ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ

ಕಾವ್ಯ ಸಂಗಾತಿ “ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ ನಿಜ ಸತ್ಯ ಶಾಂತಿ ಮೂರ್ತಿಅಹಿಂಸೆ ಯಿಂದ ನಡೆದ ಜೀವಿನ್ಯಾಯ ನೀತಿ ನಿನ್ನ ಉಸಿರುದೇಶಕ್ಕಾಗಿ ದುಡಿದ ತ್ಯಾಗಮಯಿ ಮಹಾತ್ಮ ಗಾಂಧಿ ನೀನು… ದೇಶದ ಸ್ವತಂತ್ರಕ್ಕಾಗಿ ಹೋರಾಡಿಶ್ರಮ ಜೀವಿ ಗಾಂಧಿತುಂಡು ಪಂಚೆ ತೊಟ್ಟುಬಡವರ ಏಳಿಗೆಗೆ ಬಯಸಿದೆಮಹಾತ್ಮ ಗಾಂಧಿ ನೀನು… ಅನ್ನ ನೀರು ಬಿಟ್ಟುಉಪವಾಸದಿ ಜೀವನ ಸವಸಿನಿನ್ನ ನಿಜ ಸ್ವರೂಪಅರಿಯದ ಭಂಡರಗುಂಡಿಗೆ ಬಲಿಯಾದೆ ನೀನು … ದೇಶ ವಿಭಜನೆಯಾಗದಂತೆದೇಶದ ಒಗ್ಗಟ್ಟಿಗಾಗಿಮಿಡಿದ ಜೀವಿ ನೀನುನಿನ್ನ ಆಶಯ ಅದೇಮಾರಕವಾಗಿ ಹುತಾತ್ಮವಾದಿ … ಇಂಥ ಗಾಂಧಿಯನ್ನುಮೌಢ್ಯ ಜನರ ಗುಂಡೇಟಿಗೆದೇಹ ತ್ಯಜಿಸಿದ ಮಹಾತ್ಮಇಂದಿಗೂ ನಿನ್ನ ಆದರ್ಶ ಜೀವನಪ್ರೇರಕ ಶಕ್ತಿಯಾಗಿ ಹೊರಹೊಮ್ಮುತಿದೆ ಇಂದು ನಿನ್ನ ಸ್ಮರಣೆ ಮಾಡುವೆವುಆದರೂ ಒಂದು ಪ್ರಶ್ನೆ ಕಾಡಿದೆದೇಶದ ಜನತೆಗೆ, ಮುಗ್ಧ ಮಕ್ಕಳಿಗೆಉತ್ತರಿಸಲಾರದ ಪ್ರಶ್ನೆಗಾಂಧಿಯನೇಕೆ ಕೊಂದರು? ವಿಜಯಲಕ್ಷ್ಮಿ ಹಂಗರಗಿ

“ಗಾಂಧಿಯನೇಕೆ ಕೊಂದರು?” ವಿಜಯಲಕ್ಷ್ಮಿ ಹಂಗರಗಿ Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ “ಮತ್ತೆ ಹುಟ್ಟಿ ಬಾ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಮತ್ತೆ ಹುಟ್ಟಿ ಬಾ” ಹೋಮ ಹವನ ಮಾಡುವರುಅಂದ ಶ್ರದ್ದೆ ಆಚಾರ ಅನಾಚಾರಪ್ರಾಣಿ ಮಕ್ಕಳ ಬಲಿ ಕೊಡುವರುಅರಿವಿದ್ದು ಮೌಢ್ಯ ನೆಚ್ಚಿಹರುಇಂಥ ಕಂದಾಚಾರ ತೊಡೆದುಹಾಕಲು ಜಗಜ್ಯೋತಿ ಬಸವಣ್ಣಮತ್ತೆ ಹುಟ್ಟಿ ಬಾ… ಮನ ಶುದ್ಧ ವಿಲ್ಲಚಿತ್ತ ಶುದ್ದ ವಿಲ್ಲವೇಷ ಭಾಷೆಯಲ್ಲ ವಿಷ ಪಾಶ ಹರಿಯುವುದು ನಿತ್ಯಪರಿಶುದ್ಧ ಸ್ವತಂತ್ರರು ಆದಬಸವಣ್ಣ ಮತ್ತೆ ಹುಟ್ಟಿ ಬಾ… ಸತ್ಯ ಶುದ್ಧವಿಲ್ಲದ ಕಾಯಕದ ಮಧ್ಯೆ ಆಸೆ ಎಂಬ ಭವದ ಬೀಜ ಬಿತ್ತಿಹಲಬೂತಿಹರು ಧನ ಕನಕಕ್ಕಾಗಿಬಕಾಸುರ ರಂತೆ ಬಾಚುವರುಕಾಯಕ ಯೋಗಿ ಬಸವಣ್ಣಮತ್ತೆ ಹುಟ್ಟಿ ಬಾ… ಕೊಲೆ ಸುಲಿಗೆ ಮಾಡುವರುಕ್ರೂರಿಗಳು ಜಾತಿ ಮತ ಲಿಂಗಗಳ ಎಣಿಸುವರು ನಿತ್ಯ ನಿರಂತರಭೇದ ಭಾವ ಅಳಿಸಿ ಹಾಕಲುಕ್ರಾಂತಿಯೋಗಿ ಬಸವಣ್ಣಮತ್ತೆ ಹುಟ್ಟಿ ಬಾ… ಕಾಯಕ ನಿಷ್ಠೆ ತೋರಿಧರ್ಮದ ಬುನಾದಿಯಾಗಿವಚನ ತತ್ವ ಸಂಸ್ಕೃತಿ ಪರಂಪರೆ  ಜಗಕೆ ಅರುಹಲುಮಹಾ ಮಾನವತಾವಾದಿಬಸವಣ್ಣ ಮತ್ತೆ ಹುಟ್ಟಿ ಬಾ… ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ “ಮತ್ತೆ ಹುಟ್ಟಿ ಬಾ” Read Post »

ಕಾವ್ಯಯಾನ

“ಹೃದಯ ವೀಣೆ” ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಕಾವ್ಯ ಸಂಗಾತಿ “ಹೃದಯ ವೀಣೆ” ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಶುರುವಾಗಿದೆಆಸೆಗಳ ಆಂದೋಲನಅತಿಯಾಗಿಹೇಳಲಾಗದೆಉಳಿದಿವೆ ಅದೆಷ್ಟೋಮಾತುಗಳುಮುದುರಿ ಹೋಗಿವೆಎದೆಯ ಗೂಡೊಳಗೆಬಂದೊಮ್ಮೆ ಮೀಟುಹೃದಯ ವೀಣೆಕಾಯುತಿವೆ ನಿನ್ನಬರುವಿಗಾಗಿ ಭಾವಲತೆಗಳುನೀ ಬಂದು ಸಂತೈಸುಮಿಡಿಯುವ ಮನವಬಂದುಬಿಡೊಮ್ಮೆಅಂತರಂಗದ ಹೂ ಬನಕೆಮಧುವರಿಸಿ ಬರುವ ದುಂಬಿಯಂತೆಮಿಲನವಾಗಲಿಮಧುರ ಪ್ರೇಮಕಾವ್ಯಕಾಯುತಿದೆ ಮನವುಬಾಹುಬಂಧನದ ಬೆಸುಗೆತವಕದ ತಲ್ಲಣಕೆಮುನಿಸದೆಕಟ್ಟಿ ಬಿಡುಹೃದಯಕ್ಕೆ ಸೇತುವೆ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

“ಹೃದಯ ವೀಣೆ” ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ Read Post »

ಕಾವ್ಯಯಾನ

“ಯಾರೂ ಅನಿವಾರ್ಯರಲ್ಲ‌ ಇಲ್ಲಿ” ವೈ ಎಂ ಯಾಕೊಳ್ಳಿ

ಕಾವ್ಯ ಸಂಗಾತಿ “ಯಾರೂ ಅನಿವಾರ್ಯರಲ್ಲ‌ ಇಲ್ಲಿ” ವೈ ಎಂ ಯಾಕೊಳ್ಳಿ ಈ‌ ಲೋಕ ತನ್ನಷ್ಟಕ್ಕೆ ತಾನೇ ಓಡುತ್ತದೆಯಾರೂ ಅನಿವಾರ್ಯರಲ್ಲ ಯಾರೋ ನಮ್ಮನ್ನಗಲಿ ಹೋದಾಗನಾವು ಇನ್ನು ಬದುಕಲಾರೆವೇನೊ ಎನ್ನುತ್ತೇವೆಆದರೂ ಕೆಲವೆ ದಿನಗಳಲ್ಲಿ ಮತ್ತೆ ಕಾಲಎಂದಿನಂತೆ ಓಡತೊಡಗುತ್ತದೆ ಅಂದೊಮ್ಮೆ ಆ ಕ್ಷಣ ಅವರು ಅಗಲಿದಾಗಇನ್ನು  ಬದುಕುವುದೆ ಅಸಾಧ್ಯ ವೆಂದುಕೊಂಡಿದ್ದವರು,  ಅದೆ ಹಗಲು ಅದೇ ರಾತ್ರಿಅದೇ ಬದುಕನ್ನು ಯಥಾವತ್ತಾಗಿಅನುಭವಿಸತೊಡಗುತ್ತಾರೆವ್ಯತ್ಯಾಸ ಇಷ್ಟೇ ಅವರಷ್ಟೇ ಹೋಗಿರುತ್ತಾರೆನಾವೆಲ್ಲರೂ ಇಲ್ಲೇ ಇರುತ್ತೇವೆ. ಚಂದ್ರ ಸೂರ್ಯರೂ ಇಲ್ಲವಾದಾಗಪರ್ಯಾಯ ವ್ಯವಸ್ಥೆಯನ್ನು ಬಳಸಿಕೊಂಡಈ ಲೋಕಕ್ಕೆ  ಎಲ್ಲವನು ಮರೆಯುವದು ಗೊತ್ತುಬಹುಶಃ ತಾವು ಅನಿವಾರ್ಯಎಂದು ತಿಳಿದದ್ದು ಅಗಲಿ ಹೋದವರಷ್ಟೇ. ಇದು ನಾವು ಹೋದಾಗಲೂ ಅಷ್ಟೇ!ಇನ್ಯಾರೋ ಹೋದಾಗಲೂ ಅಷ್ಟೇ!!ಜಗತ್ತಿನಲ್ಲಿ ಬೇಕಾದವರು ಒಂದಿಷ್ಟು  ದಿನಕಣ್ಣೀರು ಹಾಕಿ  ಮತ್ತೆ ಮರೆಯುತ್ತಾರೆ.ಇನ್ನೊಂದು ರಾತ್ರಿ ಕೊಡವಿಕೊಂಡು ಎದ್ದುಹಗಲಾಗಿರುತ್ತದೆ. ವೈ.ಎಂ.ಯಾಕೊಳ್ಳಿ

“ಯಾರೂ ಅನಿವಾರ್ಯರಲ್ಲ‌ ಇಲ್ಲಿ” ವೈ ಎಂ ಯಾಕೊಳ್ಳಿ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಕವಿತೆ “ನರಕಾಗ್ನಿ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು ಕ “ನರಕಾಗ್ನಿ” ಸಾವಿಲ್ಲ….ಆತ್ಮಕ್ಕೂ ಸಾವಿಲ್ಲಪರಮಾತ್ಮನಿಗೂ ಸಾವಿಲ್ಲ,! ಸಾವು ಶರೀರಕ್ಕಷ್ಟೇಆತ್ಮವು ಶರೀರ ತ್ಯಜಿಸಿ ಸೇರುತ್ತೇಪರಮಾತ್ಮನ ಪಾವನ ಸನ್ನಿದಾನಕ್ಕೆ,! ಪಾಪದ ಕೊಡ ತುಂಬಿದಆತ್ಮವನು ಒಲ್ಲೆನು ಪರಮಾತ್ಮನುನರಕವೆಂಬ ಆಗ್ನಿಯ ನೀ ಬಾಯೊಳಗೆ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಕವಿತೆ “ನರಕಾಗ್ನಿ” Read Post »

ಕಾವ್ಯಯಾನ

ಪರವಿನಬಾನು ಯಲಿಗಾರ “ಜಾತ್ರೆಯೊಂದು ಮುಗಿದಿತ್ತು”

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ “ಜಾತ್ರೆಯೊಂದು ಮುಗಿದಿತ್ತು” ಜಂಭದಿಂದ , ಗತ್ತು ತೋರಿದ್ದ ,ಡೊಳ್ಳು , ನಗಾರಿಯ ಸದ್ದುಮೂಲೆ ಸೇರಿತ್ತು. ಹಗಲು , ರಾತ್ರಿ ಗಂಟಲುಅರಚಿಕೊಂಡ ಧ್ವನಿವರ್ಧಕ ,ತಣ್ಣಗಾಗಿದ್ದವು. ತಮ್ಮ ಸರಕಿಗೆ ಬೆಲೆ ಕೂಗಿದಮಾರಾಟಗಾರರು , ಹುರುಪಿನಿಂದಲಾಭ ನಷ್ಟದ ಲೆಕ್ಕದಲ್ಲಿದ್ದರು. ಮನೆ , ಮನೆಗಳಲ್ಲಿ ತುಂಬಿದನೆಂಟರು , ನಕ್ಕು ನಲಿದುಸ್ವ ಊರಿಗೆ ಮುಖ ಮಾಡಿದರು. ಊರಿನ ಹಾದಿ , ಬೀದಿಯಲಿಕಸದ ರಾಶಿ ಸಣ್ಣಗೆ ಕೊಳೆತುಗಬ್ಬು ನಾರಲು ಶುರುವಾಯಿತು . ದಣಿವರಿಯದೇ ಹುರುಪಿನಿಂದಸಿಂಗರಿಸಿಕೋಂಡು ,  ಅತ್ತಿತ್ತ ಸುಳಿದತರುಣ , ತರುಣೀಯರು ಸುಸ್ತಾಗಿದ್ದರು ಉತ್ಸವದಲ್ಲಿ ಪಲ್ಲಕ್ಕಿ ಹೊತ್ತವರುಪುನೀರಾದೆವೆಂದು ಬೀಗಿದ್ದರು ,ಮೂರ್ತಿ ಮಾತ್ರಾ ಶಾಂತವಾಗಿತ್ತು. ಗುಡಿಯಲ್ಲಿರುವ ದೇವರುಜಾತ್ರೆಗೆ ಬಂದ ಭಕ್ತರಪಾಪ – ಪುಣ್ಯಗಳ ಲೆಕ್ಕಾಚಾರದಲ್ಲಿದ್ದ. ಮುಗಿದಿದ್ದ ಜಾತ್ರೆ ಬರೀ ದೇವರದ್ದಲ್ಲ , ಮುಂದೊಂದು ದಿನ,ನಮ್ಮ ಬದುಕಿನದ್ದೂ ಸಹ . ಇದ್ದಾಗಿನ ಸದ್ದು ಗದ್ದಲ ಒಮ್ಮೆಗೆನಿಶ್ಯಬ್ದವಾಗುತ್ತದೆ , ಆತ್ಮವೆಂಬ ದೇವರುಪಾಪ – ಪುಣ್ಯಗಳ ತೂಕ  ಹಾಕುವುದು…. ಪರವಿನಬಾನು ಯಲಿಗಾರ    

ಪರವಿನಬಾನು ಯಲಿಗಾರ “ಜಾತ್ರೆಯೊಂದು ಮುಗಿದಿತ್ತು” Read Post »

ಕಾವ್ಯಯಾನ

“ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ

ಕಾವ್ಯ ಸಂಗಾತಿ “ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ ಕಟ್ಟಬೇಕಿದೆ ನಾವು ನಾಡೊಂದನಸರಿ ಸಮಾನತೆಯ ಬಿಡೊಂದನ.!!ಪ!! ಬಿತ್ತರಿಸುತಿಹರಿಂದು ಆ ಜಾತಿ ನಂದೆಂದುಕತ್ತರಿಸಿ ಹಾಕೋಣ ಜಾತಿಯ ಗಿಡವಿಂದುಎಚ್ಚರಿಸಿ ನಡೆ ನೀ ಮೌಢ್ಯತೆಯ ಕೊಂದುಉಚ್ಚರಿಸು ನಾವೆಲ್ಲ ಭಾರತೀಯರೆಂದು ಕಟ್ಟಿಹರು ನಾಡ ಬಿಸಿಲು ಬೇವರಲಿ ಬೆಂದುಕೊಟ್ಟಿಹರು ಸ್ವಾತಂತ್ರ್ಯ ಲಕ್ಷ ಬಲಿದಾನ ಗೈದುಬರೆದರು ಸಂವಿಧಾನ ಸಮಪಾಲಿರಲೆಂದುಕರೆ ಕೊಟ್ಟರು ಅಸ್ಪೃಶ್ಯತೆ ತೊಲಗಲಿ ಎಂದು ಸ್ಮರಿಸೋಣ ನಮ್ಮವರ ತ್ಯಾಗ ಬಲಿದಾನವನ್ನುಕೊರೋಣ ಹಿರಿ ಜೀವಗಳಿಗೆ ಶಾಂತಿಯನ್ನುತೊರೆಯೋಣ ನಾವು ಜಾತಿ ಮತ ಪಂಥಗಳನ್ನಮರೆಯೋಣ ಅಸೂಯೆ ಬೇಧ ಭಾವಗಳನ್ನು ಕಿತ್ತೋಣ ಜಾತಿ ಧರ್ಮದ ಜಾಲಿಯ ಮುಳ್ಳುಬಿತ್ತೋಣ ಮನುಜ ಮತದ ಪ್ರೀತಿ ಬಿಳಿ ಎಳ್ಳುಹಚ್ಚೋಣ ಅನ್ಯೋನ್ಯತೆಯ ಅಮೃತ ಬಳ್ಳಿಬಿಚ್ಚೋಣ ಕಟ್ಟಿರುವ ಕೋಮುವಾದದ ಸರಪಳಿ ಬಸವರಾಜ್ ಚೌಡ್ಕಿ

“ಕಟ್ಟಬೇಕಿದೆ ನಾಡೊಂದನು” ಬಸವರಾಜ್ ಚೌಡ್ಕಿ Read Post »

ಕಾವ್ಯಯಾನ

ಅನಸೂಯ ಜಹಗೀರದಾರ ಅವರ ಗಜಲ್

ಕಾವ್ಯ ಸಂಗಾತಿ ಅನಸೂಯ ಜಹಗೀರದಾರ ಗಜಲ್ ನಿನ್ನ ಪಥದಲಿ ನಾನಿರುವೆ ಎಂದು ನಂಬುವುದು ಹುಸಿ ಮಾತುನನ್ನ ದಾರಿಯಲಿ ನಿನ್ನ ಹೆಜ್ಜೆಗಳಿವೆ ಎಂದು ತಿಳಿಯುವುದು ಹುಸಿಮಾತು ನೀನಾಡಿದ ಮಾತುಗಳಲಿ ಮಿಥ್ಯದ ನರ್ತನ ವಿಜೃಂಭಿಸಿರಬಹುದುನಿನ್ನೊಂದಿಗಿದ್ದ ಸಮಯದಲಿ  ಮುಖವಾಡ ಧರಿಸಿಲ್ಲವೆನ್ನುವುದು ಹುಸಿಮಾತು ಯಾವ ಕೋನದಿಂದ ನೋಡಿದರೂ ಸಂಪೂರ್ಣ ಕೇಂದ್ರ ಸೆಳೆಯದುಕಣ್ಣೆರಡು ನೋಟ ಅದೇ ಆದರೂ ಗ್ರಹಿಕೆ ಒಂದೇ ಆದೀತೆನ್ನುವುದು ಹುಸಿ ಮಾತು ಒಂದೇ ದೋಣಿಯ ಪಯಣಿಗರು ನಿಜವದು ಇಲ್ಲವೆನ್ನಲಾಗದುಜಗದ ಕಟು ವಾಸ್ತವದ ಜೊತೆ ನಿನ್ನನ್ನೂ ಲೋಕ ಒಪ್ಪಿಕೊಳ್ಳುವುದು ಹುಸಿಮಾತು ಹಕ್ಕುಗಳನ್ನು ಚಲಾಯಿಸುತ್ತಲೇ ನಡೆದಲ್ಲಿ ಪ್ರೀತಿ ಗೆ ಅಲ್ಲಿ ಜಾಗವಿಲ್ಲ #ಅನುಕೇಳಿ ಯಾಚಿಸಿ ಕಾಡಿಸಿ ಪಡೆವ ಸುಖ ಸಂತಸ ನಿಜವೆನ್ನುವುದು ಹುಸಿಮಾತು ಅನಸೂಯ ಜಹಗೀರದಾರ

ಅನಸೂಯ ಜಹಗೀರದಾರ ಅವರ ಗಜಲ್ Read Post »

ಕಾವ್ಯಯಾನ

ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು”

ಕಾವ್ಯ ಸಂಗಾತಿ ಸಿ.ಎಚ್.ಮಧುಕುಮಾರ “ಕವಿಪತ್ನಿಯ ಅಳಲು” ಸಂಸಾರದ ನೊಗಭಾರವ ನನ್ನೊಬ್ಬಳಿಗೇ ಹೊರಿಸಿಅಕ್ಷರ ಜಾತ್ರೆಗಳಲಿ ಜೋಳಿಗೆ ಹಿಡಿದುಊರೂರು ಸುತ್ತುವ ಅರೆಜೋಗಿಯೇಬೆಚ್ಚಿಬೀಳಿಸುವ ನಿನ್ನ ಕವಿತೆಯ ಕೊನೆಯ ಸಾಲುಗಳನೆನೆನೆನೆದು ಹಣ್ಣಾಗಿರುವೆಈ ಹೆಣ್ಣಿಗಾಗಿ ಚೂರು ಸಮಯವಿದೆಯೆ? ನೀನಿತ್ತ ಆ ಎರಡು ಮಕ್ಕಳೋನಿನ್ನದೇ ಅಪರಾವತಾರ ಎಂಬಂತೆಅರ್ಥವಾಗದ ಭಾಷೆಯಲ್ಲಿ ವ್ಯವಹರಿಸುತ್ತಿವೆ!ನಿಭಾಯಿಸಲು ಹೊಸ ಭಾಷ್ಯ ಬರೆಯಬೇಕಿದೆ ಚೂರು ಸಮಯವಿದೆಯೆ? ನನ್ನ ದಾರಿ ಸುಗಮಗೊಳಿಸಲು? ಕವಿಯ ಸ್ಪೂರ್ತಿಯ ಮೂಲ ‘ಕವಿಪತ್ನಿಯೇ ಇರಬೇಕೆಂದು’ಹಾಲು,ತರಕಾರಿ.ದಿನಸಿ ತರಲೆಂದು ಹೊರಹೋದಾಗಲೆಲ್ಲನಿಮ್ಮದೆ ಓದುಗರು ಕಣ್ಣಭಾಷೆಯಲಿ ಪ್ರತಿಕ್ರಿಯಿಸುತ್ತಿದ್ದಾರೆ!ಅರ್ಥೈಸಿಕೊಳ್ಳಲಾಗುತ್ತಿಲ್ಲ ಚೂರೇ ಚೂರು ಸಮಯವಿದ್ದರೆಬಂದು ಬಿಡಿ ಒಂದು ಬಾರಿ ನನ್ನೊಂದಿಗೆ. ಅರಿಸಿನ ಕುಂಕುಮ ತೆಗೆದುಕೊಳ್ಳಲುಮನೆಗೆ ಬರುವ ಮುತ್ತೈದೆಯರು ಕೇಳುತಿಹರು ನಿಮ್ಮನ್ನುನಿಮ್ಮ ನಗು, ಹರಟೆಯ ಗಂಟು ಮೂಟೆ ಕಟ್ಟಿಹೊರಟು ಬನ್ನಿ ಮನೆಗೆನಿಮ್ಮೆಲ್ಲ ಕವಿತೆಯ ಪ್ರಸವಗಳು ಇಲ್ಲಿಯೇ ಆಗಲಿ! – ಸಿ.ಎಚ್.ಮಧುಕುಮಾರ

ಸಿ.ಎಚ್.ಮಧುಕುಮಾರ ಕವಿತೆ,”ಕವಿಪತ್ನಿಯ ಅಳಲು” Read Post »

ಕಾವ್ಯಯಾನ

“ಸಾವ ತುಟಿಯೂ ನಗು ಹೊತ್ತಿರಬೇಕು” ಡಾ ಬಿ ಎನ್‌ ತಾರಾ ಧಾರವಾಡ

ಕಾವ್ಯ ಸಂಗಾತಿ ಡಾ ಬಿ ಎನ್‌ ತಾರಾ ಧಾರವಾಡ “ಸಾವ ತುಟಿಯೂ ನಗು ಹೊತ್ತಿರಬೇಕು” ಬದುಕು ಹೆಂಗಿರಬೇಕು,ಕತ್ತಲ ಗರ್ಭದಲ್ಲೂಬೆಳಕು ಹೊತ್ತಿರಬೇಕು.ಹಸಿವು ಅಸಾಧ್ಯವಾದರೂಆಸೆಯ ದೀಪವೊಂದುಎದೆಯಲಿ ಹೊತ್ತಿರಬೇಕು.ಬಿದ್ದೆವೆಂದು ಭಯಪಟ್ಟು ಮೌನವಾದರೆ,ಬದುಕು ಪಾಠಕಲಿಸೋದಿಲ್ಲ.ಕಣ್ಣೀರ ಹನಿಗಳು ನೆಲ ಸೇರುವ ಮುನ್ನ, ಮುತ್ತಾಗುವಷ್ಟುಮೌಲ್ಯವಿರಬೇಕು.ಹಾರದೆ ಮುರಿದ ಕನಸುಗಳ  ಹೊಸ ಕನಸಿನ ಬೀಜ ಮೊಳಕೆಯೊಡೆಯಬೇಕು.ನೋವಿನ ಪ್ರತಿಯೊಂದು ಹೆಜ್ಜೆಯ ಹಿಂದೆಯೂ,ಅರ್ಥವುಮೌನವಾಗಿ ನಗಬೇಕು.ಸೋಲಿನ ನೆರಳು ಮೇಲೆ ಬಿದ್ದರೂ,ಕಾಲದ ಹೊಡೆತಎದೆ ಚೂರಿದರೂಧೈರ್ಯವೆಂಬ ಬೇರು ಇರಬೇಕು. ನಗು  ನಗುತಿರಬೇಕು ಸಾವಿರ ನೋವಿಗೆಉತ್ತರವಾಗಬೇಕು.ಕೊನೆಯ ಉಸಿರಿನ ಕ್ಷಣದಲ್ಲೂ,ಜೀವನ ಜಯಿಸಿದತೃಪ್ತಿಯಿರಬೇಕು.ಸಾವ ಬಂದಾಗದೇಹ ಮೌನವಾದರೂ,ಮನಸ್ಸು ಮಾತ್ರ ರಾಗ ಹಾಡುತ್ತಿರಬೇಕು. ಬದುಕಿದ ಜೀವಕ್ಕೆಸಾವ ತುಟಿಯೂನಗುವ ಹೊತ್ತಿರಬೇಕು.ಕತ್ತಲ ಗರ್ಭದಲ್ಲೂಬೆಳಕು ಹೊತ್ತಿರಬೇಕ,ಕಣ್ಣೀರ ಹನಿಗಳುನೆಲ ಸೇರುವ ಮುನ್ನ,ಮುತ್ತಾಗುವಷ್ಟ ಮೌಲ್ಯವಿರಬೇಕು.ಆಕಾಶಕ್ಕೆ ಹಾರದೆ ,ಹೊಸ ಕನಸಿನ ಬೀಜನೋವಿನ ಪ್ರತಿಯೊಂದುಹೆಜ್ಜೆಯ ಹಿಂದೆಯೂ,ಅರ್ಥ ಮೌನವಾಗಿ ನಗಬೇಕು.ಭ್ರಮಿಸಬಾರದು.ಕಾಲದ ಹೊಡೆತ ಎದೆ ಚೂರಿದರೂ ಸಹ,ಧೈರ್ಯವೆಂಬ ನಡುಗದ ಬೇರು ಇರಬೇಕು. ನಗು ಸಣ್ಣದಾದರೂ ಸಾಕು,ಅದು ಸಾವಿರ ನೋವಿಗೆ ಉತ್ತರವಾಗಬೇಕು. ಉಸಿರಿನ  ಕ್ಷಣದಲ್ಲೂ,ಜೀವನ ಜಯಿಸಿದೆವೆಂಬ ತೃಪ್ತಿಯಿರಬೇಕು.ಮನಸ್ಸು  ಹಾಡುತ್ತಿರಬೇಕು.ಸಾವ ತುಟಿಯೂನಗುವ ಹೊತ್ತಿರಬೇಕು. ಡಾ ತಾರಾ ಬಿ ಎನ್ ಧಾರವಾಡ

“ಸಾವ ತುಟಿಯೂ ನಗು ಹೊತ್ತಿರಬೇಕು” ಡಾ ಬಿ ಎನ್‌ ತಾರಾ ಧಾರವಾಡ Read Post »

You cannot copy content of this page

Scroll to Top