ಗಜಲ್ ಜುಗಲ್ ಬಂದಿ
ನಮ್ಮ ನಡುವಿನ ಯುವ ಕವಯಿತ್ರಿಯರಾದ ಸ್ಮಿತಾಭಟ್ ಮತ್ತು ರೇಖಾಭಟ್ ಅವರು ಪ್ರತಿವಾರ ಸಂಗಾತಿಗಾಗಿ ಗಜಲ್ ಜುಗಲ್ ಬಂದಿ ಯಲ್ಲಿ ಬರೆಯಲಿದ್ದಾರೆ
ಗಜಲ್-18
ಗಜಲ್ ಅರುಣಾ ನರೇಂದ್ರ ನಿನ್ನ ಕಿರು ನಗೆ ನನ್ನೊಂದಿಗೆ ಮುನಿಸಿಕೊಂಡಾಗ ನಾ ಯಾರಿಗೆ ಹೇಳಲಿತೋಳ ತಲೆದಿಂಬು ಸರಿಸಿ ಹೊರಳಿ ಮಲಗಿಕೊಂಡಾಗ ನಾ ಯಾರಿಗೆ ಹೇಳಲಿ ಮುತ್ತಿನಲಿ ಸಿಂಗರಿಸಿ ಮುಖ ನೋಡಿ ಹಿಗ್ಗುತ್ತಿದ್ದವನು ನೀನುಪ್ರೀತಿಯ ಕರೆ ಧ್ವನಿ ಕಳೆದುಕೊಂಡಾಗ ನಾ ಯಾರಿಗೆ ಹೇಳಲಿ ಹೂವಾಗುವ ಮೊಗ್ಗಿನ ನಿದ್ರೆಯಲಿ ಬರಿ ಚಿಟ್ಟೆಯದೇ ಕನಸುಸತ್ಯ ಮುಸುಕು ಹಾಕಿಕೊಂಡಾಗ ನಾ ಯಾರಿಗೆ ಹೇಳಲಿ ನದಿಯಾಗಿ ನಿನ್ನೆದೆಯೊಳಗೆ ಹರಿದ ಧನ್ಯತೆ ಇದೆ ಸಾಜನ್ಬೆಳಕನೆ ಕುಡಿದು ಮತ್ತೇರಿಸಿಕೊಂಡಾಗ ನಾ ಯಾರಿಗೆ ಹೇಳಲಿ ಮತ್ತೆ ಮತ್ತೆ ಸೋಲುತ್ತಾಳೆ ಅರುಣಾ ಸಹನೆ ಪರಕಿಸುವ ನಿನ್ನ ಸಾಹಸಕ್ಕೆಒಲವು ಮಿಡಿವ ಹೃದಯದಿ ಸೂತಕ ಆವರಿಸಿಕೊಂಡಾಗ ಯಾರಿಗೆ ಹೇಳಲಿ
ಕಥನಕಾವ್ಯ ಆಮೆಯೂ ಮೊಲವೂ ಬೆಂಶ್ರೀ ರವೀಂದ್ರ ಭಾಗ ಒಂದು ಸ್ಪರ್ಧೆಗೆ ಆಮೆಯೂ ಮೊಲವುಟ್ರ್ಯಾಕಿನ ಗೆರೆಯಲಿ ನಿಂತಿಹವುಓಟದ ರೇಸಿಗೆ ಅಣಿಯಾಗಿಹವು ಇದೆಂತಹ ಆಟ ತಮಾಷೆ ಜೂಟಾಟಮಜವಿದೆ ನೋಟ ಆಮೆ ಮೊಲದೋಟಕಾಡಿನ ಪ್ರಾಣಿಗಳಿಗೆ ಮೋಜಿನ ಮಾಟ ಕಿವಿಯನು ನಿಗುರಿಸಿ ಕಣ್ಣನು ಪಿಳುಕಿಸಿಸಮ ಎನಗಾರೆಂದು ಬೀಗಿಹ ಭೂಪಬೆಳ್ಳನೆ ಬೆಳುಪಿನ ಮೊಲ ಮಹರಾಯ ಕಾಲನು ಜಾಡಿಸಿ ಕತ್ತನು ಆಡಿಸಿಸುತ್ತಲೂ ನೋಡಿ ದೇವಗೆ ಪ್ರಾರ್ಥಿಸಿಓಟಕೆ ಸಿದ್ದವಾದನು ಆಮೆರಾಯ ಕತ್ತನು ಕೊಂಕಿಸಿ ಕಾಲನು ಜಾಡಿಸಿಕಣ್ಣನು ಕೀಲಿಸಿ ಟ್ರ್ಯಾಕನು ವೀಕ್ಷಿಸಿಅಂಪೈರ್ ಸೀಟಿಯು ಜಿರಾಫೆರಾಯ ಮಿಂಚಿನ ವೇಗದಿ ಓಡಿತು ಮೊಲವುತೆವಳುತ ಸಾಗಿತು ಗುರಿಯೆಡೆ ಆಮೆಹೋ..ಎಂದಿತು ಪ್ರಾಣಿಯು ಗಿಡಮರ ಅರ್ಧದಾರಿ ಓಡಿದ ಮೋಲವುಕಂಡಿತು ತುಂಬಿದ ಹಸಿರು ಕಾವಲುಹಿಂತಿರುಗಿ ನೋಡಲು ಪೋಟಿದಾರ ಹಿಂದೆಲ್ಲೊ ಇಹನು ಈ ಆಮೆಭೂಪಬರುವ ತನಕ ಇಲ್ಲಿಗೆ ವಿಶ್ರಾಂತಿ ಪಡೆವೆಹುಲ್ಲೂ ನೀರು ಉಂಡು ಮಲಗಿದನು ಮೊಲಕೆ ಬಂದಿತು ಗಡದ್ದು ನಿದ್ದೆಕೇಳಿಸಿತೆಲ್ಲಡೆ ಗೊರಕೆಯ ಸದ್ದೆನಡೆಯಿತು ಆಮೆ ಗುರಿಯೆಡೆಗೆ ನಿದ್ದೆಲಿ ಮೊಲಕೆ ಗೆಲುವಿನ ಪದಕಖುಷಿಯಲಿ ಮಾಡಿ ಮತ್ತಷ್ಟು ನಿದ್ದೆಅಷ್ಟರಲಿ ಹೋ…ಎನ್ನುವ ಸದ್ದು “ಗುರಿ ಮುಟ್ಟುವ ತನಕ ನಿಲ್ಲದಿರಿ”ಮಾತನು ಮನಸಲಿ ಇಟ್ಟಿದ ಆಮೆಸದ್ದಿಲ್ಲದೆ ಗೆಲುವಿನ ಕಂಬವ ದಾಟಿತ್ತು ಕಾಡು ಪ್ರಾಣಿಗೀಣಿ ಹಕ್ಕಿಪಿಕ್ಕಿ ಕೂಡಿದವುಗೆಲುವಿನ ನಿಲುವಲಿ ಆಮೆಯ ನಿಲಿಸಿಕತ್ತಿಗೆ ಪದಕವ ತೊಡಿಸಿದವು ಸೋಮಾರಿಯಾಗದಿರಿ ಮಕ್ಕಳೆಗೆಲುವಿನ ಗುರಿಯು ಮನದೊಳಗಿರಲಿಶ್ರಮಕೆ ಫಲಸಿಗುವುದು ಶತಸಿದ್ದ. ಭಾಗ ಎರಡು ನೆನಪಿದೆಯೇ ಮಕ್ಕಳೆ ನಿಮಗೆಮೊಲದಾಮೆಯ ಓಟದ ಆಟಕಾಡಿನಲಂತೂ ನಡೆದಿದೆ ಈಗಅದೇ ಮಾತಿನ ಮೋಜಾಟ ಓಟದ ವೀರ ಸೋತಿದ್ದೆಂತುತೆವಳುವ ಆಮೆ ಗೆದ್ದಿದ್ದೆಂತುಬುಡಮೇಲಾಗಿ ಲೆಕ್ಕಾಚಾರಹೀಗೂ ಉಂಟೆ ಅಚ್ಚರಿ ಹೂಟ ಹುಲ್ಲಿನ ಬಣಿವೆಲಿ ಚಿಗುರನು ಕಚ್ಚುತಚಿಂತಿಸಿ ಮೊಲವು ಕಿವಿಯನು ನಿಗುರಿಸಿಅರಿಯಿತು ಸೋಲಿನ ಗುಟ್ಟನು ಬಿಡಿಸಿಹ್ಞಾ…ನಾ..ಸೋಮಾರಿ ದುರಹಂಕಾರಿ ವಿನಯದಿ ಆಮೆಯು ಗೆಲುವಿಗೆ ಬೀಗದೆಯೋಚಿಸಿತು, ಗುರಿಯೆಡೆ ಲಕ್ಷವನಿಡದೆಸೋತಿತು ಮೊಲವು ಓಟವನು, ಕಲಿತರೆಬುದ್ದಿಯ ಒಳಿತಾಗುವುದು ಎಲ್ಲರಿಗೆ ಸ್ನೇಹದಿ ಹೀಗಿರಲೊಮ್ಮೆ ಮೊಲವನುಆಮೆಯ ಕಾಡಿನ ರಾಜನು ಕರೆದಿಹನುಅವಸರದಿ ಹೋಗಿರಿ ಪಕ್ಕದ ಕಾಡಿಗೆರಾಯಭಾರಿಯಾಗಿ ತುರ್ತುಚರ್ಚೆಗೆ ತಲುಪಲೇ ಬೇಕು ನಾಳೆಯೆ ಅಲ್ಲಿಗೆಕಾಡುಮೇಡು ಕೊರಕಲು ಕೆರೆ ನದಿಯುಕಣಿವೆಯು ಎಂತು ದೂರದ ಹಾದಿಯುಚಿಂತಿಸಿ ಹುಡುಕಿದರೊಂದು ಉಪಾಯ ಬೆಳಗಿನ ಜಾವಕೆ ಮೊಲದ ಬೆನ್ನಲಿಆಮೆಯು ಕುಳಿತು ಸವೆಯಿತು ಹಾದಿಕಾಡು ಮೇಡಲಿ ಅಡ್ಡ ಬರಲು ನೀರುಮೊಲವೇರಿತು ಆಮೆಯ ಬೆನ್ನು ಇಂತು ಉಪಾಯವ ಮಾಡಿದವುಪಕ್ಕದ ಕಾಡಿಲಿ ಸವಿನುಡಿಯಾಡಿದವುಕೆಲಸವ ಸಾಧಿಸಿ ಸಮಯ ಮೀರದೆದೊರೆಗಿತ್ತವು ವರದಿಯ ಸಂಭ್ರಮದಿ ಮಕ್ಕಳೆ ತಿಳಿಯಿರಿ ನಮ್ಮಯ ಶಕ್ತಿಗೆಕೂಡಲು ಬೇಕು ಗೆಳೆಯರ ಬಲವುಒಗ್ಗಟ್ಟಲ್ಲುಂಟು ನಲಿವು ಗೆಲುವುಕೂಡಿ ಬಾಳಿದರೆ ಸ್ವರ್ಗ ಸುಖವು
ಬೈಸಾಕಿಯು ಬೇಸರಿಸಿ,
ಚಿಗಿ ಚೈತ್ರದ ಪಡಿಯರಸಿ
ಮಗುವಂತೆ ಮುನಿಸೊಡೆಸಿ,
ಮೋತ್ಕರಿಸಿದೆ ಮಿಗಿಮಿಗಿಸಿ…
ಹೃದಿಹೃದಯಲು ಒಲವುದಿಸಿ Read Post »
ಕಾವ್ಯಯಾನ ಮರೆಯದ ನೆನಪು ಶೃತಿ ಮೇಲುಸೀಮೆ ಬೆಳಕು ಗಾಳಿ ಇಲ್ಲದಿದ್ರು,ಮನಿತುಂಬಾ ನಮ್ದೆ ಹವಾ,ಸದ್ದು ಗದ್ದಲ,ಯಾವಾಗ್ಲೂ ಆಟೋಟ,ಬೀದಿಯೆಲ್ಲಾ ರಂಪಾಟ ಚಪ್ಪರದ ಮನಿಯಾದ್ರೂ,ಅರಮನಿಗಿಂತ ಕಮ್ಮಿರ್ಲಿಲ್ಲಮನೆಗೂ,ಮನಸಿಗೂ ತೂತು ಬಿದ್ದು ಸೋರುತಿರ್ಲಿಲ್ಲ ನಿಷ್ಕಲ್ಮಶ ಸಣ್ಮನಸು,ಏನು ಅರಿಯದ ವಯಸುದೊಡ್ಡೋರಂದ್ರೆ ಭಯ,ಚಿಕ್ಕೋರಂದ್ರೆ ತಂಟೆ ತಕರಾರು ಹೊತ್ತೊತ್ತು ಊಟಕ್ಕೂ ,ಗಂಜಿಯ ಘಮಲುಸಾಲಾಗಿ ಕೂತ್ರೆ,ಸಾಲಿನ ಕೊನೆಯೊರಿಗೆ ಸಾಲುತ್ತಿರ್ಲಿಲ್ಲ ಕಿತ್ತು ತಿನ್ನೋ ಬಡತನಿದ್ರೂ,ಕತ್ತೆತ್ತಿ ನಡಿಯೋ ಶಕ್ತಿಕತ್ತಿಯಂತೆ ಇರಿಯೋ ತೊಂದ್ರೆತಾಪತ್ರೆ,ಕಿತ್ತೆಸೆಯಲು ದಾರಿ ನೀಡಿದ ಅಕ್ಷರದ ದ್ಯಾವರು ಬದುಕಿಗೆ ಒಂದರ್ಥ ಸಿಕ್ಕಿದ್ದೇ ಆ ಬಾಲ್ಯದ ದಿವಸದಲ್ಲಿತಂದಿ ಗದರಿಕೆ ಧ್ವನಿಲೇ ಕಾಳಜಿತ್ತು,ಅವ್ವನ ಪ್ರೀತಿಲೇ ನಗು ತುಂಬಿತ್ತು ತನ್ನತನವನುಳಿಸಿಕೊಂಡು, ಅನ್ಯಮತವನು ಗುಣಿಸಿಕೊಂಡುಅಂಧಕಾರವ ಮರೆಸಿ, ಕಲಿತ ಸಾಲಿಲೇ ಪಾಠ ಹೇಳೋಕೆ ಹೋಗೋತರಾಯ್ತು ಹೋಗೋ ದಾರಿಲಿ ಯವ್ವಾ ನನ್ನ ಮಗಿನು ನಿನ್ನಂಗ ಮಾಡವ್ವ ಅನ್ನೋ ಮಾತುಆಗ್ಲಿಯವ್ವ ಮಗಿನ ದುಡಿಯಕ ಹಚ್ಚದೆ,ಶಾಲಿಗೆ ಕಳ್ಸು ಅಂದಾಗ ಹ್ಮ್ ಗುಟ್ಟಿದ ಮನಸು ಬಾಲ್ಯದಲ್ಲಿ ಕಂಡ ಕನಸು, ಅನುಭವಿಸಿದ್ದ ತ್ರಾಸುಬದುಕು ಹೇಳ್ಕೊಟ್ಟ ನೀತಿ, ಸಾರ್ಥಕ ಅನ್ಸಿತ್ತು
ಕಾವ್ಯಯಾನ ಅರಿತು ಮರೆತು ಲಕ್ಷ್ಮೀ ಮಾನಸ ನೆರಳ ಬೆಳಕಿನಕದನದಲ್ಲಿ,ಪ್ರತಿಬಿಂಬ ಅರಿಯದದರ್ಪಣವನ್ನು,ನೆರಳು ಎಂದೋ ತೊರೆದರೂ, ಬೆಳಕ ಗೈರುಹಾಜರಿಯಲ್ಲಿ,ಮೋಡ ಕವಿದಬಣ್ಣದ ಬಿಂಬವುಮರುಭೂಮಿಯಲ್ಲಿ ನೀರನ್ನರಸಿಹಾಕುವ ಹೆಜ್ಜೆಗಳುಎದೆಗೂಡಲ್ಲಿ ಪಿಸುಗುಟ್ಟುತ್ತಲಿವೆ..ಕಣ್ರೆಪ್ಪೆಯ ಶಬ್ಬಕ್ಕೆಎದುರುನಿಲ್ಲಲಾಗದೆ….. ಭಾವನೆಯ ಬಳ್ಳಿಯಲ್ಲಿಮುದುಡದ ಕುಸುಮಾಗಳಿಗೆಕಪ್ಪು ವರ್ಣವ ಪೂಸಿದರೂ, ಅರಿತು ಮರೆತು,ಗೀಚಿದ ಗೆರೆಯ ದಾಟಿ,ಕಾರ್ಮೋಡದ ಮಡಿಲಲ್ಲಿನಸುಖ ನಿದ್ರೆಯ ತೊರೆದು, ಬಯಸುತಲಿವೆಮಾತನರಿಯದ ಮೌನವಗೀತೆಯಾಗಿ ಬದಲಿಸಿ,ವಸಂತ ಕೋಗಿಲೆಯೊಡಗೂಡಿಮರೆತ ಹಾಡನ್ನುಮರಳಿ ಹಾಡಲು,ಅರಿತ ರಾಗದಲ್ಲಿಚಿರನಿದ್ರೆಗೆ ಜಾರಲು… ******
ಗಜಲ್ ಡಾ.ಯ.ಮಾ.ಯಾಕೊಳ್ಳಿ ನನ್ನ ಮಾತುಗಳು ಇಲ್ಲಿ ಅರಿಯದೆ ಹೊಗುತ್ತಿರುವದಕ್ಕೆ ವಿಷಾದವಿದೆಪದದೊಳಗಿನ ಅರ್ಥವೇ ಅಪಾರ್ಥವಾಗಿ ತಿರುಗಿ ಬೀಳುತ್ತಿರುವದಕ್ಕೆ ವಿಷಾದವಿದೆ ಪುಸ್ತಕದ ಸಾಲುಗಳು ವೇದಿಕೆಯ ತುಣುಕುಗಳು ವ್ಯರ್ಥ ಹರಡುತ್ತಿವೆಯಾರ ಎದೆಗೂ ತಟ್ಟದೆ ಅಂತರವುಂಟಾದುದಕ್ಕೆ ವಿಷಾದವಿದೆ ಕಾಲಕಾಲಕ್ಕೂ ಜನಿಸಿದ ಸಂತ ಮಹಂತರ ಜೀವ ತತ್ವಗಾಳಿಗೆ ತೂರಿವೆತೋರಿಕೆಯ ಆಚರಣೆಗಳು ಅವರವರ ಪ್ರತಿಷ್ಟೆಯೆನಿಸಿದ್ದಕ್ಕೆ ವಿಷಾದವಿದೆ ಎದೆಯ ದನಿ ಯಾರಿಗೂ ಕೇಳದೆ ಗಡಚಿಕ್ಕುವ ಅಬ್ಬರದಲ್ಲಿ ಅನಾಥವಾಗಿದೆಕೋಗಿಲೆಯ ಮಧುರ ಹಾಡು ಮೆರವಣಿಗೆಯಲ್ಲಿ ಮೌನವಾದುದಕ್ಕೆ ವಿಷಾದವಿದೆ ಸಾವಿರ ಸಾವಿರ ಪುಸ್ತಕಗಳು ನಾಗೊಂದಿಯ ಮೇಲೆ ಮೌನವಾಗಿ ಅಳುತ್ತಿವೆಯಯಾ ನಿನ್ನ ಲಾಲಿಹಾಡು ನೊಂದ ಎದೆಗೆ ಸಾಂತ್ವನ ನೀಡ ದುದಕ್ಕೆ ವಿಷಾದವಿದೆ
ಗಝಲ್ ಶಂಕರಾನಂದ ಹೆಬ್ಬಾಳ ಗುಡಿಯೊಳಗೆ ಕಲ್ಲಾಗಿರುವೆ ದೇವಬತ್ತಳಿಕೆಯಲಿ ಬಿಲ್ಲಾಗಿರುವೆ ದೇವ ಅರಿವಿರದ ಜನ್ಮಕ್ಕೆ ಅನುಭವ ತಂದೆಹಸಿರ ಸೂಸುವ ಹುಲ್ಲಾಗಿರುವೆ ದೇವ ಆತ್ಮಸ್ತೈರ್ಯವ ತುಂಬುತಿರುವೆಯಲ್ಲಅಳುವ ಕಂದನ ಜೊಲ್ಲಾಗಿರುವೆ ದೇವ ಮಡುವಿನ ಮಂಡೂಕವ ಸಲಹಿರುವೆಹಸಿದ ಉದರಕೆ ನೆಲ್ಲಾಗಿರುವೆ ದೇವ ಕಷ್ಟಕಾಲದಿ ಕೈಹಿಡಿಯುವ ಮೃಡಹರನೇಅಭಿನವ ಕವಿಗೆ ಸೊಲ್ಲಾಗಿರುವೆ ದೇವ
ಕಾವ್ಯಯಾನ ಸೀರೆಯ ಸೆರಗು ಶಿವಲೀಲಾ ಹುಣಸಗಿ ಸೀರೆಗೊಂದು ಸೆರಗು ಮನಸಿಗೆ ಮೆರಗುಅತ್ತು ಕರೆವಾಗ ಕಣ್ಣೊರೆಸುವ ಸಾಧನವುಕಂಬನಿಯು ಮುತ್ತಾಗಿ ಅರಳಿದ ಸೊಬಗುಆಟಪಾಟಕೆ ಬೆವೆತ ಮೈಮನಕೆ ಬೆರಗುಬೀಸಕೆಯಾಗಿ ಕೈಯಂಚಲಿಹುದು ಸೆರಗುಆಸತ್ತು ಬೆಸತ್ತ ಬೆವರಿಗಿದೋ ಪ್ಯಾನು!ಅಡಿಗೆಮನೆಯ ಸಿದಾಸಾದಾ ಮಸಿಅರಿವೆತಲೆನೆಂದು ಬಂದವಗೆ ಟವಾಲ್ ಯಿದುನೇಸರನ ತಾಪಕೆ ಕೊಡೆಯಂತೆ ಅರಳಿಹುದುನಾಚಿ ನೀರಾಗೋ ಗಳಿಗೆಗೆ ಬಳ್ಳಿಯಾಗಿಹುದುಹೊಸಬರೆದುರು ಅಸ್ತ್ರದಂತೆ ಈ ಸೆರಗುಉಡಿಯಕ್ಕಿ,ಬಾಗಿನ ಪಡೆವ ಸೌಭಾಗ್ಯವಿದುಹೂಗಳ ಸೆಳೆತಕ್ಕೆ ಬುಟ್ಟಿಯಂತಾಗಿಹುದುತಿಂಡಿತಿಸುಗಳ ಬಚ್ಚಿಡಲು ಜೊತೆಗಿಹುದುತಲಿಮ್ಯಾಲೆ ಗೌರವದ ಕಿರೀಟದಂತಿಹುದುಅಮ್ಮನ ಸೆರಗಿನ ಅಂಚಿಡಿದು ಹೊಂಟರೆವಿಶ್ವಪರ್ಯಟನವಾದಂತೆಯೇ..ಸರಿ!ಸೆರಗೊಂದು ಮಾಂತ್ರಿಕ ದಂಡದಂತೆಗಿರಗಿಟ್ಲಿತರ ಸುತ್ತುವ ಅಪ್ಪನೆ ಚಂದಸಿಟ್ಟಿಗೆದ್ದು ಸೊಂಟಕೆ ಸೆರಗ ಕಟ್ಟಿದಳೆಂದರೆಎದುರಿಗಿದ್ದವರು ನಾಪತ್ತೆಯಾದಂತೆಪ್ರೀತಿಯಲಿ ಸೆರಗೊಡ್ಡಿ ಬೇಡಿದಳೆಂದರೆಕಲ್ಲುಕರಗಿ ಹೂವಾಗುವುದೆಲ್ಲ..ಸೆರಗಿನಲ್ಲಿಹುದು ಪ್ರೇಮಾಮೃತವಿಲ್ಲಿ.ಹೆಣ್ಣಿಗೊಂದು ಅಂದ ತರುವುದು ಸೀರೆಸೀರೆಗೊಂದು ಸೆರಗೆ ಜೀವಾಮೃತವಿಲ್ಲಿ *************
You cannot copy content of this page