ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ
ʼಜೀವಸೆಲೆʼ

ನನ್ನೊಳಗೆ ಇತ್ತು
ನಿನೋಲವ ಚಿತ್ತು
ಹೊರಬರಲು ಎಷ್ಟೋ
ವರುಷಗಳು ಕಾಯ್ದಿತ್ತು
ಕುಡಿ ಬಿಟ್ಟ ಕಾಯಿ
ಮಾಗಿ ಹಣ್ಣಾಗಿತ್ತು
ಎದೆಯೊಳಗಿನ ಭಾವ
ರಸ ರುಚಿಯ ಸವಿಯು
ಅಕ್ಷರದ ರೂಪದಲ್ಲಿ
ಕಾವ್ಯವಾಗಿತ್ತು
ಸುರಿವ ಗುಡುಗು ಸಿಡಿಲಿನ
ಅಬ್ಬರದ ಜಡಿ ಮಳೆ
ಬಿರುಕು ನೆಲದಲಿ
ತೃಪ್ತಿ ಹಾಡಗಿತ್ತು
ಬಿತ್ತುವ ಕಾಲ
ಬೆಳೆವ ಸ್ನೇಹದ ಪೈರು
ಹುಯ್ಯೆನ್ನುವ ಸಂಭ್ರಮ
ಸುಗ್ಗಿಯಾಗಿತ್ತು
ರಾಶಿಯ ಕಣದಲ್ಲಿ
ನಿನ್ನ ನನ್ನಯ ಜೋಡಿ
ಹಂತಿ ಹೊಡೆದೆವು ಕೂಡಿ
ಬಾಳು ತೆನೆಗಾಳು ತಿಂದಿತ್ತು
ಬಣ್ಣ ಬಣ್ಣದ ಬದುಕು
ಕಾಮನ ಬಿಲ್ಲು ತುಂತುರು ಹನಿ
ಕರಗುವ ಮೋಡಿ
ಜೀವ ಸೆಲೆ ಸಾರ್ಥಕವಾಗಿತ್ತು
ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಜೀವಸೆಲೆಯ ಸಾರ್ಥಕತೆಯ ಮಧುರತೆ
ಕವನದ ತುಂಬೆಲ್ಲ ಹರಡಿದೆ
ಸುಧಾ ಶಿವಾನಂದ ಪಾಟೀಲ
ಜೀವನ ಸೆಲೆಯ ಸಾರ್ಥಕತೆ ಬಗ್ಗೆ ಅದ್ಭುತವಾಗಿ ಮೂಡಿಬಂದಿದೆ.
ಸೂಪರ
ಅತ್ಯುತ್ತಮ ಕವನ ಸರ್
ಗೀತಾ ಪಾಟೀಲ
Very beautiful poem sir.
Excellent poem Sir
ಜೇಡ ತನ್ನೊಳಗಿನ ರಸಭಾವದಿಂದ ಬಲೆ ಕಟ್ಟಿ, ಬದುಕಿ ಜೀವ ಸೆಲೆಗಳನ್ನು ಉಕ್ಕಿಸಿದಂತೆ, ಎಲ್ಲೋ ಗುಪ್ತವಾಗಿ ಅಡಗಿರುವ ಭಾವವನ್ನು ಶಬ್ದಜಾಲದಿಂದ ಕಾಮನ ಬಿಲ್ಲಿನಂತೆ ಸಪ್ತ ರಂಗುಗಳನ್ನು ಹೊತ್ತು ಕಾವ್ಯವಾಗಿ ನೇಯ್ದ ಪರಿ ಇಲ್ಲಿದೆ. ಇಲ್ಲಿ ಸುಪ್ತ ಮನದಲ್ಲಿ ಅಡಗಿ ಕುಳಿತ ಒಲವಿದೆ, ಸಂತೃಪ್ತಿ ಇದೆ. ರಾಗಾನುರಾಗಗಳ ಸಂಚಾರವಿದೆ. ಬಂಧುರ ಕಾವ್ಯಬಂಧವಿದೆ. ನವೋದಯದ ಕವಿಗೆ ಅಭಿನಂದನೆಗಳು.
ಅದ್ಬುತ್ ಕವಿತೆ
ಜೀವನ ಸೆಲೆ
ನಿರಂತರ ಇರಲಿ
ಅಕ್ಕಮಹಾದೇವಿ
Excellent Poem Sir