“ಇರುವುದೊಂದೇ ಭೂಮಿ” ನಾಮದೇವ ಕಾಗದಗಾರ ಅವರ ಮಕ್ಕಳ ಕವಿತೆ

ಹೇಳುವೆ ಕೇಳಿ ನಮ್ಮ ಹಿರಿಯರೇ
ನನ್ನಯ ಸುತ್ತಲಿನ ಪರಿಸರ
ಕಥೆಯ ಹೇಳುವೆ ಬನ್ನಿ
ಭೂಮಿಯ ಮೇಲಿನ ಮರಗಳೆಲ್ಲಾ
ಒಣಗುತಾ ಎಲ್ಲಿಗೋ ಹೊರಟಿವೆಲ್ಲಾ

ಮರಗಳ ನಾಶ ನಿತ್ಯವೂ ಮಾಡುತ
ಹಲವು ಮಾಲಿನ್ಯಗಳ ಸಂಕಟ ನೋಡುತ
ಕಾಂಕ್ರೀಟ್ ಕಾಡು ತಲೆ ಎತ್ತಿ ನಿಂತವು
ಅರಣ್ಯ ಸಂಪತ್ತು ಮರೆಯಾಗಿ ಹೋದವು

ಕುಡಿಯುವ ನೀರಿಗೆ ಬಾಟಲಿ ಬಂತು
ಕೆರೆ ಬಾವಿಯ ಶುದ್ಧ ನೀರು ಎಲ್ಲೋತು
ತಿನ್ನುವ ಆಹಾರ ಪ್ಯಾಕೆಟ್‌ನಲ್ಲಿ ಬಂತು
ಸಾಂಪ್ರದಾಯಿಕ ಅಡುಗೆ ಇಲ್ಲದಾಯಿತು

ನದಿ ಸಾಗರದಲ್ಲಿ ತೇಲುವ ಪ್ಲಾಸ್ಟಿಕ್
ಜಲಚರಗಳೆಲ್ಲ ಚಲಿಸದೆ ಸ್ಟ್ರಕ್
ಮುಖಕ್ಕೆ ಮಾಸ್ಕ್ ಬಂದಾತು
ಉಸಿರಾಡುವ ಗಾಳಿ ಶುದ್ಧವಿಲ್ಲದಾತು

ಹೇಳುವೆ ಕೇಳಿ ನಮ್ಮ ಹಿರಿಯರೇ
ನನ್ನಯ ಸುತ್ತಲಿನ ಪರಿಸರ
ಕಥೆಯ ಹೇಳುವೆ ಬನ್ನಿ
ಭೂಮಿಯ ಮೇಲಿನ ಮರಗಳೆಲ್ಲಾ
ಒಣಗುತಾ ಎಲ್ಲಿಗೋ ಹೊರಟಿವೆಲ್ಲಾ

ಮರಗಳ ನಾಶ ನಿತ್ಯವೂ ಮಾಡುತ
ಹಲವು ಮಾಲಿನ್ಯಗಳ ಸಂಕಟ ನೋಡುತ
ಕಾಂಕ್ರೀಟ್ ಕಾಡು ತಲೆ ಎತ್ತಿ ನಿಂತವು
ಅರಣ್ಯ ಸಂಪತ್ತು ಮರೆಯಾಗಿ ಹೋದವು

ಕುಡಿಯುವ ನೀರಿಗೆ ಬಾಟಲಿ ಬಂತು
ಕೆರೆ ಬಾವಿಯ ಶುದ್ಧ ನೀರು ಎಲ್ಲೋತು
ತಿನ್ನುವ ಆಹಾರ ಪ್ಯಾಕೆಟ್‌ನಲ್ಲಿ ಬಂತು
ಸಾಂಪ್ರದಾಯಿಕ ಅಡುಗೆ ಇಲ್ಲದಾಯಿತು

ನದಿ ಸಾಗರದಲ್ಲಿ ತೇಲುವ ಪ್ಲಾಸ್ಟಿಕ್
ಜಲಚರಗಳೆಲ್ಲ ಚಲಿಸದೆ ಸ್ಟ್ರಕ್
ಮುಖಕ್ಕೆ ಮಾಸ್ಕ್ ಬಂದಾತು
ಉಸಿರಾಡುವ ಗಾಳಿ ಶುದ್ಧವಿಲ್ಲದಾತು

ಹೇಳುವೆ ಕೇಳಿ ನನ್ನಯ ಹಿರಿಯರೇ ಇಲ್ಲಿ
ಪರಿಸರ ಉಳಿಸುವಾ ಎಲ್ಲರೂ ಬನ್ನಿ
ಮರಗಿಡ ಬೆಳೆಸುತಾ ನೀರನು ಉಳಿಸುತಾ
ಇರುವುದು ಒಂದೇ ಭೂಮಿ ನಿಮಗಾಗಿ ಉಳಿಸಿ ಸ್ವಾಮಿ


Leave a Reply

Back To Top