ಕಾವ್ಯಯಾನ

ತಂಗಾಳಿ!

ಕೆ.ಬಿ.ವೀರಲಿಂಗನಗೌಡ್ರ

ಅವಳೆಂದರೆ..
ತೊರೆದವನಿಗೆ
ಅರಳಿಮರವಾದವಳು

ಅವಳೆಂದರೆ..
ಕೂಡಬೇಕೆಂದವನಿಗೆ
ಅನುಭವಮಂಟಪವಾದವಳು

ಅವಳೆಂದರೆ..
ಹೋರಾಟಗಾರನಿಗೆ
ಊರುಗೋಲಾಗಿ ನಿಂತವಳು

ಅವಳೆಂದರೆ..
ಸಮತೆಯೆಂದವನಿಗೆ
ತಕ್ಕಡಿ ಹಿಡಿದು ನಿಂತವಳು

ಅವಳೆಂದರೆ..
ಎದೆಯದನಿಗೆ
ಸ್ವಾತಿ ಹನಿಯಾದವಳು

ಅವಳೆಂದರೆ..
ಬೆಳೆಸಲೆಂದೇ
ಬೇರಾಗಿ ಕೆಳಗಿಳಿದವಳು

ಅವಳೆಂದರೆ..
ಕಾಣದ ತಂಗಾಳಿ
ಅರ್ಥವಾಗದ ಅಮೂರ್ತ.

*******

12 thoughts on “ಕಾವ್ಯಯಾನ

  1. ಸಂಗಾತಿ ಬಳಗಕ್ಕೆ ಶರಣು ಶರಣಾರ್ಥಿಗಳು …

Leave a Reply

Back To Top