ವೈ.ಎಂ.ಯಾಕೊಳ್ಳಿ ಅವರಹೊಸ ಗಜಲ್

ಬರೆದಂತೆಯೆ ಬದುಕಲಾಗುವದಿಲ್ಲ ನಮಗೆ
ಇರುವಂತೆಯೆ ಹೇಳಲಾಗುವದಿಲ್ಲ‌ ನಮಗೆ

ಯಾರ ಮನಸನೂ ಅರಿಯಲಾಗದು ಇಲ್ಲಿ
ಮುಚ್ಚಿದ ಮನ ತಿಳಿಯಲಾಗುವದಿಲ್ಲ‌ ನಮಗೆ

ನಾಟಕ ಕೃತ್ರಿಮತೆಗೆ ಮೊದಲ ಆದ್ಯತೆ ಸಾಕಷ್ಟಿದೆ
ಬಣ್ಣ ಹಚ್ಚಿದವರ ಗುರ್ತಿಸಲಾಗುವದಿಲ್ಲ ನಮಗೆ

ನ್ಯಾಯಾನ್ಯಾಯದ ಮಾತನ್ನು ಸಾಕಷ್ಟು ಆಡುತ್ತಾರೆ
ಹೃದಯವಂತರನು ಹುಡುಕಲಾಗುವದಿಲ್ಲ ನಮಗೆ

ಪಾತ್ರದ ಡೈಲಾಗು ಕೇಳಿ ಮೋಸ ಹೋಗದಿರು ಜೋಗಿ
ಸುಳ್ಳಿಗೆ ಸತ್ಯದ ವೇಷ ತಡೆಯಲಾಗುವದಿಲ್ಲ ನಮಗೆ


One thought on “ವೈ.ಎಂ.ಯಾಕೊಳ್ಳಿ ಅವರಹೊಸ ಗಜಲ್

  1. ನುಡಿದಂತೆ ನಡೆದವರು ಶರಣರು….
    ಮನಸ್ಸಿಗೂ ನಾಲಿಗೆಯ ನಡುವೆ ಫಿಲ್ಟರ್ ಅಳವಡಿಸಿಕೊಂಡೇ ಮಾತಾಡುವವರು ಅಧಿಕ ಇಂದಿನ ಜಗದಲಿ.
    ಕೃತ್ರಿಮ ಬಣ್ಣಗಳಲಿ ನೈಜತೆ ಕಳೆದು ಹೋಗಿದೆ.

Leave a Reply

Back To Top