ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮರಣದ ಪರ್ವ

ಕವಿತೆ ಮರಣದ ಪರ್ವ ರೇಶ್ಮಾಗುಳೇದಗುಡ್ಡಾಕರ್ ಮರಣದ ಹಬ್ಬವಿದುಸಾವಿನ ಸರಣಿಯಿದುಹಿರಿಯ-ಕಿರಿಯ ಭೇದವಿಲ್ಲಕ್ಷಣಮಾತ್ರವು ಸಮಯವಿಲ್ಲಹಾರುವುದು ಪ್ರಾಣ ಪಕ್ಷಿದಿನ ,ಮುಹೂರ್ತ ನೋಡುವದಿಲ್ಲ..!!ಪಂಚಾಂಗದ ಹಂಗಿಲ್ಲ..!! ಬ್ಯಾನಿ ಎನೆಂದು ತಿಳಿಯುವುದಿಲ್ಲನಗುನಗತ್ತಲೇ ಬಾರದ ಲೋಕಕ್ಕೆ ತೆರಳುವರಲ್ಲಈಗ ಇದ್ದವರು ನಾ ಮುಂದೆ ತಾ ಮುಂದೆ ಎನ್ನುವಂತೆಸಾಗುತಿಹರಲ್ಲ….ಮರಣ ಮೃದಂಗ ಮೊಳಗಿದೆಯಲ್ಲಾ ಎತ್ತಿ ಆಡಿಸಿದ ಕೈ ಹಿಡಿದುನಡೆಸಿ ನಡೆನುಡಿಯ ತಿದ್ದಿದದಾತಸೆರಗಿನಲಿ ಕಾಪಿಟ್ಟು ಎದೆಯುಸಿರಲಿತಂಪಿಟ್ಟ ಅವ್ವ ,ಹೆಗಲ ಮೇಲೆ ಹೊತ್ತು ಊರೆಲ್ಲಾತಿರುಗಾಡಿದ ಅಣ್ಣಾ ಹೀಗೆಸಾಗುವದು ಮರಣದರಮನೆಯಸೇರಿದವರ ಪಟ್ಟಿ ….ನೆನದಷ್ಟು ನೆನಪುಗಳುಹೃದಯವ ತೋಯ್ಸವು…..ಕಾಣದ ಜೀವಿಗೆ ಹರಿದ ಬದುಕುಕಾಲನ ಕೈ ತುತ್ತಿಗೆ ಹಂಬಲಿಸುತಿದೆ ….!! ಗಾಯಗಳು ಮಾಗುವ ಮುನ್ನಬರೆ ಮತ್ತೆ ಮತ್ತೆ ಬೀಳುತಿದೆ.ಹಾಲುಗಲ್ಲದ ಕೆನ್ನೆ ಮಾಸುವ ಮುನ್ನವೇಮಣ್ಣಾಗುತಿದೆ…….!!!!ಹೇ…ಬದುಕೇ ನೀ ಎಷ್ಟುನಿಗೂಢ ….ಬರಿದಾಗಿದೆ ಮನೆಮನಉಳಿಯುವವೇ ಜನಮನ ….ಜನ ಮನ.. *********************

ಮರಣದ ಪರ್ವ Read Post »

ಕಾವ್ಯಯಾನ

ಆಪ್ತೇಷ್ಟರು

ಕವಿತೆ ಆಪ್ತೇಷ್ಟರು ಪುಷ್ಪಾ ಮಾಳ್ಕೊಪ್ಪ ನರನಲ್ಲದೇ ಮರವ ನಿಂದಿಪರೇಯನ್ನ ನಿತ್ಯ ನಿಂದಿಪರು ಬೇಕುಅವರೇ ಯನ್ನ ಆಪ್ತರು ಕಾಣಾ ಅನ್ಯರನಲ್ಲದೇ ಲೋಕದಿ ತನ್ನಾಡಿಕೊಂಬರೇಅಡಿಗಡಿಗೆ ಯನ್ನ ಆಡಿಕೊಂಬರು ಬೇಕುಅವರೆನ್ನತ್ಯಾಪ್ತರು ಕಾಣಾ ಕಡುಗೋಪವಿಲ್ಲದೆಯೆ ಜಗದಿ ಜರಿಯುವರೇಯನ್ನ ಜನುಮಕಾಗುವಷ್ಟು ಜರಿಯುವರು ಬೇಕುಅವರೆನ್ನ ಜೀವಬಂಧುಗಳು ಕಾಣಾ ಹೀನಾಯದಿಂ ಕಾಣದೇ ಎನ್ನ ಹಿತವಪ್ಪುದೆ ಮರುಳೆಹಿತವಪ್ಪುದು ಅವರಿಂದೆ ಅವರೆನ್ನ ಹರಸಿದವರು ಕಾಣಾ ಛೀ ಥೂ ಎಂದರಲ್ಲವೇ ಶ್ವಾನದಿಂ ತೆರದಿಎನ್ನ ತುಚ್ಛೀಕರಿಸುವರು ಬೇಕುಅವರೆನ್ನ ತಾಳ್ಮೆಯಂ ಹೆಚ್ಚಿಸಿದವರು ಕಾಣಾ ಕುಟುಕಿದವರಲ್ಲವೇ ಎನ್ನ ಕಣ್ಣತೆರೆಸಿದವರುಕುಟುಕತನವದು ಬೇಕುಅವರೆನ್ನ ನಿದ್ದೆಯಿಂ ಎಬ್ಬಿಸಿದವರು ಕಾಣಾ ಖಂಡಿಸಿದವರೆನ್ನ ವಿಷಯ ಮಂಡಿಸಿದವರುಖಡಾಖಂಡಿತವು ಬೇಕುಅವರೆನ್ನ ಕಂಠಸ್ಥರಯ್ಯಾ ಇವರಲ್ಲವೇ ಎನ್ನ ತಿದ್ದಿ ತೀಡುವವರುಬಂದುದೆದುರಿಸುವುದ ಕಲಿಸುವವರುಬದುಕ ಕಲಿಸುವವರು. ***************

ಆಪ್ತೇಷ್ಟರು Read Post »

ಕಾವ್ಯಯಾನ, ಗಝಲ್

ಗಜಲ್

ಗಜಲ್ ಪ್ರಭಾವತಿ ಎಸ್ ದೇಸಾಯಿ ಮಂಗಳಕೆ ಇಟ್ಟ ಕಾಲು ಅಂಗಳಕೆ ಇಡಲು ಹಿಂಜರಿಯುತಿದೆಒಲವ ಕೊಟ್ಟ ಹೆಗಲಿಗೆ ಇಂದು ಹೆಗಲು ಕೊಡಲು ಹಿಂಜರಿಯುತಿದೆ ಅನುರಾಗದಲಿ ಹೆತ್ತು ಹೊತ್ತ ಉಸಿರುಗಳು ಅನಾಥವಾಗಿವೆಒಡಲಲಿ ಹೊರಳಾಡಿದ ಜೀವ ಮಣ್ಣು ಹಾಕಲು ಹಿಂಜರಿಯುತಿದೆ ಮುದ್ದಾಡಿ ಚಂದಿರ ತೋರಿಸಿದ ಲಾಲಿ ಹಾಡು ಮೂಕವಾಗಿದೆಕೈತುತ್ತು ಉಣಿಸಿದ ಕೈಗೆ ಮುತ್ತು ನೀಡಲು ಹಿಂಜರಿಯುತಿದೆ ಕುಸುಮಗಳು ನಲಿಯುತಿದ್ದವು ಸೋದರ ಜೊತೆ ಈಗ ಮಂಕಾಗಿವೆದುಂಬಿಯು ಬಿರಿದ ಸುಮದ ಮಕರಂದ ಹೀರಲು ಹಿಂಜರಿಯುತಿದೆ ವಿಶ್ವವೇ ಮೌನವಾಗಿದೆ ಇದೆಂತಹ ದುರಿತಕಾಲ “ಪ್ರಭೆ”ಬೌದ್ಧ ಪೌರ್ಣಮಿ ಕಿರಣಕೆ ಸಾಗರ ಉಕ್ಕಲು ಹಿಂಜರಿಯುತಿದೆ **********************

ಗಜಲ್ Read Post »

You cannot copy content of this page

Scroll to Top