ಕಾವ್ಯಯಾನ
ಬೋಧಿಸತ್ವನೊಂದಿಗೆ ಯಶೋಧರೆ —(ಯಶೋಧರೆಯ ಸ್ವಗತ ) ಲಕ್ಷ್ಮೀ ಪಾಟೀಲ್ ಅರಮನೆಯ ನೆನಪಾಗಿ ಬಂದೆಯಾ ಸಿದ್ಧಾರ್ಥಹೇಳದೆ ಹೋದರೆ ಸಿಗುವುದೇ ಜ್ಞಾನೋದಯ?ನಮಿಸಲಾರೆ ಮಂಡಿಯೂರಿ ನಿನಗೆಲೋಕದ ಗುರುವೆಂದು ನನಗೀಗಲೂ ನೀ ಸಿದ್ಧಾರ್ಥ ಗಾಢ ನಿದ್ದೆಯ ತಡವದೆ ಆ ರಾತ್ರಿ ನೀ ಹೇಳದೆ ಹೋದೆನನ್ನ ಮುಂದಿನ ಕತ್ತಲೆ ಕಳೆದೆ ನಿದ್ರೆ ಜಾರಿಸಿದೆಇಲ್ಲೊಂದು ಜ್ಞಾನೋದಯಕ್ಕೆ !ಮನೆ -ಮನದಾಚೆಗೊಂದು ಮಿಣುಕು ದೀಪ ಉಳಿಸಿದೆಬುದ್ದ ನಿನಗೊಂದು ಕೃತಜ್ಞತೆ ನಾನು ಹೆಂಡತಿಯಾಗಿ ಉಳಿದಿಲ್ಲರಾಹುಲ ಮಗನಾಗಿ ಉಳಿದಿಲ್ಲನಿನ್ನ ಭಿಕ್ಕು ಸಂಘದಲ್ಲಿ ನಾವು ಬಿಕ್ಕುಗಳಲ್ಲಈ ಅರಮನೆಯಲ್ಲಿ ಹುಟ್ಟಿ ಬೆಳೆದ ನೀನೀಗಅರಮನೆಯ ಮುಂದೆ ಬೌದ್ಧ ಭಿಕ್ಷು ಕರ್ಮ ಚಕ್ರ ಕಳಚಿ ಧರ್ಮ ಚಕ್ರ ಹಿಡಿದೆಬುದ್ದತ್ವ ಸುಲಭ ಸಿದ್ದ !ಲೋಕದ ತನು ಮನ ಶೋಧಕ್ಕೆ ನೀ ಹೊರಟಂದೇನಿತ್ಯ ನಡೆದಿದೆ ಇಲ್ಲಿ ನನ್ನ ತನು ಮನದ ಶೋಧಶೋದೋನ್ಮಾದದ ರಂಗ ಶಾಲೆಯಲ್ಲಿಬುದ್ದತ್ವದ ಪಾಠ ಕೇಳಿಸಬೇಡ ಮಲಗಿ ಬಿಟ್ಟಿದೆ ಅಮೋಘ ಸುಖವಿಲ್ಲಿಅಜ್ಞಾನ -ಮುಗ್ಧತೆ ಗಳ ತಲೆದಿಂಬಿನಲಿಧೈನ್ಯತೆ ಹತಾಶೆ ವಿಕ್ಷಿಪ್ತತೆಗಳ ಚಂದಕ್ಕೆಹೇರದಿರು ಮತ್ತೊಂದು ಭಾರಕರ್ಮಚಕ್ರದ ಮೇಲೊಂದು ಧರ್ಮಚಕ್ರಮುಕ್ತ ಸಂವಾದಗಳು ಬುದ್ಧತ್ವ ಒಪ್ಪುವುದಿಲ್ಲ ಸಿದ್ದಾರ್ಥ ಕೇಳಿದೆ ಸುಜಾತಾ ಕೊಟ್ಟ ಪಾಯಸ ತಿಂದ ಮೇಲೆಯೇಅರಳಿಯ ನೆರಳಲ್ಲಿನಿಮಗೆ ಜ್ಞಾನೋದಯವಾಯಿತಂತೆ !ಉತ್ತರವಿದೆಯಾ ಸಿದ್ದಾರ್ಥ?ಯಾಕೆ ಹೆಣ್ಮಕ್ಕಳು ಬದುಕಿಸುವ ಸತ್ವದಿಂದನಿಮ್ಮಂತವರು ಬೋಧಿಸತ್ವ ರಾಗುತ್ತಾರೆ?ಅದೇ ಜನನಿಬಿಡ ಲೋಕದ ಮುಂದೆನಿಮ್ಮ ಬುದ್ದತ್ವ ಭಿಕ್ಷೆ ಬೇಡುತ್ತದೆ?ಪ್ರಾರ್ಥಿಸುವೆನಿಷ್ಟೆ ಸಿದ್ದಾರ್ಥಬೀಳದಿರಲಿ ನನ್ನ ಮಗ ನಿನ್ನ ಜೋಳಿಗೆಯಲಿಕಸಿಯದಿರು ಕರ್ಮಚಕ್ರ : ಈ ಕೊನೆ ಗಳಿಗೆಯ ಜೀವಸತ್ವ ******









