ಕಾವ್ಯ ಸುಧೆ(ರೇಖಾ) ಅವರ ಕವಿತೆ-ಸೆಳೆತ

ಯಾವ ಮಾಯಾ ಜಾಲ
ಅದಾವ ಶೃತಿ ಲಯ
ನಿನ್ನೊಲವ ಪರಿ ಸುಜಲ
ಶ್ಯಾಮ ನಿನ್ನ ಪರಿಣಯ

ಮಿಡಿವ ಮುರಳಿಯ ಗಾನ
ಭಾವಕೆ ತುಡಿವ ಸಮ್ಮೋಹನ
ಯಮುನಾ ತೀರದ ಚೋರನ
ಸೆಳೆತಕೆ ಸಿಲುಕಿ ಬಂಧಿಯಾದೆನ

ಗೋಕುಲ ಗೊಲ್ಲನ ಪ್ರೀತಿಯ
ಅರಸಿ ಹೊರಟ ರಾಧೆಯ
ಮನವ ನೀ ಅರಿಯದಾದೆಯ
ಹೃದಯ ಮಾತನು ಆಲಿಸೆಯ

ಲೋಕ ಪೊರೆವ ಮಾಧವ
ಬಯಸಿ ಬಂದೆ ಸಂಗವ
ಕಾಣೆ ಸರ್ವಪ್ರಿಯ ಬಂಧುವ

Leave a Reply

Back To Top