ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮುಗಿಯದ ಪಯಣ

ಕವಿತೆ ಮುಗಿಯದ ಪಯಣ ವೀಣಾರಮೇಶ್ ಸಾವೇ ಕಾಡದಿರು ನನ್ನಮುಗಿದಿಲ್ಲ ಇನ್ನೂ ಬದುಕುವ ಹಲವುಕಾರಣ ಮನಸ್ಸಿಗಿದೆ ಇನ್ನೂ ದ್ವಂದ್ವಅರ್ಥ ಆಗದಮುಗ್ದ ಮನಸ್ಸುಗಳ ಜೊತೆ ಯುದ್ಧ ,.ಆಸೆ ಆಮಿಷಗಳಕತ್ತು ಹಿಸುಕಿ ಕಟ್ಟಬೇಕಿದೆನನ್ನ ಸೌಧಹೇಗೆ ಮುಗಿಯುವುದುನನ್ನ ಪಯಣನನ್ನ ಜೇಬಿನ್ನೂ ಭಣ ಭಣ ತಡಕಾಡಿದರೂ ಸಿಗದು ಕಾಂಚಾಣ ಪಾಪ ಪ್ರಜ್ಞೆಗಳು ಸುತ್ತುವರಿದು,ಮೋಸ,ಭ್ರಷ್ಟಾಚಾರ ದಿಕ್ಕು ತಪ್ಪಿಸಿಭಾವನೆಗಳೆಲ್ಲ ಸತ್ತು ಹೆಣವಾಗಿದೆ ನೀನು ಮತ್ತೆ ಕಾಡದಿರುಸಾವೇ, ನಾನಿಲ್ಲಿ ಸುಟ್ಟುಕರಕಲಾಗಿದ್ದೀನಿನನ್ನ ದಾರಿಗೆ ಅಡ್ಡ ಬರಬೇಡ ಎಲ್ಲದಕ್ಕೂಹೇಳುವೆ ಸಕಾರಣ

ಮುಗಿಯದ ಪಯಣ Read Post »

ಕಾವ್ಯಯಾನ

ಸ್ಮಿತಾಭಟ್ ಕಾವ್ಯಗುಚ್ಛ

ಸ್ಮಿತಾಭಟ್ ಕಾವ್ಯಗುಚ್ಛ ನಿರಂತರ ಈಗೀಗ ಒಲವಾಗುವದಿಲ್ಲಅವನ ಮೇಲೆಮುನಿಸು ಕೂಡಾ,, ಹೇಗಿದ್ದೀ ಎಂದು ಕೇಳದಿರೂಕೇಳದೇ ಹೋದರೂಅಂತಹ ವ್ಯತ್ಯಾಸವೇನಿಲ್ಲ, ಸಿಡಿಮಿಡಿ ಬಹಳ-ದಿನ ಉಳಿಯುವುದಿಲ್ಲಪ್ರೀತಿ ಆಗಾಗ-ಹುಟ್ಟಿದ್ದು ಗೊತ್ತೇ ಆಗುವದಿಲ್ಲ. ಇಣುಕಿಣುಕಿ ನೋಡುವ ರಸಿಕತೆಯಿಲ್ಲತಿರುಗಿ ನೋಡುವ ಆತುರವೂ ಇಲ್ಲಉಪಸ್ಥಿತಿ ಅನುಪಸ್ಥಿತಿಯಲ್ಲಿಬದಲಾವಣೆ ಇಲ್ಲ. ಎತ್ತಿಟ್ಟ ಸಾಲೊಂದುಓದದೇ ಹೋಗುತ್ತಾನವ,ಬರೆಯದೇ ಇಟ್ಟ ಹಾಡಿಗೆರಾಗ ಹುಡುಕಿ ಗುನುಗಿಕೊಳ್ಳುವಾಗಕದ್ದು ಕೇಳುವ ನವಿರುಅರಿತೂ ಅರಿಯದೇ ಆತುಕೊಳ್ಳುವ ಬೆರಗು ನೀ ನನ್ನೊಳಗಿರುವದಕ್ಕೆನಾ ನಿನ್ನೊಳಗಿರುವದಕ್ಕೆಸಾಕ್ಷಿ ಆಗಾಗ ಸಿಗುತ್ತದೆಮತ್ತದು ಅಧಿಕಾರವೂಮಾತೊಗೆದು ಹೋಗುವಾಗ ಸಣ್ಣ ಮೌನಮರಳಿ ಬರುವಾಗ ಎಲ್ಲ ದಮನ ಸವೆದ ದಾರಿಯಲೂ ಗರಿಕೆತಲೆಯೆತ್ತುತ್ತಲೇ ಇರುತ್ತದೆ.ಸಂಪೂರ್ಣ ಸಮ್ಮೋಹನಗೊಂಡ ಹಾಡೊಂದುಆಗಾಗ ಅಪರಿಚಿತವಾಗುತ್ತಲೇ ಇರುತ್ತದೆ ನೋವುಗಳಿಗೆ ಒಡ್ಡಿಕೊಂಡಷ್ಟೂಗಟ್ಟಿಯಾಗುತ್ತೇವೆಂಬುದುನಾವೇ ಗೀಚಿದ ಬರಹಕ್ಕೆ ಶರಾ ಬರೆದಂತೆ. ಎಂದೂ ಮುಗಿಯದ ನರಳಿಕೆಗೆಅಳುವ ಮನಸಿಗೂ ಸಣ್ಣ ಅಸಹ‌ನೆಸಹಿಸಿದಷ್ಟೂ ಸಹನೆ ಜಾಸ್ತಿ ಹೌದುಸೀದು ಹೋಗಿದ್ದು ಮಾತ್ರ ಮನಸು.. ಶಾಂತ ಕೊಳದಲಿ ಕಲ್ಲೊಗೆದುಇಣುಕುವ ಪ್ರವೃತ್ತಿ ಇಂದು ನಿನ್ನೆಯದಲ್ಲ.ಮೌನ ಕೊಲ್ಲುವ ಹತ್ಯಾರ;ಮಾತು ಇರಿಯುವ ಹತ್ಯಾರ; ಹೂತಿಟ್ಟ ಕನಸಿಗೆ ಕಾಮನಬಿಲ್ಲು-ಕಟ್ಟುವಾಗ ದಟ್ಟ ಮೋಡ;ಸಿಗದ ನಕ್ಷತ್ರಕ್ಕೆ ದಿನವೂ ಎಣಿಕೆ,ಬಾವಿಯಲಿ ಬಿದ್ದ ಚಂದ್ರನಿಗೆ ಮುಗಿಯದ ಹರಕೆ. ಎತ್ತಿಟ್ಟುಕೊಂಡಿದ್ದೆಲ್ಲ ಆಪತ್ತಿನೊಳಗಿಲ್ಲ.ಆಪ್ತಭಾವದೊಳಗೆ ಬರದೇ ಹೋದದ್ದು!?ಸಹಿಸಿಕೊಂಡಿದ್ದೂ ಸಹಿತವಲ್ಲ.ಅಳತೆಗೋಲೇ ಇಲ್ಲದ ಅನಾದರಚುಕ್ಕಿ ಇಟ್ಟಾಗಲೇ ಮುಗಿದು ಬಿಡಬೇಕು ಸಾಲು. ಮುಳ್ಳು ಕಿತ್ತಮೇಲೂ ಚುಚ್ಚುವ ನೋವು,ಬೇಕಂತಲೇ ಹಾಕಿಸಿಕೊಂಡ ಹಚ್ಚೆ,ಅಳಿದೂ ಉಳುಯುವ ತೊಳಲಾಟಕೊಡವಿಕೊಳ್ಳಲೂ ಒಂದು ಘಟ್ಟಿತನ ಬೇಕು.. ಕೂಡುವ ದಾರಿ* ವಿಶಾಲವಾಗಿ ಹರಡಿದ ಮರದ ಬುಡದಲ್ಲಿದಾರಿಗಳು ಸಂದಿಸುತ್ತಿದ್ದವು.ನಿತ್ಯ ಬರುವವರೂ ಮರದ ಸುತ್ತ ಕುಳಿತುದಣಿವಾರಿಸಿಕೊಂಡು ಮುಂದುವರಿದುಸಾಗುತ್ತಿತ್ತು ದಾರಿ. ಎಷ್ಟೊಂದು ಸಮಸ್ಯೆ ಗಳನ್ನು ಕೇಳುತ್ತಿತ್ತುಆ ಮರ ಮತ್ತು ಅದಕ್ಕಾತುಕೊಂಡ ದಾರಿ! ನನಗಾಗಿ ಕಾಯುತ್ತಿದ್ದ ನೀನು.ನಿನಗಾಗಿಯೇ ಕಾಯುತ್ತಿದ್ದ ನಾನು.ಈ ಕೂಡುವ ದಾರಿಯಲಿ ಕೂಡದೇ ಸಾಗಿಸಂಧಿಸುವ ದಿನಗಳು ಹುಟ್ಟಿ ಕೊಳ್ಳಲೇ ಇಲ್ಲ!ಅಲ್ಲಿಯೇ ಹುಟ್ಟಿ ಗರಿ ಗೆದರಿದ ಭಾವಗಳಿಗೆಗೂಡಿನಲಿದ್ದ ಮೊಟ್ಟೆಯಷ್ಟು ಬೆಚ್ಚಗಿನ ಭಾವ. ಈಗಲ್ಲಿ ಕವಲುಗಳು ಬಹಳ ಒಡೆದಿದೆ.ಗುರುತುಗಳಿಗೆಲ್ಲ ತೇಪೆ ಹಾಕಿದಂತೆಮೆತ್ತಿಕೊಂಡ ಟಾರುಮರಕ್ಕೆ ಕೆತ್ತಿದ ಗೆರೆಗಳು ನಿಧಾನವಾಗಿ ಮುಚ್ಚಿತ್ತಿದೆ.ನೆಲಕ್ಕೆ ಅಂಟಿಕೊಂಡ ಮೊಟ್ಟೆಯ ಜೀವಸಂಧಿಸುವ ಕಾಲುದಾರಿಬೆನ್ನು ಮಾಡಿ ನಿಂತ ಭಾವವೃತ್ತವೊಂದು ಸುತ್ತುವರಿದುಎತ್ತ ಸಾಗಿದರೂಒಂದು ದಾರಿ ಚಾಚಿಕೊಳ್ಳುತ್ತದೆ. ಮತ್ತದರ ಗಮ್ಯನಡೆದೇ ಅರಿಯಬೇಕಿದೆ! ***************************************** , **************************************************

ಸ್ಮಿತಾಭಟ್ ಕಾವ್ಯಗುಚ್ಛ Read Post »

ಕಾವ್ಯಯಾನ

ತೇಜಾವತಿ ಕಾವ್ಯಗುಚ್ಚ

ತೇಜಾವತಿ ಕಾವ್ಯಗುಚ್ಚ ಕಾರಣ ಕೇಳದಿರಿ ನೀವು.. ! ಸಪ್ಪೆ ಮೊಗದ ಹಿಂದಿನ ಕಾರಣ ಕೆಳದಿರಿ ನೀವುದುಃಖದ ಕಟ್ಟೆಯೊಡೆದುನೋವಿನ ಕೋಡಿಹರಿದುಕಂಬನಿಯ ಪ್ರವಾಹ ಹರಿದೀತು….! ಕ್ಷೇಮ ಕುಶಲೋಪರಿಯ ವಿಚಾರಿಸದಿರಿ ನೀವುಮುಳ್ಳುಹಾಸಿನ ಮೇಲೆ ನಡೆದುಬೆಂಕಿಯ ಕೆನ್ನಾಲಿಗೆಯಲಿ ಸಿಲುಕಿಅರೆಬೆಂದಿರುವ ಪಾದಗಳಲಿ ನೆತ್ತರು ತುಳುಕಾಡೀತು…! ಭವಿಷ್ಯದ ಗುರಿಯೇನೆಂದು ಪ್ರಶ್ನಿಸದಿರಿ ನೀವುತಮದ ಕೂಪದಲಿ ಮಿಂದುಕಣ್ಣೆದುರು ಹರಿದಾಡಿದ ನೆರಳು ಕಂಡುಮನಸು ಮತಿಭ್ರಮಣೆಗೆ ಒಳಗಾದೀತು.. ! ಕಲ್ಪನೆಯಾಚೆಗಿನ ವಾಸ್ತವವ ನೆನಪಿಸದಿರಿ ನೀವುಭರವಸೆಯ ಬೆಟ್ಟ ಕುಸಿದುನೆಮ್ಮದಿಯ ಕಣಿವೆ ಸವೆದುಕಂಡ ಕನಸುಗಳು ಕೊಚ್ಚಿ ಹೋದಾವು…! ಎಷ್ಟು ದಿನ ಅಂತ ಉಪ್ಪಿನಕಾಯಿ ಆಗಿರಲಿ ನಾನು? ಮೂಗಿಗೆ ಕಮ್ಮನೆ ಪರಿಮಳ ಬಂದೊಡನೆ ಬಾಯಲ್ಲಿ ನೀರೂರಿ ನಾಲಗೆ ಚಪ್ಪರಿಸಿ ನೆಕ್ಕುವರು…! ಉಪ್ಪಿನಕಾಯಿ ಊಟದ ರುಚಿಗಷ್ಟೇ ಹೊರತು ಊಟಕ್ಕಲ್ಲ..ಉಪ್ಪಿನಕಾಯಾಗಿ ನಾನಿಲ್ಲದಿದ್ದರೂ ಹೊಟ್ಟೆ ತುಂಬಾ ಉಣಬಹುದಲ್ಲದೆಊಟವೇ ಇಲ್ಲದಿದ್ದರೆ..?! ಉಪ್ಪಿನಕಾಯಾಗುವ ಕ್ಷಣಿಕ ಕೀರ್ತಿಗೆ ನಾನೇಕೆ ಭಾಜನವಾಗಲಿ..?ಒಪ್ಪತ್ತಿಗಾದರೂ ಊಟವಾಗಬೇಕು ನಾನುಉಂಡ ಕರುಳಿಗೆ ತೃಪ್ತಿ ನೀಡಬೇಕು ಬಹುಕಾಲದವರೆಗೆ. ರುಚಿಯೆಂದು ಅತಿಯಾಗಿ ಉಪ್ಪಿನಕಾಯನ್ನು ಸೇವಿಸಿದೆಯೋಬಿಪಿ ಏರುವುದು ಗ್ಯಾರಂಟಿ.ಜೊತೆಗೆ ಸರಣಿ ರೋಗರುಜಿನಗಳೂ ಫ್ರೀ.. ಬರಿದೇ ಊಟವಾದರೆಸ್ವಲ್ಪಮಟ್ಟಿಗಾದರೂ ಅರೋಗ್ಯ ವೃದ್ಧಿಸುವುದು ಮಿಂಚಿ ಮರೆಯಾಗುವ ಮಿಂಚುಹುಳಕ್ಕಿಂತಮಾಗಿದ ರಸಭರಿತ ಹಣ್ಣಾಗಬೇಕು ನಾನು..ನನ್ನ ಜೀವನ ಸಾರ್ಥಕವಾಗಬೇಕು ಖಗ ಮೃಗ ಹದ್ದು ಗಿಡುಗಗಳ ಕಾಟದ ಆರ್ಭಟದಲ್ಲಿಮಿಡಿಗಾಯಿ ಬಲಿಯುವುದಾದರೂ ಹೇಗೆ?ಹೌದು.. ನಾನೀಗ ಅವಿತು ಕೂರಲೇಬೇಕುಎಲೆಯ ಮರೆಯೊಳಗೆ ಅನಿವಾರ್ಯವಾಗಿ ಲೋಕಕ್ಕೆ ಕಣ್ಣಾಗಬೇಕಾದ ಹೆಣ್ಣಾಗಿರುವನಾನಂತೂ ಉಪ್ಪಿನಕಾಯಿ ಆಗಲಾರೆ ಬಿಡಿ..,ಹೂ ಹೀಚಾಗಿ ಕಾಯಾಗಿ ಬಲಿತುಮಾಗಿದ ಸತ್ವಯುತ ಹಣ್ಣಾಗಬಯಸುವೆರಸಪುರಿ ಮಾವು ನಾನು….. !

ತೇಜಾವತಿ ಕಾವ್ಯಗುಚ್ಚ Read Post »

ಕಾವ್ಯಯಾನ

ನಿನ್ನ ನಿರೀಕ್ಷೆಯಲ್ಲೇ..

ಕವಿತೆ ನಿನ್ನ ನಿರೀಕ್ಷೆಯಲ್ಲೇ.. ನೀ.ಶ್ರೀಶೈಲ ಹುಲ್ಲೂರು ಜೊತೆಯಿದ್ದವರೆಲ್ಲಹೋದರು ಮುಂದೆ ಮುಂದೆನಾನುಳಿದೆ ನಿನ್ನ ನಿರೀಕ್ಷೆಯಲ್ಲೇ…ನೀನು ಬಂದೇ ಬರುವೆ ಎಂಬಭಾಷೆ ಇತ್ತಲ್ಲ ಹೇಗೂ.. ನಿರ್ಗಮಿಸಿದ ದಿನಕರಇಣುಕಿದ ಚಂದ್ರ ನೀಲಾಗಸದಿನಕ್ಷತ್ರಗಳೆಲ್ಲ ಸಾಕ್ಷಿಯಾದವುಮಿನುಗಿತು ಬೆಳ್ಳಿಚುಕ್ಕಿಯೂಹುಂಜಗಳೆಲ್ಲ ಕೂಗು ಹೊಡೆದವುಕೋಗಿಲೆಯ ಕುಹೂ ಕುಹೂಆಗಲೂ ನಾ ನಿನ್ನ ನಿರೀಕ್ಷೆಯಲ್ಲೇ.. ದೇವ , ದೇವಲೋಕದಯೆ ತೋರಲಿಲ್ಲನಿಜಕ್ಕೂ ನೀ ಬರಲೇ ಇಲ್ಲಇಳೆಯಲಿ ಮೈದಳೆಯಿತುಹೊಸತು ಹೊಂಬೆಳಕುನಿನ್ನ ನೆನಪಲಿ ಮೊಳೆತುಕುಡಿಯೊಡೆದವು ಕಂಬನಿ ತುಂಬಿದೆದೆಯ ಶಿಖರಾಗ್ರದ ಮೇಲಿಂದಿಳಿದ ಕಣ್ಣಹನಿ ಕಣಿವೆಯ ದಾಟಿನೆಲವನಪ್ಪಿತು ಥಟ್ಟನೆಎದೆ ಮೇಲೊರಗಿದಸೆರಗಿಗೂ ತೇವ ಭಾಗ್ಯಆಗಲೂ ನೀನು ಬರಲಿಲ್ಲ ಆಗಸದಿ ಹೊಳೆಯತೊಡಗಿತು ಮಿಂಚು ಫಳಫಳನಡುಗತೊಡಗಿತುಭೂಮಿ ಬಾನು ಗಡ ಗಡಅಷ್ಟ ದಿಕ್ಕುಗಳಲೂಕಿವಿಗಡಚಿಕ್ಕುವ ಸದ್ದು ನೀರಿನ ಹನಿಗಳೊಂದಿಗೆಆಲಿಕಲ್ಲುಗಳ ಸುರಿಮಳೆಬಿರುಗಾಳಿಗೆ ನಡು ಮುರಿದುಕೊಂಡವು ಟೊಂಗೆಗಳುಆಗಲೂ ಸಹ ನಾನಿನ್ನ ನಿರೀಕ್ಷೆಯಲ್ಲೇ.. ಜೋರಾದ ಗಾಳಿ ಮಳೆಗೆಕಪ್ಪರಿಸಿ ಬೀಳತೊಡಗಿದವುನೆನೆದ ಗೋಡೆಗಳು ಧೊಪ್ಪನೆತುಂಬತೊಡಗಿತು ನೀರುಹೊಲ ಗದ್ದೆ ತೋಟಗಳಲ್ಲಿನದಿಗೂ ಪ್ರಳಯದ ಮಹಾಪೂರ ದೇವ,ದೇವಲೋಕದಯೆ ತೋರಲಿಲ್ಲ ಆಗಲೂ..ನನ್ನ ಕಾಲಡಿಯ ನೆಲಕುಸಿಯತೊಡಗಿತುಮೆಲ್ಲ ಮೆಲ್ಲಗೆ.. *************************************

ನಿನ್ನ ನಿರೀಕ್ಷೆಯಲ್ಲೇ.. Read Post »

ಕಾವ್ಯಯಾನ

ಕವಿತೆಯೆಂದರೆ…

ಕವಿತೆ ಕವಿತೆಯೆಂದರೆ… ವಿದ್ಯಾಶ್ರೀ ಎಸ್ ಅಡೂರ್ ಕವಿತೆಯೆಂದರೆ ಮನದೊಳಗೊಂದುಚುಚ್ಚುವ ನೋವು….ಕವಿತೆಯೆಂದರೆ ಉಕ್ಕಿಹರಿವಮನಸಿನ ನಲಿವು…. ಕವಿತೆಯೆಂದರೆ ಮೌನಮನಸಿನಸ್ವಚ್ಚಂದ ಆಕಾಶಕವಿತೆಯೆಂದರೆ ಗಿಜಿಗುಡುವಏಕತಾನತೆಯ ಆಕ್ರೋಶ ಕವಿತೆಯೆಂದರೆ ಸುಮ್ಮನೆನಿಡುಸುಯ್ದ ನಿಟ್ಟುಸಿರುಕವಿತೆಯೆಂದರೆ ನೀರು-ಗೊಬ್ಬರಹಾಕಿ ಬೆಳೆಸಿದ ಹಸಿರು ಕವಿತೆಯೆಂದರೆ ರಂಗುರಂಗಿನಬಣ್ಣ ಬಣ್ಣದ ಕಾಮನಬಿಲ್ಲುಕವಿತೆಯೆಂದರೆ ಗಾಢಾಂಧಕಾರದಿಬಿಡುಗಡೆಯ ಸೊಲ್ಲು ಕವಿತೆಯೆಂದರೆ ಮೌನಮನಸ್ಸಿನ ಟಿಪ್ಪಣಿಕವಿತೆಯೆಂದರೆ ಕೂಗಿ ಕರೆಯುವಹಾರಿ ಸಾರುವ ಪುರವಣಿ ಕವಿತೆಯೆಂದರೆ ಜಗಕ್ಕೆ ಬೆನ್ನು ಮಾಡಿಉಪ್ಪಿ ಅಪ್ಪಿದ ಮೌನಕವಿತೆಯೆಂದರೆ ಅಂಗೈಯಲ್ಲಿಮೊಗೆಮೊಗೆದು ಅನುಭವಿಸುವ ಜೀವನ ಕವಿತೆಯೆಂದರೆ ಹೆಪ್ಪುಗಟ್ಟಿದಭಾವಗಳ ಕಾರ್ಮುಗಿಲುಕವಿತೆಯೆಂದರೆ ಧುಮ್ಮಿಕ್ಕಿ ಸುರಿಯುವಮನಸಿನ ದಿಗಿಲು ಕವಿತೆಯೆಂದರೆ ಬಿದ್ದಾಗಆಸರೆ ಕೊಡುವ ನೆಲಕವಿತೆಯೆಂದರೆ ಸದಾ ಹಸಿರುತೆನೆಗಳಿಂದ ತೊಯ್ದಾಡುವ ಹೊಲ ಕವಿತೆಯೆಂದರೆ ಮನದ ತಮ ಕಳೆಯಲುನಾನೇ ಹಚ್ಚಿದ ದೀಪಕವಿತೆಯೆಂದರೆ ಬಗೆ ಬಗೆಭಾವದ ಬಗೆಬಗೆ ರೂಪ ಕವಿತೆಯೆಂದರೆ ನನ್ನ ಸದಾಪೊರೆವ ಅಮ್ಮನ ಮಡಿಲುಕವಿತೆಯೆಂದರೆ ಭಾವದ ಕೂಸುಮಲಗಿರುವ ತೂಗುವ ತೊಟ್ಟಿಲು ********************************************

ಕವಿತೆಯೆಂದರೆ… Read Post »

ಕಾವ್ಯಯಾನ

ಸಂಗಾತಿ ಬುದ್ದ

ಕವಿತೆ ಸಂಗಾತಿ ಬುದ್ದ ನಳಿನ ಡಿ ಬುದ್ಧನಿಗೊಂದು ಪ್ರೇಮದ ಕೋರಿಕೆ ಸಲ್ಲಿಸಿದ್ದೆ,ಒಪ್ಪಿರುವ ಎನಿಸಿದಾಗ,ಸುಖವ ಉಂಡು ಹೃದಯ ಉಬ್ಬಿಹೋಗಿ ಮನೆಗೆ ಮರಳಿದ್ದೆ.. ಕಡೆಗೋಲು ಕಡೆದು ಬೆಣ್ಣೆ ಎತ್ತಿಡುವಾಗ,ಬುದ್ಧ ಬಂದಿದ್ದ ಬಾಲಕನಾಗಿ,ಅಂಗಳದಿ ಸಗಣಿ ಸಾರಿಸಿ ರಂಗೋಲಿ ಚುಕ್ಕಿ ಇಡುವಾಗ,ಬುದ್ಧನಿದ್ದ ಸಾಲು ಸಾಲುಗಳ ಬಣ್ಣಗಳಲಿ,ನಡುವೆ ಆಯಾಸದಿ ನಿದ್ದೆಎಳೆದೊಯ್ದಾಗ,ತಂಪು ಹಳ್ಳದ ಏರಿಯ ಮೇಲೆಕರೆದು ಕೂಗಿದಾಗ ಹೇಳಿದಂತಾಯ್ತು ‘ಸಿಗು ಆಮೇಲೆ’..ಹಣಹಣಿಸಿ ಸೆಣಸುತಿರುವ ಉಭಯ ಬಣಗಳ ನಡುವೆಇರುವಾಗಲೇ ಬುದ್ಧ ಕೈಹಿಡಿದು ಕರಗಿಸಿದ, ಪ್ರೇಮಮಯಿ, ಕ್ಷಮೆಯಾಧರಿತ್ರಿ ಈ ಸುಂದರಿ ಎಂದವರೆಲ್ಲಾ ಎದುರೇ ಒಂದಾಗಿ ಅತ್ತು ಕರೆದು ಮಾಯವಾದರು,ಜನನಿಬಿಡ ಹಾದಿಗುಂಟ ಕೈ ಬೀಸುತಲೇ ಇರಲು, ಕಾಡುಗುಡ್ಡದ ನಡುವೆ, ಅಲೆಮಾರಿ ಹಕ್ಕಿಯಾಗಲುರೆಕ್ಕೆಯಾದವ ಬುದ್ಧ,ಈಶಾನ್ಯ ಗಾಳಿಗೆ ಒಡ್ಡಿದ ದೀಪವೆಂದುಕೊಂಡಾಗ, ಎರಡು ಹಸ್ತಗಳ ನಡುವೆ ದೀವಿಗೆ ಹಿಡಿವವನು,ನಾ ಹುಡುಕಿದಾಗ ಸಿಕ್ಕಿದ ಬುದ್ಧನ ಪ್ರಮಾಣದಂತೆ ಅನುರಣನ ಅವನ ಇರುವಿಕೆ… **********************

ಸಂಗಾತಿ ಬುದ್ದ Read Post »

ಕಾವ್ಯಯಾನ

ಯಾರೊಬ್ಬರಾದರೂ…

ಕವಿತೆ ಯಾರೊಬ್ಬರಾದರೂ… ಅನುರಾಧಾ ಪಿ. ಎಸ್ ಒಂದಷ್ಟು ಸಾಲು ಹುಟ್ಟುತ್ತವೆ ಅವರ ಹೆಸರಲ್ಲಿ,ಗಾಳಿಗೊಪ್ಪಿಸುತ್ತೇನೆ.ವಿಳಾಸ ಹುಡುಕಿ ತಲುಪಿಸುತ್ತದೆ ಗಾಳಿಯೂ ಅಷ್ಟೇ ನಿಷ್ಠೆಯಲ್ಲಿ. ಅವರ ಕಣ್ಣು ಬೆಳಗುತ್ತವೆ,ಆ ಕ್ಷಣ ನಾನು ಹೊಳಪುಂಡ ತಾರೆಯೆನಿಸುತ್ತೇನೆಹೊರನಿಂತು ಮೂಲಸ್ರೋತವನಕ್ಕರೆಯಲಿ ಮೆಲ್ಲ ತಡವುತ್ತೇನೆಕಣ್ಮುಚ್ಚಿ ಮೃದುವೊಂದು ಮಗುವಂತೆಅದು ಮಗ್ಗುಲು ಹೊರಳುತ್ತದೆ ನನಗೋ ಸುಖದ ಅಮಲುಒಳಗೂ ಆ ಅಮಲಡರಿದ ಘಮಲುಅವರುದ್ಗರಿಸುತ್ತಾರೆ,“ಎಂಥ ಭಾಷೆ, ಎಂಥ ಜೀವಭಾವ, ಎಷ್ಟು ಕಾವ್ಯ ನಿನ್ನ ಬರಹದಲ್ಲಿ!” ತಟ್ಟನೆಕಾಲಡಿಯ ನೆಲ ತುಸು ಚುಚ್ಚಿ ಎಚ್ಚರಿಸುತದೆ-‘ನೀನಿನ್ನೂ ತಾಕುವುದಾಗಿಲ್ಲ’ನಾನೆಚ್ಚೆತ್ತುಕೊಳುತೇನೆ,ಒಳಗೆ ಅರಳಿ ನಿಂತಿದ್ದ ಮೌನ ನರಳುತ್ತದೆ- ‘ಸ್ರೋತವವರಿಗೆ ಕಾಣುವುದಿಲ್ಲಮೂಲವನಾರೂ ತಲುಪುವುದಿಲ್ಲ‘ಎಷ್ಟು ಚಂದ ನಿನ್ನ ಪ್ರೀತಿ’ ಎಂದೊಬ್ಬರೂ ಹೇಳುವುದಿಲ್ಲ **********************************

ಯಾರೊಬ್ಬರಾದರೂ… Read Post »

ಕಾವ್ಯಯಾನ

ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ

ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ ಚೆಕ್‌ಮೇಟ್ ಜೀವನವೇ ಒಂದು ಚದುರಂಗಎಂದು ಭಾವಿಸಿದಾಗಲೆಲ್ಲ ಕಣ್ಣೆದುರಿಗೆ ಬರೀಕಪ್ಪು ಬಿಳುಪಿನ ಚೌಕದ ಸಾಲು ಸಾಲುಹಾಸಿನ ಮೇಲೆ ಕಪ್ಪು ಸೈನ್ಯಕ್ಕೆ ಎದುರಾಗಿಶತಮಾನಗಳಿಂದಲೂ ಎಲ್ಲವನ್ನೂ ನಿಯಂತ್ರಿಸುತ್ತಕಾವಲು ಕಾಯುತ್ತ ನಿಂತ ಬಿಳಿಯ ಸೈನ್ಯ ಕಪ್ಪು ಆನೆ ಒಂಟೆ ಕುದುರೆಗಳನ್ನೆಲ್ಲದ್ವಂಸಗೈದ ಬಿಳಿಯ ಸೈನ್ಯವನ್ನುಬರೀ ಪದಾತಿದಳವೊಂದರಿಂದಲೇಕಟ್ಟಿಹಾಕಿ ನಿಯಂತ್ರಿಸುವುದೂ ಒಂದು ಕಲೆಚಕ್ರವ್ಯೂಹಕ್ಕೂ ಒಂದು ತಿರುಮಂತ್ರವಿದೆಎಂಬುದನ್ನು ಮರೆತಿರೋ ಬದುಕು ಮೂರಾಬಟ್ಟೆ ಮಿಸುಕಲೂ ಆಗದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂಆನೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡುಬದುಕಲೆಂದೇ ಇದೆ ಕ್ಯಾಸ್‌ಲಿಂಗ್ರಾಜನೊಬ್ಬ ಬದುಕಿದರೆ ಸಾಕುಆತನ ಸೈನ್ಯಕ್ಕೇಕೆ ಅಂತಹ ಲೆಕ್ಕ? ಒಬ್ಬ ರಾಜನನ್ನುಳಿಸಲುಸೈನ್ಯದ ಪ್ರತಿಯೊಬ್ಬನೂಜೀವದ ಹಂಗು ತೊರೆದು ಹೋರಾಡಬೇಕುಪದಾತಿದಳದ ಸೈನಿಕನೊಬ್ಬ ಒಂದೊಂದೇಹೆಜ್ಜೆಯಿಟ್ಟು ಕೊನೆಯ ಹಂತ ತಲುಪಿತ್ರಿವಿಕ್ರಮನಾಗಿಬಿಟ್ಟರೆ ತಕ್ಷಣವೇಆತನನ್ನು ಬದಲಿಸಿರಾಣಿಯೊಬ್ಬಳನ್ನು ಪಟ್ಟಕ್ಕೇರಿಸಬೇಕುಇನ್ನೊಬ್ಬರ ಶ್ರಮದ ದುಡಿಮೆಯಲ್ಲಿರಾಜ ಮತ್ತಿಷ್ಟು ಕೊಬ್ಬಬೇಕು ಎಷ್ಟೆಂದು ಆಡುತ್ತೀರಿ?ದಿನವಿಡೀ ಒಂದೇ ಆಟಛೇ… ಈಗಲಾದರೂ ಮುಗಿಸಿಬಿಡಿಕಪ್ಪು ಸೈನ್ಯವನ್ನು ಸೋಲಿಸುವ ಮೋಸದಾಟಮುಸುಗುಡುವ ಬಿಳಿಯ ರಾಜನಿಗೆ ಎದುರಾಗಿಕಪ್ಪು ರಾಣಿಯನ್ನಿಟ್ಟು ಬಿಟ್ಟರೆಅಲ್ಲಾಡಲಾಗದೇ ಜೀವನವೇ ಚೆಕ್‌ಮೇಟ್ ಬಿಸಿ ಚಹಾ- ಈ ಮುಸ್ಸಂಜೆಯಲ್ಲಿ ನಾನುನಿನ್ನ ನೆನಪಿನಲ್ಲಿ ಕನವರಿಸುತ್ತಿದ್ದರೆನೀನು ಈ ಲೋಕಕ್ಕೆ ಸಲ್ಲದಅತೀತ ಲೋಕದ ಸಹಚರರೊಂದಿಗೆಬ್ಲೆಂಡರ್ಸ್ ಪ್ರೈಡ್ ಹೀರುತ್ತಿರುವ ಚಿತ್ರಮನದ ಕಿಟಕಿಯೊಳಗೆ ತೂರಿ ಬರುತ್ತಿದೆ ನನ್ನ ಏಕಾಂತಕ್ಕೆ ಸಾಥ್ ಕೊಡುವಆತ್ಮಸಾಂಗತ್ಯದ ಗೆಳೆಯನೆಂದರೆಅದು ಹೊಗೆಯೇಳುವಬಿಸಿಚಹಾದ ಬಟ್ಟಲು ಮಾತ್ರಎನ್ನುವ ಸತ್ಯ ಗೊತ್ತಿರುವುದರಿಂದನೀನು ನಿಶ್ಚಿಂತನಾಗಿದ್ದೀಯ ಬಾಡಿದ ಮನಸ್ಸನ್ನು ಝಾಡಿಸಿಕೊಂಡುಬಲವಂತವಾಗಿ ವಾಸ್ತವಕ್ಕೆ ಎಳೆ ತರಲುಚಹಾ ಮಾಡಿಕೊಳ್ಳುವ ನೆಪ ಹೂಡುತ್ತೇನೆಸಕ್ಕರೆ ಡಬ್ಬದೊಳಗೆ ಸಿಕ್ಕಿಕೊಂಡ ಇರುವೆಹೊರಜಗತ್ತಿನ ಸಂಪರ್ಕ ಕಾಣದೇಸುತ್ತಿದಲ್ಲೇ ಸುತ್ತುತ್ತ ಸುಖವಾಗಿದೆ ನನ್ನೆದುರಿಗಿದ್ದ ಎರಡು ಕಪ್ ಚಹಾದಲ್ಲಿನನ್ನ ಪಾಲಿನ ಚಹಾವನ್ನು ಕಪ್‌ನತಳದಲ್ಲಿ ಒಂದಿಷ್ಟೂ ಅಂಟದಂತೆಹನಿಹನಿಯಾಗಿ ಹೀರಿದ್ದೇನೆನಿನ್ನ ಕುಸುರಿ ಕೆತ್ತಿದ ಪಿಂಗಾಣಿ ಕಪ್‌ನಒಳಗೆ ಬಿಸಿಚಹಾ ಕೆನೆಗಟ್ಟುತ್ತಿದೆ ಇರಲಿ ಬಿಡು,ನಿನ್ನ ಬಟ್ಟಲಿನಲ್ಲಿ ಇಣುಕುವಕೆಂಪು ದ್ರವದಷ್ಟು ಉನ್ಮಾದವನ್ನುಈ ಚಹಾ ನನಗೆ ಏರಿಸದೇ ಹೋದರೂನನ್ನ ನೆನಪಿನ ನೋವಿಗೆ ಮುಲಾಮು ಹಚ್ಚಲುನಿನಗೆಂದು ಕಾದಿಟ್ಟ ಬಿಸಿಚಹಾ ಕೈ ಚಾಚುತ್ತದೆ—— ಅಸಂಗತನ್ನು ಅರಸುತ್ತ.. ಕೈಯ್ಯಲ್ಲಿ ಹೂವು ಹಣ್ಣು ಅಕ್ಷತೆಕುಂಕುಮ, ಧೂಪದ ಬಾನಿ ಒಂದಿಷ್ಟು ಗಂಧಜೊತೆಗೆ ಹೆಜ್ಜೆಯಿಟ್ಟ ಸಖಿಯರನ್ನೆಲ್ಲಜುಲುಮೆಯಿಂದ ದೂರ ಸರಿಸಿದೂರದ ಶಿವಾಲಯಕೆ ಹೊರmನನ್ನೊಳಗೆ ನಿಗಿನಿಗಿಸುವ ಕೆಂಡ ಶಿವಾಲಯದ ಆಸುಪಾಸಲ್ಲೆಲ್ಲೂನಿನ್ನ ಸುಳಿವಿಲ್ಲಡಮರುಗದ ದನಿಯೂ ಮೊರೆಯುತ್ತಿಲ್ಲಗರ್ಭಗುಡಿಯ ಒಳಗೆ ಅನ್ಯಮನಸ್ಕಳಾಗಿಕುಂಕುಮವಿಟ್ಟೆ, ಹೂ ಮುಡಿಸಿನಿಟ್ಟುಸಿರಿಟ್ಟು ಕೋಪಿಸಿದೆ ಒಳಗೊಳಗೇಬಂದಿದ್ದು ನಿನಗಾಗಿ ಅಲ್ಲವೋ ಸ್ಮಶಾನವಾಸಿ,ಎಲ್ಲಾತ? ಜಗವನ್ನೇ ಕುಣಿಸುವ ಮದ್ದಳೆಯವ?ಪ್ರಶ್ನಿಸಿದೆ ಶಿವನನ್ನೇ ಕೊಂಕಿಸಿ ಕತ್ತು ದಿಟ್ಟಿಸಿದರೆ ಗಂಧ ಪೂಸುವಾಗ ಶಿವನನ್ನೇಅರೆರೆ…, ಮನ ಕದ್ದು ,ಬವಣೆಗೊಳಪಡಿಸಿಲಿಂಗದೊಳಗೆ ಅಡಗಿ ಕುಳಿತಿದ್ದಾನಲ್ಲದಿನವಿಡೀ ನಿನ್ನನ್ನೇ ಕಂಡಂತಾಗುವ ಭ್ರಮೆಗೆರೋಸಿ ಕಣ್ಣುಜ್ಜಿಕೊಂಡ ಪಿರಿಗಣ್ಣು ತೆರೆದರೂಅಲ್ಲಿ ಕಂಡಿದ್ದು ಲಿಂಗವಲ್ಲಬರಿದೇ ನಿನ್ನ ರೂಪ ಮಂತ್ರಘೋಷ, ಜಾಗಟೆಯ ದನಿಕೇಳಿಸಿದರೂ ಕಿವಿಗಿಳಿಯಲಿಲ್ಲಧೂಪದಾರತಿ, ಮಂಗಳಾರತಿ ಕಣ್ತುಂಬಲಿಲ್ಲಲಿಂಗದೊಳಗೆ ಕಣ್ಣು ಮುಚ್ಚಾಲೆಯಾಡುವವನೇಕಣ್ಣು ತಪ್ಪಿಸುವ ನಾಟಕವೇಕೇ? ಮನದೊಳಗೇ ಅನುಸಂಧಾನ ನಡೆಸುತ್ತಲಿಂಗದೆದುರು ಶಿಲೆಯಾದ ನನ್ನ ಕಂಡುಹಣ್ಣು ಹಾಲು ತಂದಿಲ್ಲವೇ?ನೈವೇದ್ಯದ ಅರ್ಪಣೆಗೇನಿದೆ?ಮೀಸೆ ಮರೆಯಲ್ಲೇ ನಗುತ್ತ ಕೇಳಿದವರಿಗೆನನ್ನನ್ನೇ ಆತನಿಗೆ ಸಮರ್ಪಿಸುತ್ತೇನೆಎಂದುಸುರಿಯೇ ಬಿಟ್ಟ ತರಳೆ ನಾನು ಲೋಕ ಬೆಚ್ಚಿಬಿದ್ದು, ಗಡಗಡನೆ ನಡುಗಿತು,ಬೂದಿ ಬಳಿದು, ಊರೂರು ತಿರುಗುವ ಶಿವನಿಗೆತನ್ನನ್ನೇ ನೀಡುವ ಶಪಥಗೈಯ್ಯುವುದೇ?ಹಾಹಾಕಾರ ಎಲ್ಲೆಲ್ಲೂಲೋಕಪಾಲನಿಗೇ ಈ ಆಹ್ವಾನವೇ?ಜಗನ್ಮಾತೆಗೆ ಸವತಿಯಾಗುವ ಕನಸೇ? ಗಹಗಹಿಸಿದೆ ಮನದಲ್ಲೇತುಟಿಯಂಚು ಮೀರದಂತೆ ನಗು ಅಡಗಿಸಿಹಿಮ ಆವರಿಸಿದ ಬೆಟ್ಟಗಳೊಡೆಯನಾತಎಲ್ಲರಿಗೂ ಭಕ್ತವತ್ಸಲಬಯಸಿದ ಹೆಣ್ಣಿಗೆ ಮಾತ್ರ ಅಸಂಗತನನಗಲ್ಲ, ಶಿವೆಗೂ ಸಿಗದ ವಿರಾಗಿಕುಹಕದ ಎಲ್ಲ ಮಾತುಗಳಿಗೆ ಬೆನ್ನು ಹಾಕಿಇಹ ಪರವೆರಡರಲ್ಲೂ ಒಂದೇ ಗುರಿ ಹೊತ್ತುಹೊರಟಿದ್ದೇನೀಗ ಮದ್ದಳೆಯ ದನಿಯರಸಿ(ಆಸೆಯೆಂಬ ಶೂಲದ ಮೇಲೆ ಸಂಕಲನದಿಂದ) ***********************

ಶ್ರೀದೇವಿ ಕೆರೆಮನೆ ಕಾವ್ಯಗುಚ್ಛ Read Post »

ಕಾವ್ಯಯಾನ, ಗಝಲ್

ಗಝಲ್

ಗಝಲ್ ಉಮೇಶ ಮುನವಳ್ಳಿ ಹಣಿದ ಮೇಲೂ ಹಣಿಯಬೇಕು ಜಿಟಿ ಜಿಟಿ ಮಳೆ, ಹನಿಹನಿಯಾಗಿ,ದಣಿದ ಮೇಲೂ ದಣಿಯಬೇಕು ಇಳೆಯ ಕಳೆ, ಹನಿಹನಿಯಾಗಿ, ಸೋಲೊಪ್ಪದ ಸಾಹಸಿ ನೀನಾಗಬೇಕು,ಸವೆದ ಮೇಲೂ ಸವೆಯಬೇಕು ಕತ್ತಿಯ ಮೊನೆ, ಹನಿಹನಿಯಾಗಿ. ದೂರ ದಾರಿ ಕ್ರಮಿಸಬೇಕು ಶ್ರಮವರಿಯದೆ,ಹರಿದಮೇಲೂ ಹರಿಯಬೇಕು ಸಂತೃಪ್ತಿಯ ಹೊಳೆ, ಹನಿಹನಿಯಾಗಿ. ದಣಿವರಿಯದ ಕಾರ್ಯ ನಿನ್ನ ಕಸರತ್ತು,ಕಳೆದ ಮೇಲೂ ಕಳೆಯಬೇಕು ಒಳಮನೆ, ಹನಿಹನಿಯಾಗಿ. ತಾಕತ್ತು ಇಮ್ಮಡಿಯಾಗಿಸಿ ಗುದ್ದಾಡು ಕಣದಲ್ಲಿ,ತೆರೆದ ಮೇಲೂ ತೆರೆಯಬೇಕು ನೊರೆಯಾಗಿ ಪಸೆ, ಹನಿಹನಿಯಾಗಿ. ಗಟ್ಟಿ ಜೀವ ‘ಉಮಿ’ಯದು, ಸತ್ತು ಸತ್ತು ಹುಟ್ಟುವುದು,ಬೇಸತ್ತ ಮೇಲೂ ಮತ್ತೆ ಸಾಯುವ ಹಸೆ, ಹನಿಹನಿಯಾಗಿ ***********************

ಗಝಲ್ Read Post »

ಕಾವ್ಯಯಾನ

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ ಒಂದು ಹೆಣ್ಣಿನ ಸ್ವಗತ. ನನಗಾರ ಭಯ..!ನಾನು ಜನ್ಮ ಕೊಡುವ ಹೆಣ್ಣು ಮಗುವನ್ನುಈ ಲೋಕದಿ ತರಲು ನನಗಾರ ಭಯ..ಇಲ್ಲ.. ಭಯ ಲೋಕದ್ದಲ್ಲ..ನನ್ನಂತರಂಗದ್ದು..ಮತ್ತೊಂದು ಹೆಣ್ಣನ್ನು ಈ ಲೋಕಕ್ಕೆ ತರುವಧೈರ್ಯ ನನಗಿಲ್ಲದಿರುವದು..ಬೇಡ ಎಂದವರಿಗೆ ನಾನೇಕೆ ವೀರೋಧಿಸಲಿಲ್ಲ..!ನನಗೂ ಎಲ್ಲೊ ಬೇಡವೇ ಆಗಿತ್ತಲ್ಲ..ಗಂಡು ಮಗುವಿನ ಮೋಹವೇ ಅಧಿಕವಾಗಿತ್ತಲ್ಲ..ಸ್ತ್ರೀ ಸಬಲಿಕರಣಕ್ಕಾಗಿ ಹೋರಾಡುವನನಗೂ ಹೆಣ್ಣು ಮಗು ಬೇಕಾಗಿಲ್ಲ.. ಏಕೆ.. ನಾನನುಭವಿಸಿದ ತವಕ ತಲ್ಲಣಗಳುಅವಳು ಅನುಭವಿಸುವದು ಬೇಡವೆಂದೇ…ಕೆಟ್ಟ ಕಾಮುಕರಿಗೆ ಬಲಿಯಾದೀತೆಂದುದಿಗಿಲುಗೊಂಡೇ…ವರದಕ್ಷಿಣೆಗಾಗಿ ಸುಟ್ಟು ಬಿಟ್ಟಾರೆಂದುಭಯಗೊಂಡೆ…ಅಸಹಾಯಕತೆ ಯನ್ನು ಉಪಯೋಗಿಸಿಕೊಳ್ಳುವರದುರುಳುತನಕ್ಕಂಜಿಯೇ… ಸರಿ ಬಿಡು..ಹೆಣ್ಣನ್ನು ಹೇರದಿದ್ದರೇನಾಯಿತು..ಭ್ರೂಣದಲ್ಲೆ ಹತ್ಯೆ ಮಾಡಿದರಾಯಿತು.ಹೆಣ್ಣು ಗಳಿಲ್ಲದೆ ಬರೀ ಗಂಡಸರೇನು ಮಾಡುವರು..!ಸೃಷ್ಟಿಯನ್ನು ಮುಂದುವರೆಸುವರಾ ಅವರೋಬ್ಬರೆ.. ಹೆದರದಿರು ಮನವೇ..ಹೆಣ್ಣನ್ನು ಅಷ್ಟೊಂದು ಅಸಹಾಯಕಳೆಂದುತಿಳಿದಿರು..ಅಕ್ಕನಂಥ ವಿರಾಗೀನಿಯರು ಹಾಕಿಕೊಟ್ಟದಾರಿ ಇದೆ..ಸೀತೆ ಸಾವಿತ್ರಿಯಂಥವರ ದಿಟ್ಟ ನಿಲುವುಗಳಿವೆ..ಮಲ್ಲವ್ವ ಓಬವ್ವರ ಸಾಹಸ ಗಾಥೆಗಳಿವೆ..ಹೆಣ್ಣು ಹೆಣ್ಣೆಂದು ಜರೆಯಬೇಡ..ಹೆಣ್ಣು ಹೇರಲು ಅಂಜಬೇಡ..ಹೆಣ್ಣು ‌ಬಾಳಿನ ಕಣ್ಣೆಂಬುದು ಮರೆಯಬೇಡ. ಭರವಸೆಯ ಕಿರಣ. ದೀಪಗಳೆ..ದೀಪಗಳೆಮಿನುಗುವ ಮಿಣುಕು ನಕ್ಷತ್ರಗಳೆಮನದ ಕತ್ತಲೆ ಓಡಿಸಿ ಬೆಳಕುಪಸರಿಸುವ ಚಂದಿರಗಳೆ.. ಬಾನಿಗೂ ಭೂವಿಗೂ ಬೆಸೆದಮಿಂಚಿನ ದಿವ್ಯ ಪ್ರಭೆಗಳೆನಾಲ್ಕು ದಿಕ್ಕಿಗ ಹರಡಿದಅರಿವಿನ ವಿಶ್ವ ಜ್ಯೋತಿಗಳೆ.. ಚಿಂತೆಯ ಕಾರ್ಮೊಡ ಕರಗಿಸುವಹರುಷದ ಹೊನಲುಗಳೆನಿರಾಶೆಯ ಮುಂದೆ ಆಸೆ ತೋರುವವಿಶ್ವಾಸದ ದನಿಗಳೆ.. ಕನಸಿನ ಗೊನೆಗೆ ನೀರೆರೆದುಪೋಷಿಸುವ ಮಿಂಚಿನ ಸಿಂಚನಗಳೆಬದುಕ ಭಾರವನ್ನು ಹಗುರಗೊಳಿಸುವಉಲ್ಲಾಸದ ಕೋಲ್ಮಿಂಚುಗಳೆ.. ಕತ್ತಲು ಕಳೆದು ಬೆಳಗು ಮೂಡಿಸುವಸುಖದ ಕಲ್ಪನೆಗಳೆಮುಸುಕು ಸರಿಸಿ ದಾರಿ ತೋರಿಸಿಗುರಿಮುಟ್ಟಿಸುವ ಹೊಂಗಿರಣಗಳೆ.. ನಿಸ್ತರಂಗದ ಬಾಳಲಿ ಚಲನೆಮೂಡಿಸುವ ಆಶಾ ದೀವಿಗೆಗಳೆಬಾಳ್ ದಾರಿಯಲೆಲ್ಲಾ ಸದಾಜೊತೆಗಿರುವ ಭರವಸೆಯ ಕಿರಣಗಳೆ.. ಅಕ್ಕ. ಅಕ್ಕ…ಚನ್ನನ ಮೇಲೆ ಅದೆಂತಹ ಮೋಹ ನಿನಗೆಆ ಚೆನ್ನ ಸಿಕ್ಕನೇನೆ ನಿನಗೆ.ಕೇಶವನ್ನೆ ಅಂಗಕ್ಕೆ ಮರೆಮಾಡಿಕೊಂಡುಸಾವಿಲ್ಲದ ಕೇಡಿಲ್ಲದ ರೂಹಿಲ್ಲದ ಚಲುವನಿಗಾಗಿಕಾಡು ಮೇಡು ಅಲೆದು ದಣಿದ ನಿನಗೆಆ ಚೆನ್ನ ಸಿಕ್ಕನೇನೆ ಕೊನೆಗೆ ದೇಹದ ಮೋಹವನ್ನು ತೋರೆದುಭಯವೆಂಬ ಭವವ ನಿರ್ಬಯದಿ ಹರಿದುಆಡಿಕೊಳ್ಳುವವರ ಮುಂದೆ ಧೈರ್ಯದಿ ಮೆರೆದೆ ನೀನಿನೋಲಿದ ಚನ್ನ ಸಿಕ್ಕನೇನೆ ನಿನಗೆ. ಬೆಟ್ಟು ಮಾಡುವರನ್ನು ದಿಟ್ಟ ನಿಲುವುಗಳಿಂದಬಿಚ್ಚು ಮನಸ್ಸಿನಿಂದ ಬೆರಗುಗೋಳಿಸಿಇಚ್ಚೆ ಪಟ್ಟವನನ್ನು ಅರಸುತ್ತಾಅರಸೊತ್ತಿಗೆ ಬಿಟ್ಟು ಬಂದ ನಿನಗೆಆ ಚನ್ನ ಸಿಕ್ಕನೇನೆ ಅಕ್ಕ.. ಶ್ರೀಶೈಲದ ಕಾಡುಮೇಡು ಅಲೆದುಕದಳಿಯ ಭವ ಘೋರಾರಣ್ಯ ಹೊಕ್ಕುಭವಗೆಟ್ಟು ಹೋದನಿನಗೆ ಬಿಗಿದಪ್ಪಲು ಭವಹರನಾದಆ ಚನ್ನ ಸಿಕ್ಕನೇನೆ ಅಕ್ಕ.. ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದಸೀಮೆಇಲ್ಲದ ನಿಸ್ಸೀಮನಿಗಾಗಿಉಡತಡಿಯಿಂದ ಕಲ್ಯಾಣದ ವರೆಗೆಕದಳಿಯ ಸೀಮೆಯವರೆಗೆ ತ್ರೀಕೂಟವೆಂಬಮಹಾಗಿರಿಯ ಬಟ್ಟಬಯಲೋಳಗೆ ಹುಚ್ಚಾಟದ ಮೇರೆಮೀರಿ ಹುಡುಕಾಡಿಶರಣಸತಿ ಲಿಂಗಪತಿ ಎಂಬ ಭಾವದಲ್ಲಿಕದಳಿಯಲ್ಲಿ ನಿನ್ನ ಚನ್ನನಲ್ಲೆ ಒಂದಾದೆಯಲ್ಲ.. ಕೋನೆಗೂ ನಿನ್ನ ಚನ್ನನನ್ನು ಹುಡುಕೆಬಿಟ್ಟಯಲ್ಲ… *******************

ಜ್ಯೋತಿ ಡಿ.ಬೊಮ್ಮಾ ಕಾವ್ಯಗುಚ್ಚ Read Post »

You cannot copy content of this page

Scroll to Top