ಕಾವ್ಯಯಾನ

ತೋರಣ ಕಟ್ಟುವೆವು

ಸುಜಾತ ಗುಪ್ತ

ಜಗನ್ನಾಥನು ಜೊತೆ ನಿವಸಿಸಿ
ನಮ್ಮನ್ನು ಕಾಯಲು ಅನವರತ
ಹೃದಯದ ಭಾವಕೆ ಮಾನವತಾ
ತೋರಣ ಕಟ್ಟುವೆವು..

ಜಗದಂಬೆಯ ಮನ ಒಲಿಸಿ
ಹಸನ್ಮುಖಿಯಾಗಿರಿಸಲು
ಮನದ ದ್ವಾರಕೆ ನೀತಿಯ
ತೋರಣ ಕಟ್ಟುವೆವು…

ಬಾಳಲಿ ಹಿನ್ನಡೆಸುವ
ಸೋಲಿನ ಸಾಲಿಗೆ ನಾವ್
ಚೇತನಾಪ್ರದ ಗೆವುವಿನ
ತೋರಣ ಕಟ್ಟುವೆವು.

ಕಂದನ ಖುಷಿಯ ಸಿರಿಗೆ
ಹರಸುತ ಹರುಷದೆ
ಮುತ್ತಂತ ತ್ಯಾಗದ
ತೋರಣ ಕಟ್ಟುವಳಮ್ಮ

********

Leave a Reply

Back To Top