ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಹಮೀದ್ ಹಸನ್ ಮಾಡೂರು ಕವಿತೆ,”ತಾಯಿಮನೆ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ತಾಯಿಮನೆ” ನಾನು ಹುಟ್ಟಿ ಬೆಳೆದ‌ ನನ್ನ ಆ ಭವ್ಯ ಮನೆಯು ನನ್ನ ತಂದೆಯ ಬೆವರಾಗಿತ್ತು ತಾಯಿಯ ಮಮತೆಯಾಗಿತ್ತು, ನಮ್ಮ ಬದುಕಿಗೊಂದು ಬೆಚ್ಚನೆಯ ಸೂರಾಗಿತ್ತು, ಆದರೆ ಇಂದು ಮರ ಬಿದ್ದಾಗ ಹಕ್ಕಿ ಹಾರಿತು ಗೂಡು ಕಳಚಿ ರಸ್ತೆ ಪಾಲಾಯಿತ್ತು, ಹಕ್ಕಿಗಳು ತಮ್ಮ ತಮ್ಮ ಪಾಡಿಗೆ ಹಾರಿ ಹೋದಂತೆ ಆ ಮನೆಯ ಸ್ಥಿತಿಲತೆಯ ಕಂಡು ನೋವಿಂದ ಬರೆದ ಕವನವಿದು. *ತಾಯಿ ಮನೆ* ಬೆವರ ಸುರಿಸಿ ದುಡಿದುತಂದೆ ಕಟ್ಟಿಸಿದ, ನಮ್ಮ ಮನೆಆಶ್ರಯ ನೀಡಿದ ಆ “ತಾಯಿ ಮನೆ”ಹಲವು ಕನಸುಗಳ ಅವರು ಕಂಡ ಮನೆ,! ನಮ್ಮ ತಾಯಿ ಮನೆನಾವು ಹುಟ್ಟಿ ಬೆಳೆದ ಮನೆಬಾಲ್ಯದಾಟದಲಿ ನಲಿದ ಮನೆತಾಯಿ ಮಮತೆಯ ಕಾರುಣ್ಯ ಮನೆ,! ಮತ್ತೇ ಬೆಳಗೊ ಕಾತರತಂದೆಯ ರಕ್ತದ ಆ ಬೆವರುನಿತ್ಯ ಸುವಾಸಿಸುವ ನಮ್ಮ ತವರುಮರೆಯಲಾರೆವು ನಾವೆಂದು ಕುವರರು,! ಕತ್ತಲಲಿ ಕೊಠಡಿಗಳುಗಾಜು ಹೊಡೆದ ಕಿಟಕಿಗಳುಬೀಡು ಬಿಟ್ಟ ಜೇಡ ಜಾಲಗಳುಕಾಡುತ್ತಿದೆ ಬಾಲ್ಯದ ಆ ನೆನಪುಗಳು,! ಅಂದು ರಾಜ ಮನೆತನಸಂಭ್ರಮ ಮೆರೆದಾಡಿತ್ತು ಕಣ್ಮನವೈವಾಹಿಕ ವೈಭವಗಳ ಜೊತೆ ಜೀವನಕತ್ತಲ ದಾಟಿ ಪಯನ, ವೈಭವದತ್ತ ಬೆಳಕಿನ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಕವಿತೆ,”ತಾಯಿಮನೆ” Read Post »

ಕಾವ್ಯಯಾನ

ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು

ಕಾವ್ಯ ಸಂಗಾತಿ ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು ಅವಳು  ಶಬ್ಧ  ಅವನು ಕಾವ್ಯ      ಅವನು ರಾಗ ಅವಳು ತಾಳಅವನು ಭಾವ ಅವಳು ಜೀವ.ಅರಳಿವೆ ಶಬ್ಧ ಕಾವ್ಯದಲಿಹೊಮ್ಮಿವೆ ರಾಗಸೂಸುತ ಭಾವ.ತುಂಬಿದಳವಳದಕೆ ಜೀವಧಾರೆಯೆರೆಯುತ  ಒಲವಇಮ್ಮಡಿಸುತ ಗೆಲುವ.ಜಗವೇಈ ಪ್ರೀತಿಯ ನೀನೆಂದರಿವೆನಿನಗಿಲ್ಲ ಇದರ ಪರಿವೆ         ಭಾವನೆಗಳ ಬೆಸುಗೆಗೆಪ್ರತಿದಿನಭೇಟಿಯಾಗ ಬೇಕೆಂದಿಲ್ಲಮಾತಾಡಬೇಕೆಂದಿಲ್ಲಅವ್ಯಕ್ತ ಭಾವನೆಗೆ ಸರಿಸಾಟಿ ಇಲ್ಲಹಿತಬಯಸುವಪ್ರೀತಿ ಹರಿಸುವ  ಉನ್ನತಿ ಹಾರೈಸುವ ಭಾವಎಲ್ಲಿದ್ದರೂ ಹೇಗಿದ್ದರೂ  ನೆಮ್ಮದಿಯಿಂದಿರುಮಾತನಾಡಿದರೂ ಮಾತನಾಡದಿದ್ದರೂಹಾರೈಕೆಯೊಂದೇಎಂದೆಂದಿಗೂ ನೀ ಸಂತಸದಿಂದಿರುಮೌನದಿ ಎಲ್ಲವ  ನುಡಿಯುತಿರುಸೂಸುತಿರು ಅಗೋಚರ ಭಾವನೆಗಳಸ್ಪರ್ಶಿಸುತಿರು ಈ ಮನದಾಳದ ಭಾವಗಳ. ಪ್ರೊ ರಾಜೇಶ್ವರಿ ಶೀಲವಂತ ಪುಣೆ

ಪ್ರೊ ರಾಜೇಶ್ವರಿ ಶೀಲವಂತ ಎರಡು ಕವಿತೆಗಳು Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ಇನ್ನೂ ಕನಸಿದೆ”

ಕಾವ್ಯಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ “ಇನ್ನೂ ಕನಸಿದೆ” ಇನ್ನೂ ಕನಸಿದೆಬಣ್ಣ ಬಣ್ಣದ ಚಿತ್ರಸುಳಿವ ಗಾಳಿಸುರಿವ ಮಳೆಹಕ್ಕಿ ಪಕ್ಷಿಗಳ ಇಂಚರನೀಲಿ ಆಗಸದಲಿ ಹಾರುವ ಬಿಳಿ ಪಾರಿವಾಳಅದೆಷ್ಟೋ ಭಾವಗಳುಕವನವಾಗುವ ಸಮಯಬೆಸಗೊಳ್ಳುತ್ತಿವೆಪದ ಲಯಶಬ್ದಗಳ ಸಂಭ್ರಮಸೂರ್ಯನೇನೀನು ಇಷ್ಟು ಬೇಗಏಕೆ ಉದಯಿಸಿ ಬಿಟ್ಟೆಇನ್ನೂ ಕನಸಿದೆಮಧುರ  ಕ್ಷಣಗಳನ್ನುಕನಸಿನಲ್ಲಾದರೂ ಕಂಡುಕೊಂಚ ನೆಮ್ಮದಿಯಿಂದಇರುತ್ತಿದ್ದೆ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ,”ಇನ್ನೂ ಕನಸಿದೆ” Read Post »

ಕಾವ್ಯಯಾನ

ಡಾ ಗೀತಾ ದಾನಶೆಟ್ಟಿ ಅವರ ಕವಿತೆ “ಭಾವೈಕ್ಯದ ಗುಟ್ಟು”

ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ “ಭಾವೈಕ್ಯದ ಗುಟ್ಟು” ಕಲ್ಲು ಮಣ್ಣಿಗೆ ಕಂತೆ ಕೊಟ್ಟುಅದಕೆ ನೂರು ನಾಮವಿಟ್ಟುಜಾತಿಯೆಂಬ ಕಳಸವಿಟ್ಟುಮನುಜ ಪಥದ ದಾರಿ ಬಿಟ್ಟುಮೌಲ್ಯ ತತ್ವಗಳನು ಸುಟ್ಟುಮೃದು ಭಾವಗಳಿಗೆ ಪೆಟ್ಟುದೂರ ತಳ್ಳು ಕ್ರೋಧ ಸಿಟ್ಟುಬದುಕ ಬೇಡ ದ್ವೇಷ ನೆಟ್ಟುಅಪ್ಪಿಕೋ ಎಲ್ಲರನ್ನೂ ಇಷ್ಟ ಪಟ್ಟುಬೆಳೆಸು ಭಾವೈಕ್ಯದ ಗುಟ್ಟುಸ್ನೇಹ ಪ್ರೀತಿಗೆ ಕೈ ಕಟ್ಟುಸುಖದ ಯಶಕೆ ಬೆನ್ನ ತಟ್ಟು ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ

ಡಾ ಗೀತಾ ದಾನಶೆಟ್ಟಿ ಅವರ ಕವಿತೆ “ಭಾವೈಕ್ಯದ ಗುಟ್ಟು” Read Post »

ಕಾವ್ಯಯಾನ

“ಭಾವನೆಯ ಬೇಲಿ” ಲತಾ ಎ ಆರ್ ಬಾಳೆಹೊನ್ನೂರು

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಭಾವನೆಯ ಬೇಲಿ” ಹೃದಯದೊಳಗೆ ನೋವ ಹಿಡಿದಿಡಲಾರೆಮನದ ಅಳಲು ಸಹಿಸಲಾರೆಹಿಂಡುವ ವೇದನೆಯ ಭರಿಸಲಾರೆಮೂಖ ವ್ಯಥೆ ಯಲಿ ಬದುಕಿರಲಾರೆ ಎಷ್ಟೆoದು  ನೋವಿನಲಿ ಬೇಯುತಿರುವೆತಿರುವುಗಳ ಜೀವನವ ನೋಡುತ್ತಿರುವೆಯಾರ ಬರುವಿಕೆಗಾಗಿ ಕಾಯುತಿರುವೆಕ್ಷಣ ಕ್ಷಣ ನೋವ ತಿಂದು ಸಾಯುತಿರುವೆ ಭಾವನೆಯ ಬೇಲಿಯಲಿ ಬಂಧಿಯಾದೆಚುಚ್ಚು ಮಾತಿನಲಿ ಗಟ್ಟಿಯಾದೆಬದುಕಲು ಬಿಡದ ಸಮಾಜವಿದೆಬದುಕಿದ್ದು ಜೀವನದಲ್ಲಿ ಸಮಾಧಿಯಾದೆ ಕಾಣದ ಕೈಗಳು ಸೂತ್ರ ಹಿಡಿದಂತೆಆಡಿಸಿದಂತೆ ಆಡಿದ ಗಾಳಿಪಟದಂತೆಎಳೆಯಲು ದಾರ ತುಂಡರಿಸಿದಂತೆಬದುಕಿನ ಯಾತ್ರೆ ಲೋಕದಿ ಮುಗಿದಂತೆ ಲತಾ ಎ ಆರ್ ಬಾಳೆಹೊನ್ನೂರು

“ಭಾವನೆಯ ಬೇಲಿ” ಲತಾ ಎ ಆರ್ ಬಾಳೆಹೊನ್ನೂರು Read Post »

ಕಾವ್ಯಯಾನ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಸಂಕಥನ”

ಕಾವ್ಯ ಸಂಗಾತಿ ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಸಂಕಥನ” ನಿನ್ನೊಡನೆನನಗಿನ್ನೇನು ಮಾತು?ಮನದ ಗುಹೆಯಲಿ ಕತ್ತಲೆಎದೆಯೊಳಗೆತಾಪದ ದಾಖಲೆ ನಿನ್ನೊಡನೆನನಗೇತಕೆ ದಿಗಿಲುತವಕ ತಲ್ಲಣಬದುಕು ಭ್ರಮೆಯಲಿ ಬೆಂದಕೊಳೆತ ಋಣ ನಿನ್ನೊಡನೆನನಗೇತರ ಬಯಕೆನೆನಪಿಸಿದರೆ ಬೆವರುಕಣ್ಣ ಹರವುತುಂಬಿದೆ ನೆತ್ತರು ನಿನ್ನೊಡನೆಮತ್ತೇನಿದೆ ನಮ್ಮಲ್ಲಿನ ಕಸಿವಿಸಿ?ಕವಿತೆಗಳ ಗಾಸಿಬರೆದಿಟ್ಟರೂ……ಅರ್ಥಗಳು ವ್ಯರ್ಥ ಗಾಯ ಮಾದಿದೆಮತ್ತೇಕೆಕೆರೆದುಕೊಳ್ವದು? ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ “ಸಂಕಥನ” Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು “ಸುಕನ್ಯೆ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಸುಕನ್ಯೆ” ಅಂದ್ಕೊಂಡುನಾನವಳ ಕಂಡ ಆ ದಿನಪ್ರೀತಿಸ ತೊಡಗಿದೆ ಮನಸಾರೆ,! ಅವಳ ಸೌಂದರ್ಯಕ್ಕೆಮರುಳಾಗಿ ಕಿರು ನಗೆ ಸೂಸಿ ಬಿಟ್ಟೆಕಣ್ಣೋಟಕೆ ಅವಳ, ಅಲ್ಲಿಂದ ಕಾಲ್ಕಿತ್ತೇ,! ಭಯಪಟ್ಟು ಬೆವರಿಳಿಸಿದೆಕೋಪಿಸುವಳೋ ಎಂಬ ಭಯದಿಹೆಜ್ಜೆಯ ವೇಗ ಹೆಚ್ಚಿಸಿ,ಮುನ್ನಡೆದು ಬಿಟ್ಟೆ,! ಮತ್ತೇ ಮತ್ತೇ….ಕಣ್ಣಾರಳಿಸಿದಾರಿ ಕೇರಿಯೊಳು ಸುತ್ತಿ ಅಲೆದುಹೃದಯಕ್ಕೆ ಸಿಕ್ಕಿಸಲಾವಳ ಆಸೆಯ ಪಟ್ಟೆ,! ಸುಕನ್ಯೆ ಅವಳೆಂದು….ಪ್ರೀತಿಸಿ ಸರಸ ಅವಳ ಬಯಸಿದೆಸ್ತ್ರೀ ಅವಳಲ್ಲವೆಂದು ಅರಿತಾಗ ಕೊರಗಿದೆ.! ಮತ್ತೇ ಮತ್ತೇ ಅವಳ…ಸೌಂದರ್ಯಕ್ಕೆ ಮರುಳಾಗಿ ನಾಹುಚ್ಚನಂತೆ ತನ್ನ ತಾನು ಮರೆತು ಬಿಟ್ಟೇ. ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು “ಸುಕನ್ಯೆ” Read Post »

ಕಾವ್ಯಯಾನ

ರತ್ನರಾಯಮಲ್ಲ ಅವರ‌ ಗಜಲ್

ಕಾವ್ಯ ಸಂಗಾತಿ ರತ್ನರಾಯಮಲ್ಲ ಗಜಲ್ ಸರಳವೆಂತಾರೆ ಬದುಕು ಸರಳವಲ್ಲ ನೋಡಬೇಕು ಸರಳವಾಗಿಯೋಚನೆಗಳಿಗೆ ಕೊನೆಯಿಲ್ಲ ವಿರಾಮ ನೀಡಬೇಕು ಸರಳವಾಗಿ ಸುಗಮವಾಗದು ಬುದ್ಧಿವಂತಿಕೆ ಹೃದಯವಂತಿಕೆಗಳ ಸಂಗಮವಾಸ್ತವದಲಿ ಕನಸುಗಳಿಗೆ ರಾಗ ಕಟ್ಟಿ ಹಾಡಬೇಕು ಸರಳವಾಗಿ ಅವರವರ ವಿಷಯದಲಿ ಸಾಕಷ್ಟಿದೆ ನೋಡಲು ನಮ್ಮ ವಿಷಯದಲಿಇತರರಿಗಿಂತ ಮೊದಲು ನಮ್ಮನ್ನು ನಾವು ಕಾಡಬೇಕು ಸರಳವಾಗಿ ಜೀವನ ಸಾಕೆನಿಸುವುದಕಿಂತ ಮುಂಚೆ ಬೇಕಾದಂತೆ ಬಾಳಬೇಕುಆಸೆಗಳು ಸಾಯಿಸುವ ಮುಂಚೆ ಗೋರಿ ತೋಡಬೇಕು ಸರಳವಾಗಿ ಗೊಂದಲಗಳಿರುವುದು ದುನಿಯಾದಲಿ ಅಲ್ಲ ನಮ್ಮ ಚಿಂತನೆಗಳಲಿಮಲ್ಲಿಗೆಯ ಸುಮದಂತೆ ವಿಚಾರಗಳನು ಹೂಡಬೇಕು ಸರಳವಾಗಿ ರತ್ನರಾಯಮಲ್ಲ

ರತ್ನರಾಯಮಲ್ಲ ಅವರ‌ ಗಜಲ್ Read Post »

ಕಾವ್ಯಯಾನ

ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ”

ಕಾವ್ಯ ಸಂಗಾತಿ ಡಾ ವಿಜಯಲಕ್ಷ್ಮಿ ಪುಟ್ಟಿ “ಬಚ್ಚಿಟ್ಟುಕೋ” ಎದೆಯೊಳಗೆ ನನ್ನ ಬಚ್ಚಿಟ್ಟುಕೊ,ಉಸಿರ ಪಿಸುಮಾತ ಹಾಗೆ,ಕಣ್ಣಿನಲಿ ನನ್ನ ಕಾಯ್ದಿರಿಸಿಕೊ, ರೆಪ್ಪೆಗಳ ಕಾವಲ ಹಾಗೆ ​ನನ್ನೆಲ್ಲ ನೋವುಗಳ ಮರೆಸಿಬಿಡು, ನಿನ್ನೊಂದು ಕಿರುನಗೆಯಲಿ,ಮತ್ತೆ ಹುಟ್ಟಿ ಬರುವೆ ನಾನು, ಮುಂಜಾವಿನ ಹೊಸ ಕಿರಣದ ಹಾಗೆ ​ಹೃದಯದ ಈ ಬಡಿತದಲಿ ಕೇಳಿಸಲಿ ಬರೀ ನಿನ್ನದೇ ಹೆಸರುಜೊತೆಯಾಗಿ ನಡೆದು ಬರುವೆ ನಾನು, ನಿನ್ನ ನೆರಳಿನ ಹಾಗೆ ​ಜಗದ ಈ ಜಂಜಾಟದಲಿ ನಾ ಕಳೆದು ಹೋದರೂ ಚಿಂತೆಯಿಲ್ಲಮರಳಿ ಸೇರುವೆ ನಿನ್ನ ಮಡಿಲನು, ಸಂಜೆಯ ಹಕ್ಕಿಯ ಹಾಗೆ ​ ಬರೆಯುವೆ ನಿನ್ನ  ಪ್ರೀತಿಯ ಹೆಸರ  ಪುಟ ಪುಟದ ಸಾಲಿನಲಿಅಳಿಯದಂತೆ ಉಳಿದುಬಿಡು ನೀನು, ಕವಿತೆಯ ಮೌನದ ಹಾಗೆ … ಡಾ ವಿಜಯಲಕ್ಷ್ಮಿ ಪುಟ್ಟಿ

ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ” Read Post »

ಕಾವ್ಯಯಾನ

ನಾಗರಾಜ ಬಿ.ನಾಯ್ಕ ಕವಿತೆ “ಹೂಬೆ ಹೂಬೆ”

ಕಾವ್ಯ ಸಂಗಾತಿ ನಾಗರಾಜ ಬಿ.ನಾಯ್ಕ “ಹೂಬೆ ಹೂಬೆ” ಸೂರು ಕಾಣುವ ಬೆಳಗುಎದ್ದು ಕುಳಿತುಮುಗಿಲು ಮುಟ್ಟುವ ಹಾಡುಮನಸು ಮುಟ್ಟಿಹಂಚಿನ ಮನೆ ಮೇಲೆಚೆಂದ ಬಿಳಿ ಹೊಗೆಯಚಿತ್ತಾರ ಬಿಡಿಸುತ್ತಿತ್ತುಊರ ತುದಿ ದಂಡೆಯಲ್ಲಿದೋಣಿ ಸಾಗಿಮಡಿಕೆಯಲ್ಲಿದ್ದ ಸಾರಿನ ವಾಸನೆ ಊರು ಸುತ್ತುತ್ತಿತ್ತು ಹಳ್ಳಿಯಲ್ಲಿ ಎಲ್ಲವೂಹೂಬೆ ಹೂಬೆಯಾಗಿ ಕಂಡಂತೆಅರಳಿದ ಹೂ ಮಲ್ಲಿಗೆನೆಟ್ಟ ಕೈಗಳಿಗೆ ನಗು ಚೆಲ್ಲಿನಿಂತಿರಲು ಗಾಳಿತಂಗಾಳಿಯಾಗಿ ತಿರುಗಿಮಿಡಿ ಬಿಟ್ಟ ಮಾವುಹೂ ಸೊಬಗು ಚೆಲ್ಲಿಮರದ ಹಕ್ಕಿಗೆ ಹಾಡುಸುಮ್ಮನೇ ಹೇಳಿಸಿತ್ತುಹೊರೆ ಹೊತ್ತ ಬೆವರುಮೊಗ ತುಂಬಿದ ಕನಸುಹಸಿ ಭತ್ತದ ಸಸಿತೆನೆ ಹೊತ್ತ ಮೌನ ಸಾಲುಎಲ್ಲವೂ ಹೂಬೆ ಹೂಬೆಕಂಡಂತೆ ಈಗಲೂ ಹಳ್ಳಿದಣಪೆಯ ಆಚೆಗಿದ್ದದಾಸಾಳ ಗಿಡಕ್ಕೆಹತ್ತಾರು ಹೂಗಳುಬಂದ ಹಕ್ಕಿಗೆಹೂ ನೆರಳ ಕೊಡುವುದಂತೆಅಟ್ಟಲದ ಮರ ಹೂಬಿಟ್ಟಿದೆಯಂತೆಜೇನಿಗೆ ತುಂಬಾಕೆಲಸವಿದೆಯಂತೆಹೂಬೆ ಹೂಬೆಕಾಣುವುದು ಬಳ್ಳಿಯಂತೆಒಂದೆರಡಲ್ಲ ಹಳ್ಳಿಯ ಬಳ್ಳಿಎಲ್ಲೆಡೆ ಹಬ್ಬಿದಂತೆಊರಿಗೆ ಊರೇಗೆಳೆಯರಾದಂತೆ……. ನಾಗರಾಜ ಬಿ.ನಾಯ್ಕ.

ನಾಗರಾಜ ಬಿ.ನಾಯ್ಕ ಕವಿತೆ “ಹೂಬೆ ಹೂಬೆ” Read Post »

You cannot copy content of this page

Scroll to Top