ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ”

ಕಾವ್ಯ ಸಂಗಾತಿ ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ” ಒಮ್ಮೆ ಎಳ್ಳು ಒಮ್ಮೆ ಬೆಲ್ಲಬದುಕಿದು ನೋವು ನಲಿವುಗಳ ಸಂಕ್ರಮಣ ಇಲ್ಲಿ ಬೇಲಿ ಅಲ್ಲಿ ಹಾದಿಬದುಕಿದು ಪಥ ಬದಲಿಸುವ ರಥಸಪ್ತಮಿ ನಿನ್ನೆ ಶಿಶಿರ ಎಂದು ವಸಂತಬದುಕಿದು ಹಲವು ಋತುಗಳಲ್ಲಿ ಪರಿಭ್ರಮಣ ಮುಳುಗುವ ಸೂರ್ಯ ಹೊತ್ತುವ ದೀಪಬದುಕಿದು ಕತ್ತಲೆ ಬೆಳಕಿನ ನಡುವಿನ ಆವರ್ತನ ಅಲ್ಪ ಸುಖ ಸಾಕಷ್ಟು ಕಷ್ಟಬದುಕಿದು ಸಮ್ಮಿಶ್ರ ನಗರ ಸಂಕಲನ   ಸಾಸಿವೆಯಷ್ಟು ನಗು ಸಾಗರದಷ್ಟು ಅಳು ಬದುಕಿದು ಪ್ರತಿಪಕ್ಷ  ಹೊಂದಾಣಿಕೆಯ ಹೂರಣ ಆ ಕಣಿವೆ ಈ ಬೆಟ್ಟಬದುಕಿದು ದಿನನಿತ್ಯ  ಇಳಿದೇರುವ ಚಾರಣ ಒಮ್ಮೆ ಜನನ ಒಮ್ಮೆ ಮರಣಬದುಕಿದು ವಿಧಿ ವಿಲಾಸದ ಸಂಕೀರ್ತನ ದಾಕ್ಷಾಯಣಿ ಶಂಕರ ಹುಣಶ್ಯಾಳ

ದಾಕ್ಷಾಯಣಿ ಶಂಕರ ಹುಣಶ್ಯಾಳ “ಸಂಕ್ರಮಣ” Read Post »

ಕಾವ್ಯಯಾನ

ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ “ವಿಶ್ವಪಥ”

ಕಾವ್ಯಸಂಗಾತಿ ಡಾ  ಗೀತಾ ದಾನಶೆಟ್ಟಿ ವಿಶ್ವಪಥ ಉಡುವ ಬಟ್ಟೆನಡೆವ ಬದುಕುಹಲವು ಬಗೆರೀತಿಯಾದರೇನು ?ಮನುಜ ಮತ ಒಂದೇ ಇರಲುದ್ವೇಷ ಅಸೂಯೆಗಳೆತಕೆಭ್ರಾಂತಿ ಅಳಿದು,ಶಾಂತಿ ಉಳಿದುಸತ್ಯ ಸಮತೆಗೆ ಮಣಿದುಮತ್ತೆ ಬೆಳೆಯಲಿಮನುಜ ಮತನಿತ್ಯ ಸಾಗುವ  ವಿಶ್ವಪಥ ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ  ಗೀತಾ ದಾನಶೆಟ್ಟಿ ಬಾಗಲಕೋಟೆ “ವಿಶ್ವಪಥ” Read Post »

ಕಾವ್ಯಯಾನ

“ದಂಡೇಶು ದುರ್ಗಾ…” ಕವಿತೆ ಸುಮತಿ ನಿರಂಜನ

ಕಾವ್ಯ ಸಂಗಾತಿ ಸುಮತಿ ನಿರಂಜನ “ದಂಡೇಶು ದುರ್ಗಾ…” ಬಂದ್ಯಾ ನನ್ ಮಗ್ನೇ…ಈಟೊತ್ತಿಗ್ ನೆಪ್ಪಾಯ್ತ ನಿಂಗೆಮನಿ ಮಕ್ಳ್ ಮರಿ ?ನೆಟ್ಟಗ್ ನಿಲ್ಲಾಕು ಆಯ್ತ ಇಲ್ಲಅಷ್ಟ್ ಆಕವ್ನೆಬಡ್ಡೀಮಗನ್ ತಂದು !ಅಕ್ಕಿ ಡಬ್ಬದಾಗ್ ಕೈ ಆಕಿತೆಗ್ದವ್ನೆ ತಿಂಗಳ್ ರೊಕ್ಕಇವತ್ತ್ ನಿನ್ ಗ್ರಾಚಾರಬಿಡಸ್ತೀನ್ ನೋಡ್ಕ…ಗಡಂಗ್ನಾಗ್ ಕುಂತುಎಂಡ ಇಳಸ್ತಾನೆಎಂಡ್ತೀ ಒಡ್ವೆ ಮಾರಿಭಡವಾ ಬೇವಾರ್ಸಿಬೆಂಕಿ ಬೀಳಾ ನಿನ್ನನ್ಹಡದವ್ಳ ಹೊಟ್ಟೀಗೆ !ನಾಚ್ಕೀ ಆಗಾಕಿಲ್ಲ ? ನಂಗ್ ಬರಾ ಕೋಪಕ್ಕೆ…ನಿನ್ ಕಾಲ್ ಕಟ್ಟಿಬಟ್ಟಿ ಒಗ್ಯಾ ಬಂಡಿ ಮ್ಯಾಗ್ ಕುಕ್ಕಿಮಂಡಿ ಒಡ್ದ್ ಆಕ್ಬೇಕ್ ಅನ್ಸ್ ತ್ತೈತಿಆದ್ರ ಎನ್ ಮಾಡ್ಲಿನೀ ಗೊಟಕ್ ಅಂದ್ರನಾನ್ ತಾನೆ ಮುಂಡೆ ಆಗಾಕಿಇದ್ರೂ ನಷ್ಟ ಮಾಡಾಂವಸತ್ರೂ ಕಷ್ಟ ಕೊಡಾಂವ !ನಿನ್ ಮಖಕ್ಕಿಷ್ಟು ! ಸುಮತಿ ನಿರಂಜನ

“ದಂಡೇಶು ದುರ್ಗಾ…” ಕವಿತೆ ಸುಮತಿ ನಿರಂಜನ Read Post »

ಕಾವ್ಯಯಾನ

ವಿಮಲಾರುಣ ಪಡ್ಡoಬೈಲು,”ಗೀಚಿನಿಂದರಳಿದ ಗೀತೆ”

ಕಾವ್ಯ ಸಂಗಾತಿ ವಿಮಲಾರುಣ ಪಡ್ಡಂಬೈಲು ಗೀಚಿನಿಂದರಳಿದ ಗೀತೆ ಆ ಪುಟ್ಟ ಕೈಯಲಿ  ಅಂದುತೋಚಿ ಗೀಚಿದ ಸಾಲುಬಿಳಿಹಾಳೆ ಮೇಲೇರಿ ಕವಿತೆಯಾಗಲುಮನದಿ ಮೂಡಿದ  ಆ ಭಾವ ಬಲು ಹಿತ. ಸೂರ್ಯ-ಚಂದಿರ-ಚುಕ್ಕಿ-ತಾರೆಗಳಪಿಸುಮಾತು ಎದೆಗಿಳಿಯಲುನನ್ನ  ದಿಟ್ಟಿಸಿ  ನಕ್ಕಿದ್ದವುನೈಜ ಭಾವದ ನನ್ನ ತಾಳ-ಮೇಳಕೂ ವರ್ಣ ಕುಹಕವೋ ಮೋಹಕವೋ ತಿಳಿಯದಾದೆ!ಆದರೂ ಕವಿತೆ ಗಾನವಾದಾಗ  ನಾ ಸಂಭ್ರಮಿಸಿದ ಆ ದಿನಗಳೆಷ್ಟು ಚೆಂದ.. ಹಿತ್ತಲಲ್ಲರಳಿದ ಜಾಜಿ ಸೇವಂತಿಗೆ ಗುಲಾಬಿಕಂಪು ಸೂಸುತ್ತ ಹನಿಯ ಬಿಗಿದಪ್ಪಿರಲುಮೌನಗರ್ಭದಿ ಕೂಸು ಮಿಸುಕಾಡಿದಂತಾಯ್ತುಖಾಲಿ ಕಾಗದದಿ ಜೀವ ತಳೆದಾಯ್ತುನಾನೋ ಅದರ ಬೆನ್ನು ತಟ್ಟಿದ್ದೆಅಥವಾ ಅದು ನನ್ನೊಳಗಿನ ಸ್ಪಂದನೆಗೆಸ್ಪರ್ಶಸಿತ್ತೋ?ಒಂದಂತೂ ದಿಟಅರಿಯದ ಆ ಮುಗ್ಧ ಮಹಾದಾನಂದ. ಚಿಮಣಿ ದೀಪ ಸುತ್ತ ಸೆಳಕು ಚೆಲ್ಲಿರಲುಉರಿವ ಸೌದೆಯ  ಉರಿಯಲಿಅಮ್ಮನ  ಬೆವರು  ಬಸಿದಿರಲುತುತ್ತು ಉಣ್ಣಿಸಿದ ಖುಷಿಗೆಆತ್ಮತೃಪ್ತಿಯ ಎರಕ ಹೊಯ್ದನಾ ಬರೆದ ಎರಡು ಸಾಲುಅವಳಿಗದೆಷ್ಟು ಸಂತೃಪ್ತಿ!ಹಿಗ್ಗಿತ್ತು ನನ್ನ ಹೃದಯ. ಅಪ್ಪನ ಹೆಗಲೇರಿ ನೋಡಿದ ಜಾತ್ರೆಅಕ್ಕತಂಗಿಯರೊಡಗೂಡಿ ಆಡಿದ ಆಟಮರದ ನೆರಳಲ್ಲಿ ಬಿತ್ತಿದ ಬೀಜಗಳುಬರಹದ ಬೇರಾಗಿ ಅವು ಕವಿತೆಯಾಗಿಬೀಸುವ ಕುಳಿರ್ಗಾಳಿ ನೀ ಕವಿಯೆಂದುಪಿಸುಗುಟ್ಟಿದ ಆ ದಿನವೆಷ್ಟು ಚೆಂದ … ಅಂದು ಗೀಚಿದ್ದೆ ಗೀತೆ ಅದೆಂಥಾ ಆನಂದಇಂದು ಭಾವಗಳ ಹೆಣೆದಷ್ಟು ನಿರ್ಭಾವಜೋಂಪು ನಿದಿರೆಯಲಿ ಮುದುಡಿದ ಪದಗಳಭಾವವಾಗಿ ನನ್ನತ್ತ ಹರಿಯ ಬಿಡು ಕವಿತೆನಿನ್ನಾಗ ಜಗ ಮೆಚ್ಚುವುದು ಸುನೀತೆ. ವಿಮಲಾರುಣ ಪಡ್ಡoಬೈಲು

ವಿಮಲಾರುಣ ಪಡ್ಡoಬೈಲು,”ಗೀಚಿನಿಂದರಳಿದ ಗೀತೆ” Read Post »

ಕಾವ್ಯಯಾನ

ʻಆತ್ಮಾಭಿಮಾನʼ ಡಾ ತಾರಾ ಬಿ ಎನ್.

ಕಾವ್ಯ ಸಂಗಾತಿ ಡಾ ತಾರಾ ಬಿ ಎನ್. ʻಆತ್ಮಾಭಿಮಾನʼ ನನ್ನೊಳಗಿನ ನಾದವದು,ನನ್ನ ನಿಲುವಿನ ನೆರಳದು,ಬಾಗದ ತಲೆಗೂ ಮುರಿಯದ ಮನಕೂಹೆಸರು ಕೊಟ್ಟ ಶಕ್ತಿಯದು ಆತ್ಮಾಭಿಮಾನ. ಬಿರುಗಾಳಿಯ ನಡುವೆ ನಿಂತುಬೇರು ಬಿಟ್ಟ ಮರದಂತೆ,ಎಷ್ಟು ಹೊಡೆತ ತಿಂದರೂನೆಲ ಬಿಟ್ಟು ಸರಿಯದ ನಂಬಿಕೆಯಂತೆ.ಅದು ಗರ್ವವಲ್ಲ, ಅಹಂಕಾರವೂ ಅಲ್ಲ.ಇತರರನ್ನು ಕುಗ್ಗಿಸುವ ದುರಹಂಕಾರವಲ್ಲ, ತನ್ನ ಮೌಲ್ಯವನ್ನು ಅರಿತುತಾನೇ ತಾನಾಗಿರುವ ಧೈರ್ಯವದು.ಕಟ್ಟಿದ ಕನಸುಗಳು ನುಚ್ಚುನೂರಾದಾಗಲೂಕಣ್ಣೀರ ಮಧ್ಯೆ ನಗು ಉಳಿಸಿದಂತೆ,“ನಾನು ಸೋಲಿಲ್ಲ” ಎನ್ನುವನಿಶ್ಶಬ್ದ ಘೋಷಣೆಯೇ ಆತ್ಮಾಭಿಮಾನ. ಸತ್ಯದ ದಾರಿಯಲ್ಲಿ ನಡೆಯುವಾಗಒಂಟಿತನ ಬಂದರೂ ಭಯವಿಲ್ಲ,ನನ್ನ ನಡೆ ನನ್ನದೆ ಎನ್ನುವಸ್ಥೈರ್ಯ ತುಂಬುವ ದೀಪವದು. ಬಡತನದ ಬಟ್ಟೆ ಧರಿಸಿದರೂಮನಸ್ಸು ರಾಜಸವಾಗಿರಬಹುದು,ಅಭಿಮಾನವಿಲ್ಲದೆ ಶ್ರೀಮಂತಿಕೆಖಾಲಿ ಮಂಟಪವಾಗಿರಬಹುದು.ತಲೆಯೆತ್ತಿ ನಡೆಯಲು ಕಲಿಸುವುದು, ನ್ಯಾಯದ ಪರ ನಿಲ್ಲಲು ಪ್ರೇರೇಪಿಸುವುದು,ಯಾರ ಹಂಗೂ ಇಲ್ಲದಬೇರೆ ಯಾರ ಅನುಮತಿಯಿಲ್ಲದೆನನ್ನ ಮೌಲ್ಯವನ್ನು ಘೋಷಿಸುವುದು.ಆತ್ಮಾಭಿಮಾನ ನನ್ನ ಶಿರಸ್ಸಿನ ಕಿರೀಟವದು,ನನ್ನ ಜೀವನದ ದೀಪವದು,ಬಿದ್ದಾಗಲೂ ಏಳುವಂತೆ ಮಾಡುವನನ್ನೊಳಗಿನ ಶಾಶ್ವತ ಶಕ್ತಿ.ಅನುಪಮ ಅವ್ಯಕ್ತ   ಶಕ್ತಿಯಮೌಲ್ಯಾದರ್ಶದ ಜ್ಞಾನಶಿಸ್ತುನನ್ನೊಳಗಿನ ಶಾಶ್ವತ ಶಕ್ತಿ. ಡಾ ತಾರಾ ಬಿ ಎನ್.

ʻಆತ್ಮಾಭಿಮಾನʼ ಡಾ ತಾರಾ ಬಿ ಎನ್. Read Post »

ಕಾವ್ಯಯಾನ

ಹನಿಬಿಂದು ಅವರ ಕವಿತೆ “ಪೋಷಕ ವಾತ್ಸಲ್ಯ”

ಕಾವ್ಯ ಸಂಗಾತಿ ಹನಿಬಿಂದು ಪೋಷಕ ವಾತ್ಸಲ್ಯ ಕೌಸಲ್ಯೆ ಮಾತ್ರವಲ್ಲ ಪ್ರತಿ ತಾಯ ವಾತ್ಸಲ್ಯಪುತ್ರ ಪುತ್ರಿ ಮನೆ ಹಿರಿಯರಿಗೆಭವಿಷ್ಯತ್ತಿನ ಯೋಚನೆ, ಯೋಜನೆ ವೈಶಾಲ್ಯಉಸ್ತುವಾರಿ ಜೊತೆ ಹಣ ಸಕಲರಿಗೆ.. ರಕ್ಷಣೆಯ ಹೊಣೆ ಹೊತ್ತ ಮಾತಾಪಿತರ ನೀತಿಭಕ್ಷಣೆಗೆ ತಂದಿತ್ತರೂ ಒಣ ಭೀತಿಅಗತ್ಯಕ್ಕೆ ತಕ್ಕಂತೆ ಬೇಕಾದುದೆಲ್ಲ ಒದಗಿಸುವ ಸ್ಪೂರ್ತಿದುಡಿತವೆಲ್ಲ ಮಕ್ಕಳಿಗೆ, ಕುಟುಂಬ ಪ್ರೀತಿ ನಿರ್ಲಕ್ಷ್ಯವಿಲ್ಲ ಇಲ್ಲಿ ಪೋಷಣೆ ಗಮನ ಆರೈಕೆಸೂಕ್ತ ವ್ಯವಸ್ಥೆ ನಿತ್ಯ ಒದಗಿಸುವರುಕಲ್ಪಿಸುತ ಸೌಲಭ್ಯಗಳ ಖರ್ಚು ವೆಚ್ಚ ಭರಿಸಿಹಿಂದಿನ ಮುಂದಿನ ನಾಳೆಗಳ ಯೋಜಿಸುವರು ಸವಾಲುಗಳು ಅದೆಷ್ಟೋ ಮನುಷ್ಯ ಬದುಕ ನೋವುಗಳೋಆದರೂ ನಿರ್ಮಿಸುತ ಕನಸ ಮಹಲುಗಳಸಂಪನ್ಮೂಲಗಳ ಕೊರತೆ ಇರಬಹುದು ಅಲ್ಲೆಲ್ಲೋಕುಟುಂಬದ ಸಹಭಾಗಿತ್ಯ ಪ್ರೀತಿ ಬಯಸುವ ಜೀವಗಳು ಹನಿಬಿಂದು

ಹನಿಬಿಂದು ಅವರ ಕವಿತೆ “ಪೋಷಕ ವಾತ್ಸಲ್ಯ” Read Post »

ಕಾವ್ಯಯಾನ

ಪ್ರೊ .ರಾಜೇಶ್ವರಿ ಶೀಲವಂತ ಪುಣೆ ಅವರ ʻಅಡುಗೆʼ

ಕಾವ್ಯ ಸಂಗಾತಿ ಪ್ರೊ .ರಾಜೇಶ್ವರಿ ಶೀಲವಂತ ಪುಣೆ ʻಅಡುಗೆʼ ಏನೇ ಏನಿವತ್ತು ಊಟಕ್ಕೆ  ಊಟಕ್ಕೇನಮ್ಮಎಲ್ಲರ ಮನೆಯ  ಸಹಜ ಪ್ರಶ್ನೆಅದಕ್ಕವಳದು ಹರ ಸಾಹಸನಿನ್ನೆಯದು ಇಂದಾಗೋಲ್ಲಪ್ರತಿದಿನವೂ ಹೊಸದಿರಬೇಕಲ್ಲಉಪ್ಪು ಖಾರ ಹದವಾಗಿರಲುಅವಳ ಪರಿವೆಯಿಲ್ಲಅದು  ತಪ್ಪಿದರೆ ಅವಳಿಗೇನೆ  ಎಲ್ಲಆ ಸಿಟ್ಟಿನಲ್ಲಿ  ಮಾಡೋಲ್ಲಅವಳು ರೊಟ್ಟಿಬಡೀತಾಳೆ ಸಿಟ್ಟಿನಲ್ಲಿ ತಟ್ಟಿ ತಟ್ಟಿಸೇರಿಸೋಲ್ಲ ಪಲ್ಯಕ್ಕೆ ಉಪ್ಪು ಖಾರಸುರೀತಾಳೆ ಭರ ಭರ ಕೋಪದಬ್ಬರ  ಎಲ್ಲರೂ ಹೋಟಲ ಮೊರೆರುಚಿಯಿರದ  ತಿಂಡಿಗೆ  ಟಿಪ್ಸ ಬೇರೆ  ನೀ ಮಾಡಿದ  ಚಹಾ ನಿನ್ನಷ್ಟೇ ಸಿಹಿಚಪಾತಿ ನಿನ್ನತರಹ ಮೃದುನಿನ್ನ ಕೈ ರುಚಿ ಜೇನಿನಂತೆಅಂತ   ನೀವೂಮ್ಮೆ ಪಿಸುಗುಟ್ಟಿದರದೆ ಅವಳಿಗೆ ಹೆಮ್ಮೆ  ಹೊಸ ಹುಮ್ಮಸ್ಸಿನೊಂದಿಗೆ ಪ್ರವೇಶಿಸುವಳವಳುಅಡುಗೆ ಮನೆಯ ಮತ್ತೊಮ್ಮೆಹೊತ್ತು ನೋಡಿ  ಈ ಎಲ್ಲವನುಒಂದು ದಿನವಾದರೂಮರುದಿನವೇ ತೇನಾಲಿ ರಾಮಕೃಷ್ಣನ ಬೆಕ್ಕಿನಂತೆ  ನೀವು ಪರಾರಿ                ನಿಟ್ಟುಸಿರಿನೊಂದಿಗೆಕೊನೆಗಂದೆಅಬ್ಬಾ!!  ನೀನೆ ಸರಿಸಾಟಿ ಇದಕೆಲ್ಲ. ಪ್ರೊ .ರಾಜೇಶ್ವರಿ ಶೀಲವಂತ ಪುಣೆ

ಪ್ರೊ .ರಾಜೇಶ್ವರಿ ಶೀಲವಂತ ಪುಣೆ ಅವರ ʻಅಡುಗೆʼ Read Post »

ಕಾವ್ಯಯಾನ

“ವೇದಿಕೆಯ ಮೆಟ್ಟಿಲುಗಳು”ಡೋ ನಾ ವೆಂಕಟೇಶ

ಕಾವ್ಯ ಸಂಗಾತಿ ವೇದಿಕೆಯ ಮೆಟ್ಟಿಲುಗಳು ಡೋ ನಾ ವೆಂಕಟೇಶ್ ಆಗಿರಲಿ ವೇದಿಕೆಗಳುಪ್ರಬುದ್ಧ ಸಂವೇದನೆಗಳಕಿಚ್ಚುಆಗದಿರಲಿ ವೇದಿಕೆಗಳು ಅಬದ್ಧ ಕೊರೆತಗಳ ಕಾಳ್ಗಿಚ್ಚು ವೇದಿಕೆಯಲಿ ವಿಜೃಂಭಿಸಲಿಅಗಣಿತ ತಾರೆಗಳುದೇದೀಪ್ಯಮಾನ ಲಹರಿಗಳುಅನನ್ಯ ಸಾಂಗತ್ಯದ ಗೀತೆಗಳು ವೇದಿಕೆಗಳೊಳಗೆ ಇರಲಿವಿಚಾರವಂತನಿಗೆ ವಿನಯಅನಾಚಾರಿಗೆ ದುರ್ದಾನಮಾನವಂತನಿಗೆ ಸನ್ಮಾನ. ಹೇಳದೆಯೇ ಕೇಳಿಸಿಕೊಳ್ಳುವ ಶ್ರೋತೃಗಳುಶೋಕ ಗೀತೆಯಿಲ್ಲದೆಯೇ ಮಿಡಿಯುವ ಕಣ್ಣೀರಧಾರೆಗಳುಧ್ವನಿವರ್ಧಕವಿಲ್ಲದೇ ಮಾರ್ದನಿಸುವ ಅಮೃತ ವಚನಗಳು. ಎಲ್ಲಾಜೀವನದ ಅನುಭಾವ ಮೆಟ್ಟಿಲುಗಳು! ಡೋ ನಾ ವೆಂಕಟೇಶ

“ವೇದಿಕೆಯ ಮೆಟ್ಟಿಲುಗಳು”ಡೋ ನಾ ವೆಂಕಟೇಶ Read Post »

ಕಾವ್ಯಯಾನ

“ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ

ಕಾವ್ಯ ಸಂಗಾತಿ “ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ ನೆರಳು ಕೊಡದ ಅಪ್ಪನೆಂಬಆಲದ ಮರನೆರಳು ಕೊಡದಿದ್ದರೂಬೇಸಿಗೆಯ   ಬರಡಾಗಿ ಮಧ್ಯೆ ನಿಂತಿರುವಆಲದ ಮರದಂತೆನಮ್ಮ ಅಪ್ಪಬಿಸಿಲಿಗೆ ಸುಟ್ಟು ಬಿಸಿನಲಿ ಬೆಂದುಮಳೆಯಿಲ್ಲದೆ ಒಣಗಿಬೇರುಗಳಲ್ಲಿ ನೋವು ಕಟ್ಟಿಕೊಂಡುನಿಂತವನು.ನಮಗೆ ನೆರಳು ಬೇಕಿತ್ತು,ಅವನಿಗೆ ಮಾತ್ರಆಕಾಶದಷ್ಟು ಹೊಣೆ.ಮಾತಾಡಲಿಲ್ಲ,ಅಳಲಿಲ್ಲ,ತನ್ನ ಹಸಿವನ್ನುರಾತ್ರಿಯ ಕತ್ತಲಲ್ಲಿ ಮುಚ್ಚಿಟ್ಟುಕೊಂಡುಬೆಳಗಿನ ಬೆಳಕಿಗೆನಮ್ಮ ಕನಸುಗಳನ್ನು ಎತ್ತಿಕೊಟ್ಟವನು.ಎಲೆಗಳಿಲ್ಲದ ಕೊಂಬೆಗಳ ಮೇಲೆನಮ್ಮ ನಾಳೆಗಳನ್ನೇ ಕಟ್ಟಿಕೊಂಡುಬಿರುಗಾಳಿಗೂ ಎದುರಾಗಿಅಚಲವಾಗಿ ನಿಂತವನು.ನೆರಳು ಸಿಗದಿದ್ದಕ್ಕೆನಾವು ಅವನನ್ನು ತಪ್ಪು ತಿಳಿದೆವು,ಆದರೆನೆಲದೊಳಗೆ ಅವನುನಮಗಾಗಿ ಹರಿಸಿದ್ದಅದೆಷ್ಟು ಮೌನವಾದ ಶ್ರಮ!ನೀರಿಲ್ಲದ ಆಲದ ಮರದಂತೆಅವನ ಪ್ರೀತಿಗೂಹೆಸರು ಇರಲಿಲ್ಲ,ಬಣ್ಣವೂ ಇರಲಿಲ್ಲ,ಆದರೆಅದು ಜೀವ ಉಳಿಸುವ ಬೇರು.ಇಂದು ನಾವುಎತ್ತರಕ್ಕೆ ಬೆಳೆದಾಗಹಿಂದೆ ನೋಡಿದರೆನೆರಳು ಕಾಣುವುದಿಲ್ಲ,ಆದರೆನೆಲದೊಳಗೆ ಕೈ ಹಾಕಿದರೆಅಪ್ಪನ ತ್ಯಾಗಇನ್ನೂ ತೇವವಾಗಿಯೇ ಇದೆ.ನೆರಳು ಕೊಡದ ಅಪ್ಪನೆಂಬ ಆಲದ ಮರ—ಬೀಳದೆ ನಿಂತುಬೇರೂರಿನಮ್ಮ ಬದುಕನ್ನೇತುಂಬಿಸಿಕೊಂಡವನು. ಡಾ ತಾರಾ ಬಿ ಎನ್ ಧಾರವಾಡ

“ಆಲದ ಮರ” ಡಾ ತಾರಾ ಬಿ ಎನ್ ಧಾರವಾಡ Read Post »

ಕಾವ್ಯಯಾನ

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು”

ಕಾವ್ಯ ಸಂಗಾತಿ ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು“ ನನ್ನವರು ಸಾಯುವುದು ಗುಂಡಿನಿಂದಲ್ಲಎದೆ ಹಣೆ ಸೀಳಿದ್ದುಪಿಸ್ತೂಲು ಬಂದೂಕಿನಿಂದಲ್ಲ.ರುಂಡ ಮುಂಡ ಕತ್ತರಿಸಿದ್ದುಚಾಕು ಲಾಂಗುಗಳಲ್ಲ.ಸತ್ಯವಂತ ಸಾಯುವುದುದುಷ್ಟ ಹಂತಕರಿಂದಲ್ಲ.ಸಜ್ಜನ ಹೇಡಿಗಳಿಂದ ಅವರು ಇದ್ದಾಗ ಬೆಂಬಲಿಸಲಿಲ್ಲ.ಬೆನ್ನು ತಟ್ಟಿ ಕೈಜೋಡಿಸಲಿಲ್ಲ.ಸತ್ತಾಗ ಬಿಕ್ಕಿ ಬಿಕ್ಕಿ ಅಳುತ್ತೇವೆ.ಮಾನವ ಸರಪಳಿ ಪ್ರತಿಭಟನೆ.ಟಿವಿ ಪತ್ರಿಕೆಯಲ್ಲಿ ಭಾರಿ ಸುದ್ಧಿಆಕ್ರೋಶ ಅಬ್ಬರಹಂತಕರ ಹಿಡಿಯಲು ಸಮಿತಿಸರಕಾರ ಮಲಗುತ್ತದೆ.ಕೊಳಕು ವ್ಯವಸ್ಥೆ ನಾವೂ ಮಲಗುತ್ತೇವೆ . ಸತ್ಯವಂತ ಸಾಯುತ್ತಾನೆ.ಬದುಕಿನಿದ್ದಕ್ಕೂ ಹೋರಾಡುತ್ತಾನೆಸತ್ಯ ಶಾಂತಿ ಹಕ್ಕಿಗಾಗಿ.ಇದ್ದಾಗಲೂ ಒಬ್ಬಂಟಿಗಸತ್ತಾಗಲೂ ಒಬ್ಬನೇಸಾವು ಬೆನ್ನು ಬಿಡಲಿಲ್ಲ.ಸತ್ತವರಿಗೆ ಸಂತನ ಪಟ್ಟ ಕಟ್ಟಿ.ಕೊರಳಲ್ಲಿ ಬೋರ್ಡ್ ಹಾಕುತ್ತೇವೆ. ಅವರು ಸಾಯುವುದು ಗುಂಡಿನಿಂದಲ್ಲ.ನಮ್ಮ ಉದಾಸೀನ ಮೌನದಿಂದ. ಡಾ.ಶಶಿಕಾಂತ.ಪಟ್ಟಣ ರಾಮದುರ್ಗ

ಡಾ.ಶಶಿಕಾಂತ.ಪಟ್ಟಣ ರಾಮದುರ್ಗ “ನನ್ನವರು ಸಾಯುವುದು” Read Post »

You cannot copy content of this page

Scroll to Top