ಹಮೀದ್ ಹಸನ್ ಮಾಡೂರು ಅವರ ಕವಿತೆ-ʼಮಾನವ ನೀನಾಗು.ʼ

ಓ ಪಾಪಿ ಮನುಜನೇ
ಪಾಪದ ಹೊರೆಯ ಹೊತ್ತು
ಬದುಕಿನ ದಾರಿಗೆ ಮುಳ್ಳಾಗದಿರು!,

ಪಾಪದ ಕೊಡ ತುಂಬಿಸಿ
ಪಾಪಿಗಳ ಪಂಕ್ತಿಯಲಿ ನಿಂತು
ಮನುಕುಲಕ್ಕೆ ಕಳಂಕ ನೀ ತಾರದಿರು!,

ಮೇಲು ಕೀಳೆಂಬ ಭೇದ ತೋರಿ
ಅಮಾಯಕರನು ತುಳಿಯದಿರು
ಧರ್ಮಗಳಲಿ ದ್ವೇಷವ ಬಿತ್ತದಿರು!,

ದೇಶಭಕ್ತ ನೀನಾದರೇನು?
ಧರ್ಮರಕ್ಷಕ ನೀನೆಂದರೇನು?
ಮೋಕ್ಷವೆಂದೂ ಲಭಿಸಲಾರದು!,

ಕುಂಬದಲಿ ಮಿಂದು ಎದ್ದರೇನು?
ಮಕ್ಕಾ ಮದೀನ ಸುತ್ತಿ ಬಂದರೇನು?
ಪಾಪ ನಿನ್ನ ಬಿಟ್ಟು ಹೋಗಲಾರದು!,

ಮಾನವನಾಗಿ ಹುಟ್ಟಿ
ರಾಕ್ಷಸರಂತೆ ನೀ ಮೆರೆದಾಡುತಾ
ಮನುಕುಲದ ಶಾಂತಿ ಕದಡುತ್ತಿರಲು!.


Leave a Reply

Back To Top