ಕಾವ್ಯಯಾನ

ಸಂವಿಧಾನ ಶಿಲ್ಪಿ ಅಂಬೇಡ್ಕರ್

भीमराव अंबेडकर जयंती २०२० कब है ...

ಅನ್ನಪೂರ್ಣ .ಡೇರೇದ

ಓ ಜ್ಞಾನಜ್ಯೋತಿಯೇ
ಸಹನೆ ಸಿಂಧೂವೇ
ಸಂವಿಧಾನ ಶಿಲ್ಪಿಯೇ
ನಾನೆಂದು ನಿಮ್ಮ ಮರೆಯನು

ಜಾತಿಬೇಲಿಯ ಮೇಲೆ
ಅರಳಿದ ಕಮಲ ನೀವು
ನಿಮ್ಮ ನೋವು
ಎಂತದೆಂದು ಬಲ್ಲೆವು ನಾವು

ದಿಟ್ಟತನದಿ ಜಾತಿ ಮೆಟ್ಟಿ
ಭಾರತಾಂಬೆಯ ಕುಲಪುತ್ರ
ಎಂಬುದ ಅರುಹಿದ
ಮಹಾಪಂಡಿತರಾದ ನಿಮಗೆ ಶರಣು

ಭಾರತಾಂಬೆಯ ಮುಕುಟ ಮಣಿಯೇ
ನಿಮ್ಮ ಪಾದದಾಣೆ
ನೀವು ಕಂಡ ಕನಸು
ನನಸಾಗದೆ ಇರದು

*********


Leave a Reply

Back To Top