ಗಾಯತ್ರಿ ಎಸ್ ಕೆ ಅವರ ಕವಿತೆ-ನಿನ್ನ ನೆನಪಲ್ಲಿ ನಾ..

ಹುದುಗಿರುವ ನೆನಪನ್ನು
ಹೊರಗೆಳೆಯುವೆ
ಮನಸ್ಸ ತೇಜ ನೀ..

ಭಾವನೆಯಲ್ಲಿ
ಪ್ರತಿಬಿಂಬಿಸುವೆ
ಏನೂ ಮಾಡದೇ
ನಾನಿರುವೆ..

ಮನಸ್ಸ ಕೋಪ ನೀ
ಮನದ ತಾಪ ನೀ
ಹನಿ ಹನಿಯ ಮಳೆಯೂ ನೀ..

ಅನುರಾಗವ ಎಸಗಿದೆ
ಅನುಬಂಧವ ಬೆಳೆಸಿದೆ
ಹುಸಿ ಕೋಪವು ತಾಳದೆ
ಮಾತಾನಾಡಿಸಿದೆ..

ಸಂತೋಷವು ನಿನ್ನಲ್ಲಿ
ಹರುಷವು ನನ್ನಲ್ಲಿ
ಸಮಾನ ಅಭಿಪ್ರಾಯ
ಸ್ನೇಹ ನಡೆನುಡಿ..

ಕಾಡಬೇಡ ನೀನು
ಕನವರಿಸುವೆ ನಾನು
ಜಗಳವಿಲ್ಲ
ಅನುಮಾನವೂ ಇಲ್ಲ
ಸಹೃದಯದ ಸಮಾನತೆ


Leave a Reply

Back To Top