ಮುತ್ತು ಬಳ್ಳಾ ಕಮತಪುರ ಕವಿತೆ-ಪ್ರಜಾ ಗ್ರಂಥ

ಪ್ರಜಾಪ್ರಭುತ್ವದ ನಾಡಲಿ
ಪ್ರಜಾತಂತ್ರ ಬೆಳಗಲಿ
ಜನನುಡಿಯ ಆಶೆಯಗಳಿಗೆ
ಮತ್ತೇ ಶಕ್ತಿ ದೊರಕಲಿ

ಸಂವಿಧಾನ ಪೀಠಿಕೆಯ
ನಿಜ ಅರ್ಥವಿವರಣೆ
ಸೌಹಾರ್ದತೆ ಬಾಳಲಿ
ನಿತ್ಯನೂತನ ಉಳಿಯಲಿ

ಮನದ ಕಲ್ಮಶ ತೊಳೆದು
ರಾಷ್ಟ್ರಪ್ರೇಮ ಸಾರಲಿ
ನಾವೆಲ್ಲರೂ ಒಂದಾಗಿ
ಅಖಂಡತೆ ಪ್ರಜ್ವಲಿಸಲಿ

ಪ್ರಜಾ ಗ್ರಂಥವ ಓದಿರಿ
ಗಣರಾಜ್ಯ ಉಳಿಯಲಿ
ಭಾರತದ ಕೀರ್ತಿ ಹರಡಲಿ
ಕೋಮು ಭಾವ ತೊಲಗಲಿ

ತರತಮ ಮರೆಯೋಣ
ನಿತ್ಯ ಹಸಿರು ಬೆಳೆಸೋಣ
ವಿವಿಧತೆಯಲಿ ಏಕತೆಯ
ಭವ್ಯ ನಾಡನು ಕಟ್ಟೋಣ


Leave a Reply

Back To Top