ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸುಪ್ತದೀಪ್ತಿ ಅವರ ಕವಿತೆ-ನೆಲೆ

ಕಾರಮರ್ಮರವೆಲ್ಲ ತಲೆಯೊಳಗೆ ಗುಂಯ್ಗುಟ್ಟಿ
ಸುರಿಯುವುದು ಜಗದತ್ತ ಹೆಪ್ಪುಗಟ್ಟಿ
ಕಾವ್ಯ ಸಂಗಾತಿ

ಸುಪ್ತದೀಪ್ತಿ

ನೆಲೆ

ಸುಪ್ತದೀಪ್ತಿ ಅವರ ಕವಿತೆ-ನೆಲೆ Read Post »

ಕಾವ್ಯಯಾನ

 ಮನ್ಸೂರ್ ಮುಲ್ಕಿ ಮೋಡದ ಮಳೆ 

ಕಾವ್ಯ ಸಂಗಾತಿ ಮನ್ಸೂರ್ ಮುಲ್ಕಿ ಮೋಡದ ಮಳೆ ಕೋಗಿಲೆ ನೀನು ಹಾಡುವಾಗಮಾತುಗಳೆಲ್ಲ ಮೌನವುನವಿಲೇ ನೀನು ನಲಿಯುವಾಗರೆಪ್ಪೆಯು ಕೂಡ ಮುಚ್ಚದು. ಚಂದಿರನೇ ನೀನು ಕಾಣುವಾಗಸೂರ್ಯನು ಕೂಡ ನಾಚುವನುಬೆಳಕೆ ನೀನು ತೋರುವಾಗಕತ್ತಲೆ ಕೂಡ ಕರಗುವುದು. ಸರಸರ ಗಾಳಿಯು ಬೀಸುವಾಗತೇಲಿದ ಅನುಭವ ಆಗುವುದುಮೋಡದ ಮಳೆಯಲಿ ನೆನೆಯುವಾಗಕಿರುನಗೆ ಮನದಲಿ ಮೂಡುವುದು. ಸಂಜೆಯ ಸೂರ್ಯನು ಮುಳುಗುವಾಗಚುಕ್ಕಿಗಳೆಲ್ಲ ಹೊರಡುವುದುಲಂಗರು ಹಾಕಿದ ಹಡಗುಗಳೆಲ್ಲಪಳಪಳ ಹೊಳೆಯುತ  ತೇಲುವುದು.  ಮನ್ಸೂರ್ ಮುಲ್ಕಿ

 ಮನ್ಸೂರ್ ಮುಲ್ಕಿ ಮೋಡದ ಮಳೆ  Read Post »

ಕಾವ್ಯಯಾನ

ಅಮ್ಮು ರತನ್ ಶೆಟ್ಟಿ ಕವಿತೆ -ಸತ್ಯ

ಸನ್ಮಾರ್ಗದಲ್ಲಿ ನಡೆವವಗೆ
ಸಂಕಟವು ತಪ್ಪದು
ದುರುಳರ ಸುಳ್ಳಿಗೆ
ಉಳಿಗಾಲವಿರದು

ಸುಳ್ಳು ಸಿಹಿಯಾದರೂ
ಭಾದಕವು
ರುಚಿಸದ ಕಹಿಯಾದರೂ
ಸತ್ಯವೇ ನಿಜವು

ಭಾಧೆಗಳಲಿ ಬೆಂದವಗೆ
ಸಿಗಬಹುದು ಗೆಲುವು
ಮಿಥ್ಯದ ಮಾತುಗಳಿಗೆ
ಸಿಗದೆಂದಿಗೂ ವಿಜಯವು

ಮೊಸರಿನಲಿ ಕಲ್ಲು
ಹುಡುಕುವವರ ನಡುವೆ
ಬೇಸರಿಸದೇ ಅರ್ಥೈಸಿಕೊ
ತಪ್ಪುಗಳು ಸಹಜವೇ

ಸತ್ಯಮೇವ ಜಯತೆ
ಭಾರತೀಯರ ಮೂಲಮಂತ್ರ
ಸತ್ಯದ ಹಾದಿಯಲ್ಲೇ
ಪಡೆದೆವು ಸ್ವತಂತ್ರ

✍️ ಅಮ್ಮು ರತನ್ ಶೆಟ್ಟಿ

ಅಮ್ಮು ರತನ್ ಶೆಟ್ಟಿ ಕವಿತೆ -ಸತ್ಯ Read Post »

You cannot copy content of this page

Scroll to Top