ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್

ಕಾವ್ಯ ಸಂಗಾತಿ “ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್ ಸ್ಪರ್ಧೆ ಎನಿಸಿದರೆ‌ ನಿಮಗೆನ್ನಕಾಯಕ‌ವದರ ದೋಷಿ‌ಯು ನಾನಲ್ಲ||ಕೆರೆಯುತಲಿದ್ದು ಮಾಯುವುದಕ್ಕೆಡೆ ಕೊಡದೆ ನಂಜಾಗುತಿರೆ ಗಾಯ ದೋಷಿ‌ಯು ನಾನಲ್ಲ|| ನಾನಾಡುವ‌ ದಿಟ ಮಾತು ಸದಾಕಟುವೆನಿಸಿದರಕೆ ದೋಷಿಯು ನಾನಲ್ಲ||ನಾ ಬಲ್ಲೆ ಎನ್ನರಿವು‌ ಹರಿವಿನ ಹಿತಮಿತಅಹಂ‌ ಅನಿಸಿದರದು‌ ತಮಗೆ ದೋಷಿ‌ ನಾನಲ್ಲ|| ಎನ್ನ‌ ಬಾಹ್ಯ‌-ಆಂತರ್ಯ‌ ಸೊಬಗಿಗೆ ನಿಮ್ಮಕಣ್ಗಳು ಸೋಲುಂಬುದಕೆ ದೋಷಿ‌ಯು ನಾನಲ್ಲ||ಮುನ್ನ ಕೃತಿ ಪ್ರೌಢಿಮೆಯ‌ ಆಳವರಿಯದೆವರ್ಜಿಸಿ ಕಳೆದುಕೊಳ್ಳುವುದಕೆ ದೋಷಿ‌ಯು ನಾನಲ್ಲ|| ಎನ್ನಾತ್ಮ‌ ಮೆಚ್ಚುವಂತೆ ಮಾಡುವ‌ ಕೆಲಸ‌ನಿಮ್ಮ ಕಾಡಿದರದರ ದೋಷಿಯು ನಾನಲ್ಲ||ಬೆನ್ನಂತೆ ಕಾಣದಿರುವ ನಿಮ್ಮ‌ ಗುಣ‌ವ ನೀವೆ ತಿಳಿಯದಿರುವುದಕೆ ದೋಷಿಯು ನಾನಲ್ಲ|| ಆವುದನ್ನು ತಲೆಗೇರಿಸಿ‌ಕೊಳ್ಳದೆ ಇಷ್ಟದೊಂದಿಗೆ‌ ಬಾಳುತಿರುವ ಅಂತರ್ಧ್ಯಾನಿ ನನಗಾವ ದೋಷವಿಲ್ಲ||ಆಕರ್ಷ ಜಗಕೆ‌ ಮರುಳಾಗುತಿರುವ‌ ಮೋಹಿ ನೀ ನಿನ್ನ ಅರಿಯದಕೆ ಅನಿಸುತ್ತಿದೆ ನಿಮಗೆ ದೋಷವೇ ಎಲ್ಲ || ಕೊ//ಮಾಳೇಟಿರ ಸೀತಮ್ಮ ವಿವೇಕ್, ಹಾಸನ.

“ದೋಷಿ‌ ನಾನಲ್ಲ” ಮಾಳೇಟಿರ ಸೀತಮ್ಮ ವಿವೇಕ್ Read Post »

ಕಾವ್ಯಯಾನ, ಗಝಲ್

ಎಮ್ಮಾರ್ಕೆ ಅವರ ಗಜಲ್

ಕಾವ್ಯ ಸಂಗಾತಿ ಎಮ್ಮಾರ್ಕೆ ಗಜಲ್ ದೂರಾದವಳ ಮೇಲೆ ದೂರೊಂದ ನೀಡಬೇಕಿತ್ತುಮೌನವಾದವಳ ಜತೆ ಮಾತೊಂದ ಆಡಬೇಕಿತ್ತು ಇಟ್ಟ ಹೆಜ್ಜೆ ಕೊಟ್ಟ ಭಾಷೆ ಅರ್ಥ ಕಳೆದುಕೊಂಡಿವೆಕಟ್ಟಿದ ಕಾಲ್ಗೆಜ್ಜೆಯದು ಸದ್ದೊಂದ ಮಾಡಬೇಕಿತ್ತು ಪ್ರಮಾಣಿಸಿ ನೋಡದುದರ ಪರಿಣಾಮ ಘೋರಬರಿಗಣ್ಣಿಂದಲ್ಲ ಎದೆಯ ಕಣ್ಣಿಂದ ನೋಡಬೇಕಿತ್ತು ಗೂಡು ತೊರೆದ ಹಕ್ಕಿಗಂತೂ ಹೇಳತೀರದ ಪಾಡುನೋವ ಮರೆಸುವಂತ ಹಾಡೊಂದ ಹಾಡಬೇಕಿತ್ತು ಅವಳ ಆ ನಿಮಿಷ ಕುಂಬಾರನಿಗೆ ವರುಷವೇ ಸರಿಕಳೆದ ನೆನಹು ಬಿಡದೇ ಒಂದೊಂದ ಕಾಡಬೇಕಿತ್ತು ಎಮ್ಮಾರ್ಕೆ

ಎಮ್ಮಾರ್ಕೆ ಅವರ ಗಜಲ್ Read Post »

ಕಾವ್ಯಯಾನ

“ನನ್ನಾಸೆಗಳು” ಗೀತಾ ಆರ್.

ಕಾವ್ಯ ಸಂಗಾತಿ ಗೀತಾ ಆರ್. “ನನ್ನಾಸೆಗಳು” ನೀ ನನ್ನ ನೆನಪಲ್ಲೇ ಪುನಃ ಪುನಃಉಳಿಯುವಾಸೆ….ನಿನ್ನ ಹಿಂದಿಗಿಂತ ಹೆಚ್ಚು ಹೆಚ್ಚುನಾ ಪ್ರೀತಿಸುವಾಸೆ…ನಿನ್ನ ಹೃದಯದಲ್ಲೇ ಮತ್ತೆ ನಾನೇಬಚ್ಚಿಟ್ಟುಕೊಳ್ಳುವಾಸೆ….ನಿನ್ನ ಮನದಾಳದ ಮಾತುಗಳೆಲ್ಲಾಮತ್ತೊಮ್ಮೆ ಆಲಿಸುವಾಸೆ….ನಿನ್ನ ಆ ನಯನಗಳಲ್ಲಿ ಇನ್ನೊಮ್ಮೆನಾ ಬೆರೆಯುವಾಸೆ….ನಿನ್ನ ಆ ಕುಡಿಮಿಂಚು ನೋಟ ಮತ್ತೆಮತ್ತೆ ನೋಡುವಾಸೆ ….ನಿನ್ನ  ಮೌನವಾ ನಾ ಕೊನೆಯದಾಗಿಅರ್ಥೈಸಿಕೊಳ್ಳುವಾಸೆ….ನಮ್ಮಿಬ್ಬರಲ್ಲಿ ಮತ್ತೆಂದೂ ಅಗಲಿಕೆಬಾರದಿರಲೆಂಬಾಸೆ…. ————– ಗೀತಾ ಆರ್.

“ನನ್ನಾಸೆಗಳು” ಗೀತಾ ಆರ್. Read Post »

ಕಾವ್ಯಯಾನ

“ಹೃದಯದ ದೇವತೆ” ಕೆ.ಎಂ. ಕಾವ್ಯ ಪ್ರಸಾದ್

ಕಾವ್ಯ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ಹೃದಯದ ದೇವತೆ” ನನ್ನ ಹೃದಯದ ದೇವತೆ ಏಕೆ ನೀ ನಕ್ಕಿದೆಈ ಎದೆಯಲ್ಲಿ ನಿನ್ನ ಪ್ರೀತಿ ಉಕ್ಕಿ ಹರಿಸಿದೆ!ಮುಗಿಲಷ್ಟು ಪ್ರೇಮದ ಕಾಣಿಕೆಯ ನೀಡಿದೆಹಾಲು ಜೇನಂತ ಮನಸು ನಿನ್ನದಾಗಿದೆ!! ಆಸೆ ಕನಸುಗಳೆಲ್ಲ ಹಸಿರಾಗಿ ಚಿಗುರುತಿದೆಮುತ್ತಿನ ಮಳೆಯು ಹೂಗಳಾಗಿ ಸುರಿದಿದೆ!ನನ್ನ ಪ್ರೀತಿ ನಿನ್ನ ನೋಟಕೆ ಸೆರೆಯಾಗಿದೆಹೆಣ್ಣು ದುಂಬಿ ಪ್ರೀತಿ ಆಸರೆ ಬಯಸಿದೆ!! ಸಿಹಿ ತುಪ್ಪ ಸವಿಯುವ ಆಸೆ ಹೆಚ್ಚಾಗಿದೆಗಲ್ಲ ಕರಗುವ ಬೆಣ್ಣೆಯಂತೆ ಮೃದುವಾಗಿದೆ!ಕಣ್ಣು ಮುಚ್ಚಲು ನಿನ್ನ ರೂಪ ಕಾಣುವುದೇನಿನ್ನ ಬಿಂಬ ನನಗೀಗ ಕಚಗುಳಿ ಇಡುತಿದೆ!! ನಿನ್ನ ಮನಸಾರೆ ಸೇರುವ ತವಕ ಹೆಚ್ಚಾಗಿದೆನಾ ಹುಡುಕುವ ಹಾದಿಯ ದಾರಿ ತಪ್ಪಿಸಿದೆ!ಸುಂದರ ಸಾಮರಸ್ಯ ನಡಿಗೆಯು ನಿನ್ನಲ್ಲಿದೆಕಣ್ಣ ಮುಚ್ಚಾಲೆಯ ಆಟ ಏಕೆ ಆಡಿಸಿದೆ!! ನನ್ನೆದೆ ಬಡಿತವು ಜೋರಾಗಿ ತಾಳ ತಪ್ಪಿದೆನಿನ್ನ ಅವರಿಸುವ ಆಸೆಯು ಹೆಚ್ಚಾಗಿದೆ!ಖುಷಿಯಿಂದ ಜಗತ್ತನ್ನೆ ಮರೆಯಬೇಕಿದೆಸಿಹಿ ಮುತ್ತಲ್ಲಿ ನನ್ನ ಬಂದಿ ಮಾಡಿ ಬಿಟ್ಟೆ —— ಕೆ.ಎಂ. ಕಾವ್ಯ ಪ್ರಸಾದ್

“ಹೃದಯದ ದೇವತೆ” ಕೆ.ಎಂ. ಕಾವ್ಯ ಪ್ರಸಾದ್ Read Post »

ಕಾವ್ಯಯಾನ

ಮನುಷ್ಯನೇಕೆ ಹೀಗೆ? ಎಮ್ಮಾರ್ಕೆ

ಕಾವ್ಯ ಸಂಗಾತಿ ಎಮ್ಮಾರ್ಕೆ ಮನುಷ್ಯನೇಕೆ ಹೀಗೆ? ಯಾವುದೊಂದು ಬದಲಾಗಿಲ್ಲಮನುಷ್ಯನನ್ನು ಹೊರತು,ಎಷ್ಟು ಹೇಳಿದರೂ ಸಾಲದಲ್ಲಈ ಬಲುಬುದ್ಧಿಯ ಕುರಿತು ಹಕ್ಕಿಯಂತೆ ಹಾರಲು ಕಲಿತುಮೀನಿನಂತೆ ಈಜಲೂ ಬಲ್ಲ,ಮಂಗಳನ ಅಂಗಳದಿ ಇಳಿದುಎಲ್ಲವ ಕಂಡುಹಿಡಿದಿಹನಲ್ಲ ಮೋಡ ಬಿತ್ತನೆ ಮಾಡಿಹನಲ್ಲಮೌಢ್ಯತೆಯ ಬಿಡಲೇ ಇಲ್ಲ,ವಿಜ್ಞಾನ,ತಂತ್ರ ಬೆಳೆದಿವೆಯಲ್ಲಮಾಟ ಮಂತ್ರ ನಿಂತೇ ಇಲ್ಲ ಏನೆಲ್ಲ ಮನುಷ್ಯ ಮಾಡಿದನಲ್ಲಮನುಷ್ಯನಂತೆ ಬದುಕೇ ಇಲ್ಲ,ಹೊರಗಣ್ಣು ತೆರೆದು ನಿಂತಿಹನಲ್ಲಒಳಗಣ್ಣವು ಮುಚ್ಚಿವೆಯಲ್ಲ ಮನುಷ್ಯತ್ವವನೇ ಮರೆತಿಹೆವಲ್ಲಮಂಗನ ಜೊತೆ ಬೆರೆತಿಹೆವಲ್ಲ,ಈ ಜನ್ಮ‌ ದೊಡ್ಡದು ಅನತಾರಲ್ಲದಡ್ಡರಂತೆಯೇ ಬದುಕಿಹೆವಲ್ಲ ಎಮ್ಮಾರ್ಕೆ

ಮನುಷ್ಯನೇಕೆ ಹೀಗೆ? ಎಮ್ಮಾರ್ಕೆ Read Post »

ಕಾವ್ಯಯಾನ

“ಪೊಡವಿ ಸಗ್ಗ” ಏಳೆ ಕವನ-ಗುಣಾಜೆ ರಾಮಚಂದ್ರ ಭಟ್

ಕಾವ್ಯ ಸಂಗಾತಿ ಗುಣಾಜೆ ರಾಮಚಂದ್ರ ಭಟ್ “ಪೊಡವಿ ಸಗ್ಗ” ಏಳೆ ಕವನ-*ಛಂದಸ್ಸು: ಏಳೆ:೫೪೩/543/ ಜಗವಿದು ನಮ್ಮದು ಸೊಗಸಿದೆ ಕಾಣಲುಖಗಗಳ ಕಂಡು ಗಗನದಿ.. ಮೂಡುವ ನೇಸರ ಬಾಡದ ಚೇತನಕಾಡಿನ ಹಸಿರು ನಂದನ .. ನೀಲಿಯ ಕಡಲಿದೆ ನಾಲೆಯ ಹರಿವಿದೆಕಾಲನ ನಡೆಯು ಸಂತತ .. ಹರಿಯುವ ನದಿಗಳು ಕರೆಯುವ ಹಸುಗಳುಸುರಿಸುವ ನೋಟ ಸುಂದರ ಕೆಂಪಿನ ಹೂಗಳು ಕಂಪನು ಪಸರಿಸಿತಂಪನು ನೀಡಿ ಸಾನಂದ.. ಬಣ್ಣದ ಕುಸುಮವು ಕಣ್ಣನು ತುಂಬುತಬಣ್ಣಿಸೆ ಕವನ ಹೊಳಪಂತೆ.. ಮಿಗಗಳು ಕೋಟಿಯ ಅಗಣಿತ ಲೆಕ್ಕದಿಮಿಗಿಲಾದ ಸೃಷ್ಟಿ ವಿಸ್ಮಯ ಜೀವಿಗೆ ಬಾಳಲು ನಾವಿಹ ಭೂಮಿಯೆತಾವಿದು ಸಗ್ಗ ನಮಗೆಲ್ಲ.. ಮಾನವ ಶ್ರೇಷ್ಠನು ದಾನವನಾದರೆಕಾನನ ರಾಜ್ಯ ತಪ್ಪದು.. ——– ಗುಣಾಜೆ ರಾಮಚಂದ್ರ ಭಟ್

“ಪೊಡವಿ ಸಗ್ಗ” ಏಳೆ ಕವನ-ಗುಣಾಜೆ ರಾಮಚಂದ್ರ ಭಟ್ Read Post »

ಕಾವ್ಯಯಾನ

“ನೀತಿ ನಿಯಮ” ಹಮೀದ್ ಹಸನ್ ಮಾಡೂರು

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ನೀತಿ ನಿಯಮ” ಹಗೆಯ ಸಾಧಿಸ ಬೇಡ,ಜಿದ್ದಿಗೆ ಹೊರಳಾಡ ಬೇಡ,ತಗ್ಗಿ ಮುನ್ನಡೆದರೆ ಜಯವಿದೆ,! ಶತ್ರುತ್ವವೆಂದೂ ಬೇಡ,ಸಂಶಯಕ್ಕೆ ಎಡೆಯು ಬೇಡ,ಅರಿತು ಬಾಳಿದಾಗ ಜಯವಿದೆ,! ಮಿತ್ರತ್ವವೇ ಮುತ್ತಿನ ಹಾರ,ದುಷ್ಟ ಶಕ್ತಿಗಳ ಅದು ಸಂಹಾರ,ಬೆರೆತು ಬಾಳಲು ನಮಗೆ ಜಯವಿದೆ.! ದೇವನೆಂದೂ ಗೊಂದಲವಲ್ಲ,ಧರ್ಮವೆಂದೂ ಕಚ್ಚಾಡಿ ಕೊಳ್ಳಲಲ್ಲ,ನೀತಿ ನಿಯಮ ಪಾಲಿಸಲು ಜಯವಿದೆ.! ಹಮೀದ್ ಹಸನ್ ಮಾಡೂರು.

“ನೀತಿ ನಿಯಮ” ಹಮೀದ್ ಹಸನ್ ಮಾಡೂರು Read Post »

ಕಾವ್ಯಯಾನ

ಅವನಲ್ಲ ಅವಳು! ಸುರೇಶ ತಂಗೋಡ

ಕಾವ್ಯ ಸಂಗಾತಿ ಸುರೇಶ ತಂಗೋಡ ಅವನಲ್ಲ ಅವಳು! ನಡುವಿನ ಉಡುದಾರಕಿತ್ತೊಗೆದುಕಾಲಿಗೆ ಗೆಜ್ಜೆ ಕಟ್ಟಿರುವೆಕೈಗೆ ಬಳೆ ಹಾಕುವಹೊತ್ತಿಗೆದೂರದಲೆಲ್ಲೊ ಅಪಸ್ವರ.// ಹಣೆಗೆ ವಿಭೂತಿಯಬದಲು ಕುಂಕುಮದ ಬೊಟ್ಟಿಟ್ಟೆತುಂಡು ಕೂದಲು ಉದ್ದ  ಬಿಟ್ಟೆಗಂಡಸರುಡುವ ಬಟ್ಟೆಯನ್ನು ಬದಲಿಸಿದೆಸೀರೆಯ ಸೆರಗೂ ಇಷ್ಟವಾಯಿತು.ನಾಚಿಕೆ ಮೂಡಿತುಶ್! ನನ್ನ ಮೇಲಲ್ಲ ಸಮಾಜದ ಮೇಲೆ.// ನನ್ನೊಳಗಿನ  ಹೆಣ್ತನವ ಕಾಪಿಡಲುನಾನು ಅದೇಷ್ಟು ಸತ್ತು ಬದುಕಿದ್ದೇನೆ.ಕುಂತು ಮೂತ್ರ ಮಾಡುವಾಗಬೆರಳುಗಳಿಗೆ ನೆಲ್ ಪಾಲಿಸ್ ಹಾಕಿಕೊಳ್ಳುವಾಗಕೊರಳಿಗೆ ಸರ ತೊಡುವಾಗವಿಚಿತ್ರವಾದ ಹಿಂಸೆ ನನಗೆ.// ಸೃಷ್ಟಿಯೊಳಗಿನ ಅದ್ಭುತ ನಾನೆಂದುಹೇಳಲು ಅವಕಾಶ ನೀಡಲಿಲ್ಲಸೌಂದರ್ಯ ನನ್ನಾಸ್ತಿಎಂದು ತೋರಿಸಲುಸಮಯ ನೀಡಲಿಲ್ಲಮಂಗಳಮುಖಿ ಎಂದುಅವಮಾನಿಸಿದರುಅಪಮಾನಿಸಿದರುಆದರೆನನಗೆ ನನ್ನ ಮೇಲೆ ಹೆಮ್ಮೆನಾನು ಅರ್ಧನಾರೀಸ್ವರನಪ್ರತಿರೂಪನನಗೂ ಸುಂದರ ಬದುಕಿದೆಬದುಕಿ ತೋರಿಸುವ ಛಲವಿದೆ. ಸುರೇಶ ತಂಗೋಡ

ಅವನಲ್ಲ ಅವಳು! ಸುರೇಶ ತಂಗೋಡ Read Post »

ಕಾವ್ಯಯಾನ

ಹನಿಬಿಂದು ಭಾವಗೀತೆ, ಪ್ರೀತಿ

ಕಾವ್ಯ ಸಂಗಾತಿ ಹನಿಬಿಂದು ಪ್ರೀತಿ ನನ್ನ ನಿನ್ನ ನಡುವೆ ಬಂಧಕಣ್ಣ ಸಂಚು ಮಾಡಿತುಸಣ್ಣ ಸಣ್ಣ ನೋಟವಿಂದುಬಣ್ಣದರ್ಥ ಕೊಟ್ಟಿತು ನಿನ್ನೆ ಯಾರೋ ಇದ್ದವರುಮುನ್ನ ಒಟ್ಟು ಸೇರಲುಸುಣ್ಣದಂಥ ಬಿಳಿಯ ಪ್ರೀತಿಮಣ್ಣ ಮೇಲೆ ಮೂಡಲು ಭಿನ್ನ ಭಾವ ಬದಿಗೆ ಸರಿಸಿತನ್ನ ನೋವನೆಲ್ಲ ಬೆರೆಸಿ ಜ್ಞಾನ ಧಾರೆ ಹೆಚ್ಚಿಸುತ್ತಾಹೃಣ್ಮನಗಳ ಜೊತೆ ಸೇರಿಸಿ ರನ್ನ ಮುದ್ದು ಆತ್ಮೀಯತೆಪುಣ್ಯ ಕಾರ್ಯ ಮಾಡುತಹೆಣ್ಣ ಜನ್ಮ ಸಾರ್ಥಕ್ಯದಹೊನ್ನ ಭಾವ ಮೂಡುತ ——– ಹನಿಬಿಂದು

ಹನಿಬಿಂದು ಭಾವಗೀತೆ, ಪ್ರೀತಿ Read Post »

ಕಾವ್ಯಯಾನ

“ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ವೈ.ಯಂ.ಯಾಕೊಳ್ಳಿ

ಕಾವ್ಯ ಸಂಗಾತಿ ವೈ.ಯಂ.ಯಾಕೊಳ್ಳಿ “ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ಇಲ್ಲಿ ಇದ್ದ ಮೇಲೆ ಏನೂತೊರೆಯಲಾಗದುಬೆನ್ನತ್ತಿ ಬಂದಿರುವದನುನಮ್ಮದೆ ಎಂಬುದಮರೆಯಬಾರದು ಬಿಡಲೆನು ಮೂರು ದಿನದಸಂತೆಯಲ್ಲ ಜೀವನದಾಟಬಡಿದಾಡಿ ಮುಗಿಸಲುಅಪರಿಚಿತರೊಡನೆ ಜಗಳವಲ್ಲಸಂಸಾರ ಕೂಟ ಒಡನೆ ಇದ್ದವರು ಬಿಡದೆಕಾಡುವರು ನಿಜದ ಮಾತುಅನಿವಾರ್ಯ ಹೊಂದಿಕೆಯೆಇಲ್ಲಿ‌ ಮುಖ್ಯ ಧಾತು ಯಾರನೆ ದೂಷಿಸುತ ಏನನೋನಿಂದಿಸುತ ಅತ್ತರೇನು ಬಂತುಹೊತ್ತು ತಂದ ತಟ್ಟೆಯಅನ್ನವ ನಾವೇ ಉಣ್ಣಬೇಕು ಎನಿತು ಬಡಿದಾಡಿದರೂ.ಎಷ್ಟು ಕಾದಾಡಿದರೂಅಂತಿಮ ನಿರ್ಣಯವಾಗದ ಯುದ್ದಯಾವ ನ್ಯಾಯಾಲಯದಲೂದಾವೆ ಹೂಡಿದರೂ ಉತ್ತರಸಿಗದ ವ್ಯಾಜ್ಯ ಹೃದಯದ‌ ಪ್ರಶ್ನೆಗಳಿಗುತ್ತರವಹೃದಯವೆ ಕೊಡಬೇಕುದೊರಕದು‌ ಬೇರೆಡೆಗೆಎನಿತು ಹುಡುಕಿದರೂ ತಾಜಮಹಲಿ ಮುಂದೆ ನಗುತರಾಜರಾಣಿಯಂತೆ ನಿಂತುತಗೆಸಿಕೊಂಡ ಪೋಟೊಬಂದು ಕಾಡುತ್ತವೆ ಆಗಾಗಎಲ್ಲರಿಗೂ ಕನಸಿನಲ್ಲಿಅದನೆ ನಿಜವೆಂದು‌ ನಂಬಿಹೊರಡಲಾಗದುಮರುದಿನದ ನನಸಿನಲ್ಲಿ ಹಾಗೆಂದುಮಧ್ಯ ರಾತ್ರಿಯಲಿಎದ್ದು ಹೋಗಲಸಾಧ್ಯಅದು ಕವಿತೆಕಥೆಯಲಷ್ಟೇ ಬರೆದದ್ದು ತೂತಿರುವ ದೋಸೆಯನೆ ಕತ್ತರಿಸಿ ತಿನ್ನುತ್ತಸುಖವ ಅನುಭವಿಸಬೇಕುಹರಿದ ಹಾಸಿಗೆಯನೆಹೊಲಿದು ಹೊದ್ದುಕೊಂಡುಮತ್ತೆ ಕನಸುಗಳ ಕಾಣಬೇಕು —–ವೈ. ಎಂ.ಯಾಕೊಳ್ಳಿ

“ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ವೈ.ಯಂ.ಯಾಕೊಳ್ಳಿ Read Post »

You cannot copy content of this page

Scroll to Top