ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತಂಗಾಳಿ!

ಕೆ.ಬಿ.ವೀರಲಿಂಗನಗೌಡ್ರ

ಅವಳೆಂದರೆ..
ತೊರೆದವನಿಗೆ
ಅರಳಿಮರವಾದವಳು

ಅವಳೆಂದರೆ..
ಕೂಡಬೇಕೆಂದವನಿಗೆ
ಅನುಭವಮಂಟಪವಾದವಳು

ಅವಳೆಂದರೆ..
ಹೋರಾಟಗಾರನಿಗೆ
ಊರುಗೋಲಾಗಿ ನಿಂತವಳು

ಅವಳೆಂದರೆ..
ಸಮತೆಯೆಂದವನಿಗೆ
ತಕ್ಕಡಿ ಹಿಡಿದು ನಿಂತವಳು

ಅವಳೆಂದರೆ..
ಎದೆಯದನಿಗೆ
ಸ್ವಾತಿ ಹನಿಯಾದವಳು

ಅವಳೆಂದರೆ..
ಬೆಳೆಸಲೆಂದೇ
ಬೇರಾಗಿ ಕೆಳಗಿಳಿದವಳು

ಅವಳೆಂದರೆ..
ಕಾಣದ ತಂಗಾಳಿ
ಅರ್ಥವಾಗದ ಅಮೂರ್ತ.

*******

About The Author

12 thoughts on “ಕಾವ್ಯಯಾನ”

  1. ಕೆ.ಬಿ.ವೀರಲಿಂಗನಗೌಡ್ರ.

    ಸಂಗಾತಿ ಬಳಗಕ್ಕೆ ಶರಣು ಶರಣಾರ್ಥಿಗಳು …

Leave a Reply

You cannot copy content of this page

Scroll to Top