ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಮಳೆಹಾಡು-3

ಸಂಜೆಯ ಮುಹೂರ್ತ ಆಶಾ ಜಗದೀಶ್ ಅದೆಷ್ಟೋ ವರ್ಷಗಳ ಪೂರ್ವ ನಿಯೋಜಿತಘಟನೆಯಿದು ಎನಿಸುವಂತೆಸುರಿಯುತ್ತಿರುವ ಈ ಮಳೆಗೆಸಂಜೆಯ ಮುಹೂರ್ತ ರಾಗ, ರಂಗು ಮತ್ತು ದೀರ್ಘ ಕ್ಷಣಗಳಕಟು ಮೌನಕಣ್ಣೀರು ಸ್ಫುರಿಸುವಂತೆ ತಾಕುವತಣ್ಣ ಸಣ್ಣ ಸಣ್ಣ ಸಿಡಿ ಹನಿಗಳುಯಾವುದಕ್ಕೂ ಪ್ರತಿರೋಧ ಒಡ್ಡದರಸ್ತೆಗೆ ಇದೊಂದು ಜನ್ಮದ ಸುವಾಸನೆಯನ್ನುಬಿಗಿ ಹಿಡಿದು ಉಚ್ವಾಸಕ್ಕೆ ಎಳೆಸುವ ಆಸೆಮತ್ತಷ್ಟು ಕಠೋರವಾಗಿ ಎದೆ ಸೆಟೆಸಿಮಲಗುತ್ತದೆ… ಒಂಚೂರೂ ನಡುಗದ ಮಲ್ಲಿಗೆ ಬಳ್ಳಿಮಳೆಯ ಹೊಡೆತಕ್ಕೆ ನಲುಗಿದೆಮತ್ತೆ ಮತ್ತೆ ಸರಿ ಮಾಡಿ ಹಿಡಿದೆತ್ತಿತಂತಿಯಿಂದ ಬಂಧಿಸಿ ತರಸಿಗೇರುವಂತೆಮಾಡುವ ಒಡತಿ ನಡುಗುತ್ತಾ ಒಳಗಿದ್ದಾಳೆತಾನು ಕಟ್ಟಿದ ತಂತಿ ತುಂಡಾಗಿಬೀಳುತ್ತಿರುವ ಬಳ್ಳಿಯ ಕಂಡುಹೆಚ್ಚೇ ಎರೆಡು ಹನಿ ಉದುರಿಸುತ್ತಾ ತಾರಸಿಯ ಕೆಳಗೆ ಮಳೆ ಸೋಕದಂತೆಇರಿಸಲಾಗಿರುವ ಬಣ್ಣದ ಗಿಡಗಳಮುಖ ಬಾಡಿ ಬತ್ತಿದೆಮಳೆಯೆನ್ನುವ ಇವನ ಸ್ಫರ್ಷಕ್ಕೆಂದುಕಾದ ಒಂದಿಡೀ ವರ್ಷಹೀಗೆ ವಿರಹದ ಮಡುವಿಗೆ ಹರಿದು ಹೋಗಿಸೇರುತ್ತಿದೆ ಎಂದು ಆದರೆಯಾವುದನ್ನೂ ಎಣಿಸದ ಒಡತಿಜಗ್ಗಿನಿಂದ ಎರೆಡು ಲೋಟದಷ್ಟು ನೀರನ್ನುಬುಡಕ್ಕೆ ಸುರಿದು ಹೋಗುತ್ತಾಳೆಮಳೆಯ ಹೊಡೆತ ತಿಂದು ನೆನೆಯಬೇಕಿತ್ತೆಂದುಹಪಹಪಿಸುತ್ತಿರುವ ಕುಂಡದ ಗಿಡಗಳಪ್ರಶ್ನಾರ್ಥಕ ನೋಟಗಳಕನಿಷ್ಠ ಗಮನಿಸದೆಯೇ ಮಳೆಕೊಯ್ಲು ಎನ್ನುವ ಹೆಸರಿನಇಡೀ ವ್ಯವಸ್ಥೆಯ ಪೈಪುಗಳಲ್ಲಿ ರಕ್ತಸಂಚಾರವರ್ಷವಿಡೀ ಕೆಲಸಕ್ಕೆ ಬಾರದಂತೆ ನಗಣ್ಯಕ್ಕೆಗುರಿಯಾದ ಇವುಗಳಿಗೆ ಈಗ ಎಂಥದೋ ಹೆಮ್ಮೆಒಂದಷ್ಟು ಕಚ್ಚು ಕೆಸರನ್ನು ಕಕ್ಕಿ ಗಂಟಲುಸರಿ ಮಾಡಿಕೊಂಡು ತಿಳಿ ನೀರ ಹರಿಸಿಎಂಥದೋ ನೆಮ್ಮದಿ ಅವುಗಳ ಒಣ ಜೀವಕ್ಕೆಅಲ್ಲಾ ಮಳೆಯನ್ನು ಹೇಗೆ ಕೊಯ್ಯುವುದೆಂದೇಅರ್ಥವಾಗುವುದಿಲ್ಲ ನನಗೆ ಆದರೆ ಮಳೆ ಎನ್ನುವ ಈ ಮಳೆಭಾವಕೋಶದ ತಂತಿಯನ್ನುಬಿಗಿ ಮಾಡಿ ಟಣ್ ಎಂದುಮೀಟಿಬಿಡುತ್ತದೆ ಹೇಗೋಸೋಲಿಸುವ ಹಾಗೆ…. ********

ಮಳೆಹಾಡು-3 Read Post »

ಕಾವ್ಯಯಾನ

ಆರು ಮೂರು

ಡಾ.ಅಜಿತ್ ಹರೀಶಿ ಮೂಲ ಆಲಯದಿಂದ ಕೈಲಾಸ ಪಟದಾಟಲೆತ್ತ ಬೀರಿ ಅದರತ್ತ ನೋಟಬುಡದಲ್ಲಿ ಬಿಸಿಯಿಲ್ಲಮೇಲೇರಿದಂತೆ ಕಾವೇರಿ ಪರದಾಟ ಹಿಂದೆ ಮುಂದೆ, ನೂಕುನುಗ್ಗಲುಆರು ಬಿದ್ದರೆ ಇನ್ನೊಂದು ಬಾರಿಸಿಗುವುದು ಆಡಲುಮೊದಮೊದಲು ಸಣ್ಣ ಏಣಿಹಾವು, ಆತಂಕವಿಲ್ಲ ಕಳೆ ಕಟ್ಟಿದೆ ಕೊನೆಯಲ್ಲಿನುಣುಪಾದ ದಂತದ ದಾಳದಲ್ಲಿಮೂರು ಬಿದ್ದರೆ ಹಾವು ಕಚ್ಚಿನಿಶ್ಚಲವಾಗುವುದು ನಿಶ್ಚಿತ ನೆಲಕಚ್ಚಿಕೈಲಾಸ ಕಾಣಬಹುದು ಬಿದ್ದರೆ ಆರುಶಿವ ಪಾರ್ವತಿ ಕಾಣುತಿಹರು ಒಂದು ಐದು ಬೀಳುತಿಹುದು ನೆತ್ತದಲಿಅತ್ತ ಇತ್ತ ಎತ್ತ ಎಂತ ಮಾಡಿದರೂ ಕೈಲಾಸ ಪ್ರಾಪ್ತಿಯಿಲ್ಲಆಟ ಬಿಟ್ಟು ಏಳುವಂತಿಲ್ಲಆರಕ್ಕೇರದ ಮೂರಕ್ಕಿಳಿಯಿದ ಬದುಕಿನಂತೆ ಲತ್ತದಲಿ ಮೂಡಿತು ಮೂರರ ಮುಖವಂತೂಮತ್ತೆ ಅಲ್ಲಿಂದ ಶುರು ಹಾವು ಏಣಿ ಆಟ ಆರು ಬಿದ್ದ ಕ್ಷಣ ಅರಿವಾಯಿತುಇನ್ನು ಪಟವ ಪಟಪಟನೆ ಸುತ್ತಿಹೊರಡಬೇಕು. *****

ಆರು ಮೂರು Read Post »

ಕಾವ್ಯಯಾನ

ಆಕೆ ಉಲ್ಲಾಸದಿ‌ ನಕ್ಕಳು

ನಾಗರಾಜ್ ಹರಪನಹಳ್ಳಿ -೧-ವಾರಬಿಟ್ಟು ಸುರಿದ ಮಳೆಗೆಉಲ್ಲಾಸದಿಂದ ನಕ್ಕಳು ಭೂತಾಯಿ ಕಂಪೌಂಡ್ ಕಟ್ಟೆ ಮೇಲೆ ಕುಳಿತಗುಬ್ಬಚ್ಚಿ ಹಿಂಡಿನ ಹರಟೆಜಗುಲಿ ಒಳಗಿನ ಹೆಂಗಸರ ನಾಚಿಸಿತು -೨-ಮಳೆ ಸುರಿದಾಯ್ತುಹನಿಯುಂಡ ಭೂಮಿನಿದ್ದೆ ಹೋಗಿದೆಮೈಮುರಿಯುತ್ತಿದೆ ನೆಲಪುಟಿದೇಳುತ್ತಿದೆ ಚಿಗುರುಪ್ರತಿ ಚಿಗುರಿನಲಿತೇಲಿ ಬಂದಿದೆನಿನ್ನದೇ ಬಿಂಬ -೩-ಹಗಲು ರಾತ್ರಿಯನ್ನದೇಮಳೆ ಸುರಿಯಿತುನಾನು ನೀನು ಮಾತಾಡಿಕೊಂಡಂತೆ ಅತ್ಯಂತ ಉಲ್ಲಾಸಿತಳಾಗಿ ನಕ್ಕಿದ್ದು ಭೂಮಿಮಾತಾಡುತ್ತಲೇ ನಾವುನಕ್ಕು ಅತ್ತಂತೆ ನಡುನಡುವೆ ಮತ್ತೆ ನಕ್ಕು ಉಲ್ಲಾಸಿತ ಗೊಂಡಂತೆ ಮಡಿಲಲ್ಲಿ ನೂರು ನೋವು ತುಂಬಿಕೊಂಡು ನಗುವ ಆಕೆನೂರು ಸಂಕಟ ನುಂಗಿಯೂ ನಕ್ಕಂತೆ ನಾನು -೪-ಮಾತಿಗೆ ಮಾತು ಬೆಸೆಯಿತು ,ಹೆಜ್ಜೆ ಹೆಜ್ಜೆಗೂ ಪ್ರೀತಿಯ ಹೂ ಅರಳಿದವುಶತಮಾನಗಳ ನೋವು ಹಾಡಾದವುಪಕ್ಕದಲ್ಲಿದ್ದ ಗಿಡಮರ ತಲೆದೂಗಿದವು ಹಕ್ಕಿಗಳ ಕಣ್ನಲ್ಲಿ ದೀಪಬೆಳಗಿದವುಕುದಿಯುತ್ತಿದ್ದ ಹಗಲು ;ಸೆರಗು ಹಾಕಲುಇರುಳಲ್ಲಿ ದೀಪಗಳು ಬೆಳಕು ಚೆಲ್ಲಿದವು *****

ಆಕೆ ಉಲ್ಲಾಸದಿ‌ ನಕ್ಕಳು Read Post »

ಕಾವ್ಯಯಾನ

ಅರಳದ ಮೊಗ್ಗು

ಸೌಜನ್ಯ ದತ್ತರಾಜ ಜಗದ ಜಾತ್ರೆಯೊಳಿದ್ದೂನೀನು ಲೋಕಕಂಟದ ಜಂಗಮನಿನ್ನಾಚೆ ಈಚೆ ತಿರುತಿರುಗಿಯೂಪಲ್ಲವಿಸುತ್ತಿಲ್ಲ ನಿನ್ನೊಳಗೆ ಪ್ರೀತಿ ಪ್ರೇಮ ಆಗುವುದಾದರೆ ಆಗಬೇಕಿತ್ತುಇಷ್ಟರೊಳಗೆ ನಮ್ಮಿಬ್ಬರ ಸಂಗಮಕಠೋರತೆಯನೇ ಕವಚವಾಗಿಸಿಕೊಂಡಿರುವನಿನಗೆ ಬೇಕಿಲ್ಲ ಪ್ರೇಮ ಮೋಹದ ಸಂಭ್ರಮ ಕಾದೆ ನಾನು ಶಬರಿಯಂತೆಅದೆಷ್ಟು ಕಾಲ ನಿನ್ನೊಂದು ಕಾಣ್ಕೆಗಾಗಿಕಾಣದಾದೆಯಲ್ಲ ನೀನುನನ್ನ ಪ್ರೇಮವ ಕಣ್ಣಿದ್ದೂ ಕುರುಡನಾಗಿ ಅರಳದಿರುವ ಮೊಗ್ಗಿಗಾಗಿಕಾಯಬೇಕು ತಾನೇ ಯಾವ ಹಿಗ್ಗಿಗಾಗಿನಡೆಯುತಿರುವೆವು ಇಬ್ಬರೂ ರಸ್ತೆಯತ್ತ ಇತ್ತಕೈಗೆಟುಕದ ಅದಾವುದೋ ಗುರಿಯೆಡೆಗೆ ನೋಡುತ್ತಾ **********************

ಅರಳದ ಮೊಗ್ಗು Read Post »

ಕಾವ್ಯಯಾನ

ಜೀವ ತುಂಬಿದ ಚಿತ್ರ

ಬಿದಲೋಟಿ ರಂಗನಾಥ್ ಅಲೆಯುವ ಕನಸುಗಳನ್ನುಹಿಡಿದು ಮಾತಾಡಿಸಿದೆಮಣ್ಣಲ್ಲಿ ಮಣ್ಣಾದ ಅವುಗಳ ಜೀವನೋಯ್ಯುತಿತ್ತು ನೆಲದ ಪದರಗಳ್ನು ಬಿಡಿಸುತ್ತಾದಾರಿಯಿಲ್ಲದ ದಾರಿಯ ಮೇಲೆ ನಡೆದುಉಸಿರಾಡಿದ ಜೀವಗಳನ್ನು ಮುಟ್ಟಿನೆವೆಯುವ ಕಣ್ಣಂಚಿನ ದೀಪಗಳುಮರುಗುತ್ತಿದ್ದವು ಮಣ್ಣಲ್ಲಿ ಬೆರೆತು ಬೆತ್ತಲಾಗದ ಕಳಂಕಿತ ಮನಸನು ಸುಡಲುಅರೆಬೆಂದ ಜೀವ ಕೊರಗುತ್ತಿದೆಅಲೆಯುತ ನಿರಾಕಾರವಾಗಿ..ನೆಲಕೆ ಬೆನ್ನಾಕಿ. ಮಾಡಿದ ದೋಕಕೆಬೆವರಿದ ಮೆದುಳುಕರಗುತ್ತಿದೆ ಕೊರಳನು ತಬ್ಬಿಅವನೋ ಮರೆಯಲಾಗದ ನೆನಪುಮಣ್ಣಿನಲಿ ಮೂಡಿದ ಕಣ್ಣುನೋಡುತಿದೆ…ಕಾಣದ ಕಡಲಿನ ಗೆರೆಯ ಕಡೆ… ಜೀವ ತುಂಬಿದ ಚಿತ್ರಎದೆಯಲಿ ಅರಳುತ್ತಲೇ ಇದೆ. **************

ಜೀವ ತುಂಬಿದ ಚಿತ್ರ Read Post »

ಕಾವ್ಯಯಾನ

ಬಂತು ಶ್ರಾವಣ

ವೀಣಾ ರಮೇಶ್ ನಿಸರ್ಗದ ಕುಂಚದಲಿಬರೆದಳು ಶುಕ್ಲ ಪ್ರತಿಪದೆಹಸಿರ ಬಸಿರು ಹೊತ್ತುಶ್ರಾವಣದ ಶುಭಪ್ರದೆ ನವ ಶೃಂಗಾರದ ವೈಯಾರಿಮೈತುಂಬಿ ಬಂದಳುಬಿಂಕವ ತೋರಿಅಪ್ಪಿದಳು ಇಳೆಯಲಿ ಭೂರಮೆನಸುನಗೆಯ ತೂರಿ ಸಂಭ್ರಮದ ಪರ್ವಗಳ ಮಾಸಮನ ಮಾನಸದಲಿಶ್ರಾವಣಿ ತಂದಳುಮಂದಹಾಸ,ಪ್ರಕೃತಿಯ ಋತುವಿಲಾಸ ವೇದ ಮಂತ್ರಗಳ ಪಠಣಮಂಗಳ ವಾದ್ಯಗಳಶಬ್ದ ಘೋಷಣಪರ್ವಗಳ ಸಾಲಿಗೆ , ಸಂಭ್ರಮದ ಒಡಲಿಗೆಸಿಹಿಹೂರಣ **************

ಬಂತು ಶ್ರಾವಣ Read Post »

ಕಾವ್ಯಯಾನ

ನಾನೇ ರಾಧೇ…

ವಸುಂದರಾ ಕದಲೂರು ಕೃಷ್ಣನೆ ಕೊಳಲು ನುಡಿಸಿದ ಇರುಳುನಾನೂ ಆದೇನು ರಾಧೆಶ್ಯಾಮನೆ ನಿಜದಿ ನನ್ನೊಡನಿರಲುನನಗೆ ಬೇರೇನು ಬಾಧೆ ಇನಿಯನ ಇಂಪಿನ ಕೊರಳಿನ ಕರೆಯಒಲವಿನ ಚೆಲುವಿನ ಇನಿದನಿ ಸವಿಯಮರೆಯಲಿ ಹೇಗೆ ನಾ ಮಾಧವನಾತೊರೆಯಲಿ ಹೇಗೆ ನಾ ಗಿರಿಧರನಾ ಮಾಧವ ರಾಘವ ಗಿರಿಧರ ಗೋಪಾಲಹಲಬಗೆ ಹೆಸರಲಿ ಜಪಿಸಿದೆ ಸಂಕುಲಬಾರಾ ಮಾಧವ ಮುರಳಿ ಲೋಲಾತೋರಾ ಶ್ಯಾಮಲ ಅಪಾರ ಲೀಲಾ ಹುಡುಕಲಿ ಎಲ್ಲಿ ಆ ಚೆಲುವನನುಸಹಿಸಲಿ ಹೇಗೆ ನಾ ವಿರಹವನುಮೋಹಿಸದಿರಲೆಂತು ಮಾಧವನನುತೊರೆಯುವುದೆಂತು ಘನವಂತನನು ಕೃಷ್ಣನೆ ಕೊಳಲು ನುಡಿಸಿದ ಇರುಳುನಾನೂ ಆದೇನು ರಾಧೆಶ್ಯಾಮನೆ ನಿಜದಿ ನನ್ನೊಡನಿರಲುನನಗೆ ಬೇರೇನು ಬಾಧೆ ***********

ನಾನೇ ರಾಧೇ… Read Post »

ಕಾವ್ಯಯಾನ

ಕಾವ್ಯಯಾನ

ಸೋಲೆಂಬ ಸಂತೆಯಲಿ ದೀಪ್ತಿ ಭದ್ರಾವತಿ ಹೀಗೇಕೆ ಬೆನ್ನು ಬಿದ್ದಿದೆ ಸೋಲುರಚ್ಚೆ ಹಿಡಿದ ಮಗುವಿನಂತೆಹೆಜ್ಜೆ ಇಟ್ಟೆಡೆಗೆ ಕಣ್ಣು ನೆಟ್ಟಿದೆತಾಳಬಲ್ಲೆನೇಸವಾರಿ?ಕಣ್ಣಂಚಲಿಮುತ್ತಿಕ್ಕುತ್ತಿದೆ ಸೋನೆಸುಡುವ ಹರಳಿನಂತೆಒರೆಸಿಕೊಳ್ಳಲೇ ಸುಮ್ಮನೆ?ಎಷ್ಟೊಂದು ಸಂಕಟದ ಸಾಲಿದೆಸೋಲೆಂಬ ಮೂಟೆಯೊಳಗೆನಟ್ಟ ನಡು ಬಯಲಿನಲಿ ಒಂಟಿಮತ್ತು ಒಂಟಿ ಮಾತ್ರಹರಿಯಬಲ್ಲದೇ ಹರಿದಾರಿ?ನಡೆಯುತ್ತದೆಯೇ ದಿಕ್ಕು ಮರೆತ ನೌಕೆ?ಸುತ್ತ ಹತ್ತೂರಿಂದ ಬಂದ ಪುಂಡಗಾಳಿ ಹೊತ್ತೊಯ್ದು ಬಿಡುವುದೇನೆಟ್ಟ ಹಗಲಿನ ಕಂಪು?ಯಾವ ದಾರಿಯ ಕೈ ಮರವೂಕೈ ತೋರುತ್ತಿಲ್ಲಮರೆತು ಹೋಗಿದೆ ದಿಕ್ಸೂಚಿಗೂಗುರುತುಕಗ್ಗತ್ತಲ ಕಾರ್ತಿಕದಲಿಹಚ್ಚುವ ಹಣತೆಯೂ ನಂಟು ಕಳಚಿದೆಮುಖ ಮುಚ್ಚಿಕೊಂಡೀತೆಬೆಳಕು ಬಯಲ ಬೆತ್ತಲೆಗೆ?ಮುಗ್ಗರಿಸಿದ ಮಧ್ಯಹಾದಿಯಮಗ್ಗಲು ಬದಲಿಸಲೇ?ನೂರೆಂಟು ನವಿಲುಗರಿಗಳನಡುವೆ ಹಾರಿದ ಮುಳ್ಳುಎದೆ ಚುಚ್ಚಿದೆ, ಕಣ್ಣು ನೆಟ್ಟಿದೆಮತ್ತು ನೆತ್ತಿಯನ್ನೂ ಕೂಡಸೋಲು ಭಾಷೆ ಬದಲಿಸುವುದಿಲ್ಲನನಗೋ ಭಾಷೆಗಳು ಬರುವುದೇ ಇಲ್ಲ.. ***************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕೊರೊನ ಜಾಗೃತಿ ಶ್ವೇತಾ ಮಂಡ್ಯ ಕೊರಗ ಬೇಡಿಬಂತೆಂದು ಕರೋನಮರೆಯ ಬೇಡಿಎಚ್ಚರಿಕೆ ಕೈ ತೊಳೆಯೋದನ್ನ ಹೆದರದಿರಿ ವೈರಸ್ಸಿನ ಕಾಟಕೆಹೆದರಿಸಿ ವೈರಿಯನು ಎದೆಗುಂದದೆಸಾಮಾಜಿಕ ಅಂತರ ಎಂದೂ ನೆನಪಿನಲಿರಲಿನಿಮ್ಮ ನೆರೆಹೊರೆಯವರನ್ನೂ ಕೂಡ ಮರೆಯದಿರಿ ಮನೆಯೇ ಮಂತ್ರಾಲಯವಾಗಿಹಈ ದಿನಗಳಲಿಒಡೆದ ಮನವ ಒಂದಾಗಿಸಿಬಾಳುವುದ ಕಲಿಯೋಣ ಒಗ್ಗಟ್ಟಿನಲಿ ಬಿಸಿನೀರು,ಬಿಸಿಯೂಟ,ಹಾಲು, ಹಣ್ಣು ,ತರಕಾರಿಕರೋನ ತಡೆದು ಆರೋಗ್ಯವರ್ಧಿಸುವ ರಹದಾರಿ ಹೊರಗಡೆ ಬರುವಾಗಮುಖಕ್ಕಿರಲಿ ಮಾಸ್ಕ್ಬೇಡವೇ ಬೇಡಅನಗತ್ಯ ಓಡಾಟದ ರಿಸ್ಕ್ ಜೀವ ಉಳಿಸುವ ಕಾರ್ಯತತ್ಪರತೆಹಸಿದವರೊಡಲ ತುಂಬಿಸುವ ವಿಶಾಲತೆಮೆರೆದ ಮಂದಿಗೆಲ್ಲಾ ಸಲ್ಲಿಸೋಣನಮ್ಮ ಪ್ರೀತಿಯ ಕೃತಜ್ಞತೆ ಬದುಕ ಬಂಡಿಯ ಹಳಿ ತಪ್ಪಿಸಿಹಲವು ಜೀವಗಳ ಮಣ್ಣೊಳಗೆ ಮಲಗಿಸಿವಿಶ್ವ ಆರ್ಥಿಕತೆಯ ಬುಡಮೇಲಾಗಿಸಿಒಕ್ಕರಿಸಿದೆ ಈ ಕರೋನ ರಾಕ್ಷಸಿ ಏನಾದರೂ ಆಗಲಿ ಆತ್ಮಬಲವೊಂದಿದ್ದರೆಮೀರಬಹುದು ಎಲ್ಲವನುಸ್ವಯಂ ಜಾಗೃತರಾಗಿ ,ಗೆಲ್ಲೋಣ ಬನ್ನಿಈ ಮನುಕುಲದ ದುಸ್ವಪ್ನವಾದ ಕೊರೊನವನು. ಜೀವಕಿಂದು ಬೇಕು ಸಾಂತ್ವನಆತ್ಮ ಶಕ್ತಿಯೊಂದೇ ಬದುಕಿನ ಮಂಥನತಾಳ್ಮೆ ಸಹನೆ ಕರುಣೆಯ ಪ್ರದರ್ಶಿಸೋಣನಾವು ನಮ್ಮವರನೆಲ್ಲ ರಕ್ಷಿಸೋಣ ಮಹಾ ಮಾರಿ ಬಂತೆಂದುದೃತಿಗೆಡದೆ ಮುಂದೆಸಾಗಬೇಕು ಅಡೆತಡೆಗಳಮೀರುತ ನಡೆ ಮುಂದೆ ************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಲಕ್ಷ್ಮಿ ದೊಡಮನಿ ರಾಜಕಾರಣದ ಈ ಜೀವನ ಥಳುಕೆನಿಸುತ್ತದೆ ಎಚ್ಚರದಿಂದಿರುಕುರ್ಚಿ ತಲ- ತಲಾಂತರವಾಗಿ ತಮಗೆ ದಕ್ಕ ಬೇಕೆನಿಸುತ್ತದೆ ಎಚ್ಚರದಿಂದಿರು ಬದಲಾವಣೆ ಇಲ್ಲಿನ ನಿಯಮ ಯಾವುದೂ ಶಾಶ್ವತವಲ್ಲಮೃಗಜಲಕ್ಕೆ ಬೆನ್ನಟ್ಟಿದ ಪಶುವಿನಂತಾಗುತ್ತದೆ ಎಚ್ಚರದಿಂದಿರು ಬಿತ್ತಲಿಕ್ಕೆ ಹೋದವರು ಹೆಗ್ಗಣ ಬಿಲವನ್ನು ತೋಡಿದರಂತೆದಾರಿ ತಪ್ಪಿಸುವ ಆಸೆ-ಆಮಿಷಗಳನ್ನು ಒಡ್ಡಲಾಗುತ್ತದೆ ಎಚ್ಚರದಿಂದಿರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದೆಂಬ ತರಬೇತಿಯುಂಟುಮನ ನಾಚಿಕೆ,ಮಾನ ತೊರೆದು ಕೊರಡಿನಂತಾಗುತ್ತದೆ ಎಚ್ಚರದಿಂದಿರು ನಿಜಕ್ಕೆ ಸಮಾಧಿ ಕಟ್ಟಿ ಸುಳ್ಳಿಗೆ ಕಲಶವೇರಿಸುತ್ತಾರೆ ‘ಚೆಲುವೆ’ನಿನ್ನನ್ನೇ ನೀನು ನಂಬದಂತೆ ಭ್ರಮೆ ಹುಟ್ಟಿಸಲಾಗುತ್ತದೆ ಎಚ್ಚರದಿಂದಿರು ********

ಕಾವ್ಯಯಾನ Read Post »

You cannot copy content of this page

Scroll to Top