ಡಾ ಸುರೇಶ ನೆಗಳಗುಳಿ-ಅಪ್ಪ

ಡಾ ಸುರೇಶ ನೆಗಳಗುಳಿ-ಅಪ್ಪ

ಸಿಡುಕುವುದುಂಟು ಮನೆಮಂದಿಯ ಒಳಿತಿಗಾಗಿ
ದುಡಿಯುವುದುಂಟು ಬಾಳನಾವೆಯ ಚಲನೆಗಾಗಿ

ಮಕ್ಕಳನ್ನು ಪ್ರೀತಿಸದ ಅಪ್ಪ ಜೀವ ಸಂಕುಲದಲ್ಲಿಹನೇ
ಮಮಕಾರ ಅಡಗುವುದುಂಟು ಬೇನೆಯ ಮರೆವಿಗಾಗಿ

ತಾವರೆ ದಳದ ಹೃದಯ ಅಪ್ಪನಿಗೂ ಇರದೆ ಇರುವುದೇ
ಒರಟನಂತೆ ಕಾಣುವುದುಂಟು ಮನೆಯ ಚಲನೆಗಾಗಿ

ಬೆವರಿಳಿಸುತ್ತಲೇ ಕರ್ಮ ತತ್ಪರತೆಯಲ್ಲಿ ಬರಿಗಾಲ ಚಲನೆ

ಚಪ್ಪಲಿ ಸಹ ಹಾಕದಿರುವುದುಂಟು ಕಿಸೆಯ ಭರ್ತಿಗಾಗಿ

ಮಕ್ಕಳಿಗಾಗಿ ಕೇಳಿದ್ದು ಕೊಡದಿರನು ಬೈದರೂ ಸುರೇಶ
ತಂಬೆಲರು ಒಳಗಿರುವುದುಂಟು ಪ್ರೀತಿಯ ಹರಿವಿಗಾಗಿ


Leave a Reply

Back To Top