ಕಾವ್ಯ ಸಂಗಾತಿ
ಶಂಕರಾನಂದ ಹೆಬ್ಬಾಳ
ಗಜಲ್


ಮುಗ್ದಜೀವವಿದು ವೈರಿಯ ತುಪಾಕಿಗೆ ಬಲಿಯಾಗಿತ್ತು
ಅರಿಯದ ಪ್ರೇಮಜೋಡಿಗೆ ಮುಯ್ಯಿ ಮುಳುವಾಗಿತ್ತು
ಧರ್ಮಾಂಧರಿಗೆ ಛಾಟಿಯೇಟನು ಬೀಸದಿದ್ದರೆ ಹೇಗೆ
ಮಧುಚಂದ್ರದ ವಿಹಾರವಿದು ಸಾವಿನ ನೆಲೆಯಾಗಿತ್ತು
ಹೊಂಚುಹಾಕಿ ಸಂಚುಮಾಡಿ ಮಸಣ ತೋರಿಸಿದರಲ್ಲ
ಎದೆಯೆಂಬುದು ಧಗಧಗ ಉರಿಯುವ ಕಾಡ್ಗಿಚ್ಚಾಗಿತ್ತು
ಅಮಾನವೀಯ ಘಟನೆಯು ಕಣ್ಣೆದುರು ನಡೆದೀತು
ರೋದಿಸುವ ಹೃದಯದ ವೇದನೆಯು ಮಾಸದಾಗಿತ್ತು
ಅಭಿನವನ ಪ್ರತಿಕಾರವು ಜ್ವಾಲೆಯಾಗಿ ಕುದಿಯುತಿದೆ
ಮತಿಹೀನರಿಗೆ ಪಾಠಹೇಳುವ ಕಾಲ ಸನ್ನಿಹಿತವಾಗಿತ್ತು
ಶಂಕರಾನಂದ ಹೆಬ್ಬಾಳ