ್ಲೋಬಿನ್ ಹೆಚ್ಚಾಗುವ ಹಾಗೆ ನನ್ನ ಆರೈಕೆ ಮಾಡಿ ಮತ್ತೆ ನನ್ನ ಮುಖದಲ್ಲಿ ನಗು ಅರಳಿಸಿದ್ದು ನನ್ನಪ್ಪ.ಆ ಕಾಳಜಿ ಪ್ರೀತಿ ಕಕ್ಕುಲತೆ ಅಂತಃಕರಣ ಈಗ ನಾನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ತಂದೆಯ ಎಲ್ಲ ಗುಣಗಳನ್ನು ಎರಕಹೊಯ್ದು ಮೈಗೂಡಿಸಿಕೊಂಡು ಇಂದಿಗೂ ಬದುಕುತ್ತಿರುವಳು ನಾನುಮತ್ತು ನನ್ನ ತಮ್ಮಂದಿರು. 1993 ಮಾಂತೇಶ್ ಪುಟ್ಟಿ ಮೆಕ್ಯಾನಿಕಲ್ ಇಂಜಿನಿಯರ್ ಸಂಪಗಾವಿ ಇವರೊಂದಿಗೆ ನನ್ನ ಮದುವೆಯಾಗಿ ವರ್ಷ ಕಳೆದಿತ್ತು. ಚಿಕ್ಕ ಬಾಡಿಗೆ ಮನೆ ಪುಟ್ಟ ಸಂಬಳ ಆದರೆ ಯಾವುದಕ್ಕೂ ಕೊರತೆ ಇರಲಿಲ್ಲ. ಬಹಳಷ್ಟು ಪ್ರೀತಿ-ವಿಶ್ವಾಸ ನೆಮ್ಮದಿಯಿಂದ ಬದುಕಿದ್ದ ದಿನಗಳು. ಮೇಲಿಂದ ಮೇಲೆ ಅಪ್ಪ-ಅಮ್ಮ ನನ್ನೆಡೆಗೆ ಬಂದು ಹೋಗುತ್ತಿದ್ದರು. ನಾನು ಪಾರ್ಟ್ ಟೈಮ್ ಉಪನ್ಯಾಸಕಿಯಾಗಿ ಕೇವಲ ಎರಡು ನೂರು ರೂಪಾಯಿ ಸಂಬಳಕ್ಕೆ ಕೆಲಸ ಮಾಡುತ್ತಿದ್ದೆ. ಆಗ ನಮ್ಮ ಹತ್ತಿರ ಟು ವೀಲರ್ ಕೂಡ ಇರಲಿಲ್ಲ. ಆದರೆವಿಚಿತ್ರವೆಂಬಂತೆ ಪದೇಪದೇ ನನಗೊಂದು ಕನಸುಬೀಳುತ್ತಿತ್ತು ಮತ್ತು ಕಾಡುತ್ತಿತ್ತು. ಅದನ್ನು ನನ್ನ ತಂದೆಯೊಂದಿಗೆ ಹಂಚಿಕೊಂಡೆ. ” ಡ್ಯಾಡಿ ಯಾಕೋ ಪದೇ ಪದೇ ಕನಸಿನಲ್ಲಿ ನಾನು ಕಾರ್ ಡ್ರೈವಿಂಗ್ ಮಾಡುತ್ತಿದ್ದೇನೆ ನಮ್ಮ ಹತ್ತಿರ ಕಾರು ಬಿಡಿ ಟು ವೀಲರ್ ಕೂಡ ಇಲ್ಲ ಅದೇಕೆ ಹೀಗಾಗುತ್ತದೆ ಗೊತ್ತಾಗುತ್ತಿಲ್ಲ ಅಂದೆ ” ಅದಕ್ಕೆ ಅವರು ನೀನು ಮುಂದೆ ಕಾರ್ ಡ್ರೈವಿಂಗ್ ಮಾಡುವವಳಿದ್ದಿ ಅದು ಒಂಥರಾ ಇಂಟ್ಯೂಷನ್…. ನಾಳೆ ನೇನೀನು ಡ್ರೈವಿಂಗ್ ಕ್ಲಾಸಿಗೆ ಹಚ್ಚು ಎಂದು ನಾಲ್ಕು ಸಾವಿರ ರೂಪಾಯಿಗಳನ್ನು ತೆಗೆದು ಕೈಗಿಟ್ಟರು. ನಾನು ಕೂಡ ತಡಮಾಡದೆ ಮರುದಿವಸವೇ ಡ್ರೈವಿಂಗ್ ಕ್ಲಾಸ್ ಹಚ್ಚಿದೆ.ಮುಂದೆ ನಡೆದದ್ದು ಮತ್ತೆ ಇತಿಹಾಸವೇ …ಈಗ ಮನೆಯಲ್ಲಿ ಮೂರುಕಾರುಗಳು. ಕಳೆದ 15 ವರ್ಷಗಳಿಂದ ಡ್ರೈವಿಂಗ್ ಮಾಡುತ್ತಿದ್ದೇನೆ.ಇದು ಕೂಡ ನನ್ನ ಅಪ್ಪನ ಕಾಣಿಕೆ.. ಹೇಗೆ ಮರೆಯಲಾದೀತು ಅದೆಲ್ಲವನ್ನು….? ನನ್ನ ಮಾವ ಶಿವಜ್ಞಾನಿ ಪುಟ್ಟಿ ಮತ್ತು ನನ್ನ ತಂದೆಇಬ್ಬರು ಬೀಗರಾದರೂ ಅವರಿಬ್ಬರಲ್ಲಿ ಒಂದು ಸಲಿಗೆ ಅನ್ಯೋನತೆ ಅವಶ್ಯಕತೆಗಿಂತ ತುಸು ಹೆಚ್ಚೇ ಇತ್ತು. ಮನೆಯಲ್ಲಿ ಅತ್ತೆ ಇಲ್ಲದ ಕಾರಣ ವಯಸ್ಸಾದ ಮಾವನ ಬಹಳಷ್ಟು ಕೆಲಸವನ್ನು ನಾನೇ ಮಾಡಬೇಕಾಗುತ್ತಿತ್ತು. ಎಷ್ಟು ಸಲ ಬೆಳಗಾವಿಗೆ ಬಂದಾಗ ನನ್ನ ತಂದೆಯವರು, “ಅಕ್ಕವ್ವ ನೀನು ಹೋಗಮ್ಮ ಕಾಲೇಜಿಗೆ, ನಾನು ನಿಮ್ಮ ಮಾವನವರಿಗೆ ಊಟ ಬಡಿಸುತ್ತೇನೆ ನಾನೇ ಚಹ ಮಾಡಿಕೊಡುತ್ತೇನೆ ನಾನು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತೇನೆ” ಎಂದು ಮಗಳ ಕೆಲಸವನ್ನು ಕಡಿಮೆ ಮಾಡಿ ಕಂಫರ್ಟ್ ನೀಡಿದವರು ನನ್ನ ಡ್ಯಾಡಿ. ಪ್ರತಿಬಾರಿಯೂ ನಮ್ಮ ತಂದೆ ಬೆಳಗಾವಿಗೆ ಬರುವಾಗ 5000 10000 ನೋಟಿನ ಕಂತೆಯನ್ನು ಇಟ್ಟುಕೊಂಡೇ ಬರುತ್ತಿದ್ದರು. ಇಲ್ಲಿ ಬಂದಾಗ ಮಗಳಿಗೆ ಮೊಮ್ಮಕ್ಕಳಿಗೆ ಹೊಸಬಟ್ಟೆ ಕೊಡಿಸುವುದು ಹೋಟೆಲುಗಳಲ್ಲಿ ಉಣಿಸುವುದು ಸಿನಿಮಾ ತೋರಿಸುವುದು ಮಾಡುತ್ತಿದ್ದರು.ಒಂದು ಬಾರಿ ಒಂದು ಸ್ವಾರಸ್ಯಕರ ಘಟನೆ ನಡೆಯುತ್ತದೆ. ಊರಿನಿಂದ ಅವರು ಬಂದು ನಮ್ಮ ಮಾವನ(ವಯಸ್ಸಿನಲ್ಲಿ ತುಂಬಾ ಹಿರಿಯರಾದ ಅವರನ್ನು ಅಜ್ಜ ಎಂದು ಕರೆಯುತ್ತಿದ್ದೆ) ರೂಮಿನಲ್ಲಿ ಮಲಗುತ್ತಾರೆ. ಅದೇ ರೂಮಿನಲ್ಲಿದ್ದ ನಮ್ಮ ಮಾವನ ಅಲೆಮಾರಿನಲ್ಲಿ 10000 ರೂಪಾಯಿಗಳನ್ನು ಇಡುತ್ತಾರೆ. ಮುಂದೆ ಎರಡು ದಿನದಲ್ಲಿ ಆ ದುಡ್ಡು ಕಾಣೆಯಾಗುತ್ತದೆ. ಗಾಬರಿಗೊಂಡು ನನ್ನ ತಂದೆ ನನ್ನನ್ನು ಕರೆದು *ಅಲೆಮಾರಿನಲ್ಲಿ ಇಟ್ಟಿದ್ದ ರೂಪಾಯಿ ಕಾಣುತ್ತಿಲ್ಲ 10000 ರೂಪಾಯಿಗಳನ್ನು ನಿನ್ನ ಮಾವನವರೇ ತೆಗೆದುಕೊಂಡಿದ್ದಾರೆ” ಎಂದು ಆರೋಪಿಸ ತೊಡಗಿದರು, ಅದಕ್ಕೆ ಪ್ರತ್ಯುತ್ತರವಾಗಿ, ಡ್ಯಾಡಿ,”ಇಲ್ರಿ ನಮ್ಮ ಅಜ್ಜಾರು ಅಂಥವರಲ್ಲ ಅವರು ಬೇರೆಯವರ ದುಡ್ಡಿಗೆ ಆಸೆ ಮಾಡುವುದಿಲ್ಲ ನೀವು ಎಲ್ಲೋ ಇಟ್ಟು ಮರೆತಿರಿ ಗಾಬರಿಯಾಗಬೇಡಿ ನಿಧಾನವಾಗಿ ಹುಡುಕೋಣ” ಎಂದೆ. ನನ್ನ ಮಾತು ಕೇಳಿ ಅವರಿಗೆ ಸಿಟ್ಟು ಬಂತುಏನವ್ವ ನೀನು ನಿಮ್ಮ ಮಾವನ್ನ ಮ್ಯಾಲಗಟ್ಟತಿಅಲ್ಲ ,ಅಪ್ಪನಿಗಿಂತ ಅವರು ನಿನಗೆ ಹೆಚ್ಚೇನು? ಅಂದ್ರು, ನಾನು ಏನು ಮಾತನಾಡಲಿಲ್ಲ. ಮುಂದೆ ಮರುದಿವಸಅಕಸ್ಮಾತಾಗಿ ಅವರ ದೊಡ್ಡ ಏರ್ ಬ್ಯಾಗ್ ನಲ್ಲಿ ಇಟ್ಟಿದ್ದ ಡೈರಿಯಲ್ಲಿ 10000 ರೂಪಾಯಿಗಳ ಕಂತೆ ಅವರಿಗೆ ಸಿಕ್ಕಿತು. ತುಂಬಾ ಪಶ್ಚಾತ್ತಾಪ ಪಟ್ಟುಕೊಂಡು ನೀನು ಹೇಳಿದ್ಹೇ ಸರಿ ಮಗಳ, ನಾನೇ ನಿನ್ನ ಅಜ್ಜನನ್ನು ತಪ್ಪು ತಿಳಿದುಕೊಂಡಿದ್ದೆ, ಈಗಿನ ಕಾಲದಲ್ಲಿ ಅತ್ತೆ-ಮಾವ ಎಂದರೆ ಮೂಗು ಮುರಿಯುವವರೇ ಜಾಸ್ತಿ ಅಂತದ್ದರಲ್ಲಿ ನೀನು ತಂದೆಯನ್ನು ಲೆಕ್ಕಿಸದೆ ಮಾವನ ಸ್ವಭಾವವನ್ನು ಎತ್ತಿ ಹಿಡಿದೆ ನೀನು ನನ್ನ ಮಗಳು ಎಂಬ ಹೆಮ್ಮೆ ನನಗಿದೆ ಅಂದಿದ್ದರು ನಮ್ಮ ತಂದೆ, ಅದೆಲ್ಲವೂ ಈಗ ನೆನಪಾಗುತ್ತಿದೆ….. ನೌಕರಿಗೆ ಸಂಬಂಧಪಟ್ಟಂತ ಏನೇ ಸಮಸ್ಯೆಗಳು ಇರಲಿ ನನಗೆ ಬೆನ್ನೆಲುಬಾಗಿ ಸದಾ ಬೆಂಗಾವಲಾಗಿ ಇರುತ್ತಿದ್ದರು ನನ್ನತಂದೆ. ಎರಡನೆಯ ಪ್ರಮೋಷನ್ ಸಮಯ, ರೆಫ್ರೇಶರ್ ಕೋರ್ಸ ಮಾಡಿಕೊಳ್ಳಬೇಕಿತ್ತು ಹತ್ತಿರದ ಯಾವ ಯೂನಿವರ್ಸಿಟಿಯಲ್ಲಿ ಅವಕಾಶ ಸಿಗಲಿಲ್ಲ ಕೊನೆಗೆ ಪಾಂಡಿಚೇರಿ ಯೂನಿವರ್ಸಿಟಿ ಗೆ ಹೋಗುವುದು ಎಂದಾಯಿತು. ನಾನೊಬ್ಬಳೇ ಹೇಗೆ ಹೋಗಲಿ ಎಂದು ಚಿಂತೆ ಮಾಡುತ್ತ ಕುಳಿತಾಗ, ಮತ್ತೆ ಯಥಾಪ್ರಕಾರ ನನ್ನ ತಂದೆ ನಾನು ಬರುತ್ತೇನೆ ನಡೆಯಮ್ಮ(ಆಗ ತೀವ್ರವಾದ ಮಂಡಿ ನೋವಿನಿಂದ ಬಳಲುತ್ತಿದ್ದರು) ಎಂದು ಪಾಂಡಿಚೇರಿಯ ವರೆಗೆ ನನ್ನೊಂದಿಗೆ ದೀರ್ಘ ಪ್ರಯಾಣವನ್ನು ಮಾಡಿ ನನ್ನನ್ನು ಯುನಿವರ್ಸಿಟಿಯ ಹಾಸ್ಟೆಲ್ ವರೆಗೆ ಮುಟ್ಟಿಸಿ, ಮರುದಿವಸ ರೆಫ್ರೇಶರ್ ಕೋರ್ಸ ಮೊದಲ ತರಗತಿಯಲ್ಲಿ ಚಿಕ್ಕಮಕ್ಕಳಂತೆ ನನ್ನನ್ನು ಕುಳ್ಳರಿಸಿ ಆಲ್ ದ ಬೆಸ್ಟ್ ಹೇಳಿ ಊರಿಗೆ ಮರಳಿದ್ದರು.ಇವತ್ತು ನಾನು ಅಸೋಸಿಯೇಟ್ ಪ್ರೊಫೆಸರ್ ದೊಡ್ಡ ಸಂಬಳದ ಪ್ರಾಧ್ಯಾಪಕಿ ಕಾರಣ …..ಮತ್ತೆ ನನ್ನ ತಂದೆ. ಇಲ್ಲಿಯವರೆಗೆ ಸಾವಿರಾರು ಘಟನೆಗಳು ನಡೆದಿವೆ,ಲೆಕ್ಕಕ್ಕೆ ಸಿಗದ ಅವರ ಸಹಾಯ.ಒಂದೇ-ಎರಡೇ ಯಾವುದನ್ನು ನೆನಪಿಸಿಕೊಳ್ಳಲಿ ಯಾವುದನ್ನು ಉಲ್ಲೇಖಿಸಲಿ ತಿಳಿಯುತ್ತಿಲ್ಲ….. ಸಂಜೆಯಾದರೆ ಸಾಕು ದಿನಾಲು ಅಪ್ಪನಿಗೆಫೋನ್ ಹಚ್ಚುತ್ತಿದ್ದೆ ವಾಕಿಂಗ್ ನೆಪಮಾಡಿ ಹೊರಹೋಗಿ ಗಂಟೆಗಟ್ಟಲೆ ಮಾತನಾಡುತ್ತಿದ್ದೆ ಬೆಳಗ್ಗೆಯಿಂದ ಸಂಜೆಯವರೆಗೆ ನಡೆದಎಲ್ಲಾ ಘಟನೆಗಳನ್ನು ಅವರೊಂದಿಗೆ

ಮಿಸ್ ಯೂ ಡ್ಯಾಡಿ Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-35 ಗುರೂಜಿಯವರು ರೋಹಿತ್ ನ ನಿರುತ್ಸಾಹವನ್ನು ಗಮನಿಸಿದರಾದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ, ‘ದಾರಿ ಬಹಳ ಸುಲಭದ್ದೇ ರೋಹಿತರೇ. ನಮ್ಮ ಜನಸಾಮಾನ್ಯರಲ್ಲಿ ಯಾವೊಂದು ಹೊಸ ಬದಲಾವಣೆ ತರಬೇಕಿದ್ದರೂ ಅಥವಾ ಅವರು ತಮ್ಮ ಜೀವನದಲ್ಲಿ ಯಾವುದೇ ಲಾಭ, ಯಶಸ್ಸು ಗಳಿಸಬೇಕಿದ್ದರೂ ಅಂಥವರೊಳಗೆ ಯಾವುದಾದರೊಂದು ವಿಷಯದಲ್ಲಿ ಅತಿಯಾದ ಭಯವಿರಬೇಕು. ಆಗಲೇ ಅವರು, ನಮ್ಮ ದೇವರು ದಿಂಡರುಗಳ ಮೊರೆ ಹೋಗಲು ಸಾಧ್ಯ ಎಂಬುವುದನ್ನು ನಾವು ಅನುಭವದಿಂದಲೇ ಕಂಡಿದ್ದೇವೆ. ಹೀಗಾಗಿ ಅವರಲ್ಲಿ ಅಂಥ ಸಾತ್ವಿಕ ಭಯವೊಂದನ್ನು ನಾವು ಸೃಷ್ಟಿಸಬೇಕು. ಅದು ಹೇಗೆ? ಅಂತನೂ ಬಹಳ ಚಿಂತಿಸಿದೆವು. ಕೊನೆಗೆ ಒಂದು ಉಪಾಯ ಹೊಳೆಯಿತು. ಆದರೆ ಅದಕ್ಕೆ ನಿಮ್ಮದೂ ಸಂಪೂರ್ಣ ಸಹಕಾರ ಬೇಕಾಗುತ್ತದೆ. ಮಾಡಬಲ್ಲಿರಾ…?’ ಎಂದು ನಗುತ್ತ ಅಂದವರು, ‘ಹ್ಞಾಂ, ಅದನ್ನು ನೀವು ಪುಕ್ಕಟೆಯಾಗಿ ಮಾಡಬೇಕಾಗಿಲ್ಲ ರೋಹಿತರೇ. ಪ್ರತಿಫಲವಾಗಿ ನಾವೇನು ಕೊಡಬೇಕೆಂದಿದ್ದೇವೋ ಅದು ಕೂಡಲೇ ನಿಮಗೆ ದಕ್ಕುತ್ತದೆ!’ ಎಂದರು ನಯವಾಗಿ. ಆದರೆ ರೋಹಿತ್ ಒಮ್ಮೆಲೇ ಗೊಂದಲಕ್ಕೆ ಬಿದ್ದು, ‘ನನ್ನಿಂದೆಂಥ ಸಹಕಾರ ಸರ್ ನಿಮಗೆ…?’ ಎಂದು ನಕ್ಕವನು, ‘ಪರ್ವಾಗಿಲ್ಲ, ವಿಷಯ ಏನೆಂದು ಬಿಡಿಸಿ ಹೇಳಿ. ಸಾಧ್ಯವಾದರೆ ಮಾಡುತ್ತೇನೆ!’ ಎಂದ. ‘ಅಯ್ಯೋ, ಅದು ಅಂಥ ದೊಡ್ಡ ಕೆಲಸವೇನಲ್ಲ ರೋಹಿತರೇ. ನಾಡಿದ್ದು ಮಸಣದಗುಡ್ಡೆಯಲ್ಲಿ ಒಂದು ದೊಡ್ಡ ನಾಗಬನವು ನಮ್ಮ ಉಸ್ತುವಾರಿಯಲ್ಲಿಯೇ ಜೀರ್ಣೋದ್ಧಾರಗೊಳ್ಳಲಿದೆ. ಅಂದಿನ ನಮ್ಮ ವಿಶೇಷ ಪೂಜೆಯು ಸಂಪನ್ನಗೊಂಡು ಪೂರ್ಣಾಹುತಿಯಾಗುವ ಸಮಯಕ್ಕೆ ಸರಿಯಾಗಿ ನೀವೊಂದು ಏಳೆಂಟು ಅಥವಾ ಅದಕ್ಕಿಂತಲೂ ಹೆಚ್ಚಿದ್ದರೂ ಪರವಾಗಿಲ್ಲ, ದೊಡ್ಡ ದೊಡ್ಡ ನಾಗರಹಾವುಗಳನ್ನು ತಂದು ಭಕ್ತಾದಿಗಳ ನಡುವೆ ಅವರಿಗೆ ತಿಳಿಯದಂತೆ ಬಿಟ್ಟುಬಿಡಬೇಕು. ಆ ಹಾವುಗಳೆಲ್ಲ ಒಮ್ಮೆಲೇ ಜನರ ನಡುವೆ ನುಗ್ಗಿ ಎಲ್ಲರಿಗೂ ಕಾಣಿಸಿಕೊಳ್ಳಬೇಕು. ಆಗಲೇ ನಮ್ಮ ಜನರಲ್ಲಿ ನಾಗನ ಮೇಲೆ ಭಯಭಕ್ತಿ ಹೆಚ್ಚಾಗಲು ಸಾಧ್ಯ! ಜೊತೆಗೆ ಆ ವಿಷಯ ಕೂಡಲೇ ಪ್ರಚಾರವಾಗಿ ಊರಿನ ಒಂದಷ್ಟು ನಾಸ್ತಿಕರ ಬಾಯಿ ಮುಚ್ಚಿಸುವ ಕೆಲಸವೂ ಆಗುತ್ತದೆ. ಅಲ್ಲದೆ ನಾವು ನೀವು ಕೂಡಿಯೇ ಸಮಾಜದ ಧಾರ್ಮಿಕ ಸ್ವಾಸ್ಥ್ಯವನ್ನು ಕಾಪಾಡಿದಂತಾನೂ ಆಗುತ್ತದೆ. ಆದ್ದರಿಂದ ಈ ವಿಶೇಷ ಕಾರ್ಯವನ್ನು ನೀವು ಕೂಡಾ ಇದೇ ಉದ್ದೇಶದಿಂದ ಮಾಡಬೇಕು ಏನಂತೀರೀ…?’ ಎಂದು ಗುರೂಜಿಯವರು ಬಹಳ ಗಂಭೀರವಾಗಿ ಹೇಳಿದರು.    ಗುರೂಜಿಯವರ ಪ್ರಳಯಾಂತಕ ಯೋಜನೆಯನ್ನು ಕೇಳಿದ ರೋಹಿತ್ ಗೆ ಆಘಾತಯಿತು! ಥೂ! ಈ ಮನುಷ್ಯ ಇಂಥ ವಂಚಕನೇ…? ಹಾಗಾದರೆ ಇಷ್ಟರವರೆಗೆ ಹಿಂದೂಧರ್ಮ, ದೈವ ದೇವರು, ಶಾಸ್ತ್ರ ಸಂಪ್ರದಾಯ ಅಂತೆಲ್ಲ ಸಂಭಾವಿತನಂತೆ ಮಾತಾಡಿದೆಲ್ಲ ಬರೇ ಬೊಗಳೆಯೇ…? ಇವನಂಥವರು ಇರುವವರೆಗೆ ಯಾವ ಧರ್ಮವೂ ಉದ್ಧಾರವಾಗಲು ಸಾಧ್ಯವಿಲ್ಲ. ನಾನಿವನ ಸ್ನೇಹ ಮಾಡಿದ್ದೇ ದೊಡ್ಡ ತಪ್ಪಾಯಿತು. ಈಗಿಂದೀಗಲೇ ಇವನನ್ನು ಇಲ್ಲಿಂದ ಓಡಿಸಿಬಿಡಬೇಕು ಎಂದು ಜಿಗುಪ್ಸೆಯಿಂದ ಅಂದುಕೊಂಡವನು, ‘ಓಹೋ ಇದಾ ಸರ್ ನಿಮ್ಮ ಸಮಾಜ ಸುಧಾರಣೆಯ ಹೊಸ ಉಪಾಯ? ಇದು ಬಹಳ ಮೇಲ್ಮಟ್ಟದ್ದೇ ಬಿಡಿ. ಆಯ್ತು, ಆಯ್ತು. ಈ ಸಹಾಯವನ್ನು ಖಂಡಿತಾ ಮಾಡಬಲ್ಲೆ. ಏಳೆಂಟೇನು ಬೇಕಿದ್ದರೆ ಹತ್ತು, ಹದಿನೈದು ಹಾವುಗಳನ್ನಾದರೂ ತಂದು ನೀವು ಹೇಳಿದಲ್ಲಿ ಕಣ್ಣುಮುಚ್ಚಿ ಬಿಡಬಲ್ಲೆ. ನಾಗಾರಾಧನೆಗೆ ಪ್ರಸಿದ್ಧವಾಗಿರುವ ನಮ್ಮ ಈ ಈಶ್ವರಪುರದಲ್ಲಿ, ನಾಗರಹಾವುಗಳನ್ನು ಕಂಡಕಂಡಲ್ಲಿ ಕೈಮುಗಿದು ಕಾಪಾಡುವ ಮುಗ್ಧ ಭಕ್ತರಿರುವಾಗ ಆ ಹಾವುಗಳಿಗೇನು ಕೊರತೆ ಬಿಡಿ. ಹೌದು ನೀವು ಹೇಳಿದಂತೆ ಈ ನಮ್ಮ ಕೆಲಸದಿಂದ ನಾಗಭಕ್ತರ ಸಂಖ್ಯೆಯೇನೋ ದಿಢೀರ್ ಹೆಚ್ಚಳವಾಗುತ್ತದೆ. ಅದರೊಂದಿಗೆ ನಿಮ್ಮ ಹೆಸರು ಮತ್ತು ಕೀರ್ತಿಪತಾಕೆಯೂ ಎತ್ತರೆತ್ತರಕ್ಕೆ ಹಾರಾಡತೊಡಗುತ್ತದೆ. ಅದೂ ಸಂತೋಷದ ಸಂಗತಿಯೇ! ಆದರೆ ಅದರ ನಡುವೆ ಒಂದೆರಡು ಸಣ್ಣಪುಟ್ಟ ಅನಾಹುತಗಳೂ ನಡೆಯುತ್ತವೆಯಲ್ಲ, ಅದಕ್ಕೆ ಯಾರನ್ನು ಹೊಣೆ ಮಾಡುತ್ತೀರಿ…?’ ಎಂದು ರೋಹಿತ್ ನಗುತ್ತಲೇ ಪ್ರಶ್ನಿಸಿದ. ಅವನ ವ್ಯಂಗ್ಯ ತುಂಬಿದ ಮಾತಿನಿಂದ ಗುರೂಜಿ ತುಸು ಅವಕ್ಕಾದರು. ‘ಅನಾಹುತವೇ… ಅದೆಂಥದು ರೋಹಿತರೇ…?’ ಎಂದರು ಕಳವಳದಿಂದ. ‘ಹಾಗೆ ಕೇಳಿ ಮತ್ತೇ…! ನಿಮ್ಮ ಪೂಜಾಕಾರ್ಯ ಮುಗಿದು ಮಂಗಳಾರತಿಯ ಹೊತ್ತಿಗೆ ನಾನು ಬಿಡುವ ಸರ್ಪಗಳು ಭಯದಿಂದ ಕಂಗೆಟ್ಟು ಓಡುವ ಧಾವಂತದಲ್ಲಿ ಜನರ ನಡುವೆಯೇ ನುಗ್ಗುತ್ತವಲ್ಲವೇ? ಆವಾಗ ಅವುಗಳು ಅವರ ಕಾಲ್ತುಳಿತಕ್ಕೂ ಸಿಲುಕಿ ತೀವ್ರ ಗಾಯಗೊಳ್ಳುತ್ತವೆ. ಆ ನೋವಿನಲ್ಲಿ ಅವು ಸಿಕ್ಕಸಿಕ್ಕವರನ್ನು ಕಚ್ಚುತ್ತಲೂ ತೊಡಗುತ್ತವೆಯಲ್ಲ! ಆದರೆ ಅದರಿಂದ ಹೆಚ್ಚೇನಿಲ್ಲ, ಕೆಲವು ವಯಸ್ಸಾದ ಹಿರಿಯ ನಾಗಭಕ್ತರು ಕೂಡಲೇ ನಾಗದೇವನ ಪಾದ ಸೇರಿ ಪುನೀತರಾಗುವುದು ಖಚಿತ! ಹ್ಞಾಂ, ಅದೇನೂ ದೊಡ್ಡ ವಿಚಾರವಲ್ಲ ಬಿಡಿ. ಅದಕ್ಕಿಂತ ಹೆಚ್ಚಿನ ಭಕ್ತರು ಇಹಲೋಕ ತ್ಯಜಿಸಿದಂತೆ ಮಾಡಲು ನಾವು ಮೊದಲೇ ನಾಲ್ಕೈದು ಆಂಬುಲೆನ್ಸ್ಗಳನ್ನು ತರಿಸಿಕೊಂಡು ದೂರದ ಮರೆಯಲ್ಲೆಲ್ಲಾದರೂ ನಿಲ್ಲಿಸಿಕೊಂಡರಾಯ್ತು!’ ಎಂದು ವಿಷಾದದಿಂದ ನಗುತ್ತ ಅಂದ ರೋಹಿತ್ ನ ಮಾತಿಗೆ ಗುರೂಜಿ ಝಿಲ್ಲನೆ ಬೆವರಿಬಿಟ್ಟರು. ಬಳಿಕ, ‘ಓಹೋ ಹೌದಲ್ಲವಾ…!’ ಎಂದು ಉದ್ಗರಿಸಿದರು. ‘ಅಷ್ಟೇ ಅಲ್ಲ ಸರ್, ಆ ನಂತರ ಇನ್ನೊಂದು ಮಾರಿಹಬ್ಬವೂ ನಡೆಯುತ್ತದೆ ನೋಡಿ. ಅದರ ಬಗ್ಗೆಯೂ ಸ್ವಲ್ಪ ವಿವರಿಸುತ್ತೇನೆ ಕೇಳಿ. ನಾಡಿನ ಪ್ರಸಿದ್ಧ ಧಾರ್ಮಿಕ ಪ್ರಮುಖರಾದ ಶ್ರೀ ಏಕನಾಥ ಗುರೂಜಿಯವರ ವಿಶೇಷವಾದ ಯಾಗ, ಯಜ್ಞಾದಿಗಳಿಂದ ನಾಗದೇವನು ಸಂಪೂರ್ಣ ಸಂತುಷ್ಟನಾಗಿದ್ದಾನೆ. ಆದರೂ ಅವನಿಗೆ ತಾನೇ ಭೂಮಿಗಿಳಿದು ಬಂದು ಗುರೂಜಿಯವರನ್ನೂ ತನ್ನ ಭಕ್ತಾದಿಗಳನ್ನೂ ಆಶೀರ್ವದಿಸಲು ಸಮಯದ ಕೊರತೆಯಿಂದಾಗಿ ಅವನು ತನ್ನ ಗಣಗಳನ್ನು ಕಳುಹಿಸಿಕೊಟ್ಟಿದ್ದಾನೆ. ಆ ಗಣಗಳೆಲ್ಲ ಗುರೂಜಿಯವರ ಪೂಜಾಕಾರ್ಯದ ಅಂತ್ಯದಲ್ಲಿ ದಿಢೀರ್ ಪ್ರತ್ಯಕ್ಷವಾಗಿ ತಮ್ಮ ಒಡೆಯನ ಭಕ್ತಾದಿಗಳನ್ನು ಕಂಡಕಂಡಲ್ಲಿ ಹಿಡಿದ್ಹಿಡಿದು ನೀಡಿದ ವಿಷ ಪ್ರಸಾದದ ಮಹಿಮೆಗೆ ಭಕ್ತಾದಿಗಳಲ್ಲಿ ಅನೇಕರು ಆಸ್ಪತ್ರೆಗೆ ದಾಖಲಾಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಮತ್ತು ಅವರ ಮನೆಮಂದಿಯೆಲ್ಲ, ‘ಓ ನಾಗದೇವನೇ… ನಿನ್ನನ್ನು ಪೂಜಿಸಲು ಬಂದ ನಮ್ಮಂಥ ಬಡಪಾಯಿಗಳಿಗೆ ನೀನು ನೀಡುವ ಪ್ರತಿಫಲ ಇದೇನಾ…? ದಯವಿಟ್ಟು ನಮ್ಮವರನ್ನು ಕಾಪಾಡು ದೇವಾ…!’ ಎಂದು ಬೊಬ್ಬಿಡುವ ಸುದ್ದಿಯು ನೀವು ಹೇಳಿದ ಹಾಗೆ ದೊಡ್ಡ ಮಟ್ಟದಲ್ಲಿ ಪ್ರಚಾರವಾಗುತ್ತದೆ. ಆಗ ಆ ಅಪರೂಪದ ವಿಚಾರವು ಪೊಲೀಸ್ ಇಲಾಖೆಗೂ ತಲುಪದಿರುತ್ತದೆಯೇ? ‘ನಾಗನ ಪೂಜೆಯ ಸಮಯದಲ್ಲಿಯೇ ಅಷ್ಟೊಂದು ಹಾವುಗಳು ಒಟ್ಟಿಗೆ ಕಾಣಿಸಿಕೊಳ್ಳುವುದೆಂದರೇನು? ಅದೂ ಕಿಕ್ಕಿರಿದ ಜನರ ಸಂದಣಿಯ ನಡುವೆಯೇ ಹಾವುಗಳು ನುಗ್ಗಿವೆ ಎಂದರೆ ಯಾರಾದರೂ ನಂಬುವ ವಿಚಾರವೇ..!?’ ಎಂದು ಪೊಲೀಸ್ ಅಧಿಕಾರಿಗಳೂ ಯೋಚಿಸುತ್ತಾರಲ್ಲವೇ. ಆಗ ಅವರಲ್ಲೂ ಆ ಕುರಿತು ಸಣ್ಣದೊಂದು ಅನುಮಾನ ಹುಟ್ಟದಿರುತ್ತದೆಯೇ? ಆಮೇಲೆ ಅವರು ಸುಮ್ಮನಿರುತ್ತಾರೆಯೇ? ಏನಿದರ ಒಳಮರ್ಮ? ಎಂದುಕೊಂಡು ಸತ್ಯಶೋಧನೆಗೆ ಹೊರಟೇ ಬಿಡುತ್ತಾರೆ. ಆಗ ಅವರಿಗೆ ಮೊದಲು ನೆನಪಾಗುವುದು ಯಾರು ಸರ್…? ನೀವು ಈಗಾಗಲೇ ಹೇಳಿದಂತೆ ಹಾವುಗಳ ವಿಷಯದಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ನಾನೇ ಅಲ್ಲವೇ! ಅಷ್ಟಲ್ಲದೇ ಈ ಪ್ರಕರಣವು ವನ್ಯಜೀವಿ ಕಾಯ್ದೆಯಡಿಯಲ್ಲೂ ಬರುವುದರಿಂದ ಪೊಲೀಸ್ ಇಲಾಖೆಯವರು ಅರಣ್ಯಾಧಿಕಾರಿಗಳನ್ನೂ ಜೊತೆಗೂಡಿಸಿಕೊಂಡೇ ನನ್ನ ಮನೆಗೆ ನುಗ್ಗುತ್ತಾರೆ. ಆಮೇಲೇನಾಗುತ್ತದೆಯೆಂದರೆ, ಆವತ್ತು ನೀವು ಬಂದು ನನ್ನನ್ನು ಎಷ್ಟೊಂದು ಗೌರವಾದರದಿಂದ ಸನ್ಮಾನಿಸಿ ಹಣದ ಸಹಾಯವನ್ನೂ ನೀಡಿದ್ದಿರೋ ಅದೇ ಮಾದರಿಯಲ್ಲಿ ಅಲ್ಲದಿದ್ದರೂ ಎರಡೂ ಇಲಾಖೆಯವರು ಕೂಡಿ ನನ್ನ ನೆರೆಕರೆಯವರೆಲ್ಲ ಸಮ್ಮುಖದಲ್ಲಿ ತಮ್ಮದೇ ಆದ ರೀತಿಯಿಂದ ನನ್ನನ್ನು ಸತ್ಕರಿಸುತ್ತಾರೆ. ಆಗ ನನ್ನ ಈ ಘನಕಾರ್ಯದ ರೂವಾರಿಯಾದಂಥ ತಮ್ಮ ನಾಮಧೇಯವನ್ನು ನಾನವರಿಗೆ ತಿಳಿಸದೇ ಇರಲು ಸಾಧ್ಯವೇ? ಆದರೆ ಅವರು ಅಷ್ಟುಬೇಗ ನಿಮ್ಮಂಥ ದೊಡ್ಡ ಮನುಷ್ಯರ ಹೆಸರು ಹಾಳು ಮಾಡಲಿಚ್ಛುಸುತ್ತಾರೆಯೇ ಖಂಡಿತಾ ಇಲ್ಲ! ಹಾಗಾಗಿ ಅದಕ್ಕೆಲ್ಲ ಅವರು ಸಾಕ್ಷಿ, ಪುರಾವೆಗಳನ್ನೂ ಕೇಳುತ್ತಾರೆ. ಆವಾಗ ನಾನೇನು ಕೊಡಬಲ್ಲೆ ಎಂದು ನೀವೂ ಯೋಚಿಸುತ್ತಿರಬಹುದಲ್ಲವೇ? ನಾನದರ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇನೆ ಸರ್. ಏನೆಂದು ಕೇಳುತ್ತೀರಾ…? ಇಷ್ಟರವರೆಗೆ ತಾವು ನನ್ನೊಂದಿಗೆ ಮಾತಾಡುತ್ತಿದ್ದ ವಿಚಾರವನ್ನೆಲ್ಲ ಈ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದೇನೆ. ಹೀಗಿರುವಾಗ ಇದನ್ನು ಅವರಿಗೆ ಒದಗಿಸದೆ ಬೇರೆ ವಿಧಿ ಉಂಟಾ ಹೇಳಿ? ಆಗ ನಮ್ಮಿಬ್ಬರ ಮೇಲೂ ಜಂಟಿ ಕೇಸುಗಳು ದಾಖಲಾಗುತ್ತವೆ. ಅವು ಕೋರ್ಟು ಮೆಟ್ಟಲೇರಿ ನಮ್ಮ ಆರೋಪವೂ ಸಾಬೀತಾಗುತ್ತದೆ ಎಂದಿಟ್ಟುಕೊಳ್ಳಿ. ಆಮೇಲೆ ನಾವಿಬ್ಬರೂ ಬಳ್ಳಾರಿ ಜೈಲಿನಲ್ಲಿ ಒಟ್ಟಿಗೆ ಕುಳಿತುಕೊಂಡು ಒಂದು ಹತ್ತು, ಹದಿನಾಲ್ಕು ವರ್ಷಗಳ ಕಾಲ ಜೀವನದ ಸಕಲ ತಾಪತ್ರಯಗಳನ್ನೂ ಮರೆತು ರಾಶಿ ರಾಶಿ ತೆಂಗಿನ ಸಿಪ್ಪೆಗಳನ್ನು ಬಡಿಬಡಿದು ಹದಗೊಳಿಸಿಕೊಡುವಂಥ ಗುಡಿಕೈಗಾರಿಕೆಯಲ್ಲಿ ತೊಡಗಿಕೊಂಡು ನೆಮ್ಮದಿಯಿಂದ ಬದುಕಬಹುದು ಏನಂತೀರಿ…!?’ ಎಂದು ತಿರಸ್ಕಾರದಿಂದ ನಗುತ್ತ ಹೇಳಿದ.    ರೋಹಿತ್ ನ ಅಷ್ಟೂ ಮಾತುಗಳನ್ನು ಚಡಪಡಿಸುತ್ತ ಕೇಳಿಸಿಕೊಂಡ ಗುರೂಜಿಯವರಿಗೆ ಕೊನೆಯಲ್ಲಿ ಕೊಂಬರ್ ಚೇಳು ಕುಟುಕಿದಷ್ಟು ವೇದನೆಯಾಯಿತು. ಜೊತೆಗೆ ಅವಮಾನದಿಂದಲೂ ಕುದಿಯುತ್ತ, ‘ಓಹೋ ರೋಹಿತರೇ, ನಮ್ಮ ಆ ಒಂದು ಸಣ್ಣ ಕಾರ್ಯದಿಂದ ಇಷ್ಟೆಲ್ಲ ತೊಂದರೆಗಳಾಗುತ್ತವಾ…? ಇದು ನಮಗೆ ಹೊಳೆದೇ ಇರಲಿಲ್ಲ ನೋಡಿ! ಹಾಗಾದರೆ ಖಂಡಿತಾ ಆ ಕೆಲಸವೇ ಬೇಡ ಬಿಡಿ’ ಎಂದು ಆತಂಕದಿಂದ ಅಂದವರು, ‘ಓ ನಾಗದೇವನೇ…! ನಮ್ಮ ತಪ್ಪನ್ನು ಕ್ಷಮಿಸಿಬಿಡಪ್ಪಾ…!’ ಎಂದು ಬಹಳ ನೊಂದವರಂತೆ ಪ್ರಾರ್ಥಿಸಿಕೊಂಡವರು ಬಳಿಕ, ‘ಏನೋ ನಮ್ಮ ಹಿರಿಯರ ನಂಬಿಕೆ ಆಚರಣೆಗಳಿಗೂ ಮತ್ತು ಈಗಿನ ಜನರಿಗೂ ಒಂದಿಷ್ಟು ಒಳ್ಳೆಯದಾಗಲಿ ಅಂತಲೇ ನಾವು ಹಾಗೆಲ್ಲ ಯೋಚಿಸಿದೆವೆಯೇ ಹೊರತು ಬೇರೆ ಯಾವ ದುರುದ್ದೇಶವೂ ನಮ್ಮಲ್ಲಿಲ್ಲ ರೋಹಿತರೇ. ಆದರೂ ನಿಮಗೆ ನಮ್ಮಿಂದ ನೋವಾಗಿದೆ. ಅದಕ್ಕಾಗಿ ದಯವಿಟ್ಟು ಕ್ಷಮಿಸಬೇಕು. ಈ ವಿಚಾರವನ್ನು ಇಲ್ಲಿಗೇ ಬಿಟ್ಟುಬಿಡುವ!’ ಎಂದು ಚಿಂತೆಯಿಂದ ಹೇಳಿದವರು, ‘ನಮಸ್ಕಾರ ನಾವಿನ್ನು ಹೊರಡುತ್ತೇವೆ. ಆದರೂ ನಮ್ಮ ಸ್ನೇಹ ಇನ್ನು ಮುಂದೆಯೂ ಹೀಗೆಯೇ ಇರಬೇಕೆಂದು ನಮ್ಮಾಸೆ. ಮುಂದೆ ನಮ್ಮಿಂದ ಯಾವ ಸಹಾಯ ಬೇಕಿದ್ದರೂ ಸಂಕೋಚಪಡದೆ ತಿಳಿಸುತ್ತಿರಿ. ನಾವು ಸದಾ ನಿಮ್ಮೊಂದಿಗಿದ್ದೇವೆ!’ ಎಂದು ಹೇಳಿ ಒತ್ತಾಯಪೂರ್ವಕ ನಕ್ಕು ಹೊರಡಲನುವಾದರು. ಅಷ್ಟರಲ್ಲಿ ರೋಹಿತನಿಗೇನೋ ನೆನಪಾಯಿತು. ‘ಹ್ಞಾಂ, ಸ್ವಲ್ಪ ಇರಿ ಸರ್. ಈಗ ಬಂದೆ…’ ಎಂದವನು ಒಳಗೆ ಹೋಗಿ ಮೂರು ಸಾವಿರ ರೂಪಾಯಿಗಳನ್ನು ತಂದು ಅವರ ಕೈಗಿತ್ತು, ‘ಇದು ನಿಮ್ಮ ಹಣ. ಇದರ ಅವಶ್ಯಕತೆ ನನಗೆ ಬೀಳಲಿಲ್ಲ!’ ಎಂದು ಅವರಿಗೆ ಕೊಟ್ಟು, ‘ನಮಸ್ಕಾರ ಹೋಗಿಬನ್ನಿ…!’ ಎಂದು ಕೈಮುಗಿದ. ಅದನ್ನು ತೆಗೆದುಕೊಂಡ ಗುರೂಜಿಯವರು ಅವನನ್ನೊಮ್ಮೆ ಬೇಸರದಿಂದ ದಿಟ್ಟಿಸಿ ಸರಸರನೇ ಹೊರಟು ಹೋದರು. ಆಗ ರೋಹಿತನೂ ವಿಷಾದದಿಂದ ಒಳಗೆ ನಡೆದ.                                                                               * ರೋಹಿತ್ನ ಸಹಾಯದಿಂದ ಮಸಣದಗುಡ್ಡೆಯ ಜೀರ್ಣೋದ್ಧಾರವನ್ನು ಊರ ಸಮಸ್ತರು ವಿಸ್ಮಯಪಡುವ ರೀತಿಯಿಂದ ಮಾಡಬೇಕೆಂದುಕೊಂಡಿದ್ದ ಗುರೂಜಿಯವರ ಉಪಾಯ ವ್ಯರ್ಥವಾಯಿತು. ಆದರೂ ಅವರು ಧೃತಿಗೆಡಲಿಲ್ಲ. ಅದಕ್ಕೆ ಬದಲಾಗಿ ಅವರ ಯೋಚನೆ ಹೀಗೆ ಹರಿಯಿತು: ಯಾವುದೇ ವ್ಯಕ್ತಿಯೊಬ್ಬ ತನ್ನ ಜೀವನದಲ್ಲಿ ಮೇಲೇರಲು ಹೊರಟನೆಂದರೆ ಅವನ ವಿರುದ್ಧ ಅನೇಕ ಶತ್ರುಗಳು ಸೃಷ್ಟಿಯಾಗಿ ಅವನ ಕಾಲೆಳೆಯಲು ಪ್ರಯತ್ನಿಸುವುದು ಸಾಮಾನ್ಯ ಸಂಗತಿ. ಆದ್ದರಿಂದ ರೋಹಿತನೂ ಒಂದು ವೇಳೆ ತಮ್ಮ ಬಗ್ಗೆ ಅಪಪ್ರಚಾರ ಮಾಡಲು ಹೊರಟನೆಂದರೆ ಅವನನ್ನೂ ತಮ್ಮ ಶತ್ರುಗಳ ಪಟ್ಟಿಯಲ್ಲಿ ಸೇರಿಸಿ ತಾವೂ ಅವನ ತೇಜೋವಧೆಯನ್ನು ಮಾಡತೊಡಗಿದರಾಯ್ತು! ಎಂದು ನಿರ್ಧರಿಸಿ ಧೈರ್ಯ ತಂದುಕೊಂಡರು. ಇದಾದ ಮುಂದಿನ ತಿಂಗಳಲ್ಲಿ ಮಸಣದಗುಡ್ಡೆಯ ನಾಗಬನದ ನೂರಾರು ವರ್ಷಗಳಷ್ಟು ಪುರಾತನವಾದ ಹೆಮ್ಮರಗಳನ್ನು ನಿಷ್ಕರುಣೆಯಿಂದ ಕಡಿದುರುಳಿಸಿ ಆ ಜಾಗವನ್ನು ಸಮತಟ್ಟುಗೊಳಿಸಿ ಭವ್ಯವಾದ ನಾಗಭವನವನ್ನು ನಿರ್ಮಿಸಿ ಅದ್ಧೂರಿಯಿಂದ ಜೀರ್ಣೋದ್ಧಾರ ಕಾರ್ಯವನ್ನೂ ಮಾಡಿ ಮುಗಿಸಿದವರು ಆ ನಾಗಕ್ಷೇತ್ರಕ್ಕೂ ತಾವೇ ಅರ್ಚಕರು ಮತ್ತು ಮೇಲ್ವಿಚಾರಕರೂ ಆಗಿ ಅಧಿಕಾರವಹಿಸಿಕೊಂಡರು. ಪ್ರವೀಣ ಆ ಕ್ಷೇತ್ರದ ಕಜಾಂಚಿಯಾಗಿ ಮತ್ತು ಶಂಕರ ಕಾರ್ಯದರ್ಶಿಯಾಗಿ ಧಾರ್ಮಿಕ ಹುದ್ದೆಗಳನ್ನಲಂಕರಿಸಿದರು. ಆ ನಾಗಭವನವು ಪೇಟೆಗೆ ಸಮೀಪವಿದ್ದುದರಿಂದಲೂ ಮತ್ತದರ ಆಸುಪಾಸು ಸಾವಿರಾರು ನಿರಾಶ್ರಿತರೂ ಮಧ್ಯಮವರ್ಗದವರೂ ಹಾಗೂ ಬಹಳಷ್ಟು ಶ್ರೀಮಂತರೂ ವಾಸಿಸುತ್ತಿದ್ದುದರಿಂದಲೂ ಗುರೂಜಿಯವರು ಆ ನಾಗಮಂದಿರದಲ್ಲಿ ಪ್ರತಿನಿತ್ಯವೂ ಪೂಜಾ ಕೈಂಕರ್ಯಗಳನ್ನು ನಡೆಸತೊಡಗಿದರು. ಆದ್ದರಿಂದ ಈಗ ಅವರ ಕೈಯಲ್ಲಿ ಎರಡು ಬೃಹತ್ ನಾಗಬನಗಳ ಅಧಿಕಾರ ಮತ್ತು ಜವಾಬ್ದಾರಿ ಇತ್ತು. ಅದರಿಂದ ಅವರ ವರಮಾನವೂ ವೃದ್ಧಿಸತೊಡಗಿತು.  ಆ ಬಗ್ಗೆಯೇ ಸಂತೋಷ, ನೆಮ್ಮದಿಯಿಂದ ತೇಲಾಡಿದ ಗುರೂಜಿಯವರು ಮಸಣದಗುಡ್ಡೆಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪ್ರವೀಣನನ್ನೂ

Read Post »

ಇತರೆ

ಮಾತಾಗುವ ಮೌನ ಮತ್ತು ಮೌನದೊಳಗಣ ಮಾತು

ವೇದಿಕೆಯಲ್ಲಿದ್ದ ಮತ್ತೊಬ್ಬ ಮುಖಂಡ ಮೌನವಾಗಿ ಗಲ್ಲದ ಮೇಲೆ ಕೈಯ್ಯಿಟ್ಟು ಕುಳಿತಿದ್ದ. ತನ್ನ ವಿರುದ್ಧ ಬಂದ ಅಭಿಪ್ರಾಯಗಳನ್ನು ಆತ ಮನಸ್ಸಿಗೆ ಹಚ್ಚಿಕೊಂಡಂತೆ ಕಾಣಿಸಲೇ ಇಲ್ಲ. ಆತನ ಮೌನಪರ್ವತವನ್ನು ಮೀರುವುದು ತಮ್ಮಿಂದಾಗದ ಕೆಲಸ ಎಂದುಕೊಂಡ ಭಿನ್ನಾಭಿಪ್ರಾಯಿಗಳು ಆತನನ್ನು ಕೆಣಕುವುದಕ್ಕೆ ಹೋಗಲೇ ಇಲ್ಲ.

ಮಾತಾಗುವ ಮೌನ ಮತ್ತು ಮೌನದೊಳಗಣ ಮಾತು Read Post »

ಇತರೆ, ದಾರಾವಾಹಿ

ಧಾರಾವಾಹಿ ಆವರ್ತನ ಅದ್ಯಾಯ-34                                ಆವರ್ತನ ಅಧ್ಯಾಯ: 34 ಗುರೂಜಿಯವರು ತಾವು ಮಸಣದ ಗುಡ್ಡೆಯ ನಾಗಬನವನ್ನು ಜೀರ್ಣೋದ್ಧಾರಗೊಳಿಸಲು ಇಚ್ಛಿಸಿದ ಕಾರ್ಯಕ್ಕೆ ಸಂಬಂಧ ಪಟ್ಟ ಹೊಸ ವಿಚಾರವೊಂದನ್ನು ಇತ್ಯಾರ್ಥಗೊಳಿಸಲು ಮನಸ್ಸು ಮಾಡಿ ಫೋನೆತ್ತಿಕೊಂಡವರು, ‘ಓಂ ನಾಗಾಯ ನಮಃ…!’ ಎಂದು ಭಾವಪೂರ್ಣವಾಗಿ ಅಂದು, ‘ನಮಸ್ಕಾರ ರೋಹಿತ್ ಅವರೇ… ನಾವು ಏಕನಾಥ ಗುರೂಜಿಯವರು ಮಾತಾಡ್ತಿರೋದು ಹೇಗಿದ್ದೀರೀ ತಾವು…?’ ಎಂದು ವಿಚಾರಿಸಿದರು. ರೋಹಿತ್ ಈಶ್ವರಪುರದ ಒಬ್ಬ ಪ್ರಸಿದ್ಧ ಉರಗಪ್ರೇಮಿ. ಅವನು ತನ್ನ ನಾಡಿನ ಅಪೂರ್ವ ಉರಗಸಂತತಿಯನ್ನು ಸಂರಕ್ಷಣೆ ಮಾಡುತ್ತ ಬಂದವನಲ್ಲದೇ ಆ ಸರೀಸೃಪ ಜೀವವರ್ಗಗಳಿಂದ ಪ್ರಕೃತಿಗೂ ಮತ್ತು ಮುಖ್ಯವಾಗಿ ಮಾನವ ಪರಿಸರಕ್ಕೂ ದೊರಕುತ್ತಿರುವಂಥ ವಿವಿಧ ರೂಪದ ಉಪಕಾರಗಳು ಹಾಗೂ ನಿಸರ್ಗದಲ್ಲಿ ಆ ಜೀವರಾಶಿಗಳ ಪಾತ್ರ ಮತ್ತು ಮಹತ್ವಗಳು ಯಾವ ಬಗೆಯವು ಎಂಬಂಥ ಹತ್ತು ಹಲವು ವಿಚಾರಗಳ ಕುರಿತು ಅನೇಕ ವರ್ಷಗಳಿಂದ ಅಧ್ಯಯನ ಮಾಡುತ್ತ ಬಂದವನು. ಜೊತೆಗೆ ಒಂದಷ್ಟು ಜನರ ಪ್ರಕೃತಿ ವಿರೋಧಿ ಚಟುವಟಿಕೆ ಮತ್ತು ಜೀವನಕ್ರಮಗಳಿಂದ ಆಗಾಗ ಘಾಸಿಗೊಳ್ಳುವ ವಿವಿಧ ಜಾತಿಯ ಹಾವುಗಳನ್ನು ತಂದು ಶುಶ್ರೂಷೆ ನೀಡುವ ಸೇವೆಯಲ್ಲೂ ಸಾರ್ಥಕತೆಯನ್ನು ಕಾಣುತ್ತಿರುವವನು. ಅಷ್ಟಲ್ಲದೇ ಹಾವುಗಳು ಮತ್ತವುಗಳ ಮೇಲಿನ ಜನರ ನಂಬಿಕೆಗಳು ಹಾಗೂ ವಿಶೇಷತೆಗಳ ಕುರಿತು ಪತ್ರಿಕೆಗಳಿಗೂ ನಿರಂತರ ಬರೆಯುತ್ತ ಜನಜಾಗ್ರತಿ ಮೂಡಿಸುತ್ತ ಬರುತ್ತಿರುವವನು.ಹೀಗಾಗಿ ಅವನಿಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿ, ಪುರಸ್ಕಾರಗಳು ಮತ್ತು ಜನರ ಪ್ರೀತಿ, ಬೆಂಬಲಗಳೂ ಸಹಜವಾಗಿಯೇ ಒಲಿದು ಬಂದಿದ್ದವು.ಗುರೂಜಿಯವರಿಗೆ ರೋಹಿತ್‍ನ ಈ ಎಲ್ಲ ಕಾರ್ಯ ಚಟುವಟಿಕೆಗಳ ಕುರಿತು ಚೆನ್ನಾಗಿ ತಿಳಿದಿತ್ತು.ಹಾಗಾಗಿ ಅವರಿಂದು ಅವನನ್ನು ಪರಿಚಯಿಸಿಕೊಳ್ಳಲಿಚ್ಛಿಸಿ ಶಂಕರನಿಂದ ಫೋನ್ ನಂಬರ್ ಪಡೆದುಕೊಂಡು ಕರೆ ಮಾಡಿದ್ದರು.ಅತ್ತಲಿಂದ ರೋಹಿತನೂ ಕರೆ ಸ್ವೀಕರಿಸಿದ. ಅವನಿಗೂ ಗುರೂಜಿಯವರ ಕುರಿತು ತಿಳಿದಿತ್ತು.ಹಾಗಾಗಿ ಅವರೊಡನೆ ಮಾತಾಡುವ ಆಸಕ್ತಿ ಉಂಟಾಗದಿದ್ದರೂ ಶಿಷ್ಟಾಚಾರಕ್ಕೆ, ‘ನಮಸ್ಕಾರ ಸರ್ ಹೇಳಿ…?’ ಎಂದ. ‘ಏನಿಲ್ಲ ರೋಹಿತರೇ, ನಿಮ್ಮ ಬಗ್ಗೆ ಬಹಳಷ್ಟು ಕೇಳಿದ್ದೇವೆ ಮತ್ತು ಓದಿದ್ದೇವೆ.ಪ್ರಕೃತಿಗೂ ನಾಗಸಂತತಿಗೂ ನೀವು ಮಾಡುತ್ತಿರುವ ಸೇವೆ ನಿಜಕ್ಕೂ ಶ್ರೇಷ್ಠವಾದದ್ದು.ಆ ಸುಬ್ರಹ್ಮಣ್ಯ ಮತ್ತು ಆದಿಶೇಷರ ಆಶೀರ್ವಾದಗಳು ಸದಾ ನಿಮ್ಮ ಮೇಲಿರುತ್ತವೆ.ಹಾಗಾಗಿಯೇ ನೀವಿಂದು ನಮ್ಮ ರಾಜ್ಯದ್ಯಂತ ಪ್ರಸಿದ್ಧಿ ಪಡೆದಿದ್ದೀರಿ…!’ ಎಂದು ಹೊಗಳಿದರು. ರೋಹಿತ್‍ಗೆ ಮುಜುಗರವಾಯಿತು.‘ಹಾಗೇನಿಲ್ಲ ಸರ್.ನಾನೂ ಎಲ್ಲರಂತೆಯೇ ಬದುಕುತ್ತಿರುವವನು.ಆದರೆ ಜೀವನವೆಂದ ಮೇಲೆ ಅದಕ್ಕೊಂದು ಚಟುವಟಿಕೆ ಮತ್ತು ಅರ್ಥವಿರಬೇಕೆಂದು ಅನ್ನಿಸಿದ್ದರಿಂದ ಈ ಹವ್ಯಾಸಕ್ಕೆ ಅಂಟಿಕೊಂಡೆ.ನೀವು ಹೇಳಿದಂತೆ ನನ್ನ ಕಾಯಕಕ್ಕೆ ದೇವರ ಆಶೀರ್ವಾದವೂ ದೊರಕಿರುವುದು ನನ್ನ ಪುಣ್ಯ. ಹ್ಞಾಂ! ಹಾಗಂತ ನನ್ನದೇನೂ ನಿಸ್ವಾರ್ಥ ಸೇವೆಯಲ್ಲ ಸರ್.ನನ್ನ ಕುಟುಂಬ ನಿರ್ವಹಣೆಗೆ ಅದೆಷ್ಟು ಬೇಕೋ ಅಷ್ಟನ್ನು ನನ್ನ ಹವ್ಯಾಸವೇ ಒದಗಿಸುತ್ತಿದೆ.ನಿಮ್ಮ ಹಾರೈಕೆಗೆ ಥ್ಯಾಂಕ್ಸ್!’ ಎಂದ. ‘ಅರೆರೇ, ಹಾಗಲ್ಲ ರೋಹಿತರೇ…! ನಿಮ್ಮ ಹವ್ಯಾಸವನ್ನು ನೀವು ಅಷ್ಟೊಂದು ಹಗುರವಾಗಿ ಭಾವಿಸಬೇಡಿ ಮತ್ತು ನಿಮ್ಮ ಕಾರ್ಯಕ್ಷೇತ್ರ ನಿಮ್ಮದೇ ಆಯ್ಕೆ ಎಂದು ಕೂಡಾ ತಿಳಿಯಬೇಡಿ. ಅದೆಲ್ಲ ನೀವು ನಿಮ್ಮ ಪೂರ್ವಜನ್ಮದಲ್ಲಿ ಮಾಡಿದ ಸತ್ಕಾರ್ಯದ ಫಲವೇ ಸರಿ! ಆದ್ದರಿಂದಲೇ ನಿಮ್ಮ ಸೇವೆಯನ್ನು ಎಲ್ಲರೂ ಹೊಗಳುವಂತಾಗಿರುವುದು! ಅಲ್ಲದೇ ಇನ್ನೊಂದು ಮಾತನ್ನೂ ಹೇಳುತ್ತೇವೆ ಕೇಳಿ. ಹಾವು ಹಿಡಿಯುವವರು ಬೇಕಾದಷ್ಟು ಜನ ಸಿಗುತ್ತಾರೆ ರೋಹಿತರೇ! ಆದರೆ ನಿಮ್ಮಂತೆ ಆ ಜೀವಿಗಳ ಮೇಲೆ ನಿಜವಾದ ಪೀತಿ ಮತ್ತು ಕಾಳಜಿಯಿಟ್ಟುಕೊಂಡು ಅವುಗಳೊಂದಿಗೇ ಬದುಕುವುದಿದೆಯಲ್ಲ ಅದು ಎಲ್ಲರಿಂದಲೂ ಸಾಧ್ಯವಾಗುವಂಥದ್ದಲ್ಲ. ಅದಕ್ಕೆ ಭಾರಿ ಧೈರ್ಯವೂ ಸಾಹಸವೂ ಬೇಕಾಗುತ್ತದೆ. ಅದೆಲ್ಲ ನಿಮ್ಮಲ್ಲಿದೆ.ಹಾವುಗಳ ಕುರಿತು ನೀವು ಜನರಲ್ಲಿರುವ ಅಜ್ಞಾನವನ್ನು ನಿವಾರಿಸುವಂಥ ಉಪನ್ಯಾಸಗಳನ್ನೂ ನೀಡುತ್ತಿರುವುದನ್ನು ಗಮನಿಸುತ್ತಿದ್ದೇವೆ.ಹಾಗಾಗಿಯೇ ಇವತ್ತು ನಿಮ್ಮೊಂದಿಗೆ ಮಾತಾಡಲು ನಮಗೆ ಮನಸ್ಸಾದುದು.ನಾವು ನಿಮ್ಮನ್ನು ಹೊಗಳಿದೆವು ಅಂತ ದಯವಿಟ್ಟು ಭಾವಿಸಬೇಡಿ!’ ಎಂದು ಗುರೂಜಿಯವರು ಅವನ ಮನಸ್ಸಿಗೆ ನಾಟುವಂತೆಯೂ ಮತ್ತು ತಮ್ಮ ಬಗ್ಗೆ ಅವನಲ್ಲಿ ಸದಾಭಿಪ್ರಾಯ ಮೂಡುವಂತೆಯೂ ಮಾತಾಡಿದರು. ಆದರೆ ಅವನ ಹವ್ಯಾಸ ಹಾಗೂ ಆ ಕುರಿತು ಅವನ ಜ್ಞಾನವನ್ನು ತಿಳಿದಿದ್ದ ಊರಿನ ಬಹುತೇಕರು ಒಂದಲ್ಲ ಒಂದು ಸಂದರ್ಭದಲ್ಲಿ ಅವನನ್ನು ಇದೇ ರೀತಿ ಪ್ರಶಂಸಿಸುತ್ತ ಬರುತ್ತಿದ್ದುದರಿಂದ ಇಂದು ಗುರೂಜಿಯವರ ಮಾತಿನಿಂದ ಅವನಿಗೆ ಖುಷಿಯೊಂದಿಗೆ ಅತೀವ ಸಂಕೋಚವೂ ಮೂಡಿತು. ‘ಎಲ್ಲಾ ತಮ್ಮಂಥವರ ಆಶೀರ್ವಾದ ಸರ್…!’ ಎಂದಷ್ಟೇ ಹೇಳಿ ಸುಮ್ಮನಾದ. ‘ನಮ್ಮ ಆಶೀರ್ವಾದ ಮತ್ತು ಹಾರೈಕೆಗಳು ಸದಾ ನಿಮ್ಮೊಂದಿಗೆ ಇರುತ್ತವೆ ರೋಹಿತರೇ.ಯಾಕೆಂದರೆ ನಾವು ಕೂಡಾ ನಿಮ್ಮ ಹಾಗೆಯೇ ಬೇರೊಂದು ರೀತಿಯಲ್ಲಿ ನಾಗನ ಸೇವೆ ಮಾಡುತ್ತ ಬರುತ್ತಿರುವವರು.ಆ ಸೇವೆಯಲ್ಲಿ ಸಿಗುವ ಒಂದು ಸಣ್ಣ ಮೊತ್ತವನ್ನು ನಿಮ್ಮಂಥವರ ಸತ್ಕಾರ್ಯಕ್ಕೂ ವಿನಿಯೋಗಿಸಬೇಕೆಂಬುದು ನಮ್ಮ ಬಹಳ ದಿನದ ಆಸೆಯಾಗಿತ್ತು.ಹಾಗಾಗಿ ನಿಮ್ಮನ್ನೊಮ್ಮೆ ಭೇಟಿಯಾಗಬೇಕು.ಅದಕ್ಕೆ ಯಾವಾಗ ಬರಬಹುದು ನಾವು…?’ ಎಂದರು ಆತ್ಮೀಯವಾಗಿ.ಆದರೆ ಅಷ್ಟು ಕೇಳಿದ ರೋಹಿತ್‍ನಿಗೆ ಪೇಚಾಟಕ್ಕಿಟ್ಟುಕೊಂಡಿತು. ಆದರೂ ಸಂಭಾಳಿಸಿಕೊಂಡವನು, ‘ಅಯ್ಯೋ ಸರ್ ತಾವು ಯಾವತ್ತು ಬೇಕಿದ್ದರೂ ಬರಬಹುದು.ಆದರೆ ನನಗೀಗ ಹಣದ ಅವಶ್ಯಕತೆಯಿಲ್ಲ. ಆ ವಿಷಯದಲ್ಲಿ ದಯವಿಟ್ಟು ಕ್ಷಮಿಸಬೇಕು!’ ಎಂದು ನಯವಾಗಿ ನಿರಾಕರಿಸಿದ. ಅದರಿಂದ ಗುರೂಜಿ ತುಸು ನಿರಾಶರಾದರು.ಆದರೂ ಪ್ರಯತ್ನ ಬಿಡದೆ, ‘ಸರಿ ರೋಹಿತರೇ, ನೀವು ಬಹಳ ಸ್ವಾಭಿಮಾನಿ ಅಂಥ ತಿಳಿಯುತ್ತದೆ.ಹಾಗಾಗಿಯೂ ನಿಮ್ಮನ್ನು ಆದಷ್ಟು ಬೇಗ ಭೇಟಿಯಾಗಲು ಬಯಸುತ್ತೇವೆ.ನಾಳೆ ಬಂದರೆ ಹೇಗೆ…?’ ಎಂದು ಅಮಾಯಕರಂತೆ ಪ್ರಶ್ನಿಸಿದರು. ‘ಖಂಡಿತವಾಗಿಯೂ ಬನ್ನಿ ಸರ್..!’ ಎಂದ ರೋಹಿತ್. ಗುರೂಜಿಯವರು ಮರುದಿನ ಮುಂಜಾನೆ ರೋಹಿತ್‍ಗೆ ಕರೆ ಮಾಡಿ ತಾವು ಹೊರಟಿರುವುದನ್ನು ತಿಳಿಸಿದರು.ಯಾವುದಕ್ಕೂ ಘನತೆಗಿರಲಿ ಎಂದುಕೊಂಡು ಒಬ್ಬ ಸಹಾಯಕನನ್ನೂ ಕರೆದುಕೊಂಡು ದೊಡ್ಡ ಟ್ಯಾಕ್ಸಿಯೊಂದರಲ್ಲಿ ರೋಹಿತ್‍ನ ಮನೆಗೆ ಹೋದರು. ಗುರೂಜಿಯವರ ವೇಷ ಭೂಷಣವನ್ನೂ, ಮತ್ತವರ ಎದೆಯ ಮೇಲೆ ತೂಗಾಡುತ್ತಿದ್ದ ವಿವಿಧ ದೇವತಾ ಮೂರ್ತಿಗಳಿದ್ದ ಅನೇಕ ಮಾಲೆಗಳನ್ನೂ ಕಂಡ ರೋಹಿತ್ ಕಸಿವಿಸಿಯಾಗಿಬಿಟ್ಟ. ಆದರೂ ತನ್ನ ಪುಟ್ಟ ಮನೆಗೆ ಅವರನ್ನು ಆದರದಿಂದ ಸ್ವಾಗತಿಸಿದ. ಅಂಗಳದಲ್ಲಿಯೇ ಕುರ್ಚಿಗಳನ್ನು ಹಾಕಿ ಅವರನ್ನು ಕುಳ್ಳಿರಿಸಿ ಕುಶಲೋಪರಿ ವಿಚಾರಿಸಿದ. ಗುರೂಜಿಯವರು ಸರಳ ಸಜ್ಜನಿಕೆಯ ಮೂರ್ತಿಯಂತೆ ಅವನೆದುರು ಕುಳಿತು ಮಾತಿಗಿಳಿದರು. ಅವನ ಸಾಧನೆ ಮತ್ತು ಪರಿಶ್ರಮವನ್ನು ಮರಳಿ ಪದೇಪದೇ ಹೊಗಳುತ್ತ ಒಲಿಸಿಕೊಳ್ಳಲು ಪ್ರಯತ್ನಿಸಿದರು.ಅದರಿಂದ ಅವನಿಗೂ ತಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡಿದಂತೆ ಅವರಿಗನ್ನಿಸಿತು.ಹಾಗಾಗಿ ಸುಮಾರು ಹೊತ್ತಿನ ಮಾತುಕತೆಯ ನಂತರ ತಾವು ಬಂದ ವಿಷಯದತ್ತ ಗಮನ ಹರಿಸಿದವರು ತಮ್ಮ ಸಹಾಯಕನಿಗೇನೋ ಸಜ್ಞೆ ಮಾಡಿದರು. ಅವನು ಕೂಡಲೇ ಕಾರಿನತ್ತ ಓಡಿಹೋಗಿ ಒಂದು ದೊಡ್ಡ ಚೀಲವನ್ನು ಹೊತ್ತು ತಂದ. ಅದರೊಳಗಿದ್ದ ಹಿತ್ತಾಳೆಯ ಹರಿವಾಣವನ್ನು ತೆಗೆದಿರಿಸಿದ. ಸೇಬು ಚಿಕ್ಕು ಮೋಸಂಬಿ ಮತ್ತು ಬಾಳೆಹಣ್ಣುಗಳನ್ನು ಆ ಹರಿವಾಣದಲ್ಲಿ ಓಪ್ಪವಾಗಿ ಜೋಡಿಸಿದ. ಗಂಧದ (ಅಕೇಶಿಯಾ ಮರದ ಕೀಸುಳಿಯಿಂದ ತಯಾರಿಸಿ, ತುಸು ಗಂಧದ ಪರಿಮಳವನ್ನು ಅದಕ್ಕೆ ಸಿಂಪಡಿಸಿ ಶ್ರೀಗಂಧದ ಹಾರವೆಂದು ಮಾರಾಟ ಮಾಡುವ ಮಾಲೆ!) ಹಾರವನ್ನೂ ರೇಶ್ಮೆಯ ಶಾಲನ್ನೂ ತೆಗೆದು ಗುರೂಜಿಯವರ ಕೈಗಿತ್ತ. ಆಗ ರೋಹಿತ್‍ಗೆ, ಗುರೂಜಿಯವರು ಸಾಧಕರ ಮನೆ ಬಾಗಿಲಿಗೇ ಬಂದು ಅವರನ್ನು ಸನ್ಮಾನಿಸುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂಬುದು ಮನವರಿಕೆಯಾಯಿತು. ಅವನು ಸಂಕೋಚದಿಂದ ಹಿಡಿಯಾದ. ಆದರೂ ತನ್ನ ಒಳಮನಸ್ಸು ಆನಂದದಿಂದ ಅರಳಿದ್ದನ್ನೂ ಗಮನಿಸಿದ. ಜೊತೆಗೆ ಈ ಗುರೂಜಿಯವರ ಸನ್ಮಾನವನ್ನು ಸ್ವೀಕರಿಸಬೇಕೋ, ಬಿಡಬೇಕೋ ಎಂಬ ಗೊಂದಲಕ್ಕೂ ಬಿದ್ದ. ಆದರೆ ಅವನ ಯಾವ ಯೋಚನೆಗಳಿಗೂ ಆಸ್ಪದವಿಲ್ಲದಂತೆ ಗುರೂಜಿಯವರು ತಟ್ಟನೆ ಎದ್ದು ನಿಂತರು. ನಗುತ್ತ ಅವನ ಕೊರಳಿಗೆ ಗಂಧದ ಮಾಲೆ ತೊಡಿಸಿ ಫಲಪುಷ್ಪಾದಿಗಳು ತುಂಬಿದ ಹರಿವಾಣವನ್ನು ಅವನ ಮಡಿಲಲ್ಲಿಟ್ಟು ಪ್ರಶಸ್ತಿ ಫಲಕದ ಬದಲಾಗಿ ಕಾವಿ ಬಟ್ಟೆಯ ಸಣ್ಣದೊಂದು ಗಂಟನ್ನು ಅವನ ಕೈಯಲ್ಲಿಟ್ಟು ಪುರಸ್ಕರಿಸಿದರು. ಗುರೂಜಿಯವರ ಅಭಿಮಾನಕ್ಕೆ ರೋಹಿತ್ ತುಸುಹೊತ್ತು ಮೂಕನಾದ. ಅವರ ಪಾದಗಳೆದುರು ಡೊಗ್ಗಾಲು ಬಿದ್ದು ನಮಸ್ಕರಿಸಿದ. ಗುರೂಜಿಯವರು ಅವನ ಹಿಂತಲೆಗೆ ಹಸ್ತಗಳನ್ನಿಟ್ಟು, ‘ನೂರು ಕಾಲ ಸಮಾಜಸೇವೆ ಮಾಡುತ್ತ ಪ್ರಸಿದ್ಧಿವಂತನಾಗಿ ಬಾಳು!’ ಎಂದು ಹರಸಿದರು. ತಮ್ಮ ಮನೆಗೆ ಧಾರ್ಮಿಕ ಗುರುಗಳೊಬ್ಬರು ಬಂದು ಕುಳಿತುಕೊಂಡು ತಮ್ಮೊಡನೆ ಪ್ರೀತಿಯಿಂದ ಮಾತನಾಡಿದ್ದು ರೋಹಿತ್‍ನ ತಾಯಿಗೆ ಮಠದ ಶ್ರೀ ಸ್ವಾಮಿಗಳೇ ಆಗಮಿಸಿದಷ್ಟು ಆನಂದವಾಗಿದ್ದರೆ ಅವನ ಹೆಂಡತಿಗೂ ಗುರೂಜಿಯವರು, ‘ಪ್ರತಿಯೊಬ್ಬ ಸಾಧಕನ ಯಶಸ್ಸಿನ ಹಿಂದೆ ಅವನ ಹೆಂಡತಿಯ ಪಾತ್ರವೂ ಅಷ್ಟೇ ಮಹತ್ವದ್ದಾಗಿರುತ್ತದೆ!’ ಎಂಬ ಮಾತನ್ನು ಒತ್ತಿ ಹೇಳಿದ್ದು ಮತ್ತು ತಮ್ಮಿಬ್ಬರನ್ನೂ ಅವರು ಯದ್ವಾತದ್ವ ಹೊಗಳಿ ಅಟ್ಟಕೇರಿಸಿ ಆಶೀರ್ವದಿಸಿದ್ದೆಲ್ಲವೂ ಅವಳಿಗೆ ಹೇಳತೀರದಷ್ಟು ಖುಷಿಕೊಟ್ಟಿತ್ತು. ಹಾಗಾಗಿ ಅವರಿಬ್ಬರೂ ಮಕ್ಕಳೊಂದಿಗೆ ಗುರೂಜಿಯವರ ಪಾದಕ್ಕೆ ಸಾಷ್ಟಾಂಗ ಬಿದ್ದು ಎದ್ದವರು ಇವತ್ತಿಗೆ ತಮ್ಮ ಜನ್ಮ ಸಾರ್ಥಕವಾಯಿತು ಎಂದುಕೊಂಡು ರೋಮಾಂಚಿತರಾದರು.ಅವರನ್ನು ಮನದುಂಬಿ ಹರಸಿದ ಗುರೂಜಿಯವರು ತಮ್ಮ ಕೆಲಸವಾಗುತ್ತಲೇ ರೋಹಿತ್‍ನಿಂದ ಬೀಳ್ಗೊಂಡು ಹಿಂದಿರುಗಿದರು.ಅವರು ಹೋದ ಬಳಿಕ ರೋಹಿತ್ ಅವರು ನೀಡಿದ್ದ ಕಾವಿಯ ಗಂಟನ್ನು ಬಿಚ್ಚಿದ. ಅದರಲ್ಲಿ ಒಂದು ಕುಂಕುಮದ ಕಟ್ಟಿನೊಂದಿಗೆ ಹತ್ತು ರೂಪಾಯಿ ನೋಟಿನ ಮೂರು ಕಟ್ಟುಗಳಿದ್ದವು.ಅದನ್ನು ಕಂಡವನಿಗೆ ಹಿಂಸೆಯಾಯಿತು.ಆದರೆ ಅವನಿಗೆ ಹಣದ ಅವಶ್ಯಕತೆ ಇರಲಿಲ್ಲವೆಂದಲ್ಲ. ಹಾವುಗಳ ಶುಶ್ರೂಷೆಗೆ ಬೇಕಾಗುವ ವಿವಿಧ ಔಷಧಿ ಮತ್ತು ಅವನ್ನಿಟ್ಟುಕೊಳ್ಳುವ ಪಂಜರಗಳಿಗೆ ಸದಾ ದುಡ್ಡಿನ ಅಗತ್ಯ ಬೀಳುತ್ತಿತ್ತು. ಆದರೆ ಅದನ್ನು ಅವನು ಎಲ್ಲರಿಂದಲೂ ಸ್ವೀಕರಿಸುತ್ತಿರಲಿಲ್ಲ. ಮೂಕ ಜೀವರಾಶಿಗಳ ಮೇಲೆ ನಿಜವಾದ ಪ್ರೀತಿಯಿದ್ದು ಪ್ರಚಾರದ ಗೀಳಿಲ್ಲದಂಥ ಜನರು ಅವರಾಗಿ ಬಂದು ನೀಡಿದರೆ ಸ್ವೀಕರಿಸುತ್ತಿದ್ದ. ಆದರೂ ಇಂದು ಯಾಕೋ ಅವನಿಗೆ ಈ ಹಣವನ್ನು ಗುರೂಜಿಯವರಿಗೇ ಹಿಂದಿರುಗಿಸಬೇಕು ಎಂದೆನ್ನಿಸಿಬಿಟ್ಟಿತು. ಕೂಡಲೇ ಕರೆ ಮಾಡಿದ. ‘ಹಲೋ ಸರ್, ನಮಸ್ಕಾರ…!’ ಎಂದ. ‘ಓಂ ನಾಗಾಯ ನಮಃ ಹೇಳಿ ರೋಹಿತರೇ…?’ ಎಂದರು ಗುರೂಜಿ. ‘ಸರ್ ತಪ್ಪು ತಿಳಿದುಕೊಳ್ಬೇಡಿ.ತಾವು ನನ್ನ ಮನೆ ಬಾಗಿಲಿಗೇ ಬಂದು ನನ್ನನ್ನು ಗೌರವಿಸಿರುವುದರ ಕುರಿತು ಅಪಾರ ಅಭಿಮಾನವಿದೆ. ಆದರೆ ಅದರೊಂದಿಗೆ ತಾವು ಹಣವನ್ನೂ  ನೀಡಿರುವುದು ನನಗ್ಯಾಕೋ ಸರಿಬರುತ್ತಿಲ್ಲ. ದಯವಿಟ್ಟು ತಾವು ಅದನ್ನು ಹಿಂದೆ ಪಡೆಯಬೇಕು. ಈ ವಿಷಯದ ಕುರಿತು ನಾನು ನಿನ್ನೆಯೇ ತಮಗೆ ತಿಳಿಸಿದ್ದೆ!’ ಎಂದ ನಯವಾಗಿ.  ಅರೆರೇ, ಇವನೆಂಥ ಹುಚ್ಚನಪ್ಪಾ…? ಕಾಲಬುಡಕ್ಕ ಬಂದಂಥ ಲಕ್ಷ್ಮಿಯನ್ನು ದೂರತಳ್ಳುವ ಇವನಿಗೆ ಇನ್ನೂ ಬದುಕುವ ದಾರಿಯೇ ತಿಳಿದಿಲ್ಲ ಮೂರ್ಖನಿಗೆ!’ ಎಂದು ಮನಸ್ಸಿನಲ್ಲೇ ಬೈದುಕೊಂಡ ಗುರೂಜಿಯವರು, ‘ಅಯ್ಯಯ್ಯೋ ರೋಹಿತರೇ… ನಮ್ಮನ್ನು ತಪ್ಪು ತಿಳಿಯಬೇಡಿ! ನೀವು ತುಂಬಾ ಸ್ವಾಭಿಮಾನಿ ಅಂತ ಗೊತ್ತು.ಹಾಗಾಗಿ ಆ ಹಣವನ್ನು ನಾವು ನಿಮ್ಮ ಸ್ವಂತ ಖರ್ಚಿಗೆಂದು ಕೊಟ್ಟದ್ದಲ್ಲ. ನೀವು ಚಿಕಿತ್ಸೆ ಮಾಡುವ ನಾಗನ ಸಂತತಿಗೆ ನಮ್ಮಿಂದಲೂ ಸ್ವಲ್ಪ ಸಹಾಯವಾಗಲಿ ಅಂತ ಒಂದು ಸಣ್ಣ ಕಾಣಿಕೆಯಷ್ಟೆ.ನಮ್ಮ ಮೇಲೆ ಬೇಸರವಾಗಿದ್ದರೆ ಕ್ಷಮಿಸಿಬೇಕು!’ ಎಂದು ಕೃತಕ ನಮ್ರತೆಯಿಂದ ಮಾತಾಡಿದರು. ಆಗ ರೋಹಿತ್‍ನಿಗೆ ಏನು ಹೇಳಲೂ ತೋಚಲಿಲ್ಲ. ಆದ್ದರಿಂದ, ‘ಹಾಗಾದರೆ ಸರಿ ಸರ್.ನಿಮ್ಮಿಚ್ಛೆಯಂತೆಯೇ ಆಗಲಿ!’ ಎಂದು ಹೇಳಿ ಸುಮ್ಮನಾದ. ಜೊತೆಗೆ ಗುರೂಜಿಯವರ ಬಣ್ಣದ ಮಾತುಗಳಿಂದ ಅವನಿಗೆ ಅವರ ಮೇಲೆ ಅಭಿಮಾನವೂ ಹೆಚ್ಚಿತು.ಅಂದಿನಿಂದ ಸಮಯ ಸಿಕ್ಕಾಗಲೆಲ್ಲ ಗುರೂಜಿಯವರು ಅವನಿಗೆ ಕರೆ ಮಾಡಿ ಸ್ನೇಹದಿಂದ ಮಾತಾಡುತ್ತಿದ್ದವರು ಒಂದೆರಡು ಬಾರಿ, ‘ನಿಮ್ಮೂರಿನಾಚೆಯೇ ಬರುವುದಿತ್ತು.ಹಾಗೆ ನಿಮ್ಮನ್ನೂ ಮಾತಾಡಿಸಿಕೊಂಡು ಹೋಗುವ ಅಂತ ಮನಸ್ಸಾಯಿತು!’ ಎಂದು ಸುಳ್ಳು ಹೇಳಿ ಭೇಟಿ ಕೊಟ್ಟು ಅವನಿಗೆ ತಮ್ಮ ಮೇಲೆ ಇನ್ನಷ್ಟು ಪ್ರೀತ್ಯಾದರ ಮೂಡುವಂತೆ ವರ್ತಿಸತೊಡಗಿದರು.ಅದರಿಂದ ಅವನೂ ಅವರ ಮೇಲಿನ ಹಿಂದಿನ ಧೋರಣೆಯನ್ನು ತೊರೆದು ಆತ್ಮೀಯವಾಗಿ ಇರತೊಡಗಿದ. ಇತ್ತ ಮಸಣದಗುಡ್ಡೆಯ ನಾಗಭವನ ಜೀರ್ಣೋದ್ಧಾರದ ಸಮಯವೂ ಸಮೀಪಿಸುತ್ತಿತ್ತು.ಹಾಗಾಗಿ ಗುರೂಜಿಯವರು ಚುರುಕಾದರು.ಇನ್ನು ಸಮಯ ಕಳೆಯಬಾರದು.ರೋಹಿತನಿಗೆ ತಮ್ಮ ಮೇಲೆ ಸಂಪೂರ್ಣ ವಿಶ್ವಾಸ ಬಂದ ಹಾಗಿದೆ. ಕೂಡಲೇ ತಮ್ಮ ಕೆಲಸವನ್ನು ಸಾಧಿಸಬೇಕು! ಎಂದು ಯೋಚಿಸಿದವರು ಆವತ್ತೊಂದು ಮುಂಜಾನೆ ರೋಹಿತ್‍ನ ಮನೆಗೆ ದಿಢೀರ್ ಭೇಟಿಕೊಟ್ಟರು.ರೋಹಿತನೂ ಅವರನ್ನು ಆದರದಿಂದ ಮಾತಾಡಿಸಿದ. ಗುರೂಜಿಯವರು ಇವತ್ತು ಅವನೊಂದಿಗೆ ಹಿಂದೂ ಧರ್ಮ ಮತ್ತು ನಾಗಾರಾಧನೆ ಹಾಗೂ ಅದಕ್ಕೆ ಸಂಬಂಧಿಸಿದ ಹಲವು ನಂಬಿಕೆ, ಆಚರಣೆಗಳ ಕುರಿತು ತುಂಬಾ ಹೊತ್ತು ಚರ್ಚಿಸಿದರು. ಅವನೂ ಅವರ ವಿಚಾರಧಾರೆಯನ್ನು ಕೇಳುತ್ತಿದ್ದ ಹಾಗೂ ತನಗೆ ಸರಿ ಅನ್ನಿಸಿದ್ದರ ಕುರಿತು ಅಭಿಮಾನದಿಂದ ತಲೆದೂಗುತ್ತಿದ. ತಪ್ಪು

Read Post »

ಇತರೆ

ಹಿಂದಿ ಹೇರಿಕೆ ಹಿಂದಿರುವ ಭಾಷಾ ರಾಜಕಾರಣ

ಹಿಂದಿ ಹೇರಿಕೆಯ ಹಿಂದೆ ಭಾಷಾ ರಾಜಕಾರಣದ ನಂಟಿದೆ. ಒಟ್ಟಾರೆಯಾಗಿ ಒಂದೇ ಏಟಿಗೆ ಭಾರತದ ಮೂಲ ಭಾಷೆಗಳಾದ ಕನ್ನಡ, ತಮಿಳು, ತೆಲುಗು, ಮಲೆಯಾಳಿ ಹಾಗೂ ಮರಾಠಿ ಸೇರಿದಂತೆ ಅನೇಕ ಪ್ರಾದೇಶಿಕ ತಾಯ್ತನದ ಭಾಷೆಗಳನ್ನು ಮುಗಿಸುವ ಹುನ್ನಾರವಿದೆ.

ಹಿಂದಿ ಹೇರಿಕೆ ಹಿಂದಿರುವ ಭಾಷಾ ರಾಜಕಾರಣ Read Post »

ಇತರೆ, ಪ್ರಬಂಧ

ಸವಾಲ್

ಸವಾಲ್ ದಾರನು ಹಣವನ್ನು ಪಡೆದು ಜರಿ ಸೀರೆಯನ್ನು ಕುತೂಹಲ ನಿರೀಕ್ಷಿಯಲ್ಲಿರುವ, ಐದನೇ ಸೀಟಿನಲ್ಲಿರುವವನ ಪತ್ನಿಗೇ ನೇರವಾಗಿ ಕೊಟ್ಟನು. ಅವಳು ಆ ಸೀರೆಯನ್ನು ಮತ್ತೊಮ್ಮೆ ಬಿಚ್ಚಿ ಕೈಯಾಡಿಸಿ ನೋಡಿ ಸಂತಸಬಟ್ಟು ಮಡಚಿ ಪಕ್ಕದಲ್ಲಿಟ್ಟು ಕೊಂಡಳು.

ಸವಾಲ್ Read Post »

ಇತರೆ

ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಾದೇಶಿಕ ಪಕ್ಷಗಳು ಜನಾದೇಶ ಪಡೆದು ರಾಜ್ಯಗಳ ಹಿತ ಕಾಪಾಡುತ್ತಿರುವ ನಿದರ್ಶನಗಳು ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣದಲ್ಲಿವೆ. ಹಾಗೆ ನೋಡಿದರೆ ಕೆಲಮಟ್ಟಿಗೆ ಕೇರಳದ ಎಡಪಂಥೀಯ ಸರಕಾರವೂ ಪ್ರಾದೇಶಿಕ ನೆಲೆಗಟ್ಟಿನದೇ. ಕೇಂದ್ರ ಮತ್ತು ರಾಜ್ಯದ ನಡುವಿನ ಮಧುರ ಬಾಂಧವ್ಯದಷ್ಟೇ ಪ್ರಾದೇಶಿಕ ಹಿತಾಸಕ್ತಿಯ ಬಾಂಧವ್ಯ ಅಕ್ಷರಶಃ ಅಲ್ಲಗಳೆಯಲಾಗದು.

Read Post »

You cannot copy content of this page

Scroll to Top