ಶಂಕರಾನಂದ ಹೆಬ್ಬಾಳ-ಗಜಲ್

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

ವಲ್ಲಭನು ಜೊತೆಗಿರಲು ಅಳುವೆಯೇಕೆ
ಕಂಬನಿ ಮಿಡಿದು
ನಲ್ಲನ ನುಡಿಯಿರಲು ಕೊರಗುವೆಯೇಕೆ
ಮಲ್ಲಿಗೆ ಮುಡಿದು

ಸುಮದಂತೆ ಬಾಡಿಹೋಗುವ ಮುನ್ನ
ಸೇರಿಬಿಡು ಪ್ರಾಣಕಾಂತ
ತಮಕಳೆವ ಬೆಳಕಿರಲು ಕಾಯುವೆಯೇಕೆ
ಜೀವವ ಹಿಡಿದು

ಭಾವಗಳು ಆಶ್ವದಂತೆ ಓಡುತ್ತಿವೆಯಲ್ಲ
ಶರವೇಗದಿ ಇಂದು
ನೋವುಗಳು ಕಾಡುತಿರಲು ಬೇಡುವೆಯೇಕೆ
ಮೌನವ ಕುಡಿದು

ಹೃದಯ ದರ್ಪಣದಲ್ಲಿ ಮೂಡಿರುವ
ಬಿಂಬವದು ಮಸುಕಾಗಿದೆ
ವದನದಿ ದುಗುಡವಿರಲು ಕೂಡುವೆಯೇಕೆ
ಗರವ ಬಡಿದು

ಅಭಿನವನ ಸಮಾಧಾನದ ನುಡಿಗಳು
ಹಿತವ ನೀಡುತ್ತಿವೆ
ನಭದಿ ಚಂದ್ರನಿರಲು ಮರುಗುವೆಯೇಕೆ
ಸತ್ಯವ ನುಡಿದು


Leave a Reply

Back To Top