ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”-ಡಾ. ಸತೀಶ ಕೆ. ಇಟಗಿ

ಶರಣ ಸಂಗಾತಿ “ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”- ಡಾ. ಸತೀಶ ಕೆ. ಇಟಗಿ “ಜಂಗಮ” ಎಂಬ ಪದವು ಸಂಸ್ಕೃತ ಮೂಲದಾಗಿದ್ದು, ಕನ್ನಡದಲ್ಲಿ ಚಲಿಸುವ, ನಡುಗುವ ರ‍್ಥದಲ್ಲಿ ಬಳಕೆಯಾಗುತ್ತದೆ. ಶಿವ ಅಥವಾ ಚಲಿಸುವ ಶಿವಸ್ವರೂಪ ಎಂಬ ರ‍್ಥದಲ್ಲಿ ಉಲ್ಲೇಖವಾಗುತ್ತದೆ. ಜಂಗಮರು ಎಂದರೆ ಶಿವಭಕ್ತರಾದ ಸಾಧುಗಳು ಅಥವಾ ಲಿಂಗಾಯತ ಪಂಥದ ಧರ‍್ಮಿಕ ಗುರುಗಳು, ಅವರು ತಾವು ಧರಿಸುವ ಇಷ್ಟಲಿಂಗದ ಮೂಲಕ ಶಿವನನ್ನು ಪ್ರತಿಪಾದಿಸುತ್ತಾರೆ. ಜಂಗಮನು ಸಜೀವ ಶಿವನ ಪ್ರತೀಕ. ಬಸವಾದಿ ಪ್ರಮಥರ ಪ್ರಕಾರ, “ಜಂಗಮ ಪದದ ವಿಶೇಷ ವ್ಯಾಖ್ಯಾನವು ಬಹುಮಾನ್ಯವಾಗಿದೆ. ಈ ವ್ಯಾಖ್ಯಾನವು ವಿಶೇಷವಾಗಿ ವಚನ ಸಾಹಿತ್ಯ ಮತ್ತು ಶರಣ ಪರಂಪರೆಯೊಂದಿಗೆ ಸಂಬಂಧ ಹೊಂದಿದೆ,”ಗಮ” ಎಂದರೆ ಹೋಗು, ಚಲನೆ. “ಜಂಗಮ” ಎಂದರೆ ಚಲಿಸುವ, ಅಲೆದಾಡುವ, ಸ್ಥಿರವಲ್ಲದ. ಅಲ್ಲಲ್ಲಿ ಅಲೆದಾಡುತ್ತಾ, ಇಷ್ಟಲಿಂಗವನ್ನು ಧರಿಸಿ, ಶಿವದರ‍್ಶನವನ್ನು ಪಸರಿಸುವ ಶ್ರೇಷ್ಠ ವ್ಯಕ್ತಿ. ಇನ್ನು ಕೆಲ ಕಡೆ “ಜಂಗಮ” ಎಂಬ ಶಬ್ದವನ್ನು ಶಿವನ ಚರ ರೂಪಕ್ಕೂ ಉಪಯೋಗಿಸುತ್ತಾರೆ.ಮೂರು ಲಿಂಗಗಳು:೧ಇಷ್ಟಲಿಂಗ: ವ್ಯಕ್ತಿಯ ಹೃದಯದಲ್ಲಿ ಧ್ಯಾನಿಸುವ ದೇವರೂಪ.೨.ಪ್ರಾಣಲಿಂಗ: ಶ್ವಾಸ, ಜೀವನ ಶಕ್ತಿ.೩.ಜಂಗಮಲಿಂಗ: ಭಕ್ತಿಗೆ ಪಾಠ ಮಾಡುವ ಜೀವಂತ ಜಂಗಮ.ಜಂಗಮರು ಸಮಾಜದಲ್ಲಿ ಸನ್ಯಾಸಿಗಳಂತೆ ಭ್ರಮಣ ಮಾಡುತ್ತಿದ್ದರು. ತತ್ವ ಬೋಧನೆ, ಧರ‍್ಮ ಪ್ರಚಾರ, ದಾನ ಸ್ವೀಕಾರ ಮುಂತಾದ ಕರ‍್ಯಗಳಲ್ಲಿ ತೊಡಗಿದ್ದರು. ಇವರು ಆಚಾರ-ವಿಚಾರ, ಶುದ್ಧ ಜೀವನ, ಸಮಾನತೆಯ ತತ್ವಗಳಿಗೆ ಬದ್ಧರಾಗಿದ್ದರು. ಬಸವಣ್ಣ ಮತ್ತು ಇತರ ಶರಣರು “ಜಂಗಮ” ಎಂಬ ಪದಕ್ಕೆ ಆಧ್ಯಾತ್ಮಿಕ ಮತ್ತು ತಾತ್ವಿಕ ರ‍್ಥ ನೀಡುತ್ತಾರೆ. ಇದನ್ನು ಅವರು ದೈಹಿಕ ಚಲನೆಗಿಂತ ಹೆಚ್ಚಾಗಿ ಒಂದು ಧರ‍್ಮಿಕ ಹಾಗೂ ತತ್ತ್ವಜ್ಞಾನದ ದೃಷ್ಟಿಕೋನದಿಂದ ವಿವರಣೆ ಮಾಡುತ್ತಾರೆ. “ಜಂಗಮವು ಸ್ಥಾವರವಲ್ಲ, ಜಡವಲ್ಲ; ಜ್ಞಾನದಿಂದ ಜೀವನವಂತಾಗಿರುವ ಶಿವಸ್ವರೂಪ.”. ಇಷ್ಟಲಿಂಗವನ್ನು ಧರಿಸಿ, ತನ್ನ ಜೀವನವನ್ನು ಶಿವಭಕ್ತಿಗೆ ಮೀಸಲಿಟ್ಟ ವ್ಯಕ್ತಿ. ಜಂಗಮನು. ಅಹಂಕಾರವಿಲ್ಲದ, ವೈರಾಗ್ಯವಿರುವ, ಶುದ್ಧ ಚರಿತ್ರೆಯುಳ್ಳ, ಜನಸೇವೆಗೆ ತೊಡಗಿದ ಶರಣ. ಜಂಗಮ. ಸಮಾಜದಲ್ಲಿ ತಿರುಗಿ, ರ‍್ಮಬೋಧನೆ ಮಾಡುವ ಚಲಿಸುವ ದೇವರು. ಸ್ಥಾವರ ದೈವ ಅಲ್ಲ, ಜಂಗಮವೇ ದೈವ”, ಅಂದರೆ ಶಿವ ರ‍್ಭಗುಡಿ, ದೇವಸ್ಥಾನದಲ್ಲಿ ಇರದೆ, ಚಲಿಸುವ ವ್ಯಕ್ತಿಯಲ್ಲಿಯೇ ದೇವರ ತತ್ವವಿದೆ ಎಂಬ ಬಸವಣ್ಣನವರ ತತ್ತ್ವ.“ಸ್ಥಾವರವು ದೈವವಲ್ಲ, ಜಂಗಮವೇ ದೈವಸ್ಥಾವರ ಪೂಜಿಸಿ ಪಾಪ ಹರವುದೆ?ಜಂಗಮ ಸೇವಿಸಿ ಪಾವನರಾಗುವುದೆ?-ಕೂಡಲಸಂಗಮದೇವಾ”ಈ ವಚನದಲ್ಲಿ ಬಸವಣ್ಣನು ಸ್ಥಾವರ (ಸ್ಥಿರವಾದ ವಸ್ತುಗಳು) ಮತ್ತು ಜಂಗಮ (ಚಲಿಸುವ, ಜೀವಂತ) ಎಂಬ ಎರಡು ತತ್ತ್ವಗಳನ್ನು ಹೋಲಿಸಿ, ಶರಣ ರ‍್ಮದ ಅಂತರಂಗ ತತ್ತ್ವವನ್ನು ನಿರೂಪಿಸುತ್ತಾನೆ. “ಸ್ಥಾವರಕ್ಕು ದೈವವಲ್ಲ”, ದೇವರನ್ನು ಕಲ್ಲಿನಲ್ಲಿ, ಮರ‍್ತಿಯಲ್ಲಿ, ದೇವಾಲಯದ ಗೋಡೆಗಳಲ್ಲಿ ಹುಡುಕುವುದು ನಿಷ್ಪ್ರಯೋಜಕ. ಅಲ್ಲಿ ಜಡತೆಯಿದೆ, ಚೇತನವಿಲ್ಲ. ತತ್ತ್ವಜ್ಞಾನ, ಸತ್ಪ್ರವೃತ್ತಿ, ಸತ್ಯಾಚರಣೆ, ಭಕ್ತಿಶ್ರದ್ಧೆ ಇಷ್ಟಲಿಂಗ ಧರಿಸಿದ ವ್ಯಕ್ತಿ ಆತನೆ ಸಜೀವ ದೇವರು. ಅಂತಹ ವ್ಯಕ್ತಿಯ ಸೇವೆ, ಸತ್ಸಂಗ, ಅವರ ಮರ‍್ಗರ‍್ಶನ ಇವೇ ನಿಜವಾದ ದೇವಪೂಜೆ. “ಸ್ಥಾವರ ಪೂಜಿಸಿ ಪಾಪ ಹರವುದೆ?” -ಕಲ್ಲಿನ ಮರ‍್ತಿಗೆ ಪೂಜೆ ಮಾಡುವುದು ಪಾಪ ಪರಿಹಾರಕ್ಕೆ ಕಾರಣವಾಗದು, ಯಾಕಂದರೆ ಅದು ಚೈತನ್ಯವಿಲ್ಲದ ಜಡ ವಸ್ತು. “ಜಂಗಮ ಸೇವಿಸಿ ಪಾವನರಾಗುದೆ?” – ಜಂಗಮನ ಸೇವೆ (ಅಥವಾ ಜ್ಞಾನಿಗಳ ಜೊತೆಗಿನ ಸತ್ಸಂಗ, ಶ್ರದ್ಧಾ) ನಮಗೆ ಪವಿತ್ರತೆಯನ್ನು ನೀಡುತ್ತದೆ. ಆತ್ಮಶುದ್ಧಿಗೆ ದಾರಿ ಒದಗಿಸುತ್ತದೆ.ಜಂಗಮ ಜಾತಿ ವಾಚಕವೇ:ಮೂಲತಃ ಜಂಗಮ ಎನ್ನುವುದು ಜಾತಿವಾಚಕ ಅಲ್ಲ. ಜಂಗಮ ಎಂಬ ಪದವು ಮೊದಲು ಆಧ್ಯಾತ್ಮಿಕ ಸ್ಥಿತಿಯನ್ನು ಸೂಚಿಸುವ ತಾತ್ವಿಕ ಶಬ್ದವಾಗಿತ್ತು, ಜಾತಿಯನ್ನಲ್ಲ. ಆದರೆ… ಇತಿಹಾಸದಲ್ಲಿ ಕೆಲ ವಂಶಗಳು, ಮಠಗಳಿಗೆ ಮತ್ತು ರ‍್ಮಸೇವೆಗೆ ನಿರಂತರವಾಗಿ ಸಲ್ಲಿಸಿದವರ ವಂಶಾವಳಿಗೆ “ಜಂಗಮ” ಎಂಬ ಪದವು ಪರಂಪರೆಯ ಗುರುತ್ವದವಾಗಿ ಬಳಕೆಯಾಗತೊಡಗಿತು. ಈ ಕಾರಣದಿಂದ ಕೆಲವರು ಜಂಗಮರನ್ನು ಜಾತಿ/ರ‍್ಗ ಎಂದು ಪರಿಗಣಿಸುತ್ತಾರೆ. ಇದು ಸಾಂಸ್ಕೃತಿಕ, ಸಾಮಾಜಿಕ ಬಳಕೆ, ರ‍್ಮ ತಾತ್ವಿಕ ರ‍್ಥವಲ್ಲ. ಶರಣರ ನುಡಿಗಳ ಪ್ರಕಾರ “ಜಾತಿ ಇಲ್ಲ, ಭೇದ ಇಲ್ಲ, ಶುದ್ಧ ಭಕ್ತಿಯ”ಜಂಗಮ ಎಂದರೆ ಶಿವನ ದೂತ, ಎಲ್ಲರಿಗೂ ಸಮಾನ. ವಂಶಪಾರಂರ‍್ಯ ಜಂಗಮ, ಗುರು, ದೀಕ್ಷಿತ ವಂಶಪಾರಂರ‍್ಯ ಜಂಗಮ. ತಾವು ಆಧ್ಯಾತ್ಮಿಕ ಗುರುಕುಲದಿಂದ ಬಂದವರು ಎಂಬ ನಂಬಿಕೆಯುಳ್ಳ ಕುಟುಂಬಗಳು, ಜಂಗಮ ಜಾತಿವಾಚಕವಲ್ಲ. ಆದರೆ “ಜಂಗಮ” ಎಂಬುದು ವೈಯಕ್ತಿಕ ರ‍್ಹತೆ ಆಧಾರಿತ ಪದವಾಗಿದೆ. ಅಂದರೆ, ಜಂಗಮತ್ವವು ವ್ಯಕ್ತಿಯ ಔಪಚಾರಿಕ ಜಾತಿಯಿಂದ ಬರುವುದಿಲ್ಲ. ಅವನು ನರ‍್ಜಾತೀಯ, ಶುದ್ಧ ಚರಿತ್ರೆ, ಲಿಂಗಧಾರಿ, ಆತ್ಮಸಾಧನೆ ಮಾಡಿದವನೇ ಜಂಗಮ. “ಜಾತಿ ಬೇರೆ ಭಕ್ತಿ ಬೇರೆ ಎನಿಸಿದರೆ, ಅವನು ಶಿವನಲ್ಲ”, ಬಸವಣ್ಣ ಹೇಳುತ್ತಾರೆ, ಎಲ್ಲ ಶರಣರು ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳ ಮಾಚದೇವರು ವಿಭಿನ್ನ ಜಾತಿಗಳಿಂದ ಬಂದಿದ್ದರೂ, ಜಂಗಮತ್ವಕ್ಕೆ ರ‍್ಹರಾದರು. ಅವರಿಗೆ “ಜಂಗಮ” ಎಂಬ ಹುದ್ದೆ ಲಭಿಸಿದ್ದು, ಅವರ ಆತ್ಮಸಾಧನೆ, ಭಕ್ತಿ, ಲಿಂಗಪೂಜಾ ನಿಷ್ಠೆಯಿಂದ, ಜಾತಿಯಿಂದಲ್ಲ.ಐತಿಹಾಸಿಕ ಹಿನ್ನೆಲೆ:ಆಂಧ್ರಪ್ರದೇಶದಲ್ಲಿ ಮಲ್ಲಕಾರ್ಜುನ ಪಂಡಿತರಾಧ್ಯ ಎಂಬ ಶೈವ ಪಂಥದ ಪ್ರತಿಪಾದಕನಿದ್ದ. ಕಲ್ಯಾಣದ ವಚನ ಚಳುವಳಿ ಮತ್ತು ಶರಣ ತತ್ವದ ಬೆಳವಣಿಗೆ ಗಮನಿಸಿ, ಬೆರಗಾಗಿ ತನ್ನ ಶೈವ ತತ್ವ ಕೈಬಿಟ್ಟು, ಲಿಂಗಾಯತ ಜಂಗಮನಾದ. ಅದೇ ಸಂದರ್ಭದಲ್ಲಿ ಕಲ್ಯಾಣದಿಂದ ತೆಲುಗು ಭಾಷೆಯ ಪ್ರದೇಶದ ಕಡೆಗೆ ವಚನ ಪ್ರಚಾರ ಮತ್ತುಲಿಂಗಾಯತ ತತ್ವ ಪ್ರಸಾರಕ್ಕಾಗಿ ಸ್ವತಃ ಬಸವಣ್ಣನವರೆ ಕೆಲವು ಸಾದಕರನ್ನು ನೇಮಿಸಿದ್ದರು. ಅವರ ಕಾಲಿಗೆ ಜಂಗ್ (ಗೆಜ್ಜೆ) ಕಟ್ಟುತ್ತಿದ್ದರು. ಸದ್ದು ಮಾಡುತ್ತ ಮನೆಯಿಂದ ಮನೆಗೆ ಸಂಚರಿಸಿ ಭಕ್ತರು ಭಸ್ಮ ಧಾರಣೆ ಮತ್ತು ಲಿಂಗ ಧಾರಣೆ ಮಾಡಿದ್ದನ್ನು ಪರಿಕ್ಷೀಸುವುದು ಅವರ ಕಾಯಕವಾಗಿತ್ತು. ಅವರನ್ನೇ ಸಾರುವ ಐನಾರು, ಕಂಬಿ ಐನಾರು, ಜಂಗಿನ ಐನಾರು ಎಂದು ಕರೆಯಲಾಯ್ತು. ಕ್ರಮೇಣ ಅಂತಹ ಮನೆತನದವರನ್ನು ಓದುಸುಮಠ, ಭಿಕ್ಷÄಮಠ, ಸಾಲಿಮಠ, ಹಿರೇಮಠ ಎಂದೆಲ್ಲಾ ಪರಿವರ್ತಿಸಲಾಯಿತು. ಅವರುಗಳ ಮನೆಯಲ್ಲಿ ಬಸಯ್ಯ, ಮಡಿವಾಳಯ್ಯ, ಚನ್ನಯ್ಯ, ಶರಣಯ್ಯ, ಪ್ರಭಯ್ಯ, ಪ್ರಭುಸ್ವಾಮಿ, ಚನ್ನಬಸವಯ್ಯ, ಸಿದ್ದಯ್ಯ, ಸಿದ್ದಲಿಂಗಯ್ಯ, ಸಿದ್ರಾಮಯ್ಯ, ಮುಂತಾದ ಹೆಸರುಗಳ ನಾಮಕರಣ ಸಂಸ್ಕೃತಿ ಬೆಳೆಯಿತು. ಇಂದಿಗೂ ಬಹುತೇಕ ಜಂಗಮ ಕುಟುಂಬಗಳ ಮನೆ ದೇವರು (ಕುಲದೇವರು) ಉಳುವಿ, ಎಡೆಯೂರು, ಗುಡ್ಡಾಪುರ, ಸೊನ್ನಲಗಿ, ಮಲೈಮಹದೇಶ್ವರ ಎಂಬ ಪುಣ್ಯಕ್ಷೇತ್ರಗಳಾಗಿವೆ. ಅಂದರೆ ಕಲ್ಯಾಣ ಕ್ರಾಂತಿಯ ಬಳಿಕ ಬಹುತೇಕ ಜಂಗಮರು ಬಸವಾದಿ ಶರಣರನ್ನು ತಮ್ಮ ಕುಲದ ಗುರುಗಳನ್ನಾಗಿ ಸ್ವೀಕರಿಸಿ ಆರಾಧಿಸ ತೊಡಗಿದರು. ಅವರಲ್ಲಿ ಪ್ರಮುಖರೆಂದರೆ ಕಲ್ಬುರ್ಗಿ ಶರಣ ಬಸವೇಶ್ವರರು, ನಾಲತ್ವಾಡದ ವಿರೇಶ ಶರಣರು, ಅಥಣಿ ಶಿವಯೋಗಿಗಳು, ಧಾರವಾಡದ ಮೃತ್ಯಂಜಯ ಅಪ್ಪಗಳು, ಚಿತ್ತರಗಿ ವಿಜಯ ಮಹಾಂತೇಶ್ವರರು, ಕೊಲ್ಹಾಪುರದ ಕಾಡಸಿದ್ದೇಶ್ವರರು, ಗದಗ ತೋಂಟದಾರ್ಯರು, ಹುಬ್ಬಳ್ಳಿ ಮೂರುಸಾವಿರ ಮಠದ ಗುರು ಪರಂಪರೆ ಸೇರಿದಂತೆ ಬಹುತೇಕರು ಮೂಲತಃ ಜಂಗಮರಾಗಿದ್ದರೂ ಬಸವಾದಿ ಶರಣರ ತತ್ವವನ್ನು ಆರಾಧಿಸುವವರಾಗಿದ್ದಾರೆ.“ಬರಿಯ ಬೋಳುಗಳೆಲ್ಲಾ ಜಂಗಮವೆ?ಜಡಜೀವಿಗಳೆಲ್ಲಾ ಜಂಗಮವೆ?ವೇಷಧಾರಿಗಳೆಲ್ಲಾ ಜಂಗಮವೆ?ಇನ್ನಾವುದು ಜಂಗಮವೆದಡೆ;ನಿಸ್ಸೀಮನೆ ಜಂಗಮ,ನಿಜೈಕ್ಯನೆ ಜಂಗಮ,ಇAಥ ಜಂಗಮದ ಸುಳುಹ ಕಾಣದೆ,ಕೂಡಲ ಚನ್ನಸಂಗಮದೆವ ತಾನೆ ಜಂಗಮನಾದ”-ಅವಿರಳಜ್ಞಾನಿ, ಚನ್ನಬಸವಣ್ಣಜಂಗಮರು ಎಂಬವರು ಭಾರತೀಯ ಲಿಂಗಾಯತ ರ‍್ಮದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರ ತತ್ವ, ಜೀವನ ಶೈಲಿ, ಸಮಾಜ ಸೇವೆಯ ಮೂಲಕ ಅವರು ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಜಂಗಮ ಪರಂಪರೆ ಲಕ್ಷಾಂತರ ರ‍್ಷಗಳ ಹಿಂದೆಯೇ ಆರಂಭವಾಯಿತು ಎಂಬ ನಂಬಿಕೆ ಇದೆ. ಲಿಂಗಾಯತ ರ‍್ಮದ ಪ್ರಕಾರ ಬಸವಣ್ಣ, ಅಕ್ಕ ಮಹಾದೇವಿ, ಚನ್ನಬಸವಣ್ಣ, ಇವರು ಜಂಗಮ ಪರಂಪರೆಯ ಮಹತ್ವವನ್ನು ಗಟ್ಟಿಯಾಗಿ ಸಾರಿದರು. ೧೨ನೇ ಶತಮಾನದಲ್ಲಿ ಬಸವಣ್ಣನೇ ಜಂಗಮ ಪರಂಪರೆಯ ಸಾರಥಿಯಾಗಿದ್ದು, ಜಂಗಮರ ಹೆಗ್ಗುರುತು ನೀಡಿದರು. ಅವರು ಜಂಗಮರನ್ನು ಶಿವನ ಜೀವಂತ ರೂಪವೆಂದು ಪರಿಗಣಿಸಿದರು. ದರ‍್ಬಲರಿಗೆ ರ‍್ಮೋಪದೇಶ ನೀಡುವ ಕರ‍್ಯ ಮಾಡಿದರು. ಸಮಾನತೆಯ ಸಂದೇಶ ಸಾರಿದರು. ಹಲವಾರು ಜಂಗಮ ಮಠಗಳು ರ‍್ನಾಟಕ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತಮಿಳುನಾಡು ಹಾಗೂ ಉತ್ತರ ಭಾರತದ ಭಾಗಗಳಲ್ಲಿ ಸ್ಥಾಪಿತವಾದವು. ಈ ಮಠಗಳು ಶಿಕ್ಷಣ, ಧರ‍್ಮಿಕ ಆಚರಣೆ ಮತ್ತು ಸಮಾಜ ಸೇವೆಯ ಕೇಂದ್ರಗಳಾಗಿದ್ದವು. ವಚನಕಾರರು ತಮ್ಮ ವಚನಗಳಲ್ಲಿ ಜಂಗಮರ ಮಹಿಮೆ, ಪಾತ್ರ, ಸಿದ್ಧಾಂತಗಳನ್ನು ಪ್ರಶಂಸಿಸಿದ್ದಾರೆ. ಜಂಗಮರನ್ನು ರ‍್ಶನ ಮಾಡಿದವನು ಶಿವನನ್ನು ಕಂಡವನಂತೆ ಎಂದು ಹಲವಾರು ವಚನಗಳು ನುಡಿದಿವೆ. ಜಂಗಮರು ಜಾತಿ ಭೇದ, ಲಿಂಗ ಭೇದ, ಶ್ರೇಣಿಭೇದಗಳ ವಿರೋಧ ಮಾಡಿ ಸಮಾನತೆಯ ಸಂದೇಶ ಸಾರಿದರು. ಅವರು ಯಾವುದೇ ಭಿನ್ನತೆ ಇಲ್ಲದೆ ಎಲ್ಲರ ಮನೆಗಳಿಗೆ ಹೋಗಿ ಶಿವತತ್ವ ಸಾರಿದವರು.ಉತ್ತರ ಕರ‍್ನಾಟಕ ಮತ್ತು ಆಂಧ್ರದ ಕೆಲವು ಪ್ರದೇಶಗಳಲ್ಲಿ “ಬಸಳ ಜಂಗಮ”ಎಂಬ ಶಾಖೆ ಇದೆ. ಇವರು ಮಠ ಸೇವೆಗೆ ಮತ್ತು ಧರ‍್ಮಿಕ ಕರ‍್ಯಗಳಿಗೆ ಬದ್ಧರಾಗಿರುತ್ತಾರೆ. ಪಂಚಮಸಾಲಿ ಸಮುದಾಯದಲ್ಲಿ ಕೆಲವರೆಗೆ ಜಂಗಮ ಸೇವೆಯ ಪರಂಪರೆಯ ಹಿನ್ನಲೆ ಇದೆ. ಕೆಲ ಭಾಗಗಳಲ್ಲಿ “ಬಂಟನಾಡು ಜಂಗಮರು” ಎಂಬ ಪ್ರತ್ಯೇಕ ಗುರುಕುಲ ಪ್ರಚಾರದಲ್ಲಿದೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ “ವೀರಶೈವ ಜಂಗಮರು” ತಮ್ಮನ್ನು ಪ್ರತ್ಯೇಕ ಗುಂಪಾಗಿ ಗುರುತಿಸಿಕೊಂಡಿದ್ದಾರೆ. ಇವರು ಪೂಜಾ, ಪಾಠ, ಲಿಂಗ ಧಾರಣೆ, ಹಾಗೂ ಗ್ರಾಮೋಪದೇಶಕಾರರಾಗಿರುತ್ತಾರೆ. ಈ ವಂಶಗಳು ಜಂಗಮ ಗುರುಗಳಿಗೆ ಸೇವೆ ಮಾಡಿದವರು ಅಥವಾ ಅವರ ವಂಶಜರು ತಮ್ಮನ್ನು “ಜಂಗಮ” ಎಂದು ಗುರುತಿಸಿಕೊಂಡಿದ್ದಾರೆ: ಸೋಲಾಪುರ, ನಾಂದೇಡ್, ಲಾತೂರ್ ಮುಂತಾದ ಕಡೆಗಳಲ್ಲಿ ವೀರಶೈವ ಜಂಗಮ ಎಂಬ ಪ್ರತ್ಯೇಕ ಗುಂಪು ಕಂಡುಬರುತ್ತದೆ. ಈ ವಂಶಗಳು “ಜಂಗಮ” ಎಂಬ ಪದವನ್ನು ತಮ್ಮ ಗುರುತಾಗಿ ಬಳಸಿದರೂ, ಜಾತಿ ಅಥವಾ ವಂಶ ಬದಲಾಗಿಸಿಕೊಂಡಿದ್ದಾರೆ.ಜಂಗಮ ಹೆಸರಿನಿಂದ ಕಂದಾಚಾರ:ಅಲ್ಲಮಪ್ರಭು, ಬಸವಣ್ಣ, ಚನ್ನಬಸವಣ್ಣ ಮತ್ತು ಇತರ ಶರಣರು ನಕಲಿ ಜಂಗಮರ ವಿರುದ್ಧ ತೀವ್ರ ಎಚ್ಚರಿಕೆ ನೀಡಿದ್ದಾರೆ. ಬಸವಣ್ಣ ಹೇಳುತ್ತಾರೆ, “ಜಂಗಮವೆಂಬ ಪೈಲಾಸಕ್ಕೆ ಹೊದಿದ ಬಡವನು, ಜಾತಿಯನು ಮರೆಯದೆ, ಪಾಡಿನಲ್ಲಿ ಉರುಳಿದನು,ಅವನನ್ನು ಭಕ್ತನೆಂಬುದು ದೋಷ.” ಈ ವಚನದ ತಾತ್ರ‍್ಯ: ಕೆಲವರು ಹೊರಗೆ ಜಂಗಮದ ವೇಷ ಧರಿಸಿ, ಒಳಗೆ ಅಹಂಕಾರ, ಕಾಮ, ಲೋಭ ಇತ್ಯಾದಿ ತೊಟ್ಟುಕೊಂಡಿರುವರು. ಅಂತಹವರು ಕಂದಾಚಾರ (ಅರ‍್ಮಾಚರಣೆ) ಮಾಡುತ್ತಿದ್ದರೆ, ಅವರಿಗೆ ‘ಜಂಗಮ’ ಪದ ಹಕ್ಕಾಗಿಲ್ಲ. ಕಂದಾಚಾರದಲ್ಲಿ ತೊಡಗಿರುವ ಜಂಗಮರು ಭಾವವಿಲ್ಲದ ಲಿಂಗಪೂಜೆ, ಹಣಕ್ಕೆ ರ‍್ಮ ಮಾರಾಟ, ಲೈಂಗಿಕ ದರ‍್ಬಳಕೆ, ದುರಾಚಾರ ಇವೆಲ್ಲ ಶರಣ ರ‍್ಮದಲ್ಲಿ ತೀವ್ರ ಅಪರಾಧ. ಶರಣ ತತ್ತ್ವದ ವಿರುದ್ಧ. ಶರಣ ಪರಂಪರೆ ಅವರಿಗೆ ಮಾನ್ಯತೆ ನೀಡುವುದಿಲ್ಲ. ಅಂತಹವರಿಂದ ದೂರವಿರಬೇಕು. “ಜಂಗಮ” ಎಂಬ ಹೆಸರಿನಲ್ಲಿ ಹಣ, ಶೋಷಣೆ ಮಾಡುತ್ತಿರುವ ಸ್ಥಿತಿಗಳು ಕಂಡುಬರುತ್ತಿವೆ. ಇದು ರ‍್ಮ ದ್ರೋಹವೇ ಸರಿ. ಜಂಗಮ ಎಂಬ ಪದವನ್ನು ದುರುಪಯೋಗಪಡಿಸಿಕೊಂಡು, ಕಂದಾಚಾರದ ಅಪರಾಧಗಳಲ್ಲಿ ತೊಡಗಿರುವವರು ಶರಣ ರ‍್ಮದ, ಬಸವ ತತ್ತ್ವದ, ಲಿಂಗಾಯತ ಪರಂಪರೆಯ ಶತ್ರುಗಳೇ ಆಗಿದ್ದಾರೆ. ಜಂಗಮ ಎಂದು ಹೇಳಿಕೊಂಡು ಪಾದಪೂಜೆ, ಪಲ್ಲಕ್ಕಿ ಉತ್ಸವ, ಹಣ ವಸೂಲಿಗಳು ಶರಣ ರ‍್ಮದ ತತ್ತ್ವಕ್ಕೆ ವಿರುದ್ಧ. ಜಂಗಮನು ಕಪಟ ವಿರಹಿತ, ಲೋಭ ರಹಿತ, ಭಕ್ತರ ಸೇವಕ. ಜಂಗಮ ಪದವನ್ನು ಹೇಳಿಕೊಂಡು ಗೌರವ ಕೇಳಿಕೊಳ್ಳುವುದು ಸರಿಯಲ್ಲ. ನಿಜವಾದ ಜಂಗಮನು ಸ್ವಂತ ಏಳಿಗೆಗೆ ಅಲ್ಲ, ಭಕ್ತರ ಮರ‍್ಗರ‍್ಶನಕ್ಕಾಗಿರಬೇಕು. ಜಂಗಮನು ಭಕ್ತನ ಮನೆಗೆ ಬಂದು ಇಷ್ಟಲಿಂಗಕ್ಕೆ ಅನುಭವ ಬೋಧಿಸಬೇಕು. ಭಕ್ತನು ಹಣ ನೀಡಿದರೆ ಅದನ್ನು ಸ್ವೀಕರಿಸದಿರಬೇಕು. ಇಂದು ಜಂಗಮ ಎಂಬ ಪವಿತ್ರ ಪದವನ್ನು ವ್ಯಾಪಾರದಂತೆ ಬಳಸುತ್ತಿದ್ದಾರೆ. ಪಾದಪೂಜೆಗೆ ಪಾವತಿಸಬೇಕು, ಪಲ್ಲಕ್ಕಿಗೆ ಹಣ ನೀಡಬೇಕು. ಬಸವ ತತ್ತ್ವ, ಶರಣ ಸಂಪ್ರದಾಯ ಮತ್ತು ವಚನ ಸಾಹಿತ್ಯದಲ್ಲಿ ಜಾತಿವಾದ, ಬಾಹ್ಯಾಚಾರ, ಮರ‍್ತಿ ಪೂಜೆ, ಪಾದಪೂಜೆ ಎಲ್ಲವನ್ನೂ ತಿರಸ್ಕರಿಸಲಾಗಿದೆ. — . -ಡಾ. ಸತೀಶ ಕೆ. ಇಟಗಿಪತ್ರಿಕೋದ್ಯಮ ಉಪನ್ಯಾಸಕಅಂಚೆ: ಕೋಳೂರು-೫೮೬೧೨೯ತಾ: ಮುದ್ದೇಬಿಹಾಳ, ಜಿ: ವಿಜಯಪುರ (ಕರ್ನಾಟಕ ರಾಜ್ಯ)ಮೊ: ೯೨೪೧೨೮೬೪೨೨Email: satshitagi10@gmail.com,

“ಸ್ಥಾವರದೇವರಲ್ಲ, ಜಂಗಮಜಾತಿವಾಚಕವಲ್ಲ: ಅದರ ಕಂದಾಚಾರವೇ ಧರ್ಮದ್ರೋಹ”-ಡಾ. ಸತೀಶ ಕೆ. ಇಟಗಿ Read Post »

ಇತರೆ

“ಲಾಲ ಬಹದ್ದೂರ ಶಾಸ್ತ್ರಿ ಒಂದು ನೆನಪು”ವಿಜಯಲಕ್ಷ್ಮಿ ಹಂಗರಗಿ

ನೆನಪುಗಳ ಸಂಗಾತಿ ವಿಜಯಲಕ್ಷ್ಮಿ ಹಂಗರಗಿ “ಲಾಲ ಬಹದ್ದೂರ ಶಾಸ್ತ್ರಿ ಒಂದು ನೆನಪು” ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಕ್ಟೋಬರ್ 12 1904 ರಲ್ಲಿ ಜನಿಸಿದರು. ಇವರು ಸ್ವತಂತ್ರ ಭಾರತದ ಎರಡನೇ ಪ್ರಧಾನಿಯಾಗಿದ್ದರು. ಇವರು ಭಾರತದ ಸ್ವತಂತ್ರಕ್ಕಾಗಿ ಅವಿರತವಾಗಿ ಹೋರಾಡಿದರು.ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆ ಮತ್ತು ಪ್ರಮಾಣಿಕತೆ ಅವರ ಜೀವನದುದ್ದಕ್ಕೂ ಎದ್ದು ಕಾಣಿಸುತ್ತದೆ. ರೈಲ್ವೆ ಸಚಿವರಾಗಿದ್ದಾಗ ಸಂಭವಿಸಿದ ರೈಲು ಅಪಘಾತದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದು, ಪ್ರಧಾನಿಯಾದ ನಂತರ ಕಡಿಮೆ ವೇತನಕ್ಕೆ ತೃಪ್ತಿ ಪಟ್ಟಿ ಕೊಂಡು ಕಠಿಣ ಪರಿಸ್ಥಿತಿಯಲ್ಲಿ ದೇಶವನ್ನು ಮುನ್ನಡೆಸಿದ್ದು ಇವರ ಸರಳತೆಗೆ ಉದಾಹರಣೆಗಳು ಜಾತಿ ಪದ್ಧತಿಯನ್ನು ವಿರೋಧಿಸಿ ತಮ್ಮ ಹೆಸರಿನಲ್ಲಿದ್ದ ಜಾತಿ ಸೂಚಕವ ಪದವನ್ನು ತೆರೆದಿದ್ದು ಅವರ ಸರಳ ಮನೋಭಾವವನ್ನು ತೋರಿಸುತ್ತದೆ.ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಸರಳತೆಯ ಉದಾಹರಣೆಗಳು . *ನೈತಿಕ ಹೊಣೆಗಾರಿಕೆ:* ರೈಲ್ವೆ ಸಚಿವರಾಗಿದ್ದಾಗ ಕಲ್ಲೇಕುಚಿ ರೈಲು ದುರಂತ ಸಂಭವಿಸಿ ಅನೇಕ ಜನರು ಸಾವನ್ನಪ್ಪಿದಾಗ ಅದಕ್ಕೆ ನೈತಿಕಹೊಣೆ ಬರಲು ಅವರ ತಕ್ಷಣವೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.  *ಆರ್ಥಿಕ ಸರಳತೆ* ಪ್ರಧಾನಿಯಾಗಿದ್ದರೂ ಅವರು ಕೇವಲ 400 ತಿಂಗಳಿಗೆ ವೇತನ ಪಡೆಯುತ್ತಿದ್ದರು ತಮ್ಮ ಕುಟುಂಬದ ನಿರ್ವಹನಿಗೆ ಇದು ಸಾಕು ಎಂದು ಅವರು ಹೇಳಿದ್ದರು. ಅವರ ದೊಡ್ಡ ಮನೆ ನಿರ್ಮಾಣ ಮಾಡದೆ ತಮ್ಮ ಹಳೆಯ ವಾಸಸ್ಥಾನದಲ್ಲಿ ಮುಂದುವರೆದರು. ಜಾತಿ ಪದ್ಧತಿ ವಿರೋಧ ಅವರ ಹೆಸರಿನ ಜೊತೆಗಿದ್ದ ಜಾತಿ ಸೂಚಕ ಪದವನ್ನು ಅವರು ತೊರೆದರು. ಇದರ ಬದಲಾಗಿ ಕಾಶಿ ವಿದ್ಯಾರ್ಥಿದಲ್ಲಿ ಪದವಿ ಪಡೆದ ನಂತರ ಸಿಕ್ಕ ಶಾಸ್ತ್ರ ಎಂಬ ಬಿರುದನ್ನು ಅವರು ಬಳಸಲು ಪ್ರಾರಂಭಿಸಿದರು. ಜನರೊಂದಿಗೆ ನಿಕಟ ಸಂಬಂಧ ಆಹಾರ ಕೊರತೆಯ ಸಂದರ್ಭದಲ್ಲಿ ಅವರು ಜನರಿಗೆ ವಾರಕ್ಕೆ ಒಂದು ದಿನ ಉಪವಾಸ ಮಾಡಲು ಕರೆ ನೀಡಿದರು. ಇದು ಅವರ ಸರಳ ಜೀವನ ಶೈಲಿ ಮತ್ತು ಬದ್ಧತೆಯನ್ನು ತೋರಿಸುತ್ತದೆ. “ಜೈ ಜವಾನ್ ಜೈ ಕಿಸಾನ್ ಘೋಷಣೆ “1965ರ ಭಾರತ್ ಪಾಕಿಸ್ತಾನ ಯುದ್ಧದ ಸಮಯದಲ್ಲಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯನ್ನು ನೀಡಿದರು. ಇದು ದೇಶದ ಸೈನಿಕರು ಮತ್ತು ರೈತರ ಶ್ರಮವನ್ನು ಮತ್ತು ದೇಶದ ಏಕತೆಯನ್ನು ಸಾರಿತು.ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಕ್ಟೋಬರ್ 2 194 ರಂದು ಉತ್ತರ ಪ್ರದೇಶದ ಮುಗಲ್ ಸೈರಾಂನಲ್ಲಿ ಜನಿಸಿದರು ಅವರು ಭಾರತೀಯ ಹೋರಾಟದಲ್ಲಿ ಗಾಂಧೀಜಿಯವರ ಆದರ್ಶಗಳಿಂದ ಪ್ರಭಾವಿತರಾಗಲು 1921 ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಲು ತಮ್ಮ ಅಧ್ಯಯನವನ್ನು ಸ್ಥಗಿತಗೊಳಿಸಿದರು. 1926ರಲ್ಲಿ ಕಾಶಿ ವಿದ್ಯಾಪೀಠದಿಂದ ಪದವಿ ಪಡೆದ ನಂತರ ಅವರಿಗೆ ಶಾಸ್ತ್ರಿ ಎಂಬ ಬಿರುದು ನೀಡಲಾಯಿತು. ಸ್ವತಂತ್ರ ಹೋರಾಟಗಾರರಾಗಿ ಅನೇಕ ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ಅನುಭವಿಸಿದರು. ಸ್ವತಂತ್ರ ನಂತರ ಅವರು ವಿವಿಧ ಸಚಿವಾಲಯಗಳಲ್ಲಿ ಸೇವೆ ಸಲ್ಲಿಸಿದರು. ಮತ್ತು ಅರಿಯಲೂರ್ ರೈಲ್ವೆ ಅಪಘಾತ ಜವಾಬ್ದಾರಿಯನ್ನು ತೆಗೆದುಕೊಂಡು ರೈಲ್ವೆ ಸಚಿವರಾಗಿ ರಾಜೀನಾಮೆ ನೀಡಿದರು 1964 ರಲ್ಲಿ ಭಾರತದ ಎರಡನೇ ಪ್ರಧಾನಮಂತ್ರಿಯಾದರು. *ಜೀವನದ ಪ್ರಮುಖ* *ಘಟ್ಟಗಳು* ಆರಂಭಿಕ ಜೀವನ ಅಕ್ಟೋಬರ್ 2 194 ರಂದು ಉತ್ತರ ಪ್ರದೇಶದ ಮುಘಲ್ ರಾಯನಲ್ಲಿ ಜನಿಸಿದರು. ಅವರ ತಂದೆ ಶಾರದಾ ಪ್ರಸಾದ್ ಶ್ರೀವಾಸ್ತವ್ ಮತ್ತು ತಾಯಿ ರಾಮ ಧೂಲಾರಿ ದೇವಿ ಆರು ತಿಂಗಳು ಮಗುವಾಗಿದ್ದಾಗ ತಂದೆ ನಿಧನರಾದರು. ಸ್ವತಂತ್ರ ಚಳುವಳಿ 1921 ರಲ್ಲಿ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡರು ಅವರು 1926 ರಲ್ಲಿ ಕಾಶಿ ವಿದ್ಯಾಪೀಠದಿಂದ ಶಾಸ್ತ್ರಿ ಪದವಿಯನ್ನು ಪಡೆದರು. ಸ್ವತಂತ್ರ ಹೋರಾಟದಲ್ಲಿ ಹಲವಾರು ಬಾರಿ ಜೈಲು ಶಿಕ್ಷೆ ಅನುಭವಿಸಿದರು. 1930ರಲ್ಲಿ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಎರಡುವರೆ ವರ್ಷ ಜೈಲು ಸೇರಿದರು. ರಾಜಕೀಯ ವೃತ್ತಿ 1937ರಲ್ಲಿ ಉತ್ತರ ಪ್ರದೇಶದ ಸಂಸದೀಯ ಮಂಡಳಿಯ ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸ್ವತಂತ್ರದ ನಂತರ ಅವರು ಉತ್ತರ ಪ್ರದೇಶದ ಪೊಲೀಸ್ ಸಚಿವರಾಗಿ ನೇಮಕಗೊಂಡರು. ಮತ್ತು ಗಲಭೆ ಕೋರರನ್ನು ಚದುರಿಸಲು ಲಾಠಿಗಳ ಬದಲಿಗೆ ನೀರಿನ ಫಿರಂಗಿಗಳನ್ನು ಬಳಸಲು ಸೂಚಿಸಿದರು. 1956 ರಲ್ಲಿ ಅರಿಯಲೂರ್ ರೈಲು ಗಾತ್ರದ ಜವಾಬ್ದಾರಿಯನ್ನು ಹೊತ್ತು ರೈಲ್ವೆ ಸಚಿವರಾಗಿ ರಾಜೀನಾಮೆ ನೀಡಿದರು. ಪ್ರಧಾನ ಮಂತ್ರಿ 1964ರಲ್ಲಿ ಭಾರತದ ಎರಡನೇ ಪ್ರಧಾನಮಂತ್ರಿಯಾಗಲು ಅವರು ತಮ್ಮ ಸರಳತೆ ನೈತಿಕತೆ ಮತ್ತು ಆಂತರಿಕ ಶಕ್ತಿಗಾಗಿ ಹೆಸರುವಾಸಿಯಾಗಿದ್ದರು. “ಜೈ ಜವಾನ್ ಜೈ ಕಿಸಾನ್” ಎಂಬ ಅವರ ಘೋಷಣೆ ಕೃಷಿಕರನ್ನು ಮತ್ತು ಸೈನಿಕರನ್ನು ಬೆಂಬಲಿಸುತ್ತದೆ. ನಿಧನ 1966 ರಲ್ಲಿ ತಾಸ್ಕೆಂಟ್ ನಲ್ಲಿ ನಿಧನರಾದರು ಅವರ ಅಕಾಲಿಕ ಮರಣ ದೇಶಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿತು. ವಿಜಯಲಕ್ಷ್ಮಿ ಹಂಗರಗಿ

“ಲಾಲ ಬಹದ್ದೂರ ಶಾಸ್ತ್ರಿ ಒಂದು ನೆನಪು”ವಿಜಯಲಕ್ಷ್ಮಿ ಹಂಗರಗಿ Read Post »

ಇತರೆ, ಜೀವನ

“ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ

ಸಂಬಂಧಗಳ ಸಂಗಾತಿ ಸುಮನಾ ರಮಾನಂದ “ನೆಂಟಸ್ತನದ ಸಂಬಂಧಗಳ ನಡೆ” ಇದ್ಯಾವ ಸಂಬಂಧಗಳ ಉಳಿಸುವಿಕೆ ಬಗ್ಗೆ ನಾ ಹೇಳಲು ಹೊರಟಿದ್ದೀನಿ ಇಂದಿನ ಅಂಕಣದಲಿ ಅಂತ ಆಶ್ಚರ್ಯಪಡದಿರಿ.ನಮ್ಮನು ಹೊಗಳಿದಂತೆ ಮಾಡಿ ನಮಗೇ ಗೊತ್ತಾಗದಂತೆ ತೆಗಳುವ,ತೆಗಳಿದರೂ ಅದನೇ ಸರಿಯೆಂದು ಸಮರ್ಥಿಸಿಕೊಳ್ಳುವ ಅದೇ ನಮ್ಮ ಹತ್ತಿರದ ನೆಂಟರ ಬಗ್ಗೆ ಕಣ್ರಿ… ಈಗಿನ ನಮ್ಮ ಕಾಲಮಾನದಲಿ ನಮ್ಮೆಲ್ಲರ ನೆಂಟರ ಜೊತೆಗಿನ ಸಂಬಂಧ ನಿಧಾನವಾಗಿ ಕಳೆಗುಂದುತಾ ಇರೋದು ನಿಮ್ಮೆಲ್ಲರ ಗಮನಕೂ ಬಂದಿರಬಹುದು.ಇದರ ಕಾರಣ  ಏನಿರಬಹುದು ಅಂತ ಒಮ್ಮೆ ವಿಚಾರ ಮಾಡಿದರೆ ತಿಳಿಯುತ್ತದೆ.ಮೊದಲನೆಯ ಕಾರಣ ಪ್ರತಿಯೊಬ್ಬರಿಗೂ ನೆಂಟರ ಜೊತೆ ಕಳೆಯಲು ಸಮಯ ಹೊಂದಾಣಿಕೆಯಾಗದಿರುವುದು.ಯಾರಾದ್ರೂ ನೆಂಟರು ಮನೆಗೆ ಬರ್ತಾರೆಂದರೆ ನಾವು ಮೊದಲು ಯೋಚಿಸುವುದೇ ಅವರಿಗೆ ನಾವು ಸಾಕಷ್ಟು ಸಮಯ ಕೊಡಲಾಗುವುದೇ ಆತಿಥ್ಯ ಮಾಡಲು ಹಾಗೂ ಅವರ ವಸತಿಗೆಲ್ಲ ಸರಿಯಾಗಿ ವ್ಯವಸ್ಥೆ ಮಾಡಲಾದೀತೇ ಎಂದು.ಎಲ್ಲರೂ ಹೀಗಿರುತ್ತಾರೆಂದು ಹೇಳಲಾಗದು.ನೆಂಟರೆಂದರೆ ಇಷ್ಟಪಡುವ ಮಂದಿಯೂ ಸಹ ಹೆಚ್ಚಾಗಿ ಇರುತ್ತಾರೆ. ಇನ್ನೊಂದು ಕಾರಣವೆಂದರೆ ಕೆಲವರಿಗೆ ನಂಟರು ಬರುತ್ತಾರೆಂದರೆ ಇರಿಸುಮುರಿಸು ಉಂಟಾಗುವುದು ಏಕಂದರೆ ಕೆಲವು ನೆಂಟರಿಗೆ ಅಲ್ಲಿಂದಿಲ್ಲಿಗೆ ಚಾಡಿಮಾತು ಹೇಳಿ ಜಗಳ ತಂದು ಹಾಕುವ ಸ್ವಭಾವಿರುತ್ತದೆ,ಆ ಸ್ವಭಾವದವರನ್ನು ದೂರವಿರಿಸುವ ಅಭ್ಯಾಸ ಆತಿಥ್ಯ ನೀಡುವವರಿಗೆ ಇರುತ್ತದೆ ಹಾಗಾಗಿ ಅಂತಹ ನೆಂಟರು ತಮ್ಮ ಮನೆಗೆ ಬರದಂತೆ ಕಾರಣ ಹುಡುಕುತ್ತಾರೆ.ಒಂದುವೇಳೆ ಬಂದರೂ ಮರ್ಯಾದೆಯಿಂದಲೇ ಚೆನ್ನಾಗಿ ಆತಿಥ್ಯ ಮಾಡಿ ಕಳಿಸುತ್ತಾರೆ.  ಇನ್ನು ಹಲವರಿಗೆ ತಮ್ಮ ಆಫೀಸ್ ಹಾಗೂ ಮನೆಯ ಕೆಲಸಗಳ ಮಧ್ಯೆಯೂ ಅವರೆಲ್ಲರ  ಇಷ್ಟಾನುಸಾರವಾಗಿ ನೆಂಟರ ಬೇಕು ಬೇಡಗಳನು ಪೂರೈಸಲಾದೀತೇ ಅನ್ನುವ ಆತಂಕ ಮನಸಲಿ‌ ಕಾಡುತ್ತದೆ.ಪಾಪ ಚೆನ್ನಾಗಿ ಆತಿಥ್ಯ ಮಾಡಿ ಕಳಿಸಿದರೂ ಸಹ ಅದೇ ನೆಂಟರು ಹೊರಗೆ ಬಂದಾಗ ತಮ್ಮ ಬಗ್ಗೆ ಹಾಗೂ ತಮ್ಮ ಆತಿಥ್ಯದ ಬಗ್ಗೆಯೇ ಕೊಂಕು ಅಥವಾ ವ್ಯಂಗ್ಯದ ಮಾರಾಡುತ್ತಾರೆನ್ನುವ ಆತಂಕದಲಿ ದಿನ ದೂಡುತ್ತಾರೆ…ಹಾಗಾಗಿ ನೆಂಟರ ಬರುವಿಕೆ ಇಂದಿನ ದಿನಗಳಲಿ ಬಲು ಅಪರೂಪವಾಗಿದೆ ಅಂತಲೇ ಹೇಳಬಹುದು.ಅವರವರ ದೃಷ್ಟಿಕೋನದಲ್ಲಿ ನೋಡಿದಾಗ  ಇದರಲಿ ಯಾರದೂ ತಪ್ಪಿಲ್ಲವೆಂತಲೂ ಅನಿಸುವುದು.ಆದರೂ ಮನೆಗೆ ನೆಂಟರ ಆಗಮನ ಚೈತನ್ಯದಾಯಕವೂ ಹೌದು ಜೊತೆಗೆ ಹಲವು ವಿಚಾರಗಳ ವಿನಿಮಯವಾಗುವಿಕೆ ಮನಸಿನ ಏಕಾತಾನತೆಗೆ ಒಳ್ಳೆಯ ಮದ್ದು ಆಗುವುದಂತೂ ಸತ್ಯ. ನೆಂಟಸ್ತನವನು ಉಳಿಸುವ ನಡೆಯನು ವಿವರಿಸುತಾ ಹೀಗೂ ಯೋಚಿಸಬಹುದು..ನೆಂಟರು ಒಂದು ಮದುವೆಯ ಸಮಾರಂಭದಲ್ಲೊ ಅಥವಾ ಒಂದು ಹೋಮ- ಹವನದ ಕಾರ್ಯಕ್ರಮದಲ್ಲೋ  ಸೇರಿದಾಗ ಎಲ್ಲರಿಗೂ ತಮ್ಮ ಕುಟುಂಬದ ಈ ಐಕ್ಯತೆಯನು ಕಂಡು ಸಂತಸವಾಗುತ್ತದೆ.ಕುಟುಂಬದ ಹೊಸ ಸದಸ್ಯರನು ಹಳೆಯ ತಲೆಮಾರಿನವರು ತಮ್ಮ‌ ಕಾಲವಿನ್ನು ಮುಗಿಯಿತಪ್ಪಾ ಎನ್ನುತಾ ತುಂಬು ಮನಸಿಂದ ಅವರೆಲ್ಲರ ಪರಿಚಯ ಮಾಡಿಕೊಡುವುದನು ಕಂಡು ಒಮ್ಮೆಗೇ ಮನಸು ಭಾವುಕವಾಗುತ್ತದೆ. ಮುಂದೊಂದಿನದ  ಸಮಾರಂಭದಲಿ ಈ ಹಿರಿಯ ತಲೆಮಾರಿನವರು ಕಣ್ಮರೆಯಾಗದಿದ್ರೆ ಸಾಕು ಅಂತಲೂ ಮನಸು ಹಾರೈಸುತ್ತದೆ. ಜೊತೆಗೆ ನೆಂಟಸ್ತನ ಕುಂಠಿತವಾಗುವಿಕೆಯ ಮತ್ತೊಂದು ಮುಖ್ಯ ಕಾರಣವೆಂದರೆ..ಮೊಬೈಲ್ ಚಟ ಹಾಗೂ ಸಾಮಾಜಿಕ ತಾಣವೆನ್ನಬಹುದು. ಇತ್ತೀಚೆಗಿನ ಮೊಬೈಲಿನ YouTube Shorts ವೀಕ್ಷಣೆಯ ಮಟ್ಟ ಯಾವ ಯಾವ ರೀತಿಯಲಿ ಏರಿದೆಯೆಂದರೆ ಇಂದಿನ ಯುವಜನತೆ,ಹದಿಹರೆಯದ ಮಕ್ಕಳು,ಮಧ್ಯೆ ವಯಸ್ಸಿನ ಹೆಂಗಸರು, ಅರ್ಧ ಶತಕದ ಅಂಚಲಿರುವ ಗಂಡಸರೆನ್ನುವಭೇಧಭಾವವಿಲ್ಲದೆ ಈ ಚಟ ಆವರಿಸಿಕೊಂಡು ಬಿಟ್ಟಿದೆ. ಇದಕ್ಕೆ ದಾಸರಾಗಿರೊದರಿಂದ  ಮನೆಗೆ ಯಾರು ಬಂದರೂ ಅಥವಾ ಯಾವ ಫಂಕ್ಷನ್ ಗೆ ಹೋಗಬೇಕೆಂದರೂ ಇದಕೆ ಅಡ್ಡಿಯಾದೀತೆಂಬ ನೆಪವೊಡ್ಡಿ ಹೋಗದೇ ಇದ್ದುಬಿಡುತ್ತಾರೆ.ಇಂತಹ ಚಟದಿಂದ ಹೊರ ಬಂದರೆ ಮಾತ್ರ ಸಂಬಂಧಗಳ ಉಳಿಯುವಿಕೆ ಸಾಧ್ಯವಾಗುತ್ತದೆ.ಇಲ್ಲದಿದ್ರೆ ತಾವಾಯ್ತು ತಮ್ಮ ಪಾಡಾಯ್ತು ಅನ್ನುವ ಸ್ಥಿತಿಗೆ ಈ Gen Z ಹೋಗುವುದರಲಿ ಹೆಚ್ಚು ಕಾಲ ಉಳಿದಿಲ್ಲ ಅನ್ನಬಹುದು. ಒಟ್ಟಾರೆಯಾಗಿ ಹೇಳುವುದಾದರೆ ಸಮಾಜದಲಿ ಒಳ್ಳೆಯ ಮನಸ್ಸಿರುವ ಎಲ್ಲರ ಜೊತೆಗೆ ಅದರಲೂ ತಮ್ಮ ಕುಟುಂಬದ ತೀರ ಹತ್ತಿರದ ನೆಂಟರಿಷ್ಟರ ಜೊತೆಯಲಿ ಬೆರೆತಾಗ ಮಾತ್ರ ಸಾಮರಸ್ಯದಿಂದ ಬಾಳು ಸಾಗುತಾ ನಮ್ಮೆಲ್ಲರ ಬಾಳ್ವೆ ಸುಂದರವೆನಿಸುತ್ತದೆ.ಇಲ್ಲವಾದರೆ ಏಕಾತಾನತೆಯ ಏಕಾಂತ ಕಾಡಿ,ಬೇರೆ ಯಾರ ಬಗ್ಗೆಯೂ ಯೋಚಿಸದಂತಹ ಸ್ವಾರ್ಥದತ್ತ ಮನಸು ಸಾಗುತ್ತದೆ. ನಮ್ಮ ಬದುಕು ಇವೆರಡು ದೃಷ್ಟಿಕೋನದಲಿ ನೋಡಿದಾಗ ಅದು  ಹೇಗಿರಬೇಕು ಅನ್ನುವ ಆಯ್ಕೆ ನಮ್ಮದೇ! ಸುಮನಾ ರಮಾನಂದ, ಕೊಯ್ಮತ್ತೂರು 

“ನೆಂಟಸ್ತನದ ಸಂಬಂಧಗಳ ನಡೆ” ವಿಶೇಷ ಲೇಖನ ಸುಮನಾ ರಮಾನಂದ Read Post »

ಇತರೆ

“ಹಾಸ್ಯ ಕವಿ ಬೀಚಿ…ಸವ್ಯಸಾಚಿ” ಜಯಲಕ್ಷ್ಮಿ  ಕೆ

ವ್ಯಕ್ತಿ ಸಂಗಾತಿ ಜಯಲಕ್ಷ್ಮಿ  ಕೆ “ಹಾಸ್ಯ ಕವಿ ಬೀಚಿ…ಸವ್ಯಸಾಚಿ” “ಇಂದು ಬಾಳಿಗೆ ಸ್ವಾಗತ, ನಾಳೆ ಸಾವಿಗೂ ಸ್ವಾಗತ ” ಇದು ತಮ್ಮ ಬಯೋಗ್ರಫಿಯಲ್ಲಿ ಬೀಚಿಯವರು ಬರೆದ ಮಾತು. “ಯಾರೊಬ್ಬನ ಬಾಳು ಕೂಡ ಬದುಕಲಿಕ್ಕೇ ಆಗದಷ್ಟು ಕಠಿಣವೂ ಅಲ್ಲ,  ಲೀಲಾಜಾಲವಾಗಿ ಸಾಗುವ ಸುಲಲಿತ ಯಾನವೂ ಅಲ್ಲ. ಏನೇ ಕಷ್ಟ ಬಂದರೂ ನಾವು ವಾರದಲ್ಲಿ ಮೂರು ದಿನಗಳಾದರೂ ನಗುತ್ತಾ ಇರಬೇಕು. ಅದು ನಿನ್ನೆ ಇವತ್ತು ಮತ್ತು ನಾಳೆ”. ಹೀಗೆ ಹೇಳುತ್ತಲೇ ಹಾಸ್ಯ ಬರಹದ ಮೂಲಕ ಜನರ ಬದುಕಿನಲ್ಲಿ  ಸದಾ ಭರವಸೆ ತುಂಬುತ್ತಿದ್ದ ಹಾಸ್ಯ ಕವಿ ಬೀಚಿಯವರು ಮರೆಯಾಗಿ ಇಂದಿಗೆ 45 ವರ್ಷಗಳು ಉರುಳಿವೆ. ಆದರೆ ಅವರ ನವಿರಾದ ಹಾಸ್ಯ ನಮ್ಮೆಲ್ಲರ ಮನದಲ್ಲಿ ಜೀವನೋತ್ಸಾಹ ತುಂಬುತ್ತಾ ಸದಾ ಜೀವಂತವಾಗಿದೆ. ಹಾಸ್ಯ ಎಂದರೆ ಬೀಚಿ, ಬೀಚಿ ಎಂದರೆ ಹಾಸ್ಯ. ಒಂದೇ ನಾಣ್ಯದ ಎರಡು ಮುಖಗಳು!! 1913ರಲ್ಲಿ  ಹರಪನಹಳ್ಳಿಯ ಶ್ರೀನಿವಾಸರಾವ್ ಮತ್ತು ಭಾರತಮ್ಮನವರ ಪುತ್ರನಾಗಿ ಜನಿಸಿದ ರಾಯಸಂ  ಭೀಮಸೇನರಾವ್ ‘ಬೀಚಿ’ ಎಂದೇ ಪ್ರಸಿದ್ಧರು. “ಹಾಸ್ಯ ಬ್ರಹ್ಮ” ಬೀಚಿಯವರು  ಕನ್ನಡದ ಮೊದಲ ಹಾಸ್ಯ ಕವಿಯಲ್ಲದಿದ್ದರೂ ಹಾಸ್ಯವನ್ನೇ ತಮ್ಮ ಕೃತಿಗಳ  ಪ್ರಮುಖ ಮಾಧ್ಯಮವನ್ನಾಗಿಸಿಕೊಂಡ ಕವಿಗಳಲ್ಲಿ ಇವರು ಮೊದಲಿಗರು. ನಗುವಿನ ಬಗೆಗಿನ ಅವರ ಸಿದ್ಧಾಂತ ಬಹಳ ಶುದ್ಧವಾದದ್ದು. ನಗುವಿನ ಸಂದರ್ಭಗಳಲ್ಲಿ ನಗು ಸಹಜವಾಗಿ ಹೊರ ಹೊಮ್ಮುತ್ತದೆ. ಆದರೆ ನೋವಿನ ಸನ್ನಿವೇಶಗಳಲ್ಲಿ ಕೂಡ ಮೊಗದಲ್ಲಿ ನಗುವನ್ನು ಅರಳಿಸುವುದು  ಕಷ್ಟದ ಮಾತು. ಆದರೆ ಆ ಶಕ್ತಿ ಬೀಚಿಯವರ ಸಾಹಿತ್ಯಕ್ಕೆ ಇದೆ. ಸರ್ವರ ಸಮ್ಮುಖದಲ್ಲಿಯೂ ಹಂಚಿಕೊಳ್ಳಬಹುದಾದ ನವಿರಾದ ಹಾಸ್ಯದ ತುಣುಕುಗಳು ಸಾಹಿತ್ಯ ಲೋಕಕ್ಕೆ ಇವರಿತ್ತ ಅಪೂರ್ವ ಕೊಡುಗೆ. ಹುಟ್ಟುವಾಗಲೇ ತಂದೆಯನ್ನು ಕಳೆದುಕೊಂಡ ಬೀಚಿಯವರು ತಮ್ಮ ಆರನೇ ವಯಸ್ಸಿನಲ್ಲಿ ತಾಯಿಯನ್ನು ಕೂಡ ಕಳೆದುಕೊಂಡರು. ಅವರೇ ಹೇಳುವಂತೆ ” ಬಡತನವೋ ಸಿರಿತನವೋ ಭೂಮಿಗೆ ಬಂದ ಮಗು ಆಯುಸ್ಸಿದ್ದರೆ  ಯಾರದೋ ಆಸರೆಯಲ್ಲಿ  ಬೆಳೆದೇ ಬೆಳೆಯುತ್ತದೆ. ಹಾಗೆ ಅವರಿಗೂ ಆಸರೆ ಸಿಕ್ಕಿತು. ಅದು ಅವರ ಸೋದರ ಮಾವನ ಆಸರೆ. ಬಡತನದಲ್ಲಿಯೂ ಅತ್ತೆ ಮಾವ ಅಕ್ಕರೆಯ ಆರೈಕೆಗೇನೂ ಕಡಿಮೆ ಮಾಡಲಿಲ್ಲ. ಅವರು ಓದಿದ್ದು ತೆಲುಗುಮಯವಾಗಿದ್ದ ಅಂದಿನ ಬಳ್ಳಾರಿಯಲ್ಲಿ. ಅಲ್ಲಿ ಒಂದೆರಡು ವರ್ಷ ಕನ್ನಡ ಕಲಿತದ್ದು ಬಿಟ್ಟರೆ ಉಳಿದಂತೆ ಶಿಕ್ಷಣಾಭ್ಯಾಸವೆಲ್ಲ ನಡೆದದ್ದು ಇಂಗ್ಲಿಷ್ ಮತ್ತು ತೆಲುಗು ಭಾಷೆಯಲ್ಲಿ. ಆದರೆ ಅಪ್ರತಿಮ ಸಾಹಿತ್ಯ ಸೃಷ್ಟಿಸಿ  ಹೆಸರು ಗಳಿಸಿದ್ದು ಮಾತ್ರ ಕನ್ನಡದಲ್ಲಿ!! ಬಡತನದಲ್ಲಿಯೇ ಸೀತಾಬಾಯಿಯವರೊಡಗೂಡಿ  ಬಾಳ ದೋಣಿಯನ್ನು ಸಾಗಿಸಿದ ಭೀಮಸೇನರಾವ್ ಅವರು ತಮ್ಮ ಇಬ್ಬರು ಗಂಡು ಮಕ್ಕಳನ್ನೂ ಚೆನ್ನಾಗಿ ಓದಿಸಿದರು. ಆದರೆ ಪದವಿ ಮುಗಿಸಿದ ಕಿರಿಯ ಮಗ ರವೀಂದ್ರನನ್ನು ಟೈಫಾಯಿಡ್ ಜ್ವರ ಬಲಿ ತೆಗೆದುಕೊಂಡುಬಿಟ್ಟಿತ್ತು. “ಕತ್ತಲಿನ ಬಸಿರಲ್ಲಿ ಬೆಳಕು ಹುಟ್ಟಿತು: ಬೆಳಕಿನ ಫಲವೂ ಮತ್ತೆ ಕತ್ತಲು  “… ಬೀಚಿ ದಂಪತಿಗಳಿಗೆ ಅತೀವ ವೇದನೆಯನ್ನು ತಂದೊಡ್ಡಿದ ಘಟನೆ ಇದು. ಬೀಚಿಯವರ ಮೊದಲ ಲೇಖನ ಪ್ರಕಟವಾದದ್ದು ಪ್ರಜಾವಾಣಿಯಲ್ಲಿ. ಅ. ನ ಕೃ ರವರ ಹಾಸ್ಯರಾಗ ಇವರ ಮೇಲೆ  ಪರಿಣಾಮ ಬೀರಿದ ಮೊದಲ ಕೃತಿ. ‘ ಗರುಡ ಪುರಾಣ ‘, ‘ ನಾನೇ ಸತ್ತಾಗ ‘, ‘ ರೇಡಿಯೋ ನಾಟಕಗಳು ‘ ಮೊದಲಾದ ಹಲವಾರು ಅಪೂರ್ವ ಕೃತಿಗಳನ್ನು ಇವರು ಬರೆದಿದ್ದಾರೆ. ” ನಿನ್ನಂತೆ ನೀನಾಗು, ನಿನ್ನ ನೀ ಅರಿ ಮೊದಲುಚೆನ್ನೆಂದು ದೊಡ್ಡವರ ಅನುಕರಿಸಬೇಡ  ಏನಾಯ್ತು ಮರಿ ಕತ್ತೆ?ಚೆಲುವಿತ್ತು, ಮುದ್ದಿತ್ತು,ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ್ಮ… “ ಯಾವುದೇ ಬರಹಗಾರನ ವೈಯಕ್ತಿಕ ಪ್ರತಿಭೆ  ಅನುಕರಣೆಯ ಮರಳಿನಲ್ಲಿ ಹೂತು ಹೋಗಬಾರದು ಎನ್ನುವುದು ಅವರ ನಿಲುವಾಗಿತ್ತು. ‘ರೈತವಾಣಿ’ ವಾರಪತ್ರಿಕೆಯಲ್ಲಿ ನಿರಂತರವಾಗಿ   ‘ ಬೇವಿನಕಟ್ಟೆ ತಿಮ್ಮ ‘ ಎಂಬ ಸ್ಥಿರ ಶೀರ್ಷಿಕೆಯಲ್ಲಿ ಬರೆಯುತ್ತಿದ್ದ ಇವರ ಬರಹಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದಿವೆ. ‘ತಿಂಮ್ಮನ ತಲೆ ‘ ಹಲವು ಬಾರಿ ಮುದ್ರಣ  ಕಂಡಿದೆ. ‘ದಾಸ ಕೂಟ ‘ ಕನ್ನಡಕ್ಕೆ ಇವರು ನೀಡಿದ ಮೊತ್ತ ಮೊದಲ ಹಾಸ್ಯ ಪ್ರಧಾನ ಕಾದಂಬರಿ. ” ಮಗಳನ್ನು ಬೆಂಗಳೂರಿಗೆ ಕೊಟ್ಟಿದ್ದೇವೆ “.. ಎಂದವರಿಗೆ, ಹಾಂ!!! ಇಡೀ ಬೆಂಗಳೂರಿಗಾ!!! ” ಎಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದ ಬೀಚಿಯವರಿಗೆ ” ಮಗಳನ್ನಾಗಲೀ, ಮತವನ್ನಾಗಲಿ, ಅಯೋಗ್ಯರಿಗೆ ಕೊಡಬಾರದು ಎನ್ನುವ ಪ್ರಬುದ್ಧ ಚಿಂತನೆ ಇತ್ತು. ಇವರ ಹಲವಾರು ಚುಟುಕುಗಳಲ್ಲಿ, ಹನಿ ಕವನಗಳಲ್ಲಿ, ಮೇಲ್ನೋಟಕ್ಕೆ ಹಾಸ್ಯ ಕಂಡರೂ, ಒಳಾರ್ಥದಲ್ಲಿ ಸಮಾಜದ ಸ್ಥಿತಿಗತಿಗಳ ಬಗೆಗಿನ ಟೀಕೆಯಿದೆ, ಸಮಾಜಮುಖಿ ಚಿಂತನೆಗಳಿವೆ. ” ಮಗುವಿಗೆ ಅಳುಹೆಣ್ಣಿಗೆ ನಗುಅವಿವೇಕಿಗೆ ಧೈರ್ಯಅಪ್ರಾಮಾಣಿಕನಿಗೆ ರಾಜಕಾರಣಅತ್ಯುತ್ತಮ ಆಯುಧಗಳು  ”  ಎಂದು ನಿರ್ಭೀತಿಯಿಂದ ಬರೆದವರು ಬೀಚಿ. ‘ ಕೋಳಿ ರುಚಿ ಕಂಡವನು  ಹೋಳಿಗೆ ತಿನ್ನಲಾರ. ಹಾಗೆಯೇ ಸಾರ್ವಜನಿಕ ಹಣದ ರುಚಿ ಕಂಡವನು ದುಡಿದು ತಿನ್ನಲಾರ  ಎನ್ನುವ ಬೀಚಿ  ಸಮಾಜದಲ್ಲಿ ನಡೆಯುವ ಅನ್ಯಾಯ ಭ್ರಷ್ಟಾಚಾರ ವಂಚನೆ ಎಲ್ಲದರ  ಬಗೆಗಿನ ತಮ್ಮ ನಿಲುವನ್ನು  ಕೇವಲ ನಾಲ್ಕು – ಆರು ಸಾಲುಗಳಲ್ಲಿಯೇ ಸ್ಪಷ್ಟಪಡಿಸಬಲ್ಲ, ಅನ್ಯಾಯವನ್ನು ಪ್ರತಿಭಟಿಸಬಲ್ಲ ಅಪ್ರತಿಮ ಬರಹಗಾರರಾಗಿದ್ದರು. ‘ ತಾಳಿ ಕದ್ದವನಿಗೆ ಕಠಿಣ ಶಿಕ್ಷೆ, ತಾಳಿ ಕಟ್ಟಿದವನಿಗೆ ಜೀವಾವಧಿ ಶಿಕ್ಷೆ ಎಂದು  ನವಿರಾದ ಹಾಸ್ಯವನ್ನು ಬಿಂಬಿಸುತ್ತಿದ್ದ ಅವರು  ಗೊಡ್ಡು  ಸಂಪ್ರದಾಯಗಳನ್ನು ಕಟುವಾಗಿ ಟೀಕಿಸಿ ಬರೆದದ್ದೂ ಇದೆ. ” ಹೆಣ್ಣು ಚಿನ್ನವನ್ನುರಾಜಕಾರಣಿ ಅಧಿಕಾರವನ್ನುಒಲ್ಲೆ ಎಂದ ದಿನವೇ ಪ್ರಳಯವಾಗುತ್ತದೆ ”  ಎನ್ನುವ ಬೀಚಿಯವರ ಬರಹ ಪ್ರಳಯದ ಬಗೆಗಿನ  ಹೊಸ  ವ್ಯಾಖ್ಯಾನವೆನಿಸಿದರೂ ಅಲ್ಲೊಂದು ಸತ್ಯ ನಿಷ್ಟುರತೆಯಿದೆ. ಜನಜೀವನದ ಎಲ್ಲ ಮುಖಗಳು ಅವರ ಲೇಖನಿಯ ಮೂಲಕ ಹೊರಹೊಮ್ಮಿವೆ. ನ್ಯಾಯ ನಿಷ್ಠುರದ ಮಾತುಗಳನ್ನು ಅಲ್ಲದವರಿಗೆ ಅವರ ಬರಹಗಳು ಕಹಿ ಎನಿಸಿದರೂ ಕವಿಯ ಭಾವನೆಗಳು ಮಾತ್ರ ನಿರ್ಭೀತಿಯಿಂದ ಕೃತಿ ರೂಪ ತಾಳಿವೆ. ಸತ್ಯ, ನ್ಯಾಯ, ಧರ್ಮ, ಸಮಾನತೆಯ ಸೋಗು ಹಾಕಿ  ಅವುಗಳ ವಿರುದ್ಧ ಹಾದಿಯನ್ನು ಕ್ರಮಿಸುವವರಿಗೆ ಕರೆಗಂಟೆಯಂತೆ ಎಚ್ಚರಿಸುವ ಅವರ ಬರಹಗಳು ಸಾಮಾಜಿಕ ಮೌಲ್ಯಗಳನ್ನು ಸಾರುವ  ನಿತ್ಯನೂತನ ಸಾಲುಗಳಾಗಿವೆ. ವಾಸ್ತವಿಕತೆಯನ್ನು  ಆಳವಾದ ಹಾಸ್ಯದೊಂದಿಗೆ ಜನಮನಕ್ಕೆ ತಲುಪಿಸುವ ವಿಶಿಷ್ಟ ಶೈಲಿಯನ್ನು ರೂಢಿಸಿಕೊಂಡಿದ್ದ ಕವಿ ಬೀಚಿ ಕನ್ನಡ ಸಾಹಿತ್ಯ ಲೋಕದ, ಹಾಸ್ಯ ಪ್ರಪಂಚದ  ಸವ್ಯಸಾಚಿ. ಜಯಲಕ್ಷ್ಮಿ  ಕೆ,

“ಹಾಸ್ಯ ಕವಿ ಬೀಚಿ…ಸವ್ಯಸಾಚಿ” ಜಯಲಕ್ಷ್ಮಿ  ಕೆ Read Post »

ಇತರೆ

“ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ” ಜಯಶ್ರೀ.ಜೆ. ಅಬ್ಬಿಗೇರಿಯವರ ಲೇಖನ.

ಸ್ಪೂರ್ತಿ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ “ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ”                                                   ಬದುಕಿನ ಪ್ರತಿ ಹೆಜ್ಜೆಯಲ್ಲೂ ಸಾಮರ್ಥ್ಯ ತನ್ನ ಇರುವಿಕೆಯ ಮಹತ್ವವನ್ನು ಸಾರಿ ಹೇಳುತ್ತದೆ. ಸಾಮರ್ಥ್ಯವಿಲ್ಲದೇ ಸಣ್ಣ ಪುಟ್ಟ ಕೆಲಸಗಳನ್ನೂ ಚೆನ್ನಾಗಿ ಮಾಡಲು ಸಾಧ್ಯವಾಗುವುದಿಲ್ಲ. ಸಮರ್ಥನಾದವನ ಕೆಲಸದ  ಗುಣಮಟ್ಟ ಸೂಜಿಗಲ್ಲಿನಂತೆ  ಸೆಳೆಯುತ್ತದೆ. ಸಾಮರ್ಥ್ಯವೆನ್ನುವುದು ಒಮ್ಮಿಂದೊಮ್ಮೆಲೇ ಉದ್ಭವಿಸುವುದಿಲ್ಲ. ಶ್ರದ್ಧೆಯಿಂದ, ನಿರಂತರವಾಗಿ, ಕಷ್ಟ ಪಟ್ಟು ಶ್ರಮವಹಿಸಿದಾಗ ಮಾತ್ರ ಒಲಿಯುವಂಥದ್ದು. ಮಾನವನ ಅತ್ಯಂತ ಅಗತ್ಯಗಳಲ್ಲಿ ಸಾಮರ್ಥ್ಯ ಅಗ್ರಸ್ಥಾನ ಪಡೆಯುತ್ತದೆ. ಉಪ್ಪಿಲ್ಲದೇ ಅಡುಗೆಯಿಲ್ಲ ಹಾಗೆಯೇ ಸಾಮರ್ಥ್ಯವಿಲ್ಲದೇ ಜೀವನದಲ್ಲಿ ಏನೂ ಇಲ್ಲ. ‘ನಾವು ಕಲಿಯುವುದನ್ನು ಬಿಟ್ಟರೆ ಕೆಲವು ರೀತಿಯಲ್ಲಿ ಸಾಯಲು ಪ್ರಾರಂಭಿಸುತ್ತೇವೆ.’ ನಾವು ಯಾವುದೇ ಪದವಿಯನ್ನು ಗಳಿಸಿದ್ದರೂ ಅಥವಾ ನಮ್ಮ ಹೆಸರಿನ ನಂತರ ಯಾವುದೇ ಮೊದಲಕ್ಷರಗಳು ಬಂದರೂ, ಪ್ರತಿದಿನವೂ ನಾವು ಸಾಮರ್ಥ್ಯವನ್ನು ಸುಧಾರಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕು. ಹೇಗೆ ಕಲಿಯುವುದು? ಸಾಮಾನ್ಯನನ್ನು ಅಸಾಮಾನ್ಯನಾಗಿಸುವುದೇ ಸಾಮರ್ಥ್ಯ. ಜಗದ ಬಹುತೇಕ ಸಾಧಕರು ಸಾಧಿಸಿದ ಅತ್ಯದ್ಭುತ ಗೆಲುವು ಅವರ ಸಾಮರ್ಥ್ಯದಿಂದಲೇ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಸಾಮರ್ಥ್ಯದ ಸದುಪಯೋಗ ಪ್ರಗತಿಗೆ ದಾರಿ. ಸಮರ್ಥರಾದವರು ಜಗತ್ತಿನ ಎಲ್ಲ ವಸ್ತುಗಳಿಂದಲೂ  ಕಲಿಯುವ  ಸಾಮರ್ಥ್ಯವನ್ನು ಬೆಳೆಸಿಕೊಂಡಿರುತ್ತಾರೆ. ಇದನ್ನೇ ವರಕವಿ ಬೇಂದ್ರೆ ‘ಜಾಣನಾದವನು ಕೋಣನಿಂದಲೂ ಕಲಿಯಬಲ್ಲ.’ ಎಂದು ಹೇಳಿದ್ದಾರೆ. ‘ನಾನು ವಾಚಾಳಿಗಳಿಂದ ಮೌನವನ್ನೂ, ಅಸಹನೆಯ ವ್ಯಕ್ತಿಗಳಿಂದ ಸಹನೆಯನ್ನೂ ಕ್ರೂರಿಗಳಿಂದ ಕರುಣೆಯನ್ನು ಕಲಿತಿದ್ದೇನೆ.’ ಎನ್ನುತ್ತಾನೆ ಜಗತ್ಪ್ರಸಿದ್ಧಚಿಂತಕ ಖಲಿಲ್ ಗಿಬ್ರಾನ್.ಇದನ್ನೇ ಸರ್ವಜ್ಞನ ಒಂದು ವಚನದಲ್ಲಿ ನೋಡಿದರೆ,“ಸರ್ವಜ್ಞನೇನು ಗರ್ವದಿಂದ ಆದವನೆಸರ್ವರೊಳಗೆಒಂದೊಂದು ನುಡಿಗಲಿತುವಿದ್ಯದಾ ಪರ್ವತವೇ ಆದ ಸರ್ವಜ್ಞ .”ಸರ್ವಜ್ಞನ ಪ್ರಕಾರ ಬೇರೆ ಬೇರೆ ವ್ಯಕ್ತಿಗಳಲ್ಲಿ ಪ್ರಾಣಿಗಳಲ್ಲಿ ಬೇರೆ ಬೇರೆ ಉತ್ತಮ ಸಂಗತಿಗಳು ಇರುತ್ತವೆ. ಅವುಗಳನ್ನು ಅಹಂ ಬಿಟ್ಟು ಕಲಿಯಬೇಕೆಂಬುದು ಸ್ಪಷವಾಗಿ ತಿಳಿಯುತ್ತದೆ. ಮೊದಲ ಹೆಜ್ಜೆ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವ ಮೊದಲ ಹೆಜ್ಜೆ ನೀವು ಇನ್ನೂ ತಲುಪಿಲ್ಲ ಎಂದು ಅರ್ಥ ಮಾಡಿಕೊಳ್ಳುವುದು. ನೀವು ಬೆಳೆಯಲು ಯಾವುದೇ ಸ್ಥಳವಿಲ್ಲ ಎಂದು ನೀವು ಭಾವಿಸಿದರೆ, ನೀವು ಬೆಳೆಯುವುದಿಲ್ಲ. ನಿಮ್ಮ ಜೀವನದಲ್ಲಿ ಸುಧಾರಣೆಗೆ ಕ್ಷೇತ್ರಗಳಿವೆ ಎಂದು ನೀವು ಒಮ್ಮೆ ನೋಡಿದ ನಂತರ ಆ ಕ್ಷೇತ್ರಗಳಲ್ಲಿ ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವುದು ನಿಜವಾಗಿಯೂ ತುಂಬಾ ಸರಳವಾಗಿದೆ. ಪರಿಗಣಿಸಿ ಯಶಸ್ಸಿನ ಪ್ರಮುಖ ಅಧಿಕಾರಿ ನೆಪೊಲಿಯನ್ ಹಿಲ್ ಹೇಳಿದರು, ’ಪ್ರತಿಯೊಂದು ಪ್ರತಿಕೂಲತೆಯು ಅದರೊಂದಿಗೆ ಸಮಾನ ಪ್ರಯೋಜನದ ಬೀಜವನ್ನು ತರುತ್ತದೆ.’ನೀವು ಪ್ರತಿಯೊಂದು ಸಂಘರ್ಷ, ಪ್ರತಿ ವಿಳಂಬ ಮತ್ತು ಪ್ರತಿ ಹತಾಶೆಯನ್ನು ಈ ಬೆಳಕಿನಲ್ಲಿ ನೋಡಲು ಸಿದ್ಧರಿದ್ದರೆ ನಿಮ್ಮ ಇಡೀ ಜೀವನವು ಕಲಿಕೆಯ ಅವಕಾಶವಾಗುತ್ತದೆ. ಸಾಮರ್ಥ್ಯವು ಇನ್ನಿಲ್ಲದಂತೆ ಬೆಳೆಯುತ್ತದೆ. ನಾಯಕರು ಹುಟ್ಟಿನಿಂದಲೇ ಯಾರೂ ನಾಯಕರು ಆಗಿಲ್ಲ. ನಾಯಕನ ಸಾಮರ್ಥ್ಯವನ್ನು ಬೆಳೆಸಿಕೊಂಡೇ ನಾಯಕರಾಗಿದ್ದಾರೆ. ನಾಯಕ ತನ್ನ ಸಾಮರ್ಥ್ಯದಿಂದ ಕೇವಲ ವ್ಯಕ್ತಿಯಾಗುವುದಿಲ್ಲ. ದೊಡ್ಡದೊಂದು ಶಕ್ತಿಯಾಗಿ ಬೆಳೆಯುತ್ತಾನೆ. ಪ್ರಬಲ ನಾಯಕರು ಚಿಂತಕರು ಅವರ ಹಿಂಬಾಲಕರ ಮೇಲೆ ಬೀರುವ ಪ್ರಭಾವ ಅಷ್ಟಿಷ್ಟಲ್ಲ. ನಿಮಗಿಂತ ಹೆಚ್ಚು ಯಶಸ್ವಿ ಹೆಚ್ಚು ಸಮರ್ಥ ಮತ್ತು ಹೆಚ್ಚು ಅರ್ಹತೆ ಹೊಂದಿರುವ ಜನರೊಂದಿಗೆ ನೀವಿದ್ದರೆ ನಿಮ್ಮ ಸಾಮರ್ಥ್ಯವನ್ನು ಬೆಳೆಸಿಕೊಳ್ಳುವದು ಖಚಿತ. ಬಹುತೇಕ ಪ್ರತಿಯೊಬ್ಬ ನಾಯಕನು ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಮತ್ತು ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ ಮಾರ್ಗದರ್ಶಕನನ್ನು ಹೊಂದಿಯೇ ಇರುತ್ತಾನೆ. ನೀವು ಬಯಸಿದರೆ ಅದು ಸಿಕ್ಕೇ ಸಿಗುತ್ತದೆ. ದೌರ್ಬಲ್ಯ ಸಾಮರ್ಥ್ಯ ನಮ್ಮಲ್ಲಿರುವ ಮನೋಶಕ್ತಿಯನ್ನು ಸೂಚಿಸುತ್ತದೆ. ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಬದುಕಿಗೆ ಅರ್ಥ ನೀಡುತ್ತದೆ. ಅತ್ಯಂತ ಸ್ಪೂರ್ತಿದಾಯಕ ವ್ಯಕ್ತಿಗಳು ಹಿನ್ನೆಡೆಯನ್ನು ಸಮಸ್ಯೆ ಎಂದು ಕರೆಯದೇ ಅದನ್ನು ತಮ್ಮ ಸಾಮರ್ಥ್ಯವನ್ನು ಎತ್ತರಕ್ಕೇರಿಸಲು ಬಳಸಿಕೊಂಡಿದ್ದಾರೆ. ಸದಾ ನಮ್ಮನ್ನು ಹಿಂಬಾಲಿಸುವ ನೆರಳನ್ನು ಬೆಳಕಿಗೊಡ್ಡಿದರೆ ಮಾಯವಾಗುತ್ತದೆ. ಅದೇ ರೀತಿ ವೈಯುಕ್ತಿಕ ದೌರ್ಬಲ್ಯಗಳನ್ನು ಗುರುತಿಸಿ ಆ ಕುರಿತು ಕಾರ್ಯಪ್ರವೃತ್ತರಾದಾಗ ಪ್ರಾಬಲ್ಯ ಮೆರೆಯಬಹುದು.ತನ್ಮೂಲಕ ಟೀಕಾಕಾರರ ಮುಂದೆಯೂ ತಲೆಯೆತ್ತಿ ನಿಲ್ಲಬಹುದು. ಸಮಯ ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಟಿವಿ ನೋಡುವುದು ಅಥವಾ ವಿಡಿಯೋಗಳು ಟ್ರಾಫಿಕ್ ನಲ್ಲಿ ಕುಳಿತುಕೊಳ್ಳುವುದು ಸಭೆ ಪ್ರಾರಂಭವಾಗಲು ಕಾಯುವುದು ಇನ್ನೂ ಮುಂತಾದ ಅರ್ಥಹೀನ ಕೆಲಸಗಳನ್ನು ಮಾಡುತ್ತ ಸಮಯ ವ್ಯರ್ಥವಾಗುತ್ತದೆ. ಕಾರಿನಲ್ಲಿ ಹೋಗುವಾಗ ಪಾಡ್ ಕ್ಯಾಸ್ಟ್ಗಳನ್ನು ಕೇಳುವ ಮೂಲಕ, ಆ ಖಿನ್ನತೆಯ ಕ್ಷಣಗಳಿಂದಾಗಿ ನಿಮ್ಮ ಕಂಪ್ಯೂಟರ್ ಅಥವಾ ಫೋನ್‌ಗೆ ಪ್ರಸ್ತಕಗಳನ್ನು ಲೋಡ್ ಮಾಡುವ ಮೂಲಕ, ಅವುಗಳನ್ನು ಆಲಿಸಿದರೆ ಜ್ಞಾನ ವೃದ್ಧಿಯಾಗುವುದು. ಜ್ಞಾನ ಸಾಮರ್ಥ್ಯವನ್ನು ಹೆಚ್ಚಿಸುವುದು. ವ್ಯರ್ಥ ಕ್ಷಣಗಳ ಲಾಭ ಪಡೆಯಲು ಉಪಯೋಗಿಸಿ. ಇದರಿಂದ ಸಾಮರ್ಥ್ಯ ದಿನೇ ದಿನೇ ಬೆಳೆಯುತ್ತ ಹೋಗುವುದು ಖಂಡಿತ. ತಂತ್ರಜ್ಞಾನ “ಒಳ್ಳೆಯ ಪುಸ್ತಕಗಳನ್ನು ಓದದ ಮನುಷ್ಯನಿಗೆ ಅವುಗಳನ್ನು ಓದಲು ಬಾರದ ಮನುಷ್ಯನಿಗಿಂತ ಯಾವುದೇ ಅನುಕೂಲವಿಲ್ಲ.” ಎಂದು ಮಾರ್ಕ್ ಟ್ವೇನ್ ಹೇಳಿದ್ದಾನೆ. ಒಳ್ಳೆಯ ಪುಸ್ತಕಗಳನ್ನು ಖರೀದಿಸಿ. ನಿಮಗೆ ಸವಾಲು ಹಾಕುವ ಪುಸ್ತಕಗಳನ್ನು ಓದಿ. ಇತ್ತೀಚಿಗೆ ಪುಸ್ತಕಗಳನ್ನು ಕೇಳುವ ಅವಕಾಶ ತಂತ್ರಜ್ಞಾನದಿಂದ ಲಭಿಸಿದೆ. ಇದರಿಂದ ಒಂದೇ ಕಡೆ ಕುಳಿತು ಓದಬೇಕಂತಿಲ್ಲ. ಪುಸ್ತಕಗಳನ್ನು ಆಲಿಸಿ ಅದರಲ್ಲಿನ ತಿರುಳನ್ನು ತಿಳಿಯಬಹುದು. ತಂತ್ರಜ್ಞಾನವು ನಿರಂತರವಾಗಿ ಸುಧಾರಿಸುತ್ತಿದೆ. ಕಲಿಯಲು ಅದು ಒದಗಿಸುವ ಅವಕಾಶಗಳನ್ನು ಬಳಿಸಿಕೊಳ್ಳಬೇಕು. ಸಮಸ್ಯೆಗಳು ಶಕ್ತಿಯ ಮಿತಿಯಾಚೆಗಿರುವ  ಸಮಸ್ಯೆಗಳು ಎಂದು ಭಾವಿಸಿರುವಂಥವು  ನಮ್ಮ ಅಸಾಮರ್ಥ್ಯದ ನೆಪದಲ್ಲಿ ಅಟ್ಟಹಾಸ ಮೆರೆಯುತ್ತಿರುತ್ತವೆ. ನಿಜ ಹೇಳಬೇಕೆಂದರೆ ಇಂಥ ತಲೆ ಕೆಡಿಸುವ ಸಂಗತಿಗಳೇ ನಾವು ಹೆಚ್ಚೆಚ್ಚು ಸಮರ್ಥರಾಗಲು ದೊಡ್ಡ ಅವಕಾಶಗಳಾಗುತ್ತವೆ. ‘ಇತರರ ಬಗ್ಗೆ ನಮ್ಮಲ್ಲಿ ಕಿರಿಕಿರಿ ಉಂಟು ಮಾಡುವ ಸಂಗತಿಗಳು ನಮ್ಮನ್ನು ಅರ್ಥ ಮಾಡಿಕೊಳ್ಳಲು ಮಾರ್ಗದರ್ಶನ ಮಾಡಬಹುದು.’  ಎಂದೊಮ್ಮೆ ಪ್ರಸಿದ್ಧಮನಃಶಾಸ್ತ್ರಜ್ಞ ಕಾರ್ಲಜಂಗ್ ಹೇಳಿದ್ದ ಮಾತು ದಿಟವಾದುದು. ಜ್ಞಾಪಿಸಿಕೊಳ್ಳಿ ನಾನು ಸಾಮಾನ್ಯ ನನ್ನಲ್ಲಿ ಹೇಳಿಕೊಳ್ಳುವ ಸಾಮರ್ಥ್ಯಗಳು ಯಾವವೂ ಇಲ್ಲ ಎಂದುಕೊಳ್ಳುವಾಗ ‘ನೀವು ಏನೂ ಪರಿಣಾಮ ಬೀರಲು ಸಾಧ್ಯವಾಗದಷ್ಟು ಸಣ್ಣವರೆಂದು ಭಾವಿಸಿಕೊಳ್ಳುವುದಾದರೆ ಸೊಳ್ಳೆ ಪರದೆಯೊಳಗಿರುವ ಸೊಳ್ಳೆಯನ್ನು ಜ್ಞಾಪಿಸಿಕೊಳ್ಳಿ” ಎಂದು ಮಾರ್ಮಿಕವಾಗಿ ಹೇಳಿದ್ದಾಳೆ ‘ದ ಬಾಡಿ ಶಾಪ್’ನ ಸಂಸ್ಥಾಪಕಿ ಅನಿತಾ ರಾಡಿಕ್. ಆಯ್ಕೆ ಹದ್ದು ಬಾನೆತ್ತರಕ್ಕೆ ಹಾರಬಲ್ಲದು.. ಇರುವೆ ಅತೀ ಚಿಕ್ಕದಾದರೂ, ತನ್ನ ತೂಕಕ್ಕಿಂತ ಹೆಚ್ಚು ಪಟ್ಟು ವಸ್ತುವನ್ನು ಹೊತ್ತೊಯ್ಯುವ ಸಾಮರ್ಥ್ಯ ಗಳಿಸಿಕೊಂಡಿದೆ. ಏನೆಲ್ಲವನ್ನು ದಕ್ಷತೆಯಿಂದ ನಿರ್ವಹಿಸಲು ನಾನು ಸಮರ್ಥ ಎಂಬ ಅಹಂಭಾವ ತಲೆಗೇರಿದರೆ ರಿಚರ್ಡ್ ಕ್ಯಾರಿಯನ್ ಹೇಳಿದಂತೆ, ‘ಯಶಸ್ಸು ಸೋಲನ್ನೂ ಸೃಷ್ಟಿಸುತ್ತದೆ.’ ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆಯೇ ಸರಿ. ನಮ್ಮಲ್ಲಿರುವ ಶಕ್ತಿಯನ್ನು ನಾವೇ ನಿರಾಕರಿಸುವುದು ಅಸಮರ್ಥತೆ. ಅಸಮರ್ಥರಾಗಿ ವೈಫಲ್ಯಗಳಿಗೆ ಬಲಿಪಶುಗಳಾಗುವುದಕ್ಕಿಂತ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡು ಯಶಸ್ವಿ ವ್ಯಕ್ತಿಗಳಾಗುವುದು ಉತ್ತಮ. ಆಯ್ಕೆ ನಮ್ಮ ಕೈಯಲ್ಲಿದೆ. ಜಯಶ್ರೀ ಜೆ ಅಬ್ಬಿಗೇರಿ

“ಸಾಮರ್ಥ್ಯ ನಿರ್ವಹಣೆಯೂ ಒಂದು ಕಲೆ” ಜಯಶ್ರೀ.ಜೆ. ಅಬ್ಬಿಗೇರಿಯವರ ಲೇಖನ. Read Post »

ಇತರೆ, ಪರಿಸರ

“ಬರದೆಡೆಗೆ ಹಸಿರಿಡುವ” ಡಾ.ಸುಮತಿ ಪಿ.

ಪರಿಸರ ಸಂಗಾತಿ “ಬರದೆಡೆಗೆ ಹಸಿರಿಡುವ” ಡಾ.ಸುಮತಿ ಪಿ. ‘ಬರದೆಡೆಗೆ ಹಸಿರಿಡುವ’ ಎನ್ನುವ ಪರಿಕಲ್ಪನೆಯನ್ನು ಬೇರೆ ಬೇರೆ ಆಯಾಮಗಳಲ್ಲಿ ಆಲೋಚನೆ ಮಾಡಿದಾಗ, ಬೇರೆ ಬೇರೆ ವಿಚಾರಗಳು ಹೊಳೆಯುತ್ತವೆ. ಬರ ಎಂದರೆ ಬೇಕಾದದ್ದು ಸಿಗದೇ ಇರುವುದು, ಕೊರತೆ ಕಾಣಿಸುವುದು ಎಂದರ್ಥ. ಮಳೆ ಬಾರದೆ, ಬೆಳೆ ಬೆಳೆಯದೆ, ಹಸಿರು ಕಾಣದೆ ಭುವಿಯಲ್ಲಿ ಜೀವಿಗಳು ಬದುಕಲು ಬೇಕಾದ ಎಲ್ಲದರ ಕೊರತೆ ಉಂಟಾಗುವುದೇ ಬರ. ಆ ಬರ ಬರುವಂತಹ ಭುವಿಯಲ್ಲಿ ಹಸಿರಿಟ್ಟರೆ,ಆ ಹಸಿರಿನಿಂದ ಜೀವಸಂಕುಲ ಉಸಿರಾಡುತ್ತಲೇ, ಭುವಿಯಲ್ಲಿ ಆರೋಗ್ಯಯುತವಾಗಿ ಕಾಲ ಕಳೆಯಬಹುದು ಎಂಬುದು ಒಂದು ಆಯಾಮ. ಇನ್ನೊಂದು ರೀತಿಯಲ್ಲಿ ಬರವನ್ನು ಪ್ರೀತಿಯ ಬರ ಎಂದು ಕೂಡ ತೆಗೆದುಕೊಳ್ಳಬಹುದು ಅಥವಾ ಸಂಸ್ಕಾರದ ಪರ ಎಂದು ಕೂಡ ಊಹಿಸಬಹುದು.ಮೊದಲನೆಯದು ಅಂದರೆ ಬರಡು ನೆಲದಲ್ಲಿ ಹಸಿರಿಡುವ, ಮರಗಳ ಗಿಡಗಳನ್ನು ನೆಡುವ, ಜೀವಸಂಕುಲವನ್ನು ಪೋಷಿಸುವ ಕೆಲಸವು ಅಗತ್ಯವಾಗಿಯೇ ಆಗಬೇಕಾಗಿದೆ.ಮನುಷ್ಯನಿಗೆ ಅಥವಾ ಜೀವಿಗಳಿಗೆ ಉಸಿರಾಡಲು ಬೇಕಾದ ಶುದ್ಧ ಗಾಳಿಯ ಬರ ಇವತ್ತು ಭುವಿಯಲ್ಲಿ ಕಾಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಗಿಡಗಳನ್ನು ನೆಟ್ಟು ಹಸಿರನ್ನು ಬೆಳೆಸಿದರೆ ಮಳೆಯು ಚೆನ್ನಾಗಿ ಸುರಿದು, ಭುವಿಯು ಮತ್ತಷ್ಟು ಹಸಿರಾಗಿ, ಪ್ರಾಣಿಗಳು,ಮನುಷ್ಯರು ಮತ್ತು ಸಸ್ಯಗಳು ಚೆನ್ನಾಗಿ ಬದುಕುವಂತಹ ವಾತಾವರಣವನ್ನು ಕಲ್ಪಿಸಬಹುದು. ಹಾಗಾಗಿ ಪ್ರಸ್ತುತ ಮಲಿನಗೊಂಡ ಪರಿಸರದಲ್ಲಿ,ನಾವು ಪರಿಸರವನ್ನು ಸ್ವಚ್ಛ ಮಾಡಿ ಹಸಿರನ್ನು ಬೆಳೆಸಿದರೆ ಅದು ವಾಸಿಸಲು ಯೋಗ್ಯವಾದ ಪರಿಸರವಾಗುವುದಲ್ಲದೆ, ಎಲ್ಲೆಲ್ಲೂ ಹಸಿರಿನಿಂದ ಕಂಗೊಳಿಸಿದರೆ, ಪ್ರಕೃತಿಯ ಸೌಂದರ್ಯ ಹೆಚ್ಚುತ್ತದೆ. ಮನಸು ಅಹ್ಲಾದಕರವಾಗಿರುತ್ತದೆ.ಸ್ವಚ್ಛ ಪರಿಸರದಿಂದ ಸತ್ವಯುತವಾದ ಬೆಳೆಗಳು ಬೆಳೆದರೆ,ಅದು ಮನುಷ್ಯನ ಆಹಾರವಾಗಿ ಉತ್ತಮ ಆರೋಗ್ಯವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ .  ಶುದ್ಧ ಗಾಳಿಯ ಬರದ ಕಡೆಗೆ ಹಸಿರಿಡಿಸುವ ಕೆಲಸ ಮುಗಿದ ಮೇಲೆ, ಮನುಷ್ಯನ ಮನಸ್ಸಲ್ಲಿ ಹಸಿರಿಡುವ ಕೆಲಸವನ್ನು ಮಾಡಬೇಕಾಗುತ್ತದೆ. ಪ್ರಸ್ತುತ ಸಮಾಜದಲ್ಲಿ ನಾವು ಕಂಡುಕೊಂಡಂತೆ ಮನುಷ್ಯನಲ್ಲಿ ಮಾನವೀಯತೆಗೆ ಬರ ಬಂದಿದೆ.”ಮಾನವೀಯತೆ ಇಲ್ಲದ ಮನುಷ್ಯ ಪಶುವಿಗೆ ಸಮಾನ”ನಮ್ಮ ಮನಸ್ಸು ಬೇರೆಯವರ ಕಷ್ಟಕ್ಕೆ ಬೇರೆಯವರ ದುಃಖಕ್ಕೆ ಮಿಡಿಯಬೇಕು.ಅವರ ಕಷ್ಟದಲ್ಲಿ ಸಮಭಾಗಿಗಳಾಗಿ ಎದುರಿಸುವ ಎದೆಗಾರಿಕೆ ನಮ್ಮಲ್ಲಿರಬೇಕು. ಮನೆಯವರೊಂದಿಗೆ ನೆರೆಕೆರೆಯವರೊಂದಿಗೆ ಹಾಗೂ ಇತರರೊಂದಿಗೆ ದ್ವೇಷ- ರೋಷವನ್ನು ಬೆಳೆಸದೆ, ಒಂದಾಗಿ ಬೆರೆತು, ಕೋಪ ತಾಪವನ್ನು ಮರೆತು, ಪ್ರೀತಿ ಪ್ರೇಮವು ಬಲಿತು,ಹಸಿರಿಡುವ ಕೆಲಸವನ್ನು ಬಹಳ ಎಚ್ಚರಿಕೆಯಿಂದ ಮಾಡಲೇಬೇಕಾಗಿದೆ . ಇನ್ನೂ “ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು” ಎಂಬ ಮಾತಿನಂತೆ ನಮ್ಮ ಮಕ್ಕಳನ್ನು ಬಹಳ ಪ್ರೀತಿಯಿಂದಲೇ ಕಾಣಬೇಕು.ಈಗ “ಮಕ್ಕಳಿಗೆ ಹೊಟ್ಟೆಯ ಹಸಿವೆ ಗಿಂತ ಪ್ರೀತಿಯ ಹಸಿವೆಯೇ ಜಾಸ್ತಿ” ಆದಂತೆ ಕಂಡುಬರುತ್ತದೆ. ಪ್ರೀತಿಗೆ ಬರ ಎಲ್ಲೆಲ್ಲಿದೆಯೋ ಗಮನಿಸಬೇಕಾದ ಅನಿವಾರ್ಯತೆ ಇದೆ. ಪ್ರೀತಿಗೆ ಬರ ಇದ್ದಲ್ಲೆಲ್ಲ ಪ್ರೀತಿಯನ್ನು ಕೊಡುವ  ಮೂಲಕ, ಮಕ್ಕಳನ್ನು ಸಮಾಜದ ಯೋಗ್ಯ ಪ್ರಜೆಗಳನ್ನಾಗಿಸುವ ಜವಾಬ್ದಾರಿ ನಮ್ಮದಲ್ಲವೇ? ಹಾಗಾಗಿ ಪ್ರೀತಿಯ ಬರವಿದ್ದಲ್ಲೆಲ್ಲ ಹಸಿರಿಡುವ ಕೆಲಸ ಬಹಳ ಪ್ರಮುಖವಾಗಿ ಆಗಬೇಕಾದ ಅನಿವಾರ್ಯತೆ ಇದೆ . ಮಕ್ಕಳಿಗೆ ತಂದೆ ತಾಯಿ ಹಾಗೂ ಮನೆಯವರು ತೋರಿಸುವ ಪ್ರೀತಿಗೆ ಬರ ಉಂಟಾದರೆ, ಮುಂದೆ ಖಂಡಿತವಾಗಿಯೂ ವಯೋವೃದ್ಧ ಹೆತ್ತವರು ಮತ್ತು ಪೋಷಕರಲ್ಲಿ ಮಕ್ಕಳು ತೋರಿಸುವ ಪ್ರೀತಿಗೆ ಬರ ಬಂದೇ ಬರುತ್ತದೆ. “ಮಾಡಿದ್ದುಣ್ಣೋ ಮಾರಾಯ” ಎಂಬಂತೆ ನಾವು ಮಕ್ಕಳಿಗೆ ಅಗತ್ಯವಾಗಿ ತೋರಬೇಕಾದ ಪ್ರೀತಿಯನ್ನು ನೀಡಿದರೆ ನಮ್ಮನ್ನು ಕೂಡ ನಮ್ಮ ಮಕ್ಕಳು ವೃದ್ಧಾಪ್ಯದಲ್ಲಿ ಪ್ರೀತಿಯಿಂದಲೇ ಕಾಣುತ್ತಾರೆ. ನಮಗೆ ಪ್ರೀತಿ ಬೇಕಾದರೆ ನಾವು ಕೂಡ ಅವರನ್ನು ಪ್ರೀತಿಸಬೇಕಾಗುತ್ತದೆ. ಆದರೆ ಇಂದಿನ ಜಗತ್ತಿನಲ್ಲಿ ಒತ್ತಡದ ಬದುಕಿನಲ್ಲಿ ಮಕ್ಕಳನ್ನು ಪ್ರೀತಿಸಲು ಸಮಯ ವೆಲ್ಲಿಯದು,? ಅವರ ಆಗು ಹೋಗುಗಳ ಬಗ್ಗೆ ಅರಿತು,ಆಸೆ ಆಕಾಂಕ್ಷೆಗಳಲ್ಲಿ ಯಾವುದಕ್ಕೆ ಪ್ರಾಮುಖ್ಯತೆ  ಕೊಡಬೇಕು ಎಂಬುದನ್ನು ಅರಿತು ತಿಳಿಸುವ ವರಾರು? ಎಲ್ಲಾ ಮನೆಗಳಲ್ಲೂ ಪ್ರೀತಿಗೆ ಬರ ಬಂದಿದೆ ಎಂದು ಹೇಳಿದರೆ ತಪ್ಪಾಗದು ಎಂಬುದು ನನ್ನ ಭಾವನೆ. ಅಂತಹ ಪ್ರೀತಿಯ ಬರದಿಂದ ಪರದಾಡುವ ಮಕ್ಕಳಿಗೆ ಹಸಿರಿಡುವಂತೆ ಪ್ರೀತಿಯನ್ನು ತೋರಿಸಬೇಕಾದ ಅನಿವಾರ್ಯತೆ ಇಂದಿನ ಸಮಾಜದಲ್ಲಿ ಎದ್ದು ಕಾಣುತ್ತಿದೆ . ಇನ್ನು ಇಂದಿನ ಮಕ್ಕಳಲ್ಲಿ ಸಂಸ್ಕಾರದ ಬರ ಇದೆ. ಹೆಚ್ಚಿನ ಮಕ್ಕಳಲ್ಲಿ ಪ್ರೀತಿ, ಕರುಣೆ, ಮಮತೆ ,ಸಹಾಯ ಮಾಡುವ ಗುಣ,ಹಂಚಿ ತಿನ್ನುವ ಮನಸ್ಸು, ಹಿರಿಯರಿಗೆ ಗೌರವ ಕೊಡುವಂತಹ ಗುಣ ಇದಕ್ಕೆಲ್ಲಾ ಕೊರತೆ ಕಂಡು  ಬರುತ್ತಿದೆ.ಅಂದರೆ ಮಕ್ಕಳಿಗೆ ಸಂಸ್ಕಾರದ ಕೊರತೆ ಇದೆ .ತಮ್ಮ ವೈಯಕ್ತಿಕ ಹಾಗೂ ಸಾಮಾಜಿಕ ಜೀವನದಲ್ಲಿ ಅವರು ತೋರಿಸುವ ಪ್ರೀತಿ ಕಾಳಜಿ ಬಗ್ಗೆ ಒಂದಿಷ್ಟನ್ನು ನಾವು ಹೇಳಿಕೊಡಲೇಬೇಕಾಗುತ್ತದೆ .ಮಕ್ಕಳಲ್ಲಿ ಸಂಸ್ಕಾರದ ಕೊರತೆ ಇದೆ ಎಂದು ಹೇಳಿದರೆ ಸಾಕಾಗಲಾರದು ಅದನ್ನು ಬೆಳೆಸುವಂತಹ ಅಂದರೆ ಸಂಸ್ಕಾರದ ಬರ ಇರುವಲ್ಲಿ ಹಸಿರಿಡುವ ಕೆಲಸವನ್ನು ನಾವು ಮಾಡಬೇಕಾಗಿದೆ ‘ಮಕ್ಕಳು ಹೇಳಿದ್ದನ್ನು ಮಾಡುವುದಕ್ಕಿಂತ ಮಾಡಿದ್ದನ್ನು ನೋಡಿ ಕಲಿತುಕೊಳ್ಳುವ ಕುತೂಹಲದ ಮನಸ್ಸಿನವರು’ಹಾಗಾಗಿ ನಾವು ಮಕ್ಕಳ ಮುಂದೆ ಒಳ್ಳೆಯ ಸಂಸ್ಕಾರವಂತರಾಗಿ ಬದುಕಿದರೆ ಸಂಸ್ಕಾರದ ಬರವಿರುವ ಮಕ್ಕಳ ಮನಸ್ಸಿನಲ್ಲಿ ಹಸಿರಿಡುವಂತಹ ಕೆಲಸ ನಮ್ಮಿಂದ ಆಗುತ್ತದೆ. ಒಟ್ಟಿನಲ್ಲಿ ಹೇಳುವುದಾದರೆ ಬರದೆಡೆಗೆ ಹಸಿರಿಡುವ ಎಂದರೆ ಮನುಷ್ಯ ಜೀವನದಲ್ಲಿ ಯೋಗ್ಯ ವ್ಯಕ್ತಿಯಾಗಿ ಬಾಳಬೇಕಾದರೆ ಯಾವುದೆಲ್ಲ ಬೇಕೋ ಅದರಲ್ಲಿ ಕೊರತೆ ಉಂಟಾದರೆ, ಮನುಷ್ಯ ಯೋಗ್ಯತೆಯಿಂದ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಅಂತಹ ಬರವನ್ನು ತೊರೆಸಲು ಹಸಿರಿಡುವ ಅಂದರೆ ಕೊರತೆಯನ್ನು ನೀಗಿಸುವ ಕೆಲಸ ನಮ್ಮಿಂದಾಗಬೇಕು. ಹಾಗಿದ್ದರೆ ಮಾತ್ರ ಈ ಜಗದಲ್ಲಿ ಜನಜೀವನ ಸುಖಮಯವಾಗಲು ಸಾಧ್ಯವಿದೆ. ಸಂಸ್ಕಾರವಂತ ಮಕ್ಕಳು ಬೆಳೆದು ದೇಶದ ಪ್ರಗತಿಯಾಗಲು ಅನುವಾಗುತ್ತದೆ. ಡಾ.ಸುಮತಿ ಪಿ

“ಬರದೆಡೆಗೆ ಹಸಿರಿಡುವ” ಡಾ.ಸುಮತಿ ಪಿ. Read Post »

ಇತರೆ

ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ?? ವೀಣಾ ಹೇಮಂತ್‌ ಗೌಡಪಾಟೀಲ್

ಕ್ರೀಡಾ ಸಂಗಾತಿ ವೀಣಾ ಹೇಮಂತ್‌ ಗೌಡಪಾಟೀಲ್ ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ??  ನವಂಬರ್ 25 ರಿಂದ ಡಿಸೆಂಬರ್ ನಾಲ್ಕರವರೆಗೆ ರಾಜಸ್ಥಾನದ ಜೈಪುರದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಖೇಲೋ ಇಂಡಿಯಾ ರಾಷ್ಟ್ರ ಮಟ್ಟದ ಕ್ರೀಡಾ ಕೂಟ ನಡೆಯಿತು. ಭವಿಷ್ಯದ ಕ್ರೀಡಾಪಟುಗಳನ್ನು ಗುರುತಿಸುವ ಗುರುತರ ಜವಾಬ್ದಾರಿಯನ್ನು ಹೊಂದಿರುವ ಈ ಕ್ರೀಡಾಕೂಟದಲ್ಲಿ ಬಹುತೇಕ ರಾಷ್ಟ್ರದ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗವಹಿಸಬೇಕಿತ್ತು. ಆದರೆ ಬೆರಳೆಣಿಕೆಯಷ್ಟು ಜನರು ಮಾತ್ರ ಒಂದೊಂದು ಆಟಗಳಲ್ಲಿ ಭಾಗವಹಿಸಿದ್ದರು. ಮತ್ತೆ ಕೆಲವರು ಆಯ್ಕೆಯಾಗಿದ್ದರು ಕೂಡ ಕ್ರೀಡೆಯಲ್ಲಿ ಭಾಗವಹಿಸಲಿಲ್ಲ. ಈ ಕುರಿತ ವಿಡಿಯೋ ಒಂದನ್ನು ನೋಡಿದಾಗ ತುಸು ಆಶ್ಚರ್ಯದ ಜೊತೆಗೆ  ಜಾಗೃತಿಯನ್ನು ಉಂಟುಮಾಡುವ ಅವಶ್ಯಕತೆಯನ್ನು ಮನಗಂಡು ಮಾಹಿತಿಯನ್ನು ಪಡೆದ ನಂತರ ಮೂಡಿದ ಲೇಖನ ನಿಮ್ಮ ಓದಿಗೆ. ಖೇಲೊ ಇಂಡಿಯಾ ತರಬೇತಿ ಸಂಸ್ಥೆಗಳು ಹಾಗೂ ಕ್ರೀಡಾ ಅಕಾಡೆಮಿಗಳು ಖೇಲೋ ಇಂಡಿಯಾ ಯೋಜನೆಯಡಿ ಆಯ್ಕೆಯಾದ ನಂತರ ಅವರಿಗೆ ತರಬೇತಿಯ ಜೊತೆಗೆ ಆರ್ಥಿಕ ಧನ ಸಹಾಯ ಹಾಗೂ ಪ್ರತಿ ತಿಂಗಳು ನಿಗದಿತ ಮೊತ್ತದ ಪಾಕೆಟ್ ಅಲೋವೆನ್ಸ್ ದೊರೆಯುತ್ತದೆ. ರಾಷ್ಟ್ರಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಮೊದಲ ಮೂರುಸ್ಥಾನ ಗಳಿಸುವವರಿಗೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ನೌಕರಿಯ ಅನುಕೂಲತೆಯನ್ನು ಕೂಡ ಒದಗಿಸಲಾಗುತ್ತದೆ ಹಾಗೂ ಪದಕ ವಿಜೇತರಿಗೆ ನಿಗದಿತ ಮೊತ್ತವನ್ನು ಕೊಡ ಮಾಡಲಾಗುತ್ತದೆ. ಭಾರತ ದೇಶದಲ್ಲಿ ಕ್ರೀಡಾ ಸಂಸ್ಕೃತಿಯನ್ನು ಉತ್ತೇಜಿಸುವ ಹಾಗೂ ಪ್ರತಿಭೆಗಳನ್ನು ಗುರುತಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿ ಗುರುತಿಸಲ್ಪಟ್ಟ ಖೇಲೋ ಇಂಡಿಯಾ ಕಾರ್ಯಕ್ರಮವು ಕೇಂದ್ರದ ಯುವಜನ ಮತ್ತು ಕ್ರೀಡಾ ಇಲಾಖೆಯ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.  ವಿಶಾಲವಾದ ಖೇಲೊ ಇಂಡಿಯಾ ಎಂಬ  ಬೃಹತ್ ಪ್ರಮಾಣದ ಕ್ರೀಡಾ ಕೂಟಗಳನ್ನು ಭಾರತದ ಫನ ಸರ್ಕಾರವು ಆಯೋಜಿಸುತ್ತದೆ. ಪ್ರತಿ ಎರಡು ಜಿಲ್ಲೆಗಳಿಗೆ ಒಂದರಂತೆ ಒಟ್ಟು ಇಡೀ ದೇಶದಾದ್ಯಂತ 1041  ಖೇಲೋ ಇಂಡಿಯಾ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಹಂತದ ಕ್ರೀಡಾಪಟುಗಳು 2025ರ ಸಾಲಿನಲ್ಲಿ ನಡೆದಿದ್ದು ಮುಖ್ಯವಾಗಿ ಮೂರು ಪ್ರಮುಖ ರೀತಿಯಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು, ಇದರಲ್ಲಿಖೇಲೊ ಇಂಡಿಯಾ ಯೂತ್ ಗೇಮ್ಸ್ ಎಂಬುದು ಯುವ ಕ್ರೀಡಾಪಟುಗಳಿಗಾಗಿ ನಡೆಸುವ ಪ್ರಮುಖ ಸ್ಪರ್ಧೆಯಾಗಿದ್ದು ಮೇ ತಿಂಗಳಲ್ಲಿ ಈ ಕ್ರೀಡಾಕೂಟವು ಬಿಹಾರ ರಾಜ್ಯದಲ್ಲಿ ನಡೆಯಿತು. 17 ವರ್ಷ ವಯಸ್ಸಿಗಿಂತ ಕಡಿಮೆ ಹಾಗೂ 21 ವರ್ಷ ವಯಸ್ಸಿಗಿಂತ ಕಡಿಮೆ ಇರುವ ವಿಭಾಗಗಳಲ್ಲಿ ಸ್ಪರ್ಧಿಸುವ ಅವಕಾಶವನ್ನು ಇಲ್ಲಿ ಕಲ್ಪಿಸಲಾಗುತ್ತದೆ. 28 ಬಗೆಯ ವಿವಿಧ ಕ್ರೀಡೆಗಳು ಇದರಲ್ಲಿ ಸೇರ್ಪಡೆಯಾಗಿದ್ದು ಯುವ ಜನತೆಯಲ್ಲಿ ಕ್ರೀಡೆಯ ಕುರಿತಾದ ಆಸಕ್ತಿಯನ್ನು ಹೆಚ್ಚಿಸಲು ಹಾಗೂ ಭವಿಷ್ಯದ ಕ್ರೀಡಾಪಟುಗಳನ್ನು ತಯಾರಿಸುವ ನಿಟ್ಟಿನಲ್ಲಿ ಇದೊಂದು ಅತ್ಯುತ್ತಮ ಪ್ರಯತ್ನವಾಗಿದೆ. ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಎಂಬುದು ಚಳಿಗಾಲದ ಕ್ರೀಡೆಯಾಗಿದ್ದು 2025 ಈ ಆವೃತ್ತಿಯು  ಹಾಗೂ ಜಮ್ಮು ಮತ್ತು ಕಾಶ್ಮೀರ, ಹಾಗೂ ಲಡಾಕ್ ಗಳಲ್ಲಿ ಎರಡು ಹಂತಗಳಲ್ಲಿ ನಡೆಯಿತು. ಖೇಲೋ ಇಂಡಿಯಾ ಬೀಚ್ ಗೇಮ್ಸ್ ಎಂಬ ಮತ್ತೊಂದು ವಿಶೇಷವಾದ ಸ್ಪರ್ಧೆಯು ಕಡಲ ತೀರದ ಕ್ರೀಡೆಗಳಿಗಾಗಿ ಮೀಸಲಾಗಿದ್ದು ದಾದರ್ ಹಾಗೂ ನಗರ ಹವೇಲಿ ಮತ್ತು ದಮನ್ ಮತ್ತು ಡಯು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯಿತು.ಕಡಲ ತೀರದಲ್ಲಿ ಆಡುವ ಆಟಗಳಾದ ವಾಲಿಬಾಲ್, ಬಾಸ್ಕೆಟ್ ಬಾಲ್, ಮಲ್ಲಕಂಬ, ಹಗ್ಗ ಜಗ್ಗಾಟ ಹಾಗೂ ಈಜುಗಳು ಇದರಲ್ಲಿ ಸೇರಿದ್ದವು.  ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ ಗಳು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ನಡೆಯುವ ಸ್ಪರ್ಧೆಯಾಗಿದ್ದು 2025ರ ಡಿಸೆಂಬರ್ ನಾಲ್ಕರವರೆಗೆ ಸುಮಾರು 11 ದಿನಗಳ ಕಾಲ ರಾಜಸ್ಥಾನದ ಜೈಪುರದಲ್ಲಿ ಈ ಕ್ರೀಡಾಕೂಟವು ನಡೆಯಿತು. ಸುಮಾರು 23ಕ್ಕೂ ಹೆಚ್ಚು ವಿವಿಧ ಬಗೆಯ ಸ್ಪರ್ಧೆಗಳು ಈ ಕ್ರೀಡಾಕೂಟದಲ್ಲಿ ನಡೆದಿದ್ದು, ಭಾರತ ದೇಶದ ಇನ್ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿಂದ ನಾಲ್ಕುವರೆ ಸಾವಿರದಿಂದ ಏಳು ಸಾವಿರ ವಿದ್ಯಾರ್ಥಿಗಳು ಭಾಗವಹಿಸಿರುವ ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ ಬಹುತೇಕ ವಿದ್ಯಾರ್ಥಿಗಳು ಆಟದಲ್ಲಿ ಪಾಲ್ಗೊಳ್ಳದೆ ಹೋಗಿದ್ದಾರೆ. 400 ಮೀಟರ್ ಓಟದಲ್ಲಿ ಕುರುಕ್ಷೇತ್ರ ವಿಶ್ವವಿದ್ಯಾಲಯದಿಂದ ಬಂದ ಕೇವಲ ಓರ್ವ ವಿದ್ಯಾರ್ಥಿನಿ ಓಡಿದ್ದರೆ ಅದೇ 400 ಮೀಟರ್ ಹರ್ಡಲ್ಸ್ ನಲ್ಲಿ ಕೇವಲ ಓರ್ವ ವಿದ್ಯಾರ್ಥಿ ಓಡಿದ್ದು ತನ್ನ ಹಿಂದಿನದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾನೆ. ಆದರೆ ಈ ಇಬ್ಬರು ಓಟಗಾರರಿಗೂ ಮೆಡಲುಗಳು ದೊರೆತಿಲ್ಲ.  ನಿಯಮದ ಪ್ರಕಾರ ಎಲ್ಲಾ ಯುನಿವರ್ಸಿಟಿಗಳ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಒಂದೊಂದು ಅಥ್ಲೆಟಿಕ್ ಕ್ರೀಡೆಯಲ್ಲಿಯೂ ಅತಿ ಹೆಚ್ಚು ಪಾಯಿಂಟ್ಗಳನ್ನು ಗಳಿಸಿರುವ ಕ್ರೀಡಾಪಟುಗಳಿಗೆ ಆಯ್ಕೆಯಲ್ಲಿ ಅವಕಾಶವಿದ್ದು ಈ ಹಿಂದೆ ನಡೆದಿರುವ ಯೂನಿವರ್ಸಿಟಿ ಮಟ್ಟದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಅಂತಿಮ ಘಟ್ಟವನ್ನು ತಲುಪಿರುವ ಮೊದಲ ಎಂಟು ಜನ ವಿದ್ಯಾರ್ಥಿಗಳನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.  ಹೀಗೆ ರಾಷ್ಟ್ರ ಮಟ್ಟದಲ್ಲಿ ಖೇಲೋ ಇಂಡಿಯಾ ಕಾರ್ಯಕ್ರಮದ ಅಡಿಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಆಟದ ಮೈದಾನಕ್ಕೆ ಬರದೆ ಹೋಗುವುದು ವಿಪರ್ಯಾಸದ ಸಂಗತಿ. ಇದಕ್ಕೆ ಕಾರಣಗಳು ಹಲವಾರು. * ಈಗಾಗಲೇ ಸರಕಾರಿ ನೌಕರಿ ದೊರೆತಿರುವ ಕಾರಣ ಅಂತಹವರಿಗೆ ಅವಕಾಶವನ್ನು ನಿರಾಕರಿಸಲಾಗುತ್ತದೆ. *ಮುಂದಿನ ದೊಡ್ಡ ಕ್ರೀಡಾ ಚಟುವಟಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿರುವವರು ಕೂಡ ಈ ಕ್ರೀಡಾಕೂಟದಲ್ಲಿ ಭಾಗವಹಿಸುವುದನ್ನು ನಿರಾಕರಿಸಬಹುದು. *ಮಾದಕ ವಸ್ತು ಸೇವನೆಯ ಪರೀಕ್ಷೆ. ರಾಷ್ಟ್ರೀಯಮಾದಕ ದ್ರವ್ಯ ಸೇವನೆ ವಿರೋಧಿ ಸಂಸ್ಥೆಯಾದ ‘ನ್ಯಾಷನಲ್ ಆಂಟಿ ಡೋಪಿಂಗ್ ಏಜೆನ್ಸಿ’ಯಿಂದ ನಡೆಸಲ್ಪಡುವ ಮಾದಕ ದ್ರವ್ಯ ಸೇವನೆಯ ಪರೀಕ್ಷೆಯ ಭಯದಿಂದ ಕ್ರೀಡಾಕೂಟದಿಂದಲೇ ಹೊರ ನಡೆಯುವುದು. ಇಲ್ಲಾಗಿದ್ದೂ ಅದೇ. ಎಷ್ಟೋ ಬಾರಿ ಆಹಾರ ಸೇವನೆಯ ವ್ಯತ್ಯಾಸದಿಂದಾಗಿ ಕೂಡ ಹಾರ್ಮೋನುಗಳಲ್ಲಿ ಬದಲಾವಣೆಯನ್ನು ಕಂಡುಕೊಳ್ಳಬಹುದು ಅಥವಾ ವೈದ್ಯರು ಹೇಳಿರುವ ಔಷಧಿಗಳಲ್ಲಿ, ಕೆಲ ನಿಷೇಧಿತ ವಸ್ತುಗಳಲ್ಲಿ ನಾಡಾ ಸಂಸ್ಥೆಯು ಅಂಗೀಕರಿಸದೆ ಇರುವಹಾರ್ಮೋನುಗಳನ್ನು ಹಾಗೂ ದೈಹಿಕ ಬಲವನ್ನು ಪ್ರಚೋದಿಸುವ ಔಷಧಿಗಳನ್ನು ಸೇವಿಸಿದ ಕುರಿತು ಕ್ರೀಡಾಪಟುವಿನ ರಕ್ತ ಮತ್ತು ಮೂತ್ರದ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಂತರಾಷ್ಟ್ರೀಯ ಗುಣಮಟ್ಟದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲ್ಪಡುವ ರಕ್ತ ಹಾಗೂ ಮೂತ್ರದ ಮಾದರಿಗಳಲ್ಲಿ ಸಂಸ್ಥೆಯು ನಿಷೇಧಿಸಿರುವ ಯಾವುದಾದರೂ ಒಂದು ಮಾದಕ ದ್ರವ್ಯವನ್ನು ಹೊಂದಿದ್ದರೆ ಆಟಗಾರರನ್ನು ಕೆಲ ತಿಂಗಳು ಇಲ್ಲವೇ ಕೆಲ ವರ್ಷಗಳ ಕಾಲ ಆಟದಿಂದ ಹೊರಗಿಡಬಹುದು. ಕ್ರೀಡೆಯಿಂದಲೇ ನಿಷೇಧಿಸಬಹುದು. ನೋವು ಅಪಮಾನಗಳು ಅವರನ್ನು ಬೆನ್ನಟ್ಟಬಹುದಾದ ಸಾಧ್ಯತೆಗಳು ಬಹಳ. ಬಹುತೇಕ ಕ್ರೀಡಾಪಟುಗಳು ತಮ್ಮ ದೈಹಿಕ ಸಾಮರ್ಥ್ಯವನ್ನು, ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಕೂಡ ಇಂತಹ ಮಾದಕ ದ್ರವ್ಯಗಳ ಸೇವನೆಯಲ್ಲಿ ತೊಡಗಿಕೊಂಡಿರುತ್ತಾರೆ, ಮತ್ತೆ ಕೆಲವೊಮ್ಮೆ ಬಹು ರಾಷ್ಟ್ರೀಯ ಕಂಪನಿಗಳ ತಯಾರಿಕೆಯ ಆಹಾರ ಪದಾರ್ಥ ಹಾಗೂ ಕೂಲ್ ಡ್ರಿಂಕ್ ಗಳಲ್ಲಿ ಹೆಚ್ಚಿನ ಮಟ್ಟದ ನಿಷೇಧ ಪದಾರ್ಥಗಳು ಇರುವುದು ಇವುಗಳ ಸೇವನೆಯಿಂದಲೂ ಕೂಡ ಕ್ರೀಡಾಪಟುಗಳು ತೊಂದರೆಯನ್ನು ಅನುಭವಿಸುತ್ತಾರೆ. ಎಷ್ಟೋ ಬಾರಿ ಯಾವ ಆಹಾರವನ್ನು ಸೇವಿಸಬೇಕು ಯಾವುದನ್ನು ಸೇವಿಸಬಾರದು ಎಂಬ ಅರಿವಿನ ಕೊರತೆಯಿಂದಲೂ ಇಂತಹ ತೊಂದರೆಗಳು ಉದ್ಧವಿಸುತ್ತವೆ…ಆದ್ದರಿಂದಲೇ ಬಹಳಷ್ಟು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ತಪ್ಪಿಸುವ ಸಲುವಾಗಿ ಕ್ರೀಡೆಯಿಂದಲೇ ಹೊರಗೆ ಉಳಿಯುತ್ತಾರೆ. ಇಲ್ಲಾದದ್ದು ಕೂಡ ಅದೇ. ಬಹುತೇಕ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟಗಳಲ್ಲಿ ಮೂರು ಇಲ್ಲವೇ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದ ಕ್ರೀಡಾಪಟುಗಳು ಇರಲೇಬೇಕು ಎಂಬುದು ನಿಯಮ…. ಹಾಗಿದ್ದರೆ ಮಾತ್ರ ಅವರಿಗೆ ಸ್ಥಾನಮಾನ ಹಾಗೂ ಪದಕ ಗೆಲ್ಲಲು ಅವಕಾಶ.ಆದರೆ ಖೇಲೋ ಇಂಡಿಯಾದಲ್ಲಿ ಕ್ರೀಡಾಕೂಟದ ಆರಂಭದ ದಿನ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸದೇ ಇರುವುದು ಇದೇ ಕಾರಣಕ್ಕೆ. ಇದೊಂದು ಅಪಾಯಕಾರಿ ಬೆಳವಣಿಗೆ ಅಲ್ಲವೇ?? ಇದೇ ರೀತಿ ಪರಿಸ್ಥಿತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಭಾರತ ದೇಶದಲ್ಲಿ ಕ್ರೀಡೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗುತ್ತದೆ. ಮೌಲ್ಯಗಳೇ ಬದುಕು ಎಂದು ಉಸಿರಾಡುವ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಅಜ್ಞಾನ ಮತ್ತು ಅರಿವಿನ ಕೊರತೆಯ ಕಾರಣದಿಂದಾಗಿ ಬಹಳಷ್ಟು ಕ್ರೀಡಾಪಟುಗಳು ತಮ್ಮ ಕ್ರೀಡಾ ಬದುಕಿಗೆ ವಿದಾಯ ಹೇಳಿದ್ದಾರೆ. ಮತ್ತೆ ಕೆಲವರು ಪುಟಿದೆದ್ದ ಚಂಡಿನಂತೆ, ಸುಟ್ಟ ಬೂದಿಯಲ್ಲಿ ಮರು ಹುಟ್ಟು ಪಡೆದುಕೊಳ್ಳುವ  ಫೀನಿಕ್ಸ್ ನಂತೆ ಮರಳಿ ಅಂಗಳಕ್ಕೆ ಇಳಿದು ಯಶಸ್ಸು ಕಂಡುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಗಂಭೀರವಾಗಿ  ಯೋಚಿಸಬೇಕಾಗಿದೆ. ಕ್ರೀಡಾಪಟುಗಳಲ್ಲಿ ಕ್ರೀಡೆಗೆ ಅತ್ಯವಶ್ಯಕವಾದ ಶಿಸ್ತು, ಪರಿಶ್ರಮ, ಶ್ರದ್ಧೆ, ಸ್ಥಿರತೆಯ ಜೊತೆ ಜೊತೆಗೆ ಮೌಲ್ಯಗಳನ್ನು ಕೂಡ ಅಭಿವೃದ್ಧಿಪಡಿಸಬೇಕಾದ ಅವಶ್ಯಕತೆಯನ್ನು ಮನಗಂಡು ಅವರಿಗೆ ತರಬೇತಿ ಕೊಡಬೇಕು. ಜಾಗತಿಕ ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಪಡೆದಿದ್ದರೂ ಕೂಡ ಕ್ರೀಡೆಯ ವಿಷಯದಲ್ಲಿ ಪ್ರಪಂಚದ 190ಕ್ಕೂ ಹೆಚ್ಚು ದೇಶಗಳ ಕ್ರೀಡಾಪಟ್ಟಿಯಲ್ಲಿ ಅತ್ಯಂತ ಕೆಳಗಿನ ಸ್ಥಾನವನ್ನು ಗಳಿಸಿರುವ ಭಾರತ ಮುಂದಿನ ದಿನಗಳಲ್ಲಿ ಮತ್ತಷ್ಟು ಶೋಚನೀಯ ಪರಿಸ್ಥಿತಿಗೆ ಇಳಿಯುವುದನ್ನು ತಪ್ಪಿಸಬೇಕು. ಇದು ನಮ್ಮ ಭಾರತ ಫನ ಸರ್ಕಾರದ ಆದ್ಯತೆಯ ಪಟ್ಟಿಯಲ್ಲಿ ಮಂಚೂಣಿಯಲ್ಲಿ ಇರಬೇಕಾದ ವಿಷಯವಾಗಿದ್ದು ಈ ನಿಟ್ಟಿನಲ್ಲಿ ವಿವಿಧ ಕ್ರೀಡಾ ಸಂಸ್ಥೆಗಳು ಹಾಗೂ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ಸಂಯುಕ್ತವಾಗಿ ಯೋಜನೆಗಳನ್ನು ರೂಪಿಸುವ, ಅವುಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ಭಾರತದಲ್ಲಿ ಕ್ರೀಡೆಗಳ ಅಭಿವೃದ್ಧಿಗೆ ನಾಂದಿ ಹಾಡಲಿ ಎಂಬ ಆಶಯದೊಂದಿಗೆ ವೀಣಾ ಹೇಮಂತಗೌಡ ಪಾಟೀಲ್

ಮಹತ್ವಕಾಂಕ್ಷಿ ಕ್ರೀಡಾ ಯೋಜನೆಗಳು ಹಾಗೂ ಕ್ರೀಡೆಯ ಭವಿಷ್ಯ?? ವೀಣಾ ಹೇಮಂತ್‌ ಗೌಡಪಾಟೀಲ್ Read Post »

ಇತರೆ, ಸಿನೆಮಾ

“ಕಹಿ ಕಾಫಿ – ಸಿಹಿ ನಗು” ಕಿರು ಚಿತ್ರದ ಸ್ಕ್ರಿಪ್ಟ್,ವಿಜಯ್‌ ಅಮೃತರಾಜ್‌ ಅವರಿಂದ

ಸಿನಿ ಸಂಗಾತಿ ವಿಜಯ್‌ ಅಮೃತರಾಜ್‌ “ಕಹಿ ಕಾಫಿ – ಸಿಹಿ ನಗು” ಕಿರು ಚಿತ್ರದ ಸ್ಕ್ರಿಪ್ಟ್, ದೃಶ್ಯ: 1. ರಂಗಸ್ಥಳ: ಕಾಫಿ ಕೆಫೆ. (ಕೆಫೆಯ ಟೇಬಲ್. ಸಿರಿ ತನ್ನ ಕಾಫಿಯನ್ನು ಹಿಡಿದಿದ್ದಾಳೆ. ವಿಜಯ ತುಂಟ ನಗುವಿನೊಂದಿಗೆ ಆಕೆಯ ಕಾಫಿಗೆ ಕೈ ಹಾಕುತ್ತಾ ಕೆಣಕುತ್ತಿದ್ದಾನೆ.) ಸಿರಿ: ಓಹ್! ವಿಜಯ! ನೀವು ನನ್ನ ಕಾಫಿಯನ್ನು ಮುಟ್ಟುವ ಸಾಹಸ ಮಾಡಿದರೆ, ಈ ಕಾಫಿ  ಕಹಿಯಂತೆ ,ನಿಮ್ಮ ಮುಂದಿನ ಪರಿಸ್ಥಿಯೂ ಕಹಿಯಾಗುತ್ತೆ ನೋಡು! ( ನಸು ನಕ್ಕಳು) ವಿಜಯ: (ಸಿರಿ ನಸು ನಕ್ಕಿದ್ದನ್ನು ಗಮನಿಸಿ) ಸಿರಿ, ಆ ಧಮ್ಕಿ ನಿಮ್ಮ ಕೋಪದ ಕಹಿಯೋ ಅಥವಾ ಹಾಸ್ಯದ ಖಾರವೋ? ಗೊತ್ತಿಲ್ಲ ಆದರೆ ಈಗ ನನಗೆ ಒಂದು ಗಾದೆ ನೆನಪಾಗುತ್ತಿದೆ, “ಅಕ್ಕಿ ಮೇಲೆ ಆಸೆ, ನೆಂಟರ ಮೇಲೆ ಪ್ರೀತಿ” ಎಂಬಂತೆ, ನನಗೆ ನಿಮ್ಮ ನಗುವಿನ ಮೇಲೂ ಆಸೆ, ಈ ಕಾಫಿಯ ಕಹಿಯ ಮೇಲೂ ಪ್ರೀತಿ! ಗೊತ್ತಾ ಏನಿವಾಗ? ಸಿರಿ: ಈಗ…ಏನಾ? ನಿಮ್ಮ ಕಪ್‌ನಲ್ಲಿ ಡೈನೋಸಾರ್ ಮೊಟ್ಟೆಯ ಸಿಪ್ಪೆ ಸಿಕ್ಕಿತೇ? ವಿಜಯ: ಇಲ್ಲ, ನನ್ನ ಕಹಿ ಕಾಫಿ ನನ್ನನ್ನು ನೋಡಿ ಗೊಣಗುತ್ತಿದೆ: “ನಾನು ಇಲ್ಲಿ ವಿಜಯನ ಅಪ್ರಬುದ್ಧ ಹಾಸ್ಯಕ್ಕೆ ಸಾಕ್ಷಿಯಾಗುವ ಶಿಕ್ಷೆ ಅನುಭವಿಸುತ್ತಿದ್ದೇನೆ! ಬೇಗ ನನ್ನ ಕುಡಿದು ನನ್ನ ಕಷ್ಟ ಮುಗಿಸಿ ಅಂತಾ!” ಸಿರಿ: (ಟಿಶ್ಯೂ ಪೇಪರ್ ತೆಗೆದುಕೊಂಡು) ವಿಜಯ, ಆ ಕಾಫಿಯ ಕಷ್ಟ ನೋಡಲು ನನಗೂ ಕಷ್ಟವಾಗುತ್ತಿದೆ. ಇಲ್ಲವಾದರೆ, “ಹತ್ತು ಸಲ ಹೇಳಿದ ಮಾತು ಕಲ್ಲಾಗಿ ಹೋದೀತು” ಎಂಬಂತೆ, ಆ ಕಹಿಯೆಲ್ಲ ನಿಮ್ಮ ಮಾತುಗಳಿಗೆ ಸೇರಿ ನಮ್ಮ ಸಂಭಾಷಣೆಯನ್ನೇ ಕಹಿ ಮಾಡಿಬಿಡುತ್ತೆ ಗೊತ್ತಾ?. ವಿಜಯ: (ತನ್ನ ಕಪ್ ಎತ್ತಿ ಸಿರಿ ಕಡೆಗೆ ಒಡ್ಡುತ್ತಾ) ಸರಿ! ಕವಿ ಡಿ.ವಿ.ಜಿ. ಅವರ ಕಗ್ಗ ಹೇಳುವಂತೆ: “ಬಾಳ ಪಥವಿದು, ನಗುತ ನಗುತ ನಡೆ”. ನಿಮ್ಮ ಕೈಯಿಂದ ಆ ಕಪ್ ಅನ್ನು ಒಂದುಸಲ ಮುಟ್ಟಿ ಜೊತೆಗೆ ಒಂದು ಸಿಹಿ ಮಾತು ಹೇಳಿದರೆ ಅದು ಆ ಕ್ಷಣವೇ ಸಿಹಿಯಾಗುತ್ತದೆ! ನಿಮ್ಮ ಕೈಯಿಂದ ಆ ಕಹಿ ಕಾಫಿಗೆ ಮುಕ್ತಿ ಸಿಗಲಿ, ಸಿರಿ!.. ಸರಿ ನಾ?. ಸಿರಿ: (ನಗುವನ್ನು ತಡೆಯಲಾಗದೆ, ಕಪ್ ಮುಟ್ಟಿ) ಸರಿ ಕಹಿ ಕಾಫಿ, ಈಗ ನೀನು “ಹೂವಿನಾಸರೆ ಗೂಡೆಗೆ ಸರಿ” ಎಂಬಂತೆ, ನನ್ನ ನಗುವಿನ ಆಸರೆಯಿಂದ ವಿಜಯನ ಮಾತಿನಷ್ಟೇ ಸಿಹಿಯಾಗು!. (ಸಿರಿ ದೂರ ಸರಿಯುತ್ತಾಳೆ. ವಿಜಯ ತನ್ನ ಕಾಫಿ ಮುಗಿಸುತ್ತಾನೆ.) ವಿಜಯ: (ಕುವೆಂಪು ಅವರ ಸಾಲುಗಳನ್ನು ನೆನಪಿಸಿಕೊಂಡು) ನೋಡಿದಿರಾ?‌ಸಿರಿ,  ನಿಮ್ಮ ನಗು, ಅದು “ಎಲ್ಲಿಯ ಆಸೆ, ಎಲ್ಲಿಯ ನಗುವು, ಬಾಳಿನ ಹೊಸ ಬೆಳಕು” ತಂದಿದೆ. ನನ್ನ ಕಪ್ ಖಾಲಿಯಾದರೂ ನಿಮ್ಮ ಕಿಲ ‌ಕಿಲ ನಗು ಈ ಕಪ್ ತುಂಬಿ ತುಳುಕುವಂತೆ ಮಾಡಿದೆ. ( ಬಿಲ್ ಬರುತ್ತದೆ – ₹ 340) ಸಿರಿ: ವಿಜಯ, ಕಾಫಿ ಕಹಿ ಇತ್ತು, ನಿಮ್ಮ ಮಾತು ಸಿಹಿ ಇತ್ತು. ಆದರೆ ಬಿಲ್ ಮಾತ್ರ “ಸತ್ತ ಮೇಲೆ ಸಂತೆ” ಎಂಬಂತೆ, ಊಹೆಗೂ ಮೀರಿದ ಕಹಿಯಾಗಿದೆ! ವಿಜಯ: ಮ್ಯಾನೇಜರ್‌, ಒಂದು ನಿಮಿಷ. ನಾವು ನಗುವಿನ ಮೂಲಕ ಕಾಫಿಯನ್ನು ಸಿಹಿಯಾಗಿ ಪರಿವರ್ತಿಸಿದ್ದೇವೆ. ಇನ್ನು ಕಾಫಿ ಕಹಿಯಲ್ಲ. ಹಾಗಾಗಿ, ನೀವು ನಮಗೆ ಕಹಿಯ ಕಾಫಿಗೆ ಹಾಕಿದ ದರವನ್ನು ಬದಲಾಯಿಸಿ, ಸಿಹಿಯಾದ ಕಾಫಿಯ ದರ ಮಾತ್ರ ಹಾಕಿ!. ಮ್ಯಾನೇಜರ್: (ನಗುತ್ತಾ) ಸಾರ್, ನಮ್ಮ ಕೆಫೆಯಲ್ಲಿ “ಕೂಸು ಹುಟ್ಟುವ ಮುನ್ನ ಕುಲಾವಿ ಹೊಲಿಯುವುದು” ಆದರೆ ತಮಾಷೆಗೆ ನಿಮ್ಮಿಬ್ಬರಿಗೆ ₹ 40 ರಿಯಾಯಿತಿ ಕೊಡುತ್ತೇನೆ. ವಿಜಯ: (ಸಿರಿ ಕಡೆ ತಿರುಗಿ) ನೋಡಿದಿರಾ? ನಿಮ್ಮ ನಗು ಬಿಲ್‌ನ ಕಹಿಯನ್ನು ಕೂಡ ಸೋಲಿಸಿತು!. (ಹಣ ಪಾವತಿಸಿ, ಕೆಫೆಯಿಂದ ಹೊರಡುತ್ತಾರೆ.) – ವಿಜಯ ಅಮೃತರಾಜ್.

“ಕಹಿ ಕಾಫಿ – ಸಿಹಿ ನಗು” ಕಿರು ಚಿತ್ರದ ಸ್ಕ್ರಿಪ್ಟ್,ವಿಜಯ್‌ ಅಮೃತರಾಜ್‌ ಅವರಿಂದ Read Post »

ಇತರೆ, ಗಾಂಧಿ ವಿಶೇಷ

ಗಾಂಧೀಜಿಯವರ “ಸತ್ಯದೊಂದಿಗೆ ನನ್ನ ಪ್ರಯೋಗಗಳ ಕಥೆ” ಆತ್ಮಚರಿತ್ರೆಯ ಶತಮಾನೋತ್ಸವ,ಡಾ.ಎಸ್.ಬಿ. ಬಸೆಟ್ಟಿ

ಪುಸ್ತಕ ಸಂಗಾತಿ ಗಾಂಧೀಜಿಯವರ “ಸತ್ಯದೊಂದಿಗೆ ನನ್ನ ಪ್ರಯೋಗಗಳ ಕಥೆ” ಆತ್ಮಚರಿತ್ರೆಯ ಶತಮಾನೋತ್ಸವ ಡಾ.ಎಸ್.ಬಿ. ಬಸೆಟ್ಟಿ “ನನ್ನ ಜೀವನವೇ ನನ್ನ ಸಂದೇಶ”-ಮಹಾತ್ಮ ಗಾಂಧೀಜಿ. ‘ಸತ್ಯದೊಂದಿಗೆ ನನ್ನ ಪ್ರಯೋಗಗಳ ಕಥೆ ಅಥವಾ ಆತ್ಮಚರಿತ್ರೆ’ ಎಂಬ ಪುಸ್ತಕವು ಮಹಾತ್ಮ ಗಾಂಧಿಯವರ ಆತ್ಮಚರಿತ್ರೆಯಾಗಿದ್ದು, ಇದು ಪ್ರಕಟಗೊಂಡು ೨೦೨೫ಕ್ಕೆ ನೂರು ವರ್ಷಗಳಾಗಿವೆ. ಇಂದು ಈ ಆತ್ಮಚರಿತ್ರೆ  ಶತಮಾನ ಪೂರ್ಣಗೊಂಡ ಸಂದರ್ಭದಲ್ಲಿ, ಅದು ಮಾನವ ಸಮಾಜದ ಅಕ್ಕಸಾಕ್ಷಾತ್ಕಾರದ ದಾರಿದೀಪವಾಗಿದೆ. ಗಾಂಧಿಯವರು ‘ನನ್ನ ಸತ್ಯದ ಪ್ರಯೋಗಗಳು’ ಎಂದು ಹೆಸರಿಸಿದ್ದ ಆತ್ಮಚರಿತ್ರೆಯನ್ನು ಇತ್ತೀಚಿನ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಮತ್ತು ಅತ್ಯಂತ ಪ್ರಭಾವಶಾಲಿ ಪುಸ್ತಕಗಳಲ್ಲಿ ಒಂದೆಂದು ಪರಿಗಣಿಸಬಹುದು. ಸ್ವಾಮಿ ಆನಂದ್ ಮತ್ತು ಗಾಂಧೀಜಿಯವರ ಇತರ ನಿಕಟ ಸಹೋದ್ಯೋಗಿಗಳ ಒತ್ತಾಯದ ಮೇರೆಗೆ ಇದನ್ನು ಬರೆಯಲಾಗಿದೆ. ಇದು ಬಾಲ್ಯದಿಂದ ೧೯೨೧ರವರೆಗಿನ ಅವರ ಜೀವನವನ್ನು ಒಳಗೊಂಡಿದೆ. ಇದನ್ನು ಸಾಪ್ತಾಹಿಕ ಕಂತುಗಳಲ್ಲಿ ಬರೆಯಲಾಯಿತು ಮತ್ತು ೧೯೨೫ ರಿಂದ ೧೯೨೯ ರವರೆಗೆ ಅವರ ‘ನವಜೀವನ’ ವಾರಪತ್ರಿಕೆಯಲ್ಲಿ ಪ್ರಕಟವಾಯಿತು. ಇದರ ಇಂಗ್ಲಿಷ್ ಅನುವಾದವು ಅವರ ಇನ್ನೊಂದು ಜರ್ನಲ್ ‘ಯಂಗ್ ಇಂಡಿಯಾ’ದಲ್ಲಿಯೂ ಕಂತುಗಳಲ್ಲಿ ಪ್ರಕಟವಾಯಿತು. ೧೯೯೮ರಲ್ಲಿ ಜಾಗತಿಕ ಆಧ್ಯಾತ್ಮಿಕ ಮತ್ತು ಧಾರ್ಮಿಕ ಅಧಿಕಾರಿಗಳ ಸಮಿತಿಯು ಈ ಪುಸ್ತಕವನ್ನು “೨೦ ನೇ ಶತಮಾನದ ೧೦೦ ಅತ್ಯುತ್ತಮ ಆಧ್ಯಾತ್ಮಿಕ ಪುಸ್ತಕಗಳಲ್ಲಿ” ಒಂದೆಂದು ಹೆಸರಿಸಿತು.ಈ ಆತ್ಮಚರಿತ್ರೆಯನ್ನು ಗಾಂಧೀಜಿಯವರ ಅಪ್ತ ಶಿಷ್ಯ ಮಹಾದೇವ ದೇಸಾಯಿ ಗುಜರಾತಿಯಿಂದ ಆಂಗ್ಲ ಭಾಷೆಗೆ ಅನುವಾದಿಸಿದರು. ಬಳಿಕ ಪ್ರಸಿದ್ದ ಸಾಹಿತಿ ಹಾಗೂ ಗಾಂಧೀವಾದಿ ಗೊರೂರು ರಾಮಸ್ವಾಮಿ ಅಯ್ಯಂಗಾರ ಅದನ್ನು ಕನ್ನಡಕ್ಕೆ ಅನುವಾದಿಸಿದರು. ಗೊರೂರು ಅವರ ಅನುವಾದ ಕೇವಲ ಭಾಷಾಂತರವಲ್ಲ, ಅದು ಗಾಂಧೀಜಿಯ ಚಿಂತನೆಯ “ಸತ್ಯ”ವನ್ನು ಕನ್ನಡಿಗರ ಮನಸ್ಸಿಗೆ ಹತ್ತಿರವಾದ ಶ್ರೇಷ್ಠ ಸೇವೆ ಎಂದು ಹೇಳಬಹುದು. ಕನ್ನಡ ಓದುಗರಿಗೆ ಹೆಮ್ಮೆಯ ಕೊಡುಗೆಯಾಗಿದೆ.ಮುನ್ನುಡಿಯಲ್ಲಿ ಗಾಂಧಿಯವರು ಹೀಗೆ ಹೇಳುತ್ತಾರೆ: “ನಿಜವಾದ ಆತ್ಮಚರಿತ್ರೆಯನ್ನು ಪ್ರಯತ್ನಿಸುವುದು ನನ್ನ ಉದ್ದೇಶವಲ್ಲ. ಸತ್ಯದೊಂದಿಗಿನ ನನ್ನ ಪ್ರಯೋಗಗಳ ಕಥೆಯನ್ನು ನಾನು ಹೇಳಲು ಬಯಸುತ್ತೇನೆ, ಮತ್ತು ನನ್ನ ಜೀವನವು ಪ್ರಯೋಗಗಳನ್ನು ಮಾತ್ರ ಒಳಗೊಂಡಿರುವುದರಿಂದ, ಕಥೆಯು ಆತ್ಮಚರಿತ್ರೆಯ ರೂಪವನ್ನು ಪಡೆಯುತ್ತದೆ ಎಂಬುದು ನಿಜ. ಆದರೆ ಅದರ ಪ್ರತಿಯೊಂದು ಪುಟವು ನನ್ನ ಪ್ರಯೋಗಗಳ ಬಗ್ಗೆ ಮಾತ್ರ ಮಾತನಾಡುತ್ತದೆಯೇ ಎಂದು ನನಗೆ ಅಭ್ಯಂತರವಿಲ್ಲ.”ಆತ್ಮಚರಿತ್ರೆಯ ಪರಿಚಯವನ್ನು ಅಧಿಕೃತವಾಗಿ ಗಾಂಧಿಯೇ ಬರೆದಿದ್ದಾರೆ, ಅದರಲ್ಲಿ ಯೆರ್ವಾಡಾ ಸೆಂಟ್ರಲ್ ಜೈಲಿನಲ್ಲಿ ತಮ್ಮ ಜೊತೆ ಕೈದಿಯಾಗಿದ್ದ ಜೈರಾಮ್‌ದಾಸ್ ದೌಲತ್ರಾಮ್ ಅವರ ಒತ್ತಾಯದ ಮೇರೆಗೆ ಅವರು ತಮ್ಮ ಆತ್ಮಚರಿತ್ರೆಯನ್ನು ಹೇಗೆ ಮತ್ತೆ ಬರೆಯಲು ಪ್ರಾರಂಭಿಸಿದ್ದಾರೆಂದು ಉಲ್ಲೇಖಿಸಿದ್ದಾರೆ. ಆತ್ಮಚರಿತ್ರೆ ಬರೆಯುವ ಬಗ್ಗೆ ಸ್ನೇಹಿತರೊಬ್ಬರು ಕೇಳಿದ ಪ್ರಶ್ನೆಯ ಬಗ್ಗೆ ಅವರು ಯೋಚಿಸುತ್ತಾರೆ, ಇದು ಪಾಶ್ಚಿಮಾತ್ಯ ಅಭ್ಯಾಸ, ಇದು “ಪೂರ್ವದಲ್ಲಿ ಯಾರೂ ಮಾಡುವುದಿಲ್ಲ” ಎಂದು ಪರಿಗಣಿಸುತ್ತಾರೆ. ಗಾಂಧಿಯವರು ತಮ್ಮ ಆಲೋಚನೆಗಳು ನಂತರದ ಜೀವನದಲ್ಲಿ ಬದಲಾಗಬಹುದು ಎಂದು ಒಪ್ಪುತ್ತಾರೆ. ಆದರೆ ಅವರ ಚರಿತ್ರೆಯ ಉದ್ದೇಶ ಜೀವನದಲ್ಲಿ ಸತ್ಯದೊಂದಿಗಿನ ಅವರ ಪ್ರಯೋಗಗಳನ್ನು ಹೇಳುವುದು ಮಾತ್ರ. ಈ ಪುಸ್ತಕದ ಮೂಲಕ ಅವರು ರಾಜಕೀಯಕ್ಕಿಂತ ಹೆಚ್ಚಾಗಿ ತಮ್ಮ ಆಧ್ಯಾತ್ಮಿಕ ಮತ್ತು ನೈತಿಕ ಪ್ರಯೋಗಗಳನ್ನು ಹೇಳಲು ಬಯಸುತ್ತಾರೆ. ಕೆಲ ಸಹಸಚರರು “ಆತ್ಮಚರಿತ್ರೆಯ ಬರೆಯುವುದು ಪಾಶ್ಚಾತ್ಯ ಪದ್ದತಿ” ಎಂದು ವಿರೋಧಿಸಿದರೂ ಗಾಂಧೀಜಿಯವರು ಅದನ್ನು ವೈಯಕ್ತಿಕ ಕೀರ್ತಿಗಾಗಿ ಅಲ್ಲಾ, ಬದಲಿಗೆ “ಸತ್ಯದೊಂದಿಗೆ ನನ್ನ ಪ್ರಯೋಗಗಳ ದಾಖಲೆಯಾಗಿರಲಿ” ಎಂದು ಸ್ಪಷ್ಟಪಡಿಸಿದರು. ನವಜೀವನ ಪತ್ರಿಕೆಯ ಮುಖಾಂತರ ಅವರು ದಕ್ಷಿಣ ಆಫ್ರಿಕಾದ ಸತ್ಯಾಗ್ರಹ ಹೋರಾಟದ ಕುರಿತು ಬರೆದ ಲೇಖನಗಳೇ ನಂತರ ಈ ಮಹತ್ವದ ಕೃತಿಗೆ ಆಧಾರವಾದವು. ೧೯೧೫ರಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಗ್ಪುರ ಅಧಿವೇಶನದ ಚರ್ಚೆಯ ನಂತರ ಪುಸ್ತಕವು ಕೊನೆಗೊಳ್ಳುತ್ತದೆ.ಗಾಂಧಿಯವರು ಜನನ ಮತ್ತು ಪೋಷಕರಿಂದ ಪ್ರಾರಂಭಿಸಿ, ಗಾಂಧಿಯವರು ಬಾಲ್ಯ, ಬಾಲ್ಯವಿವಾಹ, ಪತ್ನಿ ಮತ್ತು ಪೋಷಕರೊಂದಿಗಿನ ಸಂಬಂಧ, ಶಾಲೆಯಲ್ಲಿನ ಅನುಭವಗಳು, ಲಂಡನ್‌ಗೆ ಅವರ ಅಧ್ಯಯನ ಪ್ರವಾಸ, ಇಂಗ್ಲಿಷ್ ಸಂಭಾವಿತ ವ್ಯಕ್ತಿಯಂತೆ ಇರಲು ಮಾಡಿದ ಪ್ರಯತ್ನಗಳು, ಆಹಾರ ಪದ್ಧತಿಯಲ್ಲಿನ ಪ್ರಯೋಗಗಳು, ದಕ್ಷಿಣ ಆಫ್ರಿಕಾಕ್ಕೆ ಅವರ ಪ್ರಯಾಣ, ವರ್ಣ ಪೂರ್ವಾಗ್ರಹದ ಅನುಭವಗಳು, ಧರ್ಮದ ಅನ್ವೇಷಣೆ, ಆಫ್ರಿಕಾದಲ್ಲಿ ಸಾಮಾಜಿಕ ಕೆಲಸ, ಭಾರತಕ್ಕೆ ಮರಳುವಿಕೆ, ರಾಜಕೀಯ ಜಾಗೃತಿ ಮತ್ತು ಸಾಮಾಜಿಕ ಚಟುವಟಿಕೆಗಳಿಗಾಗಿ ಅವರ ನಿಧಾನ ಮತ್ತು ಸ್ಥಿರವಾದ ಕೆಲಸದ ನೆನಪುಗಳನ್ನು ನೀಡುತ್ತಾರೆ.ಗಾಂಧೀಜಿಯವರು ಸ್ನೇಹಿತರ ಜೊತೆಗೆ ಸೇರಿ ಸಿಗರೇಟು ಸೇದಿದ್ದು, ಸಿಗರೇಟು ಖರೀದಿಸಲು ಹಣ ಕದ್ದಿದ್ದು, ಮೇಕೆಮಾಂಸ ತಿಂದಿದ್ದು, ಮುಂತಾದ ಪ್ರಸಂಗಗಳನ್ನು ಆತ್ಮಾವಲೋಕನದ ಮಾದರಿಯಲ್ಲಿ ಕಟ್ಟಿಕೊಡುತ್ತಾರೆ. ಮೇಕೆಮಾಂಸ ತಿಂದ ಪ್ರಸಂಗ ಮತ್ತು ಆನಂತರದ ಬೆಳವಣಿಗೆಗಳ ನಿರೂಪಣೆ ಆಸಕ್ತಿದಾಯಕವಾಗಿದೆ. ಮಾಂಸ ಸೇವನೆಯು, ಶಕ್ತಿವಂತ ಹಾಗೂ ಧೈರ್ಯವಂತನನ್ನಾಗಿ ಮಾಡುತ್ತದೆ. ಇಂಗ್ಲಿಷರನ್ನು ಮಣಿಸಲು ಇದು ಸಹಾಯಕವಾಗುತ್ತದೆ ಎಂದು ಬಾಲಕ ಗಾಂಧಿ ಭಾವಿಸುತ್ತಾರೆ. ಬ್ರಿಟಿಷರನ್ನು ಮಣಿಸಲು ಮಾಂಸ ತಿನ್ನಬೇಕೆಂಬ ಬಯಕೆ ವಿಚಿತ್ರ ಎನ್ನಿಸಿದರೂ, ಬ್ರಿಟಿಷರ ವಿರುದ್ಧ ಬಾಲ್ಯದಲ್ಲೇ ಮೂಡಿದ್ದ ಅವರ ಪ್ರತಿರೋಧವನ್ನು ಇಲ್ಲಿ ಗಮನಿಸಬಹುದು. ಆನಂತರ ಧೂಮಪಾನ, ಮಾಂಸ ಸೇವನೆಗಳನ್ನು ತೊರೆದು ತಂದೆಗೆ ತಪ್ಪೊಪ್ಪಿಗೆ ಪತ್ರ ಬರೆದು ನೇರವಾಗಿ ಕೊಟ್ಟ ಸನ್ನಿವೇಶವನ್ನು ಗಾಂಧೀಜಿ ಭಾವುಕವಾಗಿ ವಿವರಿಸಿದ್ದಾರೆ. ಹಾಗೆಂದು ಗಾಂಧೀಜಿ ಮಾಂಸಾಹಾರದ ವಿರೋಧಿಯಾಗಿರಲಿಲ್ಲ. ತಾಯಿ-ತಂದೆಗೆ ನೋವಾಗುತ್ತದೆಯೆಂದು ತಾನು ಅವರು ಬದುಕಿರುವವರೆಗೆ ಮಾಂಸಾಹಾರ ಸೇವನೆ ಮಾಡುವುದಿಲ್ಲವೆಂದೂ, ಅವರು ಗತಿಸಿದ ನಂತರ ತನಗೆ ‘ಸ್ವಾತಂತ್ರ‍್ಯ’ ಬಂದಾಗ, ಬಹಿರಂಗವಾಗಿಯೇ ತಿನ್ನುವುದಾಗಿಯೂ ಬರೆದುಕೊಂಡಿದ್ದಾರೆ. ತಾಯಿ, ತಂದೆ ಹಾಗೂ ಹಿರಿಯರ ಬಗ್ಗೆ ಇದ್ದ ಗೌರವ ಮತ್ತು ಅವರ ಕಟ್ಟುಪಾಡುಗಳು ತಮ್ಮ `ಹವ್ಯಾಸಗಳಿಗೆ’ ಅಡ್ಡಿಯಾಗಿ ‘ಸ್ವಾತಂತ್ರ‍್ಯ’ವನ್ನು ಕಸಿಯುತ್ತಿವೆಯೆಂಬ ಅನುಭವದಿಂದ ಬಾಲಕ ಗಾಂಧೀಜಿ, ತಳಮಳಕ್ಕೆ ಒಳಗಾಗುತ್ತಾರೆ. ತೃಪ್ತಿಯೇ ಇಲ್ಲದ ಮಾನಸಿಕ ತಳಮಳಗಳನ್ನು ತಾಳಿಕೊಳ್ಳಲಾರದೆ ಸ್ನೇಹಿತರೊಂದಿಗೆ ಸೇರಿ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಬರುತ್ತಾರೆ. ದತ್ತೂರಿ ಗಿಡದ ಬೀಜಗಳನ್ನು ತಿಂದರೆ ಸಾವು ಸಂಭವಿಸುತ್ತದೆಯೆಂದು ತಿಳಿದಿದ್ದ ಇವರು ಆ ಗಿಡಕ್ಕಾಗಿ ಹುಡುಕಿ, ಪತ್ತೆ ಮಾಡಿ, ಒಂದೆರಡು ಬೀಜ ತಿಂದು, ತಕ್ಷಣವೇ ಆತ್ಮಹತ್ಯೆಯ ನಿರ್ಧಾರದಿಂದ ಹಿಂದೆ ಸರಿಯುತ್ತಾರೆ. ‘ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಆಲೋಚನೆಯಷ್ಟು ಅದನ್ನು ಸಾಧಿಸುವುದು ಸುಲಭವಲ್ಲ ಎಂದು ನಾನು ಮನಗಂಡೆ’ ಎಂದು ಬರೆಯುತ್ತಾರೆ.ಗಾಂಧಿ ಆತ್ಮಚರಿತ್ರೆಯ ಒಂದು ಮುಖ್ಯ ಘಟನೆಯೆಂದರೆ ಅವರನ್ನು ಜಾತಿಭ್ರಷ್ಟರನ್ನಾಗಿ ಮಾಡಿದ್ದು. ವಿದ್ಯಾಭ್ಯಾಸಕ್ಕಾಗಿ ಲಂಡನ್‌ಗೆ ಹೊರಟಾಗ ಜಾತಿ ಮುಖಂಡರು ‘ಸಮುದ್ರಯಾನವು ತಮ್ಮ ಜಾತಿಯಲ್ಲಿ ನಿಷಿದ್ಧ’ವೆಂದು ವಿರೋಧಿಸುತ್ತಾರೆ. ಸಮುದ್ರಯಾನ ಮಾಡಿದರೆ ಬಂಧುಬಳಗದವರು ಗಾಂಧಿ ಜೊತೆಗೆ ಒಡನಾಡುವಹಾಗಿಲ್ಲ, ನೀರನ್ನು ಕೂಡ ಕೊಡುವಂತಿಲ್ಲ. ಆದರೆ ಗಾಂಧೀಜಿ ಬಗ್ಗಲಿಲ್ಲ. ‘ಜಾತಿ ಭ್ರಷ್ಟನನ್ನಾಗಿಸಿ; ನಾನು ಹೆದರುವುದಿಲ್ಲ’ ಎಂದರು. ಜಾತಿಯಿಂದ ಹೊರಹಾಕಲ್ಪಟ್ಟರು; ಜಾತಿಯಿಲ್ಲದವರಾದರು. ಇಂತಹ ಅನೇಕ ಪ್ರಸಂಗಗಳು ಗಾಂಧಿ ಆತ್ಮಚರಿತ್ರೆಯಲ್ಲಿ ಹಾಸುಹೊಕ್ಕಾಗಿವೆ. ವೈರುಧ್ಯಗಳೂ ಇವೆ. ಬ್ರಹ್ಮಚರ್ಯದ ಪ್ರಯೋಗ, ಅಸ್ಪೃಶ್ಯ ಮೂಲದ ಕ್ರಿಶ್ಚಿಯನ್ ಉದ್ಯೋಗಿಯ ಕಕ್ಕಸ್ಸಿನ ಕೊಡವನ್ನು ಶುದ್ಧ ಮಾಡದೆ ಇದ್ದ ಕಸ್ತೂರ್ ಬಾ ಅವರ ಬಗ್ಗೆ ನಡೆದುಕೊಂಡ ಗಂಡಾಳಿಕೆಯ ದರ್ಪ, ಆನಂತರದ ಪಶ್ಚಾತ್ತಾಪ- ಇಂತಹ ಅನೇಕ ಆತ್ಮಾವಲೋಕನ ಮತ್ತು ಮಂಥನಗಳಿಂದ ಗಾಂಧಿ ಆತ್ಮಚರಿತ್ರೆಯ ವೈರುಧ್ಯಗಳನ್ನು ಮೀರಿದ ಮಾಹಿತಿ ಕೇಂದ್ರವೂ ಆಗಿದೆ. ಗಾಂಧೀಜಿಯವರು ರೈಲಿನ ಮೂರನೇ ದರ್ಜೆ ಬೋಗಿಯಲ್ಲಿ ಪ್ರಯಾಣಿಸಿ ಭಾರತವನ್ನು ‘ಕಂಡುಕೊಂಡದ್ದು’ ಅವರ ಬದುಕಿನ ಒಂದು ಮುಖ್ಯಘಟ್ಟ; ತನ್ನ ‘ವರ್ಗ’ವು ಅನುಭವಿಸುತ್ತಿರುವ ವಿಶೇಷ ಸವಲತ್ತುಗಳ ಬಗ್ಗೆ ಆಗ ಮೂಡಿದ್ದು ಪಾಪಪ್ರಜ್ಞೆ. ಹೀಗಾಗಿ ಈ ಕೃತಿ ಗಾಂಧೀಜಿಯ ಅಂತರಂಗಕ್ಕೆ ಹಿಡಿದಂತಹ ಕನ್ನಡಿ ಸತ್ಯವನ್ನು ಹುಡುಕುವ ಮನುಷ್ಯನ ಅಂತರ್ಯಾನದ ದಾಖಲೆಯಾಗಿದೆ.೧೯೨೦ರ ದಶಕದ ಆರಂಭದಲ್ಲಿ ಗಾಂಧಿಯವರು ಹಲವಾರು ನಾಗರಿಕ ಅಸಹಕಾರ ಅಭಿಯಾನಗಳನ್ನು ನಡೆಸಿದರು. ಶಾಂತಿಯುತವಾಗಿರಬೇಕೆಂಬ ಅವರ ಉದ್ದೇಶದ ಹೊರತಾಗಿಯೂ, ಹಲವಾರು ಸಂದರ್ಭಗಳಲ್ಲಿ ಹಿಂಸಾಚಾರದ ಘಟನೆಗಳು ಭುಗಿಲೆದ್ದವು. ಗಾಂಧಿಯವರು ೧೯೨೧ರ ಹಿಂದೆಯೇ ತಮ್ಮ ಆತ್ಮಚರಿತ್ರೆಯನ್ನು ಬರೆಯಲು ಪ್ರಾರಂಭಿಸಿದ್ದರು ಆದರೆ ಅವರ ರಾಜಕೀಯ ಕಾರ್ಯಗಳಿಂದಾಗಿ ಆ ಕೆಲಸವನ್ನು ಪಕ್ಕಕ್ಕೆ ಇಡಬೇಕಾಯಿತು ಎಂದು ನೆನಪಿಸಿಕೊಂಡರು. ಅವರ ಹಿನ್ನೆಲೆ ಮತ್ತು ಜೀವನದ ಬಗ್ಗೆ ಏನಾದರೂ ಹೇಳಬೇಕೆಂಬ ಬಯಕೆಯನ್ನು ಸಹೋದ್ಯೋಗಿಗಳು ವ್ಯಕ್ತಪಡಿಸಿದ ನಂತರ ಅವರು ಆ ಕೆಲಸವನ್ನು ವಹಿಸಿಕೊಂಡರು ಎಂದು ಅವರು ತಿಳಿಸುತ್ತಾರೆ. ವಸಾಹತುಶಾಹಿ ಅಧಿಕಾರಿಗಳು ೧೯೨೨ರಲ್ಲಿ ಅವರ ಮೇಲೆ ಪ್ರಚೋದನೆ ಮತ್ತು ನಿರ್ದಿಷ್ಟವಾಗಿ ಸರ್ಕಾರದ ವಿರುದ್ಧ ದ್ವೇಷವನ್ನು ಹುಟ್ಟುಹಾಕಿದ ಆರೋಪ ಹೊರಿಸಿದರು ಮತ್ತು ಇದರ ಪರಿಣಾಮವಾಗಿ ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಅವರು ಕೇವಲ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿದರು, ಅನಾರೋಗ್ಯದ ಕಾರಣದಿಂದ ಬೇಗನೆ ಬಿಡುಗಡೆಯಾದರು.೧೯೨೫ರವರೆಗಿನ ಗಾಂಧೀಜಿಯವರ ಆತ್ಮಚರಿತ್ರೆ ಕೂಡ ಅವರ ಬೆಳವಣಿಗೆ ಮತ್ತು ಬದಲಾವಣೆಯ ಚರಿತೆಯಾಗಿದೆ. ತಾಯಿ, ತಂದೆಯವರ ಬಗ್ಗೆ ಅಪಾರ ಭಕ್ತಿ ಹೊಂದಿದ್ದ ಗಾಂಧೀಜಿ ತಮ್ಮ ದೌರ್ಬಲ್ಯಗಳನ್ನು ತೆರೆದಿಡುತ್ತಲೇ ಆನಂತರ ಆದ ಬದಲಾವಣೆಗಳನ್ನು ಉಲ್ಲೇಖಿಸುತ್ತಾರೆ. ತಮ್ಮ ಪ್ರತಿಯೊಂದು ಪ್ರಮುಖ ಪ್ರಸಂಗವನ್ನು ‘ಪ್ರಯೋಗ’ ಎಂದೇ ಕರೆಯುತ್ತಾರೆ. ಈ ಪ್ರಯೋಗಗಳ ಆಂತರ್ಯದಲ್ಲಿ ಆಧ್ಯಾತ್ಮಿಕ, ಧಾರ್ಮಿಕ ಭಾವನೆಯಿದೆಯೆಂದು ಸ್ಪಷ್ಟಪಡಿಸುತ್ತಾರೆ. ‘ನಾನು ಕಟ್ಟಿಕೊಡುತ್ತಿರುವ ಕಥನಗಳು  ಆಧ್ಯಾತ್ಮಿಕವಾದವು ಅಥವಾ ಖಚಿತವಾಗಿ ನೈತಿಕವಾದವು. ಧರ್ಮದ ಮೂಲಸಾರವೇ ನೈತಿಕತೆ’ ಎಂದು ಹೇಳಿದ್ದಾರೆ.ಈ ಆತ್ಮಚರಿತ್ರೆಯನ್ನು ೨೫ ನವೆಂಬರ್, ೧೯೨೫ ರಿಂದ ೩ ಫೆಬ್ರವರಿ, ೧೯೨೯ ರವರೆಗೆ ೧೬೬ ಕಂತುಗಳಲ್ಲಿ ಬರೆಯಲಾಯಿತು. ಆರಂಭದಲ್ಲಿ ಅವರು ಪುಸ್ತಕ ಸ್ವರೂಪವನ್ನು ಅಳವಡಿಸಿಕೊಳ್ಳಲು ನಿರಾಕರಿಸಿದರು, ಆದರೆ ನಂತರ ಅದನ್ನು ವಾರಕ್ಕೊಮ್ಮೆ ಪ್ರಕಟವಾಗುವ ಪ್ರತ್ಯೇಕ ಅಧ್ಯಾಯಗಳೊಂದಿಗೆ ಧಾರಾವಾಹಿ ರೂಪದಲ್ಲಿ ಬರೆಯಲು ಒಪ್ಪಿಕೊಂಡರು. ಇದು ನವಜೀವನದಲ್ಲಿ ಕಾಣಿಸಿಕೊಂಡಿತು. ಅನುಗುಣವಾದ ಇಂಗ್ಲಿಷ್ ಅನುವಾದಗಳನ್ನು ಯಂಗ್ ಇಂಡಿಯಾದಲ್ಲಿ ಮುದ್ರಿಸಲಾಯಿತು ಮತ್ತು ದಕ್ಷಿಣ ಆಫ್ರಿಕಾದಲ್ಲಿ ಇಂಡಿಯನ್ ಒಪೀನಿಯನ್ ಮತ್ತು ಅಮೇರಿಕನ್ ಜರ್ನಲ್ ಯೂನಿಟಿಯಲ್ಲಿ ಮರುಮುದ್ರಣ ಮಾಡಲಾಯಿತು. ಹಿಂದಿ ಅನುವಾದವನ್ನು ನವಜೀವನದ ಹಿಂದಿ ಆವೃತ್ತಿಯಲ್ಲಿ ಬಹುತೇಕ ಏಕಕಾಲದಲ್ಲಿ ಪ್ರಕಟಿಸಲಾಯಿತು. ಪುಸ್ತಕದ ಮೂಲ ಇಂಗ್ಲೀಷ್ ಆವೃತ್ತಿಯು ಎರಡು ಸಂಪುಟಗಳನ್ನು ಒಳಗೊಂಡಿತ್ತು, ಅದರಲ್ಲಿ ಮೊದಲನೆಯದು ೧-೩ ಭಾಗಗಳನ್ನು ಒಳಗೊಂಡಿತ್ತು, ಆದರೆ ಎರಡನೆಯದು ೪-೫ ಭಾಗಗಳನ್ನು  ಒಳಗೊಂಡಿತ್ತು. ಮೂಲ ಗುಜರಾತಿ ಆವೃತ್ತಿಯನ್ನು ಸತ್ಯ ನಾ ಪ್ರಯೋಗೋ (ಲಿಟ್. ಎಕ್ಸ್ಪರಿಮೆಂಟ್ಸ್ ವಿತ್ ಟ್ರುತ್) ಎಂದು ಪ್ರಕಟಿಸಲಾಯಿತು, ಇದು ಆತ್ಮಕಥಾ (ಲಿಟ್. ದಿ ಸ್ಟೋರಿ ಆಫ್ ಎ ಸೋಲ್) ಎಂಬ ಉಪಶೀರ್ಷಿಕೆಯನ್ನು ಹೊಂದಿತ್ತು. ಇಂಗ್ಲಿಷ್ ಆವೃತ್ತಿಯಾದ ಆನ್ ಆಟೋಬಯಾಗ್ರಫಿ, ಎಕ್ಸ್ಪರಿಮೆಂಟ್ಸ್ ವಿತ್ ಟ್ರುತ್ ಎಂಬ ಉಪಶೀರ್ಷಿಕೆಯನ್ನು ಹೊಂದಿತ್ತು.ಗಾಂಧಿ ಆತ್ಮಚರಿತ್ರೆ ಅವಧಿ ೫೬ ವರ್ಷಗಳು ಮಾತ್ರ. ಗಾಂಧೀಜಿ ಹುಟ್ಟಿದ್ದು ೧೮೬೯ರ ಅಕ್ಟೋಬರ್ ೨ರಂದು. ಆತ್ಮಚರಿತ್ರೆ ಹೊರಬಂದದ್ದು ೧೯೨೫ರ ನವೆಂಬರ್ ತಿಂಗಳಲ್ಲಿ. ಆನಂತರ ೨೩ ವರ್ಷಗಳ ಕಾಲ ಗಾಂಧೀಜಿ ಬದುಕಿದ್ದರು. ಈ ೨೩ ವರ್ಷ ಗಾಂಧೀಜಿ ಬದುಕಿನ ಅತ್ಯಮೂಲ್ಯ ಆಕರಗಳೆಂದರೆ ತಪ್ಪಾಗಲಾರದು. ಯಾಕೆಂದರೆ, ಗಾಂಧೀಜಿಯವರು ಜಾತಿ, ವರ್ಣವೇ ಮುಂತಾದ ಸಾಮಾಜಿಕ ಸಂರಚನೆಗಳನ್ನು ಕುರಿತು ಮೊದಲು ಪ್ರತಿಪಾದಿಸಿದ್ದ ಸಾಂಪ್ರದಾಯಿಕ ಜಡ ಚಿಂತನೆಗಳಿಗೆ, ಚಲನಶೀಲ ಪ್ರಗತಿಪರ ಆಯಾಮದೊರಕಿದ್ದು, ಇದೇ ಅವಧಿಯಲ್ಲಿ. ಆತ್ಮಚರಿತ್ರೆ ಫೆಬ್ರವರಿ ೧೯೨೯ರಲ್ಲಿ ಪೂರ್ಣಗೊಂಡಿತು.ದಕ್ಷಿಣ ಆಫ್ರೀಕಾದಿಂದ ಭಾರತಕ್ಕೆ ಮರಳಿದನಂತರ, ಗಾಂಧೀಜಿ ಸ್ವಾತಂತ್ರ‍್ಯವನ್ನು ಮತ್ತು ಸತ್ಯದ ಶಕ್ತಿಯಿಂದ ಸಾಧಿಸಬೇಕೆಂಬ ದ್ರಢ ಸಂಕಲ್ಪ ಕೈಕೊಂಡರು. ತಮ್ಮ ಸಹಚರರೊಂದಿಗೆ ಶಾಂತಿ, ನೈತಿಕ ಜೀವನವನ್ನು ನಡೆಸಲು ಗುಜರಾತಿನ ಅಹಮದಾಬಾದನ ಕರ‍್ಚರಬ್ ಪ್ರದೇಶದಲ್ಲಿ ಮೊದಲ ಆಶ್ರಮವನ್ನು ಸ್ಥಾಪಿಸಿದರು. ನಂತರ ಆಶ್ರಮವನ್ನು ಸಾಬರಮತಿ ತೀರಕ್ಕೆ ಸ್ತಳಾಂತರಿಸಿ  ಸ್ವಾವಲಂಬನೆ ಮತ್ತು ಶುದ್ಧ ಜೀವನದ ತತ್ವಗಳನ್ನು ಕಾಯಕದ ಮೂಲಕ ಅನುಷ್ಟಾನಗೊಳಿಸಿದರು. ಸಾಬರಮತಿ ಆಶ್ರಮವು ಗಾಂಧೀಜಿಯವರ ಚಿಂತನೆÀಗಳ ಜೀವಂತ ಕರ್ಮಭೂಮಿಯಾಗಿ, ಭಾರತದ ನೈತಿಕ ಪುನರುತ್ಥಾನದ ಕೇಂದ್ರವಾಗಿ ರೂಪುಗೊಂಡಿತು. “ಸತ್ಯದೊಂದಿಗೆ ನನ್ನ ಪ್ರಯೋಗಗಳು” ೧೮೬೯ ರಿಂದ ೧೯೨೫ ರವರಗೆ ಅಂದರೆ ಗಾಂಧೀಜಿ ೫೬ ವರ್ಷಗಳ ಜೀವನಯಾನದ ದಾಖಲೆ ಆಗಿದೆ. ಈ ಅವಧಿಯಲ್ಲಿ ಅವರು ಸತ್ಯ, ಅಹಿಂಸೆ, ಸ್ವಾಲಂಭನೆ ಮತ್ತು ಮಾನವತೆಯ ಮೌಲ್ಯಗಳ ಮೇಲೆ ಮಾಡಿದ ಪ್ರಯೋಗಗಳೆಲ್ಲ ಈ

ಗಾಂಧೀಜಿಯವರ “ಸತ್ಯದೊಂದಿಗೆ ನನ್ನ ಪ್ರಯೋಗಗಳ ಕಥೆ” ಆತ್ಮಚರಿತ್ರೆಯ ಶತಮಾನೋತ್ಸವ,ಡಾ.ಎಸ್.ಬಿ. ಬಸೆಟ್ಟಿ Read Post »

ಇತರೆ, ಮಕ್ಕಳ ವಿಭಾಗ

ತುಂ ತುಂ ಚಬೂರ್(ಮಕ್ಕಳ ಕಥೆ ) ಕಂಚುಗಾರನಹಳ್ಳಿ ಸತೀಶ್

ಮಕ್ಕಳ ಸಂಗಾತಿ ಕಂಚುಗಾರನಹಳ್ಳಿ ಸತೀಶ್ ತುಂ ತುಂ ಚಬೂರ್(ಮಕ್ಕಳ ಕಥೆ ) ಭೀಮನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ರಾಮಪ್ಪ ಎಂಬ ರೈತ ವಾಸವಾಗಿದ್ದನು. ಅವನಿಗೆ ಧನಪಾಲ ಮತ್ತು ಲೋಕಪಾಲನೆಂಬ ಇಬ್ಬರು ಗಂಡು ಮಕ್ಕಳಿದ್ದರು. ಧನಪಾಲ ವಿದ್ಯಾವಂತ ಹಾಗೂ ಬುದ್ಧಿವಂತನಾಗಿದ್ದ. ಆದರೆ ಲೋಕಪಾಲ ವಿದ್ಯೆ ತಲೆಗೆ ಹತ್ತದೆ, ಇತ್ತ ವಿದ್ಯಾವಂತನೂ ಆಗದೆ ಅತ್ತ ಬುದ್ಧಿವಂತನೂ ಆಗದೆ ಸೋಮಾರಿತನ ಮೈಗೂಡಿಸಿಕೊಂಡಿದ್ದ. ಆದರ್ಶ ರೈತನಾಗಿದ್ದ ರಾಮಪ್ಪ ತನ್ನ ಇಳಿವಯಸ್ಸಿನಲ್ಲಿ ವ್ಯವಸಾಯ ಮಾಡಲಾಗದೆ, ತನ್ನ ಇಬ್ಬರು ಮಕ್ಕಳಿಗೆ ಅಂದದ ಹೆಣ್ಣನ್ನು ಹುಡುಕಿ ಮದುವೆ ಮಾಡಿದ, ಇದ್ದ ಹತ್ತು ಎಕರೆ ಜಮೀನನ್ನು ಮಕ್ಕಳಿಗೆ ಸಮನಾಗಿ ಹಂಚಿ, ಶ್ರಮವಹಿಸಿ ದುಡಿದು ಬದುಕಿ ಎಂದು ಹೇಳಿ ಕೆಲವೇ ದಿನಗಳಲ್ಲಿ ಮರಣವನ್ನು ಹೊಂದಿದ.ವಿದ್ಯಾವಂತ, ಬುದ್ಧಿವಂತನಾದ ಧನಪಾಲ ತಂದೆ ನೀಡಿದ ಐದು ಎಕರೆ ಜಮೀನಿನಲ್ಲಿ ತಾನು ಕಲಿತ ಅಲ್ಪ ಸ್ವಲ್ಪ ವಿದ್ಯೆಯಿಂದ ಹೊಸ ಹೊಸ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡ. ಆಧುನಿಕ ಕೃಷಿ ಉಪಕರಣಗಳನ್ನು ಬಳಸಿ, ಹೊಸ ಬಗೆಯ ಬೀಜ, ಗೊಬ್ಬರಗಳನ್ನು ಬಳಸಿ, ಬೆಳೆ ಬೆಳೆಯಲು ಪ್ರಾರಂಭಿಸಿದ. ಇದರ ಪರಿಣಾಮ ಸಹಜವಾಗಿ ಹೆಚ್ಚು ಇಳುವರಿ ಪಡೆದು ಉತ್ತಮ ಲಾಭ ಗಳಿಸಿದ. ಬಂದ ಲಾಭವನ್ನು ದುಂದು ವೆಚ್ಚ ಮಾಡದೆ ಕೂಡಿಡುತ್ತಾ ಹೋದ. ಕೂಡಿಟ್ಟ ಹಣದಲ್ಲಿ ಪ್ರತಿವರ್ಷ ಒಂದೊಂದು ಎಕರೆ ಜಮೀನು ಖರೀದಿಸುತ್ತಾ 5 ರಿಂದ 10 ಎಕರೆ, 10 ರಿಂದ 20 ಎಕರೆ ಹೀಗೆ ಖರೀದಿಸುತ್ತಾ ಧನಪಾಲ ಭಾರೀ ಶ್ರೀಮಂತನಾದ. ಆದರೆ ಹುಟ್ಟಿನಿಂದಲೇ ಸೋಮಾರಿಯಾಗಿದ್ದ ಲೋಕಪಾಲ, ತಂದೆ ಕೊಟ್ಟಿದ್ದ 5 ಎಕರೆ ಜಮೀನಿನಲ್ಲಿ ಶ್ರಮಪಟ್ಟು ದುಡಿಯದೇ ದುಂದು ವೆಚ್ಚ ಮಾಡುತ್ತಾ ಪ್ರತಿವರ್ಷ ಒಂದೊಂದೇ ಎಕರೆ ಜಮೀನು ಮಾರಿ ಜೀವನ ಸಾಗಿಸುತ್ತಾ ಬಂದ. ಇದರ ಪರಿಣಾಮ ಕೆಲವೇ ವರ್ಷಗಳಲ್ಲಿ ಇದ್ದ 5 ಎಕರೆ ಜಮೀನನ್ನು ಕಳೆದುಕೊಂಡು ತುತ್ತು ಕೂಳಿಗೂ ಸಂಚಕಾರ ತಂದುಕೊಂಡ. ಅಣ್ಣ ಧನಪಾಲನ ಶ್ರೀಮಂತಿಕೆ, ವೈಭವದ ಜೀವನ ನೋಡಿ ಲೋಕಪಾಲ ಮತ್ತು ಅವನ ಹೆಂಡತಿಗೆ ಸಹಿಸಲಾಗದಷ್ಟು ಅಸೂಯೆ ಮೂಡತೊಡಗಿತು. ಆದರೆ ಅಣ್ಣ ಧನಪಾಲ ಶ್ರಮಪಟ್ಟು ಬೆವರು ಸುರಿಸಿ ದುಡಿಯುತ್ತಾ ಹೊಸ ಮನೆ, ಕಾರು, ಬೇಕಾದ ಎಲ್ಲಾ ಸೌಲಭ್ಯಗಳನ್ನು ಮಾಡಿಕೊಂಡ. ಬುದ್ಧಿವಂತನಾಗಿದ್ದ ಧನಪಾಲ ಬಂದ ಲಾಭವನ್ನೆಲ್ಲ ಕೂಡಿಡಲು ಆಧುನಿಕ ಶೈಲಿಯ ತಿಜೋರಿ ತರಲು ನಿರ್ಧರಿಸಿದ. ಕಳ್ಳ ಕಾಕರ ಭಯದಿಂದ ವಿಶೇಷ ರೀತಿಯ ಸೀಕ್ರೆಟ್ ಸೌಂಡ್ ಲಾಕರ್ ಇರುವ ತಿಜೋರಿ ತಂದು ತುಂ ತುಂ ಚಬೂರ್ ಎನ್ನುವ ಸೌಂಡ್ ಅನ್ನು ಸೀಕ್ರೆಟ್ ಲಾಕ್ ಗೆ ಅಳವಡಿಸಿದ. ಬಾಗಿಲು ತೆರೆಯುವ ಮುನ್ನ ತುಂ ತುಂ ಚಬೂರ್ ಎಂದರೆ ಬಾಗಿಲು ತೆರೆಯುತ್ತಿತ್ತು. ಬಾಗಿಲು ಮುಚ್ಚಲು ಪುನಃ ತುಂ ತುಂ ಚಬೂರ್ ಎಂದರೆ ಬಾಗಿಲು ಮುಚ್ಚುತ್ತಿತ್ತು.ತಿಜೋರಿ ತಂದ ಧನಪಾಲ ಸಂಪಾದಿಸಿದ ಹಣವನ್ನೆಲ್ಲ ಇಟ್ಟು ತುಂ ತುಂ ಚಬೂರ್ ಎಂದು ಪರೀಕ್ಷಿಸಿದ. ಆಗ ತಿಜೋರಿಯ ಬಾಗಿಲುಗಳು ಮುಚ್ಚಿದವು. ಪುನಃ ತುಂ ತುಂ ಚಬೂರ್ ಎಂದಾಗ ಬಾಗಿಲುಗಳು ತೆರೆದವು. ಮತ್ತೊಮ್ಮೆ ತುಂ ತುಂ ಚಬೂರ್ ಎಂದ ಬಾಗಿಲು ಮುಚ್ಚಿದವು ಆಗ ನೆಮ್ಮದಿಯ ನಿದ್ರೆಗೆ ಜಾರಿದನು.ಕೆಲವೇ ದಿನಗಳಲ್ಲಿ ತಿಜೋರಿಯ ವಿಷಯ ಲೋಕಪಾಲನ ಹೆಂಡತಿಗೆ ತಲುಪಿತು. ಅಸೂಯೆಯಿಂದ ಹೊಂಚು ಹಾಕುತ್ತಿದ್ದ ಅವಳು ಗಂಡನ ತಲೆಯಲ್ಲಿ ವಿಷ ಬೀಜ ಬಿತ್ತಿ, ಹೇಗಾದರೂ ಮಾಡಿ ತಿಜೋರಿಯಲ್ಲಿರುವ ಹಣವನ್ನು ಕಳ್ಳತನ ಮಾಡುವಂತೆ ದಿನೇ ದಿನೇ ಗಂಡನನ್ನು ಪೀಡಿಸುತ್ತಿದ್ದಳು. ಹೆಂಡತಿಯ ಮಾತು ಕೇಳಿ ಅಣ್ಣನ ಮನೆಯಲ್ಲಿ ಕಳ್ಳತನ ಮಾಡಲು ನಿರ್ಧರಿಸಿದನು. ಎಳ್ಳಷ್ಟು ಕೆಟ್ಟದ್ದನ್ನು ಬಯಸದ ಧನಪಾಲನ ಮನೆಗೆ ಕುಂಟು ನೆಪವೊಡ್ಡಿ ಮನೆಯ ಕಷ್ಟವನ್ನೆಲ್ಲ ಹೇಳಿ ಸಾಲ ಕೇಳಿದ. ಏನು ಅರಿಯದ ಧನಪಾಲ ತಮ್ಮನ ಹೀನಾಯ ಸ್ಥಿತಿಗೆ ಮರುಗಿ ರಕ್ತ ಹಂಚಿಕೊಂಡು ಹುಟ್ಟಿದ ಒಡಹುಟ್ಟಿದ ತಮ್ಮನನ್ನು ಮಂಚದ ಮೇಲೆ ಕೂರಿಸಿದ. ತಿಜೋರಿ ಬಳಿ ಹೋಗಿ ತುಂ ತುಂ ಚಬೂರ್ ಎಂದು ಹೇಳಿದ. ತುಂ ತುಂ ಚಬೂರ್ ಎಂದ ತಕ್ಷಣ ತಿಜೋರಿಯ ಬಾಗಿಲುಗಳು ತೆರೆದವು. ದೂರದಿಂದಲೇ ಇಣುಕಿ ನೋಡಿದ ಲೋಕಪಾಲನಿಗೆ ತಿಜೋರಿಯಲ್ಲಿನ ಹಣ, ಬೆಳ್ಳಿ, ಬಂಗಾರ ನೋಡಿ ಮತ್ತಷ್ಟು ಆಸೆ ಹೆಚ್ಚಾಯಿತು. ಬಿಟ್ಟ ಕಣ್ಣು ಬಿಟ್ಟಂತೆ ನೋಡತೊಡಗಿದ. ಅಣ್ಣ ಹತ್ತು ಸಾವಿರದ ಒಂದು ಕಂತೆಯನ್ನು ತೆಗೆದುಕೊಂಡು ತುಂ ತುಂ ಚಬೂರ್ ಎಂದ, ಪುನಃ ಬಾಗಿಲು ಮುಚ್ಚಿದವು. ಇದನ್ನು ಗಮನಿಸುತ್ತಿದ್ದ ಲೋಕಪಾಲ ಮನಸ್ಸಿನಲ್ಲಿಯೇ ಎರಡು ಮೂರು ಸಲ ತುಂ ತುಂ ಚಬೂರ್ ಎಂದು ಹೇಳಿಕೊಂಡು ಅಣ್ಣ ಕೊಟ್ಟ ಹತ್ತು ಸಾವಿರ ರೂಪಾಯಿ ಕಂತೆಯನ್ನು ತೆಗೆದುಕೊಂಡು ಮನೆಗೆ ಬಂದ. ಬಕಪಕ್ಷಿಯಂತೆ ಕಾಯುತ್ತಿದ್ದ ಹೆಂಡತಿಗೆ ಹಣದ ಕಂತೆಯನ್ನು ಕೊಟ್ಟು ನಡೆದ ಘಟನೆಯನ್ನು ವಿವರಿಸಿದ. ನಾಳೆ ಮಧ್ಯಾಹ್ನ ಅಣ್ಣ-ಅತ್ತಿಗೆ ಹೊಲಕ್ಕೆ ಹೋದಾಗ ತಿಜೋರಿ ಕಳ್ಳತನ ಮಾಡುವುದಾಗಿ ತಿಳಿಸಿದ. ಅದೇ ಗುಂಗಿನಲ್ಲಿ ಗಂಡ-ಹೆಂಡತಿ ಪಿಸುಗುಡುತ್ತಾ ನಿದ್ರೆಗೆ ಜಾರಿದರು. ಬೆಳಗಾಗುತ್ತಲೇ ಅಣ್ಣ-ಅತ್ತಿಗೆ ಎಂದಿನಂತೆ ಕೃಷಿ ಕೆಲಸದಲ್ಲಿ ತೊಡಗಲು ಹೊರಟರು. ಹೊಲಕ್ಕೆ ಹೋಗುವುದನ್ನೇ ಕಾಯುತ್ತಿದ್ದ ಲೋಕಪಾಲ, ಅಕ್ಕಪಕ್ಕದ ಮನೆಯವರು ಯಾರು ಇಲ್ಲದ ಸಮಯ ನೋಡಿ ಮನೆಯ ಬೀಗ ಮುರಿದು ಕಳ್ಳ ಬೆಕ್ಕಿನಂತೆ ನಿಧಾನವಾಗಿ ಒಳಗೆ ಹೋಗಿ ತಿಜೋರಿ ಮುಂದೆ ನಿಂತು ತುಂ ತುಂ ಢಮಾರ್ ಎನ್ನುವನು. ಬಾಗಿಲು ತೆರೆಯಲೇ ಇಲ್ಲ ಮತ್ತೆ ತುಂ ತುಂ ಡಿಮೀರ್ ಎನ್ನುವನು. ಆಗಲು ತಿಜೋರಿಯ ಬಾಗಿಲು ತೆರೆಯಲೇ ಇಲ್ಲ. ಗಲಿಬಿಲಿಗೊಂಡ ಲೋಕಪಾಲ ಮತ್ತೊಮ್ಮೆ ತುಂ ತುಂ ಘಮಾರ್ ಎಂದ ಬಾಗಿಲು ತೆಗೆಯಲೇ ಇಲ್ಲ. ಅಯ್ಯೋ! ಅಣ್ಣ ಹೇಳಿದ ಸೀಕ್ರೆಟ್ ಕೋಡ್ ಮರೆತೇ ಹೋಗಿದೆ ಎಂದು ನಿರಾಸೆಯಾಗಿ ಮನೆಗೆ ಹೋದನು. ಹಣ ತರುತ್ತಾನೆ ಎಂದು ಕಾಯುತ್ತಿದ್ದ ಹೆಂಡತಿಗೆ ಪಿತ್ತ ನೆತ್ತಿಗೇರಿ ಒಂದು ಹೆಸರು ನೆನಪಿಡೋಕೆ ಆಗಲ್ವಾ? ಎಂದು ಕೆನ್ನೆಗೆ ತಿವಿಯುತ್ತಾಳೆ. ಆಗ ಅಯ್ಯೋ! ನಾನೇನು ಮಾಡಲಿ? ಅದೇನೋ ತುಂ ತುಂ ಢಮಾರ್ ಎಂದು ಅಣ್ಣ ಹೇಳಿದ್ದ. ನಾನು ಅದನ್ನೇ ಹೇಳಿದೆ ಆದರೆ ತೆರೆಯಲಿಲ್ಲ ಅಣ್ಣ ಹೇಳಿದ ಮಂತ್ರ ಮರತೇ ಹೋಯಿತು ಎಂದನು. ಕೋಪಗೊಂಡ ಹೆಂಡತಿ ಅದೆಲ್ಲ ನಂಗೆ ಗೊತ್ತಿಲ್ಲ. ನಿಮ್ಮ ಅಣ್ಣನಿಗಿಂತ ನಾವು ಶ್ರೀಮಂತರಾಗಬೇಕು ಎಂದು ಹಠ ಮಾಡುತ್ತಾಳೆ. ಹೆಂಡತಿಯ ಹಠಕ್ಕೆ ಕಟ್ಟುಬಿದ್ದು ತಮ್ಮ ಊರಲ್ಲೇ ಇದ್ದ ದೊಡ್ಡ ಚಿನ್ನದ ಅಂಗಡಿಯಲ್ಲಿ ಕಳ್ಳತನ ಮಾಡಲು ನಿರ್ಧರಿಸಿದ. ಅವತ್ತು ರಾತ್ರಿ ಒಂದು ದೊಡ್ಡ ಚೀಲದೊಂದಿಗೆ ಚಿನ್ನದ ಅಂಗಡಿಗೆ ಹೋಗಿ ಬೀಗ ಮುರಿದು ಚಿನ್ನದ ಆಭರಣಗಳನ್ನು ಚೀಲದಲ್ಲಿ ತುಂಬಿಕೊಳ್ಳುತ್ತಿರುವಾಗ ಗಡಿಬಿಡಿಯಲ್ಲಿ ಆಭರಣದ ಪೆಟ್ಟಿಗೆ ಜಾರಿ ನೆಲಕ್ಕೆ ಬಿದ್ದುಬಿಡುತ್ತದೆ. ನಿಶ್ಯಬ್ದವಾದ ರಾತ್ರಿಯಲ್ಲಿ ಆಭರಣದ ಸದ್ದಿಗೆ ಬೀದಿ ನಾಯಿಯೊಂದು ಒಂದೇ ಸಮನೆ ಬೊಗಳುತ್ತದೆ. ನಾಯಿ ಬೊಗಳುವ ಶಬ್ದಕ್ಕೆ ಅಕ್ಕಪಕ್ಕದ ಮನೆಯವರೆಲ್ಲ ಓಡಿ ಬಂದು ಆಭರಣ ಕದಿಯುತ್ತಿದ್ದ ಲೋಕಪಾಲನನ್ನು ಹಿಡಿದು ಪೋಲೀಸರಿಗೆ ಒಪ್ಪಿಸುತ್ತಾರೆ. ಬೆಳಗಾಗುತ್ತಿದ್ದಂತೆ ವಿಷಯ ತಿಳಿದ ಲೋಕಪಾಲನ ಹೆಂಡತಿ ಧನಪಾಲನ ಬಳಿ ಹೋಗಿ ಅಂಗಲಾಚಿ ಗಂಡನನ್ನು ಬಿಡಿಸುವಂತೆ ಕೇಳಿಕೊಳ್ಳುತ್ತಾಳೆ. ಮೃದು ಹೃದಯಿ ಧನಪಾಲ ತಮ್ಮನ ತಪ್ಪನ್ನು ಮನ್ನಿಸಿ ಜಾಮೀನು ಕೊಟ್ಟು ಬಿಡಿಸುತ್ತಾನೆ. ಹೆಂಡತಿ ಮಾತು ಕೇಳಿ ನಿನಗಿಂತ ಶ್ರೀಮಂತನಾಗಲು ನಿನ್ನ ಮನೆಗೂ ಕಳ್ಳತನ ಮಾಡಲು ಬಂದಿದ್ದೆ. ಆದರೆ ತಿಜೋರಿಯ ಸೀಕ್ರೆಟ್ ಕೋಡ್ ಮರೆತು ಹೋಗಿ ಬಾಗಿಲು ತೆರೆಯಲಿಲ್ಲ. ನನ್ನ ಹೆಂಡತಿ ನಾವು ನಿಮ್ಮ ಅಣ್ಣನಿಗಿಂತ ಹೆಚ್ಚು ಶ್ರೀಮಂತರಾಗಬೇಕು ಎಂದು ದುಂಬಾಲು ಬಿದ್ದಿದ್ದಳು. ಅವಳ ಒತ್ತಾಯಕ್ಕೆ ಮಣಿದು ಕೆಟ್ಟದಾರಿ ಹಿಡಿದು ಅವತ್ತೇ ರಾತ್ರಿ ನಮ್ಮೂರಿನ ಚಿನ್ನದ ಅಂಗಡಿಗೆ ಕಳ್ಳತನ ಮಾಡಲು ಬಂದೆ. ನಮ್ಮ ಅತಿಯಾಸೆಯಿಂದಾಗಿ ಜೈಲು ಸೇರುವಂತಾಯಿತು. ಪರರ ಸ್ವತ್ತು ಎಂದೂ ದಕ್ಕದು. ನನ್ನದು ತಪ್ಪಾಯಿತು ಅಣ್ಣ ಎಂದು ಅಣ್ಣ ಧನಪಾಲನ ಕಾಲಿಗೆ ಬೀಳುವನು. ಪಶ್ಚಾತ್ತಾಪಕ್ಕಿಂತ ದೊಡ್ಡ ಶಿಕ್ಷೆ ಬೇರೊಂದಿಲ್ಲ. ಬಾ ಇಬ್ಬರೂ ಸೇರಿ ಒಟ್ಟಿಗೆ ದುಡಿಯೋಣ ಎಂದ ಅಣ್ಣ ತನ್ನ ತಮ್ಮ ಲೋಕಪಾಲನನ್ನು ಕರೆದುಕೊಂಡು ಹೋಗುವನು. ಹಳೆಯ ಕಹಿ ನೆನಪುಗಳನ್ನು ಮರೆತು ಅಂದಿನಿಂದ ಇಬ್ಬರೂ ಒಟ್ಟಾಗಿ ಶ್ರಮವಹಿಸಿ ದುಡಿಯುವರು. ಸುತ್ತಮುತ್ತಲಿನ ಹಳ್ಳಿಗಳಿಗೆಲ್ಲ ಮಾದರಿ ರೈತರಾಗುವರು. ಕಂಸ( ಕಂಚುಗಾರನಹಳ್ಳಿ ಸತೀಶ್ )

ತುಂ ತುಂ ಚಬೂರ್(ಮಕ್ಕಳ ಕಥೆ ) ಕಂಚುಗಾರನಹಳ್ಳಿ ಸತೀಶ್ Read Post »

You cannot copy content of this page

Scroll to Top