ಡಾ ಸುರೇಶ ನೆಗಳಗುಳಿ ಕವಿತೆ-ವಿದ್ಯಮಾನ

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿ

ವಿದ್ಯಮಾನ

ಬೆವರು ಬರುವುದು
ಬಿಸಿಲು ಕಾದಾಗಲೇ
ಬೆವರು ಬರುವುದು
ತಪ್ಪು ಮಾಡಿದಾಗಲೇ

ನವಿರು ಇರುವುದು
ಒಲವು ಬಲಿತಾಗಲೇ
ಕನಸು ಮೆರೆವುದು
ಫಲಿತ ಆದಾಗಲೇ

ಸಿಡುಕು ಬರುವುದು
ನಲ್ಲೆ ಮುನಿದಾಗಲೇ
ಕೆಡುಕು ತರುವುದು
ಜಿದ್ದು ಬೆಳೆದಾಗಲೇ

ತಂಪು ಹರಡುವುದು
ಕಂಪು ಸಿಗುವಾಗಲೇ
ಜೊಂಪು ಹರಿಯುವುದು
ಪೆಂಪು ಬಿಡುವಾಗಲೇ


ಡಾ ಸುರೇಶ ನೆಗಳಗುಳಿ


One thought on “ಡಾ ಸುರೇಶ ನೆಗಳಗುಳಿ ಕವಿತೆ-ವಿದ್ಯಮಾನ

Leave a Reply

Back To Top