ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಒಮ್ಮೆಬರುವೆಯಾ?”
ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಒಮ್ಮೆಬರುವೆಯಾ?” ನನ್ನ ಪ್ರಾಣದ ಇನಿಯಎಲ್ಲಿರುವೆ ಬರುವೆಯಾಬಿಳಿ ಗೋಡೆಯ ನಡುವೆ ನಾನುನೆರಳಾಗಿ ಕರಗುತ್ತಿರುವೆ ಒಮ್ಮೆ ನನ್ನ ಕಣ್ಣೊಳಗೆಚಂದ್ರ ಬೆಳಕು ಹುಡುಕಿದವನು ನೀನುಇಂದು ಒಣಗಿದ ಹೂವಿನಂತೆನನ್ನನ್ನು ದಾರಿಯಂಚೆ ಬಿಟ್ಟೆ ಕೂದಲು ಉದುರಿದ ರಾತ್ರಿಕನ್ನಡಿಯೊಳಗೆ ನಿಂತಿದ್ದು ನಾನು ಅಲ್ಲಬೆಂಕಿಗೆ ಬಿದ್ದ ಕನಸೊಂದುನಿಧಾನವಾಗಿ ಬೂದಿಯಾಗುತ್ತಿತ್ತು ಔಷಧದ ವಾಸನೆಯ ನಡುವೆನನ್ನ ಉಸಿರು ಮುಳ್ಳಿನ ಹಾಸಿಗೆಸಾವಿಗಿಂತ ಹೆಚ್ಚು ಕಾಡಿದ್ದುನೀ ಮೌನವಾಗಿ ದೂರಾದ ಹೆಜ್ಜೆ ನನ್ನ ಎದೆಯೊಳಗೆ ಈಗರಕ್ತವಲ್ಲ ವಿರಹ ಹರಿಯುತ್ತಿದೆಕಣ್ಣೀರಲ್ಲ ಇದುಒಡೆದ ಹೃದಯ ಕರಗಿದ ಶಬ್ದ ಒಮ್ಮೆ ಅಪ್ಸರೆ ಎಂದ ತುಟಿಗಳುಇಂದು ನನ್ನ ಹೆಸರನ್ನೇ ಮರೆತಿವೆನಾನು ಒಣ ಮರದ ನೆರಳುನೀ ಬೇಸತ್ತ ಹಕ್ಕಿಯ ಹಾರಾಟ ಕಿಟಕಿಯಾಚೆ ಚಂದ್ರ ಸುಡುತ್ತಾನೆಒಳಗೇ ನೆನಪುಗಳು ಹೊತ್ತಿ ಉರಿಯುತ್ತವೆನೀ ಬಾರದ ಪ್ರತಿರಾತ್ರಿನನ್ನ ಜೀವ ಸ್ವಲ್ಪ ಸ್ವಲ್ಪ ಸಾಯುತ್ತದೆ ನನ್ನ ಪ್ರಾಣದ ಇನಿಯಒಮ್ಮೆ ಬರುವೆಯಾಕೊನೆಯ ಉಸಿರ ತುದಿಯಲ್ಲಿನಿನ್ನ ಹೆಸರೇ ಇನ್ನೂ ತೂಗುತ್ತಿದೆ ಡಾ. ಹೆಚ್. ನಟರಾಜ್ ಆರ್ಯ.
ಡಾ. ಹೆಚ್. ನಟರಾಜ್ ಆರ್ಯ ಕವಿತೆ “ಒಮ್ಮೆಬರುವೆಯಾ?” Read Post »









