ಮಕ್ಕಳ ವಿಭಾಗ

ಕೆಂಚಬೆಕ್ಕಿಗೆ ಏನಾಯ್ತು?

ವಿಜಯಶ್ರೀ ಹಾಲಾಡಿ

ಕೆಂಚಬೆಕ್ಕಿಗೆ ಏನಾಯ್ತು

ಬಾಲವು ಪೂರಾ ಮಣ್ಣಾಯ್ತು

ಗಡಗಡ ಚಳಿಗೆ

ಬಿಸಿಬಿಸಿ ಬೋಂಡಾ

ಪಾಕಂಪಪ್ಪನು ತಿಂದಾಯ್ತು

ಕೆಂಚಬೆಕ್ಕಿಗೆ ಏನಾಯ್ತು

ಬಾಲವು ಪೂರಾ ಮಣ್ಣಾಯ್ತು

ಮೀನಿನ ಮುಳ್ಳು

ದೊಂಡೆಗೆ ಸಿಕ್ಕಿ

ಕೆಮ್ಮಿ ಕೆಮ್ಮಿ ಸುಸ್ತಾಯ್ತು

ಕೆಂಚಬೆಕ್ಕಿಗೆ ಏನಾಯ್ತು

ಬಾಲವು ಪೂರಾ ಮಣ್ಣಾಯ್ತು

ಗಡವ ಬೆಕ್ಕು

ಹೊಯ್ ಕಯ್ ಮಾಡಿ

ಕಾಲಿನ ಮೂಳೆ ಮುರಿದಾಯ್ತು

ಕೆಂಚಬೆಕ್ಕಿಗೆ ಏನಾಯ್ತು

ಬಾಲವು ಪೂರಾ ಮಣ್ಣಾಯ್ತು

ಟ್ರಾಫಿಕ್ ಜಾಮಲಿ

ರಸ್ತೆಯ ಕಾದು

ಬೋರು ಬೋರು ಹೊಡೆದಾಯ್ತು

ಕೆಂಚಬೆಕ್ಕಿಗೆ ಏನಾಯ್ತು

ಬಾಲವು ಪೂರಾ ಮಣ್ಣಾಯ್ತು

ನೆತ್ತಿಗೆ ಸಿಟ್ಟು

ಸರ್ರನೆ ಏರಿ

ಬಾಗಿಲು ಜಡಿದು ಮಲಗಾಯ್ತು!!

ವಿಜಯಶ್ರೀ ಹಾಲಾಡಿ

ಕವಿ ಪರಿಚಯ:

ಆರು ಕೃತಿಗಳು ಪ್ರಕಟವಾಗಿವೆ.ಮಕ್ಕಳ ಸಾಹಿತ್ಯ ಕೃತಿ ‘ ಪಪ್ಪು ನಾಯಿಯ ಪೀಪಿ’ ಇದಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.ಸದ್ಯ ಪ್ರೌಢಶಾಲಾಶಿಕ್ಷಕರಾಗಿದ್ದಾರೆ

Leave a Reply

Back To Top