ಶ್ಯಾಮ್ ಪ್ರಸಾದ್ ಭಟ್ ಕವಿತೆ-ಮನವಿ

ಕಾವ್ಯ ಸಂಗಾತಿ

ಶ್ಯಾಮ್ ಪ್ರಸಾದ್ ಭಟ್.

ಮನವಿ

ಮನದ ಮಾತಲಿ ಮೌನ ಹುದುಗಿಸಿ
ಸಖೆಯೇ ಮಿಲನವ ಹೊಂದೋಣ
ಗತಿಸಿದ ದಿನಗಳ ವ್ಯಥೆಯನು ಮರೆತು
ಅಂಬರದಲ್ಲಿ ಹಾರೋಣ….

ಪ್ರಣಯದ ಹಂದರ ಕಣ್ಮುಂದಿಹುದು
ತೆವಳುತ ಅದರೊಳು ಹಬ್ಬೋಣ
ಕಾಮನೆ ಕಿಡಿಗಳ ಉರಿಯನು ತಣಿಸಲು
ತೋಳ್ಗಳ ಬಳಸಿ ತಬ್ಬೋಣ..

ಕಿರುನಗು ಚೆಲ್ಲುತ ಒಲವಿನ ಪಲ್ಲವಿ
ಹಾಡುತ ಬಂದಳು ಸಂಗಾತಿ
ಕಣ್ಸನ್ನೆಯಲಿ ಅನುಮತಿ ನೀಡಲು
ನಲ್ಲನ ಮನದಲಿ ಸಂಕ್ರಾಂತಿ…

ಒಲವಿನ ಮಳೆಯಲಿ ಕರಗಳ ಪಿಡಿದು
ಸಾಗಲು ಮನಗಳ ಮೆರವಣಿಗೆ
ರಸಿಕತೆ ಕಡಲೊಳು ಇಳಿಯವ ಸಮಯದಿ
ಪದಗಳ ಹೊಸೆದು ಬರವಣಿಗೆ….


Leave a Reply

Back To Top