ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಮಾಜಾನ್‌ ಮಸ್ಕಿ ಅವರ ಗಜಲ್

ಕಾವ್ಯ ಸಂಗಾತಿ ಮಾಜಾನ್‌ ಮಸ್ಕಿ ಗಜಲ್ ಬೆಳದಿಂಗಳ ನಗು ನೀನಾಗಿರುವೆಬದುಕಿನ ಬೆಳಗು ನೀನಾಗಿರುವೆ ಸಾವಿರಾರು ವೇದನೆ  ತುಂಬಿವೆನಲಿವಿನ ಗುನುಗು ನೀನಾಗಿರುವೆ ಸುಂದರ ಕನಸಿನ ಹೂದೊಟದಲ್ಲಿಸುಗಂಧದ ಸೊಬಗು ನೀನಾಗಿರುವೆ ಹಚ್ಚ ಹಸಿರಿನ ಬದುಕು ಇದಲ್ಲವೇಪ್ರಕೃತಿಯ ಬೆರಗು ನೀನಾಗಿರುವೆ ಮಾಜಾಳ ಹೃದಯ ನೀಲಾಕಾಶದಂತೆನಕ್ಷತ್ರಗಳ ಮಿನುಗು  ನೀನಾಗಿರುವೆ ಮಾಜಾನ್ ಮಸ್ಕಿ

ಮಾಜಾನ್‌ ಮಸ್ಕಿ ಅವರ ಗಜಲ್ Read Post »

ಕಾವ್ಯಯಾನ

ಎ.ಹೇಮಗಂಗಾ ಅವರ ತನಗಗಳು

ಕಾವ್ಯ ಸಂಗಾತಿ ಎ.ಹೇಮಗಂಗಾ ತನಗಗಳು ಚಿಕ್ಕದೊಂದು ರಂಧ್ರವೂಬಲಶಾಲಿಯೇ ಹೌದುತೇಲುವ ಹಡಗನ್ನುಮುಳುಗಿಸುವುದದು ಸಾಗರದ ಮೇಲಿದೆಪುಟ್ಟ ಹಿಮ ಪರ್ವತಆಳದಲ್ಲಿದೆ ಇನ್ನೂಕಾಣಲಾಗದು ಕಣ್ಣು ಭೂಮಂಡಲ ಅಗಾಧನಶ್ವರ ಜೀವಿ ನಾನುಒಯ್ಯಲಾರೆ ಏನನ್ನೂಸಾವಪ್ಪಲು ನನ್ನನ್ನು ಪ್ರಾರ್ಥಿಸು ದೇವರಲಿಆಸೆ ಫಲಿಸಲೆಂದುಶ್ರಮದಿ ಸಾಧಿಸಲುಆತ್ಮ ಶಕ್ತಿ ನೀಡೆಂದು ಮನುಜ ಬುದ್ಧಿಜೀವಿಕಟ್ಟುತ್ತಾನೆ ಈಗಲೂಹಿಮದ ದಿಮ್ಮಿ ಮನೆಹೆಸರಾಗಿದೆ ‘ ಇಗ್ಲೂ ‘ ಹಕ್ಕಿಯಂತೆ ಹಾರಿವೆಪುಕಾರುಗಳು ಇಂದುರೆಕ್ಕೆ ಪುಕ್ಕ ಪಡೆದುಬಾಯಿಯಿಂದ ಬಾಯಿಗೆ ಚುಮು ಚುಮು ಚಳಿಗೆಕಂಬಳಿ ಹೊದ್ದ ಮಂದಿಆಗಿದ್ದಾರೆ ಮುಂಜಾನೆಮನೆಯೊಳಗೇ ಬಂದಿ ಚಳಿಗಾಲದ ಚಳಿಬೇಸಿಗೆಯಲ್ಲಿ ಬಿಸಿಎರಡು ಹೆಚ್ಚಾದರೂಜನಕ್ಕೆ ತಲೆ ಬಿಸಿ ಬೆಳೆಯಬೇಕು ನೀನುಯಾರೆಷ್ಟೇ ತುಳಿದರೂಗರಿಕೆ ಹುಲ್ಲಿನಂತೆಛಲವ ಬಿಡದಂತೆ ದಣಿವನ್ನು ತೋರದೇದುಡಿಯುವಳು ತಾಯಿನಗುತ್ತಲೇ ಹೊಣೆಯಪೂರೈಸುವಳು ಮಾಯಿ ಸಾವ ತೆಕ್ಕೆಯೊಳಗೆಜೀವಗಳು ನಿರ್ಜೀವಅನಲ ಅನಾಹುತಸೂತ್ರಧಾರಿ ವಿಧಾತ ಬೆಂಕಿಯು ವ್ಯಾಪಿಸಿತುಎಲ್ಲೆಡೆ ಸರಸರಕೊನೆಗೆ ಉಳಿಯಿತುಬಸ್ಸಿನ ಕಳೇಬರ ಎ. ಹೇಮಗಂಗಾ     

ಎ.ಹೇಮಗಂಗಾ ಅವರ ತನಗಗಳು Read Post »

ಕಾವ್ಯಯಾನ, ಗಝಲ್

ಅರುಣಾ ನರೇಂದ್ರ ಅವರ ಗಜಲ್

ಕಾವ್ಯ ಸಂಗಾತಿ ಅರುಣಾ ನರೇಂದ್ರ ಗಜಲ್ ನಂಬಿದೆದೆಯಲಿ ಇಂಬಿರದೆ ಬಿಕ್ಕುತಿದೆ ಹಕ್ಕಿಜೊತೆ ನಡೆದ ಗುರುತಿರದೆ ಅಳುತಿದೆ ಹಕ್ಕಿ ಮುರಿದು ಹೋಯಿತು ತಾ ಕುಳಿತ ಕೊಂಬೆಹಾರಲು ಬಲವಿರದೆ ನೋಯುತಿದೆ ಹಕ್ಕಿ ಸುರಿಯುತಿದೆ ಮಳೆ ಬೀಸುತಿದೆ ಬಿರುಗಾಳಿಸುತ್ತ ಕತ್ತಲಲಿ ದಿಕ್ಕಿರದೆ ತೋಯುತಿದೆ ಹಕ್ಕಿ ರೆಕ್ಕೆಯ ಬಣ್ಣ ಮಾಸಿದೆ ಕೊರಳು ಬಿಗಿದಿದೆದುಃಖದಿ ಜೊತೆಯಿರದೆ ಕಾಯುತಿದೆ ಹಕ್ಕಿ ಮೂಕವಾಗಿವೆ ಗಿಡ ಮರ ಹೂ ಬಳ್ಳಿಗಳುಕಾನು ಕಣಿವೆ ಹಿತವಿರದೆ ಕೊರಗುತಿದೆ ಹಕ್ಕಿ ದೂರವಾಗಿದೆ ಬಲು ಬಿತ್ತರದ ನೀಲಿ ಬಾನುಅವನ ಪ್ರೀತಿಯಿರದೆ ಸೋಲುತಿದೆ ಹಕ್ಕಿ ಬದುಕಿಗಾಗಿ ಗಟ್ಟಿಗೊಳ್ಳಬೇಕು ಅರುಣಾನಲಿವಿನಲಿ ನೋವಿರದೆ ಬಾಳುತಿದೆ ಹಕ್ಕಿ ಅರುಣಾ ನರೇಂದ್ರ

ಅರುಣಾ ನರೇಂದ್ರ ಅವರ ಗಜಲ್ Read Post »

ಕಾವ್ಯಯಾನ

“ಅಜೀಬ್ ದಾಸ್ತಾಂ ಹೈ ಏ” ಸುಮತಿ ನಿರಂಜನ

ಕಾವ್ಯ ಸಂಗಾತಿ ಸುಮತಿ ನಿರಂಜನ “ಅಜೀಬ್ ದಾಸ್ತಾಂ ಹೈ ಏ ಸಂಪಾದಕರ ಸುಗ್ರೀವಾಜ್ಞೆ !“ಏನೇ ಇರಲಿ ಹೊಸತು ಬರಲಿಏನಾದ್ರೂ ವಿಭಿನ್ನ ಬರೀರ್ರೀಪ್ರಾಸ ಗೀಸದ ಬೆನ್ನಟ್ಟದಿರಿ!”“ಆದ್ರೆ ಸರ್, ಕಲ್ಪನಾ ವಿಲಾಸಪ್ರಾಸದ್ದೇ ಬೆನ್ನೇರಿ ಬಂದ್ರೆ ?”“ಏನಾದ್ರೂ ಮಾಡ್ರೀ ಹೋಗ್ರೀ !ಆದ್ರೆ ಹಳೇ ದಾಸ್ತಾನಿಂದಮಾತ್ರ ತೆಗೀಬೇಡ್ರೀ !” ಪೆನ್ನು ಪೇಪರು ಹಿಡಿದು ಹೊರಟೆಚಿನ್ನದ ಗಣಿಯೆಲ್ಲಾದರೂಇದೆಯೇನು ಪಕ್ಕ್ದಲ್ಲೇ ?ಅಗ್ದು ಅಗ್ದು“ಪುಟ”ಕ್ಕಿಟ್ಟು ಕೊಡ್ಲಿಕ್ಕೆ ?ಹೋಗ್ಲಿ, ಅಮ್ಮನಅವಳಮ್ಮನ ಒಡವೆ ಮುರಿದುಹೊಸ ಡಿಸೈನು ಮಾ‌ಡಿಸ್ಲೆ ?ಯಾಕೋ ಮನಸ್ಸಾಗ್ಲಿಲ್ಲಬರೇ ಆಂಟಿಕ್ ವಾಲ್ಯೂಎಂದಾರು ಸಂ.ಸಾಹೇಬ್ರು ! ಅಥವಾ,ಪಳ ಪಳ ಹೊಳೆಯುವಹೊಸ ಹೊಸ ಪದಗಳಟಂಕಿಸಿ ಅಂಟಿಸಿ ಪೇಜಿನ ಮೇಲೆಅಂಚೆಗೆ ಹಾಕ್ಲೆ ಈಗ್ಲೆ ?ಹೊಸ ನಾಣ್ಯ ನಡೆಯೋದಲ್ಲಓಡ್ತಾವೆ ನೋಡಿ, ಮಿಂಟ್ ಫ್ರೆಶ್ !ಎಂದನಲ್ಲವೇ ಸಂ ಮಹಾಶಯ !ಆದರೆ…ಹತ್ರ ಎಲ್ಲೂ ಟಂಕಸಾಲೆನೇಕಾಣಿಸ್ತಿಲ್ವಲ್ರೀ !ಈಗ ಅದೇನೋ ಬಂದಿದ್ಯಂತಲ್ಲಾಕೃತ್ರಿಮ ಬುದ್ಧಿ ಮತ್ತೆ ಅಂತ ?ಅದಕ್ಕೇ ಮೊರೆ ಹೋಗ್ಲೇನು ?“ಅದ್ ಬಂದ್ ಮೇಲೆನಿಮ್ಗ್ ಯಾರ್ರೀ ಹಾಕ್ತಾರ್ರ್ ಸೊಪ್ಪು ?”ಎಂದಾನು ಮಹಾನುಭಾವ ! ಸರಿ, ನಡಿ ಮತ್ತೆಹಳೆ ಉಗ್ರಾಣಕ್ಕೆ…ಏನೇನೋ ದಾಸ್ತಾಂ…ಅಳಿದಿದ್ದು ಉಳಿದಿದ್ದುಮುರಿದಿದ್ದು ಮಬ್ಬಾದದ್ದುಎದ್ದಿದ್ದು ಅರ್ಧನಿದ್ರೆಲಿದ್ದಿದ್ದುಏನೇ ಆಗ್ಲಿ ನಂದೇ ಎಲ್ಲಾಬೇರೆಯವ್ರ್ ದಾಸ್ತಾನಂತೂ ಅಲ್ಲಯಾವ್ದೋ ಒಂದನ್ನೆಬ್ಸಿಉಜ್ಜಿ ತೊಳ್ದು ಒಪ್ಪ ಮಾಡಿಹೊಸ ಇಸ್ತ್ರಿ ಅಂಗಿ ಹಾಕಿಕಳಸ್ತೀನಿ ಮಾರಾಯಂಗೆನಡೀಯತ್ತೋ ಓಡತ್ತೋಎಡವಿ ಬೀಳತ್ತೋನೋಡೇ ಬಿಡಾಣ ! ಸುಮತಿ ನಿರಂಜನ

“ಅಜೀಬ್ ದಾಸ್ತಾಂ ಹೈ ಏ” ಸುಮತಿ ನಿರಂಜನ Read Post »

ಕಾವ್ಯಯಾನ

ರಾಶೇ ಬೆಂಗಳೂರು ಅವರ ಕವಿತೆ “ನೆನಪುಗಳು”

ಕಾವ್ಯ ಸಂಗಾತಿ ರಾಶೇ ಬೆಂಗಳೂರು “ನೆನಪುಗಳು” ಸೊಗಸು ಸೊಗಸಾದಸಿಹಿ ಸಿಹಿಯಾದಆ ನೆನಪುಗಳುಮಧುರವಾಗಿರಲಿ.. ಜೀವ ಭಾವದಪ್ರೀತಿ ಮರೆಯದಹೊಂಗನಸುಗಳುಸದಾ ನನಗಿರಲಿ.. ಮತ್ತೆ ಬಾರದನೋವು ಗಾಯದಕಹಿ ಘಟನೆಗಳುಮರುಕಳಿಸದಿರಲಿ.. ಕಳೆದುಹೋದಕೆಣಕಿ ದೂರಾದಉರಿ, ದಳ್ಳುರಿಗಳುಬೆಂದು ಬೂದಿಯಾಗಲಿ.. ರಾಶೇ ಬೆಂಗಳೂರು

ರಾಶೇ ಬೆಂಗಳೂರು ಅವರ ಕವಿತೆ “ನೆನಪುಗಳು” Read Post »

ಕಾವ್ಯಯಾನ

ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ”

ಕಾವ್ಯ ಸಂಗಾತಿ ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” ಒಲುಮೆಯ ಕಾಣಿಕೆಯಂತೆಬಂದೆ ಅಪ್ಪ ನೀ ನನ್ನ ಬಾಳಿಗೆ!ನಿನ್ನ ಮಡಿಲಲಿ ನಾ ನೆಲೆಯಾಗಿ ನಿಂತೆ..ತುಂಬಿ ನನ್ನ ಸಂತಸದ ಜೋಳಿಗೆ!! ನಿನ್ನ ನೆನೆಯದೇ ಇನಿತೂಕಳೆಯದು ಈ ಬದುಕು!ನಿನ್ನ ಸವಿನೆನಪಿನ ಕ್ಷಣಗಳೆ..ಈ ಮಗಳಿಗೆ ಹಸಿರ ಬೆಳಕು!! ಮನದಂತರಾಳದ ಬೆಚ್ಚನೆಯ ಕಾವಲಲಿನಿನ್ನದೇ ಒಲವದು ಅಡಗಿದೆ!ಸಂತಸದಿ ಮಿಡಿದ ಕಂಬನಿಯಲೂ..ಅಳಿಯದ ನಿನ್ನ ಭಾವವಿದೆ!! ಪಡೆದ ಸಂತಸದ ಎಣಿಕೆಯಿರದುನಿನ್ನ ಪ್ರೀತಿಯ ಸಿಂಚನದಲಿ!ಹನಿಯೊಂದು ತಾ ಜಿಗಿಯಲುತವಕಿಸಿದಂತೆಮೋಡದಂಚಿನಲಿ!! ಸುಮನಾ ರಮಾನಂದ,ಕೊಯ್ಮತ್ತೂರು

ಸುಮನಾ ರಮಾನಂದ,ಕೊಯ್ಮತ್ತೂರು “ಮಮತೆಯ ಸ್ವಗತ” Read Post »

ಕಾವ್ಯಯಾನ

ಅಕ್ಷತಾ ಜಗದೀಶ ಅವರ ಕವಿತೆ,”ಮೌನ ಮಾತಾದಾಗ…”

ಕಾವ್ಯ ಸಂಗಾತಿ ಅಕ್ಷತಾ ಜಗದೀಶ “ಮೌನ ಮಾತಾದಾಗ…” ಅಟ್ಟದ ಮೇಲೆ ಕೂಡಿಟ್ಟಕನಸುಗಳು ಅದೆಷ್ಟೋ,ನನಸಾಗದೆ ನೆನಪುಗಳಾಗಿಕಿಡಕಿಯ ಕಂಬದಬಣ್ಣಗಳಾಗಿ ಉಳಿದಮಾತುಗಳು ಅದೆಷ್ಟೋ….. ಇಂದೇಕೋ ಮನೆ ಮಾತಾಡಿದೆ,ಮನಗಳು ಮೌನವಾದಾಗ…ಗಾಜಿನ ಹಂಚಿನಿಂದಬೆಳಕೊಂದು ಇಣುಕಿ ನೋಡಿದೆ,ಮನೆಯೊಳಗೆ ಮಂದಿಎಷ್ಟೂ ಇಹರೆಂದು…. ಅದೆಷ್ಟೋ ನಗುವಿನ ಸದ್ದುಕೇಳಿರುವ ಕಂಬಗಳುಮತ್ತೆ ಮತ್ತೆ ಎದುರು ನೋಡುತಲಿದೆ,ಅಳುವಿನಲ್ಲೊಂದು ನಗುವುಸಿಗಬಹುದೆಂದು… ಅಜ್ಜನ ಕವಳದ ಚಂಚಿಯೊಂದುಮತ್ತೆ ಹಂಬಲಿಸುತಲಿದೆಜಗುಲಿಯ ಹಾಳು ಹರಟೆಯ ಸದ್ದು…ಅಂಗಳದ ರಂಗವಲ್ಲಿಮತ್ತೆ ಎದುರು ನೋಡುತ್ತಿದೆ,ಪಟ್ಟಣ ನುಂಗಿದ ಕನಸುಗಳುನನಸಾಗಿ ಮತ್ತೆ ಚಿತ್ತಾರ ಮೂಡಿಸುವುದೆಂದು……………….. ಅಕ್ಷತಾ ಜಗದೀಶ.

ಅಕ್ಷತಾ ಜಗದೀಶ ಅವರ ಕವಿತೆ,”ಮೌನ ಮಾತಾದಾಗ…” Read Post »

ಕಾವ್ಯಯಾನ

ಶ್ರೀನಿವಾಸ ಕೆ.ಎಂ ಅವರ ಎರಡು ಕವಿತೆಗಳು

ಕಾವ್ಯ ಸಂಗಾತಿ ಶ್ರೀನಿವಾಸ ಕೆ.ಎಂ ಎರಡು ಕವಿತೆಗಳು ಕವಿತೆ-೧ ಕುರುಡು ನಂಬಿಕೆನಿನ್ನಲ್ಲಿ ಮನೆ ಮಾಡಿಸಂಶಯ ಹುತ್ತಗಟ್ಟಿಸುರುಳಿ ಸುತ್ತಿ ಸುಳಿದಾಡಿದೆನಿನ್ನ ಸುತ್ತ.. ಹುಸಿ ಮಾತಿಗೆ ಕಿವಿಗೊಟ್ಟುಆಲಿಸುವ ರಿಸೀವರ್‌ಗಳಮಾತಿಗೆ ಮರಳಾಗುವಮಾಯ ಬಜಾರಿನ ಜಗತ್ತು, ಅಜ್ಜಿಗೆ ಅರಿವೆ ಚಿಂತೆಯಾದರೆಮೊಮ್ಮಗಳಿಗೆ ಮತ್ತೇನೋಚಿಂತೆ,  ಮೈಕ್ ಇಲ್ಲದಸ್ಪೀಕರ್ ಗಳು ಕಿವಿಡೆಬ್ಬಿಸಿವೆ ಜಗವ ಕೇಳುವಂತೆ, ಇದ್ದ ಮೂರು ಜನರ ನಡುವೆಮಳ್ಳ ಬೆಕ್ಕಿನಂತೆ ನೋಡಿದ ಕಣ್ಣು,ಹಿತ್ತಾಳೆ ಕಿವಿಯಂತೆ ಆಲಿಸಿದ ಕಿವಿ,ಬೊಗಳೆ  ಮಾತಿನ ಮನೆಯ ಕಟ್ಟಿದಬಾಯಿಯಲ್ಲವೇ? ನಿದ್ದೆಯಿಂದೆದ್ದ  ಮನಸ್ಸಿಗೆ ತಿಳಿದಿದೆಕುರುಡು ನಂಬಿಕೆಯ ಬಟ್ಟೆ ಕಿತ್ತೆಸೆದುಸಂಶಯದ ಹುತ್ತವ ಕೆಡವಿನಂಬಿಕೆಯ ಮನೆಯಕಟ್ಟಬೇಕೆಂದು. ಕವಿತೆ-೨ ಅನುದಿನದಿ ಕುದಿವ ಮನದ ಬೇಗೆನಭದೆತ್ತರಕೆ ಚಿಮ್ಮುವ ಜ್ವಾಲಾಮುಖಿ, ಆಕ್ರೋಶದಿ ತುಡಿಯುವ ಮೂಕಮನಸ್ಸುಸಾಸಿವೆಯಷ್ಟು ಸಮಾಧಾನವಿಲ್ಲ, ಇಹಪರಗಳಾಚೆಗೂ ನಿಲುಕದ ಮಾಯೆತನ್ನೊಳಗೆ ಮನೆಯ ಮಾಡಿಗುಂಗಿ ಹುಳುವಿನಂತೆ ಕೊರೆದುಕಾಡಿ ಪೀಡಿಸುತಿದೆ, ತನ್ನೊಳಗೆ ಹುದುಗಿರುವ ಮಾಯೆಯಬಲೆಯ ಕಳಚಲು,ಅಟ್ಟ-ಬೆಟ್ಟಗಳ  ದಾಟಿ,ಕಾಡು-ಕಣಿವೆಯ ಸುತ್ತಿ,ಬಟ್ಟ ಬಯಲನು ಇಳಿದುಮುನ್ನಡೆಯಬೇಕು, ಜಗದ ಕತ್ತಲ ಕಳೆಯಲುಅರಿವೆಂಬ ಹಣತೆಯಹೊತ್ತಿಸಲೇ ಬೇಕು. ಶ್ರೀನಿವಾಸ ಕೆ.ಎಂಕನ್ನಡ ಸಹಾಯಕ ಪ್ರಾಧ್ಯಾಪಕರುವೇದಾಂತ ಪದವಿ ಕಾಲೇಜು,ಬೆಂಗಳೂರು.

ಶ್ರೀನಿವಾಸ ಕೆ.ಎಂ ಅವರ ಎರಡು ಕವಿತೆಗಳು Read Post »

ಕಾವ್ಯಯಾನ

ವಿಜಯಲಕ್ಷ್ಮಿ ಕೆ ಹಂಗರಗಿ ಅವರ ಕವಿತೆ,”ಸಾಧಿಸುವ ಛಲವೊಂದೇ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಕೆ ಹಂಗರಗಿ “ಸಾಧಿಸುವ ಛಲವೊಂದೇ” ಸಾಗುವ ಜಗದಲಿಹಲವು ಟೀಕೆಗಳಿರಲಿಕೆಲವು ತಪ್ಪುಒಪ್ಪುಗಳಿರಲಿನಡೆಯಬೇಕು ನಮ್ಮತನದಲಿ// ಏನೇ ಬರಲಿ ಕಷ್ಟಹೇಗೆ ಬರಲಿ ಸುಖಹಿಗ್ಗದೆ ಕುಗ್ಗದೆಮುನ್ನುಗ್ಗಿ ಸಾಗು // ಸಾಕಿ ಸಲುಹಲುಯಾರಿಲ್ಲ ಜೊತೆಯಲಿಕೊರಗದಿರು ಮನದಲಿಬೆಳೆಯೋಣ ನಮಗೆ ನಾವೇಜೀವನ ಪಯಣದಲಿ// ಛಲಬೇಕು ಬೆಳೆಯಲುಮನದಲಿ ಬರಬೇಕುಸ್ವಲ್ಪ ಅವಕಾಶ ಸಿಕ್ಕರೂಹಿಡಿದು ಮುನ್ನುಗ್ಗಬೇಕು// ನಿನ್ನ ಒಲವು ನಿನಗೆನಿನ್ನ ಗುರಿ ನಿನಗೆನಿನ್ನ ನೋಟವೊಂದೇಸಾಧಿಸಿ ನಗುವ ಛಲವೊಂದೇ// ವಿಜಯಲಕ್ಷ್ಮಿ ಕೆ ಹಂಗರಗಿ

ವಿಜಯಲಕ್ಷ್ಮಿ ಕೆ ಹಂಗರಗಿ ಅವರ ಕವಿತೆ,”ಸಾಧಿಸುವ ಛಲವೊಂದೇ” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು” ಇನ್ನು ಇದೆ ಹೇಳುವುದು…ಕೇಳಿಕೊಳ್ಳಿ ಬಂಧುಗಳೇನಿಮ್ಮ ಜೊತೆ ಬಹುಪಾಲು ವಿಷಯ ಹಂಚಿಕೊಳ್ಳಬೇಕಿದೆಸಮಯ ಗಮನ ಕೊಟ್ಟು ಕೇಳಿನಾನು ನೀವು ಇಲ್ಲಿ ಬದುಕ ಬೇಕಿದೆ. ಮೋಸ ವಂಚನೆ ಸುಳ್ಳುಗಳು ಅಧಿಕಾರ ಹಿಡಿದಿರುವಾಗ ಹತ್ತಿಕುವುದು ದಮನಿಸುವುದು ಕಾನೂನು ಕಟ್ಟಳೆಯಾಗಿವೆಸತ್ಯಕ್ಕೆ, ನ್ಯಾಯಕ್ಕೆ ಸಂಘರ್ಷಕೆಇನ್ನೂ ಇದೆಯಾ ಬದುಕು? ಸತ್ಯವ ನುಡಿದರೆ ಭಯೋತ್ಪಾದಕ ಎನ್ನುವರುನ್ಯಾಯವ ಕೇಳಿದರೆನಗರ ನಕ್ಷಲೈಟ್ ಎನ್ನುವರು ಮಾರಾಟವಾಗಿವೆ ಕೋರ್ಟ್ ಕಚೇರಿ ಹಕ್ಕಿಗೆ ಕೂಗುವ  ಹಾಗಿಲ್ಲಧ್ವನಿ ಎತ್ತುವ ಹಾಗಿಲ್ಲಚಳುವಳಿ ಮಾಡುವ ಸ್ಥಿತಿಯಿಲ್ಲ ಪೊಲೀಸರ ಗುಂಡು ಬೂಟಿನ ಸದ್ದುರಾತ್ರಿಗೆ ಹಗಲೆನ್ನಬೇಕುಕೋಳಿಗೆ ನವಿಲೆನ್ನಬೇಕು ಬುದ್ಧ ಬಸವ ಎಂದರೆತಾಲಿಬಾನಿ ಎನ್ನುವರುಜಾತಿ ಧರ್ಮದ ದ್ವೇಷ ಬಿತ್ತುವರುವೋಟಿನ ಮಾರುಕಟ್ಟೆಗೆಬಿಕರಿಯಾಗಿವೆ ಮಠ ಮಸೀದಿಚರ್ಚ್ ವಿಹಾರ ಬಸದಿಗಳುಇನ್ನೂ ಇದೆಯಾ ಭವಿಷ್ಯ ? ದೇಶ ಹತ್ತಿ ಉರಿಯುತ್ತಿದೆರಾಜರ ವಿದೇಶಿ ಪ್ರವಾಸಮಂತ್ರಿಗಳು ಕೊಳ್ಳೆ ಹೊಡೆಯುತ್ತಿದ್ದಾರೆಬುದ್ಧಿ ಜೀವಿಗಳ ಗಾಢ ನಿದ್ದೆಪತ್ರಿಕೆ ಟಿವಿ ನೋಡುವ ಜನರುಇನ್ನೂ ಎದ್ದಿಲ್ಲ ದೇಶಕ್ಕೆ ನಾಡಿಗೆ ದಸರಾ ಪಲ್ಲಕ್ಕಿಯಲಿ ಮೆರವಣಿಗೆಸೋತವರ ಸತ್ತವರ ಗೊಂಬೆ ಕುಣಿತಪೊಲೀಸರ ಕವಾಯತ ನಮನಆನೆ ಒಂಟಿ ಕುದುರೆ ಸವಾರಿಮೋಸವೋ ಮೋಜು ಗೊತ್ತಾಗುತ್ತಿಲ್ಲ ಕೂಗುವ ಹಾಗಿಲ್ಲ ಶೋಷಕರ ವಿರುದ್ಧಇಂಕಿಲಾಬ್ ಘೋಷಣೆಒಬ್ಬನ ಸುಡಲು ಸಿದ್ಧ ನೂರು ಕೆಜಿ  ಸಿಡಿ ಮದ್ದುನ್ಯಾಯಕ್ಕೆ ಬೆಲೆಯಿಲ್ಲ ಜಾಮೀನಿಲ್ಲಸತ್ಯವಂತರ ಹತ್ಯೆ ನಿತ್ಯ ನಡೆದಿವೆ ಅದಕೆಂದೇ ನಾನೂಕೂಗಿ ಹೇಳುತ್ತೇನೆ…ನಾನು ಬಸವ ಧರ್ಮಿಗಣಾಚಾರವೇ ನನ್ನ ಅಸ್ತ್ರನಾನು ಇರುಳಿಗೆ ಹಗಲೆನ್ನುವುದಿಲ್ಲಕೋಳಿಗೆ ನವಿಲೆನ್ನುವುದಿಲ್ಲ ಈಗ ಮುಸ್ಸಂಜೆ ಕರಾಳ ಕತ್ತಲೆಯಾಗುವುದುಜೈಲಿನ ಬಿರುಕು ಗೋಡೆಯಲ್ಲಿಚಿಗುರಿದೆ ಬುದ್ಧನ ಅರಳಿ ಮರಮುಂಜಾನೆ ಕ್ರಾಂತಿಯ ಸೂರ್ಯಮತ್ತೆ ಹುಟ್ಟುವನುಭ್ರಮೆ ಭ್ರಾಂತಿ ಅಳೆದು ಬನ್ನಿ ಎದ್ದೇಳಿ ದುಷ್ಟ ಕಾರಸ್ಥಾನಕ್ಕೆಬಲಿಯಾದವರ ಉಳಿಸ ಬನ್ನಿನಿಮ್ಮ ಹಕ್ಕಿಗೆ ಘೋಷಣೆಯಾಗ ಬನ್ನಿಬುದ್ಧ ಬಸವ ಬಾಪು ಬಾಬಾಸಾಹೇಬರಮತ್ತೆ ಭುವಿಗೆ ಹೊತ್ತ ತನ್ನಿ ನಾನು ಬಸವನ ಒಕ್ಕಲುಬಸವ ಪಥಿಕ ಬಸವ ಧರ್ಮಿಎದ್ದು ಬನ್ನಿ ಗುದ್ದು ಬನ್ನಿಅಸಮತೆ ಅನ್ಯಾಯ ಶೋಷಣೆಗೆಕೊನೆ ಹೇಳೋಣ ಬನ್ನಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು” Read Post »

You cannot copy content of this page

Scroll to Top