ವೀರ ಶರಣ ಮಡಿವಾಳ ಮಾಚಿದೇವರ ಜಯಂತಿ.

ಕಾವ್ಯ ಸಂಗಾತಿ

ಶರಣು ವೀರ ಶರಣ ಮಾಚಿದೇವರಿಗೆ

ಹಮೀದಾಬೇಗಂ ದೇಸಾಯಿ

ಶರಣ ಎನ್ನಲೇ ನಿಮಗೆ
ವೀರ ನಾಯಕ ಎನ್ನಲೇ
ತನುಶುದ್ಧಿಯ ಕಾಯಕದಿ
ಮನಶುದ್ಧಿಯನಿರಿಸಿದಿರಿ
ಮಡಿವಾಳನೆನಿಸಿದರೂ
ಮನದ ಮೈಲಿಗೆಯ
ತೊಳೆದ ಮಹಾತ್ಮರೇ
ಶರಣ ಸಂಕುಲಕೆ
ಮೇರು ಸದೃಶ ನೀವು..
ತನು ಮನಗಳೆಲ್ಲವನು
ಸದಾಚಾರದಲಿ ಮಿಂದು
ಮಡಿಯಾಗಿಸಿದ;
ಬಸವ ತತ್ವಗಳನು
ಮೈಗೂಡಿಸಿಕೊಂಡ
ಕಾಯಕ ಯೋಗಿ ನೀವು..
ವಚನಗಳ ರಕ್ಷಣೆಯ
ಹೊಣೆ ಹೊತ್ತು ಹೋರಾಡಿದ
ವೀರ ಶರಣ ನೀವು
ತಂದೆ ಮಾಚಿದೇವರೇ
ನಿಮಗೆ ನೂರೊಂದು ಶರಣು..


Leave a Reply

Back To Top