ಕಾವ್ಯಯಾನ

ಮುಕ್ತಿ ದೊರಕೀತು!

Camille Jacobs - Sculptures - Home | Facebook

.

ತೇಜಾವತಿ ಹೆಚ್.ಡಿ

ಅಂತಹದೊಂದು ಅಂತರಂಗದ ಮಿಡಿತವ
ನೀ ಅರಿತು ಗೌರವಿಸುವಿಯಾದರೆ

ಬರಡಾದ ಬಂಜರಿನಲ್ಲೂ
ಉಕ್ಕುವ ಚಿಲುಮೆಗಾಗಿ
ಕಾತರಿಸಿದ ಅವನಿಯ,
ಕಾರ್ಗತ್ತಲ ಕಾನನದಲ್ಲೂ
ನೆರಳಾಗಿ ಬರುವ ಕಂದೀಲನ್ನು
ತಾನು ನಿರಾಕರಿಸಲಾರದು

ಯಾವ ಭಾವವೂ ಆಕರ್ಷಣೆಯೆಂದು ಹಗುರ ನುಡಿಯದೆ
ಕಾಮವೇ ಐಹಿಕದ ಸುಖವೆಂದು ನೀ ತಿಳಿಯದೆ
ಅದರಾಚೆಗಿನ ಪವಿತ್ರತೆಯನೊಪ್ಪಿಕೊಳ್ಳುವೆಯಾದರೆ

ಶಾಪಗ್ರಸ್ತ ಜೀವಕ್ಕೆ ಮುಕ್ತಿ ದೊರೆತು
ಗಂಗೆಯ ಜಲದಿ ಪಾಪಗಳೆಲ್ಲ ತೊಳೆಯಲಿ
ಒಳಗಿರುವ ಮಾಣಿಕ್ಯ ಪ್ರಜ್ವಲಿಸಲಿ
ಅರಿವಿಗೆ ತಾನು ಸ್ಫೂರ್ತಿಯಾಗಲಿ

*******

Leave a Reply

Back To Top