ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಶ್ರೀನಿವಾಸ ಕೆ.ಎಂ ಅವರ ಎರಡು ಕವಿತೆಗಳು

ಕಾವ್ಯ ಸಂಗಾತಿ ಶ್ರೀನಿವಾಸ ಕೆ.ಎಂ ಎರಡು ಕವಿತೆಗಳು ಕವಿತೆ-೧ ಕುರುಡು ನಂಬಿಕೆನಿನ್ನಲ್ಲಿ ಮನೆ ಮಾಡಿಸಂಶಯ ಹುತ್ತಗಟ್ಟಿಸುರುಳಿ ಸುತ್ತಿ ಸುಳಿದಾಡಿದೆನಿನ್ನ ಸುತ್ತ.. ಹುಸಿ ಮಾತಿಗೆ ಕಿವಿಗೊಟ್ಟುಆಲಿಸುವ ರಿಸೀವರ್‌ಗಳಮಾತಿಗೆ ಮರಳಾಗುವಮಾಯ ಬಜಾರಿನ ಜಗತ್ತು, ಅಜ್ಜಿಗೆ ಅರಿವೆ ಚಿಂತೆಯಾದರೆಮೊಮ್ಮಗಳಿಗೆ ಮತ್ತೇನೋಚಿಂತೆ,  ಮೈಕ್ ಇಲ್ಲದಸ್ಪೀಕರ್ ಗಳು ಕಿವಿಡೆಬ್ಬಿಸಿವೆ ಜಗವ ಕೇಳುವಂತೆ, ಇದ್ದ ಮೂರು ಜನರ ನಡುವೆಮಳ್ಳ ಬೆಕ್ಕಿನಂತೆ ನೋಡಿದ ಕಣ್ಣು,ಹಿತ್ತಾಳೆ ಕಿವಿಯಂತೆ ಆಲಿಸಿದ ಕಿವಿ,ಬೊಗಳೆ  ಮಾತಿನ ಮನೆಯ ಕಟ್ಟಿದಬಾಯಿಯಲ್ಲವೇ? ನಿದ್ದೆಯಿಂದೆದ್ದ  ಮನಸ್ಸಿಗೆ ತಿಳಿದಿದೆಕುರುಡು ನಂಬಿಕೆಯ ಬಟ್ಟೆ ಕಿತ್ತೆಸೆದುಸಂಶಯದ ಹುತ್ತವ ಕೆಡವಿನಂಬಿಕೆಯ ಮನೆಯಕಟ್ಟಬೇಕೆಂದು. ಕವಿತೆ-೨ ಅನುದಿನದಿ ಕುದಿವ ಮನದ ಬೇಗೆನಭದೆತ್ತರಕೆ ಚಿಮ್ಮುವ ಜ್ವಾಲಾಮುಖಿ, ಆಕ್ರೋಶದಿ ತುಡಿಯುವ ಮೂಕಮನಸ್ಸುಸಾಸಿವೆಯಷ್ಟು ಸಮಾಧಾನವಿಲ್ಲ, ಇಹಪರಗಳಾಚೆಗೂ ನಿಲುಕದ ಮಾಯೆತನ್ನೊಳಗೆ ಮನೆಯ ಮಾಡಿಗುಂಗಿ ಹುಳುವಿನಂತೆ ಕೊರೆದುಕಾಡಿ ಪೀಡಿಸುತಿದೆ, ತನ್ನೊಳಗೆ ಹುದುಗಿರುವ ಮಾಯೆಯಬಲೆಯ ಕಳಚಲು,ಅಟ್ಟ-ಬೆಟ್ಟಗಳ  ದಾಟಿ,ಕಾಡು-ಕಣಿವೆಯ ಸುತ್ತಿ,ಬಟ್ಟ ಬಯಲನು ಇಳಿದುಮುನ್ನಡೆಯಬೇಕು, ಜಗದ ಕತ್ತಲ ಕಳೆಯಲುಅರಿವೆಂಬ ಹಣತೆಯಹೊತ್ತಿಸಲೇ ಬೇಕು. ಶ್ರೀನಿವಾಸ ಕೆ.ಎಂಕನ್ನಡ ಸಹಾಯಕ ಪ್ರಾಧ್ಯಾಪಕರುವೇದಾಂತ ಪದವಿ ಕಾಲೇಜು,ಬೆಂಗಳೂರು.

ಶ್ರೀನಿವಾಸ ಕೆ.ಎಂ ಅವರ ಎರಡು ಕವಿತೆಗಳು Read Post »

ಕಾವ್ಯಯಾನ

ವಿಜಯಲಕ್ಷ್ಮಿ ಕೆ ಹಂಗರಗಿ ಅವರ ಕವಿತೆ,”ಸಾಧಿಸುವ ಛಲವೊಂದೇ”

ಕಾವ್ಯ ಸಂಗಾತಿ ವಿಜಯಲಕ್ಷ್ಮಿ ಕೆ ಹಂಗರಗಿ “ಸಾಧಿಸುವ ಛಲವೊಂದೇ” ಸಾಗುವ ಜಗದಲಿಹಲವು ಟೀಕೆಗಳಿರಲಿಕೆಲವು ತಪ್ಪುಒಪ್ಪುಗಳಿರಲಿನಡೆಯಬೇಕು ನಮ್ಮತನದಲಿ// ಏನೇ ಬರಲಿ ಕಷ್ಟಹೇಗೆ ಬರಲಿ ಸುಖಹಿಗ್ಗದೆ ಕುಗ್ಗದೆಮುನ್ನುಗ್ಗಿ ಸಾಗು // ಸಾಕಿ ಸಲುಹಲುಯಾರಿಲ್ಲ ಜೊತೆಯಲಿಕೊರಗದಿರು ಮನದಲಿಬೆಳೆಯೋಣ ನಮಗೆ ನಾವೇಜೀವನ ಪಯಣದಲಿ// ಛಲಬೇಕು ಬೆಳೆಯಲುಮನದಲಿ ಬರಬೇಕುಸ್ವಲ್ಪ ಅವಕಾಶ ಸಿಕ್ಕರೂಹಿಡಿದು ಮುನ್ನುಗ್ಗಬೇಕು// ನಿನ್ನ ಒಲವು ನಿನಗೆನಿನ್ನ ಗುರಿ ನಿನಗೆನಿನ್ನ ನೋಟವೊಂದೇಸಾಧಿಸಿ ನಗುವ ಛಲವೊಂದೇ// ವಿಜಯಲಕ್ಷ್ಮಿ ಕೆ ಹಂಗರಗಿ

ವಿಜಯಲಕ್ಷ್ಮಿ ಕೆ ಹಂಗರಗಿ ಅವರ ಕವಿತೆ,”ಸಾಧಿಸುವ ಛಲವೊಂದೇ” Read Post »

ಕಾವ್ಯಯಾನ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು”

ಕಾವ್ಯ ಸಂಗಾತಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು” ಇನ್ನು ಇದೆ ಹೇಳುವುದು…ಕೇಳಿಕೊಳ್ಳಿ ಬಂಧುಗಳೇನಿಮ್ಮ ಜೊತೆ ಬಹುಪಾಲು ವಿಷಯ ಹಂಚಿಕೊಳ್ಳಬೇಕಿದೆಸಮಯ ಗಮನ ಕೊಟ್ಟು ಕೇಳಿನಾನು ನೀವು ಇಲ್ಲಿ ಬದುಕ ಬೇಕಿದೆ. ಮೋಸ ವಂಚನೆ ಸುಳ್ಳುಗಳು ಅಧಿಕಾರ ಹಿಡಿದಿರುವಾಗ ಹತ್ತಿಕುವುದು ದಮನಿಸುವುದು ಕಾನೂನು ಕಟ್ಟಳೆಯಾಗಿವೆಸತ್ಯಕ್ಕೆ, ನ್ಯಾಯಕ್ಕೆ ಸಂಘರ್ಷಕೆಇನ್ನೂ ಇದೆಯಾ ಬದುಕು? ಸತ್ಯವ ನುಡಿದರೆ ಭಯೋತ್ಪಾದಕ ಎನ್ನುವರುನ್ಯಾಯವ ಕೇಳಿದರೆನಗರ ನಕ್ಷಲೈಟ್ ಎನ್ನುವರು ಮಾರಾಟವಾಗಿವೆ ಕೋರ್ಟ್ ಕಚೇರಿ ಹಕ್ಕಿಗೆ ಕೂಗುವ  ಹಾಗಿಲ್ಲಧ್ವನಿ ಎತ್ತುವ ಹಾಗಿಲ್ಲಚಳುವಳಿ ಮಾಡುವ ಸ್ಥಿತಿಯಿಲ್ಲ ಪೊಲೀಸರ ಗುಂಡು ಬೂಟಿನ ಸದ್ದುರಾತ್ರಿಗೆ ಹಗಲೆನ್ನಬೇಕುಕೋಳಿಗೆ ನವಿಲೆನ್ನಬೇಕು ಬುದ್ಧ ಬಸವ ಎಂದರೆತಾಲಿಬಾನಿ ಎನ್ನುವರುಜಾತಿ ಧರ್ಮದ ದ್ವೇಷ ಬಿತ್ತುವರುವೋಟಿನ ಮಾರುಕಟ್ಟೆಗೆಬಿಕರಿಯಾಗಿವೆ ಮಠ ಮಸೀದಿಚರ್ಚ್ ವಿಹಾರ ಬಸದಿಗಳುಇನ್ನೂ ಇದೆಯಾ ಭವಿಷ್ಯ ? ದೇಶ ಹತ್ತಿ ಉರಿಯುತ್ತಿದೆರಾಜರ ವಿದೇಶಿ ಪ್ರವಾಸಮಂತ್ರಿಗಳು ಕೊಳ್ಳೆ ಹೊಡೆಯುತ್ತಿದ್ದಾರೆಬುದ್ಧಿ ಜೀವಿಗಳ ಗಾಢ ನಿದ್ದೆಪತ್ರಿಕೆ ಟಿವಿ ನೋಡುವ ಜನರುಇನ್ನೂ ಎದ್ದಿಲ್ಲ ದೇಶಕ್ಕೆ ನಾಡಿಗೆ ದಸರಾ ಪಲ್ಲಕ್ಕಿಯಲಿ ಮೆರವಣಿಗೆಸೋತವರ ಸತ್ತವರ ಗೊಂಬೆ ಕುಣಿತಪೊಲೀಸರ ಕವಾಯತ ನಮನಆನೆ ಒಂಟಿ ಕುದುರೆ ಸವಾರಿಮೋಸವೋ ಮೋಜು ಗೊತ್ತಾಗುತ್ತಿಲ್ಲ ಕೂಗುವ ಹಾಗಿಲ್ಲ ಶೋಷಕರ ವಿರುದ್ಧಇಂಕಿಲಾಬ್ ಘೋಷಣೆಒಬ್ಬನ ಸುಡಲು ಸಿದ್ಧ ನೂರು ಕೆಜಿ  ಸಿಡಿ ಮದ್ದುನ್ಯಾಯಕ್ಕೆ ಬೆಲೆಯಿಲ್ಲ ಜಾಮೀನಿಲ್ಲಸತ್ಯವಂತರ ಹತ್ಯೆ ನಿತ್ಯ ನಡೆದಿವೆ ಅದಕೆಂದೇ ನಾನೂಕೂಗಿ ಹೇಳುತ್ತೇನೆ…ನಾನು ಬಸವ ಧರ್ಮಿಗಣಾಚಾರವೇ ನನ್ನ ಅಸ್ತ್ರನಾನು ಇರುಳಿಗೆ ಹಗಲೆನ್ನುವುದಿಲ್ಲಕೋಳಿಗೆ ನವಿಲೆನ್ನುವುದಿಲ್ಲ ಈಗ ಮುಸ್ಸಂಜೆ ಕರಾಳ ಕತ್ತಲೆಯಾಗುವುದುಜೈಲಿನ ಬಿರುಕು ಗೋಡೆಯಲ್ಲಿಚಿಗುರಿದೆ ಬುದ್ಧನ ಅರಳಿ ಮರಮುಂಜಾನೆ ಕ್ರಾಂತಿಯ ಸೂರ್ಯಮತ್ತೆ ಹುಟ್ಟುವನುಭ್ರಮೆ ಭ್ರಾಂತಿ ಅಳೆದು ಬನ್ನಿ ಎದ್ದೇಳಿ ದುಷ್ಟ ಕಾರಸ್ಥಾನಕ್ಕೆಬಲಿಯಾದವರ ಉಳಿಸ ಬನ್ನಿನಿಮ್ಮ ಹಕ್ಕಿಗೆ ಘೋಷಣೆಯಾಗ ಬನ್ನಿಬುದ್ಧ ಬಸವ ಬಾಪು ಬಾಬಾಸಾಹೇಬರಮತ್ತೆ ಭುವಿಗೆ ಹೊತ್ತ ತನ್ನಿ ನಾನು ಬಸವನ ಒಕ್ಕಲುಬಸವ ಪಥಿಕ ಬಸವ ಧರ್ಮಿಎದ್ದು ಬನ್ನಿ ಗುದ್ದು ಬನ್ನಿಅಸಮತೆ ಅನ್ಯಾಯ ಶೋಷಣೆಗೆಕೊನೆ ಹೇಳೋಣ ಬನ್ನಿ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ “ನಾನು ಬಸವನ ಒಕ್ಕಲು” Read Post »

ಕಾವ್ಯಯಾನ

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ,”ಮನದಾಳದ ಮೌನ”

ಕಾವ್ಯ ಸಂಗಾತಿ ಲತಾ ಎ ಆರ್ ಬಾಳೆಹೊನ್ನೂರು “ಮನದಾಳದ ಮೌನ” ಕನಸುಗಳನ್ನು ಮಾರಿದ್ದೇನೆ ಆದರೆ ಕೊಳ್ಳುವವರಿಲ್ಲಮೂಕವಾಗಿ ರೋದಿಸುತ್ತಿದೆ ಮನ ಸಾಂತ್ವಾನ ಹೇಳುವವರಿಲ್ಲನನ್ನೊಡಲು ಬರಿದಾಗಿದೆ ಹೇಗೆಂದು ಅರ್ಥೈಸಲಾಗುತ್ತಿಲ್ಲ.ಜಗತ್ತಿನ ನಿಯತ್ತಿನ ಬಾಗಿಲು ತೆರೆಯುತ್ತಿದೆ ಯಾರಿಗೆ ಯಾರಿಲ್ಲ ಎಂಬುದು ಒಳ ಮನಸು ಕೇಳುತ್ತಿದೆ. ಎಲ್ಲವ ತಿಳಿಯುವುದು ತಡವಾಗಿದೆಆದರೂ ಬದುಕಲ್ಲಿ ಬದುಕುವ ಆಸೆ ಅವಮಾನಿಸಿದವರ ಮುಂದೆಅಭಿಮಾನದಿಂದ ಬೆಳೆವ ಬಯಕೆ ಚಿಗುರೋಡೆಯುತ್ತಿದೆ.ಕರ್ತವ್ಯ ನಿಭಾಯಿಸುವ ಭರದಲ್ಲಿ ದೇಹದ ಶಕ್ತಿ ಕುಂದುತ್ತಿದೆ ಆತ್ಮದಲ್ಲಿ ನೀನಿನ್ನು ಜೀವಂತ ವಾಗಿರುವೆ ಫಿನಿಕ್ಸ್ ಹಕ್ಕಿಯಂತೆಮರುಜನ್ಮ ಪಡೆಯುವ ಹೊಸ ಬಾಳಿನ ಹೊಂಗನಸಿನತ್ತ ವಾಸ್ತವತೆಯ ಲೋಕದಲಿನಿನ್ನ ಅಳಲು ಕೇಳುವವರಿಲ್ಲನಿನ್ನೊಲವು ಬೇಕಿಲ್ಲ ಯಾರಿಗೂಬರಡು ಭೂಮಿಯಂತಿರದೇಹೊಸತನದ ಹೊಸತರಲ್ಲಿ ಬದುಕಾಗಲಿ ಹಸನು ಹೊಸ ಹೂಗಳ ಚೆಲುವಂತೆ ಅರಳಲಿ ದಿಟ್ಟತನ ಸವೆಸಿದ ಕೆಟ್ಟ ಘಟನೆಗಳ ದಾರಿ ಮರೆತುಹೊಂಗಿರಣಗಳ ಬೆಳಕಾಗಲಿ ಮಧುರತೆಯ ಜೀವನ“ಓ ಹೃದಯವೇ ನೀ ಪರರಿಗಾಗಿ ಮಿಡಿದು ಸೋತಿರುವೆ ಕ್ಷಮಿಸಿ ಬಿಡು ನನ್ನನ್ನು “……. ನನಗಾಗಿ ನೀ ಮಿಡಿಯುತ್ತಿರು ಎಂದೆಂದಿಗೂ ನೀ ನಿಲ್ಲುವವರೆಗೂ……. ಲತಾ ಎ ಆರ್ ಬಾಳೆಹೊನ್ನೂರು

ಲತಾ ಎ ಆರ್ ಬಾಳೆಹೊನ್ನೂರು ಅವರ ಕವಿತೆ,”ಮನದಾಳದ ಮೌನ” Read Post »

ಕಾವ್ಯಯಾನ

ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ,”ಹೊಸ ವರ್ಷದ ಹೊಸ್ತಿಲು ದಾಟುವಾಗ”

ಕಾವ್ಯ ಸಂಗಾತಿ ಮಹಾಂತೇಶ್.ಬಿ.ನಿಟ್ಟೂರು “ಹೊಸ ವರ್ಷದ ಹೊಸ್ತಿಲು ದಾಟುವಾಗ” ಒಂದೊಂದು ಹೊಸ ವರ್ಷದಹೊಸ್ತಿಲು ದಾಟುವಾಗ ಮುಂದೇನುಎಂದು ಹೇಳಲಾಗದಿದ್ದರೂ…… ಅದೇ ಗಾಳಿ; ಮತ್ತದರ ಪಾಳಿದಿಕ್ಕು ಬದಲಿಸಿಕಚಗುಳಿ ಇಡುವ ಚಾಳಿ ಅದೇ ನೀರು;ಮಳೆ ಬಂದಾಗ ಹರಿಯುವುದು  ಜೋರುಇಲ್ಲದಿರೆ ಬರದ ಕಾರು-ಬಾರು ಅದೇ ಬೆಳಕು; ಜ್ಞಾನದ ಸೆಳಕು ಮಡಿ-ಮೈಲಿಗೆಯಿಂದಾಗಿದೆಭಯಂಕರ ಕೊಳಕು ಅದೇ ಭಾನು;ಮೋಡಗಳ ಹಾಜರಿಗೈರು ಹಾಜರಿಯ ನಡುವೆ ಕಮಾನು ಕಟ್ಟಿದ ಬಾನು ಅದೇ ಹಗಲು;ಸಕಲ ಜೀವ ಸಂಕುಲದ ಹೆಗಲುಹೆಜ್ಜೆಯ ಗೆಜ್ಜೆಯ ತುಂಬಾ ದಿಗಿಲು ಅದೇ ಇರುಳು;ಒಡಲು ತುಂಬುವ ಕರುಳುಕನಸಿನ ಕಿಟಕಿಯಿಂದ ಕಾಣುವನನಸು ಮಾಡುವ ಮನದಮಾತುಗಳ ತಿರುಳು ಅದೇ ನೆಲ;ಬಿತ್ತಿದಂತೆ ಬೆಳೆಯುವ ಹೊಲದೇಕರಿಕೆಗೆ ತಕ್ಕಂತೆ ಸಿಕ್ಕುವುದು ಫಲ ಅದೇ ಗೋಡೆಗೆ ನೇತು ಹಾಕುವಹೊಸ ವರ್ಷದ ಕ್ಯಾಲೆಂಡರ್ಸಾರಿ ಹೇಳುತ್ತದೆ; ಬದಲಾವಣೆ ಜಗದ ನಿಯಮ ಇಂತಿರಲು……..ಕುಡಿದು, ತಿಂದು, ಕೇಕೆ ಹಾಕಿಚರಂಡಿಗೆ ಬಿದ್ದು, ಹೊರಳಾಡಿ ಎದ್ದುಮನೆಗೆ ತಲುಪಿದಾಗ ಚಂದ್ರನೂರಿನಲ್ಲಿ ನಕ್ಷತ್ರಗಳ ಚಪ್ಪಾಳೆ ಸದ್ದು  ಭೂಮಿಗೆ ಮುಟ್ಟಿತ್ತುಯಥಾ ಪ್ರಕಾರ ಮುಂಜಾವಿಗೆಕೋಳಿ ಕೂಗಿತ್ತು ಹೊಸ ವರ್ಷದ ಹೊಸ್ತಿಲು ದಾಟುವಾಗವಿನಾಕಾರಣ ಎಡವಿ ಬೀಳದಿರಲಿ,ಜಗತ್ತಿಗೆ ಕೇಡುಗಳು ಬಾರದಿರಲಿ,ಎಲ್ಲರಿಗೂ ಶುಭವಾಗಲಿ…  ಮಹಾಂತೇಶ್.ಬಿ.ನಿಟ್ಟೂರು         

ಮಹಾಂತೇಶ್.ಬಿ.ನಿಟ್ಟೂರು ಅವರ ಕವಿತೆ,”ಹೊಸ ವರ್ಷದ ಹೊಸ್ತಿಲು ದಾಟುವಾಗ” Read Post »

ಕಾವ್ಯಯಾನ

ಜಯಶ್ರೀ ಎಸ್ ಪಾಟೀಲ ಅವರ ಕವಿತೆ “ನಾ ಕಂಡ ಐರಲ್ಯಾಂಡ”

ಕಾವ್ಯ ಸಂಗಾತಿ ಜಯಶ್ರೀ ಎಸ್ ಪಾಟೀಲ “ನಾ ಕಂಡ ಐರಲ್ಯಾಂಡ” ಐರಲ್ಯಾಂಡದಲ್ಲಿ ಕಾಲಿಟ್ಟಾಗ ನಾವುಫ್ರಿಡ್ಜನಲ್ಲಿ ಹೋಗುತ್ತಿದ್ದಂತೆ ಭಾಸವುಮೋಡ ಕವಿದ ವಾತಾವರಣವುಜಿಟಿಜಿಟಿ ಮಳೆ ಗಾಳಿಯ ಅನುಭವವು ಹೊರಗಡೆ ಹೊರಟರೆ ನೋ ಡೌಟ್ಎರಡು ಪ್ಯಾಂಟ್ ಎರಡು ಶರ್ಟ್ಶೂಸ್ ಮತ್ತು ಸಾಕ್ಸ್ ಒಂದು ಜಾಕೆಟ್ನಮ್ಮ ಧಿರಿಸಿನಿಂದ ನಾವು ಸ್ಮಾರ್ಟ್ ತೆಗ್ಗುದಿನ್ನಿ ಇಲ್ಲದ ಸರಳ ದಾರಿಗಳುಮನುಷ್ಯರಿಗಿಂತ ಹೆಚ್ಚು ಕಾರುಗಳುದೊಡ್ಡ ಪ್ರಮಾಣದ ಮಾಲ್ ಕಟ್ಟಡಗಳುಒಂದೇ ತರಹದ ಮನೆಯ ವಿನ್ಯಾಸಗಳು ಚೆಂದ ಚೆಂದ ಉದ್ಯಾನವನಗಳುಹಚ್ಚಹಸಿರು ಹುಲ್ಲಿನ ಹಾಸಿಗೆಗಳುಅಲ್ಲಲ್ಲಿ ಕೂಡಲು ಕಲ್ಲಿನ ಆಸನಗಳುಹಸಿಯಿರಲು ನಿಂತು ಸೋತವು ಕಾಲುಗಳು ಶಿಸ್ತು ಸ್ವಚ್ಛತೆಗೆ ಪ್ರಾಮುಖ್ಯತೆ ಇದೆತಾಳ್ಮೆ ಪ್ರೀತಿ ಪರಸ್ಪರ ಸಹಕಾರವಿದೆನೀತಿ ನಿಯಮಗಳ ಪಾಲನೆಯಿದೆಪ್ರಾಣಿ ಪಕ್ಷಿಗಳಿಗೆ ಬಲು ಕಾಳಜಿಯಿದೆ ಪ್ರಕೃತಿಯ ಸೌಂದರ್ಯ ಅತಿ ಸುಂದರಧೂಳಿಲ್ಲದ ಸ್ವಚ್ಛ ಶುದ್ಧ ಪರಿಸರವಿವಿಧ ಬಣ್ಣದಲಿ ಕೆರೆ ನದಿ ಸಾಗರದಾರಿಯುದ್ದ ಚೆಂದದ ಕ್ರಿಸ್ಮಸ್ ಮರ ಜನರ ಮಾತಿನಲ್ಲಿ ಇಲ್ಲ ಧ್ವನಿ ಏರುಮಕ್ಕಳ ಮೇಲೆ ಮಾಡೋಹಾಗಿಲ್ಲ ಜೋರುತಮ್ಮ ಕೆಲಸ ತಾವೇ ಮಾಡುವ ಜಾಣರುನಿಯಮಪಾಲನೆಯಿಂದ ಚೆಂದ ಈ ಊರು ಜಯಶ್ರೀ ಎಸ್ ಪಾಟೀಲ,ಧಾರವಾಡ

ಜಯಶ್ರೀ ಎಸ್ ಪಾಟೀಲ ಅವರ ಕವಿತೆ “ನಾ ಕಂಡ ಐರಲ್ಯಾಂಡ” Read Post »

ಕಾವ್ಯಯಾನ

ಶ್ರೀನಿವಾಸ ಖರೀದಿ ಕವಿತೆ, ” ಕ್ಯಾಲೆಂಡರ್ ದಿನ”

ಕಾವ್ಯ ಸಂಗಾತಿ ಶ್ರೀನಿವಾಸ ಖರೀದಿ ” ಕ್ಯಾಲೆಂಡರ್ ದಿನ” ನಿನ್ನೆಯ ಕ್ಯಾಲೆಂಡರ್‌ನ ದಿನಗಳು,ಮುದುಡಿ ಇತಿಹಾಸದ ಪುಟವ ಸೇರಿವೆ..ಹೊಸ ವರುಷವು, ಹೊಸ ನಿರೀಕ್ಷೆಗಳೊಂದಿಗೆ,ರೆಕ್ಕೆ ಬಿಚ್ಚಿ ಅರಳಿವೆ॥ ಉದಯರವಿಯ ಮೊದಲ ಕಿರಣದಂತೆ,ಬೆಳಗಲಿ ನಮ್ಮೆಲ್ಲರ ಬದುಕು..ಮೂಡಣ ಸೂರ್ಯನಂತೆ, ಪ್ರತಿಯೊಬ್ಬರ ಜೀವನದಲ್ಲಿಶಾಂತಿ-ನೆಮ್ಮದಿ ಮನೆಮಾಡಲಿ॥ ನಿನ್ನೆಗಳ ತಪ್ಪುಗಳು,ಇಂದು ಪಾಠಗಳಾಗಲಿ..ನಾಳೆಯ ಕನಸುಗಳು,ಭರವಸೆಯೊಂದಿಗೆ ಮೂಡಲಿ॥ ಬದುಕು ಸದಾ ಹಾಡಲಿ,ಸಾರ್ಥಕತೆಯ ಗೀತೆ..ಮನ–ಮನೆಗಳಲ್ಲಿ ಬೆಸೆಯಲಿ,ಬದುಕಿನ ಮಧುರ ಸಂಗೀತೆ॥ ಬಂದಿದೆ ಸಂಭ್ರಮದಿಹೊಸ ವರುಷ..ಹೊತ್ತು ತರಲಿ ಸಡಗರದಿ,ನವ ಹರುಷ॥ ಶ್ರೀನಿವಾಸಖರೀದಿ

ಶ್ರೀನಿವಾಸ ಖರೀದಿ ಕವಿತೆ, ” ಕ್ಯಾಲೆಂಡರ್ ದಿನ” Read Post »

ಕಾವ್ಯಯಾನ

ಮೀನಾಕ್ಷಿ ಪಾಟೀಲ ಅವರ ಕವಿತೆ “ಅವಳಿಲ್ಲದ ಊರಲ್ಲಿ”

ಕಾವ್ಯ ಸಂಗಾತಿ ಮೀನಾಕ್ಷಿ ಪಾಟೀಲ “ಅವಳಿಲ್ಲದ ಊರಲ್ಲಿ” ಅವಳಿಲ್ಲದ ಊರಲ್ಲಿತಂಗಾಳಿ ಬಿಸಿಯಾಗಿಬೆಂದು ಹೋಗಿದೆ ಜೀವ ಅವಳಿಲ್ಲದ ಊರಲ್ಲಿಬೆಳದಿಂಗಳು ಬಿಸಿಲಾಗಿಚಂದ್ರನೇ ಬೆವರಿದ ಅವಳಿಲ್ಲದ ಊರಲ್ಲಿನೆನಪು ಮರುಕಳಿಸಿಊರಲಾರದೆ ಹೆಜ್ಜೆ ಭಾರವಾಗಿದೆ ಅವಳಿಲ್ಲದ ಊರಲ್ಲಿಸುತ್ತಲೂ ಕಡೆಗಣ್ಣುಹುಡುಕಾಡಿದೆ ಮನ ಅವಳ ನೆರಳನ್ನು ಅವಳಿಲ್ಲದ ಊರಲ್ಲಿನಿದ್ದೆ ಕಾಣದು ಜೀವಕನಸಿನಲ್ಲಿ ಅವಳದೇ ಚೆಲುವು ಅವಳಿಲ್ಲದ ಊರಲ್ಲಿಗೂಡು ಕಟ್ಟಿವೆ ಕನಸುಗಳುಹೇಳಲು ಬಾರದೆ ನಡುಗಿವೆ ತುಟಿಯಂಚುಗಳು ಅವಳಿಲ್ಲದ ಊರಲ್ಲಿನೋವಿನ ಬಿರುಗಾಳಿಗೆನಲುಗಿದೆ ಅವಳು ನೆಟ್ಟ ಗುಲಾಬಿ ಅವಳಿಲ್ಲದ ಊರಲ್ಲಿನಿಟ್ಟುಸಿರೊಂದು ಹಾಡಾಗಿಮಗುವಿನ ಕಿರುನಗೆಯೊಂದು ಸುಳಿದಿದೆ ಮೊಗದಿ ಮೀನಾಕ್ಷಿ ಪಾಟೀಲ

ಮೀನಾಕ್ಷಿ ಪಾಟೀಲ ಅವರ ಕವಿತೆ “ಅವಳಿಲ್ಲದ ಊರಲ್ಲಿ” Read Post »

ಕಾವ್ಯಯಾನ

ಶಂಕರ್ ಪಡಂಗ ಕಿಲ್ಪಾಡಿ “ಮುಟ್ಟಿದರೆ ಮುನಿ”

ಕಾವ್ಯ ಸಂಗಾತಿ ಶಂಕರ್ ಪಡಂಗ ಕಿಲ್ಪಾಡಿ “ಮುಟ್ಟಿದರೆ ಮುನಿ” ಮುಟ್ಟಿದರೆ ಮುನಿಯಾರು ಹೆಸರ ಇಟ್ಟರುನಿನಗೆ  ,ಲಜ್ಜಾವತಿಯಲ್ಲವೆ ನೀನು?ಹೆಜ್ಜೆ ಸಪ್ಪಳಕೆ ನಾಚುತ್ತಾಮುದುಡುವ ನೀನುಲಜ್ಜಾವತಿ ಎಂದರೆತಪ್ಪೇನು…?ಮುಂಜಾನೆಯ ರವಿಕಿರಣಕ್ಕೆ ಹೊಳೆಯುವನಿನ್ನ ಹೂವಿನಂದವನೋಡುವುದೇ ಸೊಗಸು ,ಸುಗಂಧ ಇಲ್ಲದಿದ್ದರೂಚೆಲುವಿಗಿಲ್ಲ ಬರ ,ಆದರೂ ದೇವರಮುಡಿಗೇರಲಿಲ್ಲ ,ಮಾನಿನಿಯರೂ ದೂರಬಲು ದೂರ ,ಯಾಕಿಷ್ಟು ಕೋಪ ನಿನ್ನಲ್ಲಿ  ?ನೀರು,ಗೊಬ್ಬರ ನೀಡದಿದ್ದರೂನೀ ಬೆಳೆವೆ ಹುಲುಸಾಗಿಯಾರ ಹಂಗಿಲ್ಲದೆ ,ಮದ್ದಿನರಮನೆ ನೀನುಕಿತ್ತೊಗೆಯುವರುಉಪಕಾರ ಸ್ಮರಣೆಇಲ್ಲದ ಜನರು,ನಿನ್ನ ನಿಜಗುಣವಮರೆತಿಹರು ಎಪ್ಟಾದರೂತಾಮಸಿಗರಲ್ಲವೇ..? ಶಂಕರ್ ಪಡಂಗ ಕಿಲ್ಪಾಡಿ

ಶಂಕರ್ ಪಡಂಗ ಕಿಲ್ಪಾಡಿ “ಮುಟ್ಟಿದರೆ ಮುನಿ” Read Post »

ಕಾವ್ಯಯಾನ

ಮಧುಮಾಲತಿ ರುದ್ರೇಶ್ ಕವಿತೆ ಅಕ್ಷರ ಮಾತೆ

ಕಾವ್ಯ ಸಂಗಾತಿ ಮಧುಮಾಲತಿ ರುದ್ರೇಶ್ ಕವಿತೆ ಅಕ್ಷರ ಮಾತೆ ಅಕ್ಷರದವ್ವ ನೀವು ಮಾತೆ ಸಾವಿತ್ರಿಬಾಯಿˌˌˌಎಲೆ ಮರೆಯ ಗಿಣಿಯಂತಿದ್ದ ತ್ಯಾಗಮಯಿˌˌ ನಿನ್ನ ಸೇವೆಗೆ ಸಾಟಿ ಬೇರಿಲ್ಲ ಯಾರು ˌˌˌಬೇಡುವೆವು ನಿನಗೆ ಬರಲಿ ಜನ್ಮ ನೂರುˌˌ ಬಾಲೆಯರ ಶಿಕ್ಷಣದ ಆಶಾಜ್ಯೋತಿ ನೀವುˌˌˌಅಕ್ಷರದ ದೀಪ ಬೆಳಗಿದಿರಿ ಸಮಾಜದಿ ತಾವುˌˌ ಮೌಢ್ಯತೆಯ ಮೆಟ್ಟಿನಿಂತ ಧೀಮಂತ ನಾರಿˌˌˌಸಹಿಸಿದಿರಿ ನೂರೆಂಟು ಅಪಮಾನದ ದಳ್ಳುರಿˌˌˌ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನಾಂದಿ ಹಾಡಿದಿರಿ ಅಂದುˌˌˌನೀವು ಹೊತ್ತಿಸಿದ ಹಣತೆಗೆ ತೈಲವೆರೆವೆವು ಇಂದುˌˌ ಪತಿ ಫುಲೆಯ ಪ್ರೋತ್ಸಾಹವೇ ನಿಮ್ಮ ಶಕ್ತಿಯುˌˌˌಆದರ್ಶ ಶಿಕ್ಷಕಿ ನಿಮ್ಮ ಜೀವನವೆ ಸ್ಫೂರ್ತಿಯುˌˌˌ ನಿಮ್ಮ ನಿಸ್ವಾರ್ಥ ಸೇವೆಗೆ ಲೋಕವೇ ಬೆರಗುˌˌಧನ್ಯತಾಭಾವ “ಪ್ರಥಮ ಶಿಕ್ಷಕಿ” ಎಂಬ ಬಿರುದಿಗೂˌˌˌˌ ನಿಮ್ಮ ಪಡೆದ ಭಾರತಾಂಬೆ ತಾನೆಂದೂ ಮಾನ್ಯಳುˌˌಅಮರವೇ ಎಂದಿಗೂ ನಿಮ್ಮ ಆದರ್ಶಗಳುˌˌˌ ———– ಮಧುಮಾಲತಿ ರುದ್ರೇಶ್

ಮಧುಮಾಲತಿ ರುದ್ರೇಶ್ ಕವಿತೆ ಅಕ್ಷರ ಮಾತೆ Read Post »

You cannot copy content of this page

Scroll to Top