ಸವಿತಾ ದೇಶಮುಖ್ ಅವರ ಕವಿತೆ-ಭರವಸೆ

ಭರವಸೆಯ ಭರವಸೆಯಲಿ
ಅದರ ಬಾಹು ಬಂಧನದಲಿ
ಹುಟ್ಟಿದೊಂದ ಮಹದಾಸೆಯು
ಚಿಗುರಿ ಮತ್ತೆ ಎತ್ತರಕ್ಕೆ ಬೆಳೆಯಲು….

ಭರವಸೆಯ ಆಶಯದಲ್ಲಿ
ಉದಯಿಸಿದ ಜೀವನದಲಿ
ಹುಟ್ಟು ಬಾಳಿನ ನಲುವಿನಲಿ
ಪೂರ್ಣತೆಯ ನಿಲುವನಕೆ ಸಾಗಲು..,.

ಸಾಗುತಿಹುದು ಪ್ರತಿ ಹೆಜ್ಜೆಯು
ತಾಳಮೇಳಗಳ ದಾಟಿಯು
ಅಜ್ಞಾನ ಅಳಿಸುವ ಪಥವು
ತೋರಿದೊಂದು ಸೌಖ್ಯದ ದಾರಿಯು…

ಭರವಸೆಯ ಎದೆಯ ಆಳದಿಂದ
ಹೊರಹೊಮ್ಮುವ ಶಬ್ದಗಳಲಿ
ಅದುಮಿಟ್ಟ ಭಾವಗಳು ಚಿಮ್ಮಿ
ತಲುಪಿ ಕವಿ ಹೃದಯಗಳಿಗೆ …

ಜೀವನವೇ ಭರವಸೆ
ಭರವಸೆಯಲಿ ಜೀವನವೆಂದು ……


Leave a Reply

Back To Top