ಕಾಡಜ್ಜಿ ಮಂಜುನಾಥ-ಜ್ಞಾನದ ಕಂದೀಲುಗಳಿಗೆ ನಮಿಸೋಣ

ಮುಗ್ದ ಮನಗಳಿಗೆ ಆಸೆಯ ರೆಕ್ಕೆಯ ಮೂಡಿಸಿ
ಪ್ರೀತಿಯ ಮಾತಿನಲಿ ಅಕ್ಷರಬೀಜವ ನಾಟಿಸಿ;
ಅರಿಯದ ಹೃದಯಗಳಲಿ ಅರಿವನು ಮೊಳಗಿಸಿ
ವಾಸ್ತವ ಬದುಕನು ಸೂಕ್ಷ್ಮದಿ ಪರಿಚಯಿಸಿ..!!!!

ಸತ್ಯದ ದಾರಿಯ ಮಾರ್ಗವ ತೋರುತ
ಸರಿತಪ್ಪುಗಳ ತಿದ್ದಿ ತೀಡಿ ಬೆಂಬಲವಾಗಿ ನಿಲ್ಲುತ
ಸ್ನೇಹಪ್ರೀತಿಯ ಮೊಳಗಿಸಿ ಸೌರ್ಹಾದತೆ ಮೂಡಿಸುತ
ಇಲ್ಲಗಳ ಮನದಲ್ಲಿ ಎಲ್ಲವುಗಳ ಬೆಳೆಸುತ….!!

ಬದುಕಿನ ಕಷ್ಟಕೆ ಅಕ್ಷರಗಳನೇ ಫಲವಾಗಿಸಿ
ಮೌಲ್ಯಗಳ ಮನದಲಿ ಮೌನದಿ ನಾಟಿಮಾಡಿಸಿ
ಆತ್ಮಸ್ಥೈರ್ಯವೆನ್ನುವ ತಂಗಾಳಿಯ ಮನಕೆ ತಾಗಿಸಿ
ಭವಿಷ್ಯದ ಹಾದಿಗೆ ಯಶಸ್ಸಿನ ಕಂದೀಲಾಗಿಸಿ ….!!!

ಅಜ್ಞಾನವ ಅಳಿಸಿ ಸುಜ್ಞಾನವ ಬೆಳಗಿಸುತ
ಸಾಧನೆಗೆ ಬೆನ್ನುತಟ್ಟಿ ಹಾರೈಸಿ ಹರಸುತ
ಸಮಾಜದ ಏರಿಳಿತಕೆ ಜ್ಞಾನವೆಂಬ ನೀರೆರೆಯುವ
ಅಕ್ಷರ ದೈವಗಳಿಗೆ ಕೋಟಿ ಕೋಟಿ ಪ್ರಣಾಮಗಳು….!!


Leave a Reply

Back To Top