ಕಾವ್ಯಸಂಗಾತಿ
ʼನಿನ್ನ ನೆನಪುʼ
ಕೆ.ಎಂ. ಕಾವ್ಯ ಪ್ರಸಾದ್ ಕವಿತೆ

ನೀ ದೂರವಾದರು ನಿನ್ನ ನೆನಪು ಶಾಶ್ವತ
ದಿನಗಳೇ ಕಳೆದೋಗಿದೆ ಆ ಕ್ಷಣಗಳೇ ಶಾಶ್ವತ!
ಬೆರೆತ ಮನಸುಗಳ ಬೆಸುಗೆಯು ಶಾಶ್ವತ
ಮಾತಿಲ್ಲದ ಆ ಮೌನವೇ ಚಿರಶಾಶ್ವತ!!
ಮೂಕ ಮನದ ಭಾವನೆ ಬೇರೆತಾಗಿದೆ
ಪ್ರೀತಿ ಪ್ರೇಮದ ವಿರಹ ವೇದನೆಯಾಗಿದೆ!
ನಿನ್ನ ನೋಡದ ದೃಷ್ಟಿಯು ಕುರುಡಾಗಿದೆ
ನಿನ್ನ ಗುಂಗಲ್ಲಿ ಸೃಷ್ಟಿಯನ್ನೇ ಮರೆಯಲಾಗದೆ!!
ನಿನ್ನ ನೆನಪೊಂದೆ ಸಾಕು ನಾ ಬದುಕಿರಲು
ನಮ್ಮಿಬ್ಬರ ಸ್ನೇಹದ ಸಾಗರ ನಿರ್ಮಿಸಿರಲು!
ಜೊತೆ ಇರದಿದ್ದರು ಸಂಬಂಧ ಉಳಿದಿರಲು
ಈ ಮಧುರವು ಗಟ್ಟಿಯಾಗಿ ಅಪ್ಪಿಕೊಂಡಿರಲು!!
ಈ ಜನ್ಮದಲ್ಲೇ ಎಲ್ಲ ಕಷ್ಟಗಳು ಕಳೆದೋಗಲಿ
ಮರು ಜನ್ಮವಿದ್ದರೆ ಜೊತೆಗೂಡಿ ಬಾಳುವಂತಾಗಲಿ!
ಪ್ರಕೃತಿಯ ನಡುವೆ ಇರುವೆ ನಿನ್ನೆಗೆ ಮರೆಯುವುದು
ನೀ ಜೀವಂತ ನಿನಗಾಗಿ ಬರೆದೆ ನಾ ಕವಿತೆಯೊಂದು!!
ಕೆ.ಎಂ. ಕಾವ್ಯ ಪ್ರಸಾದ್
