ದಾರಾವಾಹಿ ಆವರ್ತನ ಅದ್ಯಾಯ-40 ಹೇಮಚಂದ್ರ ಗುರೂಜಿಯ ಕೋಣೆಯಿಂದ ಹೊರಗೆ ಬಂದ ಮೇಲೆ ಅಣ್ಣಪ್ಪ, ಸುಮಿತ್ರಮ್ಮ ಮತ್ತು ರಾಧಾಳನ್ನು ಒಳಗೆ ಕರೆದ. ಅಷ್ಟೊತ್ತಿಗೆ ಗುರೂಜಿಯವರು ಧ್ಯಾನ ಭಂಗಿಯಲ್ಲಿ ಕುಳಿತಿದ್ದವರು ಸುಮಿತ್ರಮ್ಮನನ್ನು ಕಂಡು ಎಚ್ಚೆತ್ತವರು, ‘ಬನ್ನಿ ಸುಮಿತ್ರಮ್ಮ ಇನ್ನೇನು ವಿಷಯ…?’ ಎಂದರು ನಗುತ್ತ. ‘ನಮಸ್ಕಾರ ಗುರೂಜಿ… ವಿಶೇಷ ಏನೂ ಇಲ್ಲ. ಆದರೆ ಹೊಸದೊಂದು ತಾಪತ್ರಯ ವಕ್ಕರಿಸಿದೆ. ಇವಳು ರಾಧಾ ಅಂತ. ನಮ್ಮ ನೆರೆಮನೆಯವಳು’ ಎಂದು ಪರಿಚಯಿಸಿದ ಸುಮಿತ್ರಮ್ಮ ರಾಧಾಳ ಗಂಡನ ಸಮಸ್ಯೆಯನ್ನೂ, ಅವನಿಗೆ ಬಿದ್ದ ಕನಸನ್ನೂ ಮತ್ತು ಮುಖ್ಯವಾಗಿ ತಮ್ಮ ಮನೆಗೆ ಬಂದಿದ್ದ ನಾಗರಹಾವು ಅದಕ್ಕೂ ಮುಂಚೆ ರಾಧಾಳ ಮನೆಯಂಗಳಕ್ಕೂ ಬಂದು ಹೋಗಿದ್ದನ್ನು ಆತಂಕದಿಂದ ವಿವರಿಸಿದರು. ಸುಮಿತ್ರಮ್ಮನ ಮಾತುಗಳನ್ನು ಕೇಳಿದ ಗುರೂಜಿಯ ಕವಡೆಗಳು ರಾಧಾಳ ಹಣೆ ಬರಹದೊಂದಿಗೂ ಆಟವಾಡಲು ಮುಂದಾಗಿ ನೀಡಿದ ಸುಳಿವಿನ ಮೇರೆಗೆ ಗುರೂಜಿಯವರು ಅವಳನ್ನೊಮ್ಮೆ ದೀರ್ಘವಾಗಿ ದಿಟ್ಟಿಸಿದವರು, ‘ನೋಡಮ್ಮಾ, ಸುಮಿತ್ರಮ್ಮ ನಿಮ್ಮ ವಠಾರಕ್ಕೆ ಸಂಬಂಧಿಸಿದ ನಾಗನ ಕುರಿತು ನಿನಗೆ ಎಲ್ಲ ವಿಷಯವನ್ನೂ ತಿಳಿಸಿರಬಹುದು. ಆದರೆ ನಾವೂ ಒಮ್ಮೆ ಹೇಳುತ್ತೇವೆ. ನಿನ್ನ ಮನೆಯ ಹತ್ತಿರ ಇರುವ ದೊಡ್ಡ ಹಾಡಿಯು ನಾಗ ಪರಿವಾರ ದೈವಗಳಿಗೆ ಸೇರಿದ ಸ್ಥಾನ. ಅದರ ಸುತ್ತಮುತ್ತ ಮಾಂಸಾಹಾರಿಗಳು ವಾಸಿಸುವುದು ನಿಷಿದ್ಧ. ಆದರೂ ನೀವು ಕುಳಿತಾಗಿದೆ. ತಿಳಿದೋ ತಿಳಿಯದೆಯೋ ಆ ವಠಾರದಲ್ಲಿ ಸಂಚರಿಸುವ ನಾಗನಿಗೂ ಅವನ ಪರಿವಾರಕ್ಕೂ ನಿಮ್ಮಿಂದ ಅಶುದ್ಧವಾಗಿಯೂ ಆಗಿದೆ. ಅದರಿಂದ ಅವನು ಕೋಪಗೊಂಡಿದ್ದಾನೆ. ಅದರ ಸೂಚನೆಯಾಗಿ ನಿನ್ನ ಗಂಡನ ಕನಸಿನಲ್ಲೂ ಮತ್ತು ಅವನ ಮೈಮೇಲೂ ನಾಗಧೂತನೇ ಕಾಣಿಸಿಕೊಂಡು ತೊಂದರೆ ಕೊಡುತ್ತಿರುವುದು ಇಲ್ಲಿ ಸ್ಪಷ್ಟವಾಗಿ ತೋರಿ ಬರುತ್ತಿದೆ!’ ಎಂದು ಆತಂಕದಿಂದ ಹೇಳಿದರು. ಅಷ್ಟು ಕೇಳಿದ ರಾಧಾ ಕಂಗಾಲಾದಳು. ಅವಳಿಗೆ ಅಳು ಉಕ್ಕಿ ಬಂತು. ‘ನಿಮ್ಮ ದಮ್ಮಯ್ಯ ಗುರೂಜೀ… ಹೇಗಾದರೂ ಮಾಡಿ ನನ್ನ ಗಂಡನನ್ನು ಉಳಿಸಿಕೊಡಿ…!’ ಎಂದು ಬೇಡಿಕೊಂಡಳು. ಆಗ ಅವಳ ಅಳುವಿಗೆ ತಾವೂ ಕನಿಕರಪಟ್ಟಂತೆ ಗುರೂಜಿಯವರ ಮುಖಭಾವವು ಬದಲಾಯಿತು. ‘ನೋಡಮ್ಮಾ ನಿನ್ನ ಕಷ್ಟ ನಮಗೂ ಅರ್ಥವಾಗುತ್ತದೆ. ಸದ್ಯಕ್ಕೆ ನಾಗನ ಕೋಪದಿಂದ ಪಾರಾಗಬೇಕಾದರೆ ನಿಮ್ಮ ಶಕ್ತ್ಯಾನುಸಾರ ಮನೆಯಲ್ಲಿ ನಾಗಶಾಂತಿಯೊಂದನ್ನು ಮಾಡಿಸಬೇಕು. ಬಳಿಕ ಸಂಸಾರ ಸಮೇತ ಷಣ್ಮುಖಕ್ಷೇತ್ರಕ್ಕೆ ಹೋಗಿ ಸೇವೆ ಕೊಟ್ಟು ಬನ್ನಿ. ಅದಾಗುವ ಹೊತ್ತಿಗೆ ಆ ಬನವೂ ಜೀರ್ಣೋದ್ಧಾರವಾಗುತ್ತದೆ. ಆ ಕಾರ್ಯದಲ್ಲೂ ತನು ಮನ ಧನಾದಿಗಳಿಂದ ಸಹಕರಿಸಿ. ಆಮೇಲೆ ನಿನ್ನ ಗಂಡ ಹುಷಾರಾಗುತ್ತಾನೆ ಮತ್ತು ನಿಮ್ಮೆಲ್ಲ ತೊಂದರೆಗಳೂ ಪರಿಹಾರವಾಗುತ್ತವೆ. ಹೋಗಿ ಬನ್ನಿ!’ ಎಂದು ಅಭಯವಿತ್ತರು. ಆದರೆ ರಾಧಾ ಗುರೂಜಿಯ ಪರಿಹಾರ ವಿಧಿಗಳನ್ನು ಕೇಳಿ ದಂಗಾದಳು. ಅವುಗಳನ್ನು ನೆರವೇರಿಸಲು ಹಣಕ್ಕೇನು ಮಾಡುವುದು? ಎಂಬ ಚಿಂತೆ ಅವಳನ್ನು ಆಕ್ಷಣವೇ ಕಾಡತೊಡಗಿತು. ಏನೂ ತೋಚದೆ ಕುಳಿತಳು. ಅವಳ ಮೌನ ಕಂಡು ಗುರೂಜಿಗೆ ಕಿರಿಕಿರಿಯಾಯಿತು. ಅವರು ಅಸಡ್ಡೆಯಿಂದ ಸುಮಿತ್ರಮ್ಮನನ್ನು ದಿಟ್ಟಿಸಿದರು. ಆಗ ಸುಮಿತ್ರಮ್ಮನೂ ಸಂಕೋಚದಿಂದ, ‘ಏನು ಮಾಡುತ್ತಿ ಮಾರಾಯ್ತೀ…?’ ಎಂದು ಮೃದುವಾಗಿ ಪ್ರಶ್ನಿಸಿದರು. ರಾಧಾಳಿಗೆ ಮಾತಾಡುವುದು ಅನಿವಾರ್ಯವಾಯಿತು. ಏನಾದರಾಗಲಿ. ಈಗ ಬಂದಿರುವ ಗಂಡಾಂತರವೊಂದು ನಿವಾರಣೆಯಾದರೆ ಸಾಕು ಎಂದುಕೊಂಡವಳು, ‘ಆಯ್ತು ಗುರೂಜಿ ತಾವು ಹೇಳಿದಂತೆಯೇ ಮಾಡುತ್ತೇವೆ’ ಎಂದಳು. ಆಗ ಗುರೂಜಿ ಶಾಂತರಾದವರು, ಕುಂಕುಮದ ಪೊಟ್ಟಣವೊಂದನ್ನೂ, ಒಂದಿಷ್ಟು ಉರಿದ ಕಡಲೇಬೇಳೆ ಕಾಳುಗಳನ್ನೂ ಅವರಿಬ್ಬರ ಕೈಗಳಿಗೆ ಎಸೆದರು. ಅವರು ಅದನ್ನು ಕಣ್ಣಿಗೊತ್ತಿಕೊಂಡು ಗುರೂಜಿಯ ಕಾಣಿಕೆಯಿಟ್ಟು ಹಿಂದಿರುಗಿದರು. ರಾಧಾಳ ಪರಿಸ್ಥಿತಿಯನ್ನು ನೆನೆದ ಸುಮಿತ್ರಮ್ಮನಿಗೆ, ಗುರೂಜಿಯವರು ಅವಳಿಗೆ ಸೂಚಿಸಿದ ಪರಿಹಾರವನ್ನು ಕೇಳಿ ಯಾಕೋ ಒಂಥರಾ ಸಂಕಟವಾಗತೊಡಗಿತು. ಇಂಥ ಬಡ ಅಮಾಯಕರ ವಿಷಯದಲ್ಲಿ ತಾವೆಲ್ಲೋ ತಪ್ಪು ಮಾಡುತ್ತಿದ್ದೇವೇನೋ ಎಂಬ ಭಯ, ಪಾಪಪ್ರಜ್ಞೆಯೂ ಅವರನ್ನು ಕಾಡತೊಡಗಿತು. ಆದ್ದರಿಂದ ತಮ್ಮ ತಳಮಳವನ್ನು ನಿವಾರಿಸಿಕೊಳ್ಳುವುದಕ್ಕಾಗಿ ದಾರಿಯುದ್ದಕ್ಕೂ ರಾಧಾಳಿಗೆ ಬಗೆಬಗೆಯಿಂದ ಸಾಂತ್ವನ ಹೇಳುತ್ತ ನಡೆದರು. ರಾಧಾ ಮನೆಗೆ ಬಂದವಳು ಗಂಡನಿಗೆ ವಿಷಯ ವಿವರಿಸಿದಳು. ಅಷ್ಟು ಕೇಳಿದ ಗೋಪಾಲ ಮತ್ತೂ ವಿಚಲಿತನಾದ. ಅಲ್ಲದೇ ಅವನು ತನ್ನ ಕನಸಿನಲ್ಲಿ ಕಾಣಿಸಿಕೊಂಡ ಸರ್ಪಕ್ಕೂ ಮತ್ತದರ ಭಯಂಕರ ವರ್ತನೆಗೂ ಹಾಗೂ ಜ್ವರದಿಂದ ತನಗಾದ ವಿಚಿತ್ರಾನುಭವಕ್ಕೂ ತಾಳೆ ಹಾಕಿದ. ಮರುಕ್ಷಣ, ಹೌದು ಗುರೂಜಿಯ ಮಾತುಗಳು ಅಕ್ಷರಶಃ ಸತ್ಯ ಎಂದು ಅವನಿಗನ್ನಿಸಿತು! ‘ಗುರೂಜಿಯವರು ಹೇಳಿದ ಪೂಜೆಗಳನ್ನು ಊರಲ್ಲಿ ಮಾಡಿಸುವುದೆಂದರೆ ನಿಮಗೆ ತುಂಬಾ ಖರ್ಚಾಗುತ್ತದೆ. ಹಾಗಾಗಿ ಅವರು ನಿಮ್ಮನ್ನು ಹ್ಯಾಗೂ ಷಣ್ಮುಖಕ್ಷೇತ್ರಕ್ಕೆ ಹೋಗಿ ಬರಲು ಹೇಳಿದ್ದಾರೆ. ನಾಗಶಾಂತಿಯನ್ನೂ ಅಲ್ಲಿಯೇ ಮಾಡಿಸಿಕೊಂಡು ಬಂದುಬಿಡಿ. ಎಲ್ಲಿಯಾದರೇನು? ನಾಗನಿಗೆ ಸಂದಾಯವಾದರೆ ಸೈಯಲ್ಲವಾ!’ ಎಂದು ರಾಧಾಳ ಅಪ್ಪ ಅಳಿಯನಿಗೆ ಹಗುರವಾಗುವಂಥ ಸಲಹೆಯನ್ನು ನೀಡಿ ಒಂದಿಷ್ಟು ಹಣವನ್ನೂ ಕೊಟ್ಟರು. ಗೋಪಾಲ ದಂಪತಿಗೂ ಅವರ ಮಾತು ಸರಿಯೆನಿಸಿತು. ಕೂಡಲೇ ಮಕ್ಕಳನ್ನು ಕಟ್ಟಿಕೊಂಡು ಷಣ್ಮುಖಕ್ಷೇತ್ರಕ್ಕೆ ಹೋದರು. ಅಲ್ಲಿ ಮೂರು ದಿನಗಳ ಕಾಲ ಕ್ಷೇತ್ರದ ಛತ್ರದಲ್ಲಿದ್ದು ತಮಗೆ ಸೂಚಿಸಲಾದ ಕೆಲವು ಪೂಜಾವಿಧಿಗಳನ್ನು ಭಕ್ತಿಯಿಂದ ನೆರವೇರಿಸಿದವರು, ಇನ್ನು ಮುಂದಾದರೂ ನಮ್ಮನ್ನು ಹಿಡಿದಿರುವ ನಾಗದೋಷವು ನಿವಾರಣೆಯಾಗಬಹುದು ಎಂಬ ದೃಢವಿಶ್ವಾಸದಿಂದ ಊರಿಗೆ ಹಿಂದಿರುಗಿದರು. ಆದರೆ ಗೋಪಾಲನ ದುರಾದೃಷ್ಟ ಅಷ್ಟುಬೇಗನೇ ಅವನ ಬೆನ್ನು ಬಿಡುವಂತೆ ತೋರಲಿಲ್ಲ. ಷಣ್ಮುಖಕ್ಷೇತ್ರಕ್ಕೆ ಹೋಗಿ ಬಂದ ಮೂರನೆಯ ದಿನ ಅದೇ ಜ್ವರ ಅವನನ್ನು ಮರಳಿ ಹಿಡಿದುಕೊಂಡಿತು. ರಾಧಾ ಮತ್ತೆ ದಿಕ್ಕು ತೋಚದಾದಳು. ಆದರೆ ಆಗ ಅವಳಿಗೆ ಡಾ. ನರಹರಿ ಕೊಟ್ಟಿದ್ದ ಮಾತ್ರೆಗಳಲ್ಲಿ ಇನ್ನೂ ಕೆಲವು ಉಳಿದಿರುವುದು ತಟ್ಟನೆ ನೆನಪಾಯಿತು. ಕೂಡಲೇ ಅದನ್ನು ಹುಡುಕಿ ತಂದು ಬಿಸಿ ನೀರಿನೊಂದಿಗೆ ಗಂಡನಿಗೆ ನುಂಗಿಸಿದಳು. ಆದರೆ ಅವನು ಸ್ವಲ್ಪಹೊತ್ತಿನಲ್ಲಿ ಮರಳಿ ವಿಚಿತ್ರವಾಗಿ ಬದಲಾದವನು ಬಾಯಿಗೆ ಬಂದಂತೆ ಬಡಬಡಿಸತೊಡಗಿದ. ಗಾಯಗೊಂಡ ಕೋಪಿಷ್ಟ ಹಾವಿನಂತೆ ಉಸಿರು ದಬ್ಬುತ್ತ ಇಡೀ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತ ಹೊರಳಿ, ಹೊರಳಿ ತೆವಳತೊಡಗಿದ. ಕೈಕಾಲುಗಳು ಸೆಟೆದುಕೊಂಡಂತೆ ವರ್ತಿಸತೊಡಗಿದ. ಅವನ ಅಂತ ಭೀಕರ ಸ್ಥಿತಿಯನ್ನು ಕಂಡ ರಾಧಾ ಕಂಗಾಲಾದಳು. ಮರಳಿ ಅವಳನ್ನು ನಾಗದೋಷದ ಭಯವು ಕಾಡತೊಡಗಿತು. ಹಾಗಾಗಿ ಗಂಡನೆದುರು ಕೂರಲಾಗದೆ ದಡಕ್ಕನೆದ್ದು ಸುಮಿತ್ರಮ್ಮನ ಮನೆಗೆ ಧಾವಿಸಿದಳು. ‘ಸುಮಿತ್ರಮ್ಮಾ, ಸುಮಿತ್ರಮ್ಮಾ…ಇವರು ಹೇಗೇಗೋ ಆಡುತ್ತಿದ್ದಾರೆ ಮಾರಾಯ್ರೇ…ಸ್ವಲ್ಪ ಬನ್ನಿಯೇ…!’ ಎಂದು ಅಂಗಲಾಚಿದಳು. ಸುಮಿತ್ರಮ್ಮನೂ ಗಾಬರಿಬಿದ್ದು ಅವಳನ್ನು ಹಿಂಬಾಲಿಸಿದರು. ಆದರೆ ಅಷ್ಟರವರೆಗೆ ಕೋಣೆಯಿಡೀ ತೆವಳುತ್ತಿದ್ದ ಗೋಪಾಲ ಈಗ ನಿತ್ರಾಣಗೊಂಡು ಕವುಚಿ ಬಿದ್ದ ಹೆಣದಂತೆ ಮಲಗಿದ್ದ. ಅವನ ಬಾಯಿಯಿಂದ ಎಂಜಲು ನೊರೆನೊರೆಯಾಗಿ ಹರಿಯುತ್ತಿತ್ತು. ಅವನ ಘೋರ ಸ್ಥಿತಿಯನ್ನು ಕಂಡ ಸುಮಿತ್ರಮ್ಮನಿಗೆ ಗುರೂಜಿಯ ಮಾತು ಮತ್ತು ಸಲಹೆಗಳು ತಟ್ಟನೆ ಕಣ್ಣೆದುರು ಸುಳಿದವು. ಹೌದು ಗುರೂಜಿಯವರು ಹೇಳಿದ್ದೆಲ್ಲವೂ ಸತ್ಯ. ಇವನಿಗೆ ಖಂಡಿತಾ ನಾಗನ ಶಾಪ ತಟ್ಟಿದೆ! ಎಂದು ಯೋಚಿಸಿದ ಅವರನ್ನೂ ಆ ಭಯವು ಆವರಿಸಿಕೊಂಡಿತು. ‘ಅಯ್ಯಯ್ಯೋ ದೇವರೇ…! ಇದೇನಪ್ಪಾ ದುರಾವಸ್ಥೆ? ನೀವು ಆದಷ್ಟು ಬೇಗ ಈ ಮನೆಯನ್ನು ಮಾರಿ ದೂರವೆಲ್ಲಾದರೂ ಹೊರಟು ಹೋಗಿ ಮಾರಾಯ್ತೀ… ಇನ್ನು ನಿಮಗೆ ಈ ಸ್ಥಳ ಖಂಡಿತಾ ಆಗಿಬರುವುದಿಲ್ಲ!’ ಎಂದು ಆತಂಕದಿಂದ ಹೇಳಿದವರು ಕೆಲವು ಕ್ಷಣ ಏನೂತೋಚದೆ ನಿಂತುಬಿಟ್ಟರು. ಸುಮಿತ್ರಮ್ಮನಿಂದಲೂ ಆ ಮಾತುಗಳನ್ನು ಕೇಳಿದ ರಾಧಾಳಿಗೆ ನಿಂತ ನೆಲವೇ ಕುಸಿದಂತಾಯಿತು. ಆದರೆ ಆ ಪರಿಸ್ಥಿತಿಯಲ್ಲೂ ಅವಳಿಗೆ ಮತ್ತೆ ಡಾ. ನರಹರಿ ನೆನಪಾದ. ಸುಮಿತ್ರಮ್ಮನನ್ನು ಕರೆದುಕೊಂಡು ಅವನ ಮನೆಗೆ ಓಡಿದಳು. ಇಂದು ರಾಧಾಳ ಅದೃಷ್ಟಕ್ಕೆ ನರಹರಿಗೆ ರಜೆಯ ದಿನವಾಗಿತ್ತು. ಅವನು ತಾರಸಿಯ ಮೇಲೆ ಕುಳಿತುಕೊಂಡು ಯಾವುದೋ ಪುಸ್ತಕ ಓದುತ್ತಿದ್ದ. ಅಷ್ಟರಲ್ಲಿ ಮನೆಯ ಕರೆಗಂಟೆ ಬಾರಿಸಿದ್ದರಿಂದ ಕೆಳಗಿಳಿದು ಬಂದವನು ಸುಮಿತ್ರಮ್ಮನನ್ನೂ ರಾಧಾಳನ್ನೂ ಕಂಡು ಆತ್ಮೀಯ ನಗು ಬೀರಿದ. ರಾಧಾಳ ಕಣ್ಣೀರು ಗಮನಿಸಿ, ‘ಏನಾಯ್ತಮ್ಮಾ…?’ ಎಂದ. ರಾಧಾ ತನ್ನ ಗಂಡನ ಪರಿಸ್ಥಿತಿಯನ್ನು ಅಳುತ್ತ ಬಡಬಡಿಸಿದಳು. ನರಹರಿಯು ಕೂಡಲೇ ತನ್ನ ಶುಶ್ರೂಷೆಯ ಚೀಲವನ್ನು ಹಿಡಿದುಕೊಂಡು ಅವರೊಂದಿಗೆ ನಡೆದ. ಗೋಪಾಲನ ಮನೆಯ ತೊಡಮೆಯ ಹತ್ತಿರ ಬಂದ ನರಹರಿಯು ಅಪ್ರಜ್ಞಾಪೂರ್ವಕವಾಗಿ ಕೆಲವು ಕ್ಷಣ ಸುಮ್ಮನೆ ನಿಂತುಬಿಟ್ಟ. ಅಲ್ಲೊಂದು ವಿಶೇಷ ಚೈತನ್ಯವು ತನ್ನೊಳಗೆ ಪ್ರವಾಹಿಸಿದಂತಾಗಿ ಅಚ್ಚರಿಗೊಂಡ. ರಾಧಾಳ ವಠಾರದಲ್ಲಿ ನಿಸರ್ಗದತ್ತವಾದ ಸಹಜ ಜೀವಂತಿಕೆ ತುಂಬಿ ತುಳುಕುತ್ತಿರುವುದನ್ನು ಅವನ ಒಳಮನಸ್ಸು ಗ್ರಹಿಸಿತು. ಮರುಕ್ಷಣ ಉಲ್ಲಸಿತನಾದ. ರಾಧಾಳ ಅಂಗಳದಲ್ಲಿ ಹಸುವಿನೊಂದಿಗಿದ್ದ ಕಂದು ಬಣ್ಣದ ಪುಟ್ಟ ಕರುವೊಂದು ಅಮ್ಮನ ಕೆಚ್ಚಲನ್ನು ಗುದ್ದಿಗುದ್ದಿ ಹಾಲು ಕುಡಿಯುತ್ತಿತ್ತು. ಆದರೆ ಆ ತಾಯಿ ಹಸುವು ಯಾಂತ್ರಿಕವಾಗಿ ಮೇಯುತ್ತಿತ್ತು. ಅತ್ತ ಕಡೆ ಏಳೆಂಟು ಊರ ಕೋಳಿಗಳ ಹಿಂಡೊಂದು ಸ್ವಚ್ಛಂದವಾಗಿ ಮೇಯುತ್ತಿದೆ ಎಂದೆನಿಸಿದರೂ ತಮ್ಮ ಮನೆಯಜಮಾನರ ನೋವು ದುಃಖಗಳು ಅವುಗಳನ್ನೂ ಭಾದಿಸುತ್ತಿವೆ ಎಂಬುದು ಅವುಗಳ ನೀರಸ ಚಲನೆಯಿಂದಲೇ ತಿಳಿಯುತ್ತಿತ್ತು. ನರಹರಿಯು ಅವನ್ನೆಲ್ಲ ಸೂಕ್ಷ್ಮವಾಗಿ ಗಮನಿಸುತ್ತ ಅಂಗಳಕ್ಕಡಿಯಿಟ್ಟ. ಅಲ್ಲಿನ ಹಸುಗಳ ಸೆಗಣಿ ಮತ್ತು ಗಂಜಲದ ಸುವಾಸನೆಗಳು ತನ್ನ ಮೆದುಳನ್ನು ಚುರುಕುಗೊಳಿಸಿದಂತೆ ಭಾಸವಾಯಿತು ಅವನಿಗೆ. ಅದರ ಬೆನ್ನಿಗೆ ನೇರಳೆ, ಪೇರಳೆ, ಸಂಪಿಗೆ ಮತ್ತು ಹಲಸಿನ ಮರಗಳಲ್ಲಿ ಹಾರಾಡುತ್ತಿದ್ದ ಪಕ್ಷಿಗಳ ಕಲರವವೂ ಹೃದಯಸ್ಪರ್ಶಿಯೆನಿಸಿತು. ಅವನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿವನು, ನಮ್ಮ ಮನುಷ್ಯಕುಲವು ನಿಜವಾಗಿಯೂ ಬದುಕಿ ಬಾಳಬೇಕಾದ ಜೀವನಕ್ರಮವೆಂದರೆ ಹೀಗೆಯೇ ಅಲ್ಲವೇ! ಎಂದುಕೊಂಡು ಮುಂದುವರೆದ. ನರಹರಿಯನ್ನು ಕಂಡ ಮೋತಿಯು ಜೋರಾಗಿ ಬೊಗಳಿತು. ಆದರೆ ಅವನ ಆತ್ಮೀಯ ನಗುವನ್ನು ಕಂಡದ್ದು ಅವನತ್ತ ಓಡಿ ಬಂದು ಬಾಲವಲ್ಲಾಡಿಸುತ್ತ ಗೌರವ ಸೂಚಿಸಿತು. ಆದರೆ ನರಹರಿಯ ಹಿಂದೆ ಸ್ವಲ್ಪದೂರದಲ್ಲಿ ನಿಂತುಕೊಂಡು ತನ್ನತ್ತ ಭಯದಿಂದ ದಿಟ್ಟಿಸುತ್ತಿದ್ದ ಸುಮಿತ್ರಮ್ಮನನ್ನು ಕಂಡದ್ದು ಮರಳಿ ಕೆರಳಿತು. ಅಷ್ಟೊತ್ತಿಗೆ ರಾಧಾ ಅದನ್ನು ಗದರಿಸಿ ದೂರಕ್ಕಟ್ಟಿದಳು. ಆದ್ದರಿಂದ ಆಗಿನ ಸನ್ನಿವೇಶವನ್ನು ಅರ್ಥಮಾಡಿಕೊಂಡ ಆ ಪ್ರಾಣಿಯೂ ಬೊಗಳುವುದನ್ನು ನಿಲ್ಲಿಸಿ ದೂರ ಹೋಗಿ ಕುಳಿತು ಮನೆಯತ್ತ ಆತಂಕದಿಂದ ನೋಡತೊಡಗಿತು. ನರಹರಿ ಗೋಪಾಲನ ಮನೆಯೊಳಗೆ ಹೋದ. ಅಲ್ಲಿ ಪಡಸಾಲೆಯಲ್ಲಿ ಸೆಗಣಿ ಸಾರಿಸಿದ ಮಣ್ಣಿನ ನೆಲದ ಮೇಲೆ ಕೇದಗೆಯ ಒಲಿಗಳಿಂದ ನೆಯ್ದ ಚಾಪೆಯೊಂದು ಹಾಸಿದ್ದು ಅದೀಗ ಪುಡಿಪುಡಿಯಾಗಿತ್ತು! ಸ್ವಲ್ಪ ಹೊತ್ತಿನ ಮುಂಚೆ ಅದರಲ್ಲಿ ಮಲಗಿದ್ದ ಗೋಪಾಲ ಈಗ ತಣ್ಣನೆ ಉಸಿರು ದಬ್ಬುತ್ತ ಕೋಣೆಯ ಮೂಲೆಯೊಂದರಲ್ಲಿ ನಿಸ್ತೇಜನಾಗಿ ಬಿದ್ದಿದ್ದ. ನರಹರಿ ಅವನನ್ನು ದೀರ್ಘವಾಗಿ ಪರೀಕ್ಷಿಸಿದ. ಅವನ ಮುಖ ಕೆಲವು ಕ್ಷಣ ವೇದನೆಯಿಂದ ಕಳೆಗುಂದಿತು. ‘ಆವತ್ತು ಕೆಲವು ಪರೀಕ್ಷೆಗಳನ್ನು ಮಾಡಿಸಲು ಹೇಳಿದ್ದೆನಲ್ಲಮ್ಮಾ, ಅದನ್ನು ಮಾಡಿಸಿದ್ದೀರೇನು…?’ ಎಂದ ಮೃದುವಾಗಿ. ‘ಹೌದು ಡಾಕ್ಟ್ರೇ ಹೇಳಿದ್ರೀ. ಆದರೆ ನೀವು ಕೊಟ್ಟ ಔಷಧಿಯಿಂದಲೇ ಜ್ವರಬಿಟ್ಟಿತು. ಹಾಗಾಗಿ ಮರೆತುಬಿಟ್ಟೆವು…!’ ಎಂದು ರಾಧಾ ಹಿಂಜರಿಯುತ್ತ ಅಂದಳು. ‘ಛೇ ಛೇ! ಎಂಥ ಕೆಲಸವಾಯಿತಮ್ಮಾ…? ಆ ಪರೀಕ್ಷೆಗಳನ್ನು ಆವತ್ತೇ ಮಾಡಿಸಿಕೊಳ್ಳಬೇಕಿತ್ತಲ್ಲವಾ…!’ ಎಂದ ನರಹರಿ ಆತಂಕದಿಂದ. ‘ಹೌದಾ ಡಾಕ್ಟ್ರೇ..?’ ಎಂದು ನೋವಿನಿಂದ ಕೇಳಿದ ರಾಧಾ, ‘ಈಗೇನು ಮಾಡುವುದು…?’ ಎಂಬಂತೆ ಅವನನ್ನೇ ದಿಟ್ಟಿಸಿದಳು. ‘ನೋಡಿಯಮ್ಮ. ಇದೊಂದು ಬಗೆಯ ಮೆದುಳು ಜ್ವರದ ಸೂಚನೆ! ಈಗಲೇ ತಡವಾಗಿಬಿಟ್ಟಿದೆ. ಸದ್ಯಕ್ಕೊಂದು ಔಷಧಿ ಕೊಡುತ್ತೇನೆ. ಅದರ ಪರಿಣಾಮ ಇಳಿಯುವುದರೊಳಗೆ ಇವನನ್ನು ಆಸ್ಪತ್ರೆಗೆ ದಾಖಲಿಸಬೇಕು!’ ಎಂದು ನರಹರಿ ಗಂಭೀರವಾಗಿ ಹೇಳಿದ. ಅದರಿಂದ ರಾಧಾ ಇನ್ನಷ್ಟು ಹೆದರಿದಳು. ಅತ್ತ ಮರಗಟ್ಟಿ ನಿಂತುಕೊಂಡು ನಾಗದೋಷದ ಹೆದರಿಕೆಯನ್ನೇ ಉಸಿರಾಡುತ್ತ ಗೋಪಾಲನನ್ನು ದಿಟ್ಟಿಸುತ್ತಿದ್ದ ಸುಮಿತ್ರಮ್ಮನಿಗೆ ನರಹರಿ, ‘ಇದು ಮೆದುಳು ಜ್ವರದ ಸೂಚನೆ!’ ಎಂದಾಗ ಒಮ್ಮೆಲೇ ದಿಗಿಲಾಯಿತು. ‘ಅಯ್ಯಯ್ಯೋ ದೇವರೇ…! ಈ ಮನುಷ್ಯ ಏನು ಹೇಳುತ್ತಿದ್ದಾನೆ…!? ಎಂದು ಆತಂಕ, ವಿಸ್ಮಯದಿಂದ ಚಡಪಡಿಸುತ್ತ ಅಂದುಕೊಂಡರು. ಅದರ ಬೆನ್ನಿಗೆ ಅವರನ್ನು ಬಲವಾದ ಅನುಮಾನವೊಂದೂ ಕಾಡಿತು. ಈ ನರಹರಿ ಎಷ್ಟು ಒಳ್ಳೆಯ ಡಾಕ್ಟ್ರಾಗಿದ್ದರೂ ಇವನದಿನ್ನೂ ಹುಡುಗು ಪ್ರಾಯ. ಹಾಗಾಗಿ ಇಂಥ ವಿಚಾರಗಳ ಬಗ್ಗೆ ಇವನಿಗೇನು ಗೊತ್ತಿದ್ದೀತು ಮಣ್ಣು! ಎಂದು ಯೋಚಿಸಿದವರು, ‘ಅಲ್ಲ ಡಾಕ್ಟ್ರೇ, ಅವನು ಹೆಡೆ ತುಳಿದ ನಾಗರಹಾವಿನಂತೆ ಆಡುತ್ತಿದ್ದುದನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ಅಷ್ಟಲ್ಲದೆ ಪ್ರಶ್ನೆಯಿಟ್ಟಲ್ಲೂ ಅದು ನಾಗದೋಷದ್ದೇ ಸೂಚನೆ ಅಂತನೂ ತಿಳಿದು ಬಂದಿದೆ. ಹೀಗಿರುವಾಗ ನೀವು ನೋಡಿದರೆ ಮೆದುಳು
ಡಾ.ಸುಜಾತಾ.ಚಲವಾದಿಯವರ ಪ್ರಬಂಧ
ನಾನು ಅಲ್ಲಿಂದ ಕಾಲು ಕಿತ್ತೆ. ಮಳೆಹನಿ ಹಾಗೆ ಜಿನುಗುತ್ತಿತ್ತು ನನ್ನ ಮನಸ್ಸಿನಲ್ಲಿ ಅನೇಕ ಪ್ರಶ್ನೆಗಳ ಸುರಿಮಳೆ ಪ್ರಾರಂಭವಾಯಿತು. ಮಳೆ ನಿಂತಿತು ಪ್ರಶ್ನೆಗಳು ಮಾತ್ರ ನಿಲ್ಲಲಿಲ್ಲ. ಮತ್ತೆ ಬುದ್ದರ ಕಡೆ ಧ್ಯಾನಸ್ಥೆಯಂತೆ ಮೂಕಳಾದೆ
ಡಾ.ಸುಜಾತಾ.ಚಲವಾದಿಯವರ ಪ್ರಬಂಧ Read Post »
ಜ್ಞಾನದ ಹೊತ್ತಿಗೆಗಳು
ಲೇಖನ ಜ್ಞಾನದ ಹೊತ್ತಿಗೆಗಳು ಆರ್. ಬಿ. ಪ್ರಿಯಾಂಕ : ಪುಸ್ತಕಗಳು ಮಸ್ತಕಗಳ ತೆರೆಸುತ್ತವೆ, ಪುಸ್ತಕಗಳು ಹೃದಯಗಳ ತಟ್ಟುತ್ತವೆ, ಪುಸ್ತಕಗಳು ಮಾತು – ಮನಗಳ ಒಂದು ಮಾಡುತ್ತವೆ, ಎನ್ನುವoತೆ ಈ ಪುಸ್ತಕಗಳು ಮಾನವನಲ್ಲಿ ಹೊಮ್ಮುವ ಜಿಜ್ಞಾಸೆಗಳ ಫಲವಾಗಿವೆ. ಮನುಷ್ಯನ ಯೋಚನೆಗಳು, ಕಾರ್ಯಗಳು, ಸಾಧನೆಗಳು, ಪುಸ್ತಕಗಳ ರೂಪದಲ್ಲಿ ಶಾಶ್ವತವಾಗಿರುತ್ತವೆ. ಈ ಪುಸ್ತಕಗಳು ಪೀಳಿಗೆಯಿಂದ ಪೀಳಿಗೆಗೆ ಜ್ಞಾನವವನ್ನು ವರ್ಗಾಯಿಸುವ ಸುಲಭ ಸಾಧನಗಳಾಗಿವೆ. ಒಳ್ಳೆಯ ವಿಚಾರಗಳನ್ನು, ಮೌಲ್ಯಗಳನ್ನು ಮಾನವನ ಮನದಲ್ಲಿ ಆಳವಾಗಿ ಬಿತ್ತುವುದರಲ್ಲಿ ಪುಸ್ತಕಗಳು ಮಹತ್ವದ ಪಾತ್ರ ವಹಿಸುತ್ತವೆ. ಹೆಚ್ಚು ಹೆಚ್ಚು ಓದಿದಂತೆ ನಮ್ಮ ಅಜ್ಞಾನದ ಅರಿವು ನಮಗಾಗುತ್ತದೆ. ಡಾ ll A.P.J.ಅಬ್ದುಲ್ ಕಲಾಂ ರವರ ಮಾತಿನಂತೆ ” ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮ ” ಎಂಬ ನುಡಿಯಂತೆ ಪುಸ್ತಕಗಳು ನಮ್ಮಿಂದ ಎಂದಿಗೂ ದೂರ ಹೋಗದ ಆಪ್ತ ಸ್ನೇಹಿತನಂತೆ. ಪುಸ್ತಕಗಳು ಜ್ಞಾನದ ಜೊತೆ ಜೊತೆಗೆ ಜೀವನ ಪಾಠವನ್ನು, ಸಹಾಯ – ಸಹಕಾರಗಳನ್ನು ಕಲಿಸುತ್ತವೆ. ” ದೇಶ ಸುತ್ತಿ ನೋಡು ಕೋಶ ಓದಿ ನೋಡು “ ಎಂಬಂತೆ ಪುಸ್ತಕಗಳನ್ನು ಓದುವುದರಿಂದ ವಿವಿಧ ದೇಶಗಳಲ್ಲಿನ ಸಾಹಿತ್ಯ, ಕಲೆ, ಸಂಸ್ಕೃತಿ, ಹಾಗೂ ಆಚಾರ-ವಿಚಾರಗಳು ತಿಳಿಯುತ್ತವೆ. ಒಬ್ಬ ವ್ಯಕ್ತಿ ತಾನಿರುವ ಸ್ಥಳದಲ್ಲಿಯೇ ಲೋಕದ ಅನುಭವವನ್ನು ಪುಸ್ತಕಗಳಿಂದ ಪಡೆಯುತ್ತಾನೆ. ಪುಸ್ತಕಗಳು ಧರ್ಮ, ದೇಶ, ಕಾಲಗಳನ್ನು ಮೀರಿ ಜನಪ್ರಿಯವಾಗಿರುವುದರಿಂದ ಇವು ಸತ್ಯವೂ, ನಿತ್ಯವೂ, ನಿರಂತರವೂ, ಸುಂದರವೂ ಆಗಿವೆ. ” ಓದಿನ ಸುಖವೊಂದೇ ನಿತ್ಯವಾದದ್ದು, ಮಿಕ್ಕ ಸುಖಗಳಿಗೆ ನಾವು ಹಲವರನ್ನು ಅವಲಂಬಿಸಬೇಕಾಗುತ್ತದೆ ಎಂಬ ಮಾತಿನಂತೆ, ಪುಸ್ತಕಗಳು ಸ್ಪಂದನಕ್ಕೆ ಗುರಿಯಾಗಿಸಿ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತವೆ. ಪುಸ್ತಕ ಓದುವಿಕೆ ಒಬ್ಬ ಸಾಮಾನ್ಯನನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡುತ್ತವೆ. ಕಲ್ಪನೆಗಳಿಗೆ ರೆಕ್ಕೆಗಳನ್ನು ಮೂಡಿಸುವ ಮಾರ್ಗವಾಗಿ ಪುಸ್ತಕಗಳು ನಮ್ಮ ನಿತ್ಯ ಬದುಕಿನೊಂದಿಗೆ ಬೆರೆತು ಹೋಗುತ್ತವೆ. ನಿಮ್ಮ ಬಳಿ ಎರಡು ರೂಪಾಯಿಗಳಿದ್ದರೆ ಒಂದು ರೂಪಾಯಿಯನ್ನು ಆಹಾರಕ್ಕಾಗಿ ಬಳಸಿ, ಇನ್ನೊಂದು ರೂಪಾಯಿಯನ್ನು ಪುಸ್ತಕಕ್ಕಾಗಿ ಬಳಸಿ, ಆಹಾರವು ನಿಮ್ಮನ್ನು ಜೀವಂತವಾಗಿಸುವಂತೆ ಮಾಡುತ್ತದೆ, ಪುಸ್ತಕವು ಹೇಗೆ ಜೀವಿಸಬೇಕೆಂದು ಕಲಿಸುತ್ತದೆ. ಎಂಬ ಡಾ ll ಬಿ. ಆರ್. ಅಂಬೇಡ್ಕರ್ ರವರ ನುಡಿಯಂತೆ, ಉತ್ತಮ ಪುಸ್ತಕಗಳು ನಮ್ಮ ಬದುಕಿನ ದಾರಿದೀಪಗಳಾಗಿವೆ. ಜೀವನವನ್ನು ಕಟ್ಟುವ ಶಕ್ತಿಗಳಾಗಿವೆ. ” A room without books is like a body without a soul” ಎಂಬಂತೆ ” ಪುಸ್ತಕವಿಲ್ಲದ ಕೋಣೆ ಆತ್ಮವಿಲ್ಲದ ದೇಹವಿದ್ದಂತೆ “. ಪುಸ್ತಕಗಳನ್ನು ಹೆಚ್ಚು ಹೆಚ್ಚು ಸಂಗ್ರಹಿಸಿ ಓದಬೇಕು ಅದರಿಂದ ಜ್ಞಾನ ಹೆಚ್ಚುತ್ತದೆ. ಕದಿಯಲಾಗದ ಸಂಪತ್ತು ಎಂದರೆ ಅದು ಜ್ಞಾನ. ಮುಚ್ಚಿಟ್ಟ ಜ್ಞಾನ ಕೊಳೆಯುತ್ತದೆ ಬಿಚ್ಚಿಟ್ಟ ಜ್ಞಾನ ಹೊಳೆಯುತ್ತದೆ. ಎಂಬಂತೆ ಬಂಗಾರವನ್ನು ಉಜ್ಜಿದಷ್ಟೂ ಹೊಳಪು ಬರುವಂತೆ ಜ್ಞಾನವನ್ನು ಹಂಚಿದಷ್ಟೂ ಹೆಚ್ಚುತ್ತಲೇ ಹೋಗುತ್ತದೆ. ಈ ಜ್ಞಾನ ಪುಸ್ತಕಗಳನ್ನು ಓದುವುದರಿoದ ಸಿಗುತ್ತದೆ. ಪುಸ್ತಕಗಳನ್ನು ಓದುವ, ಸಂಗ್ರಹಿಸುವ ಪ್ರವೃತ್ತಿ ಪ್ರತಿಯೊಬ್ಬ ಸುಶಿಕ್ಷಿತನಲ್ಲೂ ಬೆಳೆಯಬೇಕು. ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ, ಮತ್ತು ಭಗವದ್ಗೀತೆ, ಬೈಬಲ್, ಕುರಾನ್ ಗ್ರಂಥಗಳು ಹಾಗೂ ಕಾಳಿದಾಸರ ಕೃತಿಗಳು ಇನ್ನೂ ಇತ್ಯಾದಿ ಪುಸ್ತಕಗಳನ್ನು ಮೊದಲು ಓದಿದವರು ನಂತರದಲ್ಲಿ ಅವುಗಳನ್ನು ನಿರ್ಲಕ್ಷಿಸಿದ್ದರೆ, ಇಂತಹ ಮಹಾನ್ ಗ್ರಂಥಗಳ ಹಿನ್ನೆಲೆ ಮತ್ತು ಅವುಗಳ ಮಹತ್ವ ನಮಗೆ ತಿಳಿಯುತ್ತಿರಲಿಲ್ಲ. ಸಾಧ್ಯವಾದಷ್ಟು ಪುಸ್ತಕಗಳನ್ನು ಓದಿ ಅವುಗಳನ್ನು ಜೋಪಾನವಾಗಿ ಸಂಗ್ರಹಿಸಿಡೋಣ. ಎಲ್ಲರ ಮನೆ-ಮನಗಳಲ್ಲಿ ಪುಸ್ತಕಗಳು ಬೆಳಗಲಿ ಎಂದು ಆಶಿಸೋಣ…..
ಜ್ಞಾನದ ಹೊತ್ತಿಗೆಗಳು Read Post »
ದಾರಾವಾಹಿ ಆವರ್ತನ ಅದ್ಯಾಯ-39 ‘ಕೊಡೆಕ್ಕೆನಾ’ ಹೋಟೇಲಿನೆದುರು ವ್ಯಾಪಾರ ಆರಂಭಿಸಿ ಕೈಸುಟ್ಟುಗೊಂಡು ದಿವಾಳಿಯಾದ ಹೇಮಚಂದ್ರನು ಹೈರಾಣಾಗಿದ್ದ ಸಂದರ್ಭದಲ್ಲಿ ತನ್ನ ಹತ್ತಿರದ ಸಂಬಂಧಿಯೊಬ್ಬನ ಸಲಹೆಯ ಮೇರೆಗೆ ಗುರೂಜೀಯವರಲ್ಲಿಗೆ ಬಂದ. ಅವರ ಆಪ್ತ ಸಹಾಯಕ ರಾಘವನ ಕಥೆ ಕೇಳಿ ಬೆಕ್ಕಸ ಬೆರಗಾಗಿ ತಾನು ಕುಳಿತ ಭಂಗಿಯನ್ನೊಮ್ಮೆ ಸೂಕ್ಷ್ಮವಾಗಿ ಸರಿಪಡಿಸಿ ನೆಟ್ಟಗೆ ಕುಳಿತುಕೊಂಡ. ತನ್ನದೂ ಇವನದೇ ಕಥೆ. ಹಾಗಾಗಿ ತನಗೂ ಈ ಗುರೂಜಿಯವರಿಂದ ಪರಿಹಾರ ದೊರಕೀತು ಎಂದುಕೊಂಡು ಉಲ್ಲಸಿತನಾದ. ಅದರ ನಡುವೆಯೂ ಅವನನ್ನೊಂದು ಅನುಮಾನ ಕಾಡಿತು. ಅದನ್ನು ನಿವಾರಿಸಿಕೊಳ್ಳಲು, ‘ನನ್ನದೂ ನಿಮ್ಮದೇ ಸಮಸ್ಯೆ ಮಾರಾಯ್ರೇ. ಆದರೆ ಈ ಗುರೂಜಿಯವರು ಅದಕ್ಕೆ ಯಾವ್ಯಾವ ಬಗೆಯ ಪರಿಹಾರವನ್ನು ಹೇಳಬಹುದೆಂಬ ಐಡಿಯಾ ಇದೆಯಾ ನಿಮಗೆ…?’ ಎಂದು ರಾಘವನನ್ನು ಪ್ರಶ್ನಿಸಿದ. ‘ಅಯ್ಯೋ, ಅದು ಬಿಡಿ. ಅವರು ಯಾವತ್ತೂ ದುಡ್ಡು ಮಾಡುವವರ ಜಾತಿಗೆ ಸೇರಿದವರಲ್ಲ. ಹಾಗಾಗಿ ದೊಡ್ಡ ದೊಡ್ಡ ವಿಧಿಗಳನ್ನೇನೂ ಹೇಳುವುದಿಲ್ಲ. ನಿಮಗ್ಯಾರಾದರೂ ಮಾಟ ಗೀಟ ಮಾಡಿಸಿದ್ದರೆ ಅದರ ನಿವಾರಣೆಗೆ ಕೆಲವು ಪೂಜೆ, ಪುನಸ್ಕಾರಗಳನ್ನು ಹೇಳಬಹುದಷ್ಟೇ. ಎಷ್ಟೆಷ್ಟೋ ಬಡವರ ಸಮಸ್ಯೆಗಳನ್ನು ಅವರು ಕೆಲವೊಮ್ಮೆ ಪುಕ್ಕಟೆಯಾಗಿ ತಮ್ಮ ಮಂತ್ರಶಕ್ತಿಯಿಂದಲೇ ನಿವಾರಿಸಿ ಕಳುಹಿಸಿದ್ದುಂಟು!’ ಎಂದು ವಿಸ್ಮಯ ಸೂಚಿಸುತ್ತ ಹೇಳಿದ. ಅಷ್ಟು ಕೇಳಿದ ಹೇಮಚಂದ್ರ ಪೂರ್ಣ ನಿರಾಳನಾದ. ‘ಹೌದೂ, ನಿಮ್ಮದೆಂಥ ಸಮಸ್ಯೆ ಮಾರಾಯ್ರೇ…?’ ಎಂದು ರಾಘವ ಎತ್ತಲೋ ನೋಡುತ್ತ, ಸಿಗರೇಟಿನ ಹೊಗೆ ಉಗುಳುತ್ತ ಅವನನ್ನು ಪ್ರಶ್ನಿಸಿದ. ‘ನನ್ನದೂ ವ್ಯಾಪಾರದ ಅವಸ್ಥೆಯೇ ಮಾರಾಯ್ರೇ! ಹೊಟೇಲು ಮಾಲಿಕನೊಬ್ಬ ನನ್ನ ಮೇಲೆ ಮಾಟ ಮಾಡಿಸಿರಬೇಕು. ಬರೇ ಆರು ತಿಂಗಳಲ್ಲಿ ಇಪ್ಪತ್ತು ಲಕ್ಷ ಲಾಸ್ ಆಯಿತು. ಅದರ ಮೇಲೆ ಒಂದಷ್ಟು ಸಾಲವೂ ಆಗಿಬಿಟ್ಟಿದೆ. ಆ ಸಾಲಗಾರರ ತೊಂದರೆ ತಾಳಲಾಗದೆ ಜೀವ ತೆಗೆದುಕೊಳ್ಳುವುದೊಂದೇ ದಾರಿ ಅನ್ನುವ ಮಟ್ಟಕ್ಕೆ ಬಂದು ನಿಂತಿದ್ದೆ. ಅಷ್ಟರಲ್ಲಿ ನನ್ನ ಸಂಬಂಧಿಕನೊಬ್ಬ ಈ ಗುರೂಜಿಯವರಲ್ಲಿಗೆ ಕಳುಹಿಸಿಕೊಟ್ಟ!’ ಎಂದ ವಿಷಾದದಿಂದ. ‘ಓಹೋ, ಹೌದಾ… ಇಲ್ಲಿಗೆ ಬಂದಾಯ್ತಲ್ಲ ಇನ್ನು ಮಂಡೆಬಿಸಿ ಬಿಟ್ಟುಬಿಡಿ. ನೀವೆಷ್ಟು ಕಳೆದುಕೊಂಡಿದ್ದೀರೋ ಅದರ ಡಬ್ಬಲ್ ತಿರುಗಿ ನಿಮ್ಮ ಹತ್ತಿರ ಬಂದೇ ಬರುತ್ತದೆ. ಅದಕ್ಕೆ ನಾನು ಭರವಸೆ ಕೊಡಬಲ್ಲೆ!’ ಎಂದು ಎದೆಯುಬ್ಬಿಸಿ ಅಂದವನು, ‘ಹೌದೂ ನಿಮ್ಮನ್ನು ಇಲ್ಲಿಗೆ ಕಳುಹಿಸಿದವನು ನಿಮ್ಮ ಸಂಬಂಧಿಕನೆಂದಿರಲ್ಲ ಆ ಪುಣ್ಯಾತ್ಮನ ಹೇಸರೇನಂದಿರಿ…?’ ಎಂದು ಪ್ರಶ್ನಿಸಿದ. ‘ಪ್ರಕಾಶ ಅಂತ. ಅವನು ನನ್ನ ಹತ್ತಿರದ ಸಂಬಂಧಿಯೇನೂ ಅಲ್ಲ. ಆದರೂ ಕಷ್ಟಕಾಲದಲ್ಲಿ ಅಂಥವರೇ ಆಗುವುದು ಅಂತ ಈಗ ಗೊತ್ತಾಗುತ್ತಿದೆ ಮಾರಾಯ್ರೇ!’ ಎಂದು ಹೇಮಚಂದ್ರ ಅವನನ್ನು ಸ್ಮರಿಸಿದ. ‘ಓಹೋ, ಅವನಾ… ಹೌದೌದು. ಅಂತವರೇ ಆಗುವುದು ಮಾರಾಯ್ರೇ!’ ಎಂದ ರಾಘವ ಇನ್ನು ತನ್ನ ಕೆಲಸವಾಯಿತು ಎಂಬಂತೆ ಎದ್ದು ನಿಂತವನು ಯಾರಿಗೋ ಕರೆ ಮಾಡಲು ನೆನಪಾದಂತೆ ನಟಿಸುತ್ತ ಫೋನೆತ್ತಿಕೊಂಡು, ‘ಆಯ್ತು ನೀವು ಕುಳಿತಿರಿ. ನಾನೀಗ ಬಂದೆ…’ ಎಂದವನು ಮತ್ತೆ ಅವನತ್ತ ತಿರುಗಿಯೂ ನೋಡದೆ ಹೊರಟು ಹೋದ. ಅವನು ಅತ್ತ ಹೋಗುತ್ತಲೇ, ಎಲ್ಲಿಂದಲೋ ಹಾರಿ ಬಂದ ಕಾಗೆಯೊಂದು ಹೇಮಚಂದ್ರನ ನೆತ್ತಿಯ ಮೇಲಿನ ಮರದ ಕೊಂಬೆಯಲ್ಲಿ ಕುಳಿತುಕೊಂಡು ಸ್ವಲ್ಪ ಹೊತ್ತು ಕ್ರಾವ್ಸ್…ಕ್ರಾವ್ಸ್…ಕ್ರಾವ್ಸ್…! ಎಂದು ಅರಚಿದ್ದು, ಪಿಚಕ್ಕನೆ ಅವನ ಮೇಲೆ ಹಿಕ್ಕೆ ಸುರಿದು ಹಾರಿ ಹೋಯಿತು. ಹೇಮನಾಥ ಬೆಚ್ಚಿಬಿದ್ದ. ಅವನ ಮೈಯಿಡೀ ಕೆಟ್ಟ ವಾಸನೆ ಹೊಮ್ಮತೊಡಗಿತು. ಅಸಹ್ಯದಿಂದ ಎದ್ದು ಸಮೀಪದ ನಳ್ಳಿಯತ್ತ ಧಾವಿಸಿ ತೊಳೆದುಕೊಂಡ. ಆದರೂ ಕೊಳೆತ ಮೀನಿನಂಥ ವಾಸನೆ ಹಾಗೆಯೇ ಉಳಿಯಿತು. ತಲೆಯನ್ನು ಕರವಸ್ತ್ರ್ರದಿಂದ ತಿಕ್ಕಿತಿಕ್ಕಿ ಒರೆಸಿಕೊಂಡು ಮರಳಿ ಅಲ್ಲಿ ಕೂರಲಾಗದೆ ಅಸಹನೆಯಿಂದ ಅಡ್ಡಾಡತೊಡಗಿದ. *** ಹೇಮಚಂದ್ರನೊಡನೆ ಮಾತಾಡಿ ಅಲ್ಲಿಂದ ಮರೆಯಾದ ರಾಘವ ಕೂಡಲೇ ಗುರೂಜಿಯವರಿಗೆ ಕರೆ ಮಾಡಿದ. ಆದರೆ ಆಹೊತ್ತು ಗುರೂಜಿಯವರ ಎದುರಿನಲ್ಲಿ ಶ್ರೀಮಂತ ಜೋಡಿಯೊಂದು ತಮ್ಮ ಜೀವನವೇ ಕಳೆದು ಹೋದಂಥ ದುಃಖದಿಂದ ಕುಳಿತಿತ್ತು. ಗುರೂಜಿಯವರು ಅವರ ಸಮಸ್ಯೆಯನ್ನೂ ಅವರ ಮನೆಯ ವಿವರವನ್ನೂ ಮತ್ತು ವಠಾರದ ಚಿತ್ರಣವನ್ನೂ ಅವರಿಂದಲೇ ಕೆದಕಿ ಕೆದಕಿ ಪ್ರಶ್ನಿಸುತ್ತ ಸಾಕಷ್ಟು ತಿಳಿದುಕೊಂಡವರು ಕೊನೆಯಲ್ಲಿ ತಮ್ಮ ಕವಡೆಗಳನ್ನು ಹರಿಯಬಿಟ್ಟರು. ಅವುಗಳು ಕೆಲವುಕ್ಷಣ ಕುಣಿದು ಕುಪ್ಪಳಿಸಿ ಬಿದ್ದ ಸ್ಥಿತಿಯ ಮೇಲೆ ಲೆಕ್ಕಾಚಾರ ಹಾಕಿದವರು, ‘ನೋಡೀ, ನಿಮ್ಮ ಅನ್ಯೋನ್ಯ ದಾಂಪತ್ಯದಲ್ಲಿ ಈಚೀಚೆಗೆ ಕಂಡು ಬಂದಿರುವ ಮನಸ್ತಾಪಕ್ಕೂ ಮತ್ತು ನಿಮ್ಮ ಆರ್ಥಿಕ ಸಂಕಷ್ಟಕ್ಕೂ ಕಾರಣವೇನೆಂದು ಇಲ್ಲಿ ಸ್ಪಷ್ಟವಾಗುತ್ತಿದೆ. ನೀವು ಹೊಸತಾಗಿ ಕಟ್ಟಿಸಿರುವ ಬಂಗಲೆಯ ವಾಸ್ತುದೋಷವೇ ಈ ಎಲ್ಲ ಅನಾಹುತಕ್ಕೆ ಕಾರಣ! ಆದರೆ ಅದರ ಪರಿಹಾರಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ. ಬಂಗಲೆಯ ಮುಖ್ಯ ದ್ವಾರವನ್ನು ಕಿತ್ತು ನಾವು ಸೂಚಿಸುವ ದಿಕ್ಕಿಗೆ ಇರಿಸಿದರಾಯ್ತು. ಆನಂತರ ನಿಮ್ಮ ಬೆಡ್ರೂಮಿಗೆ ನೇರವಾಗಿ ಕಾಣಿಸುವ, ನಿಮ್ಮ ನೆರೆಮನೆಯ ತೋಟದಲ್ಲಿ ಹಳೆಯ ಕಾಟು ಮಾವಿನಮರವೊಂದಿದೆ ಅಂತ ಹೇಳಿದಿರಲ್ಲ ಆ ಮರವು ಪ್ರೇತಾತ್ಮಗಳ ವಾಸ್ಥಸ್ಥಾನವಾಗಿರುವುದೂ ಇಲ್ಲಿ ತೋರಿ ಬರುತ್ತಿದೆ. ಅವು ಮಸ್ಸರಗೊಂಡು ನಿಮ್ಮ ದಾಂಪತ್ಯ ಸುಖಕ್ಕೆ ಕಲ್ಲು ಹಾಕುತ್ತಿವೆ. ಆದಷ್ಟು ಬೇಗ ಆ ಮರವನ್ನು ಕಡಿಸುವ ಏರ್ಪಾಟ್ಟು ಮಾಡಿಸಿ. ಬಳಿಕ ನಾವು ಸೂಚಿಸುವ ಕೆಲವು ಪೂಜಾವಿಧಿಗಳನ್ನೂ ಭಕ್ತಿಯಿಂದ ನೆರವೇರಿಸಿಬಿಡಿ. ಆಮೇಲೆ ನಿಮ್ಮ ಸರ್ವ ಸಮಸ್ಯೆಗಳೂ ನಿವಾರಣೆಯಾಗುತ್ತವೆ, ಚಿಂತಿಸಬೇಡಿ!’ ಎಂದು ಸಲಹೆಯಿತ್ತರು. ಅಷ್ಟು ಕೇಳಿದ ಹೆಂಗಸು ಸ್ವಲ್ಪ ನಿರಾಳಲಾಗಿ ಗಂಡನ ಮುಖ ದಿಟ್ಟಿಸಿದಳು. ಆದರೆ ಗಂಡಸಿಗೆ ಮರುಕ್ಷಣ ಬೇರೊಂದು ಚಿಂತೆ ಕಾಡಿತು. ‘ಸರಿ ಗುರೂಜಿ. ನೀವು ಹೇಳಿದಂತೆ ಮನೆಯ ದ್ವಾರವನ್ನು ತೆಗೆದು ಬೇರೆಡೆಗಿರಿಸಬಹುದು. ಆದರೆ ಮಾವಿನ ಮರ ಕಡಿಯಲು ನೆರೆಮನೆಯವರು ಒಪ್ಪುತ್ತಾರಾ…?’ ಎಂದು ಪ್ರಶ್ನಿಸಿದ. ‘ಅದೂ ಹೌದು. ಆದರೆ ಅದಕ್ಕೂ ನಮ್ಮ ಬಳಿ ಪರಿಹಾರವಿದೆ ಬಿಡಿ!’ ಎಂದ ಗುರೂಜಿಯವರು ಕುಂಕುಮದ ಕಟ್ಟೊಂದನ್ನು ತೆಗೆದು ಕಣ್ಣುಮುಚ್ಚಿ ಮಂತ್ರಿಸಿ ಅವರ ಕೈಗಿತ್ತು, ‘ಈ ಪ್ರಸಾದವನ್ನು ಆ ಮನೆಯವರಿಗೆ ಕೊಡಿ ಮತ್ತು ಆ ಮರದ ಕುರಿತು ನಾವು ಹೇಳಿದ ವಿಷಯವನ್ನೂ ಅವರಿಗೆ ವಿವರಿಸಿ. ಒಪ್ಪುತ್ತಾರೆ. ಆಗಲೂ ಒಪ್ಪದಿದ್ದರೆ ಮುಂದೇನು ಮಾಡಬೇಕೆಂಬುದನ್ನು ನಾವೇ ಹೇಳುತ್ತೇವೆ. ಯಾವುದಕ್ಕೂ ಆ ಕೆಲಸವಾದ ಮೇಲೆ ಇನ್ನೊಮ್ಮೆ ಬಂದು ಹೋಗಿ!’ ಎಂದು ನಗುತ್ತ ಹೇಳಿದರು. ಆಗ ಆ ದಂಪತಿಗೆ ಧೈರ್ಯ ಬಂತು. ‘ಸರಿ ಗುರೂಜಿ!’ ಎಂದು ಅವರು ನಮ್ರವಾಗಿ ಎದ್ದವರು ಐನೂರರ ಎರಡು ನೋಟುಗಳನ್ನು ಅವರ ಹರಿವಾಣದಲ್ಲಿಟ್ಟು ಕೈಮುಗಿದು ಹೊರಟು ಹೋದರು. ಶ್ರೀಮಂತ ದಂಪತಿ ಹೊರಗೆ ಹೋದ ಬೆನ್ನಿಗೆ ಮಧ್ಯಮವರ್ಗದ ಜೋಡಿಯೊಂದು ಅಳುಕುತ್ತ ನಾಚುತ್ತ ಗುರೂಜಿಯ ಕೋಣೆಯನ್ನು ಪ್ರವೇಶಿಸಿತು. ಗುರೂಜಿಯವರು ಆ ಇಬ್ಬರನ್ನೂ ಆಪಾದಮಸ್ತಕ ದಿಟ್ಟಿಸಿದವರು ಹೌದೂ, ಇವರು ಮೂರು ತಿಂಗಳ ಹಿಂದೊಮ್ಮೆ ಬಂದು ಹೋದವರಲ್ಲವಾ…? ಎಂದುಕೊಂಡವರ ಮುಖದಲ್ಲಿ ತಟ್ಟನೆ ಅಸಹನೆಯ ಹೊಗೆಯಾಡಿತು. ಥತ್! ದರಿದ್ರದವುಗಳೆಲ್ಲಿಯಾದರೂ! ಮತ್ತೆ ಯಾಕೆ ವಕ್ಕರಿಸಿದವು? ಎಂದು ಚಿಂತಿಸಿದವರಿಗೆ ಆ ಜೋಡಿಯ ಸಮಸ್ಯೆಯೂ ಮುನ್ನೆಲೆಗೆ ಬಂತು. ಥೂ! ಇವುಗಳು ಕೊಡುವ ಇನ್ನೂರು ರೂಪಾಯಿಗೆ ನಾವು ಇವರಿಗೆ ಸಂತಾನಭಾಗ್ಯ ಕರುಣಿಸಬೇಕಂತೆ. ತಲೆಕೆಟ್ಟವುಗಳು! ಎಂದು ಒಳಗೊಳಗೇ ಬೈದುಕೊಳ್ಳುತ್ತ, ‘ಹ್ಞೂಂ ಹೇಳಿ ಏನು ವಿಶೇಷ? ಏನಾದರೂ ಸಿಹಿ ಸುದ್ದಿ ತಂದಿದ್ದೀರೋ ಇಲ್ಲವೋ…?’ ಎಂದು ನಗುತ್ತ ಕೇಳಿದರು. ಆದರೆ ಆ ದಂಪತಿಯ ಮುಖಗಳು ಬಾಡಿದವು. ‘ಅದು ಗುರೂಜೀ… ನಾವು ಹೋದ ಸಲ ಬಂದಾಗ ನೀವು ನಮ್ಮ ತೊಂದರೆಯ ನಿವಾರಣೆಗೆ ನಮ್ಮ ಕುಲದೇವರಿಗೆ ಒಂದೂವರೆ ಕಿಲೋ ಉದ್ದಿನ ಬೇಳೆಯನ್ನು ಭಕ್ತಿಯಿಂದ ಸಮರ್ಪಿಸಿಲು ಹೇಳಿದ್ದಿರಿ. ನಾವು ಕೂಡಾ ಹಾಗೆಯೇ ಮಾಡಿದೆವು. ಆದರೆ ಆ ಮೇಲೆ ಮೂರು ತಿಂಗಳು ಕಳೆಯಿತು. ಇನ್ನೂ ಯಾವ ಸೂಚನೆಯೂ ಇಲ್ಲ!’ ಎಂದ ಹೆಂಗಸು ಮತ್ತೆ ತಲೆ ತಗ್ಗಿಸಿ ಕುಳಿತಳು. ಗುರೂಜಿಯವರಿಗೆ ಜಿಗುಪ್ಸೆ ಮೂಡಿತು. ‘ಹೌದಾ ಅಮ್ಮಾ… ಮೂರು ತಿಂಗಳಲ್ಲಿ ಎಷ್ಟು ಬಾರಿ ಕೊಟ್ಟಿದ್ದೀರಿ? ಒಂದೇ ಸಲ ಅಲ್ಲವಾ… ಅದೂ ಒಂದೂವರೆ ಕೇಜಿ ಅಷ್ಟೇ ತಾನೇ. ಅಯ್ಯೋ, ಅಷ್ಟಕ್ಕೆಲ್ಲ ನಮ್ಮ ಈಗಿನ ಯಾವ ದೇವರು ಪ್ರಸನ್ನನಾಗುತ್ತಾನಮ್ಮಾ! ಇನ್ನೊಂದಷ್ಟು ಕಾಲ ಕೊಡುತ್ತಲೇ ಇರು. ದೇವರಿಗೂ ನಾವು ಆಗಾಗ ಸ್ವಲ್ಪ ಕಾಟ ಕೊಡುತ್ತಲೇ ಇರಬೇಕಮ್ಮಾ. ಆಗಲೇ ಅವನೂ ನಮ್ಮಾಚೆ ತಿರುಗಿ ನೋಡುವುದು!’ ಎಂದು ವ್ಯಂಗ್ಯವಾಗಿ ನಗುತ್ತ ಹೇಳಿದರು. ಆಗ ಅವಳ ಗಂಡ, ಗುರೂಜಿಯವರಿಗೆ ಕಾಣದಂತೆ ಹುಬ್ಬುಗಂಟಿಕ್ಕಿ ತಲೆಯನ್ನು ಕೆರೆದುಕೊಂಡ. ‘ಹ್ಞಾಂ! ಅಂದಹಾಗೆ ಇನ್ನು ಮುಂದೆ ಹೀಗೆ ಮಾಡಿ, ಒಂದು ತಿಂಗಳು ಉದ್ದಿನ ಬೇಳೆ ಕೊಟ್ಟರೆ ಮತ್ತೊಂದು ತಿಂಗಳು ತೊಗರಿಬೇಳೆ ಕೊಡಿ. ಅದರಿಂದ ದೇವರು ಸಂಪ್ರೀತನಾಗಿ ನಿಮಗೆ ಖಂಡಿತಾ ಸಂತಾನವಾಗುತ್ತದೆ. ಹೋಗಿ ಬನ್ನಿ!’ ಎಂದು ಗುರೂಜಿಯವರು ನಯವಾಗಿ ಅಂದರು. ಅಷ್ಟು ಕೇಳಿದ ಆ ಬಡಪಾಯಿ ದಂಪತಿ, ‘ಆಯ್ತು ಗುರೂಜಿ. ಎಲ್ಲಾ ನಿಮ್ಮ ಆಶೀರ್ವಾದ!’ ಎಂದು ಕೈಮುಗಿದು ಇನ್ನೂರು ರೂಪಾಯಿಯನ್ನು ಅವರ ಮುಂದಿಟ್ಟು ಹೊರಟು ಹೋದರು. ಅಷ್ಟರಲ್ಲಿ ಗುರೂಜಿಯವರಿಗೆ ರಾಘವನ ಕರೆ ಬಂತು. ಫೋನೆತ್ತಿಕೊಂಡರು. ಅದು ತಮ್ಮ ಸಹಾಯಕನ ಕರೆ ಎಂದು ತಿಳಿದರೂ ಅಭ್ಯಾಸ ಬಲದಂತೆ, ‘ಓಂ ನಾಗಾಯ ನಮಃ ಯಾರು ಮಾತಾಡ್ತಾ ಇರೋದು…?’ ಎಂದರು. ‘ನಾನು ಗುರೂಜೀ ರಾಘವ…ಹೊರಗಡೆ ಒಂದು ಹೊಸ ಕೇಸು ಬಂದು ಕೂತಿದೆ. ಕೆಂಪು ಶರ್ಟು ಮತ್ತು ಹಳೆಯ ಮಾಡೆಲಿನ ರಾಡೋ ವಾಚು ಧರಿಸಿರುವ ಹೇಮಚಂದ್ರ ಎಂಬವನಿದ್ದಾನೆ. ಸುಮಾರಾದ ಕುಳವೇ. ಹೊಟೇಲ್ ಬ್ಯುಸಿನೆಸ್ಸು. ಯಾರೋ ಮಾಟ ಮಾಡಿಸಿದ್ದಾರಂತೆ. ಈಗ ವ್ಯಾಪಾರ ಮುಳುಗಿ ಇಪ್ಪತ್ತು ಲಕ್ಷ ಲಾಸ್ ಆಗಿದೆಯಂತೆ. ಗಮನಿಸಿ!’ ಎಂದು ಸಂಕ್ಷಿಪ್ತ ಮಾಹಿತಿ ನೀಡಿ ಫೋನಿಟ್ಟ. ‘ಓಹೋ, ಹೌದಾ…, ಸರಿ, ಸರಿ!’ ಎಂದು ಗುರೂಜಿಯೂ ಫೋನಿಟ್ಟವರು ತಕ್ಷಣ ಅಣ್ಣಪ್ಪನನ್ನು ಕರೆದು, ‘ನೋಡನಾ… ಹೇಮಚಂದ್ರ ಎಂಬವನನ್ನು ಒಳಗೆ ಕಳುಹಿಸು…!’ ಎಂದು ಆಜ್ಞಾಪಿಸಿದರು. ಅದಕ್ಕವನು, ‘ಗುರೂಜೀ, ಸುಮಿತ್ರಮ್ಮ ಎಂಬವರು ಅವರಿಗಿಂದ ಮೊದಲು ಬಂದು ಕೂತಿದ್ದಾರೆ…!’ ಎಂದು ಹಲ್ಲುಗಿಂಜಿದ. ‘ಪರ್ವಾಗಿಲ್ಲ ಮಾರಾಯಾ. ಅವರನ್ನು ಇನ್ನೂ ಸ್ವಲ್ಪಹೊತ್ತು ಕುಳಿತಿರಲು ಹೇಳಿ ಇವನನ್ನು ಮೊದಲು ಕಳುಹಿಸು ಹೋಗು!’ ಎಂದು ಒರಟಾಗಿ ಅಂದರು. ಅವನು, ‘ಆಯ್ತು, ಗುರೂಜಿ’ ಎಂದುತ್ತರಿಸಿ ಹೊರಗೆ ಹೋದ. ಹೇಮಚಂದ್ರ ಉತ್ಸಾಹದಿಂದ ಒಳಗೆ ಬಂದವನು ಗುರೂಜಿಯವರಿಗೆ ಅತಿಯಾದ ಧೈನ್ಯ ಮತ್ತು ಗೌರವದಿಂದ ನಮಸ್ಕರಿಸಿ ಕುಳಿತುಕೊಂಡ. ಗುರೂಜಿಯವರು ಅವನನ್ನೊಮ್ಮೆ ತೀಕ್ಷ್ಣವಾಗಿ ದಿಟ್ಟಿಸಿದವರು ದೇಶಾವರಿ ನಗು ಬೀರುತ್ತ ಧ್ಯಾನಸ್ಥರಾದರು. ಕೆಲಕ್ಷಣದ ಬಳಿಕ ಕಣ್ಣು ತೆರದು ಕವಡೆಗಳನ್ನೆತ್ತಿ ಹಣೆಗೊತ್ತಿಕೊಂಡು ಮೇಜಿನ ಮೇಲೆ ಹರಡಿದರು. ತುಸುಹೊತ್ತು ಅವುಗಳನ್ನೇ ತದೇಕಚಿತ್ತದಿಂದ ದಿಟ್ಟಿಸುತ್ತ ಲೆಕ್ಕಾಚಾರವನ್ನೂ ಹಾಕಿದವರು ಅವನತ್ತ ತಲೆಯೆತ್ತಿ, ‘ಜೀವನದಲ್ಲಿ ನೀವು ಬಹಳವೇ ಕಷ್ಟನಷ್ಟವನ್ನನುಭವಿಸಿರುವ ಹಾಗಿದೆಯಲ್ಲ…!’ ಎಂದು ಕನಿಕರದಿಂದ ನೋಡುತ್ತ ಅಂದರು. ಹೇಮಚಂದ್ರ ತಟ್ಟನೆ ನೆಟ್ಟಗೆ ಕುಳಿತವನು, ‘ಹೌದು ಹೌದು, ಗುರೂಜೀ…!’ ಎಂದು ವಿಷಾದದಿಂದ ಗೋಣಲ್ಲಾಡಿಸಿದ. ‘ಜೀವಮಾನದ ಗಳಿಕೆ ಲಕ್ಷಲಕ್ಷ ಕರಗಿ ಹೋದಂತೆ ತೋರುತ್ತಿದೆ ಇಲ್ಲಿ, ಹೌದೇ…?’ ಎಂದು ಗುರೂಜಿ ಅದೇ ಧಾಟಿಯಿಂದ ಪ್ರಶ್ನಿಸಿದರು. ಹೇಮಚಂದ್ರನ ಮುಖದಲ್ಲಿ ವಿಲಕ್ಷಣ ಕಾಂತಿ ಮಿನುಗಿತು. ಅದನ್ನು ಗಮನಿಸಿದ ಗುರೂಜಿಯವರು ಮತ್ತೆ ಕವಡೆಗಳತ್ತ ನೋಡುತ್ತ, ‘ನಿಮ್ಮದು ಆಹಾರ ಪೂರೈಕೆಯ ವ್ಯವಹಾರವಿರಬೇಕಲ್ಲ…?’ ಎಂದರು ತಲೆ ಎತ್ತದೆಯೇ. ಆಗ ಹೇಮಚಂದ್ರ ನಿಜಕ್ಕೂ ವಿಸ್ಮಯಗೊಂಡ. ಅವನಿಗೆ ಗುರೂಜಿಯ ಮೇಲಿದ್ದ ಸಣ್ಣ ಅನುಮಾನವೂ ಕರಗಿ ಹೋಯಿತು. ಇವರು ಅಂತಿಂಥ ವ್ಯಕ್ತಿಯಲ್ಲ. ದಿವ್ಯದೃಷ್ಟಿ ಉಳ್ಳವರು ಅನ್ನುವುದರಲ್ಲಿ ಸಂಶಯವೇ ಇಲ್ಲ! ಎಂದುಕೊಂಡವನಿಗೆ ಅವರ ಮೇಲೆ ಅಪಾರ ನಂಬಿಕೆ ಹುಟ್ಟಿಬಿಟ್ಟಿತು. ‘ಹೌದು ಗುರೂಜಿ, ತಾವು ಸರಿಯಾಗೇ ಹೇಳಿದಿರಿ. ನನ್ನ ಇಪ್ಪತ್ತು ವರ್ಷದ ಸಂಪಾದನೆಯನ್ನು ಆರೇ ತಿಂಗಳಲ್ಲಿ ಒಬ್ಬಾತ ಮುಳುಗಿಸಿಬಿಟ್ಟ. ಅದರ ಮೇಲೆ ಈಗ ಒಂದಷ್ಟು ಸಾಲಕ್ಕೂ ಬಿದ್ದು ಸಾಯುವುದೊಂದೇ ಬಾಕಿ ಎಂಬಂತಾಗಿದೆ ನನ್ನ ಪರಿಸ್ಥಿತಿ!’ಎಂದು ಉಮ್ಮಳಿಸಿ ಬಂದ ದುಃಖವನ್ನು ಹತ್ತಿಕ್ಕಿಕೊಳ್ಳುತ್ತ ಹೇಳಿದವನು ತನ್ನ ಹಲವು ವರ್ಷಗಳ ಕಥೆಯನ್ನೆಲ್ಲ ಅವರ ಮನಕರಗುವಂತೆ ವಿವರಿಸಿ, ‘ನನ್ನಂಥ ಶನಿ ಹಿಡಿದವನನ್ನು ನೀವೇ ಕಾಪಾಡಬೇಕು ಗುರೂಜೀ!’ ಎಂದು ಕೈಮುಗಿದು ಬೇಡಿಕೊಂಡ. ಗುರೂಜಿ ಮತ್ತೊಮ್ಮೆ ಅವನತ್ತ ಮಂದಹಾಸ ಬೀರಿದವರು ಮರಳಿ ಕೆಲವು ಕ್ಷಣ ಕಣ್ಣುಮುಚ್ಚಿ ತೆರೆದರು. ‘ನೀವು ವ್ಯಾಪಾರಕ್ಕೆ ಆಯ್ಕೆ ಮಾಡಿಕೊಂಡ ಜಾಗದಲ್ಲಿ ದೋಷವಿತ್ತು ಹೇಮಚಂದ್ರರೇ. ಅದಕ್ಕೆ ಸರಿಯಾಗಿ ಬಲವಾದ ಕ್ಷುಧ್ರ ಮಾಟವೊಂದೂ ನಿಮ್ಮ ಮೇಲೆ ಪ್ರಯೋಗಿಸಲ್ಪಟ್ಟಿದೆ! ವ್ಯಾಪಾರ ಆರಂಭಿಸುವ ಮೊದಲು ನೀವು ಯಾರನ್ನಾದರೂ ಜ್ಯೋತಿಷಿಗಳನ್ನು ಸಂಪರ್ಕಿಸಿ ಸರಿಯಾದ ಸಲಹೆ ಸೂಚನೆ ಪಡೆದುಕೊಂಡು ಮುಂದುವರೆಯುತ್ತಿದ್ದರೆ ಹೀಗಾಗುತ್ತಿರಲಿಲ್ಲ. ಆದರೂ ಕಾಲ ಮಿಂಚಿಲ್ಲ ಬಿಡಿ. ನಿಮ್ಮ ತಾಪತ್ರಯಕ್ಕೆ ಪರಿಹಾರವಿದೆ. ನಾವು ಸೂಚಿಸುವ ಕೆಲವು ಪೂಜಾವಿಧಿಗಳನ್ನು ಭಕ್ತಿಯಿಂದ ನೆರವೇರಿಸಿ. ಆನಂತರ ನಾವು ತಿಳಿಸುವ ಶುಭಗಳಿಗೆಯಲ್ಲಿ ಅದೇ ವ್ಯಾಪಾರವನ್ನು ಬೇರೆ ಜಾಗದಲ್ಲಿ ಪುನರಾರಂಭಿಸಿ. ಎಲ್ಲವನ್ನೂ ವೃದ್ಧಿಸಿ ಕೊಡುವ ಜವಾಬ್ದಾರಿ ನಮ್ಮದು. ಚಿಂತಿಸಬೇಡಿ ಹೋಗಿಬನ್ನಿ!’ ಎಂದು ಅಭಯ ನೀಡಿದರು. ಅಷ್ಟು ಕೇಳಿದ ಹೇಮಚಂದ್ರನ ಕೊರಗು ದಿಢೀರ್ರನೆ ಮರೆಯಾಯಿತು. ‘ಖಂಡಿತಾ ನೆರವೇರಿಸುತ್ತೇನೆ ಗುರೂಜಿ. ಮುಕ್ಕಾಲು ಮುಳುಗಿದವನಿಗೆ ಚಳಿಯೇನು ಮಳೆಯೇನು? ಒಟ್ಟಾರೆ ನನ್ನನ್ನು ಕಾಪಾಡುವ ಜವಾಬ್ದಾರಿ ನಿಮ್ಮದು!’ ಎಂದು ನಮ್ರವಾಗಿ ಕೈಮುಗಿದವನು ಐನೂರರ ನೋಟೊಂದನ್ನು ತೆಗೆದು ಅವರ ಹರಿವಾಣದಲ್ಲಿಟ್ಟು ಹಿಂದಿರುಗಿದ. (ಮುಂದುವರೆಯುವುದು) ಗುರುರಾಜ್ ಸನಿಲ್
ಕನ್ನಡ ಸಾಹಿತ್ಯದಲ್ಲಿ ಅಂತರ್ಜಾಲ ಪತ್ರಿಕೆಗಳ ಪಾತ್ರ
ಕನ್ನಡ ಸಾಹಿತ್ಯವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಹಾಗೂ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಕಾರ್ಯವನ್ನು ಅಂತರಜಾಲ ಪತ್ರಿಕೆಗಳು ಮಾಡುತ್ತಿವೆ. ಅಲ್ಲದೇ ಅನೇಕ ಪರಿಚಯವೇ ಇಲ್ಲದ ಸಾಹಿತಿಗಳನ್ನು ಅವರ ಕೃತಿಗಳ ಮೂಲಕ ವಿಶ್ವದಾದ್ಯಂತ ವ್ಯಾಪಿಸಿರುವ ಕನ್ನಡಿಗರಿಗೆ ಗುರುತಿಸುವ ಕಾರ್ಯ ಈ ಅಂತರ್ಜಾಲ ಪತ್ರಿಕೆ ಮಾಡುತ್ತಿದ್ದು, ಕನ್ನಡ ಸಾಹಿತ್ಯವನ್ನು ಆಳವಾಗಿ ಅರಿಯಲು ನೆರವಾಗುತ್ತಿದೆ.
ಕನ್ನಡ ಸಾಹಿತ್ಯದಲ್ಲಿ ಅಂತರ್ಜಾಲ ಪತ್ರಿಕೆಗಳ ಪಾತ್ರ Read Post »
ವಾರ್ಷಿಕ ವಿಶೇಷ-2021
ವಾರ್ಷಿಕ ವಿಶೇಷ-2021 ಕನ್ನಡ ಸಾಹಿತ್ಯ ಮತ್ತು ಧರ್ಮ ಶಾಂತಲಾ ಮಧು ಕನ್ನಡದ ಮೊದಲ ಗ್ರಂಥವೆಂದು ಒಪ್ಪಿಕೊಳ್ಳಲಾದ `ಕವಿರಾಜಮಾರ್ಗ’ದಲ್ಲಿ `ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರಧರ್ಮಮುಮಂ’ ಎಂಬ ಚಿನ್ನದಂತಹ ಮಾತೊಂದಿದೆ. ಈ ಮಾತಿನ ಅರ್ಥ `ನಿಜವಾದ ಐಶ್ವರ್ಯ (ಕಸವರ) ಪರವಿಚಾರಗಳನ್ನು ಧರ್ಮಗಳನ್ನು ಸಹಿಸುವುದೇ ಆಗಿದೆ’ ಎನ್ನುವುದು. `ಅನ್ಯರ ವಿಚಾರಗಳನ್ನು ಧರ್ಮಗಳನ್ನು ಸಹಿಸುವುದೇ ನಿಜವಾದ ಸಂಪತ್ತು’ ಎನ್ನುವ ಈ ಸೂಕ್ತಿ ಕನ್ನಡನಾಡು ಧರ್ಮಗಳ ವಿಚಾರಗಳಲ್ಲಿ ಉದ್ದಕ್ಕೂ ತಾಳಿದ ನಿಲುವಿಗೆ ಬರೆದ ಒಂದು ವ್ಯಾಖ್ಯಾನದಂತಿದೆ, ಕರ್ನಾಟಕದ ಸಂಸ್ಕೃತಿಯ ವೈಶಿಷ್ಟ್ಯವೆಂದರೆ ಅದರ ಧರ್ಮ ಸಹಿಷ್ಣುತೆ. ಕನ್ನಡ ನಾಡು ಅನೇಕ ಧರ್ಮಗಳಿಗೆ ನೆಲೆಯಾದದ್ದಲ್ಲದೆ ಎಲ್ಲ ಧರ್ಮಗಳು ಜೊತೆಗೂಡಿ ವರ್ಧಿಸಲು ಅವಕಾಶ ಕಲ್ಪಿಸಿಕೊಡುತ್ತಾ ಬಂದಿರುವುದೇ. ಕರ್ನಾಟಕದಲ್ಲಿ ಪ್ರವರ್ಧಮಾನವಾದ ಮುಖ್ಯ ಧರ್ಮಗಳು ಜೈನ, ವೀರಶೈವ ಮತ್ತು ವೈಷ್ಣವ. ಕವಿ ಮತ್ತು ಕಾಲ ಪರಸ್ಪರ ಪೋಷಿತ ಮತ್ತು ಪೂರಕ, ಕಾಲದಿಂದ ತಾನೇನು ಪಡೆಯುತ್ತಾನೋ ಅದನ್ನು ಪರಿಷ್ಕರಿಸಿ, ವಿಸ್ತರಿಸಿ ಮಾರ್ಪಡಿಸಿ ಅಲಂಕರಿಸಿ ಕಾಲಕ್ಕೆ ಹಿಂದಿರುಗಿಸುತ್ತಾನೆ ಕವಿ, ಮಹಾಕವಿ ಕಾಲಕ್ಕೆ ಕೊಡುವುದೇ ಹೆಚ್ಚಾಗಿರುತ್ತದೆ. ಅಂತಹ ಕವಿಯ ಮೂಲಕ ಋತು ಶಕ್ತಿ ಕವಿ ಕೃತು ಶಕ್ತಿಯಾಗಿ ಸಮಾಜಕ್ಕೆ ಸಂಜೀವಿನಿಯಾಗುತ್ತದೆ. ಕವಿಗಳ ಕಾವ್ಯ ರಚನೆಯಲ್ಲಿ ಹಲವು ಮೂಲ ಪ್ರೇರಣೆಯನ್ನು ಗಮನಿಸಬಹುದು. ೧. ಕವಿ ಹುಟ್ಟಿ ಬೆಳೆದ ಪರಿಸರ. ಕವಿ ಶ್ರದ್ಧೆಯಿಂದ ಒಪ್ಪಿಕೊಂಡ ಪ್ರಮುಖವಾದ ಮತ-ಧರ್ಮ ನಂಬಿಕೆಗಳು. ೨. ಕವಿಗಳಿಗೆ ಜೀವನದುದ್ದಕ್ಕೂ ಆಶ್ರಿತ ಹಾಗೂ ಪ್ರೋತ್ಸಾಹ ಒದಗಿಸಿದ ರಾಜನ ಆಸ್ಥಾನಗಳು ಮತ್ತು ಕೃತಿಯ ವಸ್ತು ಹಾಗೂ ಭಾಷೆ ಮೇಲೆ ಪ್ರಬಲ ಪ್ರಭಾವವನ್ನು ಬೀರುತ್ತಾ ಬಂದ ಸಂಸ್ಕೃತ ಸಾಹಿತ್ಯ ಪರಂಪರೆ. ಇವು ಒಂದು ರೀತಿಯಲ್ಲಿ ಪ್ರೇರಣೆ ಮತ್ತೊಂದು ರೀತಿಯಲ್ಲಿ ಕವಿಗೆ ಆತಂಕ, ಸವಾಲು ಆಗಿರುವುದು ಮರೆಯುವಂತಿಲ್ಲ. ಧರ್ಮವೇ ಜೀವದ ಉಸಿರೆಂದು ಹೇಳಿಸಿಕೊಂಡು ಬಂದ ಭಾರತದಲ್ಲಿ ಎಲ್ಲಾ ಕಾವ್ಯ-ಕಲೆಗಳ ಮೂಲ ಸ್ಫೂರ್ತಿಯೇ ಧರ್ಮವಾಗಿದೆ. ಇದು ಕನ್ನಡ ಸಾಹಿತ್ಯಕ್ಕೂ ಯಥಾವತ್ತಾಗಿ ಅನ್ವಯಿಸುತ್ತದೆ. ಇಲ್ಲಿ ಧರ್ಮ ಎಂಬ ಮಾತು `ಮತ ಧರ್ಮ’ ಎನ್ನುವ ಅರ್ಥದಲ್ಲಿ ಇದೆ. ಹಾಗೆ ಮುಂಬರುವ ಕಾಲದಲ್ಲಿ ಮಾನವೀಯ ಧರ್ಮದ ಹೆಚ್ಚುಗಾರಿಕೆಯೂ ಕಾಣುತ್ತದೆ. ಮುಂಬರುವ ಸಾಹಿತ್ಯದ ಪ್ರಕಾರಗಳಲ್ಲಿ ಈ ಮಾನವೀಯ ಧರ್ಮದ ಹುಡುಕಾಟ ಬರಹದಲ್ಲಿ ಹೆಚ್ಚು ಸ್ವಾತಂತ್ರ ಮನೋಭಾವ ಅಂದರೆ ಮನಬಿಚ್ಚಿ ಹೇಳುವಿಕೆ ಕಾಣುತ್ತಿರುವುದು ಸಂತೋಷದಾಯಕ ಸಂಗತಿಯಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ೧೦ನೇ ಶತಮಾನ ಸುವರ್ಣ ಯುಗ ಎನ್ನಿಸಿಕೊಂಡಿದೆ. ಇಲ್ಲಿ ಮಹಾಕವಿಗಳಾದ ಪಂಪ, ಪೊನ್ನ, ರನ್ನರನ್ನು ನೆನಪಿಸಿಕೊಳ್ಳಬಹುದು. ಇವರುಗಳು ಕ್ರಮವಾಗಿ (ಪಂಪ) ಆದಿಪುರಾಣ, (ಪೊನ್ನ) – ಶಾಂತಿಪುರಾಣ, ರನ್ನ – ಅಜಿತನಾಥ ಪುರಾಣ ಎಂಬ ಧಾರ್ಮಿಕ ಕಾವ್ಯ ಹಾಗೆ (ಪಂಪ) ವಿಕ್ರಮಾರ್ಜುನ ವಿಜಯ, (ಪೊನ್ನ) ಭುವನೈಕ ರಾಮಾಭ್ಯುದಯ (ದೊರೆತಿಲ್ಲ) ಸಾಹಸಭೀಮವಿಜಯ (ರನ್ನ) ಎಂಬ ಲೌಕಿಕ ಕಾವ್ಯಗಳನ್ನು ಬರೆದರು. ಈ ಎಲ್ಲಾ ಕವಿಗಳು ಧಾರ್ಮಿಕ ಮತ್ತು ಲೌಕಿಕ ಕಾವ್ಯ ಬರೆದರೂ ಅಂದಿನ ಓದುಗರು ತೋರಿದ ಪ್ರತಿಕ್ರಿಯೆಯನ್ನು ಗಮನಿಸಿದರೆ ಧರ್ಮದ ಪ್ರಭಾವವೇ ಎತ್ತಿ ಹಿಡಿಯುತ್ತದೆ. ಲೌಕಿಕ ಕಾವ್ಯ ಪ್ರತಿಯನ್ನು ಉಳಿಸಿಕೊಳ್ಳುವಲ್ಲಿ ಉದಾಸೀನರಾಗಿದ್ದರು ಅನ್ನಿಸುತ್ತದೆ. ಈಗ ದೊರಕಿರುವ ಪ್ರತಿಗಳನ್ನು ನೋಡಿದರೆ ಉದಾ: ಪಂಪರ ವಿಕ್ರಮಾರ್ಜುನ ವಿಜಯ ಪ್ರತಿ ಸಿಕ್ಕಿರುವುದು ಮೂರು ರನ್ನನ ಗದಾಯುದ್ಧದ ಪ್ರತಿ ಕೇವಲ ಒಂದು ಒಂದೂವರೆ ಅದರೆ ಆದಿಪುರಾಣ, ಅಜಿತಪುರಾಣಗಳು ಸಾಕಷ್ಟು ದೊರಕಿದೆ. ಕವಿಯಾದವನು ಮೊಟ್ಟ ಮೊದಲಿಗೆ ತನ್ನ ಧರ್ಮಕ್ಕೆ ಕಾವ್ಯಮುಖೇನ ಅಭಿವ್ಯಕ್ತಿ ಕೊಡದೆ ಇದ್ದಾಗ ಆತನ ಕಾವ್ಯ ತಿರಸ್ಕೃತವಾದುದು ಇದೆ. ಇದಕ್ಕೆ ಉತ್ತಮ ಕಥೆಯ ಉದಾ: ಹರಿಹರ, ತನ್ನ ಸೋದರಳಿಯನಾದ ರಾಘವಾಂಕನನ್ನು ಶಿಕ್ಷಿಸಿದ ಪರಿ. ಹನ್ನೆರಡನೆಯ ಶತಮಾನ ವೀರಶೈವ ಧರ್ಮದ ಉತ್ಕೃಷ್ಟ ಕಾಲ ವಾಚನಕಾರರ ಧಾರ್ಮಿಕ ಕ್ರಾಂತಿಯ ನಂತರ ಬಂದ ಕವಿ ಹರಿಹರ-ರಾಘವಾಂಕ, ಶಿವ ಕವಿಯಾದ ಹರಿಹರ ಶಿವನನ್ನು ಶಿವಶರಣರನ್ನು ಕುರಿತು ಕಾವ್ಯ ಬರೆಯಬೇಕೇ ಹೊರತು ಮನುಜರ ಮೇಲೆ, ಕನಿಷ್ಟರ ಮೇಲೆ ಕಾವ್ಯ ಬರೆಯಬಾರದು ಎಂಬ ಧೋರಣೆಯನ್ನು ಎತ್ತಿ ಹಿಡಿದವನು. ರಾಘವಾಂಕ ಮೊದಲ ಕಾವ್ಯ ಬರೆದದ್ದು ‘ಹರಿಶ್ಚಂದ್ರ ಕಾವ್ಯ’ ಹೊನ್ನ ಹರಿವಾಣದಲ್ಲಿ ಇಟ್ಟು ಗುರುವೂ-ಸೋದರಮಾವನೂ ಆದ ಹರಿಹರನಲ್ಲಿ ಹೋದಾಗ, ಶಿವಶರಣರ ಕಥೆ ಅಲ್ಲ ಎಂಬ ಕಾರಣದಿಂದ ಅದನ್ನು ತಿರಸ್ಕರಿಸಿ ಎಡಗಾಲಿಂದ ಒದ್ದು ಕಳಿಸಿದನೆಂದು ರಾಘವಾಂಕ ನೊಂದು ಮುಂದೆ `ಶೈವ ಕೃತಿ ಪಂಚಕ’, ಸಿದ್ದರಾಮಚರಿತೆ, ಸೋಮನಾಥ ಚರಿತೆ, ಶರಭ ಚರಿತ್ರೆ, ವೀರೇಶ ಚರಿತ್ರೆ, ಹರಿಹರ ಮಹತ್ವ’ ಎಂಬ ಐದು ಕಾವ್ಯ ರಚಿಸಿದ ಎಂಬುದು ಒಂದು ಉಲ್ಲೇಖ. ಇಷ್ಟರಮಟ್ಟಿಗೆ ಧರ್ಮದ ಮುಷ್ಟಿಯಲ್ಲಿ ಸಾಹಿತ್ಯ, ಸಿಕ್ಕಿಕೊಂಡಿತು. ಹಾಗೇ ಮುಂದುವರಿದು `ಭಾಗವತ ಸಂಪ್ರದಾಯದಲ್ಲೂ ಇದೆ ಕತೆಯಾಯಿತು ಧಾರ್ಮಿಕ ಸಾಹಿತ್ಯ, ಭಕ್ತಿ ಸಾಹಿತ್ಯ, ಅನುಭಾವ ಸಾಹಿತ್ಯ’ ಎಂದು ಈ ಸಾಹಿತ್ಯವನ್ನು ಸ್ಥೂಲವಾಗಿ ಗುರುತಿಸಲಾಯಿತು. ಭಕ್ತಿ ಸಾಹಿತ್ಯ ಮತ್ತು ಅನುಭಾವ ಸಾಹಿತ್ಯ ಬರೆದವರಿಗೆ ಕೇವಲ ಧರ್ಮಶ್ರದ್ಧೆ ಮಾತ್ರವಲ್ಲ ಒಂದು ಬಗೆಯ ಆಧ್ಯಾತ್ಮಿಕ ಶ್ರದ್ಧೆ- ವೈಯಕ್ತಿಕ ಸಾಧನೆಯು ಮುಖ್ಯವಾಗಿತ್ತು. ಇಲ್ಲಿ ಕವಿ ಒಬ್ಬ ಸಾಧಕ ಕೂಡ, ವಚನಕಾರರಾದ ಬಸವಣ್ಣ, ಅಕ್ಕಮಹಾದೇವಿ, ಹಾಗೇ ದಾಸಪರಂಪರೆಯ ಪುರಂದರ ದಾಸರು ಹಾಗು ಕನಕದಾಸರುಗಳನ್ನು ನೆನಪಿಸಿಕೊಳ್ಳಬಹುದು. ಶತಮಾನದ ಉದ್ದಕ್ಕೂ ಧರ್ಮದ ನಿಯಂತ್ರಣಕ್ಕೆ ಒಳಪಟ್ಟ ಕನ್ನಡ ಸಾಹಿತ್ಯ. ಅದರಿಂದ ಲಾಭ ಪಡೆಯಿತೊ ಅಥವ ನಷ್ಟ ಪಡೆಯಿತೊ ಎನ್ನುವುದು ಒಂದು ದೊಡ್ಡ ಪ್ರಬಂಧದ ವಸ್ತು. ಸಂಕ್ಷಿಪ್ತವಾಗಿ ಹೇಳುವುದಾದರೆ ಓದುವುದು ಕೇವಲ ಪುಣ್ಯ ಸಂಪಾದನೆಗೆ ಎಂಬ ನಂಬಿಕೆಯಿಂದ ವೈಚಾರಿಕತೆಯ ಬೆಳವಣಿಗೆಗೆ ಅವಕಾಶ ಕಡಿಮೆಯೇ ಆಯಿತು. ಅಭಿವ್ಯಕ್ತಿಗೆ ಅವಕಾಶವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಸುದೈವದಿಂದ ಆಧುನಿಕ ಸಾಹಿತ್ಯ ರಚನೆಯಲ್ಲಿ ಇಂದಿನ ಕವಿಗಳಿಗೆ ಹಿಂದಿನ ಕವಿಗಳಂತೆ ಮತ ಧರ್ಮ ನಿರ್ಬಂಧನೆ ಇಲ್ಲ. ಅಷ್ಟರಮಟ್ಟಿಗೆ ಇಂದಿನ ಸಾಹಿತ್ಯ ಸಾರ್ವತ್ರಿಕವಾಯಿತು ಎನ್ನಬಹುದು. ಮತ ಧರ್ಮದ ಸ್ಥಾನವನ್ನು ಇಂದು ವಿಜ್ಞಾನ ವೈಚಾರಿಕತೆ ಆಕ್ರಮಿಸಿತು. ಅಲ್ಲದೆ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಗಾಂಧಿ, ಅರವಿಂದರಂಥ ಮಹಾವ್ಯಕ್ತಿಗಳ ವಿಚಾರಧಾರೆಯಿಂದ ಹೊಸ ಮಾನವೀಯ ಧರ್ಮವೊಂದು ರೂಪುಗೊಂಡು ಸೌಂದರ್ಯಪ್ರಿಯತೆ ಜೀವನಪ್ರೀತಿ, ವಿಶ್ವಪ್ರಜ್ಞೆ ಇವುಗಳು. ಕವಿಯ ಧರ್ಮಶ್ರದ್ಧೆಯಾಗುತ್ತಿರುವುದು ಸಾಹಿತ್ಯ ವೈವಿಧ್ಯತೆಗೂ ಮತ್ತು ವಿನೂತನತೆಗೂ ಕಾರಣವಾಗಿರುವುದು ಸಂತೋಷದಾಯಕ ಸಂಗತಿ.
ವಾರ್ಷಿಕ ವಿಶೇಷ-2021 Read Post »
ವಾರ್ಷಿಕ ವಿಶೇಷ-2021
ಭಾಷೆಯೊಂದು ತನ್ನ ಗರ್ಭದಲ್ಲಿ ಅಡಗಿಸಿಕೊಂಡ ಸಾಹಿತ್ಯ ವಿಚಾರಧಾರೆಗಳು ಸಾರ್ವಕಾಲಿಕವಾದವು. ಧರ್ಮಜಾತಿಗಳನ್ನು ಮೀರಿ ಸಾಹಿತ್ಯ ಚರಿತ್ರೆಯ ಕಾಲಾನುಕ್ರಮಣಿಕೆಯ ಭಾಗವಾಗಿಯೇ ಜೈನ,ಶೈವ, ವೈದಿಕ ಸಾಹಿತ್ಯವೂ ವೈವಿಧ್ಯಮಯವಾಗಿ ಛಂದಸ್ಸು ಅಲಂಕಾರಗಳೊಂದಿಗೆ ಅನೂಚಾನವಾಗಿ ಬಂದಿರುವುದು ಕನ್ನಡ ಸಾಹಿತ್ಯದ ಹೆಗ್ಗಳಿಕೆ.
ವಾರ್ಷಿಕ ವಿಶೇಷ-2021 Read Post »
ವಾರ್ಷಿಕ ವಿಶೇಷ-2021
ಈ ಅನೇಕ ಬಗೆಯ ಕವಿಗಳಿಗೆ, ಲೇಖಕರಿಗೆ, ಸಾಹಿತ್ಯ ಓದುಗರಿಗೆ ವೇದಿಕೆ ನೀಡಿದ್ದು ಈ ಅಂತರ್ಜಾಲದ ಪತ್ರಿಕೆಗಳು,ಸಮಾನ ಆಸಕ್ತ ಸಮುದಾಯಗಳ ಬ್ಲಾಗ್ಗಳು, ಇ- ವೃತ್ತ ಪತ್ರಿಕೆಗಳು ಇವುಗಳ ಸೇವೆ ಅಷ್ಟಿಟ್ಟಲ್ಲ. ಜನರಿಗೆ ಧೈರ್ಯ, ಜಾಗೃತಿ ಮೂಡಿಸುವುದರ ಜೊತೆ ಜೊತೆಗೆ ಅವರಲ್ಲಿ ವಿಭಿನ್ನ ಆಸಕ್ತಿ ಮೂಡಿಸುತ್ತ ಬಂದಿತು
ವಾರ್ಷಿಕ ವಿಶೇಷ-2021 Read Post »
ಕಣ್ಣಿಲ್ಲದ ಲೋಕಕ್ಕೆ ಕಣ್ಣು ಕೊಟ್ಟ ಡಾಕ್ಟರು
ಕೃತಿ: -‘ಮುಟ್ಟಿಸಿಕೊಂಡವರು:
ಡಾ. ಬಿ.ಎಂ. ತಿಪ್ಪೇಸ್ವಾಮಿ ನೆನಪಿನ ಪುಸ್ತಕ’ (1998)
ಸಂಪಾದಕರು: -ಬಿ.ವಿ. ವೀರಭದ್ರಪ್ಪ, ಬಿ.ಟಿ. ಜಾಹ್ನವಿ
ಕಣ್ಣಿಲ್ಲದ ಲೋಕಕ್ಕೆ ಕಣ್ಣು ಕೊಟ್ಟ ಡಾಕ್ಟರು Read Post »








