ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಗದ ಮೇಲೊಂದು
ಹಿರಿದಿಪ್ಪ ಕಲ್ಯಾಣವೆಂಬ
ಪಟ್ಟಣದಲ್ಲಿ ನೆರೆದರಯ್ಯ
ಅಸಂಖ್ಯಾತ ಶರಣರು
ನಿತ್ಯ ಕಾಯಕ ದಾಸೋಹ
ಲಿಂಗ ಜಂಗಮ ಸೇವೆ
ಬರೆದರಯ್ಯ ಬಂಡಾಯದ
ಲಕ್ಷ ಲಕ್ಷ ವಚನಗಳನ್ನು
ಬಸವಣ್ಣ ಕಟ್ಟಿದನಯ್ಯಾ
ಹಿರಿಯ ಅನುಭವ ಮಂಟಪವ
ಚರ್ಚೆ ವಾದ ಶೂನ್ಯ ಪೀಠ
ಇಲ್ಲೊಬ್ಬ ಅವಿವೇಕಿ
ಅನುಭವ ಮಂಟಪ ಇರಲಿಲ್ಲವೆಂದು
ಹೇಳಿದಳು
ಅರೆ ಹುಚ್ಚನೊಬ್ಬ ಅವಳನ್ನು
ಸಮರ್ಥಿಸುತ್ತಿರುವನಯ್ಯ
ಅನುಭವ ಮಂಟಪ
ಇಲ್ಲ ಎನ್ನುವ ಭಂಡ ಮೂಳರ
ಕರೆದು ಎಡ ಪಾದದ
ಕೆರವ ತೆಗೆದು ಹರಿಯುವ
ಹಾಗೆ ಹೊಡೆ ಎಂದ ನಮ್ಮ
ಬಸವ ಪ್ರಿಯ ಶಶಿಕಾಂತ


About The Author

27 thoughts on “ಡಾ ಶಶಿಕಾಂತ ಪಟ್ಟಣ ರಾಮದುರ್ಗ‌ ಕವಿತೆʼಅನುಭವ ಮಂಟಪʼ”

  1. Vishwanath Patil

    ನಿಜ ನಿಮ್ಮ ಮಾತಿನಲ್ಲಿ ನಮ್ಮ ಆಕ್ರೊಶವೂ ಇದೆ ಸರ್

  2. ಇದಕ್ಕಿಂತ ಚೆನ್ನಾಗಿ ಯಾರೂ ಉತ್ತರ ಕೊಟ್ಟಿರಲಿಕ್ಕಿಲ್ಲ ಸರ್ ಇನ್ನಾದರೂ ನಮ್ಮ ಶರಣರ ವಿಷಯಕ್ಕೆ ಬರದಿರಲಿ ವೈದಿಕ ಪರಂಪರೆಯವರು

  3. ನಿಮ್ಮ ನೇರ ನಡೆ -ನುಡಿಯ ದಿಟ್ಟ ಉತ್ತರದ ಸಾಲುಗಳು
    ಎಲ್ಲರನ್ನೂ ಎಚ್ಚರಗೊಳಿಸುವ ನಿಟ್ಟಿನಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ ಸರ್

    ಸುಧಾ ಪಾಟೀಲ
    ಬೆಳಗಾವಿ

  4. ರಶೀದ್

    ಈ ಕಟು ಸತ್ಯವನ್ನು ಒಪ್ಪಿಕೊ ಮನಸ್ಸು ಮುಖ್ಯವಾಗಿ ವಚನ ಕ್ರಾಂತಿಯ ಜೊತೆ ನಿಲ್ಲ ಬೇಕು ಸರ್

  5. ಬಟ್ಟೆಯಲ್ಲಿ ಸುತ್ತಿ ಸುತ್ತಿ ಬಡದಂಗ ಅದಾವ ,ಮುಟ್ಟಿ ಮುಟ್ಟಿ ನೋಡಬೇಕು, ನೋಡ್ರಿ, ಸರ್,, ಇನ್ನಾದರೂ ಪಾಠ ಕಲಿತಾರೋ ಇಲ್ಲ,,

  6. ಒಳ್ಳೆಯ ಚಾಟಿ ಏಟು…. ನೆರೆಯವರ ಮನೆಯ ದುಖಃಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲ ಸಂಗಮದೇವ… ತಮ್ಮ ತಮ್ಮ ತನುವ ಸಂತೖಸಿಕೊಳ್ಳಿ, ತಮ್ಮತಮ್ಮ ಮನವ ಸಂತೖಸಿಕೊಳ್ಳಿ….ನಮಗ್ಯಾಕೆ ತಮ್ಮ ಉಪದೇಶ..

  7. ನಾಗರಾಜ ಶೆಟ್ಟರ ಹುಬ್ಬಳ್ಳಿ

    ಶರಣರ ವಚನ ಚಳುವಳಿ ಆಶಯ ಸಮಾಧಿ ಮಾಡಲು ಹೊರಟ ಕೆಲ ವೈದಿಕ ಮತ್ತು ನಮ್ಮ ಲಿಂಗಾಯತ ಧರ್ಮದ ದೊಡ್ಡ ಮುಖಂಡರು
    ಇತ್ತೀಚಿಗೆ ಲೋಕಲ್ ವಚನ ಯು ಟ್ಯೂಬ್ ಇಂಟರ್ವ್ಯೂ ನಲ್ಲಿ ವೀಣಾ ಅವರ ಮಾತಿಗೆ ನಾನು ಒಪ್ಪುತ್ತೇನೆ ಭೌತಿಕ ಅನುಭವ ಮಂಟಪ ಇರಲಿಲ್ಲ ಎಂದು ಹೇಳುವ ಮುಟ್ಟಾಳನನ್ನು ಚೆನ್ನಾಗಿ ತೀವಿದಿದ್ದಿರಿ ಸರ್

  8. ಸಂಗಮೇಶ ನಾವಲಗಿ

    ಸರ್ ಬಸವ ಕಲ್ಯಾಣದ ಟಿವಿ ಇಂಟರ್ವ್ಯೂ ನಲ್ಲಿ
    ನಮ್ಮ ಸಮಾಜದ ಒಬ್ಬ ಅತ್ಯಂತ ಹಿರಿಯ ಮುಖಂಡ ಮಾತಾನಾಡುತ್ತಿರುವಾಗ ಅನುಭವ ಮಂಟಪವೆ ಇರಲಿಲ್ಲ ಎಂತಲೂ ಎಲ್ಲಾ ಸ್ವಾಮೀಜಿ ಬಸವ ಸಮಿತಿ ಅಧ್ಯಕ್ಷರನ್ನು ಟೀಕಿಸಿದ್ದಾರೆ
    ಜೊತೆಗೆ ಬಸವನ್ನನವರನ್ನು ಬಸವನ್ನ ಸತ್ತ ಎಂದು ಏಕ ವಚನದಲ್ಲಿ ಹೇಳುತ್ತಾರೆ
    ಅತ್ಯಂತ ಗೊಂದಲಗಳನ್ನು ಹುಟ್ಟು ಹಾಕಿದ ಇಂತವರಿಗೆ ಒಳ್ಳೆಯ ಚಾಟಿ ಏಟು ಕೊಟ್ಟಿದ್ದೀರಿ ಸರ್

  9. ನಿಮ್ಮ ಲೇಖನಿ ತುಂಬಾ ಹರಿತ hipocrate ಜನರಿಗೆ ಚುಚ್ಚಿದ್ದಿರಿ
    ಕಾವಿ ಖಾದಿ ಸಮಾಜ ಮುಖಂಡರು ಇನ್ನೂ ಮೆಲಾದರೂ ಬಡಲಾಗಲಿ
    ಟಿವಿ ಇಂಟರ್ವ್ಯೂ ತೆಗೆದು ಕೊಳ್ಳುವವರು ಮತ್ತು
    ಕೊಡುವವರು ಲಿಂಗಾಯತ ಬಸವಾಯತ ಧರ್ಮದ ಬಗ್ಗೆ ಎಚ್ಚರ ವಹಿಸಿ ಮಾತಾಡ ಬೇಕು
    ನಿಮ್ಮ ಕವನ ಎಚ್ಛರಕೆಯ ಘಂಟೆ

  10. ನಿಮ್ಮ ಧೈರ್ಯ ಅಬ್ಬಾ ಹುಷಾರು ಸರ್, ಸತ್ಯಕಹಿ ಆಗಿರುತ್ತದೆ. ನಿಮ್ಮ ವೈಛಾರಿಕ ಹೋರಾಟಕ್ಕೆ ಮನ ಪೂರಕವಾಗಿ ಅಭಿನಂದನೆಗಳು

  11. Dr Shashikantji We appreciate your guts determination to fight against these Hipocrites
    However believe us Sri We are with u
    It is the high time that All Lingayat
    Mutts Leaders must know their Limits

  12. ಗಂಗಾಧರ ಎಸ್ ವಿಜಾಪುರ

    ಅವರೇ ನಂಬಿದ ಪ್ರಧಾನಿ ಹೊಸ ಪಾರ್ಲಿಮೆಂಟ ಭವನಕ್ಕೆ ಅನುಭವ ಮಂಟಪಂ ಎಂಬ ಹೆಸರಿಡುವ ಪ್ರಸ್ತಾವನೆ ತಂದಿದ್ದೂ, ಲಂಡನ್ ದಲ್ಲಿ ಬಸವೇಶ್ವರ ಮೂರ್ತಿ ಪ್ರತಿಷ್ಟಾಪನೆ ಮಾಡುವಾಗ ಅನುಭವ ಮಂಟಪ ದ ಉಲ್ಲೇಖ ಮಾಡಿದ್ದು ನೆನಪಿಲ್ಲವೇ??? ಇಂತಹ ಮೂರ್ಖರಿಗೆ

Leave a Reply

You cannot copy content of this page