ಪ್ರಸ್ತುತ

ವಿಶ್ವಾಸದ್ರೋಹಿ ನೇಪಾಳ

Federal Parliament's winter session begins

ಸಂಗಮೇಶ ಎನ್ ಜವಾದಿ


ವಿಶ್ವಾಸದ್ರೋಹಿ ನೇಪಾಳದಲ್ಲಿ ಭಯಂಕರ ಪ್ರಕೃತಿ ವಿಕೋಪ ಆದಾಗ ಇದರ ಸಂಕಷ್ಟಕ್ಕೆ ಕೈಜೋಡಿಸಲು ಮೊದಲು ಬಂದಿದ್ದು ಮತ್ತು ನೆರವಾಗಿದ್ದು ಭಾರತ ದೇಶ. ನೇಪಾಳಕ್ಕೆ ಭಾರತದ ಸಹಾಯ, ಸಹಕಾರ ಬೇಕು ಜೊತೆಗೆ ಆರ್ಥಿಕ ಸಹಾಯ ಸಹ ಬೇಕೇ ಬೇಕು, ಇವರ ಯುವಕ ಯುವತಿಯರಿಗೆ ದುಡಿಯಲು ಭಾರತ ಬೇಕು.ಇವರ ವಿದ್ಯಾರ್ಥಿಗಳಿಗೆ ಶಿಕ್ಷಣ ಕಲಿಯಲು ಭಾರತ ದೇಶ ಬೇಕು.ಭಾರತದಲ್ಲಿ ಸೀಗುವ ಪ್ರತಿಯೊಂದು ವಸ್ತುಗಳ ಸಹಾಯದ ಅಗತ್ಯತೆ ನೇಪಾಳ ಜನರಿಗೆ ಬೇಕು ಹಾಗೂ ಭಾರತದ ಸಹಾಯ ಇವರಿಗೆ ಯಾವತ್ತೂ – ಯಾವಾಗಲೂ ಅವಶ್ಯಕತೆ ಇದ್ದೆ ಇರುತ್ತದೆ ಎನ್ನುವುದು ಅಲ್ಲಿನವರಿಗೆ ಗೊತ್ತು

ಆದರೆ ಇದಕ್ಕಿದಂತೆ ನಮ್ಮ ಸಹಾಯವನೆಲ್ಲಾ ನೇಪಾಳದವರು ಮರೆತು ಕೆಲವು ದಿನಗಳಿಂದ ಭಾರತದ ವಿರುದ್ಧ
ವಿಚಿತ್ರವಾಗಿ ವರ್ತನೆ ಮಾಡುತ್ತಿದ್ದಾರೆ ಎನ್ನುವುದು ಪ್ರತಿಯೊಬ್ಬ ಭಾರತೀಯರು ಗಂಭೀರವಾಗಿ ಪರಿಗಣಿಸಬೇಕು ಮತ್ತು ಪರಿಗಣಿಸುವುದು ಅತಿ ಅವಶ್ಯಕತೆ ಇದೆ.


ಹಾಗೆ ನೇಪಾಳದವರ ಚೈನೀಸ್ ಫಾಸ್ಟ್ ಫುಡ್ ವೆಂಬ ಹೆಸರಿನ ಗೂಡಂಗಡಿ ಭಾರತದ ಯಾವ ರಾಜ್ಯ ಯಾವ ಜಿಲ್ಲೆ ಯಾವ ನಗರದಲ್ಲಿ ಇಲ್ಲ ಹೇಳಿ? ಬ್ಯುಟಿ ಪಾರ್ಲರ್ ಮಾಸಾಜ್ ಪಾರ್ಲರ್ ಗಳಲ್ಲಿ ಇವರ ಯುವತಿಯರದ್ದೇ ಕಾರುಬಾರು.ಇವರ ಯುವಕ ಯುವತಿಯರು ಭಾರತಕ್ಕೆ ಬಂದು ಇಲ್ಲಿ ದುಡಿದು ಇಲ್ಲೇ ತಮ್ಮ ಜೀವನವನ್ನ ಸಾಗಿಸುತ್ತಿದ್ದಾರೆ, ಅಂದು ನೇಪಾಳದಲ್ಲಿ ಭೂಕಂಪ ಆದಾಗ ಸಹಾಯಕ್ಕೆ ಮೊದಲು ಧಾವಿಸಿದು ಭಾರತ ದೇಶವೇ ಎನ್ನುವುದು ನೇಪಾಳದ ಇಂದಿನ ಕುತಂತ್ರಿ ಸ್ವಾರ್ಥ ರಾಜಕೀಯ ಮುಖಂಡರಿಗೆ ಮರೆತು ಹೋಗಿದೆ ಎನ್ನಬಹುದು,ಮರೆತು ಭವ್ಯ ಭಾರತದ ಬಗ್ಗೆ ಹಗುರವಾಗಿ ಅಲ್ಲಿನ ನೀಚ ರಾಜಕೀಯ ಪುಂಡರು ಮಾತನಾಡುತ್ತಿದ್ದಾರೆ.


ಸಧ್ಯ ಈಗ ಸುನಾಮಿಯಂತೆ ಅಪ್ಪಳಿಸುತ್ತಿರುವ ಕೊರೋನಾ ವೈರಸ್ ಹಾವಳಿಯನ್ನು ತಡೆಗಟ್ಟಲು ಭಾರತದಿಂದ ಸುಮಾರು 571 ಟನ್ ಗಳಷ್ಟೂ ವೈದ್ಯಕೀಯ ಉಪಕರಣ,ವೈದ್ಯಕೀಯ ಸವಲತ್ತು,ಆಹಾರ ಸಾಮಗ್ರಿ,ನೀರು, ಹಾಗೂ ಸಿಬ್ಬಂದಿಗಳನ್ನ ಕಳುಹಿಸಿ ಕೊಟ್ಟು ನೇಪಾಳಕ್ಕೆ ಮಾನವೀಯ ನೆಲೆಗಟ್ಟಿನಲ್ಲಿ ಸಹಾಯಸ್ತ ಚಾಚಿದೆ. ಇಷ್ಟೆಲ್ಲಾ ನಿಸ್ವಾರ್ಥದಿಂದ ಸೇವೆ ಮಾಡಿರುವ ಮತ್ತು ನಿರಂತರವಾಗಿ ಸಹಾಯ ಮಾಡುತ್ತಿರುವ
ಸಹಾಯವನ್ನು ಉಪಯೋಗಿಸಿಕೊಂಡು – ಉಪಯೋಗಿಸಿಕೊಳ್ಳುತ್ತಿರುವ ಇವರು ಇದೀಗ ಭಾರತದ ವಿರುದ್ಧವೇ ಹೀನ ಬುದ್ಧಿ ನೇಪಾಳ ಪ್ರದರ್ಶನ ಮಾಡುತ್ತಿದೆ. ಭಾರತದಿಂದ ನೀಡಿರುವ ಸಕಲ ಸೌಲಭ್ಯಗಳನ್ನು ಉಪಯೋಗಿಸಿ ಮೈಮರೆತು ಈಗ ನೇಪಾಳ ಇಂದು ಪ್ರಜಾಪ್ರಭುತ್ವ ವಿರೋಧಿ ದೇಶ ಚೀನಾದ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ.ಚೀನಾ ಯಾವ ರೀತಿಯಲ್ಲಿ ನೇಪಾಳಕ್ಕೆ ಹೇಳುತ್ತದೇಯೂ ಹಾಗೆ ಅದೇ ತರಹ ನಮ್ಮ ವಿರುದ್ಧ ಕೆಲಸ ಮಾಡುತ್ತಿದ್ದೆ.ಯಾವುದೇ ರೀತಿಯಲ್ಲಿಯೂ ಚೀನಾ,ನೇಪಾಳಕ್ಕೆ ಸಹಾಯ ಹಾಗೂ ಸಹಕಾರವಂತೂ ಖಂಡಿತಾ ಮಾಡಲ್ಲಾ ಆದರೆ ಚೀನಾದ ಕಪಟದಿಂದ  ಭಾರತದ ಮೇಲೆ ವೈಷಮ್ಯ ಕಾರುತ್ತಿದೆ ನೇಪಾಳ.ಇದಲ್ಲದೆ
ತನ್ನ ದೇಶದ ಹೊಸ ಭೂಪಟವನ್ನ ಪ್ರಕಟಿಸಿ ಭಾರತದ ಸೀಮೆಯ ಕಾಲಪಾನಿ,ಹಾಗೂ ಲೆಪುಲೆಕ್ ತನ್ನದು ಭಾರತ ಇದನ್ನ ಅಕ್ರಮವಾಗಿ ಆಕ್ರಮಿಸಿ ಕೊಂಡಿದೆ ಹಾಗೂ ತಾನು ಇದನ್ನ ಭಾರತದಿಂದ ವಶಪಡಿಸಿಕೊಳ್ಳುತ್ತೇನೆ ಎಂದು ಹೇಳಿದೆ ಎಷ್ಟೇಲ್ಲಾ ಸಹಾಯ ಮಾಡಿದರು ನೇಪಾಳಕ್ಕೆ ಮಾನವೀಯತೆ ಗೊತ್ತಿಲ್ಲ ಅಂತಾ ಕಾಣುತ್ತದೆ. ಜೊತೆಗೆ ಸಹಕಾರತತ್ವದ,ಮಾನವೀಯ ಮೌಲ್ಯಗಳ, ಮೌಲ್ಯಾಧಾರಿತ ಸಿದ್ದಾಂತಗಳ ಕುರಿತು ಎಳಷ್ಟು ಕಾಳಜಿ ಇಲ್ಲವೆಂದು ನಮಗೆ ತೋರುತ್ತದೆ.


ಇಂದಿನ ನೇಪಾಳದ ಪ್ರಧಾನಿ ಕೋರೋನಾ ವೈರಸ್ ಹರಡಿದ್ದು ಚೀನಾದ ವುಹಾನ್ ಅಲ್ಲ ಬದಲಾಗಿ ಭಾರತ ಹಾಗೂ ಇದು ಆತಿ ವೇಗವಾಗಿ ಸಮಾಜಕ್ಕೆ ಹರಡಿಸುತ್ತಿದೆ ಎಂದು ನೇಪಾಳದ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದಾರೆ. ನೋಡಿ ಇದು ಎಂತಹ ಅವಿವೇಕದ ಮಾತು, ವಿಶ್ವ ವಿಶ್ವವೇ ಇಂದು ಚೀನಾದ ಮೇಲೆ ಕಿಡಿಕಾರುತ್ತಿದ್ದಾಗ (ಕಿಡಿಕಾರುತ್ತಿರುವಾಗ)ಈ ವಿಶ್ವಾಸದ್ರೋಹಿ ನೇಪಾಳ ಮಾತ್ರ ಭಾರತದ ವೈರಸ್ ಎಂದು ಬೊಬ್ಬೆ ಹಾಕುತ್ತಿದೆ. ಇದು ಹೀಗೆ ಹೇಳಿದರೆ ಭಾರತಕ್ಕೆ ಯಾವುದೇ ರೀತಿಯಲ್ಲಿಯೂ ಹಾನಿಯಾಗಲ್ಲ,ಯಾಕೆಂದರೆ ಕೊರೋನಾ ವೈರಸ್ ಚೀನಾದ ಕುತಂತ್ರದಿಂದ ಜನ್ಮಪಡೆದ ವೈರಸ್ ಎಂಬುದು ಜಗತ್ತಿಗೆ ಗೊತ್ತಿದೆ. ಆದಕಾರಣ ನೇಪಾಳ ಏಷ್ಟೇ ನೀಚ ಬುದ್ಧಿ ತೋರಿಸಿದರು ಫಲಪ್ರದ ಖಂಡಿತಾವಾಗುದಿಲ್ಲ.
ಇದರ ಹಿಂದೆ ಯಾರು ಇದ್ದಾರೆ ಅನ್ನುವುದು  ಜಗತ್ತಿಗೆ ಹಾಗೂ ನಮ್ಮಗೆಲ್ಲರಿಗೂ ಗೊತ್ತು ಅದೇ ಕುತಂತ್ರೀ ಚೀನಾ ಎಂಬುದು.ಆದರೆ ಚೀನಾದ ಬಗೆ ಒಂದೇ ಒಂದು ಮಾತನಾಡುತ್ತಿಲ್ಲ, ಯಾಕೇ ! ಎನ್ನುವುದೇ ದೊಡ್ಡ ಯಕ್ಷ ಪ್ರಶ್ನೆ ? ಚೀನಾವು ಯಾವ ಕುತಂತ್ರಿ ಬುದ್ಧಿ ಉಪಯೋಗಿಸಿ ನೇಪಾಳವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ ಎನ್ನುವುದೇ ತಿಳಿಯದ ವಿಚಾರವಾಗಿದೆ ಮತ್ತು ಯಾವುದೇ ರೀತಿಯಲ್ಲಿಯೂ (ನೇಪಾಳಕ್ಕೆ) ಸಹಾಯ ಮಾಡದ ಜನವಿರೋಧಿ ದೇಶವಾದ ಚೀನಾದ ಬಗೆ ಮಾತನಾಡದೇ ಭಾರತ ದೇಶದ ಬಗ್ಗೆ ಮಾತನಾಡುತ್ತಿರುವ ನೇಪಾಳಕ್ಕೆ ಸಧ್ಯ ಬುದ್ಧಿ ಭ್ರಮೆ ಯಾಗಿದೆ ಎನ್ನಬಹುದು.


ಭಾರತದಂತಹ ಬಲಿಷ್ಠ ದೇಶ ಮುಂದೆ ನೇಪಾಳ ಯಾವ ಲೆಕ್ಕ,ಯಾವುದೇ ರೀತಿಯಲ್ಲಿಯೂ ಭಾರತದ ಎದುರಿಗೆ ನಿಲ್ಲುವ ತಾಕತ್ತು ನೇಪಾಳಕ್ಕೆ ಖಂಡಿತಾ ಇಲ್ಲ,ಚೀನಾದ ಬೆಂಬಲದಿಂದ ಇಷ್ಟೊಂದು ಹಾರಡುತ್ತಿರುವ ನೇಪಾಳಕ್ಕೆ ಬುದ್ಧಿ ಕಲಿಸುವ ದಿನಗಳು ದೂರವಿಲ್ಲ ಎನ್ನುವುದು ಅಲ್ಲಿನ ಹೀನ ರಾಜಕೀಯ ಮುಖಂಡರು ಅರಿತು ನಡೆದರೆ ಉತ್ತಮ ಇಲ್ಲವಾದಲ್ಲಿ ನೀವು ಮಾಕಾಡೆ ಮಲಗುವ ದಿನ ದೂರವಿಲ್ಲ ಎನ್ನುವುದು ಮರೆಯಬೇಡಿ.
———

Leave a Reply

Back To Top