ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಅಮೃತ ಎಂ ಡಿ ಕಣ್ಮುಚ್ಚಿ ನೋವುಗಳನ್ನೇ ಸಹಿಸಿಕೊಳ್ಳುವೆ ಗೆಳೆಯ ನಿನ್ನ ಹೆಸರಲ್ಲಿ ನನ್ನಯ ಉಸಿರುಂಟು ಗೆಳೆಯ ಆಗಾಗ ಉಸಿರಾಡೋ ಗಾಳಿಯಲ್ಲಿ ನಿನ್ನಯ ಹೆಸರನ್ನೇ ಹುಡುಕುವ ಹುಚ್ಚಾಟದ ಅತಿರೇಕವುಂಟು ಗೆಳೆಯ ಶ್ರೀಗಂಧದ ಘಮಲು ಕೂಡ ಪೈಪೋಟಿ ನೀಡುತ್ತಿರುವಾಗ ಚಂದದ ಮೋರೆಗೆ ಎಲ್ಲಿಲ್ಲದ ಅಂದವುಂಟು ಗೆಳೆಯ ನಿನ್ನೊಲವ ನೆರಳಲ್ಲಿ ಮುಳ್ಳು ಹಾದಿಯು ಕೂಡ ಹೂವಿನ ಹಾಸಿಗೆ ಆಗುವುದೆಂಬ ಆಸೆವುಂಟು ಗೆಳೆಯ “ಅಮ್ಮು”ವಿನ ಸಂತೋಷದ ಪರಿಛಾಯೆಯು ನಿನ್ನ ಸಂಪ್ರೀತಿಯ ಸಾಂಗತ್ಯದಲ್ಲೇ ಉಂಟು ಗೆಳೆಯ ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೊಗಸೆಯೊಳಗಿನ ಬಿಂದು ಎನ್. ಶೈಲಜಾ ಹಾಸನ ಬಿಟ್ಟು ಬಿಡು ಗೆಳೆಯನನ್ನಷ್ಟಕ್ಕೆ ನನ್ನರೆಕ್ಕೆ ಹರಿದ ಹಕ್ಕಿಹಾರಿಹೋಗುವುದೆಲ್ಲಿಇಷ್ಟಿಷ್ಟೆ ಕುಪ್ಪಳಿಸಿಅಲ್ಲಲ್ಲೆ ಅಡ್ಡಾಡಿನಿನ್ನ ಕಣ್ಗಾವಲಲ್ಲಿಯೇಸುತ್ತಿ ಸುಳಿದುಒಂದಿಷ್ಟೆ ಸ್ವಚ್ಛಗಾಳಿಸೋಕಿದಾ ಕ್ಷಣಧನ್ಯತೆಯ ಪುಳಕತಣ್ಣನೆಯ ನಡುಕಎದೆಯ ತಿದಿಯೊಳಗೆನೀನೇ ಒತ್ತಿದ ಕಾವುಭಾವನೆಗಳ ಬೇಯಿಸಿಮನವೀಗ ಚಿತೆಯೊಳಗೆಬೆಂದ ಕುಂಭಬಿಟ್ಟರೂ ಬಿಡಲಾರೆಎನುವ ಮಾಯೆಅಟ್ಟಾಡಿಸುತ್ತಿದೆಗೆಲುವಿನ ಹಾದಿಯನೀನೇ ಹಾರ ಬಿಟ್ಟರೂರೆಕ್ಕೆ ಇಲ್ಲದ ನಾನುಮತ್ತೇ ನಿನ್ನ ಉಡಿಗೆಬೊಗಸೆಯೊಳಗಿನ ಬಿಂದುಮುಷ್ಠಿಯೊಳಗೆ ಆವಿಎತ್ತತ್ತ ಸರಿದರೂಮತ್ತೆ ಅಲ್ಲಿಗೇಪಯಣದ ಹಾದಿದೂರ ದೂರಕೆ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಅರಿಯದ ಹಾಡು ಡಾ.ವೈ.ಎಂ.ಯಾಕೊಳ್ಳಿ ಗಜದಾಲಯದಲಿ ಮೂಡಿದ ಸುಂದರ ರಾಗ. ತೇಲಿ ಬಂದಿತು ಅಂತಪುರದ ಹಂಸತೂಲಿಕದೊಳಗೆ ಬಗೆಯಿತು ರಾಣಿಯ ಎದೆಯನು ಯಾರಿಗೂ ತಿಳಿಯದ ಹಾಗೆ ತಡೆಯಲೇ ಇಲ್ಲ ಕಾವಲುಭಟರ ಸಾವಿರ ಕಾಲಾಳುಗಳ ಪಡೆ ಕೊಟ್ಟಳು ಮನವನು ಎಂದೂ ನೋಡದ ದನಿಗೆ ಮನವನು ಬಗೆದ ರಾಗವ ಬೆನ್ನತ್ತಿ ಹೊರಟೇ ಬಿಟ್ಟಿತು ನಿಲ್ಲದೆ ಎರಡು ಗಳಿಗೆ ಲೋಕದ ವಿಕಾರ ಧರಿಸಿತ್ತು ಮಾನವನ ಆಕಾರ, ಎಲ್ಲಿದೆ ವಿವೇಚನೆ ಒಲಿದ ಎದೆಗೆ ತಡಮಾಡದೇ ಕೊಟ್ಟಿತು ದಾನ ಹೃದಯವ ಮಾವುತನ ಎದೆಯೊಸಗೆಗೆ ಆಹಾ !ಲೋಕದ‌ ಕಣ್ಣಿಗೆ ಅಪಾತ್ರ ದಾನ! ಹೇಳುವರಾರು,ಕೇಳುವರಾರು ನಡೆದೆ ಬಿಟ್ಟಿತುಪ್ರೇಮದಯಾಣ ಕಣ್ಣು‌ಮುಚ್ಚಿ,,ಕಣ್ಣು ತಪ್ಪಿಸಿ ಸಿದ್ಧವಾಯಿತು ಇತಿಹಾಸದಿ ದೊರಕದ‌ ಪುಟವೊಂದು ಲೋಕವೆ ಕರುಬುವ ಗಂಡ, ರಾಣಿಯ ಪಟ್ಟ ಎಲ್ಲವೂ ಆಯಿತು ಕಾಲಿನ ಕಸ ಬದಗನ ಎದೆಯೆ ಆಯಿತು ಸ್ವರ್ಗ ಕಾಣಲೇ ಇಲ್ಲ ಧರ್ಮ ,ಸಮಾಜ ಒಲಿಯದ ಗಂಡನು ಎಸೆದ ಕುಸುಮ‌ ಮಾಡಿತು‌ ಮಾಯದ ಗಾಯ, ಆನೆಯ ಚಬಕದ ಹೊಡೆತ ಬಾಧಿಸಲಿಲ್ಲ ರಾಣಿಯ ಮೈಗೆ ಅಂದಿನದೊಂದೇ ಕಥೆಯೆ ಇದು! ನಡೆದಿದೆ ಎಂದಿಗೂ ಹೀಗೆ , ಆಡುವ ಬಾಯಿಗಳು ಆಡಿಕೊಳ್ಳುತಲೇ ಇವೆ ಕೇಳದೆ ನಡೆದಿವೆ ಅಮೃತಮತಿ ಬದಗರ‌ ಬೆಸುಗೆ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತುಂಟ ಮೋಡವೊಂದು ಫಾಲ್ಗುಣ ಗೌಡ ಅಚವೆ ಎಲ್ಲಿಂದಲೋ ಹಾರಿಬಂದ ತುಂಟ ಮೋಡವೊಂದು  ನನ್ನೆದೆಗೆ ಬಂದುತನ್ನೊಳಗಿನ ಹನಿ ಹನಿಇಬ್ಬನಿಗರೆಯಿತು ಅಂಗಳದ ಸಂಜೆ ಗತ್ತಲುಬೆರಗುಗಣ್ಣಿನ ಚುಕ್ಕೆಗಳುಅಗಾಧ ನೀಲಾಕಾಶಹಿಮಕಣಗಳ ಹೊತ್ತು ತಂದ ಗಾಳಿನನ್ನ ತೆಕ್ಕೆಯಿಂದ ಹೊರಬಿದ್ದವು ಆ ಬೆಳ್ಳಿ ಮೋಡ ಬಂದದ್ದೇ ತಡ:ಎದೆಯ ತುಂಬೆಲ್ಲನಾದದ ನವನೀತವಾಗಿನೀರವ ಮೌನದ ಮಜಲುಗಳುಶಬ್ದವಾಗಿಸಾಲು ಬೆಳ್ಳಕ್ಕಿಗಳಾದವು ತಿಳಿ ನೀರ ಸರೋವರದ ಆವಿಯೋಕಡಲ ಅಲೆ ಮಿಂಚಿನಹಿತ ನೋವ ಸ್ಪರ್ಶವೋಗಾಳಿ ಮರದ ಮೌನಭಾಷೆಯಇನಿದನಿಗೆ ದಂಗಾಗಿದಿಗಂತಕ್ಕಾಗಿ ಕಾದುಕುಳಿತದಂಡೆಯೋಏನೂ ಹೊಳೆಯಲಿಲ್ಲ ನನ್ನ ಏಕಾಂತವನ್ನು ಹಾದಆ ತುಂಟ ಮೋಡನೋಡ ನೋಡುತ್ತಿದ್ದಂತೆನಕ್ಷತ್ರಗಳಲ್ಲಡಗಿದ ಮಿಂಚಂತೆಮೈ ತುಂಬಿಬಂದುಅಕ್ಷರದಲ್ಲಡಗಿತು! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗತ್ತಿನ ಭಾಷೆ ಗೊತ್ತಿಲ್ಲ ಮಧುಸೂದನ ಮದ್ದೂರು ಅಳುವ ಮುಗಿಲಿನಿಂದ ಕಣ್ಣೀರ ಕಡವ ಪಡೆದು ಭೋರ್ಗೆರೆವ ಕಡಲ ಮೇಲೆ ಯಾತನೆಯ ಯಾನ ಬಯಸಿದ್ದೇನೆ.. ನಿನ್ನ ನೆನಪು ಮಾಸಿ ಸೋಲುಗಳು ಗೆಲುವುಗಳಾಗಲೆಂಬ ಬಯಕೆಯಿಂದಲೂ ಭ್ರಮೆಯಿಂದಲೂ…. ನಗೆಯ ಕೋಟೆಗೆ ಲಗ್ಗೆಯಿಟ್ಟು ಅಳುವ ಆಳೋ ಸಂತಸದ ತೇರನ್ನೇರಿ ಮೈ ಮರೆತ್ತಿದ್ದೇನೆ.. ನಿನ್ನ ಒನಪು ಕಾಡದಿರಲೆಂಬ ಜಂಭದಿಂದಲೂ ಆತಂಕದಿಂದಲೂ… ಬಯಕೆ ಭ್ರಾಂತಿಯಾಗುವುದೋ ಜಂಭ ಕರಗಿ ನಿನ್ನೆದೆಗೆ ಒರಗುವನೋ ಗೊತ್ತಾಗುತ್ತಿಲ್ಲ.. ಕಾರಣ ಹೃದಯಕೆ ಗತ್ತಿನ ಭಾಷೆ ಗೊತ್ತಿಲ್ಲವಲ್ಲ.. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ದೇದೀಪ್ಯಮಾನ ರೇಶ್ಮಾ ಗುಳೇದಗುಡ್ಡಾಕರ್ ಎಲ್ಲ ಕಳೆದುಕೊಂಡೆ ಎಂದುಗೀಳಿಟ್ಟವು ಸುತ್ತಲಿನ ಜನಮನಗಳುಮನದಲ್ಲೆ ನಕ್ಕು ಮಾತಿಗಾಗಿಅನುಕಂಪ ತೂರಿದವರೆಷ್ಟೊ…ನನ್ನದಲ್ಲದ ವಸ್ತುಗಳಿಗೆಬೆಲೆಕಟ್ಟಿ ಮುನಿದವರೆಷ್ಟೋ..!! ಇವುಗಳ ಮಧ್ಯೆ ನನ್ನಲ್ಲಿಎನೀಲ್ಲ ಎಂದರೊ ಮಡುಗಟ್ಟಿಎದೆಯಾಳದಲಿ ಹುದುಗಿಸಣ್ಣ ಸದ್ದು ಮಾಡುತ್ತಿತ್ತು “ನನ್ನತನ “ದೇಹ ಮಾಗಿ ,ಬದುಕು ಬೆಂದರೂಪರಿಪಕ್ವವಾಗಿ ನನ್ನೇ ಬಿಗಿದಪ್ಪಿ ಸಂತೈಸುತ ಒಳಗಣ್ಣ ತೆರಸುತ ಭರವಸೆಯಲೋಕಕ್ಕೆ ಲಗ್ಗೆ ಇಟ್ಟುಭಾವನೆಗಳ ಸಂಘರ್ಷಕೆ ಉದ್ವೇಗ ಗಳಅರ್ತನಾದಕೆ ಮೌನ ಸವಿ ಸಾಗರವಉಡುಗೂರೆ ನೀಡಿ ಜೀವನದ ಪ್ರೀತಿಯಕಲಿಸಿ ಉತ್ಸಹಾದ ಬುಗ್ಗೆಯ ಹರಿಸಿತುಕಳೆದುಕೊಂಡಷ್ಟು ಬದುಕಿನಲ್ಲಿಪಡೆಯುವದು ಅಗಾಧ ಬದ್ದತೆಭರವಸೆಯ ಕಿರಣ ದೇದೀಪ್ಯಮಾನವಾಯಿತು …. *******  

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಾಮರಸ್ಯ ನೆನಪಾಗುತ್ತಾರೆ ಈದ್ ದಿನ ಬಾನು,ಅಹ್ಮದರು ಯುಗಾದಿ ದೀಪಾವಳಿಗೆ ಶುಭ ಕೋರುವ ಇವರು ಅಳುವಲ್ಲಿ ನಗುವಲ್ಲಿ ಒಂದಾಗುವ ನಾವು ಕಾಣುವ ಕನಸುಗಳಿಗೆ ಬಿಳಿಹಸಿರುಕೇಸರಿ ಎಂಬ ಭೇದವಿಲ್ಲ ಅಂತರಂಗದ ಮಿಡಿತ ನಮ್ಮದು ವೇಷ-ಭೂಷ, ಆಚಾರ-ವಿಚಾರಗಳಿಲ್ಲದ ನಮ್ಮ ಸ್ನೇಹ ತೊಟ್ಟಿದೆ ಸಾಮರಸ್ಯದ ಅಂಗಿಯನ್ನು ಇಣುಕಲಾರವು ಜಾತಿ ಮತ ಧರ್ಮಗಳು ಹೆಡೆಮುರಿ ಕಟ್ಟಿಕೊಂಡು ಬಿದ್ದಿರುತ್ತವೆ ಅವು. ***** ಗೌರಿ.ಚಂದ್ರಕೇಸರಿ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಭಾವ ಬಂಧುರ ರೇಮಾಸಂ ಬಂಧುರದ ಭಾವದಲಿ ಬಿದ್ದಿರುವೆ ನಲ್ಲ, ಬಿಡದೆ ಮನದಿ ನಿನ್ನ ಸಾಯುವ ಮಾತೇಕೆ ? ಇರುವೆ ನಾ ನಿನ್ನುಸಿರಲಿ ಹಠ ಮಾಡದಿರು ಸಖ ಮುನಿಸಿನಲಿ/ ನಾನಿರುವೆ ಕರ್ಮದ ಪಥದಲಿ ಗೊತ್ತೇನು ಒಲವೇ//ಪ// ಸಂತೈಸಿದ ಎನ್ನ ಮನಕೆ ಮುಗಿದಿಲ್ಲ ಬಾಳು / ಕಂಡ ಕಣ್ಣ ಕನಸು ಆಗುವದೇ ಗೋಳು/ ಬರಡಾಗಲು ಮನಸು ನಿನದಲ್ಲ ಮರುಳೇ/ ಬಾ ಎನಲು ನಾ ಹೋಗಿರುವೆನೇನು ನಿನ್ನಲ್ಲೇ ಇರುವೆನು ಗೊತ್ತೇನು ಒಲವೇ// ನೀನೇಕೆ ಬಡಪಾಪಿ ಜೀವನಕೆ ಚೇತನವಾಗಿರುವೆ/ ಎನ್ನ ಹೃದಯವಿದೆ ನಿನ್ನಲ್ಲೇ ಕಾಯವ ಕಾಯದಿರು ಕಲ್ಪವೇ/ ಕಂದಕ ಮಾತಿನ ಕ್ಷಮೆಯೇಕೆ, ಕಾಣುವ ಕನಸಿಗೆ ಸಾವಿನ ಮಾತೇಕೆ / ನಾ,ನೀನಾಗಿರುವೆನು ಗೊತ್ತೇನು ಒಲವೇ// ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೀಗೊಂದು ಕವಿತೆ ಎಸ್ ನಾಗಶ್ರೀ ಹೀಗೆ ಬಿರುಸುಮಳೆಯಲ್ಲೇ ಒಮ್ಮೊಮ್ಮೆ ಗೆಳೆತನಗಳು ಗಾಢವಾಗುವುದು ಬೇಡಬೇಡವೆಂದರೂ ಹುಣಸೆಮರದಡಿಯಲಿ ನಿಂತು ಗುಡುಗು ಸಿಡಿಲಿಗೆ ಬೆಚ್ಚುತ್ತಾ ಬಿದ್ದ ಕಾಯಿಗಳ ಕಣ್ಣಲ್ಲೇ ಭಾಗಮಾಡುತ್ತಾ ನಿನ್ನೆಯೊಂದು ಇತ್ತು ನಾಳೆ ಬರುವುದು ಇಂದು ಅರ್ಧ ಮುಗಿದಿದೆಯೆಂಬ ಯಾವ ಕುರುಹೂ ಕಾಣದಂತೆ ಮುಗಿಲಿನ ಮಾತಿಗೆ ಭುವಿ ಕಿವಿಯಾನಿಸಿ ಮತ್ತೆ ಮತ್ತೆ ಅರೆಶಬ್ದಗಳಲಿ ಉತ್ತರಿಸುವುದ ನೋಡುವುದೂ ಜೀವಮಾನದ ಅನುಭವ ಹಾಗೆ ಒಂದೊಮ್ಮೆ ಬಿರುಮಳೆಯಲ್ಲಿ ಸಿಕ್ಕ ಗೆಳತಿ ಇನ್ನು ಹತ್ತು ವರ್ಷಕ್ಕೆ ನೇಣು ಬಿಗಿದುಕೊಂಡಳು ಒಡಲಲ್ಲಿ ಐದು ತಿಂಗಳ ಹಸುಗೂಸು ಎಷ್ಟು ಪ್ರೇಮ ಕವನ ಮಳೆಯ ಸೌಂದರ್ಯದ ಕವಿತೆ ಬರೆಯಲು ಕೂತರೂ ಆಗಾಗ ವಹಿಗೆ ಸಿಕ್ಕು ಕವಿತೆಯೇ ಕೊಲೆಯಾಗುತ್ತದೆ ಮಳೆಯೇ ಪ್ರಥಮವರದಿಗಾರನು ನಾನು ಏನೆಂದು ಶುಭ್ರ ಆಗಸ ಮೂಡುವವರೆಗೂ ಕಾದು ಕಾದು ಕಾಫಿ ಹೀರುತ್ತೇನೆ. *********

ಕಾವ್ಯಯಾನ Read Post »

ಕಾವ್ಯಯಾನ, ವಾರದ ಕವಿತೆ

ವಾರದ ಕವಿತೆ

ಹೆಸರಿಲ್ಲದ ಕವಿತೆ ಸ್ಮಿತಾಅಮೃತರಾಜ್. ಸಂಪಾಜೆ ಹೆಸರಿಲ್ಲದ ಕವಿತೆ ನಾನು ಹಠಕ್ಕೆ ಬಿದ್ದವಳಂತೆ ತಾಳ್ಮೆಯಿಂದ ಕಾಯುತ್ತಲೇ ಇದ್ದೇನೆ ಹಾಗೇ ಬಂದು ಹೀಗೇ ಹೋದ ಕವಿತೆಯನ್ನೊಮ್ಮೆ ಎಳೆದು ತಂದೇ ತೀರುವೆನೆಂಬಂತೆ. ಗೊತ್ತಿದೆ, ಬಲವಾದ ಕಾರಣವಿಲ್ಲದೆ ಕವಿತೆ ಕಾಣೆಯಾಗುವುದಿಲ್ಲ. ಅಥವಾ ಮತ್ಯಾವುದೋ ಗಳಿಗೆ ಸದ್ದಿಲ್ಲದೇ ಪಕ್ಕಕ್ಕೆ ಬಂದು ಆತುಕೊಳ್ಳುವ ಅದರ ಆತುರಕ್ಕೆ ಅವಸರ ಸಲ್ಲವೆಂಬುದೂ.. ಕಾಡಿದ್ದು ಒತ್ತರಿಸಿ ಬಂದು ಯಾವುದೋ ಒಂದು ಕ್ಷಣದಲ್ಲಿ ಪದಗಳಾಗಿದ್ದಕ್ಕೆ.. ನಿನಗೆ ಪದ್ಯ ಹೊಸೆಯುವುದೊಂದೇ ಕೆಲಸವಾ? ನಮಗೆ ನೋಡು ಓದೋಕ್ಕಾದರೂ ಪುರುಸೊತ್ತು ಬೇಡವಾ? ಪಾಪ! ಹೌದಲ್ವಾ! ಅವರ ನಿರ್ಭಾವುಕ ಪ್ರಶ್ನೆಗೆ ಕವಿತೆಯೂ ಬೆಚ್ಚುತ್ತಿದೆ. ಈಗೀಗಲಂತೂ ನಮ್ಮೂರ ಹಸಿರ ಕಡೆಗೆ ಎಲ್ಲರ ಕಣ್ಣು . ಕವಿತೆ ಅದಕ್ಕೆ ಇಲ್ಲೇ ಬೇರು ಬಿಟ್ಟಿದೆ ಅಂತ ತಾರೀಫು ಬೇರೆ. ಬೀಜ ಬಿತ್ತಿ, ಮೊಳಕೆ ಚಿಮ್ಮಿ, ರೆಕ್ಕೆ ಹಾಯುವವರೆಗೂ ನಮ್ಮ ಕಣ್ಣನ್ನೇ ಕಾವಲಿಗಿಟ್ಟದ್ದರ ಕುರಿತು ಅವರಿಗೆ ಕುತೂಹಲವೇ ಇಲ್ಲ. ಹಸಿರು ಫಲಬಿಡಲು ಗೊಬ್ಬರವೂಡದಿದ್ದರೆ ನಡೆದೀತೇ? ಇವತ್ತೂ ಅಷ್ಟೆ, ಹತ್ತಾಳು ಕೆಲಸಕ್ಕೆ ಸಂಬಳ ಕಡಿಮೆ; ಕೆಲಸ ಜಾಸ್ತಿ ಹೆಂಗಳೆಯರೇ ಸೈ ಅಂತ ಒಳಗಿನ ಮಾತು ಹೊರಕ್ಕೆ ಬರುವುದಿಲ್ಲ. ಬೆಳಗಿನೊಂದಾರ‍್ತಿಯದ್ದು ಲಗುಬಗೆಯಲಿ ಮುಗಿಸಿ ಈಗ ಮಧ್ಯಾಹ್ನಕ್ಕೆ ಏದುಸಿರಿನ ತಯಾರಿ ದೊಡ್ಡ ಹಂಡೆಯ ನೀರು ಬಿಸಿಯಾಗುತ್ತಿದೆ ಒಲೆ ಉರಿ ಹೆಚ್ಚುತ್ತಿದೆ ಅಕ್ಕಿ ಕುದಿ ಹತ್ತುತ್ತಿದೆ. ಹೊರಗಿನ ತುರ್ತು; ಒಳಗಿನ ಒತ್ತಡಕ್ಕೆ ಒಗ್ಗಿಕೊಳ್ಳುತ್ತಲೇ ಹದಗೊಳ್ಳುತ್ತಿದೆ ಧ್ಯಾನ. ಎರಡರ ಕುದಿ ಒಳಕ್ಕಿಳಿದಾಗ ಆಳದಿಂದ ಮುಗುಳೊಡೆಯುತ್ತಿದೆ ಹೆಸರಿಲ್ಲದ ಹೊಸತೊಂದು ಭಾವ. ಅಕಾ! ಹೊತ್ತು ಗೊತ್ತು ಬೇಡವಾ? ಕವಿತೆ ಈ ಹೊತ್ತಲ್ಲದ ಹೊತ್ತಿನಲ್ಲಿ ಹೀಗೆ ಬಂದು ಕೂಡುವುದಾ?!.

ವಾರದ ಕವಿತೆ Read Post »

You cannot copy content of this page

Scroll to Top