ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಗಝಲ್

ಮುಗಿಲ ಮಲ್ಲಿಗೆಯಲ್ಲಿ ಯಕ್ಷ ಯಕ್ಷಿಯ
ಕರೆಸಿದವರು ಬೇಂದ್ರೆ
ನಾದಲೀಲೆಯಲ್ಲಿ ಉಯ್ಯಾಲೆಯಾಡಿ
ಮೆರೆಸಿದವರು ಬೇಂದ್ರೆ

ಹೃದಯ ಸಮುದ್ರದಲ್ಲಿ ಸಖಿಗೀತೆಯನ್ನು
ಅರುಹಿದರೇಕೆ
ಮುಕ್ತಕಂಠದಲ್ಲಿ ನಾಕುತಂತಿಗೆ ಗರಿಗಳನ್ನು
ಬರೆಸಿದವರು ಬೇಂದ್ರೆ

ಗಂಗಾವತರಣದಿ ನಮನ ಸಲ್ಲಿಸುತಲಿ
ಸಂಚಯ ಮೂಡಿಸಿದರಲ್ಲ
ಒಲವೆ ನಮ್ಮ ಬದುಕೆಂದು ಪರಾಕಿಯ
ಹರಸಿದವರು ಬೇಂದ್ರೆ

ಬಾಹತ್ತರ ನೋಡುಬಾ ಮತ್ತೆ ಶ್ರಾವಣ
ಬಂತು ಎಂದರಲ್ಲವೆ
ಚೈತ್ಯಾಲಯದಿ ಕೃಷ್ಣಕುಮಾರಿಯ ಕಂಗಳನು
ತೆರೆಸಿದವರು ಬೇಂದ್ರೆ

ಇದು ನಭೋವಾಣಿಯೆಂದು ಅಭಿನವನ
ಕವಿತೆಯು ಸಾರಿ ಹೇಳಿದೆ
ತಾಲೆಕ್ಕಣಿ ತಾ ದೌತಿಯೆಂದು ಕಾವ್ಯವೈಖರಿ
ಸುರಿಸಿದವರು ಬೇಂದ್ರೆ


ಶಂಕರಾನಂದ ಹೆಬ್ಬಾಳ

About The Author

1 thought on “ಬೇಂದ್ರೆಯವರ ಜನ್ಮದಿನದ ಪ್ರಯುಕ್ತ”

Leave a Reply

You cannot copy content of this page

Scroll to Top