ಧಾರಾವಾಹಿ ಆವರ್ತನ ಅದ್ಯಾಯ-38 ಮಸಣದಗುಡ್ಡೆಯ ಎರಡನೆಯ ಬನ ಜೀರ್ಣೋದ್ಧಾರದ ನಂತರ ಗುರೂಜಿಯವರ ನಕ್ಷತ್ರವೇ ಬದಲಾಗಿಬಿಟ್ಟಿತು. ಮುಂದಿನ ಒಂದೆರಡು ವರ್ಷಗಳಲ್ಲಿ ಅವರ ಸಂಪಾದನೆ ದುಪ್ಪಟ್ಟಾಗಿ ಕಷ್ಟಕಾರ್ಪಣ್ಯಗಳೆಲ್ಲ ಬಿರುಗಾಳಿಗೆ ಸಿಕ್ಕ ತರಗೆಲೆಗಳಂತೆ ಹಾರಿ ತೂರಿ ಹೋಗಿ ಜೀವನವು ಅಭಿವೃದ್ಧಿಯ ಪಥದಲ್ಲಿ ಸಾಗತೊಡಗಿತು. ಅವರೀಗ ತಮ್ಮ ಜ್ಯೋತಿಷ್ಯ ವಿಭಾಗವನ್ನೂ, ಧಾರ್ಮಿಕ ಕೈಂಕರ್ಯಗಳ ವ್ಯವಹಾರವನ್ನೂ ಅಪ್ಪನ ಹಳೆಯ ಕೋಣೆಯಿಂದ ಹೊಸದಾಗಿ ನಿರ್ಮಿಸಿದ ವಿಶಾಲ ಪಡಸಾಲೆಯ ಹವಾನಿಯಂತ್ರಿತ ಕೊಠಡಿಗೆ ವರ್ಗಾಯಿಸಿದ್ದರು. ಆ ಕಛೇರಿಗೂ ಮತ್ತು ವಠಾರದ ಕೆಲವು ಕಡೆಗಳಿಗೂ ಸಿಸಿ ಕ್ಯಾಮೆರಾಗಳನ್ನೂ ಅಳವಡಿಸಲಾಗಿತ್ತು. ಆ ಉಪಕರಣಗಳು ಅವರ ವ್ಯವಹಾರಕ್ಕೆ ಸರ್ಪಗಾವಲಾಗಿದ್ದವು. ಇಷ್ಟಾಗುತ್ತಲೇ ಅವರು ತಮ್ಮ ಮಕ್ಕಳ ಭವಿಷ್ಯವನ್ನೂ ರೂಪಿಸಲು ನಿರ್ಧರಿಸಿದರು. ಅಪ್ಪ ಅಮ್ಮನನ್ನೂ ಮತ್ತು ತಮ್ಮ ಕನ್ನಡ ಮಾಧ್ಯಮದ ಸಹಪಾಠಿಗಳನ್ನೂ ಹಾಗೂ ವಠಾರದ ಆತ್ಮೀಯರನ್ನೂ ಅಗಲಿ ದೂರದ ಪರಕೀಯ ಶಾಲೆಗೆ ಹೋಗಲು ಸುತಾರಾಂ ಇಷ್ಟವಿಲ್ಲದೆ ಸದಾ ಅಳುತ್ತ ಕೂರುತ್ತಿದ್ದ ಮಗಳು ದೀಕ್ಷಾ ಮತ್ತು ಮಗ ದ್ವಿತೇಶ್ನನ್ನು ಗದರಿಸಿ, ಓಲೈಸಿ ಮಡಿಕೇರಿಯ ಪ್ರತಿಷ್ಠಿತ ರೆಸಿಡೆನ್ಶಿಯಲ್ ಆಂಗ್ಲ ಮಾಧ್ಯಮ ಸ್ಕೂಲಿಗೆ ದೊಡ್ಡ ಮೊತ್ತದ ಡೊನೇಷನ್ ಕೊಟ್ಟು ಸೇರಿಸಿ ನೆಮ್ಮದಿಪಟ್ಟರು. ಗುರೂಜಿಯವರಲ್ಲಿದ್ದ ಅಪಾರ ಧಾರ್ಮಿಕ ಸ್ವಜ್ಞಾನದಿಂದಲೂ ವಿಶೇಷ ಬುದ್ಧಿಶಕ್ತಿಯಿಂದಲೂ ಅವರತ್ತ ಆಕರ್ಷಿತರಾಗಿ ಬರುತ್ತಿದ್ದ ಬಡವರ, ದುರ್ಬಲರ ಮತ್ತು ಶ್ರೀಮಂತವರ್ಗದವರ ನಾನಾ ವಿಧದ ಸಮಸ್ಯೆ, ತೊಂದರೆಗಳನ್ನು ಅವರು ಬಹಳ ಕರುಣೆ ಮತ್ತು ಕೌಶಲ್ಯದಿಂದ ಹೋಗಲಾಡಿಸುವ ಕ್ರಮವು ಬಹಳ ಬೇಗನೇ ಅವರನ್ನು, ‘ಜನಾನುರಾಗಿ ಜ್ಯೋತಿಷ್ಯರು!’ ಎಂಬ ಹೆಗ್ಗಳಿಕೆಗೂ ಪಾತ್ರರನ್ನಾಗಿಸಿತ್ತು. ಹಾಗಾಗಿ ಅವರ ಬೇಡಿಕೆಯನ್ನೂ ಹೆಚ್ಚಿತ್ತು. ಗುರೂಜಿಯವರ ವಿವಿಧ ಧಾರ್ಮಿಕ ಚಟುವಟಿಕೆಗಳನ್ನು ಗಮನಿಸುತ್ತ ಬಂದಿದ್ದ ರಾಜ್ಯದ ಪ್ರಸಿದ್ಧ, ‘ಅವಿಭಾಜ್ಯ’ ಎಂಬ ಖಾಸಗಿ ದೂರದರ್ಶನ ಮಾಧ್ಯಮವು ಪ್ರತೀ ಶುಕ್ರವಾರ ಅವರನ್ನು ತಮ್ಮ ವಾಹಿನಿಗೆ ಕರೆಯಿಸಿಕೊಂಡು, ‘ಮಹರ್ಷಿ ವಚನ!’ ಎಂಬ ವಿಶೇಷ ಕಾರ್ಯಕ್ರಮವನ್ನು ಪ್ರಸಾರಪಡಿಸುತ್ತ ಅವರಿಗೆ ಮತ್ತಷ್ಟು ಪ್ರಸಿದ್ಧಿಯನ್ನು ತಂದುಕೊಟ್ಟಿದೆ. ಗುರೂಜಿಯವರ ಈ ಎಲ್ಲಾ ಸೃಜನಶೀಲ ಕಾರ್ಯಚಟುವಟಿಕೆಗಳಿಂದಾಗಿ ಅಪಾರ ಸಿರಿವಂತಿಕೆಯೂ ಅವರನ್ನು ಅರಸಿ ಬಂದಿದೆ. ಆದ್ದರಿಂದ ಅವರೀಗ ದಿನದ ಇಪ್ಪತ್ತನಾಲ್ಕು ಗಂಟೆಯೂ ಬ್ಯುಸಿಯಾಗಿರುವುದು ಅನಿವಾರ್ಯವಾಗಿದೆ. ತಮ್ಮ ಕೆಲಸದ ಒತ್ತಡವನ್ನು ತುಸು ಕಡಿಮೆ ಮಾಡಿಕೊಳ್ಳಲು ಅವರು ರಾಘವ ಮತ್ತು ಅಣ್ಣಪ್ಪ ಎಂಬಿಬ್ಬರು ಸಹಾಯಕರನ್ನು ನೇಮಿಸಿಕೊಂಡಿದ್ದಾರೆ. ತಮ್ಮ ಹಿರಿಯರ ನೆನಪಿಗಾಗಿ ಮೊನ್ನೆ ಮೊನ್ನೆಯವರೆಗೆ ಕ್ಷೀಣವಾಗಿ ಉಸಿರಾಡಿಕೊಂಡಿದ್ದ ಹಳೆಯ ಮನೆಯನ್ನು ಒಡೆದುರುಳಿಸಿ, ದೇವಕಿಯ ಆಸೆಗೂ ಮತ್ತು ತಮ್ಮ ಘನತೆಗೂ ಸರಿಹೊಂದುವಂಥದ್ದೊಂದು ಮೂರು ಸಾವಿರ ಚದರಡಿಯ ಭವ್ಯ ಬಂಗಲೆಯನ್ನು ತೋಟದ ನಟ್ಟನಡುವೆ ಕಟ್ಟಿಸಿಕೊಂಡು ಪುಟ್ಟ ಸಂಸಾರದೊಂದಿಗೆ ಹೆಮ್ಮೆಯಿಂದ ಬದುಕುತ್ತ, ಬಿಡುವಿಲ್ಲದೆ ದುಡಿಯುತ್ತ ಇನ್ನಷ್ಟು ಯಶಸ್ಸು ಗಳಿಸುವತ್ತಲೇ ಮುಖ ಮಾಡಿದ್ದಾರೆ. ಅಂದು ಮುಂಜಾನೆ ಒಂಬತ್ತು ಗಂಟೆಯ ಹೊತ್ತು. ಸುಮಿತ್ರಮ್ಮ ರಾಧಾಳನ್ನು ಕರೆದುಕೊಂಡು ಗುರೂಜಿಯ ಮನೆಗೆ ಬಂದರು. ಆಗ ಗುರೂಜಿಯವರ ಕಛೇರಿಯಲ್ಲಿ ಹದಿನೈದಿಪ್ಪತ್ತು ಜನರ ಸಣ್ಣ ದಿಬ್ಬಣವೇ ನೆರೆದಂತಿತ್ತು. ಸ್ವಲ್ಪ ಮಂದಬುದ್ಧಿಯ ಅವರ ಸಹಾಯಕ ಅಣ್ಣಪ್ಪ ಬಂದವರನ್ನೆಲ್ಲ ಅಭಿಮಾನದಿಂದ ಕುಳ್ಳಿರಿಸಿ ವಿಚಾರಿಸುತ್ತ ಬಾಯಾರಿಕೆ, ಟೀ, ಕಾಫಿ ಕೊಡುವ ಸೇವೆಯಲ್ಲಿ ತೊಡಗಿ ನಗುನಗುತ್ತ ಓಡಾಡುತ್ತಿದ್ದ. ಚತುರ ಬುದ್ಧಿಯ ರಾಘವ ಯಾರ ಕಣ್ಣಿಗೂ ಬೀಳದೆ ಗುರೂಜಿಯವರು ವಹಿಸಿದ್ದ ಗುಪ್ತಕಾರ್ಯವನ್ನು ನಿಭಾಯಿಸುತ್ತಿದ್ದ. ಸುಮಿತ್ರಮ್ಮನೂ, ರಾಧಾಳೂ ಜನರ ಕೊನೆಯ ಸಾಲಿನಲ್ಲಿ ಕುಳಿತು ತಮ್ಮ ಸರದಿಗಾಗಿ ಕಾಯತೊಡಗಿದರು. ಅಷ್ಟರಲ್ಲಿ ಅಲ್ಲಿಗೆ ಹೇಮಚಂದ್ರ ಎಂಬ್ಬ ದುಬೈ ರಿಟರ್ರ್ನ್ ವ್ಯಕ್ತಿಯೊಬ್ಬ ಆಗಮಿಸಿದ. ಹೇಮಚಂದ್ರ ಇಪ್ಪತ್ತು ವರ್ಷಗಳ ಕಾಲ ದುಬೈಯ ಹೊಟೇಲೊಂದರಲ್ಲಿ ಹಗಲು ರಾತ್ರಿ ದುಡಿದು ಸಂಪಾದಿಸಿ ಎರಡು ವರ್ಷದ ಹಿಂದಷ್ಟೇ ಆ ದೇಶವನ್ನು ಬಿಟ್ಟು ಊರಿಗೆ ಬಂದಿದ್ದವನು, ಹೊಟ್ಟೆ ಬಟ್ಟೆ ಕಟ್ಟಿ ಉಳಿಸಿದ್ದ ಹಲವು ಲಕ್ಷ ರೂಪಾಯಿಗಳನ್ನು ಬಳಸಿ ಊರಿನಲ್ಲಿ ಹೊಟೇಲು ಉದ್ಯಮ ಆರಂಭಿಸಿ ಗೌರವದಿಂದ ಬಾಳಬೇಕೆಂದು ಮನಸ್ಸು ಮಾಡಿದ್ದ. ಹಾಗಾಗಿ ಅದಕ್ಕವನು ಸೂಕ್ತ ಜಾಗವೊಂದನ್ನೂ ಹುಡುಕುತ್ತಿದ್ದ. ಊರಿನಲ್ಲಿ ಅದಾಗಲೇ ಪ್ರಸಿದ್ಧವಾಗಿದ್ದ, ‘ಹೋಟೆಲ್ ಕೊಡೆಕ್ಕೆನಾ’ (ಉಪ್ಪು, ಹುಳಿ, ಖಾರದಂಥ ಮಸಾಲೆ ಪದಾರ್ಥಗಳು ಸಮಾ ಪ್ರಮಾಣದಲ್ಲಿ ಬೆರೆತ ಸ್ವಾದಿಷ್ಟ ಖಾದ್ಯಕ್ಕೆ ತುಳುವಿನಲ್ಲಿ: ‘ಕೊಡಕ್ಕೆನಾ!’ ಎಂದು ಉದ್ಗರಿಸುವ ವಾಡಿಕೆ ಇದೆ) ಎಂಬ ಮಾಂಸಹಾರಿ ಹೊಟೇಲಿನ ಪಕ್ಕದ ಕಟ್ಟಡವೊಂದು ದಲ್ಲಾಳಿ ಲಕ್ಷ್ಮಣನ ಮೂಲಕ ಖಾಲಿ ಇರುವುದು ಅವನಿಗೆ ತಿಳಿಯಿತು. ಹೊಟೇಲು ಕೊಡೆಕ್ಕೆನಾದಲ್ಲಿ ವಿವಿಧ ಬಗೆಯ ಕರಿದ ಮೀನು ಮತ್ತು ರುಚಿಕಟ್ಟಾದ ಮಾಂಸದ ಅಡುಗೆ ನಾಡಿನಾದ್ಯಂತ ಪ್ರಸಿದ್ಧವಾಗಿತ್ತು. ವರ್ಷದ ಮುನ್ನೂರರ್ವತ್ತೈದು ದಿನವೂ ತೆರೆದಿರುತ್ತಿದ್ದ ಆ ಹೊಟೇಲಿನಲ್ಲಿ ಜನಜಂಗುಳಿ ಹೇಗೆ ತುಂಬಿರುತ್ತದೆಯೆಂದರೆ, ಊಟ ಮಾಡುತ್ತಿದ್ದವರ ಹಿಂದೆ ಮುಂದೆ ತೂರಿ ನಿಂತುಕೊಂಡು ಕಾಯುತ್ತ ಸೀಟು ಖಾಲಿಯಾಗುತ್ತಲೇ ಮುಲಾಜಿಲ್ಲದೆ ನುಗ್ಗಿ ಕುಳಿತು ಉಂಡು ಹೋಗುವಂಥ ಜನರಿದ್ದರು. ಒಮ್ಮೆ ಆ ಹೊಟೇಲಿನ ಗಿರಾಕಿಗಳ ಧಾವಂತವನ್ನೂ ಅಲ್ಲಿನ ಊಟದ ರುಚಿಯನ್ನೂ ಸ್ವತಃ ಅನುಭವಿಸಿದ ಹೇಮಚಂದ್ರ ಅದರ ಪಕ್ಕದಲ್ಲಿಯೇ ತನ್ನ ವ್ಯಾಪಾರವನ್ನೂ ಆರಂಭಿಸಲು ಮನಸ್ಸು ಮಾಡಿದ. ದುಬೈ ನಮೂನೆಯ ಅಡುಗೆಯಿಂದ ಗಿರಾಕಿಗಳನ್ನು ಆಕರ್ಷಿಸಿ ಹಣ, ಹೆಸರು ಎರಡನ್ನೂ ಒಟ್ಟಿಗೆ ಗಳಿಸಲು ಇಚ್ಛಿಸಿದ. ಹಾಗಾಗಿ ದಲ್ಲಾಳಿ ಲಕ್ಷ್ಮಣ ತೋರಿಸಿದ ಕಟ್ಟಡದ ಅರ್ಧ ಭಾಗವನ್ನು ಬಾಡಿಗೆಗೆ ಪಡೆದುಕೊಂಡ. ಅಂತರ್ರಾಷ್ಟ್ರೀಯ ವಿನ್ಯಾಸದಿಂದ ಅದನ್ನು ಸುಸಜ್ಜಿತಗೊಳಿಸಲು ದುಬೈ ಸಂಪಾದನೆಯ ಬಹುಪಾಲು ವಿನಿಯೋಗಿಸಿದ. ಅದಕ್ಕೆ ‘ಹೊಟೇಲ್ ಸತ್ಕಾರ್’ ಎಂದು ನಾಮಕರಣ ಮಾಡಿ ಒಂದು ಶುಭದಿನದಂದು ವ್ಯಾಪಾರವನ್ನು ಆರಂಭಿಸಿದ. ಊಟ, ತಿಂಡಿ ತಿನಿಸುಗಳ ಬೆಲೆಯೇನೂ ದುಬಾರಿಯಿರಲಿಲ್ಲ. ಆದ್ದರಿಂದ ಕೊಡೆಕ್ಕೆನಾದ ಒಂದಷ್ಟು ಗಿರಾಕಿಗಳು ಮತ್ತು ಹೊಸಬರೂ ಹೇಮಚಂದ್ರನ ಹೊಟೇಲಿಗೆ ಬರುತ್ತ ವಿವಿಧ ಖಾದ್ಯಗಳ ರುಚಿಯನ್ನು ಸವಿಯತೊಡಗಿದರು. ಹಾಗಾಗಿ ಒಂದಷ್ಟು ಕಾಲ ವ್ಯಾಪಾರ ಭರದಿಂದ ಸಾಗಿತು. ಹೇಮಚಂದ್ರನ ಹೊಟೇಲ್ನ ಆಧುನಿಕ ವಿನ್ಯಾಸವನ್ನೂ ಅದರ ಆರಂಭದ ವೈಭವವನ್ನೂ ಕಂಡ ಕೊಡೆಕ್ಕೆನಾದ ಹೊಟೇಲ್ ಮಾಲಕ ರವಿರಾಜ ಮತ್ತು ಅವನ ಚಿಕ್ಕಪ್ಪ ದುಗ್ಗಪ್ಪಣ್ಣ ಇಬ್ಬರೂ ಕೊಡೆಕ್ಕೆನವಾಗಿ ನಕ್ಕರು. ಆದರೆ ಹೇಮಚಂದ್ರ ತನ್ನ ಅಡುಗೆಗೆ ಬಳಸುತ್ತಿದ್ದ ಕೃತಕ ರಾಸಾಯನಿಕವೂ ಮತ್ತು ಹೊಟೇಲ್ ಕೊಡೆಕ್ಕೆನಾದ ಅಡುಗೆಯ ತಾಜಾ ರುಚಿಗಳು ಇವನ ಆಹಾರದಲ್ಲಿ ಸಿಗದಿದ್ದುದನ್ನೂ ಬಹಳ ಬೇಗನೇ ಮನಗಂಡ ಗಿರಾಕಿಗಳ ಸಂಖ್ಯೆಯೂ ಗಣನೀಯವಾಗಿ ಕ್ಷೀಣಿಸುತ್ತ ಹೋಯಿತು. ಆದ್ದರಿಂದ ಹೇಮಚಂದ್ರ ಹೊಟೇಲು ಆರಂಭಿಸಿದ ಐದಾರು ತಿಂಗಳೊಳಗೆ ಅವನು ಅಷ್ಟು ದೊಡ್ಡ ಹೊಟೇಲಿನ ಗಲ್ಲಾದಲ್ಲಿ ಕುಳಿತು ನೊಣ ಹೊಡೆಯುವ ಪರಿಸ್ಥಿತಿಗೆ ಬಂದು ತಲುಪಿದ. ಕೊನೆಗೆ ಅವನ ಅವಸ್ಥೆ ಕೆಲಸಗಾರರಿಗೆ ಸಂಬಳ ನೀಡಲೂ ಸಾಧ್ಯವಿಲ್ಲದಂತಾಗಿ ಒಬ್ಬೊಬ್ಬರೇ ಕೆಲಸಬಿಟ್ಟು ಹೋಗತೊಡಗಿದರು. ನಂತರ ಕಟ್ಟಡದ ಮಾಲಿಕನಿಂದಲೂ ಬಾಡಿಗೆಯ ವಿಷಯದಲ್ಲಿ ತಕರಾರೆದ್ದು ಹೇಮಚಂದ್ರ ಹೈರಾಣಾಗಿಬಿಟ್ಟ. ಆದರೆ ಅಷ್ಟರಲ್ಲಿ ಕಾಲವೂ ಮಿಂಚಿತ್ತು. ಹೊರದೇಶದಲ್ಲಿ ದುಡಿದ ಹಣವೆಲ್ಲ ನೀರಲ್ಲಿಟ್ಟ ಹೋಮವಾಗಿತ್ತು. ಅದರೊಂದಿಗೆ ಅವನು ಮತ್ತಷ್ಟು ಸಾಲದ ಸುಳಿಗೂ ಸಿಲುಕಿದ್ದ. ಕೊನೆಗೊಂದು ದಿನ ಜೀವನದಲ್ಲಿ ಜಿಗುಪ್ಸೆ ಬಂದು, ರಾತ್ರೋರಾತ್ರಿ ಹೋಟೇಲಿಗೆ ಬೀಗ ಜಡಿದು ಹೊರಟವನು ಕೆಲವು ಕಾಲ ಬುದ್ಧಿಭ್ರಮಣೆಗೊಂಡವನಂತೆ ಎಲ್ಲೆಲ್ಲೋ ತಿರುಗಾಡತೊಡಗಿದ. ಆದರೆ ಇದೇ ಸಮಯದಲ್ಲಿ ಅವನ ದೂರದ ಸಂಬಂಧಿ ಪ್ರಕಾಶನೆಂಬವನೊಬ್ಬ ಅವನ ಸಹಾಯಕ್ಕೆ ಓಡೋಡಿ ಬಂದ. ‘ಅಲ್ಲ ಮಾರಾಯಾ, ನೀನು ಹೋಗಿ ಹೋಗಿ ಆ ಕೊಡೆಕ್ಕೆನಾದವನ ಪಕ್ಕದಲ್ಲಿ ವ್ಯಾಪಾರ ಶುರುಮಾಡಿದ್ದಿಯಲ್ಲ. ಸ್ವಲ್ಪವಾದರೂ ಮಂಡೆ ಬೇಡವಾ ನಿಂಗೆ…? ಅವನು ಅಲ್ಲಿ ಎಷ್ಟು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದಾನೆ ಅಂತ ಗೊತ್ತುಂಟಾ? ಅವನ ಅಪ್ಪನ ಕಾಲದಿಂದಲೂ ಆ ಹೊಟೇಲು ಅಲ್ಲುಂಟು. ಹಾಗಾಗಿ ಅವನ ಹತ್ತಿರ ಯಾರು ಹೊಟೇಲಿಟ್ಟರೂ ಉದ್ಧಾರವಾಗುವುದಿಲ್ಲ. ಯಾಕೆಂದರೆ ತಮ್ಮ ಸುತ್ತಮುತ್ತ ಯಾರನ್ನೂ ಮೇಲೆ ಬರಲು ಅವರು ಬಿಡುವುದಿಲ್ಲ. ಬಂದವರೆಲ್ಲರೂ ನಿನ್ನಂತೆಯೇ ಕೈ ಸುಟ್ಟುಕೊಂಡು ಓಡಿ ಹೋದವರೇ! ಇದನ್ನೆಲ್ಲ ವಿಚಾರಿಸಿಕೊಂಡೇ ಮುಂದುವರೆಯಬೇಕಿತ್ತು ನೀನು. ನಿನ್ನ ವ್ಯಾಪಾರದ ವಿಜೃಂಭಣೆಯನ್ನು ನೋಡಿದ ಅವರು ಹೊಟ್ಟೆ ಉರಿದುಕೊಂಡು ನಿನಗೆ ಸರಿಯಾಗಿ ಮಾಟ ಮಾಡಿಸಿದ್ದಾರೆ ಬಡ್ಡೀಮಕ್ಕಳು! ಆ ರವಿರಾಜನ ಚಿಕ್ಕಪ್ಪ, ದುಗ್ಗಪ್ಪ ಇದ್ದಾನಲ್ವಾ ಅವನು ಯಾವಾಗಲೂ ಬಲ್ಮೆಯವರ ಮನೆಯಲ್ಲೇ ಬಿದ್ದುಕೊಂಡಿರುತ್ತಾನೆ. ನಿನ್ನಂತೆಯೇ ಅಲ್ಲಿ ವ್ಯಾಪಾರ ಆರಂಭಿಸಿದ ತುಂಬಾ ಜನ ಅವರ ಮಾಟಮಂತ್ರಗಳಿಗೇ ಲಗಾಡಿ ಹೋಗಿದ್ದಾರೆ. ಈಗ ನಿನ್ನ ಕಥೆಯೂ ಹಾಗೆಯೇ ಆಯಿತು ನೋಡು!’ ಎಂದು ತನ್ನ ಬಂಧುವಿನ ನಷ್ಟಕ್ಕೆ ಅನುಕಂಪ ತೋರಿಸುವ ನೆಪದಿಂದ ಅವನ ಸೋಲಿನ ಗಾಯವನ್ನು ಮತ್ತಷ್ಟು ಕೆದಕಿ ಉಪ್ಪು, ಖಾರ ಸವರಿ ಬಳಿಕ ಮುಲಾಮು ಹಚ್ಚುವ ಕೆಲಸಕ್ಕೂ ಮುಂದಾದ. ‘ಈಗ ಸೋತು ಸುಣ್ಣವಾದ ಮೇಲೆ ಮಂಡೆ ಹಾಳು ಮಾಡಿಕೊಂಡು ಬದುಕುವುದರಲ್ಲಿ ಅರ್ಥವೇನಿದೆ ಹೇಳು. ಎಲ್ಲದಕ್ಕೂ ಪರಿಹಾರವೊಂದು ಇದ್ದೇ ಇರುತ್ತದೆ. ನಾವದನ್ನು ತಾಳ್ಮೆಯಿಂದ ಹುಡುಕಬೇಕಷ್ಟೆ!’ ಎಂದು ಆಪ್ತವಾಗಿ ಅಂದವನು ತನ್ನ ಆತ್ಮೀಯರೂ ಮತ್ತು ಮೇಲಾಗಿ ತನ್ನ ಕೆಲಸಕ್ಕೆ ಕೈತುಂಬಾ ಕಮಿಶನ್ ಕೊಡುವವರೂ ಆದ ಏಕನಾಥ ಗುರೂಜಿಯವರ ಮನೆಯ ದಾರಿಯನ್ನು ಅವನಿಗೆ ತೋರಿಸಿಕೊಟ್ಟ. ತನ್ನ ದೂರದ ಬಂಧುವಿಂದ ಭರವಸೆಯ ಬೆಳಕನ್ನು ಕಂಡ ಹೇಮಚಂದ್ರನಿಗೆ ಮತ್ತೆ ಜೀವನದಲ್ಲಿ ಆಶಾಭಾವನೆ ಮೂಡಿತು. ಆ ದಿನವೇ ಗುರೂಜಿಯವರ ಮನೆಯತ್ತ ಧಾವಿಸಿದ. ಗುರೂಜಿಯ ಗುಪ್ತ ಸಹಾಯಕ ರಾಘವನು ಹೇಮಚಂದ್ರ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ. ಆದರೆ ಅವನು ಈ ಮೊದಲೆಂದೂ ಗುರೂಜಿಯ ಹತ್ತಿರ ಬಂದುದನ್ನು ರಾಘವ ನೋಡಿರಲಿಲ್ಲ. ಆದ್ದರಿಂದ ಅವನು ಕೂಡಲೇ ತನ್ನ ಪತ್ತೆದಾರಿ ಕೆಲಸಕ್ಕಿಳಿದ. ಹೇಮಚಂದ್ರ ಗುರೂಜಿಯ ಮನೆಯಂಗಳಕ್ಕಡಿಯಿಟ್ಟವನು ಅಲ್ಲಿನ ಜನಸಂದಣಿಯನ್ನು ಕಂಡು ಬೇಸರಗೊಂಡು ಅಲ್ಲೇ ಸಮೀಪವಿದ್ದ ಮಾವಿನ ಮರದ ಬುಡದ ಕಲ್ಲು ಬೆಂಚಿನ ಮೇಲೆ ಕುಳಿತ. ಅವನನ್ನು ಗಮನಿಸಿದ ಅಣ್ಣಪ್ಪ ಕಾಫಿ ತಂದು ಕೊಟ್ಟು ಮುಗ್ಧವಾಗಿ ಹಲ್ಲು ಗಿಂಜಿ ಹೊರಟು ಹೋದ. ಹೇಮಚಂದ್ರ ಕಾಫಿ ತೆಗೆದುಕೊಂಡು ಕುಡಿಯುತ್ತ, ಚಡಪಡಿಸುತ್ತ ಸಮಯ ಕಳೆಯತೊಡಗಿದ. ಮಾವಿನ ಮರದ ಸುತ್ತಮುತ್ತ ತಂಪಾದ ಗಾಳಿ ಬೀಸುತ್ತಿತ್ತು. ಕೆಲಹೊತ್ತಿನಲ್ಲಿ ಅವನ ಮನಸ್ಸೂ ತಿಳಿಯಾಗುತ್ತ ಬಂತು. ಹಾಗಾಗಿ ತಾನು ಗುರೂಜಿಯವರಿಗೆ ವಿವರಿಸಬೇಕಾದ ವಿಚಾರವನ್ನು ಯೋಚಿಸುತ್ತ ಕಾಫಿ ಹೀರತೊಡಗಿದ. ಅಷ್ಟರಲ್ಲಿ ರಾಘವನ ಆಗಮನವಾಯಿತು. ಅವನು ತಾನೂ ಗುರೂಜಿಯವರನ್ನು ಕಾಣಲು ಬಂದ ಗಿರಾಕಿಯಂತೆ ಹೇಮಚಂದ್ರನತ್ತ ಬಂದವನು ಪರಿಚಯದ ನಗೆ ಬೀರುತ್ತ, ‘ಉಸ್ಸಪ್ಪಾ…!’ ಎಂದು ಉಸಿರು ದಬ್ಬಿ ಅವನ ಪಕ್ಕದಲ್ಲಿ ಕುಳಿತುಕೊಂಡ. ಆದರೆ ಹೇಮಚಂದ್ರ ತನ್ನ ತಾಪತ್ರಯಗಳ ಮಡುವಿನಲ್ಲೇ ಮುಳಗೇಳುತ್ತಿದ್ದವನು ಅವನ ನಗುವಿಗೆ ಪ್ರತಿ ನಗದೆ ಅಲಕ್ಷ್ಯ ಮಾಡಿದ. ಅದರಿಂದ ರಾಘವ ತುಸು ಪೆಚ್ಚಾದ. ಆದರೆ ಅವನು ತನ್ನ ಕಾಯಕದಲ್ಲಿ ಪಳಗಿದವನು. ಆದ್ದರಿಂದ, ‘ಛೇ! ಛೇ! ಇದೆಂಥದು ಮಾರಾಯ್ರೇ ಇಲ್ಲಿನ ಅವಸ್ಥೆ…! ಈ ಗುರೂಜಿಯವರಲ್ಲಿಗೆ ನೀವು ಯಾವತ್ತೇ ಬನ್ನಿ, ಬೆಳಿಗ್ಗೆಯಿಂದ ನಡುರಾತ್ರಿಯವರೆಗೆ ಜನರ ಗುಂಪೊಂದು ತಪ್ಪುವುದೇ ಇಲ್ಲ ನೋಡಿ!’ ಎಂದು ಹೇಮಚಂದ್ರನನ್ನು ನೋಡುತ್ತ ಬೇಸರದಿಂದ ಅಂದ. ಆಗ ಹೇಮಚಂದ್ರ ವಾಸ್ತವಕ್ಕೆ ಬಂದು, ‘ಹೌದಾ…?’ ಎಂದು ಅಚ್ಚರಿಯಿಂದ ಅಂದವನು ಬಳಿಕ, ‘ನಾನು ಇದೇ ಮೊದಲ ಸಲ ಬರುತ್ತಿರುವುದು ಮಾರಾಯ್ರೇ. ಈ ಗುರೂಜಿ ಅಷ್ಟೊಂದು ಫೇಮಸ್ಸಾ…?’ ಎಂದ ಕುತೂಹಲದಿಂದ. ‘ಓಹೋ, ಹೌದಾ…? ಹಾಗಾದರೆ ನೀವು ಸರಿಯಾದ ಜಾಗಕ್ಕೇ ಬಂದಿದ್ದೀರಿ ಅಂತಾಯ್ತು. ಅಯ್ಯೋ, ಈ ಗುರೂಜಿಯವರ ಶಕ್ತಿಯನ್ನು ನಿಮಗೆ ನಾನೇನು ಹೇಳುವುದು ಮಾರಾಯ್ರೇ. ಊರಿಗೂರೇ ಇವರ ಚಮತ್ಕಾರವನ್ನು ಕೊಂಡಾಡುತ್ತಿದೆ!’ ಎಂದು ರಾಘವನು, ಗುರೂಜಿಯವರು ದೇವರೇ ಎಂಬಂತೆ ಹೊಗಳಿದ. ‘ಓಹೋ… ಹೌದಾ ಮಾರಾಯ್ರೇ…ಹಾಗಾದರೆ ನೀವೂ ಇವರ ಹಳೆ ಗಿರಾಕಿಯೇ ಎಂದಾಯ್ತು…!’ ‘ಛೇ, ಛೇ! ಗಿರಾಕಿ ಬಿರಾಕಿ ಎಂಥದ್ದೂ ಇಲ್ಲ. ಹಿಂದೊಂದು ಕಾಲದಲ್ಲಿ ಹಾಳಾಗಿ ಹೋಗಿದ್ದ ನನ್ನ ಬದುಕನ್ನು ಮತ್ತೆ ಬೆಳಗಿಸಿದಂಥ ಮಹಾನುಭಾವ ಇವರು!’ ‘ಹೌದಾ, ಅದು ಹೇಗೆ…?’ ‘ನನ್ನ ಕಥೆಯನ್ನು ಎಲ್ಲಿಂದ ಶುರು ಮಾಡುವುದು ಹೇಳಿ? ಒಂದುವೇಳೆ ನನ್ನ ಆಗಿನ ಅವಸ್ಥೆಯನ್ನು ನೀವು ಕಣ್ಣಾರೆ ನೋಡಿರುತ್ತಿದ್ದರೆ ಈಗಲೇ ಎದ್ದು ಹೋಗಿ
ದಾರಾವಾಹಿ ಆವರ್ತನ ಅದ್ಯಾಯ-37 ಗೋಪಾಲನಿಗೆ ಬಿದ್ದ ಕನಸಿನಲ್ಲಿ ಅವನ ಮನೆಯೆದುರಿನ ನಾಗಬನದಿಂದ ಘಟಸರ್ಪವೊಂದು ಅವನ ಮನೆಯತ್ತಲೇ ಧಾವಿಸುವುದನ್ನು ಕಂಡವನು ಹೆದರಿ ಕಂಗಾಲಾಗಿ ಮಡದಿ, ಮಕ್ಕಳನ್ನು ಎಬ್ಬಿಸಲು ಮುಂದಾಗುತ್ತಾನೆ. ಆದರೆ ಅವರಲ್ಲಿ ಯಾರಿಗೂ ಎಚ್ಚರವಾಗುವುದಿಲ್ಲ. ತಾನಾದರೂ ಎದ್ದು ಓಡಿಹೋಗಬೇಕು ಎಂದುಕೊಳ್ಳುತ್ತಾನೆ. ಆದರೆ ಆಶ್ಚರ್ಯ! ತನ್ನ ಕೈಕಾಲುಗಳನ್ನು ಯಾರೋ ಬಿಗಿಯಾಗಿ ಕಟ್ಟಿ ಹಾಕಿರುವಂತೆ ಭಾಸವಾಗುತ್ತದೆ. ಜೋರಾಗಿ ಅರಚಿಕೊಳ್ಳುತ್ತಾನೆ. ಆದರೂ ಬಿಡುಗಡೆ ದೊರಕುವುದಿಲ್ಲ. ವಿಧಿಯಿಲ್ಲದೆ ಮರಳಿ ತನ್ನ ಕುಟುಂಬವನ್ನು ತಬ್ಬಿಕೊಂಡು ಮುದುಡುತ್ತಾನೆ. ಅಷ್ಟರಲ್ಲಿ ರಾಧಾಳಿಗೆ ಎಚ್ಚರವಾಗುತ್ತದೆ. ಅವಳೂ ಆ ಮಹಾಸರ್ಪವನ್ನು ಕಂಡು ಕಿಟಾರ್ರನೇ ಕಿರುಚುತ್ತಾಳೆ. ‘ಅಯ್ಯೋ ದೇವರೇ… ಇದೇನಿದು ಭಯಂಕರ ಹಾವು! ಏಳಿ ಮಾರಾಯ್ರೇ… ಎದ್ದೇಳಿ ಮಕ್ಕಳನ್ನು ಎತ್ತಿಕೊಳ್ಳಿ. ಇಲ್ಲಿಂದ ಓಡಿ ಹೋಗುವ. ಆ ಹಾವು ಎಲ್ಲರನ್ನೂ ಕಚ್ಚಿ ಸಾಯಿಸಿಯೇ ಬಿಡುತ್ತದೆ. ನಿಮ್ಮ ದಮ್ಮಯ್ಯ ಎದ್ದೇಳಿ ಮಾರಾಯ್ರೇ…!!’ ಎಂದು ಕಿರುಚುತ್ತಾಳೆ. ಆದರೆ ಗೋಪಾಲನಿಗೆ ಹೇಗ್ಹೇಗೆ ಪ್ರಯತ್ನಿಸಿದರೂ ಕುಳಿತಲ್ಲಿಂದ ಚೂರೂ ಅಲ್ಲಾಡಲಾಗುವುದಿಲ್ಲ. ‘ಇಲ್ಲ ರಾಧಾ, ನನ್ನ ಕೈಕಾಲುಗಳು ಬಿದ್ದು ಹೋಗಿವೆ. ನೀನಾದರೂ ಮಕ್ಕಳನ್ನೆತ್ತಿಕೊಂಡು ದೂರ ಹೋಗಿ ಬದುಕಿಕೋ. ಹ್ಞೂಂ ಹೊರಡು!’ ಎಂದು ಕೂಗುತ್ತಾನೆ. ‘ಅಯ್ಯೋ ಇಲ್ಲ ಮಾರಾಯ್ರೇ… ನಿಮ್ಮನ್ನು ಬಿಟ್ಟು ನಾವು ಎಲ್ಲಿಗೂ ಹೋಗುವುದಿಲ್ಲ. ಸಾಯುವುದಿದ್ದರೆ ಒಟ್ಟಿಗೆ ಸಾಯುವ!’ ಎಂದು ಅಳುತ್ತಾಳೆ. ಅಷ್ಟರಲ್ಲಿ ಆ ಕಾಳಸರ್ಪವು ಗೋಪಾಲನ ಮನೆಯತ್ತ ಬಂದೇ ಬಿಟ್ಟಿತು ಮತ್ತದು ನೋಡು ನೋಡುತ್ತಿದ್ದಂತೆಯೇ ಬೆಳೆಯತೊಡಗಿತು. ಬೆಳೆಯುತ್ತ ಬೆಳೆಯುತ್ತ ಅವನ ಮನೆಯನ್ನೂ ಮೀರಿ ಆಕಾಶದೆತ್ತರಕ್ಕೆ ಬೆಳೆದು ಸೆಟೆದು ನಿಂತುಕೊಂಡಿತು! ಅದರ ವಿರಾಟರೂಪವನ್ನೂ, ಎದೆ ನಡುಗುವಂಥ ಫೂತ್ಕಾರವನ್ನೂ ಕೇಳಿದ ರಾಧಾ ಪ್ರಜ್ಞೆ ತಪ್ಪಿಬಿದ್ದಳು. ಗೋಪಾಲ ಮೂಕನಂತಾದ. ಅತ್ತ ಹಟ್ಟಿಯಲ್ಲಿದ್ದ ದನಕರು, ನಾಯಿ, ಕೋಳಿಗಳ ಕೂಗು, ಆಕ್ರಂದನ ಮುಗಿಲು ಮುಟ್ಟಿತು. ಆ ಮುಗ್ಧಜೀವಿಗಳ ಆರ್ತನಾದವನ್ನೂ ಗೋಪಾಲನ ಅಸಹಾಯಕತೆಯನ್ನೂ ಕಂಡ ಸರ್ಪವು ತನ್ನ ಒಂದೊಂದು ಹೆಡೆಯನ್ನು ಒಂದೊಂದು ರೀತಿಯಲ್ಲಿ ಕೊಂಕಿಸಿ, ಕುಣಿಸಿ ಅಟ್ಟಹಾಸ ಮಾಡತೊಡಗಿತು. ಅಷ್ಟರಲ್ಲಿ ಗೋಪಾಲನಿಗೆ ಅಲ್ಲಿ ಇನ್ನೊಂದು ಆಘಾತವೂ ಬಡಿಯಿತು. ಆ ಮಹಾಸರ್ಪವನ್ನು ವಠಾರದ ಮಂದಿಯೆಲ್ಲ ವಿಸ್ಮಯದಿಂದ ನೋಡುತ್ತ ನಿಂತಿದ್ದಾರೆ. ಆದರೆ ಅವರಲ್ಲಿ ಯಾರಿಗೂ ಚೂರೂ ಭಯವಿರಲಿಲ್ಲ. ಎಲ್ಲರೂ ಗೋಪಾಲನ ಕುಟುಂಬದ ಒದ್ದಾಟವನ್ನು ನೋಡಿ ಗೇಲಿ ಮಾಡುತ್ತ ನಗುತ್ತಿದ್ದಾರೆ! ಅವನಿಗೆ ಅವರಲ್ಲಿ ಯಾರ ಗುರುತೂ ಸರಿಯಾಗಿ ಹತ್ತುವುದಿಲ್ಲ. ಆದರೆ ಸುಮಿತ್ರಮ್ಮ ಮಾತ್ರ ಸ್ಪಷ್ಟವಾಗಿ ಕಾಣಿಸುತ್ತಾರೆ. ಅವನಲ್ಲಿ ಸ್ವಲ್ಪ ಧೈರ್ಯ ಮೂಡುತ್ತದೆ. ‘ಸುಮಿತ್ರಮ್ಮಾ, ಸುಮಿತ್ರಮ್ಮಾ… ನಿಮ್ಮ ದಮ್ಮಯ್ಯ. ನಮ್ಮನ್ನು ಕಾಪಾಡಿಯಮ್ಮಾ…!’ ಎಂದು ಗೋಗರೆಯುತ್ತಾನೆ. ಆದರೆ ಸುಮಿತ್ರಮ್ಮನೂ ಅವನನ್ನು ಕಂಡು ಗಹಗಹಿಸಿ ನಗುತ್ತಾರೆ! ಅವನಿಗೆ ಇನ್ನಷ್ಟು ಆಘಾತವಾಗುತ್ತದೆ. ಭಯದಿಂದ ಹಾವಿನತ್ತ ನೋಡುತ್ತಾನೆ. ಅದು ಅವನ ಮಣ್ಣಿನ ಗೋಡೆಯ, ತಾಳೆಮರದ ಪಕ್ಕಾಸಿನ ಮೇಲೆ ಮೂರನೇ ದರ್ಜೆಯ ಹೆಂಚು ಹೊದೆಸಿದ್ದ ಸಣ್ಣ ಮನೆಯನ್ನು ತನ್ನ ಬಲಿಷ್ಠ ಹೆಡೆಗಳಿಂದ ಬೀಸಿ ಅಪ್ಪಳಿಸಿ ಪುಡಿ ಮಾಡಲು ಮುಂದಾಯಿತು ಎಂಬಷ್ಟರಲ್ಲಿ, ‘ಅಯ್ಯಯ್ಯಮ್ಮಾ…!?’ ಎಂದು ಗೋಪಾಲ ವಿಕಾರವಾಗಿ ಕಿರುಚುತ್ತ ನಿಜವಾದ ನಿದ್ರೆಯಿಂದ ಎಚ್ಚೆತ್ತು ಎದ್ದು ಕುಳಿತುಕೊಳ್ಳುತ್ತಾನೆ. ಗಂಡನ ಬೊಬ್ಬೆಗೆ ರಾಧಾಳೂ ಬೆಚ್ಚಿಬಿದ್ದು ಎದ್ದಳು. ಗೋಪಾಲ ಚಳಿಜ್ವರದಿಂದ ನಡುಗುತ್ತಿದ್ದ. ಅವಳಿಗೆ ಗಾಬರಿಯಾಯಿತು. ಗಂಡನನ್ನು ತಬ್ಬಿಕೊಂಡು ಸಂತೈಸುತ್ತ, ‘ಏನಾಯ್ತು ಮಾರಾಯ್ರೇ… ಜ್ವರ ಈಗಲೂ ಸುಡುತ್ತಿದೆಯಲ್ಲಾ…? ಯಾಕೆ ಕಿರುಚಿಕೊಂಡ್ರೀ…, ಕೆಟ್ಟ ಕನಸು ಬಿತ್ತಾ…?’ ಎಂದು ಅಕ್ಕರೆಯಿಂದ ಅವನ ಹಣೆ ಮತ್ತು ಎದೆಯನ್ನು ಒರಸುತ್ತಾ ಕೇಳಿದಳು. ಆದರೆ ಗೋಪಾಲ ಇಹದ ಪ್ರಜ್ಞೆಯೇ ಇಲ್ಲದವನಂತೆ ಹೆಂಡತಿಯನ್ನು ನೋವಿನಿಂದ ದಿಟ್ಟಿಸಿದ. ಅವನ ಕಣ್ಣಗುಡ್ಡೆಗಳು ಕೆಂಪಾಗಿ ಹೊರಚಾಚಿದ್ದವು. ಗಂಟಲ ನರಗಳು ಉಬ್ಬಿ ಕಾಣುತ್ತಿದ್ದವು. ಒಮ್ಮೆ ವಿಚಿತ್ರವಾಗಿ ತನ್ನ ಮೈಕೊಡವಿಕೊಂಡವನು, ‘ಆದಷ್ಟು ಬೇಗ ನಾವಿಲ್ಲಿಂದ ದೂರ ಹೊರಟು ಹೋಗಬೇಕು ಮಾರಾಯ್ತೀ… ಈ ಜಾಗ ನಮಗಿನ್ನು ಖಂಡಿತಾ ಆಗಿ ಬರುವುದಿಲ್ಲ!’ ಎಂದು ನಡುಗುತ್ತ ಅಂದವನು ದೊಪ್ಪನೆ ಅಂಗಾತ ಬಿದ್ದ. ಇಡೀ ದೇಹವನ್ನು ಬಿರುಸಾಗಿ ಹಿಂಡುತ್ತ ಅತ್ತಿತ್ತ ಹೊರಳಾಡತೊಡಗಿದ. ನಂತರ ವಿಚಿತ್ರವಾಗಿ ನುಲಿಯುತ್ತ ಕೋಣೆಯಿಡೀ ತೆವಳತೊಡಗಿದ! ಗಂಡನ ಸ್ಥಿತಿಯನ್ನು ಕಂಡ ರಾಧಾಳಿಗೆ ದಿಕ್ಕೇ ತೋಚದಾಯಿತು. ಅವನ ಆ ತೆವಳುವಿಕೆಯು ಹೆಡೆ ತುಳಿದ ಸರ್ಪವೊಂದು ನೋವು, ಕೋಪದಿಂದ ಬುಸುಗುಟ್ಟುತ್ತಿರುವಂತೆಯೇ ಅವಳಿಗೆ ಭಾಸವಾಯಿತು. ಹಾಗಾಗಿ ಅವಳಲ್ಲೂ ನಾಗದೋಷದ ಭೀತಿಯು ಹುಟ್ಟಿಕೊಂಡು ದಂಗು ಬಡಿಸಿತು. ತುಸುಹೊತ್ತು ಗಂಡನ ಹತ್ತಿರ ಸುಳಿಯಲೂ ಅಂಜಿಬಿಟ್ಟಳು. ಅಷ್ಟರಲ್ಲಿ ಗೋಪಾಲ ತನ್ನ ಇಡೀ ದೇಹವನ್ನು ವಿಪರೀತ ಮುರಿಯಲೂ ಕೊಸರಾಡಲೂ ಶುರುವಿಟ್ಟುಕೊಂಡ. ಅಪ್ಪನ ವಿಚಿತ್ರ ನರಳಾಟ ಮತ್ತವನಿಂದ ಉಸಿರುಗಟ್ಟಿ ಹೊರಡುತ್ತಿದ್ದ ಬುಸ್! ಬುಸ್! ಬುಸ್! ಎಂಬ ಫೂತ್ಕಾರವು ಮಕ್ಕಳನ್ನೂ ಎಬ್ಬಿಸಿತು. ಅವು ಅಪ್ಪನನ್ನು ಕಂಡವು ‘ಹೋ…!!’ ಎಂದು ಅಳಲಾರಂಭಿಸಿದವು. ಆಗ ರಾಧಾ ಸ್ವಲ್ಪ ಧೈರ್ಯ ತಂದುಕೊಂಡಳು. ಗಂಡನ ಮೊಬೈಲ್ ಫೋನಿನಿಂದ ತಕ್ಷಣ ಅಪ್ಪನಿಗೆ ಕರೆ ಮಾಡಿ ವಿಷಯ ತಿಳಿಸಿದಳು. ಅವರೂ ಹೆದರಿದರು ಆದರೂ ಕೂಡಲೇ ಹೊರಟು ಬರುವುದಾಗಿ ಮಗಳಿಗೆ ಧೈರ್ಯ ಹೇಳಿದರು. ಸ್ವಲ್ಪಹೊತ್ತಲ್ಲಿ ಗೋಪಾಲ ಯಥಾಸ್ಥಿತಿಗೇನೋ ಬಂದ. ಜ್ವರವಿನ್ನೂ ಸುಡುತ್ತಿತ್ತು. ಬೆಳಕು ಹರಿಯುವವರೆಗೆ ರಾಧಾ ತನಗೆ ತಿಳಿದ ಮಟ್ಟಿಗೆ ಗಂಡನ ಶುಶ್ರೂಷೆ ಮಾಡಿದಳು. ಅವಳ ಅಪ್ಪ, ಅಮ್ಮ ಟ್ಯಾಕ್ಸಿ ಮಾಡಿಕೊಂಡು ನಸುಕಿನಲ್ಲೇ ಬಂದರು. ಗೋಪಾಲನನ್ನು ಕಾರಿನಲ್ಲಿ ಕೂರಿಸಿಕೊಂಡು ರಾಧಾಳ ಸೂಚನೆಯಂತೆ ಡಾಕ್ಟರ್ ನರಹರಿಯ ಮನೆಗೆ ಕರೆದೊಯ್ದರು. *** ಡಾಕ್ಟರ್ ನರಹರಿ ಪ್ರತಿನಿತ್ಯ ಅರುಣೋದಯದಲ್ಲಿ ಎದ್ದು ಯೋಗ ಮತ್ತು ಧ್ಯಾನ ಮಾಡುವ ಅಭ್ಯಾಸವಿದ್ದವನು. ಇಂದು ಕೂಡಾ ಮನೆಯ ತಾರಸಿಯ ಮೇಲೆ ದೇಹ ದಂಡನೆಯಲ್ಲಿ ತೊಡಗಿದ್ದವನಿಗೆ ಎರಡು ಮೂರು ಬಾರಿ ಕಾಲಿಂಗ್ ಬೆಲ್ ಬಾರಿಸಿದ್ದು ಕೇಳಿಸಿತು. ಪೇಶೆಂಟ್ ಬಂದಿರಬೇಕೆಂದುಕೊಂಡು ವ್ಯಾಯಾಮ ನಿಲ್ಲಿಸಿ ಕೆಳಗೆ ಬಂದ. ರಾಧಾ ಮತ್ತು ಅವಳ ಹೆತ್ತವರು ಗೋಪಾಲನನ್ನು ಹೊರ ಜಗುಲಿಯಲ್ಲಿ ಕುಳ್ಳಿರಿಸಿಕೊಂಡು ಕಾಯುತ್ತಿದ್ದರು. ನರಹರಿ ನಗುತ್ತ ಅವರನ್ನು ಶುಶ್ರೂಷೆಯ ಕೋಣೆಗೆ ಕರೆದೊಯ್ದು ಕುಳ್ಳಿರಿಸಿ ಗೋಪಾಲನನ್ನು ಪರೀಕ್ಷಿಸಿದ. ಅವನಿಗೆ ಗೋಪಾಲನ ಜ್ವರದ ಕುರಿತು ಅನುಮಾನ ಬಂತು. ‘ಏನಮ್ಮಾ, ಇವನಿಗೆ ಈ ಜ್ವರ ಎಷ್ಟು ದಿನಗಳಿಂದ ಕಾಣಿಸಿಕೊಳ್ಳುತ್ತಿದೆ?’ ಎಂದು ರಾಧಾಳನ್ನು ಕೇಳಿದ. ‘ನಿನ್ನೆಯಿಂದ ಶುರುವಾಗಿದ್ದು ಡಾಕ್ಟ್ರೇ. ಏನಾಗಿದೆ ಅವರಿಗೇ…?’ ಎಂದವಳು ಆತಂಕದಿಂದ. ‘ಗಾಬರಿ ಪಡುವಂಥದ್ದೇನಿಲ್ಲ. ಕೆಲವು ಪರೀಕ್ಷೆಗಳನ್ನು ಮಾಡಿಸಬೇಕಾಗುತ್ತದೆ. ಬರೆದು ಕೊಡುತ್ತೇನೆ. ಆದಷ್ಟು ಬೇಗ ಮಾಡಿಸಿಕೊಂಡು ಬನ್ನಿ!’ ಎಂದ ನರಹರಿ ಪರೀಕ್ಷೆಯ ಚೀಟಿಯನ್ನೂ ಎರಡು ದಿನದ ಔಷಧಿಯನ್ನೂ ಕೊಟ್ಟು ಕಳುಹಿಸಿದ. ಗೋಪಾಲನ ಅತ್ತೆ, ಮಾವ ಅವನನ್ನು ಮನೆಗೆ ಕರೆದುಕೊಂಡು ಹೋಗಿ ಬಿಟ್ಟವರು ಅಳಿಯನಿಗೆ ಸಾಂತ್ವನ ಹೇಳಿ ಮಗಳ ಕೈಯಲ್ಲಿ ಒಂದು ಸಾವಿರ ರೂಪಾಯಿಯನ್ನಿಟ್ಟು ಧೈರ್ಯ ತುಂಬಿ ಹೊರಟು ಹೋದರು. ಅಂದು ಸಂಜೆ ಗೋಪಾಲನಿಗೆ ಜ್ವರ ಬಿಟ್ಟಿತು. ಗಂಜಿ ಕುಡಿಸಲು ಬಂದ ರಾಧಾಳನ್ನು ಸಮೀಪ ಕುಳ್ಳಿರಿಸಿಕೊಂಡ. ಹಿಂದಿನ ದಿನ ರಾತ್ರಿ ತನಗೆ ಬಿದ್ದ ಭೀಕರ ಕನಸನ್ನು ಎಳೆಎಳೆಯಾಗಿ ಅವಳಿಗೆ ವಿವರಿಸಿದ. ಅವನು ಹಾಗೆ ಮಾಡಬಾರದಿತ್ತೇನೋ. ಆದರೆ ಅವನೊಳಗೆ ತಣ್ಣನೆ ಹೊಕ್ಕು ರಾಕ್ಷಸಾಕಾರವಾಗಿ ಬೆಳೆದು ಅವನ ವಿವೇಚನೆಯನ್ನೇ ಕಸಿದುಕೊಂಡಿದ್ದ ನಾಗದೋಷದ ಭಯವು ಅವನಿಂದ ಆ ಕೆಲಸವನ್ನು ಮಾಡಿಸಿಬಿಟ್ಟಿತ್ತು. ಗಂಡನ ಕನಸನ್ನು ಕೇಳಿದ ರಾಧಾಳ ಮನಸ್ಸು ಕೆಟ್ಟಿತು. ಮರುಕ್ಷಣ ಅವಳ ಯೋಚನೆಯೂ ಎಲ್ಲರಂತೆ ಓಡತೊಡಗಿತು. ಸುಮಿತ್ರಮ್ಮ ಮತ್ತು ವಠಾರದವರು ಅನ್ನುವಂತೆ ನಮ್ಮೆಲ್ಲ ಕಷ್ಟಕಾರ್ಪಣ್ಯಗಳಿಗೂ ಗಂಡನ ಕನಸಿಗೂ ಹಾಗು ಅವನನ್ನು ಕಾಡಿದ ವಿಚಿತ್ರ ಜ್ವರಕ್ಕೂ ನಾಗದೋಷವೇ ಕಾರಣ ಎಂದು ಅವಳೂ ಬಲವಾಗಿ ನಂಬಿಬಿಟ್ಟಳು. ಅಲ್ಲಿಂದ ಆ ಕೊರಗು ಅವಳನ್ನೂ ಭಾದಿಸತೊಡಗಿತು. ಹೀಗಾಗಿ ಡಾ. ನರಹರಿ ಸೂಚಿಸಿದ ಪರೀಕ್ಷೆಗಳನ್ನು ಮಾಡಿಸುವುದನ್ನು ಇಬ್ಬರೂ ಮರೆತುಬಿಟ್ಟರು. ಮರುದಿನ ಸಂಜೆಯ ಹೊತ್ತಿಗೆ ರಾಧಾಳ ತಳಮಳ ತೀವ್ರವಾಯಿತು. ಅದನ್ನು ಸಹಿಸಲಾಗದೆ ಸುಮಿತ್ರಮ್ಮನ ಮನೆಗೆ ಓಡಿದಳು. ಅವರು ತುಳಸಿಕಟ್ಟೆಯ ಪಕ್ಕದಲ್ಲಿ ಕುಳಿತುಕೊಂಡು ಬತ್ತಿ ಹೆಣೆಯುತ್ತಿದ್ದರು. ಗೇಟು ತೆಗೆದು ಒಳಗೆ ಬಂದ ರಾಧಾಳ ಮುಖದಲ್ಲಿದ್ದ ಗಾಬರಿಯನ್ನು ಕಂಡವರಿಗೆ ಅಚ್ಚರಿಯಾಯಿತು. ‘ಓಹೋ, ರಾಧಾ ಬಾ ಮಾರಾಯ್ತೀ ಕುಳಿತುಕೋ. ಏನು ವಿಷಯ…?’ ಎನ್ನುತ್ತ ಕೈಸನ್ನೆ ಮಾಡಿ ತಮ್ಮಿಂದ ಸ್ವಲ್ಪ ದೂರದಲ್ಲಿ ಕುಳಿತುಕೊಳ್ಳಲು ಸೂಚಿಸಿದರು. ಸುಮಿತ್ರಮ್ಮನನ್ನು ಕಂಡ ರಾಧಾಳಿಗೆ ಅಳು ಉಕ್ಕಿ ಬಂತು. ಅದನ್ನು ಕಂಡ ಸುಮಿತ್ರಮ್ಮ ಗಲಿಬಿಲಿಯಾದರು. ‘ಅಯ್ಯೋ ದೇವರೇ…ಏನಾಯ್ತು ಮಾರಾಯ್ತೀ ಯಾಕೆ ಅಳುತ್ತೀ…?’ ಎಂದರು ಆತಂಕದಿಂದ. ರಾಧಾ ಕಣ್ಣೀರೊರೆಸಿಕೊಳ್ಳುತ್ತ ತನ್ನ ಗಂಡನಿಗೆ ಬಿದ್ದ ಭೀಕರ ಕನಸನ್ನೂ ಆ ಹೊತ್ತು ಅವನು ವರ್ತಿಸಿದ ರೀತಿಯನ್ನೂ ಆರ್ತಳಾಗಿ ಅವರಿಗೆ ವಿವರಿಸಿದಳು. ಅಷ್ಟು ಕೇಳಿದ ಸುಮಿತ್ರಮ್ಮನೂ ಗಾಬರಿಯಾದರು. ಬಳಿಕ ಇನ್ನೇನೋ ಯೋಚಿಸಿದರು. ‘ಅಯ್ಯಯ್ಯೋ, ದೇವರೇ! ಆ ಬನವು ನಾಗನ ಮೂಲಸ್ಥಾನ ಮಾರಾಯ್ತೀ… ವಠಾರವನ್ನು ಆದಷ್ಟು ಶುಚಿಯಾಗಿಟ್ಟುಕೊಳ್ಳಿ ಅಂತ ನಾನಾವತ್ತೇ ಬಡಕೊಂಡೆ. ಆದರೆ ನಿಮಗಿಬ್ಬರಿಗೂ ನನ್ನ ಮಾತೇ ಅರ್ಥವಾಗಲಿಲ್ಲ ಅಲ್ಲವಾ! ಇನ್ನೆಂಥ ಅನಾಹುತಗಳು ಕಾದಿವೆಯೋ ಮುಖ್ಯಪ್ರಾಣಾ…!’ ಎಂದು ಭಯದಿಂದ ಗೊಣಗಿದರು. ಬಳಿಕ, ‘ಸರಿ, ಸರಿ. ಆಗಿದ್ದು ಆಯಿತು. ಇನ್ನಾದರೂ ತಪ್ಪನ್ನು ತಿದ್ದಿಕೊಂಡು ಬದುಕಲು ಕಲಿಯಿರಿ ಮಾರಾಯ್ತೀ. ನಾಳೆ ಬೆಳಿಗ್ಗೆ ನೀನು ನನ್ನೊಂದಿಗೆ ಗುರೂಜಿಯವರಲ್ಲಿಗೆ ಬಂದುಬಿಡು. ಇದಕ್ಕೆಲ್ಲ ಅವರೇ ಸೂಕ್ತ ಪರಿಹಾರ ಸೂಚಿಸುತ್ತಾರೆ!’ ಎಂದು ಅವಳನ್ನು ಸಂತೈಸಿದರು. ಗುರೂಜಿಯ ಹೆಸರೆತ್ತಿದ ಮೇಲೆ ರಾಧಾ ತುಸು ಸಮಾಧಾನವಾದಳು. ‘ಆಯ್ತು ಸುಮಿತ್ರಮ್ಮ ಬರುತ್ತೇನೆ. ಈ ದುರಾವಸ್ಥೆಯಿಂದ ನನ್ನ ಸಂಸಾರವನ್ನು ನೀವೇ ಕಾಪಾಡಬೇಕಮ್ಮಾ!’ ಎಂದು ಬೇಡಿಕೊಂಡು ಮತ್ತೆ ಅತ್ತಳು. ಅವಳ ದುಃಖ ಕಂಡ ಸುಮಿತ್ರಮ್ಮನ ಕರುಳು ಮಿಡಿಯಿತು. ‘ಆಯ್ತು ರಾಧಾ, ಚಿಂತಿಸಬೇಡ. ಎಲ್ಲಾ ಸಮ ಆಗುತ್ತದೆ. ಈಗ ನೆಮ್ಮದಿಯಿಂದ ಮನೆಗೆ ಹೋಗು!’ ಎಂದರು ಅಕ್ಕರೆಯಿಂದ. ಅವರ ಮಾತಿನಿಂದ ರಾಧಾಳ ನೋವು ಅರ್ಧಕ್ಕರ್ಧ ತಣ್ಣಗಾಯಿತು. ಅವರಿಗೆ ಡೊಗ್ಗಾಲು ಬಿದ್ದು ನಮಸ್ಕರಿಸಿ ಹಿಂದಿರುಗಿದಳು. (ಮುಂದುವರೆಯುವುದು) ಗುರುರಾಜ್ ಸನಿಲ್ ಗುರುರಾಜ್ಸನಿಲ್ಉಡುಪಿಇವರುಖ್ಯಾತಉರಗತಜ್ಞ, ಸಾಹಿತಿಯಾಗಿನಾಡಿನಾದ್ಯಂತಹೆಸರುಗಳಿಸಿದವರು. .‘ಹಾವುನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದಸುತ್ತಮುತ್ತ’, ‘ವಿಷಯಾಂತರ’ ‘ಕಮರಿದಸತ್ಯಗಳುಚಿಗುರಿದಸುದ್ದಿಗಳು’ ಮತ್ತುಅವಿಭಜಿತದಕ್ಷಿಣಕನ್ನಡಜಿಲ್ಲೆಗಳನೈಸರ್ಗಿಕನಾಗಬನಗಳಉಳಿವಿನಜಾಗ್ರತಿಮೂಡಿಸುವ ‘ನಾಗಬನವೆಂಬಸ್ವರ್ಗೀಯತಾಣ’ , ‘ಗುಡಿಮತ್ತುಬಂಡೆ’ ಎಂಬಕಥಾಸಂಕಲವನ್ನುಹೊರತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡುಕಾದಂಬರಿಗಳುಬಂದಿವೆ.‘ಹಾವುನಾವು’ ಕೃತಿಗೆಕರ್ನಾಟಕಸಾಹಿತ್ಯಅಕಾಡೆಮಿಯು 2010ನೇಸಾಲಿನ ‘ಮಧುರಚೆನ್ನದತ್ತಿನಿಧಿಪುಸ್ತಕಪ್ರಶಸ್ತಿ’ ನೀಡಿಗೌರವಿಸಿದೆ. ‘ ‘ಕರುಣಾಎನಿಮಲ್ವೆಲ್ಫೇರ್ಅವಾರ್ಡ್(2004)’ ‘ಕರ್ನಾಟಕಅರಣ್ಯಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕಕಾರ್ಮಿಕವೇದಿಕೆಯು ‘ಕರ್ನಾಟಕರಾಜ್ಯೋತ್ಸವಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತಉಡುಪಿಯಪುತ್ತೂರಿನಲ್ಲಿವಾಸವಾಗಿದ್ದಾರೆ
ಮಹಿಷಾ ಮಂಡಲದಲ್ಲಿ ಬೌದ್ಧ ಪರಂಪರೆ
ನಮ್ಮ ಆಚರಣೆಗಳಲ್ಲಿಯೇ ನಮ್ಮ ಚರಿತ್ರೆಗಳನ್ನು ಕಂಡುಕೊಳ್ಳಬೇಕಿದೆ. ಮಹಿಷಾ ಮಂಡಲದಲ್ಲಿ ಬೌದ್ಧರ ನಾಶದ ಹಿಂದೆ ಒಂದು ಚಾರಿತ್ರಿಕ ವಂಚನೆಯನ್ನು ಗ್ರಹಿಸಬೇಕಿದೆ.
ಮಹಿಷಾ ಮಂಡಲದಲ್ಲಿ ಬೌದ್ಧ ಪರಂಪರೆ Read Post »
ತಾಯಿಯೇ ಮಕ್ಕಳನ್ನು ಅಳಿಸಬಹುದೇ?
ಆದರೆ ಅವರನ್ನು ಈಗಲೇ ತಯಾರು ಮಾಡೋದ್ರಲ್ಲಿ ತಪ್ಪೇನಿದೆ? ಇವತ್ತು ತಿದ್ದಿಕೊಳ್ಳದಿದ್ದರೆ ಈಗ ನೋಡಿ ನಾನು ಅಳ್ತಿದ್ದೀನಲ್ಲ, ಹಾಗೆ ಮುಂದೆ ಅವರೂ ಹಾಗೇ ಅಳ್ತಾರೆ ಅಷ್ಟೇ. ತಾಯಿಯೇ ಮಕ್ಕಳನ್ನು ಅಳಿಸುವುದೇ?
ತಾಯಿಯೇ ಮಕ್ಕಳನ್ನು ಅಳಿಸಬಹುದೇ? Read Post »
ವಾರ್ಷಿಕ ವಿಶೇಷಾಂಕ
‘ಸಂಗಾತಿ’ ಕನ್ನಡ ಸಾಹಿತ್ಯದ ವೆಬ್ ಪತ್ರಿಕೆ ಇದೇ ಅ.೨೦ ಕ್ಕೆ ಎರಡು ವರ್ಷ ಮುಗಿಸಿ,ಮೂರನೇ ವಸಂತಕ್ಕೆ ಅಡಿಯಿಡುತ್ತಿದೆ
ಈ ಎರಡು ವರ್ಷಗಳಲ್ಲಿ ಸಂಗಾತಿ ಪತ್ರಿಕೆ ಕವಿತೆ, ಕತೆ, ಜೀವನ ಚರಿತ್ರೆ, ಅಂಕಣ ಬರಹಗಳ ಮೂಲಕ ಕನ್ನಡ ಸಾಹಿತ್ಯದ ವರ್ತಮಾನದ ದನಿಯನ್ನು ಕಟ್ಟಿಕೊಟ್ಟಿದೆ. ನಾಡಿನ ಹಿರಿಯರು, ಕಿರಿಯರು ಸಂಗಾತಿಗೆ ಬರೆದಿದ್ದಾರೆ.
ಎರಡು ವರ್ಷದ ಪಯಣದ ಈ ಸಂದರ್ಭದಲ್ಲಿ ಪತ್ರಿಕೆ ವಿಶೇಷ ಸಂಚಿಕೆ ತರಲು ತಿರ್ಮಾನಿಸಿದೆ
ಪ್ರಿಯ ಬಾಪುವಿಗೊಂದು ಪತ್ರ
ಹೋರಾಟ, ಜೈಲು, ಉಪವಾಸ, ಬರಹ, ತ್ಯಾಗ- ಅಬ್ಬಬ್ಬಾ! ಬರೆಯುತ್ತಾ ಹೋದರೆ ಎಂದೂ ಮುಗಿಯದಿರುವ ಅಗಣಿತ ಅದ್ಭುತ ನೀವು. ನಿಮ್ಮ ಬದುಕಿನ ರೀತಿ, ನೀತಿ, ಸಿದ್ಧಾಂತಗಳು ಇಂದಿಗೂ ಚಾಲ್ತಿಯಲ್ಲಿರುವುದನ್ನು ಕಂಡಾಗ ನನ್ನ ಮನಸ್ಸು ಹೇಳುತ್ತದೆ- ‘ಬಾಪು, ನೀವು ಎಂದೆಂದಿಗೂ ಅಮರ.’
ಪ್ರಿಯ ಬಾಪುವಿಗೊಂದು ಪತ್ರ Read Post »
ಪತ್ರಕರ್ತ ಗಾಂಧೀಜಿ
ಪತ್ರಿಕೋದ್ಯಮ ನನಗೆ ಶಿಕ್ಷಣ ಇದ್ದಂತೆ. ನನ್ನೊಳಗೆ ಇಣುಕಿ ನೋಡಿ ನನ್ನ ದೌರ್ಬಲ್ಯಗಳನ್ನು ಕಂಡುಕೊಳ್ಳುವುದು ಸಾಧ್ಯವಾಗುತ್ತದೆ. ಚುರುಕಾದ ಪದಪ್ರಯೋಗ, ಕಠಿಣ ವಿಶೇಷಣ ಬಳಸಬೇಕೆಂದು ನನ್ನ ಕೋಪ ಹಾಗೂ ಪ್ರತಿಷ್ಠೆ ಆಜ್ಞಾಪಿಸುತ್ತದೆ. ಕಳೆಯನ್ನೆಲ್ಲಾ ಕಿತ್ತುಹಾಕಲು ಬರವಣಿಗೆ ಒಂದು ಸಾಧನ ಎನ್ನುತ್ತಿದ್ದ ಗಾಂಧೀಜಿ ಒಬ್ಬ ಮಹಾಗದ್ಯ ಶಿಲ್ಪಿ
ಶಾಸ್ತ್ರೀಜಿ ಎಂಬ ಧ್ರುವ ತಾರೆಯ ನೆನಪಿನಲ್ಲಿ…
ಸಾದಾರಣ ರೂಪು, ಸಾದಾರಣ ಉಡುಪಿನ, ಕುಳ್ಳಗಿನ ಆಕಾರದ ದೇಶದ ಪ್ರಧಾನಿಯೆನಿಸಿದ ವ್ಯಕ್ತಿಯೊಬ್ಬರೂ ತುಸು ದುಗುಡದಿಂದ ಮನೆಯಲ್ಲಿ ಅತ್ತಿಂದಿತ್ತ ಓಡಾಡುತ್ತಿದ್ದಾರೆ. ಅವರ ಮನದಲ್ಲಿ ನೂರಾರು ಚಿಂತೆಗಳಿವೆ. ‘ ಹತ್ಯಾರೋಂ ಕಾ ಜವಾಬ್, ಹತ್ಯಾರೋಂಸೆ ದೇಂಗೆ..
ಶಾಸ್ತ್ರೀಜಿ ಎಂಬ ಧ್ರುವ ತಾರೆಯ ನೆನಪಿನಲ್ಲಿ… Read Post »
ಗಾಂಧಿ ಜಯಂತಿ ವಿಶೇಷ ಮಗುವಾಗಿ ಬಿಟ್ಟ ಗಾಂಧಿ ಅಜ್ಜನ ಫೋಟೋ ಅಲ್ಲಿಇಟ್ಟಿದ್ರಪ್ಪ ಹಾಗೆಹೂಗಳ ಮಾಲೆ ಎಲ್ಲ ತಂದುತುಂಬಿದ್ರಪ್ಪ ಹೀಗೆ ಹಣ್ಣು ಬೆಲ್ಲ ಇಟ್ಟಿದ್ರಲ್ಲಿಘಮ ಘಮ ಕಡ್ಡಿಯ ಕಂಪುಪುಟ್ಟ ಹಾಗೇ ನೋಡ್ತಾ ಇದ್ದಹತ್ತಿತು ಅವನಿಗೆ ಜೊಂಪು ಹಣ್ಣು ಹೂವು ಯಾವುದು ಮುಟ್ಟದೆಗಾಂಧಿ ತಾತ ಬಂದಪುಟ್ಟನ ಹತ್ತಿರ ಏನೋ ಹೇಳುತಬಾರೋ ಜೊತೆಯಲಿ ಎಂದ ತಾತನ ನಡಿಗೆ ಎಷ್ಟು ಜೋರುಪುಟ್ಟುಗೆ ಓಡುವ ಆಟಅನಾತ ಅಜ್ಜಿಯ ಜೋಪಡಿ ಹೊಕ್ಕುಕುಡಿದನು ನೀರಿನ ಲೋಟ ಅಲ್ಲಿಂದಿಲ್ಲಿಗು ಕೇಳುತ ಬಂದಗಿಡಗಳ ಬೆಳೆಸಿಲ್ಲೇನುಹೀಗೇ ಗಿಡಗಳ ಕಡಿಯುತ ಉಳಿದರೆನರಕವ ಕಟ್ಟುವ ಪ್ಲ್ಯಾನು ತಟ್ಟನೆ ಪುಟ್ಟುವ ನಿಲ್ಲಿಸಿ ಗಾಂಧಿಹೊರಟೇ ಬಿಟ್ಟ ಅತ್ತಕೆಸರಲಿ ಬಿದ್ದ ನಾಯಿಯ ಎತ್ತಿಬಿಸ್ಕೀಟ ಎರಡು ಇತ್ತ ಅಯ್ಯೋ ಅಯ್ಯೋ ಎಷ್ಟು ಹೊಲಸುಕಸದ ಗುಂಡಿ ರಸ್ತೆಕಸವನು ಹೆರಕಲು ಹೊರಟೇ ಬಿಟ್ಟಪುಟ್ಟನ ನಿಲ್ಲಿಸಿ ಮತ್ತೆ ಶಾಲೆಯ ವರೆಗೂ ಬಂದಿದ್ದಾಯ್ತುಹೋದ ಎಲ್ಲಿ ಈತಮಕ್ಕಳು ನೆಟ್ಟ ಗಿಡಗಳ ಮಧ್ಯಬಿಳಿಯ ಉಡುಗೆಯ ತಾತ ಮಕ್ಕಳ ಪ್ರೀತಿಯ ಗುರುಗಳು ಬಂದ್ರುಮಕ್ಕಳೇ ಅವರ ನೀತಿತಾತನೂ ಈಗ ಮಗುವಾಗಿ ಬಿಟ್ಟಅವನಿಗೂ ಅದುವೇ ಪ್ರೀತಿ. —————— ತಮ್ಮಣ್ಣ ಬೀಗಾರ.







