ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗೋಡೆಯ ಮೇಲಾಡುವ ಚಿತ್ರ ಬಿದಲೋಟಿ ರಂಗನಾಥ್ ಒಳಬರಲಾದ ಬಾಗಿಲಲ್ಲಿಕಾದು ಕುಳಿತು ನಿನ್ನ ಪ್ರೀತಿಗೊಸ್ಕರ ಹಸಿದೆಚಂದಿರನ ಅಷ್ಟೂ ಬೆಳಕು ನಿನ್ನ ಕಣ್ಣಲ್ಲಿತ್ತುನೀನು ಪಾದಗಳು ನೆಲ ಸೋಕುವುದು ಬೇಡವೆಂದುರಂಗೋಲಿ ಬರೆದು ಕೂತೆ ಮುಗುಳು ನಗೆ ಮೆತ್ತಿರಂಗೋಲಿಗೂ ಕಣ್ಣು ಕಿವಿ ಎಲ್ಲಾ ಮೂಡಿದವು ನೀನು ಮಾತ್ರ ಬರಲಿಲ್ಲ ಗೋಡೆ ನೋಡುತ್ತಾ ಕೂತವನಿಗೆಅದರ ಮೇಲಾಡುವ ಚಿತ್ರ ಕರೆದಂತಾಯಿತುಅರೆ ! ಅವಳೇ ಅಲ್ಲವೆ ?ನನ್ನ ಚಿತ್ತಾರದ ಗೊಂಬೆಇಲ್ಲಿಗೂ ಬಂದಳೇ ?ಇಲ್ಲ ನಾನೇ ಅಲ್ಲಿಗೆ ಹೋದೆನೆ ?ಕಣ್ಣುಜ್ಜಿಕೊಂಡು ಮತ್ತೆ ಮತ್ತೆ ನೋಡಿದೆನವಿಲು ರೆಕ್ಕೆಬಿಚ್ಚಿ ನರ್ತಿಸುವಂತೆಗೋಡೆಯ ಮೇಲಿನ ಚಿತ್ರ ! ತುಟಿಯ ಮೇಲಿನ ಮೃದು ಮಾತುಸಣ್ಣಗೆ ಕೇಳಿಸುತ್ತಿದೆಆ ಚೆಲುವಿನ ನಗ್ನತೆಯಲಿ ದೇವರಿದ್ದಾನೆಬಾಹುಗಳು ಮುಂದೆ ಚಾಚುತ್ತಿವೆಮುಟ್ಟಲು ಹೋದರೆಬೆರಳಿಗಂಟಿದ ಸುಣ್ಣದ ಗುರುತು ! ಎಷ್ಟು ಚೆಂದ !ಕಡಲಿಗೆ ಕಣ್ಣಾಗಿ ಬೆಳಕಾದವಳ ಬಣ್ಣಮೌನದ ತುಟಿಗಳ ನಡುವೆಅಡಗಿದ ಜಗದ ರಹಸ್ಯನನ್ನೆಲ್ಲಾ ವಾಂಛೆಗಳನ್ನು ಹೀರಿಕನ್ನಡಿಗೆ ಮೆತ್ತಿದಳು ಕರುಳು ಕಲೆತ ಆ ಊರಲ್ಲಿಅವಳ ಗೆಜ್ಜೆ ಸದ್ದು ಕೇಳುತ್ತಿದೆನೀಳ ಕೇಶರಾಶಿಯ ತೂಕ ನನ್ನ ಬೆನ್ನ ಸವರುತ್ತಿದೆಕಣ್ಣಲ್ಲೇ ಬರೆದ ಪ್ರೇಮ ಪತ್ರಹೃದಯವ ತಬ್ಬಿದೆ ಮೂಗಿನ ತುದಿಯ ಪ್ರೀತಿಗೆಅವಳ ಮೂಗು ನತ್ತು ಮಿಂಚುತ್ತಿದೆಗೋಡೆಯೇ ಅವಳಾಗಿದ್ದಾಳೆಇಡೀ ಸೀರೆಯೊಳಗೆ ನನ್ನದೇ ಭಾವ ಚಿತ್ರ ! ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಾತಿನಲಿ ಮೌನೋತ್ಸವ ಡಾ. ಅಜಿತ್ ಹರೀಶಿ ಮಾತುಗಳ ಸಮ್ಮಿಲನಜನ್ಮಾಂತರದ‌ ಗೆಳೆತನಸಮ್ಮತಿಸಿ ಧ್ಯಾನಿಸಿದ ಮೌನಸರಸದ ನಿನ್ನ ಮಾತಿನಲಿ ಜತನ ಮಾತಿನ ಮುಗ್ಧತೆ ನೀರಸಮನದ ಜ್ಞಾನ ಪಾದರಸನೀ ಮಾತೊಳು ತರುವಕಲೆಯ, ಮೌನದಿ ಪಡೆದವ ನಾ ಹತ್ತಿಕ್ಕಿ ಬಚ್ಚಿಟ್ಟ ಮಾತುಮೌನದ ಮಣಿ ಪೋಣಿಸದುಉಕ್ಕುಕ್ಕಿ ಹರಿವ ನನ್ನ ಮಾತುಚಂದದ‌ ಹಾರವಾಗಿಸದು ನನ್ನ ಗತ್ತಿನ ಭಾವ ತಂದಿತ್ತುನನಗೆ ಗೊತ್ತು ಎಂಬ ಗಮ್ಮತ್ತುತಿಳಿಯದೆ ನಾ ಆಡಿದರೂಮೌನದಲೇ ದಂಡಿಸದಿರು ಧರಿಸಿ ಧರಿತ್ರಿಯಾದೆ ನೀನುಪಾದಕ್ಕೆರಗಿ ಸೇವೆಗೈವೆ ನಾನುಕ್ಷಮಿಸು ಭರಿಸು ನನ್ನ ಮಾತನುಶೇಖರಿಸಿ ನಿನ್ನ ಮೌನವನು ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸ೦ಜೆ ಇಳಿಬಿಸಿಲು ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಎಷ್ಟು ಚೆ೦ದ ವಿದ್ದೆಯೇ ನೀನು,ಓರೆ ಬೈತಲೆಯವಳೆ, ಮಲ್ಲಿಗೆಯ ಮುಡಿದವಳೆಲ೦ಗ ದಾವಣಿಯಲ್ಲಿ ನಲಿದಾಡಿದವಳೆ,ಪಡಸಾಲೆಯಲಿ ಓಡಿ ಬ೦ದುಧಿಕ್ಕಿಯ ಹೊಡೆದು ಗಾಭರಿಯ ನೋಟದಲಿಪ್ರೇಮದೆಸಳುಗಳನೆಸೆದು ಓಡಿ ಹೋದವಳೆ! ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಕೆರೆಯ ಏರಿಯ ಮೇಲೆ ಕುಳಿತಿದ್ದ ಆ ಸ೦ಜೆತಾವರೆಯ ಮೊಗ್ಗುಗಳ ತೋರಿಸುತನಿನ್ನ ಮೊಲೆಗಳ ಹಾಗೆ ಎ೦ದು ನಾನ೦ದಾಗಹುಸಿ ಕೋಪದಲಿ ನನ್ನ ನೂಕಿದವಳೆಕೆರೆಯ ನೀರಲಿ ಕೆಡವಿನನ್ನ ಬಟ್ಟೆಯ ಜತೆಗೇ ನನ್ನ ಮನಸನ್ನೂಒದ್ದೆ ಮಾಡಿದವಳೆ! ಈ ಸ೦ಜೆ ಇಳಿ ಬಿಸಿಲುಬಿಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ. ಜಡೆಯೆಳೆದು, ಬರಸೆಳೆದುಬ೦ಧಿಸಿರೆ ತೋಳಲ್ಲಿಕಣ್ಣೊಳಗೆ ಕಣ್ಣಿಟ್ಟುನನ್ನನೊಳಗೊ೦ಡವಳೆನನ್ನೆದೆಯ ಮರು ಭೂಮಿಯಲಿನಿನ್ನ ಹೆಜ್ಜೆಯ ಗುರುತುಬಿಟ್ಟು ನಡೆದವಳೆತ೦ಗಾಳಿಯಲಿ ಸೆರಗ ಪಟ ಪಟನೆ ಹಾರಿಸುತದೂರ ದೂರಕೆ ತೇಲಿ ಹೋದ ಕಿನ್ನರಿಯೆ! ಎಷ್ಟು ದೂರವೇ ನನ್ನ ನಿನ್ನ ನಡುವೆ! ಈ ಸ೦ಜೆ ಇಳಿ ಬಿಸಿಲುಬೀಸುತಿಹ ತ೦ಗಾಳಿಹೊತ್ತು ತ೦ದಿದೆನಿನ್ನ ನೆನಪ ನನ್ನೆದೆಗೆ!******** ಮೇಗರವಳ್ಳಿ ರಮೇಶ್

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

 ಯಾವತ್ತೂ ಅವರ ಕತೆಯೇ ಉಂಡೆಯಾ ಕೂಸೆ ಎಂದುಅವ್ವಗೆ ಕೇಳುವ ಆಸೆಅಡ್ಡಿ ಮಾಡುವುದದಕೆಅಪ್ಪನ ತೂತುಬಿದ್ದ ಕಿಸೆ ಅವರ ಒಲೆಯ ಮೇಲಿನ ಮಡಕೆಒಡೆದು ಹೋದುದು ಮುದ್ದೆ ಕೋಲಿನಕಾರಣಕ್ಕೇನಲ್ಲಎಸರಿಗೂ ನೀರ ಇಡಲಾರದ ಬರಡುನೋವಿಗೆ ಖಾಲಿ ಮಡಕೆಯೂಬಾಯ್ದೆರೆಯಿತು ನೋಡಲ್ಲ. ನೆಲೆ ನೀಡದ ಸೂರು, ಉರಿವಸೂರ್ಯನ ತೇರು, ಕೆಂಡದುಂಡೆಯಮೇಲೆಯೇ ನಡೆದರು ಅವರೆಲ್ಲ;ಉರಿ ಹಾದಿ ಬರಿಗಾಲಿಗೆ ಊರದಾರಿ ಮರೆಸಿತು, ಹರಿದ ಬೆವರುಕಣ್ತುಂಬಿ, ನೋಟ ಮಂಜಾಯಿತು ಇವನಾರವ ಇವನಾರವಎಂದವರೇ ಎಲ್ಲ ; ಇವ ನಮ್ಮವಅವ ನಮ್ಮವ ಎನ್ನಲ್ಲಿಲ್ಲ. ಕಷ್ಟಸಂಕಷ್ಟವಾಗಿ ಅವರನು ಕಾಡಿತಲ್ಲಕಾಯಕಜೀವಿಗೆ ಯಾವ ಯುಗದಲೂರಕ್ಷಣೆ ಸಿಗದಲ್ಲ.. ***** ವಸುಂದರಾ ಕದಲೂರು

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಏಕಾಂಗಿಯೊಬ್ಬನ ಏಕಾಂತ ಕಣ್ಣೀರು ಖಾಲಿಯಾಗುವುಂತೆತುಂಬಿಕೊಳ್ಳುತ್ತದೆ ಮತ್ತೆ ಮತ್ತೆಏಕಾಂತ ಖಾಲಿಯಾದರೂಏಕಾಂಗಿಯಾಗುವಂತೆಕಣ್ಣೀರು ಕೂಡ ನೀರಾಗುತ್ತದೆಅವಳ ಬಸಿದು ತಾನೇ ಉಳಿದಾಗ ಮೂರುಗಂಟಿನ ಆಚೆ ನೂರುಗಂಟುಗಳಾಚೆತೆರೆದುಕೊಂಡ ಹೊಸಲೋಕಕೆಪಕ್ಷಿಯ ರೆಕ್ಕೆಗಳ ಕಸುವಿನಂತೆಜಿಗಿದ ಕನಸುಗಳನೆಲ್ಲಾ ಗಂಟಿನೊಳಗೆಮನದೊಡೆಯನ ಸಂಗಾತಕೆಇಬ್ಬನಿಯ ಜೀವದಂತೆ ಕಾದುಕೂತವಳು ಅಲೆಯೊಡೆವ ರುಚಿ ತಂಗಾಳಿಗೆ ಸವರಿಕಾಮನ ಬಿಲ್ಲನು ಕಂಡವಳುತೆಂಡೆಯೊಡೆದ ಕಣ್ಣೀರ ಮಾತಿಗೆಗಾಳಿಯನೆ ಸೀಳಿ ಹೊರಟಾಗತಂಗಾಳಿಗೆ ಬಸಿರಾಗಿ ಕನಸುಗಳ ಹೆತ್ತವಳು ಅಕ್ಷರಕ್ಕೆ ಸಿಗದ ಅಕ್ಕರೆಯನುಲಿಪಿಮಾಡಿ ಅವನಿಗೆ ತಲುಪಿಸಲುಹಾರಿ ಹಾರಿ ನೆಲೆ ಕಾಣದೆ ಅಲೆಯುವಳುಆಗೊಮ್ಮೆ ಈಗೊಮ್ಮೆ ಟಿಸಿಲೊಂದು ಕಂಡಾಗಮುಂಗಾಲಿನಲೆ ಜೀವ ಹಿಡಿಯುವಳುನಂಬಿಕೆಯ ಮಾತು ಹೇಳಿದ ಆ ಮರಕೆಅವಳ ಹಳಹಳಿಕೆಗಳನು ಮಳೆಯಂತೆ ಸುರಿಸುವಳು ನಯವಾದ ಖತ್ತಿಗೆ ಮುತ್ತಿಟ್ಟು ಸಾಕಾಗಿದೆಬಂಜೆಯಾದ ಭರವಸೆಗಳ ಹೊತ್ತು ಸಾಕಾಗಿದೆಹೊಸದಾದ ಶ್ಯಬ್ಧ ಯಾರೇ ನುಡಿದರುಎದೆಯ ಸಾಗರದಲ್ಲಿ ತರಂಗಾಂತರಗಳುಮಿಡಿಯುವ ಮಾರ್ಮಲೆತವೇನಲ್ಲ !ಅವು ಭಯದ ಕಂಪನಗಳುನಾಡಿಯನು ನಿರ್ಜೀವ ಗೊಳಿಸುವ ಪ್ರೀತಿಮತ್ತೆ ಬಡಿಯುವನಕ ಅವಳು ಬೆಂದವಳು ನಯವಾದ ಮೊನಚು ಕೆನ್ನೆಗೆಮತ್ತೆ ಮುತ್ತನಿಡು ಎಂದು ಕೇಳಲಾರೆಕಣ್ಣೀರಿಗೆ ತಾಯಿ ಒಬ್ಬಳೇ ತಂದೆಯರು ಬೇರೆಬಸಿದುಕೊಂಡ ಬೇಸರಕ್ಕಿಂತಉಳಿದ ಕಾಳಿನ ಬರಡುತನವೇ ಉಳಿಸುಈ ಬದುಕಿನ ಖಾಲಿತನವನ್ನುಕಂಪನಗಳ ತಗ್ಗಿಸಲು ಆಗದಿರಬಹುದುಮಮತೆಯ ಮಡಿಲಾಗಿಅವಳನ್ನು ಹಡೆಯಲುಫಲವೀವ ಕಾಳುಗಳಾಗಿ ಮೊಳೆಯುವೆ ಮತ್ತೆ ಮತ್ತೆ…. ***** ಸತ್ಯಮಂಗಲ ಮಹಾದೇವ

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆಯಾಗುವ ಹೊತ್ತು ಅಂಜನಾ ಹೆಗಡೆ ಅಲ್ಲಿಕರುಳ ಬಿಸುಪಿಗೆಕದಲಿದ ಕುಡಿಯೊಂದುಕನಸಾಗಿ ಮಡಿಲುತುಂಬಿಬೆಳ್ಳಿಗೆಜ್ಜೆಯ ಭಾರಕ್ಕೆ ಕನಲಿದರೆನಕ್ಷತ್ರವೊಂದುದೃಷ್ಟಿಬೊಟ್ಟು ಸವರಿಹಣೆ ನೇವರಿಸಿ ನಕ್ಕಾಗಸೃಷ್ಟಿ ಸ್ಥಿತಿ ಲಯಗಳಭಾಷ್ಯವಿಲ್ಲದ ಬರೆಹಕ್ಕೆತಂಬೂರಿ ಹಿಡಿದುನಾನಿಲ್ಲಿಅಕ್ಷರವಾಗುತ್ತೇನೆ ಅಲ್ಲೊಂದು ಇಬ್ಬನಿಹಸಿರೆಲೆಯ ಮೋಹಕ್ಕೆಆವಿಯಾಗುವ ಹೊತ್ತಲ್ಲಿಮುಂಗುರುಳೊಂದು ನಾಚಿಕೆಂಪಾಗಿಅರಳಿದ ದಾಸವಾಳದಪ್ರೇಮಕ್ಕೆ ಬಿದ್ದಾಗಅಂಗಳಕ್ಕಿಳಿದ ಬಣ್ಣಗಳಒಂದೊಂದಾಗಿ ಹೆಕ್ಕುತ್ತಜೋಡಿಸುತ್ತಬೆಳಕಾಗಿ ಮೈನೆರೆದುನಾನೊಂದುಚಿತ್ರಕಾವ್ಯವಾಗುತ್ತೇನೆ ಅಲ್ಲಿಜೋಕಾಲಿಯೊಂದುಸ್ವಪ್ನಗಳ ಜೀಕುತ್ತಮುಗಿಲಿಗೆ ಮುಖಕೊಟ್ಟುಹಗುರಾಗುವ ಕ್ಷಣದಲ್ಲಿಗಾಳಿಗಂಟಿದ ಪಾದನೆಲವ ಚುಂಬಿಸುವಾಗಜೀಕಲಾಗದನೆಲದೆದೆಯ ನಿಟ್ಟುಸಿರಗಾಳಿಗೊಪ್ಪಿಸಿನಾನಿಲ್ಲಿಕವಿತೆಯಾಗುತ್ತೇನೆ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತುಡಿತ ವಿಜಯ್ ಶೆಟ್ಟಿ ಎಲ್ಲ ಮರೆತ ಒಂದು ಹಳೆಯಊರಕೇರಿಯ ದಾರಿಗುಂಟಸತತಸೈಕಲ್ ತುಳಿಯುವ ತುಡಿತನನಗೆ. ಇನ್ನೇನು ದಿನ ಕಳೆದು,ಉದಯಕ್ಕೆ ಸಿದ್ದವಾದ ರಾತ್ರಿಗೆ,ಸಂಜೆಯ ಹುಂಜದ ಹಂಗಿಲ್ಲಅಪರಿಚಿತ ಊರಕೇರಿಯ ದಿಕ್ಕುಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು! ತುಸುವೇ ಹೊತ್ತಿನ ಬಳಿಕನಾನು ತಲುಪುವ ಕೇರಿಯಾದರೂ ಎಂಥದು? ಮುದಿ ಲಾಟೀನಿನ ಮಂದ ಬೆಳಕಲ್ಲಿಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋಆ ಊರಿನಲ್ಲಿ?ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋಆ ಊರಿನಲ್ಲಿ?ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋಆ ಊರಿನಲ್ಲಿ? ನನ್ನನು ಅಲ್ಲಿ ಊಹಿಸುವ ಉಮೇದಿಗೆ ದುಗುಡ ಕೂಡ ಬೆರೆತಿದೆಒಂದೋಅಪರಿಚಿತ ಗುಡಿಸಲೊಂದರಲ್ಲಿಮಂಕು ದೀಪದ ಸುತ್ತ ಕೆಲವರ ಮುಂದೆಪ್ರಕಟಗೊಳ್ಳುವೆ ಹೇಳುವೆ, ಕೇಳುವೆ ಹುಬ್ಬು ಗಂಟಿಕ್ಕಿಗಹ ಗಹಿಸಿ ನಗುವೆ, ಪವಡಿಸುವೆಇಲ್ಲವೋ ಮೇಲೆ ಚುಕ್ಕಿಗಳ ಅಣಕಿಗೆ ಅಳುಕುತ್ತಾ ಎಲ್ಲಿ ತಂಗಲಿ ಎಂದುಅತ್ತಿಂದಿತ್ತ ಅಲೆವೆ,ಸವೆಯುವೆ ಒಂದೇ ಸಮನೆಮಟ ಮಟ ರಾತ್ರಿಯು ನೆತ್ತಿಗೇರುವ ತನಕ ಹಳತು ಮರೆತ ಕೇರಿಯದಾರಿಗುಂಟ ಸತತ ಸೈಕಲ್ ತುಳಿವ ತುಡಿತ ಎದುರು ಸಪೂರ ಕಾಲುಗಳ ಮೇಲೆಬಂದ ಎಷ್ಟೋಂದು ಗಂಟುಗಳೂ, ಮೂಟೆಗಳು,ಎವೆಯೆಕ್ಕದೆಯೆ ನನ್ನ ನೋಡುತ ಸಾಗುವ ಪರಿಗೆಕಂಗಾಲಾಗಿ ಕಿವಿಗೆ ಗಾಳಿ ಹೊಕ್ಕಂತೆ ಸೈಕಲ್ ಓಡಿತು ಈ ನಡುವೆ ರಸ್ತೆ ತುಸುವೇ ಮಿಸುಕಾಡಿ ಹೇಳಿದ್ದು ಹೀಗೆನನ್ನ ಬಾಲದ ಮೇಲೆ ಸವಾರಿ ಮಾಡುತ್ತೀಯಾ?ನನ್ನ ಹೆಡೆಯ ಭಾಗಕೆ ಬಂದು ತಲುಪು ನೋಡುವಾ. ಹಳತು, ಮರೆತ ಕೇರಿಯ ದಾರಿಗುಂಟಸತತ ಸೈಕಲ್ ತುಳಿವ ತುಡಿತ. ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕಣ್ಣೀರು ಜಗದೀಶ್ ಬನವಾಸಿ ಕಣ್ಣೀರು ಬರುವಷ್ಟು ಬರಲಿಎದೆಯ ನೋವು ತೊಳೆದುನೆನಪುಗಳ ಪುಟ ಓದ್ದೆಯಾಗುವಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳು ಬರುವಷ್ಟು ಅತ್ತು ಬಿಡುನೆನಪುಗಳು ನೇಪಥ್ಯಕ್ಕೆ ಮರಳಿಮರೆಯಾದ ಕನಸೊಂದು ರೆಕ್ಕೆಬಿಚ್ಚದಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳುವ ಹರಿವಿಗೆ ತಡೆಯಾಗುವಗೊಡ್ಡು ನೆಪಗಳ ಒಡ್ಡದಿರುಒಡೆದ ಕಟ್ಟೆ ಬರಿದಾಗಲಿ ಬಿಡುಮತ್ತೆಂದು ಅವು ತಿರುಗಿ ಬಾರದಂತೆ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಸಂಕೋಲೆ ಸಾಯಬಣ್ಣ ಮಾದರ ಬಿಟ್ಟು ಬಿಡಿಬಿಟ್ಟು ಬಿಡಿಕೈ ಕಟ್ಟಿ ನೆಲಕ್ಕೆ ಹಾಕಿಮಂಡಿಯೂರಿ ಕುಳಿತಿರುವರೆಉಸಿರಾಡಲುಗುತ್ತಿಲ್ಲ ಬಿಟ್ಟು ಬಿಡಿ ನಿಲುತ್ತಿದೆ ವರ್ಣಕ್ಕಾಗಿ ಉಸಿರು ಅಲ್ಲಿಜಾತಿ ಧರ್ಮಕ್ಕಾಗಿ ನಿಲ್ಲುತ್ತಿದೆ ಇಲ್ಲಿ ಮನುಷ್ಯರು ನಾವುನೀವು ಕ್ರೂರಿ ಮೃಗಗಳೆ? ಚರ್ಮದೊಳಗೆ ರಕ್ತ ಉಂಟುಅದರಲ್ಲಿ ವರ್ಣ ಜಾತಿ ಉಂಟೆ?ಬೇರೆ ಬೀಜಕ್ಕೆ ಹುಟ್ಟಿದ ಮರ ನೀವುತಯಾರಾಗಿದೆ ಕಾಲವೇ ಕಡಿಯಲು ಮಸಣದಲ್ಲಿ ಮಾನವೀಯತೆ ಹೂತ್ತುಮನುಷ್ಯತ್ವವೆ ಮೂಲೆಗೊತ್ತಿಜಾತಿ ಎಂಬ ಶಿಖರ ಏರಿವರ್ಣದ ಗಿರಿ ಮುಟ್ಟಿಅರ್ಚುವ ಮೂರ್ಖರೇಯಾವ ಜೀವಿ ನೀವು ನೀರಿಗಾಗಿ ಕೆರೆ ಮುಟ್ಟಿದ ಹೆಣ್ಣನ್ನುಕಟ್ಟಿ ಬಡಿದು ಕೇಕೆ ಹಾಕಿದವರು ನೀವುನೀರು ಬೆಳಕು ಗಾಳಿ ಕೇಳಿದೀಯಾ ಜಾತಿಬಣಕ್ಕೆ ಬೇದ ಮೊದಲೇ ಇಲ್ಲ ಧರ್ಮದ ಹೆಂಡ ಕುಡಿದುಜಾತಿ ಮತ್ತೆರಿಸಿಕೊಂಡುಎಷ್ಟು ದಿನ ಕುಣಿಯುವಿರಿದೇವರೇ ಹೆಣವಾಗಿ ಹೆಗಲೇರಿರುವಾಗಎಷ್ಟು ದಿನ ಅಡಗಿವಿರಿ ಬಂಕರಿನಲ್ಲಿ ಎಷ್ಟಂತ ಆಡುವಿರಿ ನಲಿ-ಕಲಿ ಆಟಸನಿಹದಲ್ಲಿದೆ ಅಂತ್ಯಮನುಷ್ಯರಾಗಲು ಮರೆಯದಿರಿಇಲ್ಲವೆ ಭೂಮಿಯಿಂದ ನಿರ್ಗಮೀಸಲು ಸಿದ್ದರಾಗಿ !!

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗೆ ರಾಮಸ್ವಾಮಿ ಡಿ.ಎಸ್. ನೀನು ನಡೆಸಿಕೊಡಬಹುದಾದ ಒಂದು ಮಾತುನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ.ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋವಿಶ್ವಾಸವೋ ಅಥವ ಹೇಳಲಾಗದ ಪ್ರೀತಿಯೋಆ ಉಳಿದು ಹೋದ ಮಾತನ್ನ ನೀನುಕಣ್ಣಲ್ಲಿ ಕಣ್ಣಿಟ್ಟು ಬೆರಳಿಗೆ ಬೆರಳ ಹೊಸೆದುಹಣೆಯ ಚುಂಬಿಸಿ ಹೇಳಿದ್ದೆಎಂದರೆ ಇಲ್ಲ, ಋಜುವಾತಿಗೆ ಸಾಕ್ಷಿ. ಆದರೆ ಇದ್ದಕ್ಕಿದ್ದಂತೆ ಹೀಗೆ ನನ್ನೊಂದಿಗೆ ಮಾತು ನಿಲ್ಲಿಸಿ,ಅವರಿವರ ಜೊತೆಗೆ ಮಾತಿನ ನಟನೆಯಾಡಿದರೆಮತ್ಯಾರದೋ ಪಟಕ್ಕೆ ಚಂದ ಎಂದು ಲೈಕಿಸಿದರೆನನ್ನ ಹೊಟ್ಟೆಯಲ್ಲೇನೂ ಕಿಚ್ಚು ಹೊತ್ತುವುದಿಲ್ಲಬದಲಿಗೆ ನಿನ್ನ ಸಂಕಟವ ಅಳೆಯಬಲ್ಲೆ.ಎಲ್ಲವನೂ ಮರೆತವರಂತೆ ಕೂಡಿದ್ದು, ಕಳೆದದ್ದುಕನಸ ಗುಣಿಸುತ್ತಲೇ ಕಡೆಗೆ ಬದುಕ ಭಾಗಿಸಿದ್ದುಭವದ ಸಂಬಂಧಗಳ ಬಿಡುಗಡೆಗೆ ಪ್ರಾರ್ಥಿಸಿದ್ದು. ಈ ಸಂಜೆ, ಹೊರಗೆ ಮಳೆಯ ಸೂಚನೆಒಳಗೆ ತಡೆಯಲಾರದಷ್ಟು ವಿಪರೀತ ಸೆಖೆ.ಜೋರಾಗಿ ಬಾಗಿಲು ಬಡಿದ ಸದ್ದು.ತೆರೆದರೆ ಹೊರಗೆ, ಯಾರೂ ಗೊತ್ತಾಗದ ಗಾಳಿಯಲೆ ಚಿಲಕ ಅಲ್ಲಾಡುತ್ತಿದೆ, ಮೆಟ್ಟಿಲಿಳಿದ ಅಸ್ಪಷ್ಟ ಸದ್ದುನೀನು ಈವರೆಗೂ ನಡೆಸಿ ಕೊಡದ ಮಾತೇ ಬಂದುಮತ್ತೆ ಬಂದ ದಾರಿಯಲೇ ಮರಳಿರಬೇಕು,ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುವಂತೆ. ಈ ಸರಿ ರಾತ್ರಿಯಲ್ಲಿ ಶುಭ್ರ ಆಕಾಶ ನೋಡುತ್ತತಾರಸಿಯಲ್ಲಿ ಅಂಗಾತ ಮಲಗಿ ನಕ್ಷತ್ರವೆಣಿಸುತ್ತಜೊತೆಗೇ ನಿನ್ನಲ್ಲೇ ಉಳಿದ ಮಾತ ನೆನೆಯುತ್ತಾಅವಕಾಶದಲ್ಲಿ ಎಷ್ಟೊಂದು ತಾರೆ ನೀಹಾರಿಕೆಗಳುಕ್ಷೀರ ಪಥದ ನಡುವೆ ಎಣಿಕೆಗೂ ಸಿಗದ ಲೋಕಗಳುಭ್ರಮೆ ವಿಭ್ರಮೆ ಸಂಕಟಗಳಿಗೆಲ್ಲ ಸಮಾಧಾನದ ಮಾತುಹೇಳುತ್ತಿವೆಯೇನೋ ಎಂಬಂತೆ ಸ್ಪೋಟಿಸುತ್ತಲೇಒಂದರ ಹಿಂದೊಂದು ಉರಿಯುತ್ತ ಬೀಳುತ್ತಲಿಹವು. ಈ ಎಲ್ಲ ಸಂಕೀರ್ಣ ಪ್ರತಿಮೆ ರೂಪಕಗಳ ನಡುವೆಬಿಟ್ಟೂ ಬಿಡದೆ ಕಾಡುತ್ತಿದೆ ನಿನ್ನ ಮಾತಿನ ನೆನಪುಧೋ ಎಂದು ಸುರಿಯದಿದ್ದರೂ ಹಿತ ಹನಿಯ ಸೇಕಒಡಲೊಳಗೇ ಉಳಿದು ಹೂತು ಹೋಗಬಾರದ ಮಾತುಮತ್ತೆ ಮತ್ತೆ ನಮ್ಮಿಬ್ಬರೊಳಗೇ ಗಿರಕಿ ಹೊಡೆಯುತ್ತಲೇಕಾಡುತ್ತಿದೆ ಅನವರತ ಸಂಭ್ರಮವ ಎಳೆದು ತಂದು.ಹೌದು, ಸಾವಿನ ನಂತರವಾದರೂ ಮತ್ತೆ ಕೂಡಬೇಕು! ********

ಕಾವ್ಯಯಾನ Read Post »

You cannot copy content of this page

Scroll to Top