ಐಗೂರು ಮೋಹನ್ ದಾಸ್, ಜಿ. ಅವರ ಕವಿತೆ-‘ಪ್ರಣಯದ ಮರಣ…..!’

ಈ ಹಿಂದೆ….
ಮರಣ – ಸಾವು ಎಂದರೇ
ಸಾಕು ಮನದಲ್ಲಿ
ಸೃಷ್ಟಿಯಾಗುತ್ತಿತ್ತು ಬಹಳ
ನಡುಕು- ಭಯ….!
ಈಗ…..
ಮರಣ – ಸಾವು ಎಂದರೇ
ಸಾಕು ಮನದಲ್ಲಿ
ಸೃಷ್ಟಿಯಾಗುತ್ತಿದೆ ಮಧುರವಾದ
ಸುಂದರ ಪ್ರಣಯ….!!

‘ಮರಣ’ವನ್ನು ಪ್ರೀತಿಸುವಂತಹ
ಒಳ್ಳೆಯ ಶುದ್ಧ ‘ಮನಸ್ಸು’ನ್ನು
ಭಗವಂತ ನನಗೆ
ಕರುಣಿಸಿದ್ದಾನೆ… !
ಈ ‘ಪ್ರಣಯ’ದಲ್ಲಿ
ನಿನಗೆ ಸೋಲು ಇಲ್ಲ
ಎಂದು ‘ಗ್ಯಾರಂಟಿ’ ಸಹ
ನೀಡಿದ್ದಾನೆ….!!.

ಸಾವು – ಹೆಣ ಎಂದ
ತಕ್ಷಣ ಹಿಂದಕ್ಕೆ ಹೆಜ್ಜೆ
ಹಾಕುತ್ತಿದ್ದ ಪಾದಗಳು…..
ಈಗ ಅವುಗಳನ್ನು ಅಪ್ಪಿ
ಮುದ್ದಾಡಲು ಅವಸರದಿಂದ
ಮುಂದಕ್ಕೆ ಹೆಜ್ಜೆ ಹಾಕುತ್ತಿದೆ….!!.

ಈ ಭೂಮಿಯಲ್ಲಿ
ನಮ್ಮ ಕಣ್ಣು ಮುಂದೆ
ಓಡಾಡುವ ಜೀವಂತ
ಹೆಣ- ಪಿಶಾಚಿಗಳಿಕ್ಕಿಂತ….
ಕೇವಲ ವಿಸ್ಮಯ ಕಥೆಗಳಲ್ಲಿ
ಓಡಾಡುವ ಭೂತ-ಪ್ರೇತಗಳೊಂದಿಗೆ
ಮಸಣದಲ್ಲಿ ಕಾಲ ಕಾಲ ಕಳೆಯುವುದೇ
ಮನಕ್ಕೆ ನೆಮ್ಮದಿ – ಶಾಂತಿ….!!.

ಪ್ರಣಯದ ಮರಣದಲ್ಲಿ
ಜೋಡಿ ಜೀವಗಳು ಇಲ್ಲ…!
ಕಂಡ ಕನಸುಗಳೊಂದಿಗೆ
ಒಂಟಿ ಜೀವ ಮಾತ್ರ
ನೆಮ್ಮದಿಯ ‘ಸಮಾಧಿ’ಯಲ್ಲಿ
ಸುಖನಿದ್ರೆ….!!!.


One thought on “ಐಗೂರು ಮೋಹನ್ ದಾಸ್, ಜಿ. ಅವರ ಕವಿತೆ-‘ಪ್ರಣಯದ ಮರಣ…..!’

Leave a Reply

Back To Top