ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶಂಕರ್ ಪಡಂಗ ಕಿಲ್ಪಾಡಿ-“ಕವಿತೆ ಹುಟ್ಟಿದ್ದು ಹೇಗೆ?”

ಕಾವ್ಯ ಸಂಗಾತಿ ಶಂಕರ್ ಪಡಂಗ ಕಿಲ್ಪಾಡಿ- “ಕವಿತೆ ಹುಟ್ಟಿದ್ದು ಹೇಗೆ?” ನನ್ನೊಳಗಿನ ಕವಿತೆಯನ್ನುಬಡಿದೆಬ್ಬಿಸಿದವರುತಿದ್ದಿ ತೀಡಿದವರು ಯಾರು..?ಅಕ್ಷರದ ,ಹಿಡಿತ, ತುಡಿತ, ಮಿಡಿತಗಳಅರಿವಿಲ್ಲದಿದ್ದರೂ,ಪಡುವಣದ ಶರಧಿಯಜೊತೆಲಲ್ಲೆಗರೆಯುವಚಂದಿರನ ನೋಡಿ  ನನ್ನೊಳಗಿನ ಕವಿತೆಯ ಹುಟ್ಟು ,ಜೀವನದ ಅರ್ದ ಸತ್ಯದ ಬವಣೆಯ ನೆನೆದು,ಪೊಳ್ಳು ಭರವಸೆಯ ನೋಡಿಹುಟ್ಟಿತ್ತು ಕವಿತೆ.ನೀರುಣಿಸದೆ ಬೆಳೆದಹೆಮ್ಮರಗಳ ಕತ್ತರಿಸಿದರೂ,ಹಠ ಬಿಡದ ತ್ರಿವಿಕ್ರಮನಂತೆಮತ್ತೆ ಮತ್ತೆ ಚಿಗುರಿ,ಹಕ್ಕಿಗಳಿಗಾಸರೆಯನೀಡುವುದ ನೋಡಿ ,ಹುಟ್ಟಿತ್ತು ಕವಿತೆ.ಅಂತಸತ್ವವ ಮರೆತಂತೆಜೀವಿಸುವವರ ನೋಡಿ,ಬದುಕೆಲ್ಲ ಸವೆಸಿದರೂತೃಪ್ತಿ ಇಲ್ಲದ ಜನರ ನೋಡಿ,ಹುಟ್ಟಿತ್ತು ಕವಿತೆ.ಬದುಕು ಬಂಧುರವಾಗಲುನಿನ್ನನ್ನು ಅಪ್ಪಿಕೊಂಡೆ,ಒಪ್ಪಿಕೊಂಡೆ ಈಗನೀ ನನ್ನ ಜೀವಾಳವಾದೆ. ಶಂಕರ್ ಪಡಂಗ ಕಿಲ್ಪಾಡಿ

ಶಂಕರ್ ಪಡಂಗ ಕಿಲ್ಪಾಡಿ-“ಕವಿತೆ ಹುಟ್ಟಿದ್ದು ಹೇಗೆ?” Read Post »

ಕಾವ್ಯಯಾನ

ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ” 12ರ ಶತಮಾನದಲ್ಲಿ ಉದಯಿಸಿಹೆಣ್ಣು ಕುಲಕ್ಕೆ ಮಾದರಿಯಾಗಿಹತ್ತು ಹಲವು ಕಷ್ಟಗಳನ್ನು ಸರಿಸಿದಿಟ್ಟ ಹೆಜ್ಜೆ ಇಟ್ಟು ಮುನ್ನಡೆದಿ ಅಕ್ಕ// ಯಾರ ಮಾತಿಗೂ ಕಿವಿಗೊಡದೆಯಾರ ಹಂಗಿಗೂ ಒಳಗಾಗದೆಯಾರ ಆಸರೆಯನ್ನು ಬಯಸದೆಚನ್ನಮಲ್ಲಿಕಾರ್ಜುನನ್ನು ಅರಸಿದೆ ಅಕ್ಕ// ಅರಮನೆ ಅರಸನನ್ನು ಬದಿಗಿರಿಸಿಲೌಕಿಕಸುಖ ಸಂಪತ್ತನ್ನು ಧಿಕ್ಕರಿಸಿಜಗದ ಜಂಜಾಟವ ಹಿಂಗಳಿಸಿಅರಸುತ್ತ ನಡೆದೆ ಅಕ್ಕ// ಅಲ್ಲಮನ ಅಧ್ಯಕ್ಷತೆಯಲ್ಲಿಬಸವಣ್ಣನ ಅನುಭವತೆಯಲ್ಲಿನೀ ಅರಸಿ ಶರಣರ ಸಂಗಡದಲ್ಲಿಕಲ್ಯಾಣದ ಕಾಶಿಗೆ ತೆರಳಿದೆ ಅಕ್ಕ// ಆಶೆ ಆಕಾಂಕ್ಷೆಯನ್ನು ಬದಿಗಿಟ್ಟುಸುಖ ಸುಪ್ಪತ್ತಿಗೆಯನ್ನು ಸರಿಸಿಟ್ಟುಚೆನ್ನಮಲ್ಲಿಕಾರ್ಜುನನ್ನು ಅರಸುತ್ತಾಕದಳಿವನ ಕಾಲಿಟ್ಟು ಲಿಂಗೈಕ್ಯಾದೆ ಅಕ್ಕ// ವಿಜಯಲಕ್ಷ್ಮಿ ಹಂಗರಗಿ

ವಿಜಯಲಕ್ಷ್ಮಿ ಹಂಗರಗಿ “ಅಕ್ಕ ,ನೀನು ಮಹಾದೇವಿ” Read Post »

ಕಾವ್ಯಯಾನ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್

ಕಾವ್ಯ ಸಂಗಾತಿ ಡಾ ಅನ್ನಪೂರ್ಣ ಹಿರೇಮಠ ಗಜಲ್ ನಿನ್ನೊಡನಾಟದ ಕಡಲ ಹಾಯ್ ದೋಣಿಯಲಿ ವಿಹರಿಸುವಾಸೆಸರಸ ಸಲ್ಲಾಪ ಸಖ್ಯ ಸವಿಯ ತೋಳ ಸೆರೆಯಲಿ ಮೈಮರೆವಾಸೆ ಬಾಹುಬಂಧನದಿ ಬಂಧಿಯಾಗಿ ಬಯಕೆ ತೊಟ್ಟಿಲಲಿ ತೂಗುವಾಸೆಓಡೋ ಮೋಡ ಮೆದ್ದೆ ಮೇಲಿಹ ಸ್ವರ್ಗ ಪಥದಲಿ ಪಯಣದಾಸೆ ಚುಕ್ಕಿತಾರೆ ಚಂದ್ರನೂರಿಗೆ ಇಂದ್ರನ ಬೆಳ್ಳಿ ರಥದಲಿ ಹೋಗುವಾಸೆಹೃದಯದ ಅರಮನೆಯ ಪುಟ್ಟ ಗರ್ಭ ಗುಡಿಯಲಿ ನಿದ್ರಿಸುವಾಸೆ ಪಚ್ಚೆ ಮಲ್ಲಿಯ ಹಚ್ಚಹಸುರಿನ ನಿನ್ನೆದೆ ಬನದಲಿ ಹೂವಾಗುವಾಸೆಶುಭ್ರ ಹೊಳಪಿನ ಹಂಸವಾಗಿ ಕಣ್ಣ ಕೊಳದಲಿ ಈಜಾಡುವಾಸೆ ಮೇಘಮಂದಾರದ ನಾದತರಂಗ  ವೀಣೆಯಲಿ ಹಾಡಾಗುವಾಸೆಭೃಂಗದೊಲವಿನ ಮಕರಂದದ ಸಿಹಿ ಜೇನಿನಲಿ ಜಿನುಗುವಾಸೆ ಹೊನ್ನಾಸೆ ಚಿತ್ತಾರದ ಬಣ್ಣ ಬಣ್ಣದೊಕುಳಿ ಬೆಡಗಲಿ ಮಿನುಗುವಾಸೆಪ್ರಣಯ ಪಕ್ಷಿಗಳಂತೆ ಬಾನಂಗಳದ ಬಯಲಲಿ ಹಾರಾಡುವಾಸೆ ಅನುಳ ಜನುಮದ ಗೆಳೆಯನೇ ತನುವ ತುಡಿತದಲಿ ಬಚ್ಚಿಡುವಾಸೆಮಂಪರಿನ ಪ್ರೇಮಾಮೃತದ ಹೊನ್ನ ಗಿಂಡಿಯಲಿ ನಶೆಯಾಗುವಾಸೆ ಡಾ ಅನ್ನಪೂರ್ಣ ಹಿರೇಮಠ

ಡಾ ಅನ್ನಪೂರ್ಣ ಹಿರೇಮಠ ಅವರ ಗಜಲ್ Read Post »

ಕಾವ್ಯಯಾನ

ಪಂದ್ಯ0ಡ ರೇಣುಕಾ ಸೋಮಯ್ಯ ಕವಿತೆ, ನೆನಪಿನ ಬುತ್ತಿ

ಕಾವ್ಯ ಸಂಗಾತಿ ಪಂದ್ಯ0ಡ ರೇಣುಕಾ ಸೋಮಯ್ಯ ನೆನಪಿನ ಬುತ್ತಿ ನೂರರು ನೆನಪಿನ ಬುತ್ತಿಗಳು ಬಿಚ್ಚುತಿವೆಇಂದಿನ ಮಕ್ಕಳ ನೋಡುತಲಿlಹಾರುತ ಓಡುತ ಕುಣಿಯುತಲಿದ್ದೆವು ಅಂದುಮನದೊಳು ಸಂತಸ ಚಿಮ್ಮುತಲಿll೧ll ಇರಲಿಲ್ಲವೆ ಅಂದು ಮೊಬೈಲು ಕೈಯ್ಯಲಿಇದ್ದುದು ಚಿಲುಕಿ-ಬುಗುರಿ ಲಗ್ಗೋರಿ lಮರಕೋತಿ ಆಟದಿ ಸಿಗುತಿದ್ದ ಸಂತಸವಇಂದು ಎಲ್ಲಿ ಹುಡುಕಲಿl೨l ಮಾವು ಕಿತ್ತಳೆ ಹಣ್ಣನು ಕೀಳುತತಿನ್ನುತಲಿದ್ದೆವು ಒ0ದಾಗಿlಕಾವಲುಗಾರನ ಕಣ್ಣನು ತಪ್ಪಿಸಿಓಡುತಲಿದ್ದೆವು ಬಿರುಸಾಗಿll೩ll ಕೆಸರುಗದ್ದೆಯ ಮೇಲೆಏಳು-ಬೀಳುತಲಿದ್ದೆವುಬಿತ್ತನೆ ಮಾಡುವಸಮಯದಲ್ಲಿlಹಸಿವಿನ ಚಿಂತೆಯು ಸುಳಿಯಲೇ ಇಲ್ಲತು0ಟಾಟವಾಡುವ ಭರ ದಲ್ಲಿll೪ll ಕಾಗದ ದೋಣಿಯ ತೇಲಿಸಿ ನೀರಲಿನೋಡುತಲಿದ್ದೆವು ಬದಿಯಲ್ಲಿlಸಾಗುತಲಿದ್ದ ದೋಣಿಯು ಮಗುಚಲುಮಾಂಕಾಯಿತು ಮೊಗವು ಕ್ಷಣದಲ್ಲಿll೫ll ಮರೆಯಲಿ ಹೇಗೆ ಅಂದಿನಆ ದಿನಕೋಟಿ ಕೊಟ್ಟರು ಸಿಗಕಿಲ್ಲlಸರಿಯಿತು ಕಾಲವು ಎಷ್ಟು ಬೇಗನೆವಯಸ್ಸು ಮಾಸಿದ್ದು ತಿಳಿಯಲೇಯಿಲ್ಲll೬llಆದಿ ಹಾಗೂ ಅಂತ್ಯ ಪ್ರಾಸದಲ್ಲಿ ಪಂದ್ಯ0ಡ ರೇಣುಕಾ ಸೋಮಯ್ಯ ಹೊಸೂರ್ ಅಮ್ಮತ್ತಿ ಕೊಡಗು

ಪಂದ್ಯ0ಡ ರೇಣುಕಾ ಸೋಮಯ್ಯ ಕವಿತೆ, ನೆನಪಿನ ಬುತ್ತಿ Read Post »

ಕಾವ್ಯಯಾನ

ಡಾ.ಸೌಮ್ಯಾ ಕೆ. ಅವರ ಕವಿತೆ “ಒಲವಿನ ಡಿಸೆಂಬರ್”

ಕಾವ್ಯ ಸಂಗಾತಿ ಡಾ.ಸೌಮ್ಯಾ ಕೆ. “ಒಲವಿನ ಡಿಸೆಂಬರ್” ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!ಮುಂಜಾನೆ ಮರಬಳ್ಳಿಗಳು ಮತ್ತಿನಲಿ ತೊನೆದಂತೆಕನಸುಗಳು ಮೃದುವಾಗಿ ಅಂಗಳಕೆ ಹರಿದಂತೆಓಹ್ ಈಗ ಸೂರ್ಯನೂ ಅದೆಷ್ಟು ದಯಾಮಯಿ!ರಾತ್ರಿಯಾಕಾಶವೂ ಕವಿತೆಯಾಗಿ ಮಿಂಚುತಿದೆ.. ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!ತಂಗಾಳಿ ನಯವಾಗಿ ಮುಂಗುರುಳ ನೇವರಿಸಿದಂತೆಕಾಡಿನ ನಡುವೆ ಕಾಡುವ ಸಾಲೊಂದ  ಗುನುಗಿದಂತೆಜಗವೇ ತುಸು ತಡೆತಡೆದುನಿರಾಳವಾಗಿ ಉಸಿರಾಡುತಿದೆ.. ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!ವರುಷವಿಡೀ ಕಾದಿದ್ದ ಬೆರಗು ಬಿಚ್ಚಿಟ್ಟಂತೆಗಡಿಬಿಡಿಯ ದೌಡನು ಬೆಳದಿಂಗಳು ಬರಸೆಳೆದಂತೆಹೃದಯ ಉಕ್ಕೇರಿ ಬಯಸಿದ ಮಧುಶಾಲೆಯಿದುಎಲ್ಲ ನೋವುಗಳ ಪೊರೆ ಕಳಚಿ ಹೊಸತಿನದೇ ಪ್ರತೀಕ್ಷೆ… ಈ ಡಿಸೆಂಬರನೇತಕೆ ನನ್ನಾತ್ಮಕೆ ಹತ್ತಿರ!ದೀರ್ಘ ರಾತ್ರಿಗಳಲಿ ಗಜಲೊಂದು ಕೆಂದುಟಿಗಳ ನಡುವೆ ಅರಳಿದಂತೆಸ್ವರ್ಗವೇ ಮೆಲ್ಲಡಿಯಿಟ್ಟು ಸನಿಹ ಬಂದಿರುವಂತೆನಿನ್ನೆಗಳ ನಾಳೆಗಳ ಹಂಗಿಲ್ಲ ಇಲ್ಲೀಗ ಆತ್ಮಕೆಈ ಡಿಸೆಂಬರನದಕೇ ನನ್ನಾತ್ಮಕೆ ಹತ್ತಿರ – ಹತ್ತಿರ.. ಡಾ. ಸೌಮ್ಯಾ ಕೆ.ವಿ.

ಡಾ.ಸೌಮ್ಯಾ ಕೆ. ಅವರ ಕವಿತೆ “ಒಲವಿನ ಡಿಸೆಂಬರ್” Read Post »

ಕಾವ್ಯಯಾನ

ಅನುರಾಧಾ ಶಿವಪ್ರಕಾಶ್ ಅವರ ಕವಿತೆ, “ಆಂತರ್ಯ”

ಕಾವ್ಯ ಸಂಗಾತಿ ಅನುರಾಧಾ ಶಿವಪ್ರಕಾಶ್ “ಆಂತರ್ಯ” ಅರಿಯಲಾರೆನು ನಿನ್ನ ಮನವನುತೆರೆದು ತೋರೆಯ ಆಂತರ್ಯವಭಾವಬಂಧಕೆ ತೊಡಕು ನೀಡಲುಕಾಣಲಾರೆನು ಸೌಂದರ್ಯವ/೧/ ಎದೆಯ ಗುಡಿಯಲಿ ಇನಿತು ಪ್ರೀತಿಯಬಯಸಿ ಬಂದಿಹೆ ನಲಿಯುತವಿಧಿಯ ಆಟಕೆ ಮುರುಟಿ ಹೋಯಿತೆಮನವು ನಲುಗಿತು ಮರುಗುತ/೨/ ಮಾತು ನಗುವನು ನುಂಗಿ ಹಾಕುವಸಿಡಿಲ ಭರವನು ತಾಳೆನುಕುಳಿತು ಕಲೆತು ಬೆರತು ಉಂಡಿಹಸಿಹಿಯ ಎಂದೂ ಮರೆಯೆನು/೩/ ಬದುಕ ಪಥದಲಿ ಕವಲು ದಾರಿಯಎಣಿಸಬಲ್ಲೆವೇ ಈ ಕ್ಷಣಹಾದಿ ಸವೆಸಲು ಪಾಠ ಹಲವಿದೆಕಲಿಯ ಬೇಕಿದೆ ಪ್ರತಿಕ್ಷಣ/೪/ ಮೌನದೊಳಗಿನ ಭಾವವೆಲ್ಲವುಚಿಪ್ಪಿನೊಳಗಿನ ಮುತ್ತದುಕಲ್ಲು ಬಂಡೆಯ ತೆರದಿ ಬಾಳಲುಚಿಂತೆ ಎಂದೂ ಮುತ್ತದು /೫/ ಅನುರಾಧಾ ಶಿವಪ್ರಕಾಶ್

ಅನುರಾಧಾ ಶಿವಪ್ರಕಾಶ್ ಅವರ ಕವಿತೆ, “ಆಂತರ್ಯ” Read Post »

ಕಾವ್ಯಯಾನ

ಪ್ರಮೋದ ಜೋಶಿ “ಅಡಗಿ ಕುಳಿತ ಮಾತು”

ಕಾವ್ಯಸಂಗಾತಿ ಪ್ರಮೋದ ಜೋಶಿ “ಅಡಗಿ ಕುಳಿತ ಮಾತು” ಮೌನದೊಳು ಮಾತು ಅಡಗಿಕುಳಿತಿದೆತರ್ಕಬದ್ಧಿತ ಧೀರ್ಘಾವಧಿ ಯೊಚನೆಗೋಲೆಕ್ಕಿತ ಲಾಭದ ಮೋಹಕೊಆಡದೆ ನಿಶಬ್ದವಾಗಿದೆ ಬಂಧ ಸಂಬಂಧಗಳ ಬಂಧನದಿನಿರ್ಗಮಿಸಲಾಗದೇ ಒಳಗೆ ಸಿಲುಕಿತನ್ನ ತನವನ್ನೂ ಬಿಡಲಾಗದೆದ್ವಂಧ್ವತ್ವದೊಳು  ಮುಳುಗಿರಲು ನಂಬಿಕೆ ಭಾವದ ಹೊದಿಕೆಯೊಳುಬೆನ್ನಿಗೆ ಇರಿದ ಚೂರಿಯಿಂದರಕುತ ಬಾರದ ಗಾಯಕೆವೆಚ್ಚಿಸಿ ತಂದ ಮದ್ದಿಗಾಗಿ ದ್ವಿಭಾವದ ಮನಸಿನ ಏಕೈಕ ತನುಇಡುವ ಹೆಜ್ಜೆಯ ತಳಮಳತನಕೆಹೆಜ್ಜೆಯೂ ಇಡಲಾಗದಂತ ಕ್ಷಣಕೆನಿಂತಲ್ಲೆ ನಿಂತ ಸ್ಥಿತಿಗಾಗಿ ಆಡುವ ಮಾತಿಗೆ ಕೇಳದ ಕಿವಿಆಸೆ ಆಮೀಷಕೆ ಒಳಗಾಗಿನೈಜ ಗುರುವ ಹಿಂದಿಕ್ಕಿಹಣವಂದನ್ನೆ ಗುರುವಾಗಿಸಿದಾಗ ಬದುಕಿನೊಳ ಆಗು ಹೊಗುಗಳಿಗೂಬಲಿಪಶುಮಾಡಿ ತೆಗಳುತಒಂಟಿ ಮಾಡಿ ಇಟ್ಟ ಕ್ಷಣಕೆಉತ್ತರವಿಲ್ಲದೇ ಶರಣಾಗತನಾದಾಗ ನನ್ನ ನಾನೆ ಕಂಡ ನನಗೆಅರಿಯದೇ ದೂಷಿಸಿ ಕೀಳಾಗಿ ನಿಂತಾಗನಿದಿರೆ ದಾರಿಯೂ ದೂರಾಗಿ ಕಂಡಾಗಭ್ರಮನಿರಶನ ಮರೀಚಿಕೆ ಕ್ಷಣಕೆ ಮೌನದೊಳು ಮಾತು ಅಡಗಿ ಕುಳಿತುಹೊರ ಬಾರದೇ ಸತ್ತದ್ದಕ್ಕೆಹೊತ್ತ ಮನ ರೋಸಿಹೋಗಿಇದ್ದ ತನವ ಕುಗ್ಗಿಸಿದೆ —————- ಪ್ರಮೋದ ಜೋಶಿ

ಪ್ರಮೋದ ಜೋಶಿ “ಅಡಗಿ ಕುಳಿತ ಮಾತು” Read Post »

ಕಾವ್ಯಯಾನ

“ಚಳಿಗಾಲದಲ್ಲಿ ಭುವಿ – ರವಿ” ಪರವಿನಬಾನು ಯಲಿಗಾರ

ಕಾವ್ಯ ಸಂಗಾತಿ ಪರವಿನಬಾನು ಯಲಿಗಾರ ಚಳಿಗಾಲದಲ್ಲಿ ಭುವಿ – ರವಿ ಮಂಜಿನ ಮುಸುಕು ಹೊದ್ದು ಕುಳಿತ ಧರಿತ್ರಿ ,ಷೋಡಶ ಶೃಂಗಾರದ  ಮಧುವಣಗಿತ್ತಿ ,ಉದಯ ರವಿಯ ಸ್ವರ್ಣ ರಶ್ಮಿಯು ತಾಗಿದಾಗ ,ನಸು ನಾಚಿ ಕೆಂಪಾಗುವಳುಆ ನವಿರಾದ ಸ್ಪರ್ಶಕೆ …… ಮದ್ಯಾಹ್ನದ ವೇಳೆಗೆ ಸುಡುವ ಸೂರ್ಯನುಧರಣಿಯನು ದಹಿಸುವನು.ತಾಳ್ಮೆಯಿಂದಲೇ ಸಹಿಸುವಳು.ಅವಳ ಮೈ ಮೇಲಿನ ಹಸಿರೆಲ್ಲವೂ ಮೆಲ್ಲನೆಒಣಗಿ ಮಾಯವಾಗುವುದು…. ಸಂಜೆ ಬೀಸುವ ಶೀತಲ ಮಂದ ಮಾರುತ ,   ಇಡೀ ದಿನ ಕಾದು ಬೆಂದ ಪ್ರಕೃತಿಯಲಿತುಸು ತಂಪಿನ ಸಿಂಚನದ ಅನುಭವ.ಮೋಡದ ಆ ಅಂಚಿನಲ್ಲಿ ಕೈ ಬೀಸುತ್ತಹೋರಟ ಆದಿತ್ಯ. ಅದೇನು ಮುನಿಸೊ ಅವನಿಗೆ ,ಆ ಭೂ ರಮಣೀಯ ಮೇಲೆ ,ದಿನವೂ ಮರೆಯಾಗುವನು ಇರುಳಿಗೆ .ಬೆಳಗಿನ ಒಲವು ರಾತ್ರಿಗಿಲ್ಲ ,ಬಹುಶಃ ಇರುವಳೇನೊ ,ಒಬ್ಬ ಸವತಿ ಭುವಿಗೂ ….. ಇನಿಯನ ಬರುವಿಕೆಗಾಗಿಕಾಯುವ ಭೂರಮೆ ,ವಸಂತನ ಆಗಮನಕೆಹಾತೊರೆಯುವ ಪ್ರಕೃತಿ ,ಜಗದ  ಈ  ಚಕ್ರ ಉರುಳುವುದು ಹೀಗೆ ,ಒಮ್ಮೆ ನಗಿಸಿ , ಮತ್ತೊಮ್ಮೆ ಅಳಿಸಿ…… ———- ಪರವಿನ ಬಾನು ಯಲಿಗಾರ

“ಚಳಿಗಾಲದಲ್ಲಿ ಭುವಿ – ರವಿ” ಪರವಿನಬಾನು ಯಲಿಗಾರ Read Post »

ಕಾವ್ಯಯಾನ

ವ್ಯಾಸ ಜೋಶಿ ಅವರ ಚಳಿಗಾಲದ ತನಗಗಳು

ಕಾವ್ಯ ಸಂಗಾತಿ ವ್ಯಾಸ ಜೋಶಿ ಚಳಿಗಾಲದ ತನಗಗಳು  ಚಳಿಯೇ ಚಳಿಯಲ್ಲಿ ಕಂಪಿಸಿ ನಡುಗಿದೆ. ಥಂಡೀ ತಾಳಲಾರದೆ ಸೂರ್ಯನ ಕರೆದಿದೆ.  ಭೂಮಿಯೇ ನಡುಗಿದೆ ಈ ಪರಿಯ ಥಂಡಿಗೆ ಮನೆಗೇ ಹೊಚ್ಚಬೇಕುದೊಡ್ಡ ಕೌದಿ ಬೆಚ್ಚಗೆ.  ಉರಿಯುವ ರವಿಗೆಬೈಯುವರು ‘ಮೇ’ನಲ್ಲಿ,ಕರೆವರಾದರದಿಹೇಮಂತ ಋತುವಲ್ಲಿ.  ಇಷ್ಟು ವರ್ಷ ಬಂದ್ಹೊಯ್ತು ಎಷ್ಟೊಂದು ಚಳಿಗಾಲ, ಈ ಸಾರಿ ಬೆಚ್ಚಗಿದೆ ಎಂದನು ಮದುಮಗ. ನವದಂಪತಿಗಳುಗೆಲ್ಲಲು ಚಳಿಯನ್ನದೊಡ್ಡ ಕಂಬಳಿಗಿಂತಅಪ್ಪುಗೆ ವರದಾನ. ಎಷ್ಟೊಂದು ಚಳಿಯಲ್ಲೂಮಧುಚಂದ್ರದಿ ಜೋಡಿಗೆಲ್ಲುವರು ಚಳಿಯಸ್ಕೂಬಾ ಡೖವಿಂಗು ಮಾಡಿ.   ಓ ಸೂರ್ಯ ಬಂದುಬಿಡು ಗೆಳೆಯನಂತೆ ಹತ್ರ, ಅದಕ್ಕೆ ನಿನಗೊಂದು ಅನ್ವರ್ಥನಾಮ ‘ಮಿತ್ರ’. ವ್ಯಾಸ ಜೋಶಿ

ವ್ಯಾಸ ಜೋಶಿ ಅವರ ಚಳಿಗಾಲದ ತನಗಗಳು Read Post »

ಕಾವ್ಯಯಾನ

ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು

ಕಾವ್ಯ ಸಂಗಾತಿ ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು ರಗ್ಗು ಮಧುರ ಪ್ರಿಯನಿಗೆ ಚಳಿಯ ಚಿಂತೆ ಇಲ್ಲಬಳಿ ಇರುವಾಗ ಮೊ(ನ)ಲ್ಲೆಯ ಮೊಗ್ಗು !‘ಮಧು’ ಪ್ರಿಯನಿಗೂ ಚಳಿಯ ಹಂಗಿಲ್ಲಒಳ ಹೋದೊಡೆ ಒಂದು ಪೆಗ್ಗುಹೊತ್ತಂತೆ ಎರಡೆರಡು ರಗ್ಗು !!               ***ಈ ‘ಚಳಿ’ಗೆ ಚಳಿಯಾಗುವುದಿಲ್ಲವೆ !?ಊರೆಲ್ಲ ಸುತ್ತಿ ಎಲ್ಲರಿಗೂಚಳಿಯಲ್ಲಿ ನಡುಗಿಸುತ್ತದೆ,ಮನೆಯ ಮೂಲೆ ಸೇರಿಬೆಚ್ಚನೆ ಕೂರಬಾರದೆ !?            ***ಚಳಿಗೆ ಬೆಚ್ಚನೆ ಕಾಫಿ ಹೀರಲು ಕುಳಿತ್ತಿದ್ದೆಗಡ ಗಡ ನಡುಗುತ್ತ ಬಳಿ ಬಂದ ಚಳಿತನಗೊಂದು ಲೋಟ ಕಾಫಿಗೆ ಅಂಗಲಾಚಿತು!ಕೈಯಲ್ಲದ್ದ ಕಾಫಿ ಲೋಟ ಚಾಚಿದೆಮನದಲ್ಲಿ ಚಳಿಯ ಚಳಿ ಹೋಗಲಾಡಿಸಿದ ಬೆಚ್ಚನೆಯ ಅನುಭವ !!                 ***ನೀರಿಗೂ ಚಳಿ ಆಗಬಾರದೆಂದುಬಿಸಿ ಮಾಡಿಮೆಲ್ಲನೆ ಕೈ ಹಿಡಿದುಕೊಂಡು ಕರೆದ್ಹೋಗುತ್ತೇನೆ ಸ್ನಾನಕ್ಕೆ !!             ***ಅತಿ ಯಾಯಿತು ಈ ಚಳಿಯ ಗಲಾಟೆಸೂರ್ಯ ಮೆರೆಯಾಗುವುದೇ ತಡಬಂದು ಬಿಡುತ್ತಾನೆ ನಡುಗಿಸಲು ಗಡ ಗಡ ————————— ರಾಜು ಪವಾರ್ ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು

ರಾಜುಪವಾರ್‌ ಅವರ ಚಳಿಗಾಲದ ಸಾಲುಗಳು Read Post »

You cannot copy content of this page

Scroll to Top