ಶಂಕರಾನಂದ ಹೆಬ್ಬಾಳ ಕವಿತೆ

ಕಾವ್ಯಸಂಗಾತಿ

ಶಂಕರಾನಂದ ಹೆಬ್ಬಾಳ

ಕವಿತೆ

ಮನಸಿನ ತಮವನು ಕಳೆಯುವ ಹಣತೆ
ವಿನಯ ಹೃದಯದಿ ಹೊಳೆಯುವ ಹಣತೆ

ಲೋಕದ ದಾರಿದ್ರ್ಯವ ದೂರಮಾಡು ಇಂದೆ
ನಾಕದ ದೇವತೆಗಳನು ಸೆಳೆಯುವ ಹಣತೆ

ತೈಲದಲಿ‌ ಮುಳುಗಿದ ಬತ್ತಿಯು ಬೆಳಗುತ್ತಿದೆ
ಆಲಯದ ಕಲ್ಮಷಗಳ ತೊಳೆಯುವ ಹಣತೆ

ಸುತ್ತಲ ಅಂಧಕಾರವನು ಓಡಿಸಿತು ನೋಡು
ಅತ್ತಲಿತ್ತಲಿ ಪ್ರಭೆಯನು ಅಳೆಯುವ ಹಣತೆ

ಶುಭಗಳಿಗೆ ಅರಸುತ ನಿಂತೀತು ನಂದಾದೀಪ
ಅಭಿನವಕಾವ್ಯಕೆ ಚಿತ್ಕಳೆ ಬಳೆಯುವ ಹಣತೆ


ಶಂಕರಾನಂದ ಹೆಬ್ಬಾಳ

One thought on “ಶಂಕರಾನಂದ ಹೆಬ್ಬಾಳ ಕವಿತೆ

Leave a Reply

Back To Top