ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಡಾ.ಕಸ್ತೂರಿ ದಳವಾಯಿ

ಮಕ್ಕಳ ದಿನಾಚರಣೆ.

ಮಕ್ಕಳ ಇರಲವ್ವ
ಮನೆ ತುಂಬಾ
ಎಂದು ಹಾಡಿತ್ತು ಅಂದು
ಇಂದು ಮಕ್ಕಳು
ಮನೆಗೆರಡು
ಒಟ್ಟಿನಲಿ ಬಾಳ ಬೆಳದಿಂಗಳ
ಆಸರೆಯಾಗಿ
ಕಳ್ಳು ಬಳ್ಳಿಯ
ಸುತ್ತಿಕೊಂಡು
ಹೆತ್ತರೆ .ಹೆತ್ತವ್ವ
ಕಾದು ಕಾದು
ಕೂತಿದ್ದಾಳೆ ನಿಮ್ಮ
ಎತ್ತ ಹೋದಿರಿ
ಪಾರ.ಪೋರಿ
ಓದಿ.ಉದ್ಯೋಗವನರಸಿ
ನನ್ನ ನೋಡಲು
ಬರಿವಿರೆಂದು.
ಅಂದು.ಒಗೆದಿಟ್ಟ
ನಿಮ್ಮ ಅಂಗಿ
ಮಡಿಚಿ ಗಂಟಿ
ನಲ್ಲಿ ಇಟ್ಟು.
ಮುತ್ತಿಟ್ಟು ನೋಡುವೆ
ಬಂದೆ ಬರುವರು
ನನ್ನ ಮಕ್ಕಳೆಂದು
ಹಣೆ ಮೇಲೆ ಕೈ್
ಇಟ್ಟು ಮೇಲಿನ
ಇಮಾನ ಹೋದಾಗ
ಒಮ್ಮೊಮ್ಮೆ ಸದ್ದು
ಕೇಳಿದಾಗ.ನಿಟ್ಟುಸಿರು
ಬಿಟ್ಟು ಕಾಯುತಿರುವೆ
ನೀವು ಬರಲಿಲ್ಲಿ….
ಇದು ಮಕ್ಕಳ ಹೆತ್ತ
ಕರುಳ ಬಳ್ಳಿಯ
ಕರೆಯೋಲೆ
ಪ್ರೀತಿ ಮೀಮಾಂಸೆ.


ಡಾ.ಕಸ್ತೂರಿ ದಳವಾಯಿ

About The Author

Leave a Reply

You cannot copy content of this page

Scroll to Top