“ಕಲ್ಯಾಣದ ಚಿತ್ಕಳೆ ಅಕ್ಕ ಮಹಾದೇವಿ ಕದಳಿ ಕರ್ಪುರದತ್ತ”ಡಾ ಶಶಿಕಾಂತ ಪಟ್ಟಣ ರಾಮದುರ್ಗ

ಹನ್ನೆರಡನೆಯ ಶತಮಾನವು ಭಾರತದ ಇತಿಹಾಸದಲ್ಲಿ ಸುವರ್ಣ ಯುಗವೆಂದೇ ಕರೆಯಬಹುದು . ವರ್ಗ ವರ್ಣ ಲಿಂಗ ಭೇದ ಆಶ್ರಮ ಭೇದ ಸಾಂಸ್ಥಿಕರಣವಲ್ಲದ ಜಗತ್ತಿನ ಏಕೈಕ ಮತ್ತು ಒಂದೇ ಧರ್ಮವೆಂದರೆ ಲಿಂಗಾಯತ ಧರ್ಮವಾಗಿದೆ. ಬಸವ ಚಳುವಳಿಯಲ್ಲಿ ದೇಶದ ನಾನಾ ಭಾಗಗಳಿಂದ ಜನರು ಸಾಧಕರು ಬೀದರ ಜಿಲ್ಲೆಯ ಕಲ್ಯಾಣಕ್ಕೆ( ನಂತರ ಇದನ್ನು ಬಸವ ಕಲ್ಯಾಣವೆಂದು ಕರೆಯಲ್ಪಟ್ಟಿತ್ತು ) ಆಗಮಿಸ ಹತ್ತಿದರು. ಅಕ್ಕ ಮಹಾದೇವಿ ಅಂತಃಶರಣ ಸಂಕುಲದಲ್ಲಿ ಅಗ್ರ ಗಣ್ಯಳು .

ಅಕ್ಕ ಹುಟ್ಟಿದ್ದು ಇಂದಿನ ಶಿವಮೊಗ್ಗೆ ಜಿಲ್ಲೆಯ ಉಡತಡಿ ಗ್ರಾಮದಲ್ಲಿ ವ್ಯಾಪಾರಸ್ಥ ಬಣಜಿಗ ಕುಟುಂಬದ ನಿರ್ಮಲಶೆಟ್ಟಿ ಹಾಗೂ ಸುಮತಿಯರ ಗರ್ಭದಲ್ಲಿ ಜನಿಸಿದಳು . ಬಾಲ್ಯದಿಂದಲೂ ವೈರಾಗ್ಯದ ಪ್ರೀತಿಯ ಖನಿಜವಾದ ಅಕ್ಕ ತಾನು ಆರಾಧಿಸುವ ಚೆನ್ನ ಮಲ್ಲಿಕಾರ್ಜುನ ದೇವನೆ ತನ್ನ ಪತಿ ಎಂದು ನಂಬಿದ್ದಳು .ಮುಂದೆ ಬಾಲ್ಯ ಕಳೆದು ಯೌವನಕ್ಕೆ ಕಾಲಿಟ್ಟ ಈ ರೂಪವತಿ ತಾನು ತನ್ನ ಅಧ್ಯಯನ ಆಧ್ಯಾತ್ಮದ ಹಸಿವು ಸಾಧನೆಗೆ ತೊಡಗಿಸಿಕೊಂಡಳು. . ಉಡತಡಿ ಇದನ್ನು ಕೌಶಿಕನೆಂಬ ಜೈನ ಸಾಮಂತನು ಆಳುತ್ತಿದ್ದನು .
ಯಾವುದೋ ಸಂದರ್ಭದಲ್ಲಿ ಒಮ್ಮೆ ಅಕ್ಕ ಮಹಾದೇವಿಯನ್ನು ನೋಡಿದನು ,ಅವಳನ್ನೇ ಮದುವೆ ಆಗಲು ನಿರ್ಧರಿಸಿದನು.
ಅದೇ ರೀತಿ ಅಕ್ಕ ಮಹಾದೇವಿಯ ತಂದೆ ನಿರ್ಮಲ ಶೆಟ್ಟಿ ಮತ್ತು ತಾಯಿ ಸುಮತಿಯರಿಗೆ ಈ ವಿಷಯ ಹೇಳಿ ಕಳಿಸಿದನು. ಇಲ್ಲದಿದ್ದದರೆ ಇವರ ತಂದೆ ತಾಯಿಯವರಿಗೆ ಗಲ್ಲು ಶಿಕ್ಷೆ ವಿಧಿಸುವದಾಗಿ ದೊರೆ ಬೆದರಿಕೆ ಹಾಕಿದನು,ತಂದೆ ತಾಯಿಗಳ ಒತ್ತಾಯ ,ಮಾತು ಸಂದರ್ಭದ ಒತ್ತಡಕ್ಕೆ ಸಿಲುಕಿದ ಅಕ್ಕ ತಾನು ೩ ಷರತ್ತು ರಾಜನಿಗೆ ವಿಧಿಸಿದಳು ಅವುಗಳಲ್ಲಿ ಯಾವುದೇ ಯಾವುದಾದರು ಷರತ್ತು ರಾಜನು ಮೀರಿದರೆ ತನು ರಾಜನನ್ನು ಒಪ್ಪುವದಿಲ್ಲ ಅಂತ ಹೇಳಿದಾಗ . ರಾಜ ಕೌಶಿಕ ಆಗಲಿ ಎಂದು ಹೇಳಿದನು, ಆದರೆ ಮಧುವೆಯಗಳು ಅಕ್ಕ ಸಮಯ ಕೇಳಿದಳು.,ಮಹಾದೇವಿ ಮದುವೆ ಆಗಿದ್ದಳು ಎಂದು ಕೇವಲ ಮೂರು ಪ್ರಾಚಿನ ಗ್ರಂಥಗಳು ಹೇಳುತ್ತವೆ.

1)ಹರಿಹರ ದೇವನ ಉಡತಡಿ ಮಹಾದೇವಿಯಕ್ಕನ ರಗಳೆಗಳು
2) ಚೆನ್ನಬಸವಾ೦ಕನ ಮಹಾದೇವಿಯಕ್ಕನ ಪುರಾಣ
3 ) ಕೆಂಚ ವೀರನ್ನೋಡೆಯರ ಶೂನ್ಯ ಸಂಪಾದನೆ

ಅವಳು ವಿವಾಹವಾಗಿಲ್ಲ ಅಂತ ಹೇಳಲು ಅನೇಕ ಪ್ರಾಚಿನ ಮತ್ತು ಇತ್ತೀಚಿನ ಮಾತಜಿಯವರ ಹೆಪ್ಪಟ್ಟ ಹಾಲು , ತರಂಗಿಣಿ ಮುಂತಾದ ಕೃತಿಗಳಲ್ಲಿಯೂ ಕಂಡು ಬರುತ್ತದೆ .

ಅವುಗಳಲ್ಲಿ

1 ) ಚಾಮರಸನ ಪ್ರಭುಲಿಂಗಲೀಲೆ
2) ವಿರುಪಾಕ್ಷ ಪಂಡಿತ ಕೃತ ಚೆನ್ನಬಸವ ಪುರಾಣ
3) ಎಳ೦ದೂರು ಹರಿಶ್ವರ ಕೃತ ಪ್ರಭುದೇವರ ಪುರಾಣ
4 ) ಪಾಲ್ಗುರಿಕೆ ಸೋಮನಾಥ ಪುರಾಣ
5 )ಸಂಸ್ಕೃತ ಪ್ರಭುಲಿಂಗಲೀಲೆ
6 ) ತೆಲಗು ಮತ್ತು ತಮಿಳು ಪ್ರಭುಲಿಂಗಲೀಲೆ
7 ) ಹಲಗೆಯ ದೇವರ ಶೂನ್ಯ ಸಂಪಾದನೆ
8 ) ಗಣ ಭಾಷಿತ ರತ್ನ ಮಾಲೆ
9) ಗೂಳೂರು ಸಿದ್ದಣ್ಣ ವೀರಣ್ಣ ಒಡೆಯರ -ಶೂನ್ಯ ಸಂಪಾದನೆ.

ಅಲ್ಲದೆ ಅತ್ಯಂತ ಸುಂದರವಾಗಿ ರಚಿಸಿದ ಮಾತಾಜಿಯ ಹೆಪ್ಪಟ್ಟ ಹಾಲು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಕೃತಿ . ಈ ಎಲ್ಲ ಕೃತಿಗಳು ಮಹಾದೇವಿ ಕೇವಲ ಮದುವೆಗೆ ಸಮ್ಮತಿಸಿ ತನ್ನ ಷರತ್ತನ್ನು ಇಟ್ಟಿದ್ದಳು ಎಂದು ಹೇಳುತ್ತವೆ.
ಹಾಗಿದ್ದರೆ ಆ ಷರತ್ತು ಯಾವವು

1 ) ಎನ್ನಿಚ್ಚೆಯೋಳು ಶಿವಲಿಂಗಲಿಂಗಪೂಜೆಯೊಳಿಪ್ಪೆ
2) ಎನ್ನಿಚ್ಚೆಯೋಳು ಮಾಹೇಶ್ವರ ಗೊಷ್ಟಿಯೊಳಿಪ್ಪೆ .
3 ) ಎನ್ನಿಚ್ಚೆಯೋಳು ಗುರು ಸೇವೆಯೊಳಿಪ್ಪೆ

ಒಮ್ಮೆ ಅಕ್ಕನು ಶಿವಲಿಂಗ ಪೂಜೆ ನೀರತ ಳಾದಾಗ ಕೌಶಿಕನು ಅಕ್ಕನನ್ನು ವರಿಸಲು ಬಂದಾಗ ,ಇಲ್ಲಿ ಅಪ್ಪುಗೆಯೂ ಇಲ್ಲ ಆಲಿಂಗನವೂ ಇಲ್ಲ.ಇದೊಂದು ಕಾಲ್ಪನಿಕ ಸೃಷ್ಟಿ .

ಅದಕ್ಕೆ ಮದುವೆಗೆ ಒಲ್ಲದ ಮನಸ್ಸಿನಿ೦ದ ಒಪ್ಪಿಗೆ ಸೂಚಿಸಿದ ಅಕ್ಕ ಇದನ್ನು ಒಪ್ಪದೇ ತಂದೆ ತಾಯಿಗೂ ನೋಯಿಸದೆ ಮನೆಯನ್ನು ಬಿಟ್ಟು ನಡೆದಳು .

ಅದನ್ನು ಅಕ್ಕ ಈ ರೀತಿ ಹೇಳಿದ್ದಾಳೆ.

ಎಮ್ಮೆಗೊಂದು ಚಿಂತೆ ,ಸಂಮಗಾರಗೊಂದು ಚಿಂತೆ
ಧರ್ಮಿಗೊಂದು ಚಿಂತೆ ,ಕರ್ಮಿಗೊಂದು ಚಿಂತೆ
ಎನಗೆ ಎನ್ನ ಚಿಂತೆ ತನಗೆ ತನ್ನ ಕಾಮದ ಚಿಂತೆ
ಒಲ್ಲೆ ಹೋಗು ಸೆರಗು ಬೀಡು ಮರುಳೆ
ಎನಗೆ ಚೆನ್ನ ಮಲ್ಲಿಕಾರ್ಜುನ ದೇವರು ಒಲಿವರು ಒಲಿಯರೋ ಎಂಬ ಚಿಂತೆ ?

ಪ್ರಾಪಂಚಿಕ ಬದುಕಿಗೆ ವಿದ್ದಾಯ ಹೇಳಿದ ಅಕ್ಕ ತನ್ನ ವೈರಾಗ್ಯದ ಸಾಧನೆಗೆ ಹೆಜ್ಜೆ ಹಾಕಿದಳು .

ಅಮೆಧ್ಯದ ಮಡಿಕೆ ಮೂತ್ರದ ಕುಡಿಕೆ
ಎಲುವಿನ ತಡಿಕೆ ಕೀವಿನ ಹದಿಕೆ
ಸುಡಲೀ ದೇಹವ ,ಒಡಲುವಿಡಿದು ಕೆಡದಿರು
ಚೆನ್ನಮಲ್ಲಿಕಾರ್ಜುನನರಿಯದ ಮರುಳೆ .

ತನ್ನ ಶರೀರ ಹೊಲಸು ತುಂಬಿದ ಮಡಿಕೆ ಮತ್ತು ತಾನು ವ್ಯಕ್ತಿಯಾಗಿ ಬರಿ ಎಲವು ಮಾ೦ಸದ ತಡಿಕೆ ಇಂತಹ ಬಾಹ್ಯ ಶರೀರಕ್ಕೆ ಆಕರ್ಷಿತನಾಗದೆ ದೇವನನ್ನು ಅರಿಯುವ ಮಾರ್ಗ ಕಂಡು ಕೊಳ್ಳಲು ಮಹಾದೇವಿ ಸಲಹೆ ಸೂಚನೆ ನೀಡಿ ,ತನ್ನ ದೇಹದ ಮೋಹವ ಕಡಿದು ಕೊಂಡು ಮನ ಬೆತ್ತಲೆಯಾಗಿ ತನ್ನ ಚೆನ್ನಮಲ್ಲಿಕಾರ್ಜುನನನ್ನು ಅರಸುತ್ತ ಅಕ್ಕ ಕಲ್ಯಾಣದತ್ತ ಹೆಜ್ಜೆ ಹಾಕುವಳು .
ದಟ್ಟವಾದ ಅರಣ್ಯ ಯೌವನದ ಬಾಲೆ ತಂದೆ ತಾಯಿಯರಿಗೆ ಸಖಿಯರಿಗೆ ನೋವು .ಇವರೆಲ್ಲರಿಗೂ ತಾನು ಚೆನ್ನಮಲ್ಲಿಕರ್ಜುನನ್ನು ಕಾಣುವೆನೆಂದು ಹೋಗುವಳು .

ಅಳಿಸಂಕುಲವೆ ಮಾಮರವೆ ಬೆಳುದಿಂಗಳೇ ,ಕೋಗಿಲೆಯೇ
ನಿಮ್ಮೆಲ್ಲರನೂ ಒಂದು ಬೇಡುವೆನು .
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವ ಕಂಡರೆ ಕರೆದು ತೋರಿರೆ.
ಅಳಿಲು ಕೋಗಿಲೆ ಮರ ಪಕ್ಷಿ ಬೆಳುದಿಂಗಳು ಎಲ್ಲ ಚರಾ ಚರ ಜೀವೆಗಳನ್ನು ಕೈ ಮುಗಿದು ಅಕ್ಕ ಚೆನ್ನ ಮಲ್ಲಿಕಾರ್ಜುನನ ಕಾಣುವ ತವಕದಿ೦ದ ನಡೆಯುತ್ತಾಳೆ.
ಅಲ್ಲದೆ ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವಾ
ನಿಮ ನಿಮಗೆಲ್ಲ ಶೃಂಗಾರ ಮಾಡಿಕೊಳ್ಳಿ
ಚೆನ್ನ ಮಲ್ಲಿಕರ್ಜುನನಿಗಳೇ ಬಂದಿಹನು
ಇದಿರುಗೊಳ್ಳಿ ಬನ್ನಿರವ್ವಗಳಿರಾ .

ಎಂತಹ ದೃಢ ನಿರ್ಧಾರ ಅಕ್ಕನದು .ಊರಿನ ಜನರೆಲ್ಲಾ ಅಕ್ಕ ಮಹಾದೇವಿಯನ್ನು ಬೀಳ್ಕೊಡುವಾಗ ಭೀತಿಯಿಂದ ಅವಳ ಮುಂದಿನ ನಡೆ ಹೇಗೆ ಎಂದು ಚಿಂತಿಸಿರುವಾಗ

ಹಸಿವಾದೊಡೆ ಭಿಕ್ಷಾನ್ನ ಉಂಟು
ತೃಷೆಯಾದೊಡೆ ಕೆರೆ ತೊರೆ ಭಾವಿಗಳು
ತೊಡಿಗೆಗೆ ಬಿಸುಟಿದ ಬಟ್ಟೆ ಉಂಟು
ಶಯನಕ್ಕೆ ಹಾಲು ದೇಗುಲ ಉಂಟು ಎಂದೆನ್ನುತ್ತಾ ತನ್ನ ಸಂಗಾತಿ ಚೆನ್ನ ಮಲ್ಲಿಕಾರ್ಜುನ ಉಂಟು .

ಎಂದಿದ್ದಾಳೆ.ಹೀಗಿರುವಾಗ ಚರಿತ್ರೆಯಲ್ಲಿ ಅವಳನ್ನು ಬೆತ್ತಲೆಯಾಗಿ ಚಿತ್ರಿಸುವುದು ಹೆಣ್ಣು ಕುಲಕ್ಕೆ ಮಾಡುವ ಅಪಮಾನವಲ್ಲವೆ ?

ಅಕ್ಕ ತನ್ನ ಮದುವೆಯನ್ನು ಯಾವ ರೀತಿಯಲ್ಲಿ ಹೇಳಿದ್ದಾಳೆ ಎನ್ನುವದನ್ನು ಇಲ್ಲಿ ಸ್ವಲ್ಪ ನೋಡೋಣ

ಕಾಮನ ತೆಲೆಯ ಕೊರೆದು ,ಕಾಲನಕಣ್ಣ ಕಳೆದು
ಸೋಮ ಸೂರ್ಯರ ಹುರಿದು ಹುಡಿ ಮಾಡಿ
ನಾಮವನಿಡಬಲ್ಲವರಾರು ಹೇಳಿರೆ
ನೀ ಮದುವಲಿಗನಾಗೆ ನಾ ಮದುವಳಗಿತ್ತಿಯಾಗೆ
ಶ್ರೀ ಗಿರಿ ಚೆನ್ನಮಲ್ಲಿಕಾರ್ಜುನ

5 thoughts on ““ಕಲ್ಯಾಣದ ಚಿತ್ಕಳೆ ಅಕ್ಕ ಮಹಾದೇವಿ ಕದಳಿ ಕರ್ಪುರದತ್ತ”ಡಾ ಶಶಿಕಾಂತ ಪಟ್ಟಣ ರಾಮದುರ್ಗ

  1. ಅಕ್ಕನ ನಗ್ನ ಸ್ವರೂಪವನ್ನು ಬಸವ ಭಕ್ತರು ಶರಣ ಮನಸ್ಸುಗಳು ಯಾಕೆ ಪ್ರತಿಭಟಿಸಬಾರದು ನಾವೆಲ್ಲ ಸೇರಿ ಯಾಕೆ ವಿರೋಧ ವ್ಯಕ್ತಪಡಿಸಬಾರದು ಮತ್ತೆ ಮತ್ತೆ ನಾವು ವೇದಿಕೆಯಲ್ಲಿ ಮಾತನಾಡುತ್ತೇವೆ ಲೇಖನವನ್ನ ಬರೆಯುತ್ತೇವೆ ಅಷ್ಟಕ್ಕೆ ಖೇದವನ್ನ
    ವ್ಯಕ್ತಪಡಿಸುತ್ತೇವೆ. ಮತ್ತೊಂದು ವೇದಿಕೆಯಲ್ಲಿ ಅದೇ ಮಾತು. ಮಾತು ಏಕೆ ಕಾರ್ಯರೂಪಕ್ಕೆ ಬರಬಾರದು

  2. ಎಕ್ಸಲೆಂಟ್……..

    ಮನಮುಟ್ಟುವಂತೆ, ಬರಹ ಅದ್ಭುತ

    ಅಕ್ಕಮಹಾದೇವಿ

Leave a Reply

Back To Top