ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ರಂಗಭೂಮಿ

ರಂಗ ಪ್ರಯೋಗ”ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ”-ಗೊರೂರು ಅನಂತರಾಜು, ಹಾಸನ.

ರಂಗ ಸಂಗಾತಿ ಗೊರೂರು ಅನಂತರಾಜು, ಹಾಸನ. ರಂಗ ಪ್ರಯೋಗ “ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ” ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶಿವಮೊಗ್ಗದ ರಂಗಾಯಣ ಕಲಾವಿದರು ಬೋಳುವಾರು ಮಹಮದ್ ಕುಂಞ ಅವರ ಕಾದಂಬರಿ ಆಧಾರಿತ ಸ್ವಾತಂತ್ರö್ಯದ ಓಟ ನಾಟಕವನ್ನು ಕಳೆದ ಭಾನುವಾರ ಪ್ರದರ್ಶಿಸಿ ಪ್ರೇಕ್ಷಕರ ಮನ ಸೆಳೆದರು.  ಪ್ರಸಿದ್ಧ ಕಥೆಗಾರರು, ಕಾದಂಬರಿಕಾರರು,  ನಾಟಕಕಾರರು ಆದ ಬೋಳುವಾರು ಮಹಮದ್ ಕುಂಞಯವರು ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಸಂಸ್ಕೃತಿ ಮತ್ತು ಬದುಕನ್ನು ಸೃಜನಶೀಲ ಗದ್ಯಕ್ಕೆ ಪರಿಚಯಿಸಿದವರು.  ತಮ್ಮ ಕಥೆಗಳ ಮೂಲಕ ಮುಸ್ಲಿಂ ಸಮುದಾಯದ ನಂಬಿಕೆ, ಆಚರಣೆ ಮತ್ತು ಸಾಮಾಜಿಕ ವಾಸ್ತವತೆಗಳನ್ನು ಚಿತ್ರಿಸಿದ್ದಾರೆ. ಇವರ ಸ್ವಾತಂತ್ರö್ಯದ ಓಟ ಒಂದು ಮೈಲುಗಲ್ಲು ಕಾದಂಬರಿ, ಇದಕ್ಕೆ ೨೦೧೬ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ೧೯೪೭ರಲ್ಲಿ ದೇಶ  ವಿಭಜನೆಯಿಂದ ಪ್ರಾರಂಭವಾಗುವ ಕಥಾವಸ್ತು ೬೦ ವರ್ಷ ಕಾಲ ಚಾಂದ್ ಅಲಿ ಎಂಬ ವ್ಯಕ್ತಿಕೇಂದ್ರಿತ ಕಥೆಯಾಗಿ ಆ ಕಾಲಘಟ್ಟದ ನೈಜ ಬದುಕನ್ನು ಚಿತ್ರಿಸುತ್ತದೆ. ಭಾರತ ಪಾಕಿಸ್ತಾನ ಗಡಿಯ ವಾಘಾದಲ್ಲಿ ಆರಂಭವಾಗುವ ಕಥೆ ಕೊನೆಗೆ ಅಲ್ಲಿಯೇ ಮುಕ್ತಾಯಗೊಳ್ಳುವ  ಜಾತ್ಯಾತೀತ ಪರಿಕಲ್ಪನೆಯಲ್ಲಿ ರೂಪು ತೆಳೆದಿದೆ.   ಗೋಮಾರದಹಳ್ಳಿ ಮಂಜುನಾಥ್  ನಾಟಕಕ್ಕೆ ರೂಪಾಂತರಿಸಿದ್ದು, ರಂಗಪಠ್ಯ, ವಿನ್ಯಾಸ ಮತ್ತು ನಿರ್ದೇಶನ  ನಟರಾಜ್ ಹೊನ್ನವಳ್ಳಿಯವರದು.  ಸಹ ನಿರ್ದೇಶನ ಸಲ್ಮಾ ದಂಡಿನ್.  ಈ ಹಿಂದೆ ನಟರಾಜ್ ಹೊನ್ನವಳ್ಳಿಯವರು ಇದೇ ಕಲಾಭವನದಲ್ಲಿ ಪ್ರದರ್ಶಿಸಿದ್ಧ  ಪಿ.ಲಂಕೇಶರ ಗುಣಮುಖ ನಾಟಕವನ್ನು ಅದ್ಭುತವಾಗಿ ಪ್ರದರ್ಶಿಸಿದ್ದರು. ಆಗ ನೋಡಿ ಬರೆದಿದ್ದು ನನ್ನ ರಂಗಪ್ರಯೋಗ (೨೦೧೧) ಕೃತಿಯಲ್ಲಿ ದಾಖಲಾಗಿದೆ.ಒಂದು ಸಾವಿರದ ಒಂದು ನೂರಾ ಹನ್ನೊಂದು ಪುಟಗಳ ಸುಧೀರ್ಘ ಕಾದಂಬರಿಯನ್ನು ಮೂರೂವರೆ ಗಂಟೆಯಲ್ಲಿ  ಪ್ರೇಕ್ಷಕರಿಗೆ ಇಷ್ಟವಾಗುವ ನಾಟಕವಾಗಿ ರೂಪಿಸುವಲ್ಲಿ   ನಿರ್ದೇಶಕರ ಜಾಣ್ಮೆ, ಕಲಾವಿದರ ತಲ್ಲೀನ ನಟನೆ, ರಂಗ ಸಂಗೀತ, ವಸ್ತç ವಿನ್ಯಾಸ, ರಂಗ ಪರಿಕರ,  ಬೆಳಕು ಈ ಎಲ್ಲವೂ ಒಗ್ಗೂಡಿದೆ.  ನಾಟಕದ ಪೂರ್ವಾರ್ಧ ದೇಶ ವಿಭಜನೆ, ಅದರ ಪರಿಣಾಮಗಳನ್ನು ಹೇಳಿದರೆ ಉತ್ತರಾರ್ಧ ಭಾಗವು ಮುತ್ತುಪಾಡಿಯ ಗ್ರಾಮ್ಯ ಕತೆಯನ್ನು ಮನಮುಟ್ಟವಂತೆ ಹೇಳುತ್ತದೆ. ದೇಶ ವಿಭಜನೆ ಪೂರ್ವ ಪಾಕಿಸ್ತಾನದ ಲಾಹೋರ್ ನಲ್ಲಿ ಸಿಖ್ ಮಾಲಿಕತ್ವದ ಕಬ್ಬಿಣದ ಕುಲುಮೆಯಲ್ಲಿ ಕೆಲಸ ಮಾಡುವ ಅನಾಥ ಹುಡುಗ  ಚಾಂದ್ ಆಲಿ ನಾಟಕದ ಕೇಂದ್ರ ಪಾತ್ರ. ದೇಶ ವಿಭಜನೆಗೆ ದುರಂತ ಸಾಕ್ಷಿಯಾಗಿ ಕಂಡುಬರುವ ಈ ಪಾತ್ರ  ನಾಟಕದುದ್ದಕ್ಕೂ ಪ್ರಧಾನ ಭೂಮಿಕೆಯಲ್ಲಿ  ಮೂರು ಹಂತಗಳಲ್ಲಿ  ಹದಿನೈದರ ವಯೋಮಾನದ ಹುಡುಗ, ಮದುವೆ ವಯಸ್ಸಿನ ಪ್ರಾಯಕ್ಕೆ ಬಂದ ಯುವಕ, ಇಳಿವಯಸ್ಸಿನ  ವೃದ್ಧ ಹೀಗೆ ಬರುವ ಪಾತ್ರಗಳನ್ನು ಮೂರು ಕಲಾವಿದರ ಪ್ರಸ್ತುತಿಯಲ್ಲಿ ತನ್ನ ಸುತ್ತಲಿನ ಸನ್ನಿವೇಶ ಸಮಯಕ್ಕೆ ತಕ್ಷಣಕ್ಕೆ ಉದ್ಭವಿಸುವ ವಿದ್ಯಮಾನಗಳಿಗೆ ಬಾಗಿಯಾಗುತ್ತಾ  ಕಥೆಯ ಪಾತ್ರ ಸಾಗುತ್ತದೆ. ಇಲ್ಲಿ  ಭಾವನಾತ್ಮಕ ಸಂಬAಧಗಳು  ಭಾವ್ಯಕ್ಯ ಭಾರತವನ್ನು ಎತ್ತಿ ಹಿಡಿಯುತ್ತವೆ. ನಾಟಕದ ಪೂರ್ವಾರ್ಧದ ದೇಶ ವಿಭಜನೆ ಕಾಲದ ಘಟನೆಗಳು ಭಾವಾವೇಶಗಳ ರೋಚÀಕತೆ ಇಲ್ಲದೆ ತಣ್ಣಗೆ ನಿರೂಪಿಸುತ್ತಾ ಸಾಗುತ್ತದೆ. ತನ್ನ ಕುಟುಂಬದವರಿAದ ಬೇರ್ಪಟ್ಟು ಜೀವ ಉಳಿಸಿಕೊಳ್ಳುವ ಭರದಲ್ಲಿ ಭಾರತ ಪ್ರವೇಶಿಸುವ ಸಿಖ್ ಕುಟುಂಬದ ತನ್ವೀರ್, ಮೊಹಿಂದರ್ ಬಾಭಿ ಜೊತೆಗೆ   ಚಾಂದ್ ಅಲಿ ಕೂಡ ಭಾರತ ಪ್ರವೇಶಿಸುತ್ತಾನೆ. ತಾನು ಲಾಹೋರ್‌ಗೆ ವಾಪಸ್ಸು ಹೋಗಬೇಕೆನ್ನುವ ಚಾಂದ್ ಅಲಿಯ ಆಸೆಗೆ ಅನೇಕ ಸಿಕ್ಕುಗಳು ಎದುರಾಗಿ ನಲುಗುತ್ತಾನೆ. ಬದುಕಿನ ತಿರುವಿನಲ್ಲಿ ಉತ್ತರ ಭಾರತದಿಂದ ದಕ್ಷಿಣದ ಮುತ್ತುಪ್ಪಾಡಿಗೆ ಬರುವ   ಅನೇಕ ಅನಿರೀಕ್ಷಿತ ಘಟನೆಗಳು ಜರುಗುತ್ತವೆ. ಅಚಾನಕ್ ಹೊನ್ನು, ಹೆಣ್ಣು, ಆಸ್ತಿಯ ಅದೃಷ್ಟವು ಒಲಿದು ಬರುತ್ತದೆ. ನಾಟಕದ ಅಂತ್ಯದಲ್ಲಿ ಅದೇ ವಾಘಾ ಗಡಿಯಲ್ಲಿ ವಿಭಜನೆ ಕಾಲದಲ್ಲಿ ಕಳೆದು ಹೋದವರ ಪುನರ್ ಮಿಲನದೊಂದಿಗೆ ನಾಟಕ ಸುಖಾಂತ್ಯಗೊಳ್ಳುತ್ತದೆ. ಉತ್ತರಾರ್ಧ ಮಹಾತ್ಮ ಗಾಂಧೀಜಿಯ ಕನಸಿನ ಗ್ರಾಮ ಸ್ವರಾಜ್ಯ ಗ್ರಾಮವಾಗಿ ಮುತ್ತುಪಾಡಿ ಕಾಣಿಸಿಕೊಳ್ಳುತ್ತದೆ. ಈ ನಡುವೆ ನಾಟಕದ ಮಧ್ಯೆ ನಡೆಯುವ ಗಾಂಧಿಹತ್ಯೆಗೆ ಚಾಂದ್ ಆಲಿ ಮೂಕಸಾಕ್ಷಿಯಾಗುತ್ತಾನೆ.   ನನ್ನ ದೇವರು ಸತ್ತು ಹೋದ ಎಂದು ಹೇಳುವುದು ಮಾರ್ಮಿಕವಾಗಿದೆ. ಇಲ್ಲಿ  ಗಾಂಧಿ ಪಾತ್ರವನ್ನು ರಂಗಕ್ಕೆ ತರದೆ ನಿರ್ದೇಶಕರು ಜಾಣ್ಮೆ ತೋರಿದ್ದಾರೆ. ಚರಕವನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಹೊರಡುವ ಚಂದನ್ ಹೆಸರಿನಲ್ಲಿ ದಾಖಲಾಗಿ ಭಾರತಕ್ಕೆ ಬಂದ ಚಾಂದ್ ಅಲಿ ಗಾಂಧೀಜಿಯ ಗ್ರಾಮಸ್ವರಾಜ್ಯದ ಕನಸಿನ ಕೂಸಾಗಿ ಪ್ರತಿಬಿಂಬಿಸುತ್ತಾನೆ.   ನಾಟಕದ ಉತ್ತರಾರ್ಧ  ಮುತ್ತುಪ್ಪಾಡಿ ಎಂಬ ಗ್ರಾಮದ  ಸಾಮರಸ್ಯದ ಬದುಕಿನ ಸೊಗಸಾದ ಕತೆ ಸ್ವತಂತ್ರ ಆಯಾಮದಲ್ಲಿ  ತೆರೆದುಕೊಳ್ಳುತ್ತದೆ. ಇಲ್ಲಿ ನಿರ್ದೇಶಕರು ಚಾಂದ್ ಅಲಿಯನ್ನೇ ಪ್ರಧಾನ ಎಳೆಯಾಗಿಸಿ ದೃಶ್ಯರೂಪಕದಲ್ಲಿ ಸರಾಗವಾಗಿ ನಾಟಕ ಸಾಗಿಸುವ ದಿಶೆಯಲ್ಲಿ ಬೇಕಾದ ಉಪಕಥೆಗಳನ್ನು ಆರಿಸಿಕೊಂಡಿದ್ದಾರೆ. ಹೀಗೆ ಸೇರಿದ  ಉಪಕಥೆಯಲ್ಲಿ ಬ್ಯಾರಿ ಮೂಸಜ್ಜ, ಆತನ ಹೆಂಡತಿ ಕೈಜುನ್ನಿಸಾ ಮತ್ತು ಮನೆ ಬಿಟ್ಟು ಹೋಗಿ  ಸೂಫಿ ಫಕೀರನಾಗಿರುವ  ಇವರ ಮಗ ಬದ್ರುದ್ಧೀನ್ ಪ್ರಮುಖರು. ಚಾಂದ್ ಅಲಿಯನ್ನು ಫಕೀರ ಬದ್ರುದ್ಧೀನ್ ತನ್ನದೇ ಮನೆಗೆ ಬಿಟ್ಟು ಹೋಗುವುದು ನಾಟಕೀಯ ತಿರುವು.  ಮುಂದೆ  ಮೂಸಜ್ಜ ಸತ್ತು ನಂತರದಲ್ಲಿ ಉದ್ಭವವಾಗುವ ಇಸ್ಲಾಂ ಧರ್ಮದ ನಂಬಿಕೆಗಳು. ಆಸ್ತಿಗಾಗಿ ಕಣ್ಣಾಕುವ ಊರಿನ ಪಾತ್ರಗಳು. ಸಭೆ, ತೀರ್ಮಾನ, ಮದುವೆ ಸಂಪ್ರದಾಯ ಎಲ್ಲವೂ ರಂಗದ ಮೇಲೆ ಬಂದು ಹೋಗುತ್ತವೆ. ಮಗನಿಲ್ಲದ ಮನೆಯಲ್ಲಿ ಉಳಿದುಕೊಂಡವನೇ ಆಸ್ತಿ ಒಡೆಯನಾಗಿ ಮತ್ತು ಈ ಕಾರಣಕ್ಕಾಗಿಯೇ ಮಾತೃಭೂಮಿಗೆ ವಾಪಸ್ಸು ಹೋಗಲಾಗದೆ ಅಲ್ಲಿಯೇ ಉಳಿಯಬೇಕಾಗಿ ಬರುವ ಅಲಿಯ  ಉಭಯ ಸಂಕಟಗಳು ಒಂದು ಕಡೆಯಾದರೇ, ಮಗನಂತೆ ಕಂಡ ಬದ್ರುದ್ಧೀನ್ ತಾಯಿ ಖೈಜುನ್ನಿಸಾಳ ಸಾವು, ಸಾವಿನ ಹೊತ್ತಲ್ಲೇ ಮತ್ತೆ ಮನೆಗೆ ಬಂದ ಫಕೀರ ಬದ್ರುದ್ದೀನ್ ಆಸ್ತಿಯನ್ನು ಅಲಿಗೆ ತ್ಯಾಗ ಮಾಡಿ ಉಪದೇಶ ಹೇಳಿ ಹೋಗುವುದು ಹೀಗೂ ಉಂಟೆ..! ಎನಿಸುತ್ತದೆ.  ಖೈಜುನ್ನಿಸಾ, ರಾಘಣ್ಣ, ಪಂಡಿತ, ಸುಮತಿ, ಅನಂತು, ಲತೀಫ್, ಪೋಡಿಯಪ್ಪ   ಹೀಗೆ ಬರುವ ಪಾತ್ರಗಳೆಲ್ಲಾ ಮುತ್ತುಪ್ಪಾಡಿ ಎಂಬ ಹಳ್ಳಿಯ ಸಾಮರಸ್ಯದ ಬದುಕನ್ನು ಸಾಕ್ಷೀಕರಿಸುತ್ತವೆ.  ನಾಟಕದ ಅಂತ್ಯದಲ್ಲಿ ಚಾಂದ್ ಅಲಿ ಕಡೆಗೂ  ತನ್ನಲ್ಲಿದ್ದ ಸಿಖ್ ಕುಟುಂಬದ ಒಡವೆ ಗಂಟನ್ನು ಅವರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆಯುತ್ತದೆ.  ಇಡೀ ನಾಟಕದ ಶಕ್ತಿ ಕೇಂದ್ರ ಅದರ ಸಂಗೀತ ಮತ್ತು ವಸ್ತç ವಿನ್ಯಾಸ. ಭಜನ್, ಕವ್ವಾಲಿ, ಕಬೀರ ದೋಹೆಗಳು ರಂಗಸಂಗೀತವಾಗಿ ಹಾಡುಗಳು ಮತ್ತು ರಂಗದಲ್ಲಿ ನೃತ್ಯಗಳು ಹಿಡಿದಿಡುತ್ತವೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧. 

ರಂಗ ಪ್ರಯೋಗ”ಭಾರತದ ಪಾಡು ಮುತ್ತುಪಾಡಿಯ ಹಾಡು ಮನಸೆಳೆದ ಸ್ವಾತಂತ್ರ್ಯದ ಓಟ ನಾಟಕ”-ಗೊರೂರು ಅನಂತರಾಜು, ಹಾಸನ. Read Post »

ಇತರೆ, ರಂಗಭೂಮಿ

“ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.”‌ ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.”‌ ಮೊನ್ನೆ ಭಾನುವಾರ ಅರಕಲಗೂಡಿನಲ್ಲಿ ಶ್ರೀ ವೇಣುಗೋಪಾಲ ಕೃಪಾಪೋಷಿತ ನಾಟಕ ಮಂಡಳಿ ಕಲಾವಿದರು ಹಾರ್ಮೋನಿಯಂ ಮಾಸ್ಟರ್ ಜಿ..ಜಿ.. ಕೇಶವ ಗರಿಘಟ್ಟ ಇವರ ನಿರ್ದೇಶನದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶಿಸಿದರು.  ನಾಟಕ ವೀಕ್ಷಿಸಲು ಹೋಗಿದ್ದ ನನಗೆ ಸೂತ್ರಧಾರಿ ಪಾತ್ರಧಾರಿ ಹಾಡಿದ ರಂಗಗೀತೆ ಅದೇ ಪ್ರಥಮ ಬಾರಿ ಕೇಳಿ ಬಹಳ ಇಷ್ಟವಾಯಿತು. ಪ್ರೇಕ್ಷಕರು ಕೂಡ ಸೂತ್ರದಾರಿ ಹಾಡಿUÉ ಚಪ್ಪಾಳೆ ಬಾರಿಸಿ ಮೆಚ್ಚುಗೆ  ವ್ಯಕ್ತಪಡಿಸಿದರು. ಈ ಗೀತೆಯಲ್ಲಿ ಏನೆಲ್ಲಾ ಕನ್ನಡ ಕಲಾ ಸಾರಸ್ವತ ಲೋಕವನ್ನು ತೆರೆದಿಟ್ಟಿದ್ದಾರೆ  ಕವಿ ಎಂದರೆ..  ಕನ್ನಡ ನಾಡಿನ ಕಲೆ ಮಕ್ಕಳೇ ಅಳಿಯದೆ ಉಳಿಯಲಿ ನಮ್ಮೀ ಕಲೆಎ¯Éèಲ್ಲೂ ಬೆಳಗಲಿ ನಮ್ಮೀಕಲೆ ಪಂಪ ರನ್ನ ಜನ್ಮ ಪೊನ್ನರಾಮಾನುಜ ತೀರ್ಥಂಕರ ಬೇಲೂರುಹಳೇಬೀಡು ಕಲೆಗಳ ತವರೂರುಸುಬ್ಬಯ್ಯ  ನಾಯ್ಡುವಿನ ನಟನಾ ಕಲೆ ನಾಟಕ ರತ್ನ ಗುಬ್ಬಿ ವೀರಣ್ಣ ನಟಸಾರ್ವಭೌಮ ರಾಜಕುಮಾರ ಅಭಿನವ  ಭಾರ್ಗವ ಶಿರೋಮಣಿ ಮಲ್ಲಪ್ಪ  ನಟನಾ ಕಲೆ..   ಶ್ರೀ ಕೇಶವರವರು ಸಾಕ್ಷರತಾ ಆಂದೋಲನದಲ್ಲಿ ಕೆಲಸ ಮಾಡಿದ ವಿಚಾರ ಕೂಡ ಶಿಕ್ಷಕರು ಪಿ. ನಂದಕುಮಾರರಿಂದ ತಿಳಿಯಿತು. 1997ರ ಕಾಲಘಟ್ಟದಲ್ಲಿ ನಾನು (ಗೊರೂರು ಅನಂತರಾಜು) ಸಾಕ್ಷರತಾ ಆಂದೋಲನದಲ್ಲಿ ತೊಡಗಿಸಿಕೊಂಡು ಅಕ್ಷರ ಅಭಿಷೇಕ ನವ ಸಾಕ್ಷರರ ಪಠ್ಯ ಪುಸ್ತಕ ರಚನಾ ಸಮಿತಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೆ.. ಈ ಒಂದು ಆಸಕ್ತಿಯಲ್ಲಿ ಕೇಶವರವರಿಗೆ ತಮ್ಮ ಒಂದು ಕಲಾ ಪರಿಚಯವನ್ನು ಬರೆಯಲು ಬಯಸಿ ಸಂಪರ್ಕಿಸಿದೆ.. ಅವರು ಹೇಳಿದರು. ಅನಂತರಾಜ್ ಸಾರ್,, ನಾನು ನಿಮ್ಮನ್ನು ಬಲ್ಲೆನು. ಆದರೆ ನನ್ನ ಪರಿಚಯ ನಿಮಗಿಲ್ಲ ಅಷ್ಟೇ..ನಾನು ಕೇಶವ ಜಿ. ಜಿ.  ಹುಟ್ಟಿದ ಊರು ಗರೀಘಟ್ಟ.ಇದು ಅರಕಲಗೋಡು ತಾಲೂಕಿಗೆ  ಸೇರಿದೆ.  ಹಾಸನ ಜಿಲ್ಲೆಯಲ್ಲಿ ಬರುತ್ತದೆ. ನನ್ನ    ಜನ್ಮ ದಿನಾಂಕ 04.06.1979. ನಾನು    ಪ್ರಾಥಮಿಕ ಶಿಕ್ಷಣವನ್ನುಗರೀಘಟ್ಟದಲ್ಲಿ  ಹಾಗೂ ಹೊನ್ನವಳ್ಳಿಯ ಹೇಮಾವತಿ ಪ್ರೌಢಶಾಲೆಯಲ್ಲಿ ಹೈಸ್ಕೂಲು ವ್ಯಾಸಂಗ ªÀÄÄV¹ ಪಿ.ಯು.ಸಿ ಮತ್ತು  ಬಿ.ಎ. ಪದವಿ ಸರ್ಕಾರಿ ಕಲಾ ಕಾಲೇಜು ಹಾಸನ ಇಲ್ಲಿ ಮಾಡಿದೆ. ವಿದ್ಯಾಭ್ಯಾಸದ ಜೊತೆಯಲ್ಲಿಯೇ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳುವಿಕೆ, ರಾಜ್ಯ ಸರ್ಕಾರದ ಸಾಕ್ಷರತಾ ಆಂದೋಲನದಲ್ಲಿ ಸ್ವಯಂಸೇವಕನಾಗಿ ಸೇವೆ.   2005-06ನೇ ಸಾಲಿನಲ್ಲಿ ಪ್ರಾರಂಭವಾದ ಸಾಕ್ಷರತಾ ಮುಂದುವರಿಕೆ ಶಿಕ್ಷಣ ಕಾರ್ಯಕ್ರಮದಲ್ಲಿ ಕ್ರಮವಾಗಿ ಪ್ರೇರಕ ಹಾಗೂ ನೋಡಲ್ ಪ್ರೇರಕ, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ  ಸಾಕ್ಷರತಾ ಕಲಾವಿದನಾಗಿ ಸೇವೆ, ಅರಿವು ಕಾರ್ಯಕ್ರಮದಲ್ಲಿ ಬೀದಿ ನಾಟಕ ಹಾಗೂ ಕಲಾಜಾಥಾ ಕಾರ್ಯಕ್ರಮದ ನಿರ್ದೇಶಕನಾಗಿ ಸೇವೆ ಸಲ್ಲಿಕೆ, ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸ್ತ್ರೀಶಕ್ತಿ ಗುಂಪುಗಳ ಸದಸ್ಯರಿಗೆ ತರಬೇತಿ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಕೆ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ವಿವಿದ ಕಾರ್ಯಕ್ರಮದಲ್ಲಿ ನಿರೂಪಕನಾಗಿ 2014ರಲ್ಲಿ ರಂಗಭೂಮಿ ಕ್ಷೇತ್ರಕ್ಕೆ ಪ್ರವೇಶ ಮಾಡಿದೆ.  ಅರಕಲಗೂಡು ಪಟ್ಟಣದಲ್ಲಿ ತಾಲ್ಲೂಕಿನ ವಿವಿಧ ವಿಕಲಚೇತನರನ್ನೊಳಗೊಂಡ ವಿಕಲಚೇತನರ ಸಂಘವನ್ನು ರಚಿಸಿ ವಿಕಲಚೇತನರಿಂದಲೇ ದಾನಶೂರಕರ್ಣ  ನಾಟಕ ಪ್ರದರ್ಶನದಲ್ಲಿ ಕರ್ಣನ ಪಾತ್ರದ ಮೂಲಕ ರಂಗಭೂಮಿಗೆ ಪ್ರವೇಶ ಮಾಡಿದೆ.  ಶ್ರೀಕೃಷ್ಣ, ಅರ್ಜುನ, ಧರ್ಮರಾಯ, ಸತ್ಯವ್ರತ, ಬೀಷ್ಮ, ದ್ರೋಣ, ದೃತಾರಾಷ್ಟ್ರ, ನಾರದ, ವಿಧುರ, ಭರತ, ವಿಭಿಷಣ, ವಸಿಷ್ಠ ಮುಂತಾದ ಪಾತ್ರಗಳಲ್ಲಿ ಅಭಿನಯಿಸಿದೆ. ಗುರುಗಳ ಕೈ ನೋಡಿಕೊಂಡು ಹಾರ್ಮೋನಿಯಂ ಕಲಿಕೆ ಪ್ರಾರಂಭಿಸಿದೆ. ಯಾವ ಗುರುಗಳ ಬಳಿಯೂ ಅಭ್ಯಾಸ ಮಾಡದೆ ತರಬೇತಿಯೂ ಇಲ್ಲದೇ ಸ್ವತಃ ಹಾರ್ಮೋನಿಯಂ ನುಡಿಸುವುದನ್ನು ಅಭ್ಯಾಸ ಮಾಡಿಕೊಂಡು ಮೊದಲಬಾರಿಗೆ 2023ರಲ್ಲಿ ರಾಜ ವಿಕ್ರಮ ನಾಟಕದ ನಿರ್ದೇಶನ ಮಾಡಿ  ಆ ದಿನದಿಂದ ಈವರೆಗೆ ರಾಜಾವಿಕ್ರಮ, ರಾಜ ಸತ್ಯವ್ರತ, ದಾನಶೂರಕರ್ಣ, ಕುರುಕ್ಷೇತ್ರ ಹೀಗೆ 12 ನಾಟಕಗಳ ನಿರ್ದೇಶನ ಮಾಡಿರುವೆ. ಹರಿಕಥೆ ಕಲಾವಿದನಾಗಿಯೂ ಸೇವೆ ಸಲ್ಲಿಸುತ್ತಿರುವೆ .  ನನ್ನ ಈ ಸೇವೆ ಗಮನಿಸಿ ಕೆಲವು ಸಂಘ ಸಂಸ್ಥೆಗಳು ರಂಗರತ್ನ, ಹೊಯ್ಸಳರತ್ನ, ಕಲಾಬೀಷ್ಮ, ರಂಗ ಕುಸುಮ, ರಂಗರತ್ನಾಕರ  ಹೀಗೆ ಪ್ರಶಸ್ತಿ ನೀಡಿ ಗೌರವಿಸಿರುತ್ತಾರೆ. ಇದುವರೆಗೂ ಸರಿಸುಮಾರು 400ಕ್ಕೂ ಹೆಚ್ಚು ಸ್ವ ಸಹಾಯ ಸಂಘಗಳನ್ನು ರಚನೆ ಮಾಡಿ ಮಾಹಿತಿ ನೀಡಿ  ಮಾರ್ಗದರ್ಶನ ಮಾಡಿರುತ್ತೇನೆ, ಗ್ರಾಮೀಣ ಭಾಗದ ವಿಕಲಚೇತನರಿಗೆ ಗ್ರಾಮ ಮಟ್ಟದಲ್ಲಿ ಸರ್ಕಾರಿ ಸವಲತ್ತುಗಳ ಮಾಹಿತಿ ನೀಡುವ ಸಂಬಂಧ ಗ್ರಾಮ ಪಂಚಾಯಿತಿ ಮಟ್ಟದ ಗ್ರಾಮೀಣ ಪುನರ್ವಸತಿ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿರುವೆ. ಕಲೆ ಮತ್ತು ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕಲಾ ಮತ್ತು ಸಾಂಸ್ಕೃತಿಕ ಸಂಘ ಸ್ಥಾಪಿಸಿ ಅ ಮೂಲಕ  ರಂಗ ಕಲೆಯನ್ನು ಉಳಿಸುವ ಪೋಷಿಸುವ ಸಲುವಾಗಿ ಸಾಕಷ್ಟು ಕಾರ್ಯಕ್ರಮಗಳನ್ನು ಸಂಘಟಿಸಿರುವೆ.   ಇವರ ಸಂಪರ್ಕ ವಿಳಾಸ:ಕೇಶವ ಜಿ. ಜಿ. ರಂಗನಿರ್ದೇಶಕರು,  ಗರೀಘಟ್ಟ, ಕಸಬಾ ಹೋಬಳಿ, ಅರಕಲಗೂಡು ತಾ. ಹಾಸನ ಜಿಲ್ಲೆ. ಮೊ  ಸಂಖ್ಯೆ 9880183485 ಗೊರೂರು ಅನಂತರಾಜು

“ಪೌರಾಣಿಕ ನಾಟಕ ನಿರ್ದೇಶಕರು ನಟ ಕೇಶವ ಜಿ. ಜಿ. ಗರೀಘಟ್ಟ.”‌ ಗೊರೂರು ಅನಂತರಾಜು Read Post »

ಇತರೆ, ರಂಗಭೂಮಿ

“ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ  ನಾಟಕ.ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ  ನಾಟಕ. “ಲೋಕಾಯುಕ್ತರು ಬರುತ್ತಾರೆ”ಸ್ತುತಿ : ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಗಂಧದಕೋಠಿ. ಹಾಸನ.ಮೂಲ: ನಿಕೊಲಾಯ್ ಗೊಗೊಲ್.ಕನ್ನಡ ರೂಪ, ಸಂಗೀತ ನಿರ್ದೇಶನ ಧನಂಜಯ ದಿಯಾನ್ ರಂಗ ಪ್ರಯೋಗ ಹಾಸನದ ನಾಟ್ಯ ವೈಭವ, ರಂಗಸಿರಿ ಮತ್ತು ಜಿಲ್ಲಾ ಪತ್ರಕರ್ತರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ 3 ದಿನಗಳ ಕಾಲೇಜು ರಂಗೋತ್ಸವದಲ್ಲಿ 2ನೇ ದಿನ ಬುಧವಾರಸ್ತುತಿ : ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಗಂಧದಕೋಠಿ. ಹಾಸನ.ಮೂಲ: ನಿಕೊಲಾಯ್ ಗೊಗೊಲ್.ಕನ್ನಡ ರೂಪ, ಸಂಗೀತ ನಿರ್ದೇಶನ ಧನಂಜಯ ದಿಯಾನ್ ಅವರದು. ಬೆಳಿಗ್ಗೆ ಪ್ರದರ್ಶಿಸಿದ ನಾಟಕ ಲೋಕಾಯುಕ್ತರು ಬರುತ್ತಾರೆ. ಪ್ರಲೋಕಾಯುಕ್ತರು ಬರುತ್ತಾರೆ ನಾಟಕವು ವ್ಯಂಗ್ಯ, ಹಾಸ್ಯ ಮತ್ತು ಸಾಮಾಜಿಕ ಸತ್ಯಗಳ ಸಮನ್ವಯದಲ್ಲಿ ಮೂಡಿ ಬಂದ ಒಂದು ಶಕ್ತಿಯುತ ರಂಗಕೃತಿ. ಇದು ಮೂಲತಃ The Government Inspector ಎಂಬ ಪ್ರಸಿದ್ಧ ನಾಟಕದಿಂದ ಪ್ರೇರಿತವಾಗಿದ್ದು, Nikolai Gogol ಅವರ ಕೃತಿಯ ಆತ್ಮವನ್ನು ಕನ್ನಡದ ನೆಲದ ಸನ್ನಿವೇಶಕ್ಕೆ ತಂದು, ಧನಂಜಯ ದಿಯಾನ್ ಅವರು ಹೊಸ ಅರ್ಥಭರಿತ ರೂಪದಲ್ಲಿ ಮರು ಸೃಷ್ಟಿಸಿದ್ದಾರೆ. ಈ ನಾಟಕದ ಕೇಂದ್ರದಲ್ಲಿ ಇರುವ ವಿಷಯ ಭಯ!ಆದರೆ ಅದು ಸಾಮಾನ್ಯ ಭಯವಲ್ಲ. ಅದು ಅಧಿಕಾರಿಗಳ ಅಂತರಂಗದಲ್ಲಿರುವ ಅಪರಾಧ ಭಾವನೆಯ ಭಯ. ಲೋಕಾಯುಕ್ತರು ಬರುತ್ತಾರೆ ಎಂಬ ಒಂದು ವದಂತಿ ಮಾತ್ರವೇ ಸಂಪೂರ್ಣ ವ್ಯವಸ್ಥೆಯನ್ನು ನಡುಗಿಸುತ್ತದೆ. ಈ ಕಲ್ಪನೆ ನಾಟಕದ ಹೃದಯವಾಗಿದ್ದು, ಅಧಿಕಾರದ ಅಹಂಕಾರ, ಭ್ರಷ್ಟಾಚಾರ ಮತ್ತು ಸುಳ್ಳಿನ ಮೇಲೆ ಕಟ್ಟಿದ ವ್ಯವಸ್ಥೆಯ ದುರ್ಬಲತೆಯನ್ನು ಬಯಲಿಗೆಳೆಯುತ್ತದೆ.ನಾಟಕದಲ್ಲಿ ಪಟ್ಟಣದ ಮೇಯರ್ ಹಾಗೂ ಇತರೆ ಅಧಿಕಾರಿಗಳು ತಮ್ಮ ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ತೊಡಗುತ್ತಾರೆ. ಯಾರೂ ನೇರವಾಗಿ ಸತ್ಯವನ್ನು ಎದುರಿಸಲು ಸಿದ್ಧರಿರುವುದಿಲ್ಲ. ಆದರೆ ನಿಜವಾದ ಲೋಕಾಯುಕ್ತರು ಬಂದಿರಲಿ ಇಲ್ಲದಿರಲಿ ಅವರ ಭಯವೇ ಅವರನ್ನು ಒಳಗಿನಿಂದ ಒಡೆದುಹಾಕುತ್ತದೆ. ಇದು ಈ ನಾಟಕದ ಅತ್ಯಂತ ಪರಿಣಾಮಕಾರಿ ವ್ಯಂಗ್ಯ ವಿಡಂಬನೆ. ಧನಂಜಯ ದಿಯಾನ್ ಅವರ ರೂಪಾಂತರದಲ್ಲಿ ಈ ಕಥೆ ಕೇವಲ ಒಂದು ಆಡಳಿತ ವ್ಯವಸ್ಥೆಯ ವಿಮರ್ಶೆಯಾಗಿ ಉಳಿಯುವುದಿಲ್ಲ. ಅದು ಸಮಗ್ರ ಸಮಾಜದ ಪ್ರತಿಬಿಂಬವಾಗುತ್ತದೆ. ಲೋಕಾಯುಕ್ತರು ಇಲ್ಲಿ ಕೇವಲ ಒಂದು ಸಂಸ್ಥೆಯ ಹೆಸರು ಅಲ್ಲ.ಅದು ನಮ್ಮೊಳಗಿನ ಅಂತಃಕರಣ,ನಮ್ಮ ಪ್ರಜ್ಞೆ,ನಮ್ಮ ಸತ್ಯದ ಕಣ್ಣು.ಈ ನಾಟಕದ ಇನ್ನೊಂದು ವಿಶಿಷ್ಟತೆ ಎಂದರೆ ಇದನ್ನು ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ ನಿರ್ದೇಶಕರು. ಸಾಮಾನ್ಯವಾಗಿ ಪುರುಷ ಪ್ರಧಾನವಾಗಿರುವ ಪಾತ್ರಗಳನ್ನು ಇಲ್ಲಿ ಮಹಿಳಾ ಧ್ವನಿಗಳ ಮೂಲಕ ಹೊಸ ರೀತಿಯಲ್ಲಿ ಅಭಿವ್ಯಕ್ತಿಸಲಾಗಿದೆ. ಇದರಿಂದ ನಾಟಕವು ಹೊಸ ಸಂವೇದನೆ,  ಹೊಸ ದೃಷ್ಟಿಕೋನವನ್ನು ಪಡೆಯುತ್ತದೆ. ಮಹಿಳೆಯರ ಅನುಭವ ಅವರ ಒಳ ಜಗತ್ತು  ಅವರ ಪ್ರಶ್ನೆಗಳು ಈ ನಾಟಕದ ಮೂಲಕ ಹೆಚ್ಚು ತೀವ್ರವಾಗಿ ಹೊರಹೊಮ್ಮುತ್ತವೆ.ಶೈಲಿಯಲ್ಲಿ, ನಾಟಕವು ಹಾಸ್ಯ ಮತ್ತು ವ್ಯಂಗ್ಯವನ್ನು ಬಳಸಿಕೊಂಡು ಗಂಭೀರ ವಿಷಯಗಳನ್ನು ಹೇಳುತ್ತದೆ. ಸಂಭಾಷಣೆಗಳಲ್ಲಿ ಲಯ, ಪ್ರಾಸ, ನಾಟಕೀಯ ತೀವ್ರತೆ ಕಂಡುಬರುತ್ತದೆ. ಕೆಲವೆಡೆ ಕಾಮಿಡಿ ದೃಶ್ಯಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಅಂತೆಯೇ ಆ ನಗುವಿನ ಹಿಂದಿನ ಕಠಿಣ ಸತ್ಯವೂ ಗೋಚರಿಸುತ್ತದೆ. ಇದು  ನಾಟಕದ ಒಂದು ಶಕ್ತಿ.ಸಂಗೀತ, ಲಯಬದ್ಧ ಹಾಡುಗಳು ಮತ್ತು ರಂಗರೂಪಗಳು ನಾಟಕಕ್ಕೆ ಮತ್ತಷ್ಟು ಜೀವ ತುಂಬುತ್ತವೆ. ವಿಶೇಷವಾಗಿ ಲಂಚಾವತಾರ ನಿಲ್ಲಬೇಕು ಎಂಬ ಸಂದೇಶದ ಹಾಡುಗಳು ಕೇವಲ ಹಾಡುಗಳಲ್ಲಅವು ಒಂದು ಸಾಮಾಜಿಕ ಘೋಷಣೆ, ಒಂದು ಹೋರಾಟದ ನಾದವಾಗಿ ಹೊರಹೊಮ್ಮಿದೆ.ಕ್ಲೈಮಾಕ್ಸ್‌ನಲ್ಲಿ ನಾಟಕ ತನ್ನ ಶಿಖರವನ್ನು ತಲುಪುತ್ತದೆ. ಎಲ್ಲಾ ಭ್ರಮೆಗಳು ಒಡೆದುಹೋಗುತ್ತವೆ. ಸುಳ್ಳಿನ ಮೇಲಿರುವ ಕಟ್ಟಡ ಕುಸಿಯುತ್ತದೆ. ಪ್ರೇಕ್ಷಕರ ಮುಂದೆ ಉಳಿಯುವುದು ಒಂದೇ ಪ್ರಶ್ನೆನಿಜವಾದ ಲೋಕಾಯುಕ್ತರು ಯಾರು?ಹೊರಗಿನಿಂದ ಬರುವವನಾ?ಅಥವಾ ನಮ್ಮೊಳಗೇ ಇರುವ ನ್ಯಾಯ ಬುದ್ಧಿಯೇನಾ?ಒಟ್ಟಾರೆ ಲೋಕಾಯುಕ್ತರು ಬರುತ್ತಾರೆ ನಾಟಕವು ಕೇವಲ ಮನರಂಜನೆ ನೀಡುವ ಕೃತಿ ಅಲ್ಲ. ಅದು ಒಂದು ಜಾಗೃತಿ. ಒಂದು ಪ್ರತಿಬಿಂಬ. ಒಂದು ಎಚ್ಚರಿಕೆ.ಇದು ಪ್ರೇಕ್ಷಕರನ್ನು ನಗಿಸುತ್ತದೆ, ಯೋಚಿಸಲು ಪ್ರೇರೇಪಿಸುತ್ತದೆ, ಮತ್ತು ಕೊನೆಗೆಸತ್ಯದ ಎದುರು ನಿಲ್ಲುವ ಧೈರ್ಯವನ್ನು ನೀಡುತ್ತದೆ.ಇಲ್ಲಿ ನನ್ನ (ಗೊರೂರು ಅನಂತರಾಜು) ಒಂದೆರಡು ಅನುಭವಗಳು ನೆನಪಾದವು. ಹಿಂದೊಮ್ಮೆ  ಲೋಕಾಯುಕ್ತ ಡಿ.ವೈ.ಎಸ್.ಪಿ. ಯಾಗಿದ್ದವರು ನನ್ನ  ಕವಿ ಮಿತ್ರರು.  ಇವರ ಒಂದು ಹನಿಗವನ ಸಂಕಲನದ ವಿಮರ್ಶೆ  ಬರೆದಿದ್ದನು. ಹಿಂದೊಮ್ಮೆ ಇವರು ನಡೆಸಿದ  ರೈಡ್ ಗೆ ನಾನೇ  ಸಾಕ್ಷಿಯಾಗಿ ಹೋಗಿ ಬಾಲ್ಯದಲ್ಲಿ ನಾನು ಓದುತ್ತಿದ್ದ . ಎನ್.ನರಸಿಂಹಯ್ಯನವರ  ಪತ್ತೇದಾರಿ ಕಾದಂಬರಿ ಡಿಡೆಕ್ಟಿವ್ ಪತ್ತೇದಾರಿ ಪುರುಷೋತ್ತಮನ ಸಹಾಯಕ ಮೃತ್ಯುಂಜಯನ ಪಾತ್ರ ಮತ್ತು ಚಲನಚಿತ್ರನಟ ಬಾಲಕೃಷ್ಣ ಒಂದು ಸಿನಿಮಾದಲ್ಲಿ  ಹೇಳುತ್ತಿದ್ದ ಥ್ರಿಲ್ ರೋಮಾಂಚನ! ಸಂಭಾಷಣೆ ದೃಶ್ಯ ಎಲ್ಲಾ ಒಟ್ಟೊಟ್ಟಿಗೆ ನೆನಪಾದವು.. ನನ್ನ ಹಾಸ್ಯ ಸವಿ ಹನಿಗವನ ಸಂಕಲನದಕವಿಗವನಗಳು ಹೀಗಿದೆ.ಕವಿಗಳು ಶ್ರೀಮಂತರುಹಾಗೆಂದು ಲೋಕಾಯುಕ್ತರುದಾಳಿ ಮಾಡಿದರೆ ಸಿಗಬಹುದುಶಾಲು ಕೃತಿಗಳು ನಿಘಂಟುಸಿಗಲಾರದು ಗಂಟುಏಕೆಂದರೆ ಇವರು ಬರೇಭಾವನೆಗಳ ಹೃದಯ ಶ್ರೀಮಂತರು ಇನ್ನೂ   ನಿರ್ದೇಶಕರು Dhananjaya Diyan ಅವರು ಕನ್ನಡ ರಂಗಭೂಮಿಯಲ್ಲಿ ವೈಶಿಷ್ಟ್ಯಮಯ ಚಿಂತನೆ, ಸಂವೇದನಾಶೀಲ ಅಭಿವ್ಯಕ್ತಿ ಮತ್ತು ಆಳವಾದ ಕಲಾತ್ಮಕ ದೃಷ್ಟಿಯಿಂದ ಗುರುತಿಸಿಕೊಂಡಿರುವ ನಿರ್ದೇಶಕ, ನಟನಾ ತರಬೇತುದಾರ ಹಾಗೂ ಸಾಹಿತ್ಯಕರ್ತ. ನಿನಾಸಂನಲ್ಲಿ ಪಡೆದ ರಂಗಶಿಕ್ಷಣದ ಆಧಾರದ ಮೇಲೆ, ಅವರು ರಂಗಭೂಮಿಯನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಸಮಾಜದ ಒಳನೋಟಗಳನ್ನು ಅನಾವರಣಗೊಳಿಸುವ ಶಕ್ತಿಯಾಗಿ ಬಳಸುತ್ತಾರೆ.40ಕ್ಕೂ ಹೆಚ್ಚು ರಂಗತರಬೇತಿ ಶಿಬಿರಗಳನ್ನು ನಡೆಸಿ, ಅನೇಕ ಯುವ ಪ್ರತಿಭೆಗಳನ್ನು ರೂಪಿಸಿರುವ ಇವರು, ಕಲಿಕೆಯನ್ನು ಅನುಭವಾತ್ಮಕ ಪ್ರಕ್ರಿಯೆಯಾಗಿ ರೂಪಿಸುವಲ್ಲಿ ವಿಶೇಷತೆ ಹೊಂದಿದ್ದಾರೆ. Andhayuga, Tughlaq, Kusumabaale ಸೇರಿದಂತೆ ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿರುವ ಇವರ ಪ್ರತಿಯೊಂದು ಕೃತಿಯಲ್ಲೂ ಭಾವನೆ, ದಾರ್ಶನಿಕತೆ ಮತ್ತು ಜೀವನದ ಸೂಕ್ಷ್ಮತೆಗಳನ್ನು ಒಳಗೊಂಡಿರುತ್ತವೆ.‘Innu Saku Badukiddu ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಸ್ಪರ್ಶ ಮೂಡಿಸಿರುವ ಇವರು ಬರವಣಿಗೆ, ನಿರ್ದೇಶನ ಮತ್ತು ತರಬೇತಿಯ ಮೂಲಕ ಸಮಗ್ರ ಕಲಾ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ. ಇವರ ದೃಷ್ಟಿಯಲ್ಲಿ ರಂಗಭೂಮಿ ಒಂದು ಸಾಧನೆ ಮನಸ್ಸುಗಳನ್ನು ಸ್ಪರ್ಶಿಸಿ, ಚಿಂತನೆಗೆ ಪ್ರೇರೇಪಿಸುವ ಶಕ್ತಿಯುತ ಸಾಧನ. ಇದಿಷ್ಟು ಮಾಹಿತಿಯನ್ನು ಹಂಚಿಕೊಂಡ  ಇದೇ ಧನಂಜಯ್ ಅವರು 15 ವರ್ಷಗಳ ಹಿಂದೆ ಇದೇ ರಂಗಸಿರಿ ಸಂಘಟನೆಯಲ್ಲಿ ಹಾಸನದಲ್ಲಿ ನಡೆದ ಕಾಲೇಜು ರಂಗೋತ್ಸವದಲ್ಲಿ ಹಾಸನ ಸರ್ಕಾರಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶ್ರಾಂತ ನಾಟಕ ನಿರ್ದೇಶಿಸಿದ್ದರು. ಇದರ ವಿಮರ್ಶಾ ಬರಹ 2011 ರಲ್ಲಿ ಪ್ರಕಟವಾಗಿರುವ ನನ್ನ ರಂಗಪ್ರಯೋಗ ಕೃತಿಯಲ್ಲಿಯೂ ದಾಖಲಾಗಿದೆ ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್,ಹಾಸನ- .573201

“ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ  ನಾಟಕ.ಗೊರೂರು ಅನಂತರಾಜು Read Post »

ಇತರೆ, ರಂಗಭೂಮಿ

“ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” 50 ವರ್ಷದ ಸನಿಹದಲ್ಲಿರುವ ಬೆಂಗಳೂರಿನ ಗೆಜ್ಜಹೆಜ್ಜೆ ರಂಗತಂಡವು ಬೆಂಗಳೂರು ಸೇವಾ ಸದನ ರಂಗಮಂದಿರದಲ್ಲಿ ದಿನಾಂಕ 12.03.206 ರಂದು ಯುಗಾದಿ ರಂಗ ಸಂಭ್ರಮ ನಾಟಕೋತ್ಸವ ಏರ್ಪಡಿಸಿತ್ತು.  ರಂಗಭೀಷ್ಮ ಬಿ ವಿ ಕಾರಂತರ ಸಂಗೀತ ಸುಂಯೋಜನೆಯಲ್ಲಿ ಮೂಡಿ ಬಂದ  ಗಜವದನ ಏರಂಬ ಎಂಬ ಗೀತೆಯನ್ನು ಗಣೇಶಯ್ಯನವರು ಆಡುವುದರ ಮುಖೇನ ನಾಟಕೋತ್ಸವಕ್ಕೆ ಚಾಲನೆ ನೀಡಿದರು  ಹಲವಾರು ಪ್ರಸಿದ್ಧ ನಾಟಕಗಳ ರಂಗಗೀತೆಗಳನ್ನು ಒಂದು ಗಂಟೆಗಳ ಕಾಲ ಹಾಡಲಾಯಿತು  ತಂಡದ ಹೊಸ ಪ್ರಯೋಗ ಮಾದಕ ಯುವ ಮಾರಕ ಪ್ರದರ್ಶಿಸಲಾಯಿತು. ಯುವ ಜನತೆ ದುಶ್ಚಟಕ್ಕೆ ದಾಸರಾಗ್ತ ಇದ್ದಾರೆ. ಇದರ ಸುತ್ತ ಹೆಣೆಯಲಾದ ಕಥಾ ಹಂದರ ಮನುಷ್ಯ ಅನುಮಾನ ಮತ್ತು ಅವಮಾನದಿಂದ ಕೋಪ ತಾಪ ಆವೇಶ ಚಟ ಬಿದ್ದು ಚಟ್ಯಕೆ ಏರುತ್ತಾನೆ. ಬೀದಿ ಬದಿಗಳಲ್ಲಿ ಜನಸಂದಣಿ ಇರುವ ಜಾಗಗಳಲ್ಲಿ ಶಾಲಾ-ಕಾಲೇಜುನ ಸಮೀಪ ಏರ್ಪೋರ್ಟ್ ಬಸ್ಟ್ಯಾಂಡ್ ರೈಲು ನಿಲ್ದಾಣ ಮುಂತಾದ ಕಡೆಗಳಲ್ಲಿ ಗಾಂಜಾ ಅಫೀಮು ಎಲಾಯಿನ್ ಮತ್ತೇರಿಸುವ ಪದಾರ್ಥಗಳನ್ನು ಮಾರುತಿರುತ್ತಾರೆ. ಯುವಕ ಯುವತಿಯರನ್ನು ದುಶ್ಚಟಕ್ಕೆ ದಾಸರನ್ನಾಗಿಸುವ ವಂಚಕರ ಜಾಲವೇ ವಿಪರೀತವಾಗಿದೆ. ಪ್ರೇಕ್ಷಕರಿಗೆ ನೇರವಾಗಿ ಡ್ರಗ್ಸ್ ಮಾರಾಟ ಕಂಡು ಬಂದಲ್ಲಿ ನಿಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕೆಂದು ಒಂದು ಪಾತ್ರ ಹೇಳುತ್ತದೆ. ಯುವ ಜನತೆಯನ್ನು ದುಸ್ಥಿತಿಯಿಂದ ಕಾಪಾಡಬೇಕಾದ ಪರಿಸ್ಥಿತಿ ಒದಗಿ ಬಂದಿರುವುದು ನೋವಿನ ಸಂಗತಿ. ಧರೆಗೆ ತಂದು ಬಿಟ್ಬಿಟ್ನಪ್ಪ ಆಟ ಆಡ್ಸೋಕೆ ಪಾಠ ಕಲ್ಸೋಕೆ ಈ ಭೂಮಿ ಎಂಬ ರಂಗದ ಮೇಲೆ ಹಾಡೋಕ್ ಬಿಟ್ಟವ್ನೆ, ಕಾಮ ನೇಮ ಲೋಭ ಲಾಭದ ಪಾತ್ರ ಕೊಟ್ಟವ್ನೆ ಅಂತ ಹೇಳ್ತಾ ಪ್ರಹಸನ ಮುಕ್ತಾಯವಾಗುತ್ತದೆ. ನಿಂತ್ಕೋಳಿ ಅಲ್ಲಲ್ಲ ಕುಳಿತುಕೊಳ್ಳಿ ಎಂಬ  ಹಾಸ್ಯ ಕಿರು ನಾಟಕ ಮತ್ತು ಎಂಡ್ ಇಲ್ಲದ ಬಂಡ್ ಅವತಾರ ರಾಜಕೀಯ ವಿಡಂಬನಾತ್ಮಕ ನಗೆ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗುತ್ತದೆ ತಂಡ. ರಂಗ ಉಪನ್ಯಾಸ ರಂಗ ಗೀತೆಗಳು, ಕಿರು ನಾಟಕ ರಂಗದ ಬಗ್ಗೆ ಮಾತುಗಳು ರಂಗ ಹಾಸ್ಯ ಪಟಾಕಿ ಎಲ್ಲಾ ಸರಿಸುಮಾರು ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡಿತು ಚಿಂತನೆಗೂ ಚಾಲನೆ ನೀಡಿತು.  ಬೆಳಕು ವಿನ್ಯಾಸ ರವಿಶಂಕರ್ ಪ್ರಸಾದನ ಶಿವು, ಉಪನಿಷ ವಸ್ತ್ರಾಲಂಕಾರ ಪುಷ್ಪಲತಾ. ಪ್ರಚಾರ ಅಮಿತಾನಂದ ಶೇಖ ಪಾತ್ರವರ್ಗದಲ್ಲಿ ಮೈಸೂರು ರಮಾನಂದ್, ಶೇಖರ್ ಸೂರ್ಯನಾರಾಯಣರಾವ್,  ಲಲಿತಾ ಗಣೇಶಯ್ಯ, ಟಿ.ಜಿ ಹರೀಶ್ ಸಂಗೀತ. ನಾಟಕ ಬರೆದಾಡಿಸಿದವರು ಮೈಸೂರು ರಮಾನಂದ. ಗೊರೂರು ಅನಂತರಾಜು

“ಹೆಜ್ಜೆ ಗೆಜ್ಜೆ ತಂಡದಿಂದ ಯುಗಾದಿ ರಂಗ ಸಂಭ್ರಮ ನಾಟಕೋತ್ಸವ” ಗೊರೂರು ಅನಂತರಾಜು Read Post »

ಇತರೆ, ರಂಗಭೂಮಿ

“ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಗೊರೂರು ಅನಂತರಾಜು ಅವರಿಂದ.

ರಂಗ ಸಂಗಾತಿ ಗೊರೂರು ಅನಂತರಾಜು “ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಮೊನ್ನೆ ರಂಗಭೂಮಿ ಟ್ರಸ್ಟ್ ಕೊಡಗು ಕಲಾವಿದರು ಶ್ರೀ ಅಡ್ಡಂಡ ಕಾರ್ಯಪ್ಪ ರಚನೆಯ ನಿಜಮಹಾತ್ಮ ಬಾಬಾ ಸಾಹೇಬ ನಾಟಕ ಪ್ರದರ್ಶಿಸಿದರು. ಮೈಸೂರು ರಂಗಾಯಣ ನಿಕಟಪೂರ್ವ ನಿರ್ದೇಶಕರು ಶ್ರೀ ಅಡ್ಡಂಡ ಕಾರ್ಯಪ್ಪನವರು ಕೊಡಗು ಜಿಲ್ಲೆಯವರು. ಬಾಲ್ಯದಿಂದಲೂ ರಂಗಭೂಮಿ ಹಾಗೂ ಸಾಹಿತ್ಯದ ಬಗ್ಗೆ ತೀವ್ರವಾದ ಒಲವು ಬೆಳೆಸಿಕೊಂಡು ಇವರು ನೂರಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿ ರಾಜ್ಯಾದ್ಯಂತ ಪ್ರದರ್ಶಿಸಿದ ಹೆಗ್ಗಳಿಕೆ ಇವರದು. ಇವರು ಈ ಹಿಂದೆ ಹಾಸನದಲ್ಲಿ ಪರ್ವ ಕಾದಂಬರಿಯನ್ನು ನಾಟಕವಾಗಿ  ಪ್ರದರ್ಶಿಸಿದ್ದರು. ಹಿಂದೆ ಇವರ ತಂಡದ ಟಿಪ್ಪು ನಿಜಕನಸುಗಳು ಮತ್ತು ಕರಿನೀರ ವೀರ ನಾಟಕಗಳನ್ನು ನೋಡಿ  ಬರೆದಿದ್ದೆ. ಇವರ ಇನ್ನೊಂದು ನಾಟಕ ಸತ್ಯವನ್ನೇ ಹೇಳುತ್ತೇನೆ. ಈ ನಾಟಕವು ಡಾ. ಅಂಬೇಡ್ಕರ್ ವಿಷಯದಲ್ಲಿ ಬಚ್ಚಿಟ್ಟ  ಸತ್ಯಗಳನ್ನು ಬಿಚ್ಚಿಡುವ ಪ್ರಯತ್ನ ಎಂದಿದ್ದಾರೆ.  ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಸ್ವಪ್ರಯತ್ನ ಸಾಧನೆಗಳಿಂದ ಮಾನವತಾವಾದಿಯಾಗಿ ಒಂದು ಅರ್ಥದಲ್ಲಿ ನಿಜಮಹಾತ್ಮರಾಗಿ ಬೆಳೆದಿದ್ದು ಅದ್ಭುತ ಯಶೋಗಾಥೆ. ಅವರ ವ್ಯಕ್ತಿತ್ವ, ವಿದ್ವತ್ತು, ನಾಯಕತ್ವ ಗುಣ, ಸಂಘಟನಾ ಸಾಮರ್ಥ್ಯ, ಅಸ್ಪೃಶ್ಯತೆಯ ವಿರುದ್ಧದ ಹೋರಾಟ ಶ್ರಮ ಅದ್ವಿತೀಯ. ಬಾಬಾ ಸಾಹೇಬರ ಬಗ್ಗೆ ಸಾಮಾಜಿಕ ಕ್ರಾಂತಿ ಸೂರ್ಯ ಪುಸ್ತಕ ಬರೆದ ದತ್ತೋಪಂತ್ ಠೇಂಗಡಿ ಅವರ  ನಿರೂಪಣೆಯಲ್ಲಿ ತೆರೆದುಕೊಳ್ಳುತ್ತದೆ ನಾಟಕ. ಅವರ ಜೀವನವನ್ನು ರಾಜಕೀಯ ಕಥಾನಕಗಳಿಂದ ಹೊರತಂದು ರಾಷ್ಪ್ರೀಯತೆಯ ನೆಲೆಯಲ್ಲಿ ಪುನರ್ ಸ್ಥಾಪಿಸಿದೆ. ಅವರನ್ನು ಯಾವುದೋ ಒಂದು ರಾಜಕೀಯ ಚೌಕಟ್ಟಿಗೆ ಸೀಮಿತಗೊಳಿಸದೆ ಅವರ ನೈಜ ಸ್ವಭಾವಗಳಾದ ಚಿಕಿತ್ಸಕ ಬುದ್ಧಿ, ತಪ್ಪನ್ನು ಪ್ರಶ್ನಿಸುವ ವಿರೋಧಿಸುವ ಧೈರ್ಯ, ಸತ್ಯಕ್ಕಾಗಿ ಒಬ್ಬಂಟಿಯಾಗಲು ಸಿದ್ಧರಾಗುವ ಮಹಾ ಮಾನವತೆಯನ್ನು  ನೋಡಬಯಸುತ್ತದೆ.   ಬಾಬಾಸಾಹೇಬರ ಜೀವನದ ಅನೇಕ ಘಟನೆಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ರಂಗದಲ್ಲಿ ತರಲಾಗಿದೆ. ಅವರ ವೈವಾಹಿಕ ಜೀವನ, ರಾಷ್ಪ್ರೀಯ ಸ್ವಯಂ ಸೇವಕ ಸಂಘದೊಂದಿಗೆ ಅವರಿಗಿದ್ದ ನಿಲುವು, ಸಂವಿಧಾನ ಕರಡು ತಿದ್ದುಪಡಿಯ ಸಂದರ್ಭದಲ್ಲಿ ಸಂಸತ್ತಿನಲ್ಲಿ ನಡೆದ ಚರ್ಚೆಗಳು, ಡಾ. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧಿ ನಡುವಿನ ಸಂಬಂಧ ಇವೆಲ್ಲವನ್ನು ಐತಿಹಾಸಿಕ ದಾಖಲೆಗಳನ್ನು ಇಟ್ಟುಕೊಂಡು ಪರದೆಯ ಮೇಲೆ ಸಾಕ್ಷ್ಯ ಚಿತ್ರಗಳನ್ನು ತೋರಿಸಿ ಪ್ರಸ್ತುತಿಪಡಿಸುತ್ತದೆ. ರಾಷ್ಪ್ರೀಯ ಸ್ವಯಂ ಸೇವಕ ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಮ್ ಹಡ್ಗೆವಾರ್ ಮತ್ತು ಬಾಬಾ ಸಾಹೇಬರು ಒಂದೇ ಕಾಲಘಟ್ಟದಲ್ಲಿದ್ದವರು. ಇವರಿಬ್ಬರ ಭೇಟಿ  ವಿಚಾರ ವಿನಿಮಯ ಸಂಘದ ಶಿಬಿರಕ್ಕೆ ಭೇಟಿಯಿತ್ತ ಬಾಬಾ ಸಾಹೇಬರು ಅಲ್ಲಿ ಯಾರೂ ಜಾತಿಯಿಂದ ಗುರುತಿಸಿಕೊಳ್ಳದೇ ಹಿಂದೂಗಳಾಗಿ ಗುರುತಿಸಿಕೊಂಡಿದ್ದನ್ನು ವಿಶೇಷವಾಗಿ ಗಮನಿಸುತ್ತಾರೆ.ಹಿಂದೂ ಸಮಾಜದಲ್ಲಿ ಮಹಿಳೆಯರಿಗೆ ಕಾನೂನುಬದ್ಧ ಸಮಾನ ಹಕ್ಕುಗಳನ್ನು ನೀಡುವ ಉದ್ದೇಶದ ಹಿಂದೂ ಕೋಡ್ ಬಿಲ್ ಅನ್ನು  ೧೯೫೧ರಲ್ಲಿ  ಸರಕಾರ ಮುಂದೂಡಿದ ಕಾರಣ ಬಾಬಾ ಸಾಹೇಬರು ನೆಹರು ಸಂಪುಟಕ್ಕೆ ರಾಜೀನಾಮೆ ನೀಡಿದರು. ೧೯೫೨ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಅವರ ಸೋಲು  ಅಘಾತಕಾರಿ.  ೧೯೫೬ರ ಡಿಸೆಂಬರ್ ೬ರಂದು ಅಂಬೇಡ್ಕರ್ ಅಸ್ತಂಗತರಾದಾಗ ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗ ದೊರಕದಿರುವುದು ವಿಷಾದನೀಯ. ಈ ಅಂಶಗಳ ಮೇಲೆ ನಾಟಕ ಬೆಳಕು ಚೆಲ್ಲುತ್ತದೆ.೧೯೨೭ರಲ್ಲಿ ಮಹಾರಾಷ್ಟ್ರದ ಮಹಾಡ್ನಲ್ಲಿ ನಡೆದ ಚವದಾರ್ ಕೆರೆ ಸತ್ಯಾಗ್ರಹ ಮತ್ತು ೧೯೩೦ರಲ್ಲಿ ನಾಸಿಕ್‌ನ ಕಾಳಾರಾಮ ದೇವಸ್ಥಾನ ಪ್ರವೇಶ ಚಳುವಳಿ ಇವು ಅವರ ಸಾಮಾಜಿಕ ಹೋರಾಟಗಳ ಪ್ರಮುಖ ಮೈಲಿಗಲ್ಲು. ದೇವಸ್ಥಾನಕ್ಕೆ ಹೋಗಿಬರಬೇಕೆಂದು ಬಯಸುವ ಪತ್ನಿಯನ್ನು ಸಂಭಾಳಿಸುವ ಸನ್ನಿವೇಶವು ಮನ ಕಲಕುತ್ತದೆ.    ಸ್ವಾತಂತ್ರ್ಯ  ದೊರಕಿದ ಆರು ವರ್ಷಗಳ ಮೊದಲೇ ಬಾಬಾ ಸಾಹೇಬರು ಬರೆದ ಥಾಟ್ಸ್ ಆಫ್ ಪಾಕಿಸ್ಥಾನ (Thoughts of Pakisthan) ಕೃತಿಯನ್ನು ಪ್ರೇಕ್ಷಕರು ಓದಬೇಕೆಂದು ನಾಟಕದ ಮಧ್ಯಾಂತರದಲ್ಲಿ  ಬಂದು ನಾಟಕಕಾರರು ನಿವೇದಿಸುತ್ತಾರೆ. ಬಾಬಾಸಾಹೇಬರ ಬದುಕು ತೆರೆದ ಪುಸ್ತಕ. ಅವರು ಬದುಕನ್ನು ಅಕ್ಷರಗಳಲ್ಲಿ ಬರೆದಿಟ್ಟಿದ್ದಾರೆ. ಅದನ್ನು ನಾವು ಓದಬೇಕಷ್ಟೇ.  ಅವರು ಇದನ್ನು ಬರೆದಿದ್ದು ದೇಶ ವಿಭಜನೆಯ ಉದ್ದೇಶದಿಂದಲ್ಲ. ವಿಭಜನೆ ತರುವ ರಾಜಕೀಯ, ಸಾಮಾಜಿಕ ಮತ್ತು ಭೌಗೋಳಿಕ ಪರಿಣಾಮಗಳನ್ನು ಅದರಲ್ಲಿ ವಿಶ್ಲೇಷಿಸಿದ್ದರು. ಧರ್ಮದ ಆಧಾರದಲ್ಲಿ ದೇಶ ಒಡೆಯುವುದೇ ಆದರೆ ಸಂಪೂರ್ಣ ಪ್ರಜಾ ವಿನಿಮಯವಾಗಬೇಕು ಎಂಬುದು ಅವರ ನಿಲುವು. ಗಾಂಧೀಜಿಯವರು ಪ್ರಜಾ ವಿನಿಯಯ ಮಾಡಿಕೊಳ್ಳಬೇಕೆಂಬ ಅವರ ಬೇಡಿಕೆಯ ವಿರುದ್ಧ ಉಪವಾಸ ಸತ್ಯಾಗ್ರಹ ಮಾಡಿ ಬಾಬಾ ಸಾಹೇಬರು ತಮ್ಮ ಬೇಡಿಕೆಯಿಂದ ಹಿಂದೆ ಸರಿಯುವಂತೆ ಮಾಡುವ  ದೃಶ್ಯ ಯಾಕೋ  ಗಾಂಧೀ ಪಾತ್ರ ವ್ಯಂಗ್ಯವಾಗಿ ಗೋಚರಿಸಿತು. ಇತ್ತ ಸಾರ್ವಕರರು ಧರ್ಮಾಧಾರಿತ ವಿಭಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಅಖಂಡ ಬಾರತ ಎಂಬ ರಾಷ್ಪ್ರ  ಕಲ್ಪನೆಯನ್ನು ಸ್ಫಷ್ಟವಾಗಿ ಪ್ರತಿಪಾದಿಸಿದರು. ಬಾಬಾ ಸಾಹೇಬರು ಮತ್ತು ಸಾವರ್ಕರರ ನಡುವೆ ರಾಷ್ಟ್ರ ಧರ್ಮ ಮತ್ತು ಭವಿಷ್ಯದ ಭಾರತದ ಕುರಿತ ಚರ್ಚೆಗಳು ಮುಖಾಮುಖಿ ಸಂಭಾಷಣೆಯಲ್ಲಿ ಅಭಿವ್ಯಕ್ತವಾಗುತ್ತದೆ. ಚುರುಕು ಮಾತುಗಳು, ದೃಶ್ಯದಿಂದ ದೃಶ್ಯಕ್ಕೆ ಬದಲಾಗುವ ಸನ್ನಿವೇಶಗಳು, ಎಲ್ಲೂ ಬಿಗಿ ತಪ್ಪದ ಕಥಾ ನಿರೂಪಣೆ, ಪಕ್ಕ ಲೈಟಿಂಗ್ಸ್ (ತೀರ್ಥಳ್ಳಿ ಶಿವಕುಮಾರ್) ನಾಟಕದ ಹೈಲೆಟ್ಸ್. ಸುಮಾರು ೨ ಗಂಟೆ ೧೦ ನಿಮಿಷದ ನಾಟಕದಲ್ಲಿ ಪ್ರಮುಖವಾಗಿ ಇಡೀ ನಾಟಕ ಆವರಿಸಿಕೊಂಡಿರುವ  ಬಾಬಾಸಾಹೇಬರ ಪಾತ್ರವನ್ನು ಅಜಿತ್‌ಕುಮಾರ್ ಸಮರ್ಥವಾಗಿ ನಿಭಾಯಿಸಿದರು. ನಾಟಕದ ಇತರ ಕಲಾವಿದರು ನಾಟಕದ ಹಲವಾರು ಪಾತ್ರಗಳನ್ನು ಹಂಚಿಕೊಂಡರು. ಅಶೋಕ್‌ಗೌಡ ಅವರು ಸುಧಾಮ, ಅರುಣ್‌ಚಂದ್ರ ಗುಹಾ ಪಾತ್ರಗಳನ್ನು, ಉಡುಪಿ ಸರ್ವೇಶ್ ಅವರು ರತ್ತು,  ಮೆಹಬೂಬ್ ಆಲಿಬೇಗ್ ಪಾತ್ರಗಳನ್ನು, ಶರಣು ಯಳವಾರ ಅವರು ಬೋನ್ಸಲೆ, ಮಹಾವೀರ್ ತ್ಯಾಗಿ ಪಾತ್ರಗಳನ್ನು ಶಿವಕುಮಾರ್ ಅವರು ಶಂಕರಾನಂದ ಶಾಸ್ತ್ರೀ ಗಾಯಕ್‌ವಾಡ್, ಹೆಚ್.ವಿ.ಕಾಮತ್ ಪಾತ್ರಗಳನ್ನು, ಮನೋಜ್ ಅವರು ಅಮಿನ್ ಚಂದ್ ಗಾಂಧಿ, ಮೌಲಾನ ಆಶ್ರತ್ ಮೊಹಾನಿ ಪಾತ್ರಗಳನ್ನು, ಮಧು ಎಂ. ಕೇಶವ ಬಲಿರಾಮ್ ಹೆಡಗೆವಾರ್, ಡಾ. ಬಾಬು ರಾಜೇಂದ್ರ ಪ್ರಸಾದ್ ಪಾತ್ರಗಳನ್ನು, ಶ್ರೇಯಸ್ ವೆಂಕಟೇಶ್ ವೀರಸಾವರ್‌ಕರ್ ಪಾತ್ರ ಹಾಗೂ ಸಚಿನ್‌ರಾಜ ಅವರು ದತ್ತೋಪಂಥ ಶೇಂಗಡಿ, ಟಿ.ಟಿ.ಕೃಷ್ಣಮಾಚಾರಿ ಪಾತ್ರಗಳನ್ನು ನಿಭಾಯಿಸಿದರು. ಇದೇ ಕಲಾವಿದರು ನಾಟಕದಲ್ಲಿ ಬಂದು ಹೋಗುವ  ಗಾಂಧಿ ಭಕ್ತರು, ಸ್ವಯಂ ಸೇವಕರು ದಲಿತರ ಪಾತ್ರಗಳನ್ನು ನಿರ್ವಹಿಸಿದರು.  ಅನಿತಾ ಕಾರ್ಯಪ್ಪರವರು ನಾಟಕದ  ಸ್ತ್ರೀ ಪಾತ್ರಗಳು ಡಾ. ಸವಿತ ಅಂಬೇಡ್ಕರ್, ರಮಾದೇವಿ ಮತ್ತು ರೇಣುಕಾ ರೇ ಪಾತ್ರಗಳಲ್ಲಿ ಅಭಿನಯಿಸಿದರು. ರಘುಪ್ರಸಾದ್ ನೀನಾಸಮ್ ಅವರಿಂದ ಸ್ಕ್ರೀನ್  ಮೇಲೆ ಮೂಡಿಬಂದ ದೃಶ್ಯ ಚಿತ್ರ ದಾಖಲೀಕರಣ ಗಮನಾರ್ಹ.  ಗೊರೂರು ಅನಂತರಾಜು

“ಇತಿಹಾಸದ ಮೇಲೆ ಬೆಳಕು ಚೆಲ್ಲುವ ನಿಜಮಹಾತ್ಮ ಬಾಬಾ ಸಾಹೇಬ” ನಾಟಕದ ಒಂದು ರಿವ್ಯು ಗೊರೂರು ಅನಂತರಾಜು ಅವರಿಂದ. Read Post »

ಇತರೆ, ರಂಗಭೂಮಿ

ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್‌ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು,

ರಂಗ ಸಂಗಾತಿ

ಗೊರೂರು ಅನಂತರಾಜು

ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್

ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್‌ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು, Read Post »

ಇತರೆ, ರಂಗಭೂಮಿ

“ಅರಳಿ ಕಟ್ಟೆ ಒಂದು ಸುತ್ತು ಹಿನ್ನೋಟ”ಗೊರೂರು ಅನಂತರಾಜು

ರಂಗ ಸಂಗಾತಿ

ಗೊರೂರು ಅನಂತರಾಜು

“ಅರಳಿ ಕಟ್ಟೆ”

ಒಂದು ಸುತ್ತು ಹಿನ್ನೋಟ
ಗೊರೂರು ಹೇಮಾವತಿ ಸ್ಕಿಟ್ ಹಾಸನ ಎಫ್ ಎಂ.ರೇಡಿಯೋದಲ್ಲಿ ಪ್ರಸಾರವಾಗಿದೆ. ಕೆರೆಯೊಂದಿಗಿನ ಸಂಭಾಷಣೆ ಹೊಸತನದಿಂದ ಕೂಡಿ ಪರಿಸರ ಪ್ರೇಮಿಗಳು ಲೈಕ್ ಮಾಡಿದ್ದಾರೆ.

“ಅರಳಿ ಕಟ್ಟೆ ಒಂದು ಸುತ್ತು ಹಿನ್ನೋಟ”ಗೊರೂರು ಅನಂತರಾಜು Read Post »

ಇತರೆ, ರಂಗಭೂಮಿ

ʼರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರʼ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು

ʼರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರʼ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು
ನಾಟಕಗಳ ಪ್ರತಿಯನ್ನು ಹಳೆಯ ಪದ್ಯಗಳ ಜೊತೆಗೆ ಪ್ರಸ್ತುತ ಪದ್ಯಗಳನ್ನು ಒಳಗೊಂಡು ಹಿರಿಯ ರಂಗ ಕಲಾವಿದರ ಮಾರ್ಗದರ್ಶನದೊಂದಿಗೆ ನಾಟಕಕಾರರಿಗೆ ಅನುಕೂಲವಾಗಲೆಂದು ಮರು ಮುದ್ರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ʼರಂಗ ಸೇವೆಯಲ್ಲಿ ಟಿ. ನಾಗರಾಜು, ಮಾಯಸಂದ್ರʼ ವ್ಯಕ್ತಿ ಪರಿಚಯ-ಗೊರೂರು ಅನಂತರಾಜು Read Post »

ಇತರೆ, ರಂಗಭೂಮಿ

́ಗೌಡ್ರು ಗದ್ಲ ನಟ ಬಿಟ್ಟಗೋಡನಹಳ್ಳಿ ರಮೇಶ್ ಗೌಡಪ್ಪ ಪರಿಚಯ-ಗೊರೂರು ಅನಂತರಾಜು

ಗೌಡ್ರು ಗದ್ಲ ನಟ ಬಿಟ್ಟಗೋಡನಹಳ್ಳಿ ರಮೇಶ್ ಗೌಡಪ್ಪ ಪರಿಚಯ-ಗೊರೂರು ಅನಂತರಾಜು
ಬಿಟ್ಟಗೌಡನಹಳ್ಳಿಯ ರಮೇಶ್ ಗೌಡಪ್ಪರವರ ಮನೆ ಮುಂದೆ
 ದೇವನೂರು ಬಾಬಣ್ಣನರ  ಚೆನ್ನಬಸವೇಶ್ವರ ಡ್ರಾಮಾ ಸೀನರಿಯ ರಂಗಸಜ್ಜಿಕೆಯಲ್ಲಿ
 ಜಿಲ್ಲೆಯ ಅನುಭವಿ ಕಲಾವಿದರು ಸೇರಿ
ರಾಜಾ ಸತ್ಯವ್ರತ  ಎಂಬ ಪೌರಾಣಿಕ ನಾಟಕ ಪ್ರದರ್ಶಿಸುತ್ತಿದ್ದಾರೆ

́ಗೌಡ್ರು ಗದ್ಲ ನಟ ಬಿಟ್ಟಗೋಡನಹಳ್ಳಿ ರಮೇಶ್ ಗೌಡಪ್ಪ ಪರಿಚಯ-ಗೊರೂರು ಅನಂತರಾಜು Read Post »

ಇತರೆ, ರಂಗಭೂಮಿ

ನಾಟಕ ವಿಮರ್ಶೆ,ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ-ಗೊರೂರು ಅನಂತರಾಜು,

ರಂಗ ಸಂಗಾತಿ

ನಾಟಕ ವಿಮರ್ಶೆ,ಮೊಬೈಲ್ ಅವಾಂತರಗಳ

ವಿಡಂಬನಾ ನಾಟಕ-

ಗೊರೂರು ಅನಂತರಾಜುತಾತನಿಗೆ ಆಪರೇಷನ್ ಮಾಡುತ್ತಲೇ  ಮೊಬೈಲ್  ಅಟೆಂಡ್ ಮಾಡುವ  ವೈದ್ಯರು ಮಾಡಿದ ಅವಾಂತರ  ನನ್ನ (ಗೊರೂರು ಅನಂತರಾಜು) ಒಂದು ಹನಿಗವನ ನೆನಪಿಸುತ್ತದೆ.,

ನಾಟಕ ವಿಮರ್ಶೆ,ಮೊಬೈಲ್ ಅವಾಂತರಗಳ ವಿಡಂಬನಾ ನಾಟಕ-ಗೊರೂರು ಅನಂತರಾಜು, Read Post »

You cannot copy content of this page

Scroll to Top