ನಾಗರಾಜ ಜಿ. ಎನ್. ಬಾಡರವರಕವಿತೆ-ಸಾರ್ಥಕತೆ

ದಾರಿಯ ತೋರುವುದು ಬೆಳಕು
ಬದುಕನ್ನ ಬೆಳಗುವುದು ಬೆಳಕು
ಕತ್ತಲನ್ನು ನೀಗುವುದು ಬೆಳಕು
ಜೀವನವನ್ನು ಅರಳಿಸುವುದು ಬೆಳಕು

ಮಿಂಚುಹುಳು ಮಿಂಚಂತೆ ಮಿಂಚುವುದು
ಸುತ್ತ ಮುತ್ತಲೂ ಬೆಳಕನ್ನ ಬೀರುವುದು
ಕತ್ತಲೆಯ ರಾತ್ರಿಯನ್ನು ಬೆಳಗುವುದು
ಕ್ಷಣಕಾಲ ಮಿಂಚಿ ಮರೆಯಾಗಿ ಹೋಗುವುದು

ಕ್ಷಣಿಕ ಬದುಕಲ್ಲಿ ಜಗವನ್ನ ಬೆಳಗುವುದು
ತನ್ನ ಇರುವಿಕೆಯ ಎಲ್ಲೆಡೆಯು ತೋರುವುದು
ಬೆಳಕನ್ನು ಬೀರುತ್ತ ತನ್ನತ್ತ ಸೆಳೆಯುವುದು
ಅಲ್ಪ ಕಾಲದ ಜೀವನವನ್ನು ಸಾರ್ಥಕ ಗೊಳಿಸಿಕೊಳ್ಳುವುದು

ನೀರ ಮೇಲಿನ ಗುಳ್ಳೆಯಂತೆ ನಮ್ಮ ಬದುಕು
ಇರುವಷ್ಟು ಕಾಲ ಮಾಡಬೇಕು ಒಳ್ಳೆಯ ಬದುಕು
ಒಳಿತನ್ನೇ ಮಾಡಿ ಜಗದಲ್ಲಿ ಒಳಿತನ್ನೇ ಹುಡುಕು
ಮಾಡಬೇಡ ಜೀವನದಿ ಯಾರಿಗೂ ಕೆಡುಕು


Leave a Reply

Back To Top