ವ್ಯಾಸ ಜೋಶಿ ಅವರ ತನಗಗಳು

ಗಾಬರಿ ಖುಷಿಗಳು
ಸಹಜ ಬಾಳಿಗೆಲ್ಲ
ತಿಳಿಸಲು ಬಂದಿದೆ
ಯುಗಾದಿ, ಬೇವು ಬೆಲ್ಲ.


ಸಿಹಿಯ ಸಂಭ್ರಮಿಸು
ಕಹಿಯ ಸ್ವೀಕರಿಸು
ನಿರ್ಲಿಪ್ತತೆಯೇ ನೀತಿ
ಬೇವು- ಬೆಲ್ಲದ ರೀತಿ.


ಅನುಭವದ ಮಾತು
ಸುಖ ದುಃಖ ಸಮವು
ಯುಗಾದಿ ಹೇಳುತಿದೆ
ಬೆಲ್ಲದೊಡನೆ ಬೇವು.


ಬೇವಿನಲಿ ಬೆಲ್ಲವು
ಬರಲೇಳು ಬಾಳಿಗೆ,
ಸಹಜ ಆನಂದವ
ಬೇಡುವೆ ದೇವರಿಗೆ.
————————————

Leave a Reply

Back To Top