ಬೇಂದ್ರೆಯವರ ಜನ್ಮದಿನದ ಪ್ರಯುಕ್ತ

ಕಾವ್ಯ ಸಂಗಾತಿ

ಗಝಲ್

ಮುಗಿಲ ಮಲ್ಲಿಗೆಯಲ್ಲಿ ಯಕ್ಷ ಯಕ್ಷಿಯ
ಕರೆಸಿದವರು ಬೇಂದ್ರೆ
ನಾದಲೀಲೆಯಲ್ಲಿ ಉಯ್ಯಾಲೆಯಾಡಿ
ಮೆರೆಸಿದವರು ಬೇಂದ್ರೆ

ಹೃದಯ ಸಮುದ್ರದಲ್ಲಿ ಸಖಿಗೀತೆಯನ್ನು
ಅರುಹಿದರೇಕೆ
ಮುಕ್ತಕಂಠದಲ್ಲಿ ನಾಕುತಂತಿಗೆ ಗರಿಗಳನ್ನು
ಬರೆಸಿದವರು ಬೇಂದ್ರೆ

ಗಂಗಾವತರಣದಿ ನಮನ ಸಲ್ಲಿಸುತಲಿ
ಸಂಚಯ ಮೂಡಿಸಿದರಲ್ಲ
ಒಲವೆ ನಮ್ಮ ಬದುಕೆಂದು ಪರಾಕಿಯ
ಹರಸಿದವರು ಬೇಂದ್ರೆ

ಬಾಹತ್ತರ ನೋಡುಬಾ ಮತ್ತೆ ಶ್ರಾವಣ
ಬಂತು ಎಂದರಲ್ಲವೆ
ಚೈತ್ಯಾಲಯದಿ ಕೃಷ್ಣಕುಮಾರಿಯ ಕಂಗಳನು
ತೆರೆಸಿದವರು ಬೇಂದ್ರೆ

ಇದು ನಭೋವಾಣಿಯೆಂದು ಅಭಿನವನ
ಕವಿತೆಯು ಸಾರಿ ಹೇಳಿದೆ
ತಾಲೆಕ್ಕಣಿ ತಾ ದೌತಿಯೆಂದು ಕಾವ್ಯವೈಖರಿ
ಸುರಿಸಿದವರು ಬೇಂದ್ರೆ


ಶಂಕರಾನಂದ ಹೆಬ್ಬಾಳ

One thought on “ಬೇಂದ್ರೆಯವರ ಜನ್ಮದಿನದ ಪ್ರಯುಕ್ತ

Leave a Reply

Back To Top