ಲೋಹಿತೇಶ್ವರಿ ಎಸ್ ಪಿ ಅವರ ಕವಿತೆ-ಕ್ವಚಿತ್ತಾದ ಭಾವ

ಬಾಳಿನ ಬಹುಪಾಲು ಕಳೆದಿರುವೆ
ಕ್ವಚಿತ್ತಾದ ನೆನಪಲಿ
ಮರಳಿ ಬಾರದ ಪಟ್ಟಿಯಲ್ಲಿ
ಸಮಯವೆಂಬ ಅಮೃತ
ನನ್ನನೆ ನಂಜಾಗಿಸಿಕೊಂಡೆಯಲ್ಲಾ ….
ಎಂದು ಗಹಗಹಿಸಿ ನಗತೊಡಗಿದೆ…
ವ್ಯಂಗ್ಯದಿ….

ಮೌನವಾಗಿ ನಿಲ್ಲದೆ ಬೇರೆ ವಿಧಿಯಿಲ್ಲ
ಕ್ವಚಿತ್ತಾದ ನೆನಪೆಂಬ ಭಾವ
ಅನಿರೀಕ್ಷಿತ……
ಬಾಳಪಯಣದ ಹಲವು
ತಿರುವಿನಲೊಂದು
ತಿರುವು ಪಡೆದ ಭಾವ ಮಾತ್ರ

ಈಗೇನಗೆ ಅದರ ಬಗೆಗೆ ಅಂಥ
ಕ್ರೋಧವಾಗಲೀ,
ದ್ವೇಷವಾಗಲೀ,
ತಾತ್ಸಾರವಾಗಲೀ ಏನೂ ಇಲ್ಲ
ಅಂತೆಯೇ ಪ್ರೀತಿ, ವಿಶ್ವಾಸವೂ ಇಲ್ಲ


Leave a Reply

Back To Top